Savadatti News: ಗೂಳಿಗಳ ಹಾವಳಿ: ವಿದ್ಯಾರ್ಥಿಗಳು, ಬೈಕ್ ಸವಾರರು ಓಡಾಡಲು ಭಯ ಪಡುವ ಪರಿಸ್ಥಿತಿ ನಿರ್ಮಾಣ
ನಗರದ ಹಳೇ ಕಾಯಿಪಲ್ಲೇ ಮಾರುಕಟ್ಟೆ ಹತ್ತಿರ ಇಂದು ಸಂಜೆ ಮೂರು ಗೂಳಿಗಳು ರಸ್ತೆಯ ಮಧ್ಯದಲ್ಲಿಯೇ ಒಂದಕ್ಕೊಂದು ಹಾಯುತ್ತಾ ಕಾದಾಡಲು ಪ್ರಾರಂಭಿಸಿದ್ದವು. ಜನರು ಗಾಬರಿ ಗೊಂಡು ದಿಕ್ಕಾಪಾಲಾಗಿ ಓಡಿಹೋದರು. ಗೂಳಿಗಳು ಕಾದಾಡುತ್ತಾ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಕೆಳಗಡೆ ಬೀಳಿಸಿದವು
-
ಸವದತ್ತಿಯಲ್ಲಿ ಹೆಚ್ಚಾದ ಗೂಳಿಗಳ ಹಾವಳಿ
ಕ್ರಮಕ್ಕೆ ಸಾರ್ವಜನಿಕರ ಆಗ್ರಹ
ಸವದತ್ತಿ: ನಗರದಲ್ಲಿ ಗೂಳಿಗಳ ಹಾವಳಿ ಹೆಚ್ಚಾಗಿದ್ದು ಮಹಿಳೆಯರು, ಮಕ್ಕಳು, ವೃದ್ಧರು, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಬೈಕ್ ಸವಾರರು ಓಡಾಡಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಹಳೇ ಕಾಯಿಪಲ್ಲೇ ಮಾರುಕಟ್ಟೆ ಹತ್ತಿರ ಇಂದು ಸಂಜೆ ಮೂರು ಗೂಳಿಗಳು ರಸ್ತೆಯ ಮಧ್ಯದಲ್ಲಿಯೇ ಒಂದಕ್ಕೊಂದು ಹಾಯುತ್ತಾ ಕಾದಾಡಲು ಪ್ರಾರಂಭಿಸಿದ್ದವು. ಜನರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿಹೋದರು. ಗೂಳಿಗಳು ಕಾದಾಡುತ್ತಾ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಕೆಳಗಡೆ ಬೀಳಿಸಿದವು. ಗೂಳಿಗಳ ಕಾದಾಟದಿಂದ ಕೆಲಕಾಲ ಭಯಭೀತ ವಾತಾವರಣ ನಿರ್ಮಾಣವಾಯಿತು.
ಇದನ್ನೂ ಓದಿ: Belagavi Rains: ಬೆಳಗಾವಿಯಲ್ಲಿ ಸಂಕ್ರಾಂತಿ ಹಬ್ಬದ ಮುನ್ನಾ ದಿನ ಭಾರೀ ಮಳೆ; 1 ಗಂಟೆಗೂ ಹೆಚ್ಚು ಕಾಲ ವರ್ಷಧಾರೆ!
ಈಗಾಗಲೇ ಗೂಳಿಗಳ ಕಾದಾಟದಿಂದ ಗಾಯಗೊಂಡ ಘಟನೆಗಳು ನಗರದಲ್ಲಿ ಸಾಕಷ್ಟು ನಡೆದಿವೆ. ಗಾಯಗೊಂಡವರಲ್ಲಿ ಚೇತರಿಸಿಕೊಳ್ಳದವರೇ ಹೆಚ್ಚು.
ಈ ಕುರಿತು ವಿಶ್ವವಾಣಿ ಕೆಲ ದಿನಗಳ ಹಿಂದೆ "ಬೀದಿನಾಯಿ, ಬಿಡಾಡಿ ದನಗಳ ಹಾವಳಿಗೆ ಕ್ರಮ ಕೈಗೊಳ್ಳಿ" ಎಂಬ ಶೀರ್ಷಿಕೆಯಡಿ ವರದಿ ಮಾಡಿತ್ತು. ಆದರೆ ಅಧಿಕಾರಿಗಳು ಯಾವದೇ ಕ್ರಮ ಕೈಗೊಳ್ಳದಿರುವದು ಸಾರ್ವಜನಿಕರನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ.
ಮಹಿಳೆಯರು, ಮಕ್ಕಳು, ವೃದ್ಧರು, ವಿದ್ಯಾರ್ಥಿಗಳು, ಬೈಕ್ ಸವಾರರು ಸಂಚರಿಸುವ ರಸ್ತೆಯಲ್ಲಿ ಯಾವದೇ ಅಹಿತಕರ ಘಟನೆ ನಡೆಯದಂತೆ ಪುರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತ ಈಗಲಾದರೂ ಮುನ್ನೆಚ್ಚರಿಕೆ ವಹಿಸಿ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.