SIRA (Tumkur) News: ಕಾಡುಗೊಲ್ಲ ಸಮುದಾಯ ಆರ್ಥಿಕವಾಗಿ ಸದೃಢರನ್ನಾಗಿಸಲು ಸರ್ಕಾರ ಬದ್ಧ: ಟಿಬಿ ಜಯಚಂದ್ರ
ಕಾಡುಗೊಲ್ಲ ಸಮುದಾಯದ ಮುಖಂಡರು ಹಾಗೂ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುದರ್ಶನ್ ಮಾತನಾಡಿ ಸ್ಥಳೀಯ ಶಾಸಕರ ಸಹಕಾರದಿಂದ ಕಾಡುಗೊಲ್ಲ ಅಭಿವೃದ್ಧಿ ನಿಗಮದ ನೊಂದಣಿ ಮಾಡಿಸುವ ನಿಟ್ಟಿನಲ್ಲಿ ನಿಗಮದ ರೂಪುರೇ಼ಷೆಯನ್ನು ಅಂತಿಮಗೊಳಿಸಿದ್ದು ಕಾರ್ಯಗತ ವಾಗಲು ಸಹಕಾರಿಯಾಯಿತು

ಶಿರಾ ನಗರದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಡಿ ದೇವರಾಜು ಆರಸು ಹಿಂದುಳಿದ ವರ್ಗಗಳ ನಿಗಮ ಮತ್ತು ಕಾಡುಗೊಲ್ಲ ಅಭಿವೃಧ್ದಿ ನಿಗಮದ ಉಚಿತ ಹೊಲಿಗೆ ಯಂತ್ರ ವಿತರಿಸುವ ಕಾರ್ಯಕ್ರಮವನ್ನು ಶಾಸಕ ಟಿಬಿ ಜಯಚಂದ್ರ ಉದ್ಘಾಟಿಸಿದರು,

ಶಿರಾದಲ್ಲಿ ಕಾಡುಗೊಲ್ಲ ನಿಗಮದಿಂದ ವಿವಿಧ ಸವಲತ್ತು ವಿತರಣೆ
ಶಿರಾ: ಕಾಡುಗೊಲ್ಲ ಸಮುದಾಯವನ್ನು ಆರ್ಥಿಕ ಸಾಮಾಜಿಕವಾಗಿ ಸದೃಢರನ್ನಾಗಿ ಮಾಡಲು ಸರ್ಕಾರವು ಬದ್ಧವಾಗಿದ್ದು ಈ ನಿಟ್ಟಿನಲ್ಲಿ ಕಾಡುಗೊಲ್ಲ ಸಮುದಾಯಕ್ಕೆ ವಿವಿಧ ಸವಲತ್ತುಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಟಿ ಬಿ ಜಯಚಂದ್ರ ಹೇಳಿದರು.
ಅವರು ನಗರದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಡಿ ದೇವರಾಜು ಆರಸು ಹಿಂದುಳಿದ ವರ್ಗ ಗಳ ನಿಗಮ ಮತ್ತು ಕಾಡುಗೊಲ್ಲ ಅಭಿವೃದ್ಧಿ ನಿಗಮ ಫಲಾನುಭವಿಗಳ ಮಂಜುರಾತಿ ಪತ್ರ ಹಾಗೂ ಉಚಿತ ಹೊಲಿಗೆಯಂತ್ರ ವಿತರಣೆ ಮಾಡಿ ಮಾತನಾಡಿದರು. ಕಾಡುಗೊಲ್ಲ ಸಮುದಾಯವು ಸಾಮಾ ಜಿಕ ಪಿಡುಗಿನ ಕಟ್ಟುಪಾಡುಗಳಿಂದ ಹೊರಗೆ ಬರಬೇಕು ಕಾಡುಗೊಲ್ಲ ಸಮುದಾಯ ಸಬಲರಾಗುವ ನಿಟ್ಟಿನಲ್ಲಿ ಜನಾಂಗದ ಮುಂಖಡರು ಪ್ರಯತ್ನ ಮಾಡಿದರೆ ಆರ್ಥಿಕ ಶಕ್ತಿ ಹೆಚ್ಚಿ ಜೀವನಮಟ್ಟ ಸುಧಾರಿಸುತ್ತದೆ ಎಂದು ಹೇಳಿದರು.
ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ಮಾತನಾಡಿ, ಶಿರಾ ತಾಲ್ಲೂಕಿನಲ್ಲಿ ಕಾಡುಗೊಲ್ಲ ಹಟ್ಟಿಗಳಲ್ಲಿ ಜನವಸತಿ ಪ್ರದೇಶಗಳಿದ್ದು ಕಾಡುಗೊಲ್ಲ ಹಟ್ಟಿಗಳಲ್ಲಿ ಹಕ್ಕುಪತ್ರ ಸವಲತ್ತುಗಳನ್ನು ಕಂದಾಯ ಇಲಾಖೆ ಮುಖಾಂತರ ಶೀಘ್ರವಾಗಿ ವಿತರಸುವ ಭರವಸೆ ನೀಡಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಹರೀಶ್ ಮಾತನಾಡಿ ಸರಕಾರದಿಂದ ನೀಡಲಾಗುತ್ತಿರುವ ವಿವಿಧ ಸವಲತ್ತುಗಳನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಂಡಾಗ ಸರಕಾರದ ಯೋಜನೆ ಯಶಸ್ವಿಯಾಗುತ್ತದೆ ಎಂದರು.
ಕಾಡುಗೊಲ್ಲ ಸಮುದಾಯದ ಮುಖಂಡರು ಹಾಗೂ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುದರ್ಶನ್ ಮಾತನಾಡಿ ಸ್ಥಳೀಯ ಶಾಸಕರ ಸಹಕಾರದಿಂದ ಕಾಡುಗೊಲ್ಲ ಅಭಿವೃಧ್ದಿನಿಗಮದ ನೊಂದಣಿ ಮಾಡಿಸುವ ನಿಟ್ಟಿನಲ್ಲಿ ನಿಗಮದ ರೂಪುರೇ಼ಷೆಯನ್ನು ಅಂತಿಮಗೊಳಿಸಿದ್ದು ಕಾರ್ಯ ಗತವಾಗಲು ಸಹಕಾರಿಯಾಯಿತು ಎಂದರು.
ಕಾರ್ಯಕ್ರಮದಲ್ಲಿ ಕಾಡುಗೊಲ್ಲ ನಿಗಮದ ವ್ಯವಸ್ಥಾಪಕ ವೆಂಕಟರಾಜು, ಕಾಡುಗೊಲ್ಲ ಸಂಘದ ಶಿರಾ ತಾಲ್ಲೂಕು ಅಧ್ಯಕ್ಷರಾದ ಈಶ್ವರಪ್ಪ ಕಾರ್ಪೇಹಳ್ಳಿ, ಹಾರೋಗೆರೆ ಮಹೇಶ್, ಟಿಎಪಿಸಿಎಂಎಸ್ ಮಾಜಿ ಉಪಾಧ್ಯಕ್ಷ ವೈಡಿ ಗೋಪಾಲ್, ಎಸ್ ಎಲ್ ಗೋವಿಂದರಾಜು, ಸೇರಿದಂತೆ ಹಲವರು ಹಾಜರಿದ್ದರು.
ತಹಶೀಲ್ದಾರ್ ಚ್ಚಿದಾನಂದ ಕುಚನೂರ, ತಾಪಂ ಕಾರ್ಯನಿರ್ಹಾಧಿಕಾರಿ ಹರೀಶ್ ಸೇರಿದಂತೆ ಹಲವರು ಹಾಜರಿದ್ದರು.