ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karna Serial: ಕರ್ಣ ಧಾರಾವಾಹಿಯಿಂದ ದಿಢೀರ್ ಹೊರಬಂದ್ರಾ ಭವ್ಯಾ ಗೌಡ?: ಎಲ್ಲ ಪೋಸ್ಟ್ ಡಿಲೀಟ್

ಭವ್ಯಾ ಗೌಡ ಅವರು ಕರ್ಣಾ ಧಾರಾವಾಹಿಯಿಂದ ದಿಢೀರ್ ಹೊರಬಂದಿದ್ದಾರೆ. ಇದಕ್ಕೆ ಪುಷ್ಠಿ ಎಂಬಂತಹ ಅನೇಕ ವಿಷಯಗಳು ಕೂಡ ಕಣ್ಣ ಮುಂದೆ ಕಾಣುತ್ತಿದೆ. ಭವ್ಯಾ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಕರ್ಣ ಧಾರಾವಾಹಿ ಕುರಿತ ಕೆಲ ಪೋಸ್ಟ್‌ಗಳನ್ನ ಹಂಚಿಕೊಂಡಿದ್ದರು. ಆದರೀಗ ಕರ್ಣಗೆ ಸಂಬಂಧಿಸಿದ ಪೋಸ್ಟ್‌ಗಳನ್ನೆಲ್ಲಾ ಭವ್ಯಾ ಡಿಲೀಟ್ ಮಾಡಿದ್ದಾರೆ.

ಕರ್ಣ ಧಾರಾವಾಹಿಯಿಂದ ದಿಢೀರ್ ಹೊರಬಂದ್ರಾ ಭವ್ಯಾ ಗೌಡ?

Bhaya Gowda Karna Serial

Profile Vinay Bhat Jun 17, 2025 7:17 AM

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ನಿನ್ನೆ ಸೋಮವಾರ ರಾತ್ರಿ 8 ಗಂಟೆಗೆ ಝೀ ಕನ್ನಡ ವಾಹಿನಿಯಲ್ಲಿ ಹೊಸ ಕರ್ಣ ಧಾರಾವಾಹಿ (Karna Serial) ಪ್ರಸಾರ ಕಾಣಬೇಕಿತ್ತು. ಆದರೆ, ಈ ಧಾರಾವಾಹಿ ಸೋಮವಾರ ಟೆಲಿಕಾಸ್ಟ್ ಆಗುವುದಿಲ್ಲ ಎಂಬ ಮಾಹಿತಿಯನ್ನು ವಾಹಿನಿ ನೀಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅಸಲಿ ಕಾರಣ ಏನು ಎಂಬ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಆಗುತ್ತಿದೆ. ಒಂದು ಮೂಲಕ ಈ ಧಾರಾವಾಹಿ ಪ್ರಸಾರ ಕಾಣದಿರಲು ಭವ್ಯಾ ಗೌಡ ಅವರು ದಿಢೀರ್​​ನೇ ಹೊರಬಂದಿರುವುದು ಕಾರಣ ಎಂದು ಹೇಳಿದೆ.

ಈ ಧಾರಾವಾಹಿಯಲ್ಲಿ ಕರ್ಣನಿಗೆ ಜೋಡಿಯಾಗಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ ಇದ್ದಾರೆ. ಇದರ ಜೊತೆಗೆ ಭವ್ಯಾ ತಂಗಿ ಪಾತ್ರದಲ್ಲಿ ನಮ್ರತಾ ಗೌಡ ಕೂಡ ನಟಿಸುತ್ತಿದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆಯ ಧಾರಾವಾಹಿ ಆಗಿದೆ. ನಮ್ರತಾ ನಿತ್ಯಾ ಅನ್ನೋ ಪಾತ್ರ ಮಾಡ್ತಿದ್ದಾರೆ ಭವ್ಯಾ ಪಾತ್ರದ ಹೆಸರು ನಿಧಿ. ನಿತ್ಯಾ, ನಿಧಿ ಇಬ್ಬರೂ ಅಕ್ಕ-ತಂಗಿ. ಅಜ್ಜಿ ಜೊತೆಗೆ ಜೀವನ ಮಾಡ್ತಾ ಇರುತ್ತಾರೆ. ಅಜ್ಜಿ ಪಾತ್ರದಲ್ಲಿ ಹಿರಿಯ ನಟಿ ಗಾಯತ್ರಿ ಪ್ರಭಾಕರ್​ ಅವರು ಕಾಣಿಸಿಕೊಳ್ತಿದ್ದಾರೆ.

ಆದರೆ, ಮೂಲಗಳ ಪ್ರಕಾರ ಭವ್ಯಾ ಅವರು ಈ ಧಾರಾವಾಹಿಯಿಂದ ದಿಢೀರ್ ಹೊರಬಂದಿದ್ದಾರೆ. ಇದಕ್ಕೆ ಪುಷ್ಠಿ ಎಂಬಂತಹ ಅನೇಕ ವಿಷಯಗಳು ಕೂಡ ಕಣ್ಣ ಮುಂದೆ ಕಾಣುತ್ತಿದೆ. ಭವ್ಯಾ ಗೌಡ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಕರ್ಣ ಧಾರಾವಾಹಿ ಕುರಿತ ಕೆಲ ಪೋಸ್ಟ್‌ಗಳನ್ನ ಹಂಚಿಕೊಂಡಿದ್ದರು. ಆದರೀಗ ಕರ್ಣಗೆ ಸಂಬಂಧಿಸಿದ ಪೋಸ್ಟ್‌ಗಳನ್ನೆಲ್ಲಾ ಭವ್ಯಾ ಡಿಲೀಟ್ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ಝೀ ಕನ್ನಡ ವಾಹಿನಿಯ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲೂ ಭವ್ಯಾ ಗೌಡ ಇದ್ದ ಕರ್ಣ ಸೀರಿಯಲ್‌ಗೆ ಸಂಬಂಧಿಸಿದ ಪೋಸ್ಟ್‌ಗಳನ್ನ ಡಿಲೀಟ್ ಮಾಡಲಾಗಿದೆ.

ಕರ್ಣ ಧಾರಾವಾಹಿಯ ಎರಡನೇ ಪ್ರೋಮೋದಲ್ಲಿ ನಿಧಿ ಪಾತ್ರದ ಮೂಲಕ ಭವ್ಯಾ ಗೌಡ ಅವರನ್ನ ಪರಿಚಯ ಮಾಡಲಾಗಿತ್ತು. ಇದರಲ್ಲಿ ನಿಧಿ - ಕರ್ಣನ ಲವ್‌ ಸ್ಟೋರಿಯನ್ನ ತೋರಿಸಲಾಗಿತ್ತು. ಆದರೆ ಶಾಕಿಂಗ್ ಎಂಬಂತೆ ಈ ಪ್ರೋಮೋವನ್ನೂ ಇದೀಗ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಲಾಗಿದೆ. ಹೀಗಾಗಿ ಕರ್ಣ ಸೀರಿಯಲ್‌ನಿಂದ ಭವ್ಯಾ ಗೌಡ ಹೊರಬಂದಿದ್ದಾರೆ ಎಂಬ ಟಾಕ್ ಕೇಳಿಬರುತ್ತಿದೆ.

Anushree: ಮದುವೆ ಸುದ್ದಿ ಬೆನ್ನಲ್ಲೇ ಹೊಸ ದುಬಾರಿ ಕಾರು ಖರೀದಿಸಿದ ಅನುಶ್ರೀ

ಮತ್ತೊಂದೆಡೆ ಭವ್ಯಾ ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಆಲ್ ಒಕೆ ಅವರ ಡೋಂಟ್ ವರಿ ಹಾಡಿನೊಂದಿಗೆ ‘ಪ್ರಕ್ರಿಯೆ ಮೇಲೆ ನಂಬಿಕೆ ಇಡಿ’ ಎಂದು ಸ್ಟೋರಿ ಹಂಚಿಕೊಂಡಿದ್ದಾರೆ. ಇದಕ್ಕೂ ಕರ್ಣ ಸೀರಿಯಲ್‌ ಪ್ರಸಾರ ಕಾಣದಿರುವುದಕ್ಕೂ ಅಥವಾ ಭವ್ಯಾ ಹೊರಬಂದಿರುವುದಕ್ಕೂ ಏನಾದರು ಸಂಬಂಧ ಇದೆಯೇ ಎಂಬುದು ಗೊತ್ತಿಲ್ಲ. ಒಟ್ಟಾರೆ ಭವ್ಯಾ ಹೊರಬಂದಿರುವುದು ನಿಜವೇ ಆಗಿದ್ದರೆ ಇದು ಅವರ ಅಭಿಮಾನಿಗಳಿಗೆ ದೊಡ್ಡ ಅಘಾತವಾಗಿದೆ. ಕರ್ಣ ಧಾರಾವಾಹಿ ಇನ್ನು ಯಾವಾಗ ಪ್ರಸಾರ ಆರಂಭವಾಗುತ್ತೆ ಎಂಬುದು ನೋಡಬೇಕಿದೆ.