ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karna Serial: ಕರ್ಣ ಧಾರಾವಾಹಿಗೆ ಸ್ಟೇ ಆರ್ಡರ್: ಭವ್ಯಾ ಗೌಡಾಗೆ ಎದುರಾಯ್ತು ಸಂಕಷ್ಟ

ಕರ್ಣ ಧಾರಾವಾಹಿ ದಿಢೀರ್ ಟೆಲಿಕಾಸ್ಟ್ ಆಗದಿರಲು ಭವ್ಯಾ ಗೌಡ ಅವರೇ ಕಾರಣ ಎಂಬ ಮಾತು ಕೇಳಿಬಂದಿತ್ತು. ಭವ್ಯಾ ಅವರು ಕರ್ಣ ಸೀರಿಯಲ್ನಿಂದ ಹೊರನಡೆದಿದ್ದಾರೆ ಎಂಬ ಗಾಸಿಪ್ ಹಬ್ಬಿತು. ಇದೀಗ ಅಸಲಿ ವಿಚಾರ ತಿಳಿದುಬಂದಿದ್ದು, ಈ ಧಾರಾವಾಹಿ ಪ್ರಸಾರ ಕಾಣಬಾರದು ಎಂದು ಸ್ಟೇ ತರಲಾಗಿದೆ.

ಕರ್ಣ ಧಾರಾವಾಹಿಗೆ ಸ್ಟೇ ಆರ್ಡರ್: ಭವ್ಯಾ ಗೌಡಾಗೆ ಎದುರಾಯ್ತು ಸಂಕಷ್ಟ

Karna Serial

Profile Vinay Bhat Jun 17, 2025 9:07 AM

ಝೀ ಕನ್ನಡ ವಾಹಿನಿಯಲ್ಲಿ ಸೋಮವಾರ ರಾತ್ರಿ 8 ಗಂಟೆಗೆ ಪ್ರಸಾರ ಕಾಣಬೇಕಿದ್ದ ಬಹುನಿರೀಕ್ಷಿತ ಹೊಸ ಕರ್ಣ ಧಾರಾವಾಹಿಯನ್ನು (Karna Serial) ಕೊನೇ ಕ್ಷಣದಲ್ಲಿ ರದ್ದು ಮಾಡಲಾಗಿದೆ. ಈ ಧಾರಾವಾಹಿ ಸೋಮವಾರ ಟೆಲಿಕಾಸ್ಟ್ ಆಗುವುದಿಲ್ಲ ಎಂಬ ಮಾಹಿತಿಯನ್ನು ವಾಹಿನಿ ನೀಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಕಿರಣ್ ರಾಜ್, ಭವ್ಯಾ ಗೌಡ ಹಾಗೂ ನಮ್ರತಾ ಮುಖ್ಯ ಭೂಮಿಕೆಯಲ್ಲಿ ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಕರ್ಣನ ಆಗಮನಕ್ಕೆ ವಿಘ್ನ ಉಂಟಾಯಿತು. ಧಾರಾವಾಹಿ ಟೆಲಿಕಾಸ್ಟ್ ಆಗದಿರಲು ಕಾರಣ ಏನು ಎಂಬ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಆಗುತ್ತಿದೆ. ಇದೀಗ ಅಸಲಿ ವಿಚಾರ ತಿಳಿದುಬಂದಿದ್ದು, ಈ ಧಾರಾವಾಹಿ ಪ್ರಸಾರ ಕಾಣಬಾರದು ಎಂದು ಸ್ಟೇ ತರಲಾಗಿದೆ.

ಕರ್ಣ ಧಾರಾವಾಹಿಯಲ್ಲಿ ಕರ್ಣನಿಗೆ ಜೋಡಿಯಾಗಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಭವ್ಯಾ ಗೌಡ ಇದ್ದಾರೆ. ಇದರ ಜೊತೆಗೆ ಭವ್ಯಾ ತಂಗಿ ಪಾತ್ರದಲ್ಲಿ ನಮ್ರತಾ ಗೌಡ ಕೂಡ ನಟಿಸುತ್ತಿದ್ದಾರೆ. ಇದೊಂದು ತ್ರಿಕೋನ ಪ್ರೇಮಕಥೆಯ ಧಾರಾವಾಹಿ ಆಗಿದೆ. ನಮ್ರತಾ ನಿತ್ಯಾ ಅನ್ನೋ ಪಾತ್ರ ಮಾಡ್ತಿದ್ದಾರೆ ಭವ್ಯಾ ಪಾತ್ರದ ಹೆಸರು ನಿಧಿ. ನಿತ್ಯಾ, ನಿಧಿ ಇಬ್ಬರೂ ಅಕ್ಕ-ತಂಗಿ. ಅಜ್ಜಿ ಜೊತೆಗೆ ಜೀವನ ಮಾಡ್ತಾ ಇರುತ್ತಾರೆ. ಅಜ್ಜಿ ಪಾತ್ರದಲ್ಲಿ ಹಿರಿಯ ನಟಿ ಗಾಯತ್ರಿ ಪ್ರಭಾಕರ್​ ಅವರು ಕಾಣಿಸಿಕೊಳ್ತಿದ್ದಾರೆ.

ಈ ಧಾರಾವಾಹಿ ದಿಢೀರ್ ಟೆಲಿಕಾಸ್ಟ್ ಆಗದಿರಲು ಭವ್ಯಾ ಗೌಡ ಅವರೇ ಕಾರಣ ಎಂಬ ಮಾತು ಕೇಳಿಬಂದಿತ್ತು. ಭವ್ಯಾ ಅವರು ಕರ್ಣ ಸೀರಿಯಲ್​ನಿಂದ ಹೊರನಡೆದಿದ್ದಾರೆ ಎಂಬ ಗಾಸಿಪ್ ಹಬ್ಬಿತು. ಇದಕ್ಕೆ ಪುಷ್ಠಿ ಎಂಬಂತೆ ಭವ್ಯಾ ಗೌಡ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಕರ್ಣ ಧಾರಾವಾಹಿ ಕುರಿತು ಹಂಚಿಕೊಂಡ ಎಲ್ಲ ಪೋಸ್ಟ್‌ಗಳನ್ನ ಡಿಲೀಟ್ ಮಾಡಿದರು. ಅಷ್ಟು ಮಾತ್ರವಲ್ಲದೆ ಝೀ ಕನ್ನಡ ವಾಹಿನಿಯ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲೂ ಭವ್ಯಾ ಗೌಡ ಇದ್ದ ಕರ್ಣ ಸೀರಿಯಲ್‌ಗೆ ಸಂಬಂಧಿಸಿದ ಪೋಸ್ಟ್‌ಗಳನ್ನ ಡಿಲೀಟ್ ಮಾಡಿತು.

ಕರ್ಣ ಧಾರಾವಾಹಿಯ ಎರಡನೇ ಪ್ರೋಮೋದಲ್ಲಿ ನಿಧಿ ಪಾತ್ರದ ಮೂಲಕ ಭವ್ಯಾ ಗೌಡ ಅವರನ್ನ ಪರಿಚಯ ಮಾಡಲಾಗಿತ್ತು. ಇದರಲ್ಲಿ ನಿಧಿ - ಕರ್ಣನ ಲವ್‌ ಸ್ಟೋರಿಯನ್ನ ತೋರಿಸಲಾಗಿತ್ತು. ಆದರೆ ಶಾಕಿಂಗ್ ಎಂಬಂತೆ ಈ ಪ್ರೋಮೋವನ್ನೂ ಇದೀಗ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಲಾಗಿದೆ. ಹೀಗಾಗಿ ಕರ್ಣ ಸೀರಿಯಲ್‌ನಿಂದ ಭವ್ಯಾ ಗೌಡ ಹೊರಬಂದಿದ್ದಾರೆ ಎಂಬ ಟಾಕ್ ಕೇಳಿಬಂದಿತ್ತು. ಆದರೀಗ ಅಸಲಿ ವಿಚಾರ ಬೆಳಕಿಗೆ ಬಂದಿದೆ.

ಝೀ ಕನ್ನಡ ವಾಹಿನಿಯ ಪ್ರತಿಸ್ಪರ್ಧಿ ಚಾನೆಲ್‌ ಜೂನ್‌ 14 ರಂದು ಕೋರ್ಟ್‌ ಮೆಟ್ಟಿಲೇರಿದೆ. ಕರ್ಣ ಧಾರಾವಾಹಿ ಪ್ರಸಾರವಾಗಬಾರದೆಂದು ಕೋರ್ಟ್‌ನಿಂದ ಪ್ರತಿಸ್ಪರ್ಧಿ ಚಾನೆಲ್‌ ಸ್ಟೇ ಆರ್ಡರ್‌ ತಂದಿದೆ. ಇದೇ ಕಾರಣಕ್ಕೆ ಸೋಮವಾರ ರಾತ್ರಿ 8ಕ್ಕೆ ನಿಗದಿಯಾಗಿದ್ದ ಕರ್ಣ ಸೀರಿಯಲ್‌ ಪ್ರಸಾರಕ್ಕೆ ತಡೆ ಬಿದ್ದಿದೆ. ಪ್ರತಿಸ್ಪರ್ಧಿ ಚಾನೆಲ್‌ ಕೋರ್ಟ್ ಮೆಟ್ಟಿಲೇರಲು ಕಾರಣ ಭವ್ಯಾ ಗೌಡ ಎನ್ನಲಾಗಿದೆ. ಇದಕ್ಕೆ ಭವ್ಯಾ ಹೇಗೆ ಕಾರಣ ಎಂಬುದನ್ನು ಮುಂದೆ ಓದಿ..

Karna Serial: ಕರ್ಣ ಧಾರಾವಾಹಿಯಿಂದ ದಿಢೀರ್ ಹೊರಬಂದ್ರಾ ಭವ್ಯಾ ಗೌಡ?: ಎಲ್ಲ ಪೋಸ್ಟ್ ಡಿಲೀಟ್

ಸಾಮಾನ್ಯವಾಗಿ ಒಂದು ವಾಹಿನಿ ಜೊತೆ ಗುರುತಿಸಿಕೊಂಡವರು ಕೆಲ ಒಪ್ಪಂದಗಳನ್ನು ‌ಮಾಡಿಕೊಂಡಿರುತ್ತಾರೆ. ಆ ಒಪ್ಪಂದ ಪೂರ್ಣಗೊಳ್ಳುವರೆಗೆ ಬೇರೆ ವಾಹಿನಿ ಕಡೆ ಇವರು ಮುಖ ಹಾಕುವಂತೆ ಇಲ್ಲ. ಈ ಒಪ್ಪಂದವನ್ನು ಭವ್ಯಾ ಗೌಡ ಮುರಿದಿದ್ದಾರೆ ಎನ್ನುವುದು ಸದ್ಯಕ್ಕೆ ಕೇಳಿ ಬರುತ್ತಿರುವ ಮಾತು. ಅಂದರೆ ಝೀ ಕನ್ನಡ ವಾಹಿನಿಯ ಪ್ರತಿಸ್ಪರ್ಧಿ ಚಾನೆಲ್‌ ಜೊತೆಗೆ ಭವ್ಯಾ ಗೌಡ ಅವರ ಅಗ್ರೀಮೆಂಟ್‌ ಆಗಿತ್ತು. ಅಗ್ರೀಮೆಂಟ್‌ ಪ್ರಕಾರ, ಕೆಲ ತಿಂಗಳ ಮಟ್ಟಿಗೆ ಭವ್ಯಾ ಗೌಡ ಬೇರೆ ಚಾನೆಲ್‌ಗಾಗಿ ಕೆಲಸ ಮಾಡುವಂತಿಲ್ಲ. ಇದನ್ನೇ ಇಟ್ಟುಕೊಂಡು ಪ್ರತಿಸ್ಪರ್ಧಿ ಚಾನೆಲ್‌ ಕೋರ್ಟ್‌ ಮೆಟ್ಟಿಲೇರಿದೆ. ಕರ್ಣ ಧಾರಾವಾಹಿ ಪ್ರಸಾರಕ್ಕೆ ಸ್ಟೇ ತಂದಿದೆ.

ಭವ್ಯಾ ಗೌಡ ವಿಚಾರವಾಗಿ ಕೋರ್ಟ್‌ನಿಂದ ಸ್ಟೇ ಬಂದ ಕಾರಣ ಅವರಿಗೆ ಸಂಬಂಧಿಸಿದ ಕರ್ಣ ಧಾರಾವಾಹಿಯ ಪ್ರೋಮೋಗಳನ್ನ ಡಿಲೀಟ್ ಮಾಡಲಾಗಿದೆ. ಭವ್ಯಾ ಗೌಡ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲೂ ಕರ್ಣನಿಗೆ ಸಂಬಂಧಿಸಿದ ಫೋಸ್ಟ್ ಗಳನ್ನು ತೆಗೆದು ಹಾಕಿರುವುದು ಇದೇ ಕಾರಣಕ್ಕೆ. ಒಟ್ಟಾರೆಯಾಗಿ ಈ ಘಟನೆಯಿಂದ ಕರ್ಣ ನಿರ್ಮಾಪಕಿ ಶ್ರುತಿ ನಾಯ್ಡು ಅವರಿಗೆ ಅಪಾರವಾದ ನಷ್ಟವಾಗಿದೆ. ಸದ್ಯ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಕರ್ಣ ಸೀರಿಯಲ್‌ ಪ್ರಸಾರ ಮಾಡಲು ಸಾಧ್ಯವಿಲ್ಲ.