Shashidhara Halady: Column: ಕರಗಿದ ಹಿಮನದಿ, ಮರುಗಿದ ಮನ
ನೇಪಾಳದಲ್ಲಿ ಆಗಿರುವ ದುರಂತಕ್ಕಾಗಿ ಸಂತಾಪಗಳನ್ನು ಸೂಚಿಸುತ್ತಲೇ, ಅಲ್ಲಿ ಸಂಭವಿಸಿದ ನಷ್ಟದ ಪ್ರಮಾಣವನ್ನು ಗಮನಿಸಿದರೆ, (ಇನ್ನೂ ಪೂರ್ತಿ ವಿವರ ಬಂದಿಲ್ಲವಾದರೂ), ಇಂತಹ ಒಂದು ಭೀಕರ ಅನಾಹುತವು, ನಿರೀಕ್ಷಿತ ಪ್ರಮಾಣದಲ್ಲಿ ಜಗತ್ತಿನ ಗಮನವನ್ನು ಸೆಳೆದಿಲ್ಲವೆಂದೇ ಹೇಳಬೇಕು. ದುರಂತ ಗಳು ಪ್ರಚಾರವನ್ನು ಬಯಸುವುದಿಲ್ಲ, ಆದರೆ, ದುರಂತದ ಪ್ರಮಾಣವು ಗೊತ್ತಾದರೆ, ಬೇರೆ ದೇಶಗಳಿಂದ ಕೊನೆಯ ಪಕ್ಷ ಸಹಾಯವನ್ನಾದರೂ ಪಡೆಯಲು ಸಾಧ್ಯವಾಗ ಬಲ್ಲದು.