ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರಷ್ಯಾ ಅಧ್ಯಕ್ಷ ಪುಟಿನ್‌ಗೆ ತಮಿಳು ಶ್ರೇಷ್ಠ ಕೃತಿ ʼತಿರುಕ್ಕುರಳ್ʼನ ರಷ್ಯನ್ ಅನುವಾದ ಉಡುಗೊರೆಯಾಗಿ ನೀಡಿದ ಪ್ರಧಾನಿ ನರೇಂದ್ರ ಮೋದಿ; ಏನಿದರ ವೈಶಿಷ್ಟ್ಯ?

PM Modi Gifts Tamil book to Putin: ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕವಿ ಮತ್ತು ತತ್ವಜ್ಞಾನಿ ತಿರುವಳ್ಳುವರ್ ಅವರ ಪ್ರಸಿದ್ಧ ತಮಿಳು ಶ್ರೇಷ್ಠ ಕೃತಿ ʼತಿರುಕ್ಕುರಳ್ʼನ ರಷ್ಯನ್ ಅನುವಾದವನ್ನು ಉಡುಗೊರೆಯಾಗಿ ನೀಡಿದರು. ಸೆಪ್ಟೆಂಬರ್ 12 ಮತ್ತು 13ರಂದು ಭಾರತ ಆಯೋಜಿಸುತ್ತಿರುವ ಶೃಂಗಸಭೆಗಾಗಿ ಪುಟಿನ್ ಶುಕ್ರವಾರ ದೆಹಲಿಗೆ ಆಗಮಿಸಿದರು.

ಪುಟಿನ್‌ಗೆ ತಮಿಳು  ʼತಿರುಕ್ಕುರಳ್ʼ ಉಡುಗೊರೆ ನೀಡಿದ ಪ್ರಧಾನಿ ಮೋದಿ

ವ್ಲಾಡಿಮಿರ್ ಪುಟಿನ್-ನರೇಂದ್ರ ಮೋದಿ -

Priyanka P
Priyanka P Sep 11, 2026 7:13 PM

ನವದೆಹಲಿ, ಸೆ. 11: ಪ್ರಧಾನಿ ನರೇಂದ್ರ ಮೋದಿ (PM Narendra Modi) ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರಿಗೆ ಕವಿ ಮತ್ತು ತತ್ವಜ್ಞಾನಿ ತಿರುವಳ್ಳುವರ್ ಅವರ ಪ್ರಸಿದ್ಧ ತಮಿಳು ಶ್ರೇಷ್ಠ ಕೃತಿ ʼತಿರುಕ್ಕುರಳ್‌ʼನ ರಷ್ಯನ್ ಅನುವಾದವನ್ನು ಉಡುಗೊರೆಯಾಗಿ ನೀಡಿದರು. 18ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ನವದೆಹಲಿಯಲ್ಲಿ ದ್ವಿಪಕ್ಷೀಯ ಮಾತುಕತೆಗಾಗಿ ಮೋದಿ ಮತ್ತು ಪುಟಿನ್ ಭೇಟಿಯಾದ ವೇಳೆ ಈ ಕೃತಿಯನ್ನು ಉಡುಗೊರೆಯಾಗಿ ನೀಡಲಾಯಿತು. ಸೆಪ್ಟೆಂಬರ್ 12 ಮತ್ತು 13ರಂದು ಭಾರತ ಆಯೋಜಿಸುತ್ತಿರುವ ಶೃಂಗಸಭೆಗಾಗಿ ಪುಟಿನ್ ಶುಕ್ರವಾರ (ಸೆಪ್ಟೆಂಬರ್‌ 10) ದೆಹಲಿಗೆ ಆಗಮಿಸಿದರು.

ತಮಿಳು ಸಾಹಿತ್ಯದ ಅತ್ಯಂತ ಗೌರವಾನ್ವಿತ ಕೃತಿಗಳಲ್ಲಿ ಒಂದಾದ ʼತಿರುಕ್ಕುರಳ್‌ʼ ನೀತಿಶಾಸ್ತ್ರ, ಸದ್ಗುಣ, ಆಡಳಿತ, ಪ್ರೀತಿ ಮತ್ತು ಜೀವನ ನಡವಳಿಕೆಯನ್ನು ನಿರ್ವಹಿಸುವ 1,330 ದ್ವಿಪದಿಗಳನ್ನು ಒಳಗೊಂಡಿದೆ. ರಷ್ಯನ್ ಭಾಷೆಯ ಆವೃತ್ತಿಯನ್ನು ಪುಟಿನ್ ಅವರಿಗೆ ನೀಡುವ ಮೂಲಕ ಮೋದಿ ಭಾರತದ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿದರು.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ʼತಿರುಕ್ಕುರಳ್‌ʼ ಉಡುಗೊರೆ ನೀಡಿದ ಮೋದಿ:



ಭಾರತ ಮತ್ತು ರಷ್ಯಾ ತಮ್ಮ ದೀರ್ಘಕಾಲದ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಾಂಪ್ರದಾಯಿಕ ಸಹಕಾರ ಕ್ಷೇತ್ರಗಳಿಂದ ಆಚೆಗೆ ವಿಸ್ತರಿಸಲು ಎದುರು ನೋಡುತ್ತಿವೆ. ಮೋದಿ ಮತ್ತು ಪುಟಿನ್ ನಡುವಿನ ಮಾತುಕತೆಯು ಭಾರತ ಮತ್ತು ರಷ್ಯಾ ನಡುವಿನ ಆರ್ಥಿಕ ಹಾಗೂ ಕೈಗಾರಿಕಾ ಸಂಬಂಧಗಳನ್ನು ವಿಸ್ತರಿಸುವ ಬಗ್ಗೆ ಪ್ರಮುಖವಾಗಿ ಗಮನಹರಿಸುವ ನಿರೀಕ್ಷೆಯಿದೆ.

7 ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ ಭೇಟಿ; ಮೋದಿ-ಕ್ಸಿ ದ್ವಿಪಕ್ಷೀಯ ಸಭೆ

ಮೂಲಗಳ ಪ್ರಕಾರ, ಉಭಯ ನಾಯಕರು 2030ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು $100 ಶತಕೋಟಿಗೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯ ಗುರಿಯ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ. ಇದರೊಂದಿಗೆ ಹೆಚ್ಚಿನ ಉದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸುವ ಮತ್ತು ರಷ್ಯಾದ ಮಾರುಕಟ್ಟೆಗೆ ಭಾರತೀಯ ಕಂಪನಿಗಳ ಪ್ರವೇಶವನ್ನು ಸುಧಾರಿಸುವ ಕ್ರಮಗಳ ಕುರಿತು ಮಾತುಕತೆ ನಡೆಸಲಿದ್ದಾರೆ.

ಉಭಯ ದೇಶಗಳ ನಡುವಿನ ಉತ್ಪಾದನೆ ಮತ್ತು ಕೈಗಾರಿಕಾ ಪಾಲುದಾರಿಕೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಇನ್ನೋಪ್ರೊಮ್ ಇಂಡಿಯಾ ಉಪಕ್ರಮ ಸೇರಿ ಕೈಗಾರಿಕಾ ಸಹಕಾರವು ಈ ಭೇಟಿಯಲ್ಲಿ ಪ್ರಮುಖವಾಗಿ ಮೂಡಿಬರುವ ನಿರೀಕ್ಷೆಯಿದೆ. ಈ ಚರ್ಚೆಯ ಅಡಿಯಲ್ಲಿ ರೈಲ್ವೆ, ಸುರಂಗ ನಿರ್ಮಾಣ ಮತ್ತು ಉಕ್ಕಿನ ಮೌಲ್ಯ ಸರಪಳಿಯ ಅಭಿವೃದ್ಧಿ ಚರ್ಚೆಯಲ್ಲಿರುವ ಇತರ ಕ್ಷೇತ್ರಗಳು ಸೇರಿವೆ.

ಭಾರತಕ್ಕೆ ರಸಗೊಬ್ಬರ ಪೂರೈಕೆ ಮಾಡುವ ಪ್ರಮುಖ ಮತ್ತು ವಿಶ್ವಾಸಾರ್ಹ ದೇಶಗಳಲ್ಲಿ ರಷ್ಯಾ ಅಗ್ರಸ್ಥಾನದಲ್ಲಿದೆ. ಇದನ್ನು ಮತ್ತಷ್ಟು ಬಲಪಡಿಸುವ ಸಲುವಾಗಿ, ಉಭಯ ದೇಶಗಳು ಜಂಟಿ ಸಹಭಾಗಿತ್ವದ ಯೋಜನೆಗಳ ಮೂಲಕ ರಸಗೊಬ್ಬರ ಕ್ಷೇತ್ರದಲ್ಲಿ ಸಹಕಾರವನ್ನು ವಿಸ್ತರಿಸುವ ಬಗ್ಗೆಯೂ ಚರ್ಚಿಸಲಿವೆ.

ಇದಲ್ಲದೆ, ರಷ್ಯಾಕ್ಕೆ ಪ್ರಯಾಣಿಸುವ ಭಾರತೀಯ ಕಾರ್ಮಿಕರ ಸಂಖ್ಯೆಯನ್ನು ಹೆಚ್ಚಿಸುವುದು ಸೇರಿ ನುರಿತ ಮಾನವ ಸಂಪನ್ಮೂಲದ ಹೆಚ್ಚಿನ ಚಲನಶೀಲತೆಗೆ ಪೂರಕವಾದ ವ್ಯವಸ್ಥೆಯನ್ನು ಕಲ್ಪಿಸುವ ಕುರಿತು ಉಭಯ ನಾಯಕರು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.