ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿಜಯಪುರ

ಏ.23ರಿಂದ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವ

ಏ.23ರಿಂದ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವ

23 ರಂದು ಸಾಯಂಕಾಲ 7 ಗಂಟೆಗೆ ಪುರಾಣ ಮಹಾಮಂಗಲ, ಶ್ರೀ ವಿಶ್ವಕರ್ಮ ಜಗದ್ಗುರು ಮೂರಝಾವಧೀಶ್ವರ ಅಫಝಲಪೂರದ ಶ್ರೀ ಪ್ರಣವ ನಿರಂ ಜನ ಶ್ರೀಗಳು, ಸಿಂದಗಿಯ ರಾಮ ಚಂದ್ರ ಶ್ರೀಗಳು, ಗೋಳಸಾರದ ಅಭಿನವ ಪುಂಡಲಿಂಗ ಶ್ರೀಗಳು, ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ, ನಗರಸಭೆ ಪೌರಾಯುಕ್ತ ಶಿವಾನಂದ ಪೂಜಾರಿ ಉಪಸ್ಥಿತರಿರುವರು

Indi News: ಗ್ರಾಪಂ ಗಳಿಗೆ ಬಾರದ 15ನೇ ಹಣಕಾಸು ಯೋಜನೆ ಅನುದಾನ: ಬಹುತೇಕ ಗ್ರಾಪಂಗಳಿಗೆ ಅರ್ಥಿಕ  ಸಂಕಷ್ಟ

ಗ್ರಾಪಂ ಗಳಿಗೆ ಬಾರದ 15ನೇ ಹಣಕಾಸು ಯೋಜನೆ ಅನುದಾನ

ಅಭಿವೃದ್ದಿ ಕಾರ್ಯಗಳು ಅರ್ಧಕ್ಕೆ ನಿಂತಿದ್ದು ಜನರ ಪ್ರಶ್ನೆಗಳಿಗೆ ಉತ್ತರಿಸಲಾಗದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಅಕ್ಷರಶಃ ಹೈರಾಣಾಗುತ್ತಿದ್ದಾರೆ. ವೇತನ ಪಾವತಿ, ನಿರ್ವಹಣೆಗೆ ತಾಲೂಕಿ ನಲ್ಲಿರುವ 38 ಗ್ರಾಪಂಗಳು ಸಾರ್ವಜನಿಕರಿಂದ ಸಂಗ್ರಹವಾಗುವ ತೆರಿಗೆ ಕೇಂದ್ರ ಮತ್ತು ರಾಜ್ಯ ಹಣಕಾಸು ಆಯೋಗ ನೀಡುವ ಅನುದಾನ ಅವಲಂಬಿಸಿವೆ. ಆದರೆ 15ನೇಯ ಹಣಕಾಸು ಆಯೋಗದ ಅನುದಾನ ವನ್ನು ನಾಲ್ಕು ವರ್ಷದವರೆಗೆ ನಾನಾ ಕಂತುಗಳಲ್ಲಿ ನೀಡುತ್ತ ಬಂದಿದ್ದ ಕೇಂದ್ರ ಐದನೇ ವರ್ಷದ ಅನುದಾನವನ್ನು ಸಮರ್ಪಕವಾಗಿ ಬಿಡುಗಡೆ ಮಾಡಿಲ್ಲ

MLA Yashwant Rayagouda Patil: ಇಂಡಿ ಅಭಿವೃದ್ದಿಗಾಗಿ ಕೆಲಸ ಮಾಡುವ ಪ್ರಾಧಿಕಾರ: ಯಶವಂತರಾಯಗೌಡರು

ಇಂಡಿ ಅಭಿವೃದ್ದಿಗಾಗಿ ಕೆಲಸ ಮಾಡುವ ಪ್ರಾಧಿಕಾರ: ಯಶವಂತರಾಯಗೌಡರು

ನಗರಗಳ ವ್ಯವಸ್ಥಿತ ಬೆಳವಣೆಗೆಗೆ ಯೋಜನೆ ಸಿದ್ದಪಡಿಸುವದು ಮತ್ತು ಅನುಷ್ಠಾನಗೊಳಿಸುವದು ಉದ್ದೇಶವಾಗಿದೆ. ಅಭಿವೃದ್ದಿ ಪಡಿಸಿದ ಪ್ರದೇಶಗಳಲ್ಲಿ ರಸ್ತೆ ನೀರು ಸರಬರಾಜು ಒಳಚರಂಡಿ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವದು ನಮ್ಮ ಗುರಿಯಾಗಿದೆ ಎಂದರು. ಇಂಡಿ ನಗರದ ವ್ಯವಸ್ಥಿತ ಅಭಿವೃದ್ದಿ ವಸತಿ ಯೋಜನೆಗಳು ಮತ್ತು ಮೂಲಸೌಕರ್ಯ ಮಾಡುವ ಉದ್ದೇಶ ಹೊಂದಿದೆ ಎಂದರು.

Murder case: ಕಾರಿಗೆ ಟಿಪ್ಪರ್‌ ಗುದ್ದಿಸಿ, ಗುಂಡು ಹಾರಿಸಿ ಗ್ರಾಮ ಪಂಚಾಯತ್‌ ಸದಸ್ಯನ ಕೊಲೆ

ಕಾರಿಗೆ ಟಿಪ್ಪರ್‌ ಗುದ್ದಿಸಿ, ಗುಂಡು ಹಾರಿಸಿ ಗ್ರಾಮ ಪಂಚಾಯತ್‌ ಸದಸ್ಯನ ಕೊಲೆ

ಕಾರಿನಲ್ಲಿದ್ದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಜು ಖರೆ ಮೇಲೆ ಆರೋಪಿಗಳು ಬರೋಬ್ಬರಿ ಆರು ಸುತ್ತು ಗುಂಡು ಹಾರಿಸಿದ್ದಲ್ಲದೇ, ಕೊನೆಗೆ ಕಲ್ಲು ಎತ್ತಿ ಹಾಕಿ ಕೊಲೆ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ವಿಜಯಪುರದ ಹೊರಭಾಗದ ಅಲಿಯಾಬಾದ್ ಬಳಿ ನಡೆದಿದೆ.

ವಿಜಯಪುರದಲ್ಲಿ ಹೀನ ಕೃತ್ಯ; ನೋಡಕ್ಕೆ ತನ್ನಂತೆ ಕಾಣಲ್ಲ ಎಂದು 6 ವರ್ಷದ ಮಗನನ್ನು ನದಿಗೆ ತಳ್ಳಿ ಕೊಂದ ಪಾಪಿ ತಂದೆ!

ನೋಡಕ್ಕೆ ತನ್ನಂತೆ ಕಾಣಲ್ಲ ಎಂದು ಮಗನನ್ನು ಕೊಂದ ಪಾಪಿ ತಂದೆ!

ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಅರಕೇರಿ ಎಂಬಾತ ಕ್ರೂರ ಕೃತ್ಯ ಎಸಗಿದ್ದಾನೆ. ತನ್ನ ಮಗ ನೋಡಲು ತನ್ನಂತೆ ಇಲ್ಲ ಎಂದು ಕೃಷ್ಣಾ ನದಿಗೆ ತಳ್ಳಿ ಕೊಂದಿದ್ದಾನೆ. ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಲ್ಲಿಕಾರ್ಜುನ ಅರಕೇರಿಯನ್ನು ಪೊಲೀಸರು ಬಂಧಿಸಿದ್ದಾರೆ.

Vijayapura news: ಪಿಎಸ್‌ಐಯಿಂದ ಭ್ರಷ್ಟಾಚಾರದ ಒತ್ತಡ, ದಯಾಮರಣ ಕೋರಿದ ಠಾಣೆ ಸಿಬ್ಬಂದಿ

ಪಿಎಸ್‌ಐಯಿಂದ ಭ್ರಷ್ಟಾಚಾರದ ಒತ್ತಡ, ದಯಾಮರಣ ಕೋರಿದ ಠಾಣೆ ಸಿಬ್ಬಂದಿ

ಹಣಕ್ಕಾಗಿ ವಿಪರೀತ ಭ್ರಷ್ಟಾಚಾರ, ಕಾನೂನು ಬಾಹಿರ ಚಟುವಟಿಕೆಗಳಿಂದ ಸಾರ್ವಜನಿಕರಲ್ಲಿ ಹಾಗೂ ಸಿಬ್ಬಂದಿ ವರ್ಗದಲ್ಲಿ ಪಿಎಸ್‌ಐ ತೊಂದರೆಯುಂಟು ಮಾಡುತ್ತಿದ್ದಾರೆ. ಠಾಣೆಯಲ್ಲಿ ದಾಖಲಾಗುವ ಎಫ್‌ಐಆರ್, ದೂರುದಾರರಿಂದ 10,000 ರೂ.ಯಿಂದ 1 ಲಕ್ಷ ರೂ.ವರೆಗೆ ಸಿಬ್ಬಂದಿ ಹಣ ವಸೂಲಿ ಮಾಡಬೇಕು ಎಂದು ಒತ್ತಡ ಹೇರಿದ್ದಾರೆ ಎಂದು ದೂರಿದ್ದಾರೆ.

Chanakya Niti: ಜೀವನದಲ್ಲಿ ಯಶಸ್ಸು ಬೇಕಾಂದ್ರೆ ಈ 2 ವಿಷಯಗಳನ್ನ ಸೈನಿಕನಂತೆ ಕಾಪಾಡಿಕೊಳ್ಳಿ

ಯಶಸ್ಸಿಗೆ ಚಾಣಕ್ಯನ 2 ಸೂತ್ರಗಳು

ಚಾಣಕ್ಯನ ಪ್ರಕಾರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಆರೋಗ್ಯ ಮತ್ತು ಹಣ ಎಂಬ ಎರಡು ಅಂಶಗಳನ್ನು ಅತ್ಯಂತ ಜಾಗ್ರತೆಯಿಂದ ಕಾಪಾಡಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯದ ಜೊತೆಗೆ, ಹಣವನ್ನು ಜಾಣ್ಮೆಯಿಂದ ಬಳಸುವುದು ವ್ಯಕ್ತಿಯ ಸ್ಥಿರ ಮತ್ತು ಸಮೃದ್ಧ ಜೀವನಕ್ಕೆ ಮುಖ್ಯವಾಗಿದೆ.

Indi News: ಮಕ್ಕಳ ಸರಳ ಕಲಿಕೆಗೆ ದ್ವಿ ಭಾಷಾ ಮಾಧ್ಯಮ ಅಗತ್ಯ

ಮಕ್ಕಳ ಸರಳ ಕಲಿಕೆಗೆ ದ್ವಿ ಭಾಷಾ ಮಾಧ್ಯಮ ಅಗತ್ಯ

ಶನಿವಾರ ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವಿಜಯಪುರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇಂಡಿ ಇವರ ಸಹಯೋಗದಲ್ಲಿ ಜರುಗಿದ 1 ರಿಂದ 5ನೇ ವರ್ಗದ ಶಿಕ್ಷಕರ ದ್ವಿ ಭಾಷಾ ತರಬೇತಿಯ 2ನೇ ಹಂತದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

Indi News: ನಿರಂತರ ರಕ್ತದಾನದಿಂದ ಆರೋಗ್ಯ ಉತ್ತಮ

Indi News: ನಿರಂತರ ರಕ್ತದಾನದಿಂದ ಆರೋಗ್ಯ ಉತ್ತಮ

ತಾಲೂಕಿನ ಸಾಲೋಟಗಿ ಗ್ರಾಮದಲ್ಲಿ ಶ್ರೀ ಶಿವಯೋಗೀಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ 2014ರಲ್ಲಿ ಸಾಲೋಟಗಿಯ ಶಿವಯೋಗೀಶ್ವರ ಮಾಧ್ಯಮಿಕ ಶಾಲೆಯಲ್ಲಿ ಓದಿದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಗೆಳೆಯರ ಬಳಗ ಮತ್ತು ಶ್ರೀ ಶಿವಯೋಗೀಶ್ವರ ಜಾತ್ರಾ ಸಮಿತಿ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ನೇತ್ರ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಮಾತನಾಡಿ ದರು.

Drowned: ಭೂತನಾಳ ಕೆರೆಯಲ್ಲಿ ದುರಂತ: ಒಬ್ಬನನ್ನು ಬದುಕಿಸಲು ಹೋಗಿ ಮೂವರು ನೀರುಪಾಲು

ಭೂತನಾಳ ಕೆರೆಯಲ್ಲಿ ದುರಂತ: ಒಬ್ಬನನ್ನು ಬದುಕಿಸಲು ಹೋಗಿ ಮೂವರು ನೀರುಪಾಲು

ಕುಟುಂಬ ಸಮೇತ ಒಟ್ಟು 14 ಜನರು ವಿಜಯಪುರಕ್ಕೆ ಪ್ರವಾಸಕ್ಕಾಗಿ ಆಗಮಿಸಿ ಭೂತನಾಳ ಕೆರೆಯ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಬಾಲಕ ಮಹಮ್ಮದ್ ಹಯಾತ್ ನೀರಿಗೆ ಇಳಿದಾಗ ಆಕಸ್ಮಿಕವಾಗಿ ಮುಳುಗಿದ್ದಾನೆ. ಬಾಲಕನನ್ನು ರಕ್ಷಿಸಲು ಹೈದರ್ ಪಾಶಾ ಹಾಗೂ ಅಬ್ದುಲ್ ಖುದ್ದುಸ್ ನೀರಿಗೆ ಇಳಿದಾಗ ಮೂವರು ಮುಳುಗಿ ಅನಾಹುತ ಸಂಭವಿಸಿದೆ.

ಅಪಾಯಕ್ಕೆ ಆಹ್ವಾನ ಒಡ್ಡಿರುವ ರಾಜ ಕಾಲುವೆ

ಅಪಾಯಕ್ಕೆ ಆಹ್ವಾನ ಒಡ್ಡಿರುವ ರಾಜ ಕಾಲುವೆ

ವ್ಯಾಪಕ ಪ್ರಮಾಣದಲ್ಲಿ ಗಬ್ಬು ವಾಸನೆಯಿಂದಾಗಿ ನಿವಾಸಿಗಳು ಹೊರಗೆ ಬಾರಲು ಸಹ ಸಾಧ್ಯ ವಾಗದ ಪರಿಸ್ಥಿತಿ ಇದೆ. 1 ಕಿ.ಮೀ. ಉದ್ದಕ್ಕೂ ತ್ಯಾಜ್ಯಗಳಿಂದ ತುಂಬಿಕೊಂಡಿರುವ ಈ ರಾಜ ಕಾಲುವೆಯ ಗಬ್ಬು ವಾಸನೆಯ ನರಕ ಯಾತನೆಯೂ ನಿವಾಸಿಗಳನ್ನು ಹೈರಾಣಾಗಿಸಿದ್ದು, ಈ ರಾಜಕಾಲುವೆಗೆ ಸ್ಲ್ಯಾಬ್ ಇಲ್ಲದೇ ಕಸದ ತೊಟ್ಟಿಯೂ ಆಗಿದೆ.

ಏ.11ರಂದು ಸಿದ್ದಸಿರಿ ಸಹಕಾರಿ ಬ್ಯಾಂಕ್ ನಾದ ಹಾಗೂ ತಾಂಬಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭ: ಜಗದೀಶ ಕ್ಷತ್ರಿ

ಏ.11ರಂದು ತಾಂಬಾ ನೂತನ ಕಟ್ಟಡ ಉದ್ಘಾಟನಾ ಸಮಾರಂಭ

ರಾಜ್ಯಾದ್ಯಂತ 212 ಶಾಖೆಗಳಿವೆ. 20 ವರ್ಷದಲ್ಲಿ ಸಿದ್ದಸಿರಿ ಸಂಸ್ಥೆಯು ಹಲವಾರು ಅಂಗಸಂಸ್ಥೆಗಳನ್ನು ಹುಟ್ಟು ಹಾಕಿದೆ. ಸಿದ್ದಸಿರಿ ಕೋಲ್ಡ್ ಸ್ಟೋರೇಜ್ , ಸಿದ್ದಸಿರಿ ಪವರ್ ಏತನಾಲ್ ಘಟಕ ಚಿಂಚೋಳಿ, ಸಿದ್ದಸಿರಿ ಇಂಧನ ಕೇಂದ್ರ 3 ಕಡೆ, ಸಿದ್ದಸಿರಿ ಕೃಷಿ ಕೇಂದ್ರಗಳು ಒಟ್ಟು 5, ಸಿದ್ದಸಿರಿ ಸಂಸ್ಥೆಯ ಹಾಗೂ ಶ್ರೀಸಿದ್ದೇಶ್ವರ ಸಂಸ್ಥೆಯ ನಿರ್ದೇಶಕರು ಕೂಡಿಕೊಂಡು ಶ್ರೀಸಿದ್ದೇಶ್ವರ ಚಾರಿಟೇಬಲ್ ವತಿಯಿಂದ ವಿಜಯ ಪೂರದಲ್ಲಿ ಪರಮ ಪೂಜ್ಯ ಶ್ರೀಸಿದ್ದೇಶ್ವರ ಸ್ವಾಮಿಜಿಯವರ ಹೆಸರಿನಲ್ಲಿ 108 ಹಾಸಿಗೆಯ ಆಧುನಿಕ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ.

ಇಂಡಿಯಲ್ಲಿ ಮೆಗಾ ಮಾರುಕಟ್ಟೆಗೆ ಹಿಡಿದ ಗ್ರಹಣ

ಇಂಡಿಯಲ್ಲಿ ಮೆಗಾ ಮಾರುಕಟ್ಟೆಗೆ ಹಿಡಿದ ಗ್ರಹಣ

ಕಳೆದ 3 ವರ್ಷಗಳಿಂದ 4 ರಿಂದ 3 ಲಕ್ಷ ಡಿಫಾಜಿಟ್, 5 ನೂರು ರೂ ಚಲನ್, 50 ಸಾವಿರ ಡಿ.ಡಿ ತುಂಬಿದ ಬಡ ವ್ಯಾಪಾರಸ್ಥರು ಮಾರುಕಟ್ಟೆ ಪ್ರಾರಂಭವಾಗದೆ ಸುಖಾ ಸುಮ್ಮನೆ ಕಾಲ ಕಳೆಯು ತ್ತಿರುವುದರಿಂದ್ದ ವ್ಯಾಪಾರ ವೈವಾಟು ಮಾಡಲು ಮಳಿಗೆ ಕೊಡುತ್ತಿಲ್ಲ ಈ ಕಡೆ ನಾವು ಕೊಟ್ಟ ಡಿಫಾಜಿಟ್,ಡಿ.ಡಿ, ಚಲನ್ ಹಣ ಕೂಡಾ ಮರಳಿ ನೀಡುತ್ತಿಲ್ಲ ಎಂದು ವ್ಯಾಪಾರಸ್ಥರು ನಗರಸಭೆ ನಡೆಗೆ ಬೇಸತ್ತು ಹೋಗಿದ್ದಾರೆ.

Indi News: ಸತ್ಸಂಗದ ಸಂಸ್ಕಾರ ಮಠಗಳ ಕೊಡುಗೆ: ಮುರಗೇಂದ್ರ ಶ್ರೀಗಳು

Indi News: ಸತ್ಸಂಗದ ಸಂಸ್ಕಾರ ಮಠಗಳ ಕೊಡುಗೆ: ಮುರಗೇಂದ್ರ ಶ್ರೀಗಳು

ನಗರದ ಶಿರಶ್ಯಾಡದ ಅಭಿನವ ಮುರಗೇಂದ್ರ ಶ್ರೀಗಳ ಶಾಖಾ ಮಠದಲ್ಲಿ ಹುಣ್ಣಿಮೆ ಬೆಳದಿಂಗಳ ಕಾರ್ಯಕ್ರಮ 60 ವರ್ಷ ದಾಟಿದ ಹಿರಿಯರಿಗೆ ಆದರ್ಶ ದಂಪತಿಗಳಿಗೆ ಸನ್ಮಾ ನಿಸುವ ಕಾರ್ಯ ಕ್ರಮದಲ್ಲಿ ಮಾತನಾಡಿದರು. ಇತಿಹಾಸ ಸಾಂಸ್ಕೃತಿಕ ಧಾರ್ಮಿಕ ಭಜನೆ ಪುರಾಣ ಹಾಗೂ ಪ್ರವಚನ ಮಾಡುತ್ತಿರುವ ಮಠಗಳ ಕಾರ್ಯ ಶ್ಲಾಘನೀಯ ಎಂದರು.

ಶ್ರೀ ಗುರು ಶಂಕರಲಿಂಗೇಶ್ವರ ಮಹಾ ರಥೋತ್ಸವ: ರೈಲುಗಳ ತಾತ್ಕಾಲಿಕ ನಿಲುಗಡೆಗೆ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಸೂಚನೆ

ಶ್ರೀ ಗುರು ಶಂಕರಲಿಂಗೇಶ್ವರ ಮಹಾ ರಥೋತ್ಸವ: ರೈಲುಗಳ ನಿಲುಗಡೆಗೆ ಸೂಚನೆ

ತಾಲೂಕಿನ ಲಚ್ಯಾಣದಲ್ಲಿ ಜರುಗಲಿರುವ ಶ್ರೀ ಗುರು ಶಂಕರಲಿಂಗೇಶ್ವರ ಮಹಾ ರಥೋತ್ಸವ ನಿಮಿತ್ಯ ಇಲ್ಲಿನ ರೈಲು ನಿಲ್ದಾಣದ ಮೂಲಕ ನಿತ್ಯ ಸಂಚರಿಸುವ ಗೋಲಗುಂಬಜ್ ಮತ್ತು ಬಸವ ಎಕ್ಸ್‌ʼಪ್ರೆಸ್ ರೈಲುಗಳು ಏ.6 ರಿಂದ 12ರ ವರೆಗೆ ತಾತ್ಕಾಲಿಕವಾಗಿ ನಿಲುಗಡೆಗೆ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ(V.Somanna) ಸಂಬಂಧಿಸಿದ ರೈಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Indi News: ಹಸಿರು ಕ್ರಾಂತಿ ಮೂಲಕ ಆಹಾರ ಭದ್ರತೆಗೆ ಬುನಾದಿ ಹಾಕಿದ ಜಗಜೀವನರಾಮ

ಹಸಿರು ಕ್ರಾಂತಿ ಮೂಲಕ ಆಹಾರ ಭದ್ರತೆಗೆ ಬುನಾದಿ

ಜನಮಾನಸದಲ್ಲಿ ಬಾಬೂಜಿ ಎಂದೇ ಜನಪ್ರಿಯರಾಗಿರುವ ಬಾಬು ಜಗಜೀವನರಾಮ ಅವರು ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜಿಕ ನ್ಯಾಯದ ಹರಿಕಾರ. ದೇಶದ ಅತ್ಯುನತ ಸಂಸದೀಯ ಪಟುಗಳಲ್ಲಿ ಒಬ್ಬರಾಗಿದ್ದರು. ದಲಿತ ಮತ್ತು ಶೋಷಿತ ವರ್ಗಗಳ ಏಳಿಗೆಗಾಗಿ ತಮ್ಮ ಇಡಿ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದರು.

ಲವ್ ಬ್ರೇಕಪ್ ಆಗಿದ್ದಕ್ಕೆ ಬಸ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಆತ್ಮಹತ್ಯೆ; ಬೆಂಕಿ ಹೊತ್ತಿಕೊಂಡು ಸಜೀವ ದಹನ!

ಲವ್ ಬ್ರೇಕಪ್ ಆಗಿದ್ದಕ್ಕೆ ಬಸ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಆತ್ಮಹತ್ಯೆ

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕನ್ನೊಳ್ಳಿ ಟೋಲ್‌ಗೇಟ್ ಬಳಿ ಘಟನೆ ನಡೆದಿದೆ. ಸಾರಿಗೆ ಬಸ್‌ಗೆ ಯುವಕ ರಾಯಲ್ ಎನ್‌ಫೀಲ್ಡ್ ಬೈಕ್‌ ಸಮೇತ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಾದ ರಭಸಕ್ಕೆ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಬೈಕ್ ಸವಾರ ಸಜೀವ ದಹನವಾಗಿದ್ದಾನೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಬಸ್ಸಿನಿಂದ ಕೆಳಗಿಳಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Indi News: ಅಕ್ಷರ ಜಾತ್ರೆಗೆ ಇಂಡಿ ಸನ್ನದ್ಧ: ಏಪ್ರಿಲ್ 10ರಿಂದ ವಿಜಯಪುರದಲ್ಲಿ ಭವ್ಯ ಪುಸ್ತಕ ಮೇಳ

ಏಪ್ರಿಲ್ 10ರಿಂದ ವಿಜಯಪುರದಲ್ಲಿ ಭವ್ಯ ಪುಸ್ತಕ ಮೇಳ

ವಿಜಯಪುರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಏಪ್ರಿಲ್ 10 ರಿಂದ 14 ರವರೆಗೆ ಆಯೋಜಿಸಲಾಗಿರುವ 'ಬಸವ-ಬಾಬಾ ಸಾಹೇಬ್ ಅಂಬೇಡ್ಕರ್ ಪುಸ್ತಕ ಮೇಳ'ದ ಪೂರ್ವ ಭಾವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ್ ಅವರು ಮಾತನಾಡಿ, "ಇಂಡಿ ತಾಲೂಕಿನ ಪ್ರತಿಯೊಬ್ಬ ನಾಗರಿಕರು, ಯುವಕರು ಮತ್ತು ವಿದ್ಯಾರ್ಥಿಗಳು ಈ ಜ್ಞಾನದ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು

Self harming: ರಾಜ್ಯದಲ್ಲೊಂದು ಮನಕಲಕುವ ಘಟನೆ, ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿ ಆತ್ಮಹತ್ಯೆ

ಮನಕಲಕುವ ಘಟನೆ, ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿ ಆತ್ಮಹತ್ಯೆ

ಶನಿವಾರ ಸಂಜೆ ಗ್ರಾಮದ ಸಮೀಪವಿರುವ ಬಾವಿಯಲ್ಲಿ ಇಬ್ಬರು ಮಕ್ಕಳ ಶವಗಳು ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣವೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಇಂಡಿ ಗ್ರಾಮೀಣ ಪೊಲೀಸರು, ಪರಿಶೀಲನೆ ನಡೆಸಿದಾಗ ತಾಯಿ ಮತ್ತು ಮೂವರು ಮಕ್ಕಳ ಸಾವಿನ ಸುದ್ದಿ ದೃಢಪಟ್ಟಿದೆ.

ಕ್ಷಯರೋಗ ನಿಯಂತ್ರಿಸಬಹುದು, ಗುಣವಾಗಬಹುದು: ಡಾ|| ರಾಜೇಶ ಕೋಳೆಕರ

ಕ್ಷಯರೋಗ ನಿಯಂತ್ರಿಸಬಹುದು, ಗುಣವಾಗಬಹುದು

ಕ್ಷಯರೋಗ(Tuberculosis) ನಿಯಂತ್ರಿಸಬಹುದು ಮತ್ತು ಗುಣವಾಗಬಹುದಾದ ಕಾಯಿಲೆ. 6 ರಿಂದ 9 ತಿಂಗಳು ಔಷದ ತೆಗೆದುಕೊಂದರೆ ಸಂಪೂರ್ಣ ಗುಣವಾಗಬಹುದು ಎಂದು ತಾಲೂಕಾ ಆರೋಗ್ಯ ಅಧಿಕಾರಿ ಡಾ|| ರಾಜೇಶ ಕೋಳೆಕರ ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ(World Tuberculosis Day) ನಿಮಿತ್ತ ನಡೆದ ಸಭೆಯಲ್ಲಿ ಮಾತನಾಡಿದರು

MLA Yashwant Rayagouda Patil: ಹೆಣ್ಣು ಹುಟ್ಟಿದರೆ ಹುಣ್ಣಲ್ಲ, ಹೊನ್ನು ಹುಟ್ಟಿದಂತೆ: ಯಶವಂತರಾಯಗೌಡರು

ಹೆಣ್ಣು ಹುಟ್ಟಿದರೆ ಹುಣ್ಣಲ್ಲ, ಹೊನ್ನು ಹುಟ್ಟಿದಂತೆ: ಯಶವಂತರಾಯಗೌಡರು

ಭ್ರೂಣ ಹತ್ಯೆ ಬೇಡ, ಅದಕ್ಕಾಗಿ ಅವಕಾಶ ನೀಡಬಾರದು, ಬಸವಣ್ಣನವರ ಕಾಲದಿಂದಲೂ ಸಮಾಜದಲ್ಲಿ ಹೆಣ್ಣಿಗೆ ಸಮಾನತೆ ನೀಡಿದ್ದು ಇಂದಿನ ವರೆಗೂ ಅದು ಮುಂದು ವರೆದಿದೆ. ಹೆಣ್ಣು ತನ್ನ ತಂದೆಯ ಮನೆ ಬೆಳಗಿ ಗಂಡನ ಮನೆಯೂ ಬೆಳಗುತ್ತಿದ್ದಾಳೆ. ಹೀಗಾಗಿ ಹೆಣ್ಣು ಹೊನ್ನಾಗಿ ಪರಿವರ್ತನೆಯಾಗಿದ್ದಾರೆ

MLA Yashwant Rayagouda Patil: ಪ್ರಕೃತಿಯಲ್ಲಿ ದಿವ್ಯನಿಗೂಢ ಶಕ್ತಿ ನಡೆದು ಹೋಗುತ್ತವೆ: ಶಾಸಕ ಯಶವಂತರಾಯಗೌಡ ಪಾಟೀಲ.

ಪ್ರಕೃತಿಯಲ್ಲಿ ದಿವ್ಯನಿಗೂಢ ಶಕ್ತಿ ನಡೆದು ಹೋಗುತ್ತವೆ: ಶಾಸಕ ಪಾಟೀಲ

ಇಂದಿನ ದಿನಮಾನಗಳಲ್ಲಿ ಮನೆ ನಡೆಸುವುದೇ ಕಷ್ಟ. ಇಂತಹದರಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಶಿಕ್ಷಕರ ವೇತನ, ಸಿಬ್ಬಂದಿಗಳ ವೇತನ ಹಾಗೂ ಭವ್ಯ ಕಟ್ಟಡ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದು ಸರಕಾರಗಳಿಂದ ಅಸಾಧ್ಯದ ಮಾತು. ಆದರೆ, ಸರಕಾರ ಮಾಡದೆ ಇರುವ ಪವಿತ್ರ ಕಾರ್ಯ ಹಜರತ ನಾಸಿರಜಂಗ ಸಾಹೇಬ ದರ್ಗಾ ದಿಂದ ನಡೆಸಿಕೊಂಡು ಬಂದಿರುವುದು ಖುಷಿ ತಂದಿದೆ

Ramadan: ಸಂಭ್ರಮದ ರಂಜಾನ್‌ಗೆ ಮುಸ್ಲಿಮರಿಂದ ಭರ್ಜರಿ ಸಿದ್ದತೆ

ಸಂಭ್ರಮದ ರಂಜಾನ್‌ಗೆ ಮುಸ್ಲಿಮರಿಂದ ಭರ್ಜರಿ ಸಿದ್ದತೆ

ಹಗಲಿನಲ್ಲಿ ಸಾಕಷ್ಟು ಬಿಸಿಲಿರುವ ಕಾರಣ ಸಂಜೆ ಮಗರಿಬ್ ಪ್ರಾರ್ಥನೆ ಮುಗಿಸಿ ಉಪವಾಸ (ರೋಜಾ) ಅಂತ್ಯಗೊಳಿಸಿದ ನಂತರ ಮುಸ್ಲಿಂ ಬಾಂಧವರು ಕುಟುಂಬ ಸಮೇತ ಮಾರುಕಟ್ಟೆಗೆ ಆಗಮಿಸಿ, ಖರೀದಿಯಲ್ಲಿ ತೊಡಗುತ್ತಿದ್ದಾರೆ. ಗಾಂಧಿ ಚೌಕ್, ಕೆ.ಸಿ ಮಾರ್ಕೆಟ್ ಗಳಲ್ಲಿ ರಂಜಾನ್ ಶಾಪಿಂಗ್ಗಾಗಿ ಕೆಲ ಅಂಗಡಿಗಳು ತಲೆ ಎತ್ತಿವೆ.

MLA Yashwant Rayagouda Patil: ಶಾಸಕ ಯಶವಂತರಾಯಗೌಡ್ರೀಗೆ ಸಚಿವ ಸ್ಥಾನ ನೀಡಿ: ಧರ್ಮರಾಜ ಅವುಜಿ ಆಗ್ರಹ

ಶಾಸಕ ಯಶವಂತರಾಯಗೌಡ್ರೀಗೆ ಸಚಿವ ಸ್ಥಾನ ನೀಡಿ

ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹೈಕಮಾಂಡ ಪಕ್ಷದ ವರಿಷ್ಠರು ಸಾಕಷ್ಟು ಬಾರಿ ಭಾಷಣದಲ್ಲಿ ಶಾಸಕ ಪಾಟೀಲರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಹೇಳಿದ್ದೀರಿ ? ಸ್ವಾತಂತ್ರ್ಯ ಸಿಕ್ಕು 75 ವರ್ಷಗತಿಸಿದರೂ ಇಂಡಿ ಮತಕ್ಷೇತ್ರ ಸಚಿವ ಸ್ಥಾನ ಸಿಗದೆ ಇರುವುದು ದೌರ್ಭಾಗ್ಯ. ನಿಷ್ಕಲ್ಮಷ ರಾಜಕೀಯ ಸಂತನಿಗೆ ಸಚಿವ ಸ್ಥಾನ ನೀಡಿದರೆ ಮಾತ್ರ ಕಾಂಗ್ರೆಸ್ ಕೊಟ್ಟ ಮಾತು ಉಳಿಸಿದಂತಾಗುತ್ತದೆ

Loading...