ಸ್ವಾತಂತ್ರ ಹೋರಾಟಗಾರರ ಬದುಕು ನಮಗೆಲ್ಲ ಆದರ್ಶ
ಭಾರತ ದೇಶ ಆರ್ಥಿಕವಾಗಿ ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಭವ್ಯ ಭಾರತ ದೇಶ ವಿಶ್ವ ಭೂಪಟದಲ್ಲಿ, ಜಾಗತಿಕವಾಗಿ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಮೊದಲನೇ ಸ್ಥಾನ ದಲ್ಲಿ ಕಾಣಲು ಈ ಸ್ವಾತಂತ್ರ್ಯ ಎಂಬ ಸಾಧನ ಅತಿ ಮಹತ್ವದ್ದು ಎಂದರು. ಮಹಾತ್ಮಾ ಗಾಂಧೀಜಿಯವರ ನಾಯಕತ್ವದಲ್ಲಿ ಅಹಿಂಸಾತ್ಮಕ ಹೋರಾಟದ ಫಲವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ಜೊತೆಗೆ ಅನೇಕ ಹೋರಾಟಗಾರ ತ್ಯಾಗ, ಬಲಿದಾನವನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ಅತ್ಯವಶ್ಯಕವಾಗಿದೆ