ಇಂದಿನಿಂದ ಕುಂಟೋಜಿ ಬಸವಣ್ಣನ ಜಾತ್ರೆ
ನಾಡಿನ ಹರಗುರು ಚರಮೂರ್ತಿಗಳನ್ನು ಕರೆಸಿ ಅವರ ಅಮೃತ ಹಸ್ತದಿಂದ ಮೊಟ್ಟ ಮೊದಲ ತೇರೆಳೆದು ಸಂಭ್ರಮಿಸಿದರು. ತಮ್ಮ ಊರಿನಿಂದ ಸಾವಿರಾರು ಕಿ.ಮೀ.ಗಳ ದೂರ ಇದ್ದವರು ಕೂಡಾ ಕಳೆದ ವರ್ಷ ತಮ್ಮ ಆರಾಧ್ಯ ದೈವದ ಪ್ರಥಮ ತೇರೆಳೆದು ಕೃತಾರ್ಥ ರಾಗಿದ್ದರು. ಈಗ ಎರಡನೇ ವರ್ಷದ ತೇರೆಳೆಯುವ ಸಂಭ್ರಮದಲ್ಲಿದಾರೆ. ಇಂದು ಶ್ರಾವಣ ಮಾಸದ ಕಡೆಯ ಸೋಮವಾ ರದಂದು ಬಸವಣ್ಣನ ಜಾತ್ರೆ ಆರಂಭವಾಗಲಿದೆ. ಅದರ ನಿಮಿತ್ಯವಾಗಿ ಇಂದು ನಸುಕಿನಲ್ಲಿ ಮಹಾ ಪೂಜೆ ರುದ್ರಾಭಿಷೇಕ ನೆರವೇರಲಿದೆ.