ಗಂಗಾ ನದಿಗೆ ಮರಳಿದ ಕೆಂಪು ತಲೆಯ ಆಮೆಗಳು
ಉತ್ತರಪ್ರದೇಶ ಸರ್ಕಾರವು ಇದೇ ಮೊದಲ ಬಾರಿಗೆ ನಮಾಮಿ ಗಂಗೆ ಮತ್ತು ಭಾರತ ಆಮೆ ಸಂರಕ್ಷಣಾ ಕಾರ್ಯಕ್ರಮ (ಐಟಿಸಿಪಿ)ದ ಸಹಯೋಗದೊಂದಿಗೆ ಈ ಆಮೆ ಪ್ರಭೇದವನ್ನು ಮತ್ತೆ ಗಂಗಾ ನದಿಗೆ ಮರುಪರಿಚಯಿಸಿದೆ. ಇದನ್ನು ಸಂರಕ್ಷಿತ ಪ್ರದೇಶದೊಳಗೆ ಇರಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಎರಡರಿಂದ ಮೂರು ವರ್ಷದೊಳಗಿನ ತಲಾ ಹತ್ತು ಗಂಡು ಮತ್ತು ಹೆಣ್ಣು ಆಮೆಗಳನ್ನು ಎರಡು ಸುರಕ್ಷಿತ ಸ್ಥಳಗಳಲ್ಲಿ ಬಿಡಲಾಗಿದೆ.