ನುಂಗಲಾರದ ತುತ್ತಾಗುವುದೇ ದೋಸ್ತಿ ಪಕ್ಷ ?
ಅಂದಿನ ಅನಿವಾರ್ಯತೆ ಹಾಗೂ ಕೇಂದ್ರ ನಾಯಕರ ಒತ್ತಡಕ್ಕೆ ಮಣಿದು ಒಪ್ಪಿಕೊಂಡಿದ್ದ ಮೈತ್ರಿಯು ಸದ್ಯ ರಾಜ್ಯ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ. ದಕ್ಷಿಣ ಭಾರತ ದಲ್ಲಿ ಬಿಜೆಪಿ ನೆಚ್ಚಿಕೊಳ್ಳಬಹುದಾದ ಏಕೈಕ ರಾಜ್ಯ ಕರ್ನಾಟಕವಾಗಿದ್ದರೂ, ಈವರೆಗೆ ಸ್ವಂತ ಬಲದಲ್ಲಿ ಅಧಿಕಾರದ ಗದ್ದುಗೆ ಏರಿದ್ದಕ್ಕಿಂತ ಮೈತ್ರಿ, ಆಪರೇಷನ್ ಕಮಲದ ಮೂಲಕ ‘ಮ್ಯಾಜಿಕ್ ನಂಬರ್’ ದಾಟಿರುವುದು ವಾಸ್ತವ.