ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

ಶಿಶಿರ್‌ ಹೆಗಡೆ

columnist

info11@vishwavani.news

ಕರಾವಳಿಯ ಕುಮಟಾ ತಾಲ್ಲೂಕಿನ ಮೂರೂರಿನವರು. ಇವರದು ಯಕ್ಷಗಾನ ಕುಟುಂಬ. ಇವರ ಅಜ್ಜ ದೇವರು ಹೆಗಡೆಯವರು ಜನಪ್ರಿಯ ಯಕ್ಷಗಾನ ಕಲಾವಿದರು. ತಂದೆ ಕನ್ನಡದ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದವರು. ಕನ್ನಡ ಮತ್ತು ಕಲೆಯ ವಾತಾವರಣದ ಹಳ್ಳಿಯಲ್ಲಿ ಹುಟ್ಟಿ ಬೆಳೆದದ್ದು ಇವರ ಹೆಗ್ಗಳಿಕೆ. ಕುಮಟಾ ಮತ್ತು ಹುಬ್ಬಳ್ಳಿಯಲ್ಲಿ ವಿದ್ಯಾಭ್ಯಾಸ ನಡೆಯಿತು. ಓದಿದ್ದು ಇಂಜಿನಿಯರಿಂಗ್, ಶಾಸ್ತ್ರೀಯವಾಗಿ ಯಕ್ಷಗಾನವನ್ನು ಕಲಿತು ಕೆಲವು ಪ್ರದರ್ಶನಗಳಲ್ಲಿ ಭಾಗಿಯಾದವರು. ವೃತ್ತಿಯಲ್ಲಿ ಅಮೆರಿಕಾದ ಬಹುರಾಷ್ಟ್ರೀಯ ಕಂಪನಿಯಲ್ಲಿ ನಿರ್ದೇಶಕ. ದಶಕದಿಂದ ಅಮೆರಿಕಾದಲ್ಲಿ ವಾಸ. ಶಿಕಾಗೋದ ಬೋಲಿಂಗ್ ಬ್ರೂಕ್‌ನಲ್ಲಿ ಹೆಂಡತಿ ಮೇಘಾ ಮತ್ತು ಮಗಳು ಮೈನಾ ಜೊತೆ ಬದುಕು. ಇದಕ್ಕಿಂತ ಮೊದಲು ದಕ್ಷಿಣ ಅಮೆರಿಕಾದ ಉರುಗೈ, ಚಿಲಿ, ಅರ್ಜೆಂಟೀನಾ, ಬ್ರೆಜಿಲ್ ದೇಶಗಳಲ್ಲಿ ಕೆಲ ಕಾಲ ವಾಸ. ಹತ್ತಕ್ಕೂ ಹೆಚ್ಚು ದೇಶ ನೋಡಿದ, ತಿರುಗಾಡಿದ ಅನುಭವ. ಕಳೆದ ನಾಲ್ಕು ವರ್ಷದಿಂದ ವಿಶ್ವವಾಣಿಯಲ್ಲಿ ಅಂಕಣಕಾರರಾಗಿ ಸಕ್ರಿಯ. ಓದು, ಬರವಣಿಗೆ, ಫೋಟೋಗ್ರಾಫಿ, ಪ್ರವಾಸ, ಕ್ರಿಕೆಟ್, ವಾಲಿಬಾಲ್ ಹವ್ಯಾಸಗಳು.

Articles
Shishir Hegde Column: ಬದುಕಲು ಕಾರಣ ಬೇಕೆಂಬುದೇ ಬಂಡಲ್‌ ಬಡಾಯಿ !

Shishir Hegde Column: ಬದುಕಲು ಕಾರಣ ಬೇಕೆಂಬುದೇ ಬಂಡಲ್‌ ಬಡಾಯಿ !

ಮುಸ್ಸಂಜೆಯ ಬೆಳಕನ್ನು ಕತ್ತಲು ಮೀರಿತ್ತು. ಮುಲ್ಲಾ ನಸ್ರುದ್ದೀನ್ ಗಾಬರಿಯಲ್ಲಿದ್ದ. ಬೀದಿ ದೀಪದ ಕೆಳಗೆ ಏನನ್ನೋ ತರಾತುರಿಯಲ್ಲಿ ಹುಡುಕುತ್ತಿದ್ದ. “ದೆವ್ವ ಓಡಾಡುವ ಈ ಹೊತ್ತಿನಲ್ಲಿ ಮುಲ್ಲಾ ಏನು ಹುಡುಕುತ್ತಿದ್ದಾನೆ" ಎಂದು ಕೇಳುತ್ತಾ ಮೂರ್ನಾಲ್ಕು ಮಂದಿ ಬಂದರು. ತಾವೂ ಹುಡುಕುವು ದರಲ್ಲಿ ಜತೆಯಾದರು. ರಸ್ತೆಯ ಅಕ್ಕಪಕ್ಕ, ತೋಡಿನಲ್ಲಿ, ಮೋರಿಯಲ್ಲಿ ಎಡೆ ಒಂದು ಗಂಟೆ ಹರಸಾಹಸ ಪಟ್ಟರೂ, ಆತ ಹುಡುಕುತ್ತಿದ್ದ ಕೀಲಿ ಮಾತ್ರ ಎಲ್ಲಿಯೂ ಸಿಗಲಿಲ್ಲ. ಆಗ ಅವರಲ್ಲೊಬ್ಬ ಸುಮ್ಮನೆ ಮಾತಿಗೆ “ಮುಲ್ಲಾ, ನಾವು ಹುಡುಕಲು ಶುರುಮಾಡಿ ತುಂಬಾ ಹೊತ್ತಾಯಿತು.

Shishir Hegde Column: ಬದುಕಿನಂತೆ ಉದ್ದೇಶಕ್ಕೂ ಬದಲಾಗುವ ಸ್ವಾತಂತ್ರ್ಯವಿದೆ !

ಬದುಕಿನಂತೆ ಉದ್ದೇಶಕ್ಕೂ ಬದಲಾಗುವ ಸ್ವಾತಂತ್ರ್ಯವಿದೆ !

ಪ್ರತಿಯೊಂದರ, ಪ್ರತಿಯೊಬ್ಬರ ಆಳವೂ ಅಷ್ಟೇ ಇದೆ. ಯಾವುದನ್ನೇ ಎತ್ತಿಕೊಳ್ಳಿ, ಯಾರನ್ನೇ ಓದಿಕೊಳ್ಳಿ, ಎಲ್ಲವನ್ನೂ, ಎಲ್ಲರನ್ನೂ ಸ್ವಲ್ಪ ಸ್ವಲ್ಪ ಓದಿದರೂ ಸಾಕು. ಅದರಲ್ಲಿ ಕೆಲವು ನೇರಾನೇರ, ದ್ವಂದ್ವ ಸೃಷ್ಟಿಸದ ವಿಚಾರಗಳು- ಉದಾಹರಣೆಗೆ ‘ಅಷ್ಟಾವಕ್ರಗೀತೆ’. ಭಗವದ್ಗೀತೆ ಮೊದಲಾದವು ಹಾಗಲ್ಲ- ಅವುಗಳಲ್ಲಿ ವ್ಯಕ್ತಿಯ ಪ್ರಶ್ನೆಗೆ ಅನುಗುಣವಾಗಿ ಉತ್ತರಗಳು ರೂಪ ತಾಳುತ್ತವೆ.

Shishir Hegde Column: ಡಿಪ್ರೆಶನ್:‌ ಬದುಕಿ ಪ್ರಯೋಜನವೇನು ? ಎಂಬ ಯಕ್ಷಪ್ರಶ್ನೆ !

ಡಿಪ್ರೆಶನ್:‌ ಬದುಕಿ ಪ್ರಯೋಜನವೇನು ? ಎಂಬ ಯಕ್ಷಪ್ರಶ್ನೆ !

ನಮ್ಮ ಯೋಚನೆಗಳೇ ನಮ್ಮ ಸುಸ್ತಿಗೆ ಕಾರಣವಾಗುತ್ತಿವೆ, ಭಾರವೆನಿಸುತ್ತಿವೆ ಎನ್ನುವುದನ್ನು ತಿಳಿದು ಕೊಳ್ಳುವುದು ಕಷ್ಟದ ವಿಷಯವೇನಲ್ಲ. ನಮ್ಮ ವಿಚಾರಗಳನ್ನು, ಮನೋಹರಿವನ್ನು ಗಮನ ಕೊಟ್ಟು ನೋಡದಿದ್ದರೆ ಅವುಗಳಲ್ಲಿ ನಿಜವಾದ ಸಮಸ್ಯೆಗಳೆಷ್ಟು ಮತ್ತು ನಮ್ಮ ಕಲ್ಪನೆಯ ಸಮಸ್ಯೆಗಳೆಷ್ಟು ಎನ್ನುವ ಪ್ರತ್ಯೇಕತೆ ತಿಳಿಯುವುದಿಲ್ಲ.

Shishir Hegde Column: ಮರೆಯದಿರಿ, ಈ ತಳಮಳ ಬುದ್ಧಿವಂತರಿಗೆ ಮಾತ್ರ

Shishir Hegde Column: ಮರೆಯದಿರಿ, ಈ ತಳಮಳ ಬುದ್ಧಿವಂತರಿಗೆ ಮಾತ್ರ

ಯಾವುದೇ ಅಸಹಜ ಘಟನೆಯಾದಾಗ ಹೇಗಾಯ್ತು ಎಂಬುದು ಅಪಾಯ/ಹಾನಿಯನ್ನು ಗ್ರಹಿಸಲು. ಏಕಾಯ್ತು ಎನ್ನುವುದು ಸ್ವರಕ್ಷಣೆ ಮತ್ತು ಪರಿಹಾರಕ್ಕೆ. ನಮಗೆ ಆಗದಂತೆ ಎಚ್ಚರ ವಹಿಸಲು. ಯಾವುದೇ ಘಟನೆ ಅರ್ಥವೇ ಆಗದಾಗ? ಹಾನಿಯನ್ನು ಯಾವುದೋ ಒಂದಕ್ಕೆ ಆರೋಪಿಸಬೇಕು. ಇದು ಗುಣ. ಇಲ್ಲಿ ತಂದೆ-ತಾಯಿಗೋ, ಅವರ ಶಿಸ್ತಿಗೋ, ಓದಿನ ಒತ್ತಡಕ್ಕೋ, ಪ್ರೇಮ ಪ್ರಕರಣಕ್ಕೋ, ಆಫೀಸಿನ ಬಾಸ್ʼಗೋ- ಏನೋ ಒಂದಕ್ಕೆ. ಕಾರಣವನ್ನು ವ್ಯಕ್ತಿಗೆ ಆರೋಪಿಸುವುದು ಸಮಾಜಕ್ಕೆ ಸುಲಭದ ಮಾರ್ಗ.

Shishir Hegde Column: ಪೇಟೆಯ ಬದುಕಿಗೆ ಜೀನ್ಸ್‌ ಬದಲಿಸಿಕೊಂಡ ಶಿಕಾಗೋ ಗಿಡುಗ

ಪೇಟೆಯ ಬದುಕಿಗೆ ಜೀನ್ಸ್‌ ಬದಲಿಸಿಕೊಂಡ ಶಿಕಾಗೋ ಗಿಡುಗ

ನಾನು ಕಚೇರಿಯಲ್ಲಿ ಕುಳಿತುಕೊಳ್ಳುವ ಗಾಜಿನ ಗೋಡೆಯ ಹೊರಗೆ ಕಾಣಿಸುವಂತೆ ಎರಡು ಗಿಡುಗಗಳು ಸೇರಿ ಗೂಡು ಕಟ್ಟುತ್ತಿದ್ದವು. ಒಂದೆರಡು ದಿನ, ಆಗೀಗ, ಹೋಗಿ ಬರುವಾಗ ಅದರತ್ತ ಗಮನಹರಿಸುತ್ತಿದ್ದೆ ಒಳಗಿನಿಂದ. ದಿನಗಳು ಕಳೆಯುತ್ತಿದ್ದಂತೆ ನನಗೆ ಅವುಗಳ ಚಲನವಲನವನ್ನು ನೋಡುವುದೇ ಒಂದು ಚಟವಾಗಿಬಿಟ್ಟಿತು. ಒಂದು ದಿನ ನೋಡುತ್ತೇನೆ, ಗಿಡುಗ ಮೂರು ಮೊಟ್ಟೆ ಯಿಟ್ಟಿದೆ.

Shishir Hegde Column: ಬೆಳಗ್ಗೆ ಬೇಗ ಏಳಲು ಐದು ಕ್ಷಣದ ಉಪಾಯ...

ಬೆಳಗ್ಗೆ ಬೇಗ ಏಳಲು ಐದು ಕ್ಷಣದ ಉಪಾಯ...

ಯಶಸ್ವಿ ವ್ಯಕ್ತಿಗಳು ಬೆಳಗ್ಗೆ ಬೇಗನೆ ಏಳುತ್ತಾರೆ, ಏಕೆಂದರೆ ಅವರಲ್ಲಿ ಶಿಸ್ತಿದೆ, ಪ್ರೇರಣೆ ಇದೆ, ಅವರಿಗೆ ದೇವರ ಆಶೀರ್ವಾದ ಇದೆ, ಅವರಲ್ಲಿ ಇನ್ನೇನೋ ಮಣ್ಣು ಮಸಿ ಇದೆ- ಎಂದೆಲ್ಲ ನಾವು ನಂಬಿ ಕೊಂಡಿರು ತ್ತೇವೆ. ಅವರೆಲ್ಲರೂ 4-5 ಗಂಟೆಗೆ ಅಲಾರಾಂ ಆಗುತ್ತಿದ್ದಂತೆ, ಯಾರನ್ನೂ ಶಪಿಸುವುದಿಲ್ಲ, ಬೈದು ಕೊಳ್ಳುವುದಿಲ್ಲ. ಮುಗುಳ್ನಗುತ್ತ, ಜಗತ್ ಪ್ರೇರಣೆಯಿಂದ ಬೆಡ್‌ನಿಂದ- ಪಿಂಗ್‌ಪಾಂಗ್ ಬಾಲಿನಂತೆ ಛಂಗನೆ ಪುಟಿದೇಳುತ್ತಾರೆ- ಇವೆಲ್ಲ ಎಂದುಕೊಳ್ಳುತ್ತೇವೆ.

Shishir Hegde Column: ʼರೀಲ್ಸ್‌ʼ ನಾವಂದುಕೊಂಡಷ್ಟು ಪಾಪದ ಚಟವಲ್ಲ, ಹುಷಾರ್‌

ʼರೀಲ್ಸ್‌ʼ ನಾವಂದುಕೊಂಡಷ್ಟು ಪಾಪದ ಚಟವಲ್ಲ, ಹುಷಾರ್‌

ಕುಡಿದದ್ದು ಹೊಟ್ಟೆಯಿಂದ ರಕ್ತ ಸೇರಿ ಮಿದುಳನ್ನು ತಲುಪುತ್ತದೆ. ಮಿದುಳಿನಲ್ಲಿ ಇರೋದು ನ್ಯೂರಾನ್- ನರಕೋಶಗಳು. ಸರಾಸರಿ 86 ಸಾವಿರ ಕೋಟಿ ನರಕೋಶಗಳು. ಅವುಗಳು ಒಂದಕ್ಕಿನ್ನೊಂದು ಸಂವಹಿಸು ತ್ತಿದ್ದರೆ, ವ್ಯವಹರಿಸುತ್ತಿದ್ದರೆ ಮಾತ್ರ ನಮ್ಮ ಇಡೀ ದೈಹಿಕ ಮತ್ತು ಮಾನಸಿಕ ವ್ಯವಸ್ಥೆಗಳು ತಾಳ-ಮೇಳ ಹೊಂದಿ, ಸರಿಯಾಗಿ ಕೆಲಸ ಮಾಡಲು ಸಾಧ್ಯ.

Shishir Hegde Column: ರೆಸ್ಟೋರೆಂಟ್‌ʼಗಳಿಗೆ ಸ್ಟಾರ್‌ ಪಟ್ಟ ಕೊಡುವ ಟೈರ್‌ ಕಂಪೆನಿ

ರೆಸ್ಟೋರೆಂಟ್‌ʼಗಳಿಗೆ ಸ್ಟಾರ್‌ ಪಟ್ಟ ಕೊಡುವ ಟೈರ್‌ ಕಂಪೆನಿ

ನಾವು ರೆಸ್ಟೋರೆಂಟ್ ಮತ್ತು ಹೋಟೆಲ್ ಎಂಬೆರಡು ಇಂಗ್ಲಿಷ್ ಶಬ್ದವನ್ನು ಬೇಕಾಬಿಟ್ಟಿ ಬಳಸುತ್ತೇವೆ. ಇವೆರಡೂ ಬೇರೆ ಬೇರೆ. ರೆಸ್ಟೋರೆಂಟ್ ಎಂದರೆ ಹೋಟೆಲ್ ಅಲ್ಲ, ಹೋಟೆಲ್ ಎಂದರೆ ರೆಸ್ಟೋರೆಂಟ್ ಅಲ್ಲ. ರೆಸ್ಟೋರೆಂಟ್- ಆಹಾರ ಮತ್ತು ಪಾನೀಯ ಒದಗಿಸುವ ಜಾಗ, ಖಾನಾವಳಿ. ಹೋಟೆಲ್ ಎಂದರೆ ಅದು ಮುಖ್ಯವಾಗಿ ತಂಗುವ ಪೂರ್ಣ ವ್ಯವಸ್ಥೆ.

Shishir Hegde Column: ನಾವೇಕೆ ಭಯಾನಕ ಕ್ರೈಂ ಸ್ಟೋರಿಗಳನ್ನು ನೋಡಲು ಬಯಸುತ್ತೇವೆ ?

ನಾವೇಕೆ ಭಯಾನಕ ಕ್ರೈಂ ಸ್ಟೋರಿಗಳನ್ನು ನೋಡಲು ಬಯಸುತ್ತೇವೆ ?

ಇಂಥ ಅರ್ಥವಾಗದ ಬಯಕೆಗಳನ್ನು ಈಡೇರಿಸಿಕೊಳ್ಳುವುದನ್ನು ‘ಅದೇನೋ ಥ್ರಿಲ್’ ಎಂದು ಆಡುಮಾತಿನಲ್ಲಿ ಹೇಳುವುದಿದೆ. ‘ಥ್ರಿಲ್’ ಎಂದರೆ ಅತ್ಯುತ್ಸುಕತೆ. ಈ ಅತಿಯಾದ ಕುತೂಹಲವೇಕೆ? ಕಾರಣವಿದೆ. ನಮ್ಮೆಲ್ಲರಲ್ಲೂ ವಿಷಯ ಯಾವುದೇ ಇರಲಿ, ಅದರ ಪರಮಾವಧಿ ಸಾಧ್ಯತೆಯನ್ನು ತಿಳಿದುಕೊಳ್ಳುವ ಒಂದು ಅದಮ್ಯ ಕುತೂಹಲವಿರುತ್ತದೆ.

Shishir Hegde Column: ಉತ್ತರಿಸುವುದನ್ನು ನಿಲ್ಲಿಸುವವರೆಗೂ ಮನಸ್ಸಿನ ಪ್ರಶ್ನೆ ನಿಲ್ಲುವುದಿಲ್ಲ

ಉತ್ತರಿಸುವುದನ್ನು ನಿಲ್ಲಿಸುವವರೆಗೂ ಮನಸ್ಸಿನ ಪ್ರಶ್ನೆ ನಿಲ್ಲುವುದಿಲ್ಲ

ನಾವೆಲ್ಲರೂ ವಾಟ್ಸ್ ಆಪ್ ಬಳಸುತ್ತೇವೆ. ಅದರಲ್ಲಿ ನಾವು ಕಳುಹಿಸಿದ ಸಂದೇಶ ಹೊರ ಹೋದರೆ ಒಂದು ಟಿಕ್ ಮಾರ್ಕ್ (ಸರಿ ಗುರುತು). ಅವರಿಗೆ ತಲುಪಿದರೆ ಎರಡು ಟಿಕ್ ಮಾರ್ಕ್ ಮತ್ತು ಅದನ್ನು ಅವರು ಓದಿದರೆ ಆ ಎರಡು ಟಿಕ್ ಮಾರ್ಕ್ ನೀಲಿ ಬಣ್ಣಕ್ಕೆ ತಿರುಗುತ್ತವೆ ಅಲ್ಲವೇ? ನೀವೇನೋ ಒಂದು ಸಂದೇಶ ಕಳುಹಿಸಿರುತ್ತೀರಿ, ಅತ್ತ ಕಡೆ ಆ ವ್ಯಕ್ತಿ ಆ ಸಂದೇಶವನ್ನು ಓದಿದ್ದು ನೀಲಿ ಗುರುತಿ ನಿಂದ ತಿಳಿಯುತ್ತದೆ. ಆದರೆ ಓದಿಯೂ ಉತ್ತರಿಸದಿದ್ದರೆ? ಆ ಕ್ಷಣದಲ್ಲಿ ನಮ್ಮ ಯೋಚನೆಗಳು ಶುರುವಾಗುತ್ತವೆ

Shishir Hegde Column: ನಾವೇಕೆ ಎಲ್ಲದಕ್ಕೂ ಈ ಪರಿ ಹೆಸರಿಡುತ್ತೇವೆ ?

Shishir Hegde Column: ನಾವೇಕೆ ಎಲ್ಲದಕ್ಕೂ ಈ ಪರಿ ಹೆಸರಿಡುತ್ತೇವೆ ?

ಅಸಲಿಗೆ ‘ಹೆಸರು’ ಎಂದರೇನು? ಒಂದು ಅನನ್ಯ ಶಬ್ದ -ಧ್ವನಿ. ಬಾಯಿಂದ ಹೊರಡಿಸುವ ಒಂದು ಸದ್ದು sound. ಅದನ್ನು ಚಿಕ್ಕ ಮಗುವಿಗೆ ಕಿವಿಯಲ್ಲಿ ಹೇಳಿ ಕರೆಯುವುದು - ನಾಮ ಸಂಸ್ಕಾರ. ಅಲ್ಲಿಂದ ಮುಂದೆ ಆ ಮಗುವಿಗೆ ಅದನ್ನೇ ಕರೆದು ಕರೆದು ಕ್ರಮೇಣ ಆ ಸದ್ದೇ ನಾನು, ಅದು ನನ್ನ ಗಮನವನ್ನು ಸೆಳೆಯಲು, ಸಂಬೋಧಿಸಲು ಬಳಸುವ ಸದ್ದು ಎನ್ನುವುದು ಮಗುವಿಗೆ ಮನದ ಟ್ಟಾಗುತ್ತದೆ.

Shishir Hegde Column: ಈ ಪಾತರಗಿತ್ತಿ ಪಕ್ಕ, ನೀ ನೋಡಿದೇನ ಅಕ್ಕಾ ?

Shishir Hegde Column: ಈ ಪಾತರಗಿತ್ತಿ ಪಕ್ಕ, ನೀ ನೋಡಿದೇನ ಅಕ್ಕಾ ?

ದಕ್ಷಿಣದ ಅಂಟಾರ್ಕ್ಟಿಕಾದಲ್ಲಿ ಚಳಿಗಾಲ ಶುರುವಾದರೆ ಮತ್ತೆ ಉತ್ತರದ ಗ್ರೀನ್‌ಲ್ಯಾಂಡ್‌ಗೆ ಪ್ರಯಾಣ. ಅವು ಧ್ರುವದಿಂದ ಧ್ರುವಕ್ಕೆ ವಲಸೆ ಹೋಗುವುದು ಏಕೆ, ಧ್ರುವಗಳಿಂದ ಸಮಭಾಜಕ ವೃತ್ತದ ಕಡೆಗೆ/ವರೆಗೆ ಬಂದರಾಗದೇ? ಈ ರೀತಿ ವಲಸೆ ಹೋಗುವಾಗ ಅವು ಮಧ್ಯದಲ್ಲಿ ತಂಗು ತ್ತವೆ, ಅಲ್ಲಿಯೇ ಏಕೆ ಉಳಿದುಬಿಡುವುದಿಲ್ಲ ಎಂಬ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರ ಇಲ್ಲ

Shishir Hegde Column: ಬುಗರಿಬೈಲ್‌ ಬಸ್ಸು ಕಲಿಸಿದ ಶರಣಾಗತಿಯ ಪಾಠ

ಬುಗರಿಬೈಲ್‌ ಬಸ್ಸು ಕಲಿಸಿದ ಶರಣಾಗತಿಯ ಪಾಠ

ಕುಮಟೆಯಿಂದ ನಮ್ಮೂರಿನ ಮಾರ್ಗಮಧ್ಯೆ ಸಿಗುವ ಅಂಗಡಿಗಳೂ ಮನೆಯವರಂತೆ ಹಾಲ್ಟಿಂಗ್ ಗಾಡಿಗೆ ಕಾಯುತ್ತಿದ್ದವು. ಅದು ಅವರ ಗಿರಾಕಿಗಳ ಕೊನೆಯ ಸಾಧ್ಯತೆಯಾಗಿತ್ತು. ಹಾಗಾಗಿ ಬಸ್ಸು ಮುಂದೆ ಮುಂದೆ ಹೊರಟಂತೆ ಅಂಗಡಿಗಳು ಲೈಟ್ ಆರಿಸಿ ಮುಚ್ಚಿ ಕೊಳ್ಳುತ್ತಿದ್ದವು. ರಸ್ತೆಯ ಅಕ್ಕಪಕ್ಕದಲ್ಲಿರುವ ಮನೆಗಳು ‘ಹಾಲ್ಟಿಂಗ್ ಗಾಡಿ’ ಬಂದಾಯ್ತು ಎಂದು ಮಲಗಲು ಗಡಿಬಿಡಿ ಬೀಳುತ್ತಿದ್ದವು.

Shishir Hegde Column: ಚಿಕ್ಕಪುಟ್ಟ 'ರಿಪೇರಿ' ಕೊಡುವ ಖುಷಿ, ಕಲಿಸುವ ಪಾಠ

Shishir Hegde Column: ಚಿಕ್ಕಪುಟ್ಟ 'ರಿಪೇರಿ' ಕೊಡುವ ಖುಷಿ, ಕಲಿಸುವ ಪಾಠ

ಮಗಳು ಇನ್ನೊಂದು ಹೆಜ್ಜೆ ಮುಂದೆ ಹೋಗಿ- ‘ಈ ಡೈನಿಂಗ್ ಟೇಬಲ್ ನಾನು ಹುಟ್ಟಿದಾಗಿನಿಂದ ಇದೆ, ಇದನ್ನೇ ಬದಲಿಸಬೇಕು’ ಎಂದಳು. ಇದರ ಮೇಲೆ ಕೂತಾಗ ಮುರಿದುಬಿದ್ದು, ಯಾರಾದರೂ ಕೈಕಾಲು ನೋವು ಮಾಡಿಕೊಂಡರೆ ಯಾರು ಜವಾಬ್ದಾರಿ ಎಂಬ ಪ್ರಶ್ನೆ. ಕೊನೆಯಲ್ಲಿ ಹೊಂದುವ ಒಂದು ಕುರ್ಚಿ ಸಿಗುವುದಿಲ್ಲ, ಹಾಗಾಗಿ ಹೊಸತೊಂದು ಡೈನಿಂಗ್ ಸೆಟ್ ಅನ್ನೇ ಖರೀದಿಸಬೇಕೆಂದು ಮೀಟಿಂಗ್‌ನಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

Shishir Hegde Column: ಹಚ್ಚೆಯ ನೋವು, ಇಚ್ಛೆಯ ನೋವು ಕೂಡ ಆಗಿರಬಹುದು

ಹಚ್ಚೆಯ ನೋವು, ಇಚ್ಛೆಯ ನೋವು ಕೂಡ ಆಗಿರಬಹುದು

‘ಹಚ್ಚೆ ಸಮ್ಮೇಳನ’. ನಮ್ಮಲ್ಲಿ ಸಾಹಿತ್ಯೋತ್ಸವ ಮೊದಲಾದ ಕಾರ್ಯಕ್ರಮಗಳಾದಾಗ ಚಿಕ್ಕ ಬೂತ್ ಮಾದರಿಯಲ್ಲಿ ಹತ್ತಿಪ್ಪತ್ತು ಪುಸ್ತಕದ ಅಂಗಡಿಗಳು ತೆರೆದಿರುತ್ತಾರಲ್ಲ, ಅದೇ ರೀತಿಯಲ್ಲಿ ಹಚ್ಚೆಯ ಗುಡಾರ (ಬೂತ್) ಗಳು. ಏನಿಲ್ಲವೆಂದರೂ ಸುಮಾರು 300 ಗುಡಾರಗಳು; ಹಚ್ಚೆ ಹಾಕುವ ನುರಿತ ಕಲಾ ವಿದರು ಅಮೆರಿಕದ ಮೂಲೆಮೂಲೆಗಳಿಂದ ಅಲ್ಲಿಗೆ ಬಂದಿದ್ದರು.

Shishir Hegde Column: ಹಾಯಾದ ಬದುಕಿನ ಗುಟ್ಟು: ಕತ್ತೆ ಬಾಲ, ಕುದುರೆ ಜುಟ್ಟು..!

ಹಾಯಾದ ಬದುಕಿನ ಗುಟ್ಟು: ಕತ್ತೆ ಬಾಲ, ಕುದುರೆ ಜುಟ್ಟು..!

ಒಬ್ಬ ಒಳ್ಳೆಯ ತಂದೆ-ತಾಯಿಯ ಲಕ್ಷಣವೇನು? ಮಕ್ಕಳಿಗೆ ಮಾರ್ಗದರ್ಶಿಸುವುದು ಅಲ್ಲವೇ? “ಹೀಗೆ ಮಾಡು, ಹಾಗೆ ಮಾಡಬೇಡ, ಇದು ಮಾಡಿದರೆ ಹೀಗಾಗುತ್ತದೆ, ನೋಡು ನಾನು ಮೊದಲೇ ಹೇಳಿದ್ದೆ, ಹಿಂದೆಯೇ ಎಚ್ಚರಿಸಿದ್ದೆ, ನಿನಗೆ ಎಷ್ಟು ಹೇಳಿದರೂ ಅಷ್ಟೆ.. ಇತ್ಯಾದಿ. ಇದುವೇ ಮುಂದುವರಿದು ನೀನು ಅಲಸಿ, ಎಂಟಾಣೆ ಪ್ರಯೋಜನಕ್ಕೆ ಬರುವುದಿಲ್ಲ, ನೀನು ಹಾಗೆ ಹೇಳಿದ್ದು ಸರಿಯಲ್ಲ, ಹಾಗೆ ಮಾಡಿದ್ದು, ಮಾತನಾಡಿದ್ದು ಸರಿಯಲ್ಲ ಇತ್ಯಾದಿ.

Shishir Hegde Column: ಅಸಾಮಾನ್ಯ ಜಗತ್ತಿನ ಸಾಮಾನ್ಯ ಬದುಕು ಇತಿಹಾಸವಾಗುವುದಿಲ್ಲ

ಅಸಾಮಾನ್ಯ ಜಗತ್ತಿನ ಸಾಮಾನ್ಯ ಬದುಕು ಇತಿಹಾಸವಾಗುವುದಿಲ್ಲ

ರಾತ್ರಿಯಿಡೀ ಪ್ರಖರವಾಗಿದ್ದ ಬಸ್ಸಿನ ಬೆಳಕು ಕತ್ತಲೆ ಸರಿಯುತ್ತಿದ್ದಂತೆ ಸೋತು ದುರ್ಬಲವಾಗುತ್ತದೆ. ಈಗ ಬಸ್ಸಿಗೆ ಹೆಡ್‌ಲೈಟ್ ಹಂಗಿಲ್ಲ, ಆದರೂ ಬೇಕು. ಸ್ವಲ್ಪ ದೂರದಲ್ಲಿ ಪೇಪರಿನ ಹುಡುಗ ರಸ್ತೆಯ ಹೊಂಡ ಗಳನ್ನು ತಪ್ಪಿಸಿಕೊಂಡು ನಾಜೂಕಾಗಿ ಸೈಕಲ್ ಸವಾರಿ ಮಾಡುತ್ತಿದ್ದಾನೆ. ಅತ್ತಿಂದ ಬೈಕಿನಲ್ಲಿ ಹುಲ್ಲಿನ ರಾಶಿಯನ್ನು ಯಾರೋ ರೈತ ಅಷ್ಟು ಬೆಳಗ್ಗೆ ಎಲ್ಲಿಗೋ ಸಾಗಿಸುತ್ತಿದ್ದಾನೆ.

Shishir Hegde Column: ಮೌನ ಬಂಗಾರ, ಹೇಳಲಾರದ ಮಾತು ಮಣಭಾರ !

Shishir Hegde Column: ಮೌನ ಬಂಗಾರ, ಹೇಳಲಾರದ ಮಾತು ಮಣಭಾರ !

ನನಗೆ ಬರುತ್ತಿದ್ದ ಅಲ್ಪ ಸ್ವಲ್ಪ ಸ್ಪ್ಯಾನಿಷ್ ಭಾಷೆಯಲ್ಲಿಯೇ ವ್ಯವಹರಿಸಿದ್ದಾಯಿತು. ಸ್ನೇಹಿತನಿಗೆ ಬಂದದ್ದು ಬರೀ ಜ್ವರವಾಗಿರಲಿಲ್ಲ. ಅದು ಸಂಕೀರ್ಣ ದೈಹಿಕ ಸಮಸ್ಯೆಯಾಗಿತ್ತು. ಅದು ಎಷ್ಟು ಆಂತರಿಕ ಉಲ್ಬಣವಾಗಿತ್ತೆಂದರೆ ದೇಹದ ನಾಲ್ಕಾರು ಭಾಗಗಳು ಈಗಾಗಲೇ ಹಾನಿಗೊಳಗಾಗಿದ್ದವು. ಆತನ ದೇಹ ಸೋತು ಕೊನೆಯಲ್ಲಿ ಜ್ವರ ಬಂದಿತ್ತು. ಆ ನಂತರ ಅಲ್ಲಿಯೇ ಆಸ್ಪತ್ರೆಯಲ್ಲಿ ದಾಖಲಿಸಿ ದೆವು ಮತ್ತು ಶುಶ್ರೂಷೆ ಆರಂಭವಾಯಿತು.

Shishir Hegde Column: ಕೆಲವರಿಗೆ ಎನ್‌ಆರ್‌ಐಗಳೆಂದರೆ ಅಜೀರ್ಣವಾಗುವುದೇಕೆ ?!

ಕೆಲವರಿಗೆ ಎನ್‌ಆರ್‌ಐಗಳೆಂದರೆ ಅಜೀರ್ಣವಾಗುವುದೇಕೆ ?!

ಟ್ರಂಪ್ ಸಹಿ ಹಾಕಿದ್ದು ಲಾಗು ಆದರೆ ಹತ್ತು-ಹನ್ನೆರಡು ಲಕ್ಷ ಭಾರತೀಯರು- ಎಂಜಿನಿಯರುಗಳು, ವೈದ್ಯರು, ವಿಜ್ಞಾನಿಗಳನ್ನು ದಿನಒಪ್ಪತ್ತಿನಲ್ಲಿ ಅಮೆರಿಕದ ಕಂಪನಿಗಳು ಕಳೆದುಕೊಳ್ಳುತ್ತಿದ್ದವು. ಅವರೆಲ್ಲರನ್ನು ಅಮೆರಿಕದ ಕಂಪನಿಗಳು ಬೀಳ್ಕೊಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಪರಿಣಾಮ ಅಮೆರಿಕದ ಮತ್ತು ಭಾರತದ ಆರ್ಥಿಕತೆಗೆ ನೇರ ಹೊಡೆತ ಬೀಳುತ್ತಿತ್ತು. ಏಕೆಂದರೆ ಅಷ್ಟೊಂದು ದೊಡ್ಡ ಮೊತ್ತದ ವ್ಯವಹಾರ ಇದು.

Shishir Hegde Column: ಅಭಿಪ್ರಾಯ ಬಯಸುವ ನಮಗೆ ಟೀಕೆ ಏಕೆ ಸಹ್ಯವಾಗುವುದಿಲ್ಲ ?

ಅಭಿಪ್ರಾಯ ಬಯಸುವ ನಮಗೆ ಟೀಕೆ ಏಕೆ ಸಹ್ಯವಾಗುವುದಿಲ್ಲ ?

ಕಾರ್ಪೊರೇಟ್ ವೃತ್ತಿಯಲ್ಲಿ ಮ್ಯಾನೇಜರ್ ತನ್ನ ಕೆಳಗಿನವರಿಗೆ, ಕೆಳಗಿನವರು ಮ್ಯಾನೇಜರ್‌ಗೆ ಫೀಡ್‌ ಬ್ಯಾಕ್ ಕೇಳುವುದು-ಕೊಡುವುದು ವಾರ್ಷಿಕ ಪರಿಪಾಠ. ಈ ‘ಅಭಿಪ್ರಾಯ’ದ್ದೊಂದು ಪೀಕಲಾಟವಿದೆ. ಅಭಿಪ್ರಾಯವನ್ನು ಎಲ್ಲರೂ ಕೇಳುತ್ತಾರೆ, ಅಭಿಪ್ರಾಯವೇನೆಂಬ ಪ್ರಶ್ನೆಯನ್ನು ಎಲ್ಲರೂ ಎದುರಿಸುತ್ತಾರೆ. ಆದರೆ ಬಹುತೇಕರು ನಿಜವಾದ ಅಭಿಪ್ರಾಯ ಬಯಸಿರುವುದಿಲ್ಲ.

Shishir Hegde Column: ಏನಿದು ಡೊನಾಲ್ಡ್ ಟ್ರಂಪಣ್ಣನ ನೌಟ್ರಂಪ್‌ ಆಟ ?‌

ಏನಿದು ಡೊನಾಲ್ಡ್ ಟ್ರಂಪಣ್ಣನ ನೌಟ್ರಂಪ್‌ ಆಟ ?

ಮೊದಲ ಅವಧಿಯ ಟ್ರಂಪ್‌ಗೂ, ಸೋತು ನಾಲ್ಕು ವರ್ಷದ ನಂತರ ಎರಡನೇ ಅವಧಿಗೆ ಗದ್ದುಗೆ ಯೇರಿದ ಟ್ರಂಪ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಟ್ರಂಪ್ ಅಧಿಕಾರ ಕಳೆದಾದ ನಾಲ್ಕು ವರ್ಷದಲ್ಲಿ ಸಾಕಷ್ಟು ಹೋಂ ವರ್ಕ್ ಮಾಡಿರುವುದಂತೂ ಸ್ಪಷ್ಟ. ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷ ರಾದಾಗ ಟ್ರಂಪ್‌ಗೆ ರಾಜಕಾರಣ ಸಂಪೂರ್ಣ ಹೊಸತು. ಅಲ್ಲಿಯವರೆಗೆ ‘ಪಂಚಾಯ್ತಿ’ ಚುನಾವಣೆ ಯನ್ನೂ ಎದುರಿಸದ ಟ್ರಂಪ್ ದೇಶದ ಅಧ್ಯಕ್ಷರಾಗಿ ಕೂತಿದ್ದರು. ಎಲ್ಲವೂ ಬೆರಗು.

Shishir Hegde Column: ಏಕಾಂತ ಸೆರೆವಾಸವೆಂಬ ಭೂಮಿಯ ಮೇಲಿನ ನರಕ

ಏಕಾಂತ ಸೆರೆವಾಸವೆಂಬ ಭೂಮಿಯ ಮೇಲಿನ ನರಕ

ಅಮೆರಿಕದಲ್ಲಿ ಜೈಲಿನಲ್ಲಿ ಸರಿಯಾಗಿ ವ್ಯವಹರಿಸದಿದ್ದರೆ, ಇನ್ನೊಬ್ಬ ಖೈದಿಗೆ/ಜೈಲಿನ ಅಧಿಕಾರಿಗಳಿಗೆ ಹಾನಿ ಮಾಡಿದರೆ ಸುಮಾರು ಮೂರು ತಿಂಗಳವರೆಗಿನ ಏಕಾಂತವಾಸದ ಶಿಕ್ಷೆಯಿದೆ. ಅದು ಬಿಟ್ಟು ಇಲ್ಲಿ ದೀರ್ಘಾವಧಿ ಏಕಾಂತ ಜೈಲುಶಿಕ್ಷೆಯೂ ಇದೆ. ಏಕಾಂತ ವೆಂದರೆ ಸಂಪೂರ್ಣ ಏಕಾಂತ. ದಿನದಲ್ಲಿ ಒಂದೇ ತಾಸು ಆ ಜೈಲುಕೋಣೆಯಿಂದ ಹೊರಬರಲು ಅವಕಾಶ.

Shishir Hegde Column: ಎಲ್ನೋಡಿ ಅಲ್ಲಿ ಕಾರು, ಆದರೆ ಬಿಡುವಂತಿಲ್ಲ ಜೋರು

ಎಲ್ನೋಡಿ ಅಲ್ಲಿ ಕಾರು, ಆದರೆ ಬಿಡುವಂತಿಲ್ಲ ಜೋರು

ಆಂಬುಲೆನ್ಸ್‌ ಗೆ ದಾರಿ ಹೇಗೆ ಕೊಡಬೇಕು ಎಂಬುದನ್ನು ಅಮೆರಿಕವನ್ನು ನೋಡಿ ಕಲಿಯಬೇಕು ಎಂಬುದು ಸುಳ್ಳಲ್ಲ. ಸಾಮಾನ್ಯವಾಗಿ ಹೆಚ್ಚಿನ ರಸ್ತೆಯ ಒಂದು ಲೇನ್ ಅನ್ನು ಎಮರ್ಜೆನ್ಸಿ ಕಾರಣಕ್ಕೆಂದೇ ಬಿಟ್ಟಿಡ ಲಾಗುತ್ತದೆ. ಅದರಲ್ಲಿ ಪೊಲೀಸರು ಅಥವಾ ಆಂಬುಲೆನ್ಸ್ ಮೊದಲಾದವು ಗಳು ಹೋಗಲಿಕ್ಕಷ್ಟೇ ಅನುಮತಿ. ಆ ಲೇನ್ ಅನ್ನು ಜನಸಾಮಾನ್ಯರು ಬಳಸಿದರೆ ಅದು ಅಪರಾಧ. ಅದಿಲ್ಲದ ಜಾಗದಲ್ಲಿಯೂ ಯಾವುದೇ ಆಂಬುಲೆನ್ಸ್ ಅಥವಾ ಪೊಲೀಸರು ಬ್ಲಿಂಕರ್ ಹಾಕಿ ಬಂದರೆ ಸಾವಿರಾರು ಕಾರುಗಳು ದಾರಿಮಾಡಿಕೊಡಬೇಕು. ‌

Shishir Hegde Column: ಇಲ್ಲಿ ನ್ಯಾಯಾಧೀಶರಾಗಬೇಕೆಂದರೆ ಚುನಾವಣೆಯಲ್ಲಿ ಗೆಲ್ಲಬೇಕು ?

ಇಲ್ಲಿ ನ್ಯಾಯಾಧೀಶರಾಗಬೇಕೆಂದರೆ ಚುನಾವಣೆಯಲ್ಲಿ ಗೆಲ್ಲಬೇಕು ?

ಬಹುತೇಕ ಕಟ್ಟುಕಥೆಗಳು. ಬಹುಶಃ ಇಂಥ ಕೆಲವು ಕಲ್ಪಿತ ಕಥೆಗಳನ್ನು ರಾಜಾಶ್ರಯದಲ್ಲಿಯೇ ಇತಿಹಾಸ ವೆಂಬಂತೆ ಸುಳ್ಳುಸುಳ್ಳೇ ಕಟ್ಟಿರಲೂಬಹುದು. ಉದಾಹರಣೆಗೆ ಅಕ್ಬರನ ಬಗ್ಗೆ ಇರುವ ಅದೆಷ್ಟೋ ನ್ಯಾಯ ಪರ ಕಥೆಗಳು. ಚಿತ್ತೋರ್‌ಗಢದ ರಜಪೂತರನ್ನು ಗೆದ್ದ ನಂತರ ಹೆಂಗಸರು, ಮಕ್ಕಳು ಎನ್ನುವುದನ್ನು ನೋಡದೆ- ಕೋಟೆಯೊಳಗಿದ್ದ ಸುಮಾರು ಐವತ್ತು ಸಾವಿರ ಮುಗ್ಧ ಹಿಂದೂಗಳನ್ನು ಕೊಂದ ಇತಿಹಾಸ ವಿರುವ ಅಕ್ಬರ್ ಇಂಥ ಚಿಲ್ಲರೆ ಕಥೆಗಳಲ್ಲಿ ನ್ಯಾಯದೇವತೆಯ ರೂಪ ಪಡೆದು ಬಿಡುತ್ತಾನೆ.

Loading...