Shishir Hegde Column: ಬದುಕಲು ಕಾರಣ ಬೇಕೆಂಬುದೇ ಬಂಡಲ್ ಬಡಾಯಿ !
ಮುಸ್ಸಂಜೆಯ ಬೆಳಕನ್ನು ಕತ್ತಲು ಮೀರಿತ್ತು. ಮುಲ್ಲಾ ನಸ್ರುದ್ದೀನ್ ಗಾಬರಿಯಲ್ಲಿದ್ದ. ಬೀದಿ ದೀಪದ ಕೆಳಗೆ ಏನನ್ನೋ ತರಾತುರಿಯಲ್ಲಿ ಹುಡುಕುತ್ತಿದ್ದ. “ದೆವ್ವ ಓಡಾಡುವ ಈ ಹೊತ್ತಿನಲ್ಲಿ ಮುಲ್ಲಾ ಏನು ಹುಡುಕುತ್ತಿದ್ದಾನೆ" ಎಂದು ಕೇಳುತ್ತಾ ಮೂರ್ನಾಲ್ಕು ಮಂದಿ ಬಂದರು. ತಾವೂ ಹುಡುಕುವು ದರಲ್ಲಿ ಜತೆಯಾದರು. ರಸ್ತೆಯ ಅಕ್ಕಪಕ್ಕ, ತೋಡಿನಲ್ಲಿ, ಮೋರಿಯಲ್ಲಿ ಎಡೆ ಒಂದು ಗಂಟೆ ಹರಸಾಹಸ ಪಟ್ಟರೂ, ಆತ ಹುಡುಕುತ್ತಿದ್ದ ಕೀಲಿ ಮಾತ್ರ ಎಲ್ಲಿಯೂ ಸಿಗಲಿಲ್ಲ. ಆಗ ಅವರಲ್ಲೊಬ್ಬ ಸುಮ್ಮನೆ ಮಾತಿಗೆ “ಮುಲ್ಲಾ, ನಾವು ಹುಡುಕಲು ಶುರುಮಾಡಿ ತುಂಬಾ ಹೊತ್ತಾಯಿತು.