ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Deekshith Nair

deekshithnair60@gmail.com

Articles
Cancer Vaccine:  ಇನ್ನು ಆರು ತಿಂಗಳಲ್ಲಿ ಮಹಿಳೆಯರಿಗೆ ಕ್ಯಾನ್ಸರ್‌ ವ್ಯಾಕ್ಸಿನ್‌ ಲಭ್ಯ: ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಸಚಿವರು ಹೇಳಿದ್ದೇನು?

ಮಹಿಳೆಯರ ಕ್ಯಾನ್ಸರ್‌ಗೆ ಲಸಿಕೆ ಸಿದ್ಧ:ಇನ್ನು ಆರು ತಿಂಗಳಲ್ಲಿ ಲಭ್ಯ!

ಮಹಿಳೆಯರನ್ನು ಬಾಧಿಸುತ್ತಿರುವ ಕ್ಯಾನ್ಸರ್‌ಗೆ ಲಸಿಕೆ ಸಿದ್ಧವಾಗಿದ್ದು, ಐದರಿಂದ ಆರು ತಿಂಗಳಲ್ಲಿ ಅದು ಲಭ್ಯವಾಗಲಿದೆ. 9 ರಿಂದ 16 ವರ್ಷ ವಯಸ್ಸಿನವರು ಲಸಿಕೆಗೆ ಅರ್ಹರಾಗಿರುತ್ತಾರೆ ಎಂದು ಕೇಂದ್ರ ಸಚಿವ ಪ್ರತಾಪ್‌ರಾವ್ ಜಾಧವ್ ಮಂಗಳವಾರ(ಫೆ.18) ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲಸಿಕೆ ಕುರಿತಾದ ಸಂಶೋಧನೆ ಬಹುತೇಕ ಪೂರ್ಣಗೊಂಡಿದೆ. ಮತ್ತಷ್ಟು ಪ್ರಯೋಗಗಳು ಕೂಡ ನಡೆಯುತ್ತಿವೆ ಎಂದು ಹೇಳಿದರು.

Vladimir Putin: ಉಕ್ರೇನ್‌ ಯುದ್ಧದ ಬಗ್ಗೆ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ಪುಟಿನ್‌ ಸಿದ್ದ- ರಷ್ಯಾದಿಂದ ಮಹತ್ವದ ಘೋಷಣೆ

ಉಕ್ರೇನ್‌ ಅಧ್ಯಕ್ಷರ ಜೊತೆ ಮಾತುಕತೆಗೆ ಪುಟಿನ್‌ ಸಿದ್ಧ!

ಉಕ್ರೇನ್ ಯುದ್ಧದ ವಿಷಯದ ಬಗ್ಗೆ ಸೌದಿ ಅರೇಬಿಯಾದಲ್ಲಿ ಅಮೆರಿಕ-ರಷ್ಯಾ ನಿಯೋಗದ ಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ವ್ಲಾಡಿಮಿರ್ ಪುಟಿನ್ ಸಿದ್ಧ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ಇನ್ನು ಅಗತ್ಯವಿದ್ದರೆ ಝೆಲೆನ್ಸ್ಕಿ ಜೊತೆ ಮಾತುಕತೆ ನಡೆಸಲು ಸಿದ್ಧನಿದ್ದೇನೆ ಎಂದು ಸ್ವತಃ ಪುಟಿನ್‌ ಕೂಡ ಹೇಳಿದ್ದಾರೆ.

Ramzan Row: ರಂಜಾನ್‌ ತಿಂಗಳಲ್ಲಿ ಮುಸ್ಲಿಂ  ಉದ್ಯೋಗಿಗಳಿಗೆ ಕಾರ್ಯಾವಧಿಯಲ್ಲಿ ವಿನಾಯಿತಿ; ಭುಗಿಲೆದ್ದ ವಿವಾದ

ರಂಜಾನ್‌ ತಿಂಗಳಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಕೆಲಸದಲ್ಲಿ ವಿನಾಯಿತಿ

ರಂಜಾನ್ ಉಪವಾಸದ ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳು ಕಚೇರಿಗಳಿಂದ‌ ಮನೆಗೆ ಬೇಗನೆ ತೆರಳಲು ತೆಲಂಗಾಣ ಸರ್ಕಾರ ಸೋಮವಾರ(ಫೆ.17) ಅನುಮತಿ ನೀಡಿದೆ.ಮಾರ್ಚ್ 1 ಅಥವಾ ಮಾರ್ಚ್ 2 ರಂದು ಪವಿತ್ರ ರಂಜಾನ್ ತಿಂಗಳು ಪ್ರಾರಂಭವಾಗಲಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಆದೇಶವನ್ನು ಬಿಜೆಪಿಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ವಿವಾದವೂ ಭುಗಿಲೆದ್ದಿದೆ.

Viral News: ಬೆಚ್ಚಿ ಬೀಳಿಸೋ ಘಟನೆ! ಗರ್ಭಿಣಿಯರಿಗೆ ಚಿಕಿತ್ಸೆ ನೀಡುವ ದೃಶ್ಯಗಳು ಸೋರಿಕೆ

ಶಾಕಿಂಗ್‌! ಗರ್ಭಿಣಿಯರಿಗೆ ಚಿಕಿತ್ಸೆ ನೀಡುವ ದೃಶ್ಯಗಳು ಸೋರಿಕೆ

ಗುಜರಾತಿನ ಹೆರಿಗೆ ಆಸ್ಪತ್ರೆಯೊಂದರಲ್ಲಿ ಸಿಸಿಟಿವಿಯಲ್ಲಿ ಸೆರೆಯಾದ ಗರ್ಭಿಣಿಯರ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯ ದೃಶ್ಯಗಳು ಸೋರಿಕೆಯಾಗಿ ಟೆಲಿಗ್ರಾಮ್, ಯುಟ್ಯೂಬ್‌ಗಳಲ್ಲಿ ಹರಿದಾಡಿದ್ದು, ಸಾಕಷ್ಟು ವೈರಲ್‌ ಆಗಿದೆ. ಸಿಸಿಟಿವಿ ಸರ್ವ‌ರ್ ಹ್ಯಾಕ್ ಆಗಿದೆ. ನಾವು ಪೊಲೀಸರಿಗೆ ದೂರು ನೀಡುತ್ತೇವೆ ಮತ್ತು ತನಿಖೆಗೆ ಸಹಕರಿಸುತ್ತೇವೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಅಮಿತ್ ಅಕ್ಟರಿ ಹೇಳಿದ್ದಾರೆ.

Viral News: 'ಛಾವಾ' ಸಿನಿಮಾ ನೋಡಲು ಸಂಭಾಜಿ ವೇಷದಲ್ಲಿ ಕುದುರೆ ಏರಿ ಬಂದ ಅಭಿಮಾನಿ: ವಿಡಿಯೊ ಇಲ್ಲಿದೆ

ʼಛಾವಾʼ ಸಿನಿಮಾ ನೋಡಲು ಕುದುರೆ ಏರಿ ಬಂದ ಅಭಿಮಾನಿ

ಬಹು ನಿರೀಕ್ಷಿತ ಸಿನಿಮಾ 'ಛಾವಾ' ವಿಶ್ವದಾದ್ಯಂತ ರಿಲೀಸ್ ಆಗಿ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ಛತ್ರಪತಿ ಸಂಭಾಜಿ ಮಹಾರಾಜ್ ಚರಿತ್ರೆಯನ್ನು ಈ ಸಿನಿಮಾ ಮೂಲಕ ಹೇಳಲಾಗಿದ್ದು, ಪ್ರೇಕ್ಷಕರು ಭಾವುಕರಾಗಿದ್ದಾರೆ. ಈ ಮಧ್ಯೆ ವಿಕಿ ಕೌಶಲ್‌ ಅಭಿಮಾನಿಯೊಬ್ಬ ʼಛಾವಾʼ ಸಿನಿಮಾ ನೋಡಲು ಸಂಭಾಜಿ ಮಹಾರಾಜರ ವೇಷ ಧರಿಸಿ ಕುದುರೆ ಮೇಲೆ ಚಿತ್ರಮಂದಿರದೊಳಗೆ ಬಂದಿದ್ದಾನೆ. ಇದೀಗ ಆ ಸುದ್ದಿ ಸಾಕಷ್ಟು ವೈರಲ್‌ ಆಗಿದೆ.

Mahakumbh 2025: ಕುಂಭಮೇಳದಿಂದ ಭಕ್ತರ ಸಂಖ್ಯೆ ಏರಿಕೆ- ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನಕ್ಕೆ 6 ವಲಯಗಳು

ಅಯೋಧ್ಯೆಯ ರಾಮಲಲ್ಲಾನ ದರ್ಶನಕ್ಕೆ ಆರು ವಲಯಗಳು!

ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳದಲ್ಲಿ ಪುಣ್ಯಸ್ನಾನ ಮುಗಿಸಿದ ಬಳಿಕ ಭಕ್ತರು ನೇರವಾಗಿ ಅಯೋಧ್ಯೆಗೆ ಬರುತ್ತಿದ್ದಾರೆ. ಅಲ್ಲಿ ಶ್ರೀರಾಮ ಮತ್ತು ಹನುಮಂತನ ದರ್ಶನ ಪಡೆಯುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಅಯೋಧ್ಯೆಯಲ್ಲಿ ಭಕ್ತರ ಸಂಖ್ಯೆ ಏರಿದ್ದು, ದರ್ಶನಕ್ಕಾಗಿ ಆರು ಜೋನ್‌ಗಳಾಗಿ ವಿಂಗಡಿಸಲಾಗಿದೆ. ಹೆಚ್ಚು ಭಕ್ತರು ಬರುತ್ತಿರುವುದರಿಂದ ಜನಸಂದಣಿಯನ್ನು ನಿಯಂತ್ರಿಸಲು ಅಯೋಧ್ಯೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

Supreme Court: ಯೂಟ್ಯೂಬರ್‌ ಅಲ್ಹಾಬಾದಿಯಾ ಕೇಸ್‌ ಬೆನ್ನಲ್ಲೇ ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ಯೂಟ್ಯೂಬ್‌ನಲ್ಲಿ ಅಶ್ಲೀಲ ಕಂಟೆಂಟ್ಸ್‌- ಕೇಂದ್ರಕ್ಕೆ ಸುಪ್ರೀಂ ನೊಟೀಸ್‌!

ಇಂಡಿಯಾಸ್‌ ಗಾಟ್ ಲ್ಯಾಟೆಂಟ್' ಕಾರ್ಯಕ್ರಮದಲ್ಲಿ ಅಶ್ಲೀಲ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಯೂಟ್ಯೂಬರ್ ರಣವೀ‌ರ್ ಅಲ್ಹಾಬಾದಿಯಾ ಅವರಿಗೆ ಮಂಗಳವಾರ(ಫೆ.18) ಮಧ್ಯಂತರ ಜಾಮೀನು ಮಂಜೂರು ಮಾಡಿದ ಸುಪ್ರೀಂಕೋರ್ಟ್ ಅವರ ಹೇಳಿಕೆಗಳನ್ನು ಟೀಕಿಸಿದೆ. ಅವರ ಮನಸ್ಸಿನಲ್ಲಿ ಕೊಳಕು ತುಂಬಿದೆ ಎಂದು ಜಾಡಿಸಿದೆ. ಈ ಮಧ್ಯೆ ಸುಪ್ರೀಂ ಕೋರ್ಟ್‌ ಯೂಟ್ಯೂಬ್, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ಅಶ್ಲೀಲ ವಿಷಯದ ಕುರಿತು ಕೇಂದ್ರದ ಪ್ರತಿಕ್ರಿಯೆ ಕೇಳಿದೆ.

NASA Alerts: ಇಂದು ಭೂಮಿಯ ಸಮೀಪ ಹಾದು ಹೋಗಲಿರುವ 67 ಅಡಿಯ ಕ್ಷುದ್ರಗ್ರಹ- ನಾಸಾ ಹೇಳೋದೇನು?

ಇಂದು ಭೂಮಿಯ ಸಮೀಪ ಹಾದು ಹೋಗಲಿದೆ ಕ್ಷುದ್ರಗ್ರಹ!

67 ಅಡಿ ಬಾಹ್ಯಾಕಾಶ ಶಿಲೆಯಾಗಿರುವ ಕ್ಷುದ್ರಗ್ರಹವು 2025 CA2, ಗಂಟೆಗೆ 26,500 ಕಿ.ಮೀ ವೇಗದಲ್ಲಿ ಭೂಮಿಯತ್ತ ಸಮೀಪಿಸುತ್ತಿದೆ ಎಂದು ತಿಳಿದು ಬಂದಿದೆ. ನಾಸಾ ವಿಜ್ಞಾನಿಗಳ ಪ್ರಕಾರ, ಕ್ಷುದ್ರಗ್ರಹ 2025 CA2 ಮಂಗಳವಾರ(ಫೆ.18) ಸಂಜೆ 4:33ಕ್ಕೆ ಸರಿಯಾಗಿ ಭೂಮಿಯ ಸಮೀಪ ಹಾದುಹೋಗಲಿದೆ. ಈ ಕ್ಷುದ್ರಗ್ರಹದಿಂದ ಭೂಮಿಗೆ ಯಾವುದೇ ಅಪಾಯ ಇಲ್ಲ ಎಂದು ನಾಸಾ ತಿಳಿಸಿದೆ.

Rahul Gandhi: ಬ್ಯಾನ್‌ ಆದ ಚೀನಿ ಡ್ರೋನ್‌ ಹಾರಿಸಿದ ರಾಹುಲ್‌ ಗಾಂಧಿ: ಭುಗಿಲೆದ್ದ ವಿವಾದ!

ಬ್ಯಾನ್‌ ಆದ ಚೀನಿ ಡ್ರೋನ್‌ ಹಾರಿಸಿದ ರಾಹುಲ್‌ ಗಾಂಧಿ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ನಿಷೇಧಿತ ಚೀನಿ ಡ್ರೋನ್‌ ಹಾರಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಫೆ.15ರಂದು ರಾಹುಲ್‌ ಗಾಂಧಿ ಡಿಜೆಐ ಡ್ರೋನ್‌ ಹಾರಿಸಿದ್ದರು. ಆ ವಿಡಿಯೊವನ್ನು ತಮ್ಮ ಎಕ್ಸ್‌ ಖಾತೆಯಲ್ಲೂ ಹಂಚಿಕೊಂಡಿದ್ದರು. ಡ್ರೋನ್‌ ಬಳಕೆಯ ಲಾಭ ಪಡೆಯುವಲ್ಲಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಮಾತಿನ ಮೂಲಕ ತಿವಿದಿದ್ದರು.

Election Commission: ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್: ಇವರ ಹಿನ್ನೆಲೆಯೇನು?

ಚುನಾವಣಾ ಆಯುಕ್ತರಾಗಿ ಜ್ಞಾನೇಶ್‌ ಕುಮಾರ್?

ಚುನಾವಣಾ ಆಯುಕ್ತರಾಗಿದ್ದ ರಾಜೀವ್‌ ಕುಮಾರ್‌ ಅವರ ಅಧಿಕಾರವಧಿ ಮುಗಿದಿದ್ದು,ಅವರು ನಿವೃತ್ತರಾಗಿದ್ದಾರೆ. ಇದೀಗ ನೂತನ ಚುನಾವಣಾ ಆಯುಕ್ತರಾಗಿ ಜ್ಞಾನೇಶ್‌ ಕುಮಾರ್‌ ಆಯ್ಕೆಯಾಗಿದ್ದು, ಸದ್ಯದಲ್ಲೇ ಅಧಿಕಾರವಹಿಸಿಕೊಳ್ಳಲಿದ್ದಾರೆ. ಜ್ಞಾನೇಶ್‌ ಕುಮಾರ್‌ ಅವರ ಹಿನ್ನೆಲೆಯನ್ನು ಇಲ್ಲಿ ವಿವರಿಸಲಾಗಿದೆ. ಆದರೆ ಅವರ ನಾಮ ನಿರ್ದೇಶನವನ್ನು ಅನುಮೋದಿಸಲಾಗಿಲ್ಲ.

Self Harming: ನೇಪಾಳದ ವಿದ್ಯಾರ್ಥಿನಿ ಆತ್ಮಹತ್ಯೆ: ನೇಪಾಳಿಗಳನ್ನು ಕಾಲೇಜಿನಿಂದ ಹೊರಹಾಕುವಂತೆ ಪ್ರತಿಭಟಿಸಿದ ವಿದ್ಯಾರ್ಥಿಗಳು!

ನೇಪಾಳದ ವಿದ್ಯಾರ್ಥಿನಿ ಆತ್ಮಹತ್ಯೆ: ನೇಪಾಳಿಗಳನ್ನು ಹೊರಹಾಕಿದ ವಿವಿ

ಒಡಿಶಾದ ಭುವನೇಶ್ವರದ ಕಾಲೇಜುವೊಂದರಲ್ಲಿ ನೇಪಾಳಿ ವಿದ್ಯಾರ್ಥಿನಿ ತನ್ನ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಭಾನುವಾರ(ಫೆ.16) ಆಕೆ ಶವವಾಗಿ ಪತ್ತೆಯಾಗಿದ್ದಾಳೆ. ಈ ವಿಷಯ ಹೊರಬಿದ್ದ ಕೂಡಲೇ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ನೇಪಾಳಿ ವಿದ್ಯಾರ್ಥಿಗಳನ್ನು ಹೊರಹಾಕುವಂತೆ ಘೋಷಣೆ ಕೂಗಿದ್ದಾರೆ.

Mahakumbh Fire: ಮಹಾ ಕುಂಭಮೇಳದಲ್ಲಿ 5ನೇ ಬಾರಿ ಬೆಂಕಿ ಅವಘಡ!

ಕುಂಭಮೇಳದಲ್ಲಿ ಬೆಂಕಿ ಅವಘಡ!

ಮಹಾ ಕುಂಭಮೇಳದಲ್ಲಿ ಐದನೇ ಬಾರಿ ಬೆಂಕಿ ಅವಘಡ ಸಂಭವಿಸಿದ್ದು, ಕೆಲವು ಟೆಂಟ್‌ಗಳು ಸುಟ್ಟು ಭಸ್ಮವಾಗಿವೆ. ಯಾವುದೇ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಬೆಂಕಿ ಅವಘಡವಾಗುತ್ತಿದೆ. ಇತ್ತೀಚೆಗಷ್ಟೇ ಬೆಂಕಿ ತಗುಲಿ ಏಳು ಡೇರೆಗಳು ಸುಟ್ಟು ಭಸ್ಮವಾಗಿದ್ದವು.

Stock Market: ನಿಫ್ಟಿ ಕುಸಿತ ತಾತ್ಕಾಲಿಕ, ಭವಿಷ್ಯ ಪ್ರಬಲ? ತಜ್ಞರು ಹೇಳಿದ್ದೇನು?

ನಿಫ್ಟಿ ಕುಸಿತ ತಾತ್ಕಾಲಿಕ, ಭವಿಷ್ಯ ಪ್ರಬಲ? ತಜ್ಞರು ಹೇಳಿದ್ದೇನು?

ನಿಫ್ಟಿಯ ಇತಿಹಾಸದಲ್ಲಿಯೇ ಸತತ 9 ದಿನಗಳ ಕುಸಿತ ಎನ್ನುವುದು 2019ರಿಂದಲೇ ದೀರ್ಘವಾದ ಕುಸಿತವಾಗಿದೆ. ಹೀಗಿದ್ದರೂ, ತಜ್ಞರು ಭವಿಷ್ಯದ ಬಗ್ಗೆ ಭರವಸೆಯನ್ನು ಕೈ ಬಿಟ್ಟಿಲ್ಲ. ಮುಂಬರುವ ದಿನಗಳಲ್ಲಿ ಖಂಡಿತವಾಗಿಯೂ ಷೇರು ಸೂಚ್ಯಂಕಗಳು ಏರಿಕೆಯಾಗಲಿವೆ ಎನ್ನುತ್ತಿದ್ದಾರೆ. ಹಾಗಾದರೆ ಯಾರು ಏನು ಹೇಳುತ್ತಿದ್ದಾರೆ ಎಂಬುದನ್ನು ನೋಡೋಣ

Ranveer Allahbadia: ವಿಚಾರಣೆಗೆ ಹಾಜರಾಗದ ಯೂಟ್ಯೂಬರ್‌ ರಣವೀರ್‌ ತಂಡ: ಮತ್ತೆ ಸಮನ್ಸ್‌ ಜಾರಿ!

ಲೈಂಗಿಕತೆ ಕುರಿತು ಆಕ್ಷೇಪಾರ್ಹ ಹೇಳಿಕೆ- ವಿಚಾರಣೆಗೆ ಹಾಜರಾಗದ ಯೂಟ್ಯೂಬರ್ಸ್!

ಯೂಟ್ಯೂಬ್ ರಿಯಾಲಿಟಿ ಶೋ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿ ಪೋಷಕರು ಮತ್ತು ಲೈಂಗಿಕತೆ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಗಳಿಗೆ ಸಂಬಂಧಿಸಿದಂತೆ ಯೂಟ್ಯೂಬರ್ಸ್‌ಗಳನ್ನು ರಾಷ್ಟ್ರೀಯ ಮಹಿಳಾ ಆಯೋಗವು (ಎನ್‌ಸಿಡಬ್ಲ್ಯು) ವಿಚಾರಣೆಗೆ ಕರೆದಿತ್ತು. ಆದರೆ ಅವರು ಹಾಜರಾಗಲು ವಿಫಲವಾಗಿದ್ದು, ಮತ್ತೊಮ್ಮೆ ಸಮನ್ಸ್ ಜಾರಿ ಮಾಡಲಾಗಿದೆ.

Execution In UAE: ಅಪ್ಪಾ... ಇದು ನನ್ನ ಕೊನೆಯ ಫೋನ್‌ ಕರೆ! ಉತ್ತರಪ್ರದೇಶದ ಮಹಿಳೆಗೆ ಅಬುದಾಬಿಯಲ್ಲಿ ಮರಣದಂಡನೆ

ಉತ್ತರಪ್ರದೇಶದ ಮಹಿಳೆಗೆ ಅಬುದಾಬಿಯಲ್ಲಿ ಗಲ್ಲು; ಅಪ್ಪನಿಗೆ ಕೊನೆಯ ಕರೆ!

ಉತ್ತರ ಪ್ರದೇಶದ ಬಂಡಾ ಜಿಲ್ಲೆಯ 33 ವರ್ಷದ ಮಹಿಳೆ ಶಹಜಾದಿ ಮುಂದಿನ 24 ಗಂಟೆಗಳಲ್ಲಿ ಅಬುಧಾಬಿ ನ್ಯಾಯಾಲಯದಲ್ಲಿ ಮರಣದಂಡನೆಗೆ ಒಳಗಾಗಲಿದ್ದಾರೆ. ಅಬುಧಾಬಿಯ ಅಲ್ ವತ್ಬಾ ಜೈಲಿನಲ್ಲಿ ಬಂಧಿಸಲ್ಪಟ್ಟಿದ್ದು, ಗಲ್ಲುಶಿಕ್ಷೆ ವಿಧಿಸಲಾಗಿದೆ. ಈ ಮಧ್ಯೆ ಮಹಿಳೆ ತನ್ನ ತಂದೆಗೆ ಕರೆಮಾಡಿ ಭಾವುಕರಾಗಿ ಮಾತನಾಡಿದ್ದಾರೆ.

Delhi CM: ಬಿಜೆಪಿ ಶಾಸಕಾಂಗ ಸಭೆ ಮುಂದೂಡಿಕೆ- ಫೆ.20 ದೆಹಲಿ ನೂತನ ಸಿಎಂ ಪ್ರಮಾಣವಚನ ಸಮಾರಂಭ?

ಫೆ.20 ರಂದು ಡೆಲ್ಲಿ ನೂತನ ಸಿಎಂ ಪ್ರಮಾಣವಚನ?

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ದಾಖಲೆಯ ಗೆಲುವು ಸಾಧಿಸಿದ ಬಿಜೆಪಿಯಲ್ಲಿ ಇದೀಗ ಮುಖ್ಯಮಂತ್ರಿ ಆಯ್ಕೆಯ ಕಸರತ್ತು ಪ್ರಾರಂಭವಾಗಿದೆ. ಪ್ರಧಾನಿ ಮೋದಿ ಅಮೆರಿಕ ಪ್ರವಾಸದಿಂದ ಹಿಂತಿರುಗಿದ ಬೆನ್ನಲ್ಲೇ ಮುಖ್ಯಮಂತ್ರಿ ಸೇರಿದಂತೆ ಇತರೆ ಸಚಿವ ಸಂಪುಟ ರಚನೆ ಬಗ್ಗೆ ಸಭೆ ನಡೆದಿದೆ. ಇನ್ನು ಫೆ.20 ರಂದು ದೆಹಲಿ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭವಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Ekta Kapoor: ಭಾರತೀಯ ಸೇನೆಗೆ ಅವಮಾನ- ಏಕ್ತಾ ಕಪೂರ್ ವಿವಾದ: ನ್ಯಾಯಾಲಯದಿಂದ ತನಿಖೆಗೆ ಆದೇಶ!

ಸಂಕಷ್ಟಕ್ಕೆ ಸಿಲುಕಿದ ನಿರ್ಮಾಪಕಿ ಏಕ್ತಾ ಕಪೂರ್!

ನಿರ್ಮಾಪಕಿ ಏಕ್ತಾ ಕಪೂರ್ ನಿರ್ಮಾಣದ ವೆಬ್ ಸಿರೀಸ್ 'ಟ್ರಪಲ್‌ ಎಕ್ಸ್-2' ಕೆಲವು ವರ್ಷಗಳ ಹಿಂದೆ ತೀವ್ರ ವಿವಾದ ಸೃಷ್ಟಿಸಿತ್ತು. ಭಾರತೀಯ ಸೇನೆಯನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಸೇನೆಯ ಕೆಲವು ಮಾಜಿ ಸೈನಿಕರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಸರಿ ಸುಮಶರು ನಾಲ್ಕು ವರ್ಷಗಳ ನಂತರ ಏಕ್ತಾ ಕಪೂರ್‌ ಅವರನ್ನು ತನಿಖೆ ನಡೆಸಲು ನ್ಯಾಯಾಲಯವು ಆದೇಶಿಸಿದೆ.

Anokh Mittal: ಪಂಜಾಬ್‌ ಎಎಪಿ ನಾಯಕ ಮಿತ್ತಲ್‌ ಮೇಲೆ ದಾಳಿ: ಪತ್ನಿ ಬರ್ಬರ ಹತ್ಯೆ!

ಪಂಜಾಬ್‌ ಎಎಪಿ ನಾಯಕ ಮಿತ್ತಲ್‌ ಪತ್ನಿಯನ್ನು ಹತ್ಯೆಗೈದ ದರೋಡೆಕೋರರು!

ಪಂಜಾಬ್‌ನ ಎಎಪಿ ನಾಯಕ ಅನೋಖ್ ಮಿತ್ತಲ್ ಅವರ ಮೇಲೆ ದರೋಡೆಕೋರರು ದಾಳಿ ಮಾಡಿದ್ದು, ಅವರ ಪತ್ನಿ ಲಿಪ್ಸಿ ಮಿತ್ತಲ್ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ. ಶನಿವಾರ(ಫೆ.15) ತಡರಾತ್ರಿ ದಂಪತಿಗಳು ಡೆಹ್ಲೋದಲ್ಲಿ ಊಟ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

Road Accident: ಭೀಕರ ರಸ್ತೆ ಅಪಘಾತ: ಕುಂಭಮೇಳದಿಂದ ಹಿಂತಿರುಗುತ್ತಿದ್ದ ರಾಯಚೂರು ವ್ಯಕ್ತಿ ದುರಂತ ಸಾವು!

ಕುಂಭಮೇಳದಿಂದ ಹಿಂತಿರುಗುವಾಗ ರಸ್ತೆ ಅಪಘಾತ: ರಾಯಚೂರು ವ್ಯಕ್ತಿ ದುರ್ಮರಣ

ಮಹಾ ಕುಂಭಮೇಳದಿಂದ ಹಿಂತಿರುಗುವಾಗ ರಾಯಚೂರಿನ ವ್ಯಕ್ತಿ ರಾಜ್ಯಕ್ಕೆ ಮರಳುವ ವೇಳೆ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಮಧ್ಯಪ್ರದೇಶದ ಮೇಹೂರ್ ಬಳಿ ಕಾರು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೃತಪಟ್ಟ ವ್ಯಕ್ತಿಯನ್ನು ಮಹಾದೇವ್ ವಾಲೇಕರ್‌ ಎಂದು ಗುರುತಿಸಲಾಗಿದ್ದು,ರಾಯಚೂರಿನ ಚಂದ್ರಬಂಡಾ ಗ್ರಾಮದ ನಿವಾಸಿ ಎಂದು ಮೂಲಗಳು ತಿಳಿಸಿವೆ.

UP Dowry Case: ವರದಕ್ಷಿಣೆ ಕಿರುಕುಳ- ಸೊಸೆಗೆ ಎಚ್‌ಐವಿ ಇಂಜೆಕ್ಷನ್‌ ಚುಚ್ಚಿದ ನೀಚ  ಅತ್ತೆ-ಮಾವ!

ವರದಕ್ಷಿಣೆ ಕಿರುಕುಳ: ಸೊಸೆಗೆ ಎಚ್‌ಐವಿ ಇಂಜೆಕ್ಷನ್‌ ಚುಚ್ಚಿದ ಅತ್ತೆ-ಮಾವ!

ವರದಕ್ಷಿಣೆ ಕೊಡದ ಕಾರಣಕ್ಕೆ ತಮ್ಮ ಸೊಸೆಗೆ ಚಿತ್ರ ಹಿಂಸೆ ನೀಡಿದ ಅತ್ತೆ-ಮಾವ ಬಲವಂತವಾಗಿ ಎಚ್‌ಐವಿ ಸೋಂಕಿತ ಇಂಜೆಕ್ಷನ್ ನೀಡಿ ರಾಕ್ಷಸ ಪ್ರವೃತ್ತಿ ಮೆರೆದಿದ್ದಾರೆ. ಈ ಆತಂಕಕಾರಿ ಘಟನೆಯು ಉತ್ತರಪ್ರದೇಶದಲ್ಲಿ ನಡದಿದ್ದು, ಹೆಣ್ಣಿನ ತಂದೆ ದೂರು ದಾಖಲಿಸಿದ್ದಾರೆ. ಅವರು ನೀಡಿದ ದೂರಿನ ಆಧಾರದ ಮೇಲೆ ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

New Delhi Stampede: ದೆಹಲಿ ಭೀಕರ ಕಾಲ್ತುಳಿತ ದುರಂತ: ಹರಿದಾಡಿದ ವಿಡಿಯೊ-ಮೋದಿ ಸೇರಿ ಹಲವು ನಾಯಕರ ಸಂತಾಪ!

ದೆಹಲಿ ಕಾಲ್ತುಳಿತ ದುರಂತ-ಹರಿದಾಡಿದ ವಿಡಿಯೊ-ಮೋದಿ ಸಂತಾಪ!

ಶನಿವಾರ(ಫೆ.15) ರಾತ್ರಿ ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ನಡೆದ ಭೀಕರ ಕಾಲ್ತುಳಿತದಿಂದಾಗಿ 18 ಜನರು ದಾರುಣವಾಗಿ ಸಾವನ್ನಪ್ಪಿದ್ದರೆ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ಸಂಬಂಧ ಸಾಕಷ್ಟು ವಿಡಿಯೊಗಳು ಎಲ್ಲೆಡೆ ಹರಿದಾಡುತ್ತಿದೆ. ರೈಲು ಹತ್ತುವಾಗ ಪ್ರಯಾಣಿಕರ ನಡುವೆ ನೂಕು ನುಗ್ಗಲಾಗಿದ್ದು,ಗಲಾಟೆ ಗಲಭೆಗಳು ನಡೆದಿರುವುದನ್ನು ವಿಡಿಯೊಗಳಲ್ಲಿ ನೋಡಬಹುದು.

Pralhad Joshi: ವಿವಿಗಳನ್ನೂ ಆದಾಯದ ಸರಕನ್ನಾಗಿ ನೋಡುತ್ತಿದೆ ಕಾಂಗ್ರೆಸ್ ಸರ್ಕಾರ;  ಪ್ರಲ್ಹಾದ ಜೋಶಿ ಕಿಡಿ!

ವಿವಿಗಳನ್ನು ಮುಚ್ಚಲು ಹೊರಟಿರೋ ಕಾಂಗ್ರೆಸ್-ಜೋಶಿ ಆಕ್ರೋಶ!

ಪದವೀಧರರಿಗೆ ಯುವ ನಿಧಿ ಗ್ಯಾರಂಟಿ ಘೋಷಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ ಈಗ ಅಂಥ ಪದವೀಧರರನ್ನು ರೂಪಿಸುವ ವಿವಿಗಳನ್ನೇ ಮುಚ್ಚಲು ಹೊರಟಿದ್ದು ಅಕ್ಷಮ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ. ರಾಜ್ಯ ಸಚಿವ ಸಂಪುಟದ ಉಪ ಸಮಿತಿ ರಾಜ್ಯದಲ್ಲಿನ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಕೈಗೊಂಡಿರುವ ತೀರ್ಮಾನಕ್ಕೆ ಸಚಿವ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

New Delhi Stampede: ಅತಿ ಹೆಚ್ಚು ಟಿಕಟ್‌ ಮಾರಾಟವೇ ಕಾಲ್ತುಳಿತ ದುರಂತಕ್ಕೆ ಕಾರಣ-ತನಿಖಾ ವರದಿ ಹೇಳೋದೇನು?

ನವದೆಹಲಿ ಕಾಲ್ತುಳಿತ ದುರಂತಕ್ಕೆ ಕಾರಣವೇನು?

ನಿನ್ನೆ(ಫೆ.15) ರಾತ್ರಿ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ 18 ಜನರು ದುರಂತವಾಗಿ ಸಾವನ್ನಪ್ಪಿದ್ದು,10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅತಿಹೆಚ್ಚು ಟಿಕಟ್‌ ಮಾರಾಟವೇ ಈ ದುರಂತ ಘಟನೆಗೆ ಕಾರಣವೆಂದು ಹೇಳಲಾಗಿದ್ದು,ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ.

Ranveer Allahbadia: ನನ್ನ ಅಮ್ಮನ ಕ್ಲಿನಿಕ್‌ಗೆ ನುಗ್ಗಿ ಕೊಲೆ ಬೆದರಿಕೆ ಹಾಕಿದ್ದಾರೆ: ಯೂಟ್ಯೂಬರ್‌ ರಣವೀರ್‌ ಶಾಕಿಂಗ್‌ ಹೇಳಿಕೆ!

ಯೂಟ್ಯೂಬರ್‌ ರಣವೀರ್‌ ತಾಯಿಗೆ ಕೊಲೆ ಬೆದರಿಕೆ!

ಯೂಟ್ಯೂಬ್‌ ಶೋ ಒಂದರಲ್ಲಿ ಲೈಂಗಿಕತೆಯ ಕುರಿತು ಅಸಭ್ಯ ಹೇಳಿಕೆಯನ್ನು ನೀಡುವ ಮೂಲಕ ವಿವಾದಕ್ಕೆ ಸಿಲುಕಿ ಹಾಕಿಕೊಂಡಿರುವ ರಣವೀರ್‌ ಅಲಹಾಬಾದಿಯಾ ಇದೀಗ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ರಣವೀರ್‌ ವಿರುದ್ಧ ದೇಶದಾದ್ಯಂತ ಪ್ರಕರಣಗಳು ದಾಖಲಾಗುತ್ತಿದ್ದಂತೆ ಆತನ ತಾಯಿಯ ಕ್ಲಿನಿಕ್‌ಗೆ ಕಿಡಿಗೇಡಿಗಳು ರೋಗಿಗಳ ಸೋಗಿನಲ್ಲಿ ನುಗ್ಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.