ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಯಗಟಿ ರಘು ನಾಡಿಗ್

Senior Sub Editor and Columnist

naadigru@gmail.com

'ವಿಜಯವಾಣಿ', 'ವಿಜಯ ಕರ್ನಾಟಕ' ಪತ್ರಿಕೆಗಳಲ್ಲಿನ ಸೇವೆಯ ನಂತರ, ಕಳೆದ 3 ವರ್ಷಗಳಿಂದ “ವಿಶ್ವವಾಣಿ ಕುಟುಂಬಿ”. ಪ್ರಸ್ತುತ ಪತ್ರಿಕೆಯ ಸಂಪಾದಕೀಯ ಪುಟಗಳ ನಿರ್ವಹಣೆಯ ನೊಗ ಹೆಗಲೇರಿದೆ. ಒಂದಷ್ಟು ಪುಸ್ತಕಗಳನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ಅನುವಾದಿಸಿದ್ದು, ‘ಸಾಧನೆಗೆ ಮಿತಿಯಿಲ್ಲ, ಸಾಧಕರಿಗೆ ಕೊನೆಯಿಲ್ಲ’, ‘ಅಪ್ರತಿಮ ಕೊಡುಗೆ’, ‘ನಿಮ್ಮ ಸುಪ್ತಮನಸ್ಸಿನ ತಾಕತ್ತು ನಿಮಗೆ ಗೊತ್ತೇ?’, “ಬ್ಯಾಬಿಲೋನ್ ನಲ್ಲೊಬ್ಬ ಕುಬೇರ’, ‘ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ’ ಮುಂತಾದವು ಅವುಗಳಲ್ಲಿ ಸೇರಿವೆ. ಗಾಯನ, ವ್ಯಂಗ್ಯಚಿತ್ರ ರಚನೆಯ ಚಾಳಿಯೂ ಉಂಟು!

Articles
ಅರ್ಧ ಸೆಂಚುರಿ ಹೊಡೆದರೂ ಅಪ್ರಸ್ತುತವಾಗದ ಬೂತಯ್ಯ..!

ಅರ್ಧ ಸೆಂಚುರಿ ಹೊಡೆದರೂ ಅಪ್ರಸ್ತುತವಾಗದ ಬೂತಯ್ಯ..!

ಗೊರೂರು ರಾಮಸ್ವಾಮಿ ಅಯ್ಯಂಗಾರರ ‘ವಯ್ಯಾರಿ’ ಎಂಬ ಕಥೆಯನ್ನಾಧರಿಸಿದ, ಸಿದ್ದಲಿಂಗಯ್ಯ ನವರ ನಿದೇರ್ಶನದ ಈ ಚಿತ್ರ ಬಿಡುಗಡೆಯಾಗಿದ್ದು 1974ರ ಫೆಬ್ರವರಿ ೨ರಂದು. ಅಂದರೆ, ಬರೋಬ್ಬರಿ 50 ವರ್ಷಗಳನ್ನು ದಾಟಿದ್ದರೂ ಅಪ್ರಸ್ತುತವಾಗಿಲ್ಲ ಎಂಬುದೇ ಈ ಚಿತ್ರದ ವಿಶೇಷ.

Yagati Raghu Naadig Column: ನಳಪಾಕನ ಸಂಚನ್ನು ಗ್ರಹಿಸಿ ಜಾಗೃತಳಾದ ಶಾರದೆ

ನಳಪಾಕನ ಸಂಚನ್ನು ಗ್ರಹಿಸಿ ಜಾಗೃತಳಾದ ಶಾರದೆ

‘ದುಡುಕಬಾರದು, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು; ಹೆಣ್ಣಿನ ಜೀವನವು ಮುಳ್ಳಿನ ಬೇಲಿಯ ಮೇಲೆ ಹರಡಿರುವ ಬಟ್ಟೆಯಂತೆ, ಹುಷಾರಾಗಿ ಬಿಡಿಸಿಕೊಳ್ಳಬೇಕು’ ಎಂದುಕೊಳ್ಳುತ್ತಾ ಶಾರದೆಯೂ ಸಣ್ಣಗೆ ನಾಟಕವಾಡತೊಡಗಿದಳು- ‘ಅಣ್ಣಾ, ಪೂಜೆಯ ನಂತರ ಪ್ರಸಾದ ತಗೊಂಡು ಬರ‍್ತಾ ಇದ್ದೆ, ಕತ್ತಲಲ್ಲಿ ಕಾಣದೆ ಕಲ್ಲನ್ನು ಎಡವಿ ಬಿದ್ದುಬಿಟ್ಟೆ. ಪ್ರಸಾದವೆಲ್ಲಾ ನೆಲದ ಮೇಲೆ ಚೆಲ್ಲಿಹೋಯ್ತು, ಒಂದು ಕಾಳನ್ನೂ ತಿನ್ನಲಾಗಲಿಲ್ಲ. ನೋಡಿಲ್ಲಿ, ಎಡವಿದ ಭರಕ್ಕೆ ಕಾಲಿನ ಹೆಬ್ಬೆರಳು ಗಾಯವಾಗಿ ರಕ್ತ ಸುರಿಯುತ್ತಿದೆ. ಬಿದ್ದ ಭರಕ್ಕೆ ಮಂಡಿಯ ಬಳಿ ಬಟ್ಟೆ ಹರಿದುಹೋಯ್ತು’ ಎನ್ನುತ್ತಾ ನಡೆದ ಘಟನೆಯನ್ನು ಮರೆಮಾಚಿ ಬೇರೆಯದೇ ಕಥೆ ಕಟ್ಟಿದಳು.

5,000 ಕಂತುಗಳ ರಸದೌತಣ

5,000 ಕಂತುಗಳ ರಸದೌತಣ

ಇಂದು (ಅಕ್ಟೋಬರ್ ೧೧) ತನ್ನ ೫೦೦೦ನೇ ಕಂತಿನ ಪ್ರಸಾರಕ್ಕೆ ಸಜ್ಜಾಗಿದೆ ‘ಥಟ್ ಅಂತ ಹೇಳಿ’ ತಂಡ. ಈ ಕಾರ್ಯಕ್ರಮದ ಅಧ್ವರ್ಯು ಮತ್ತು ‘ಕ್ವಿಜ್ ಮಾಸ್ಟರ್’ ಆಗಿರುವ ಡಾ. ನಾ.ಸೋಮೇಶ್ವರ ಅವರದ್ದೇ ಪ್ರಶ್ನೆಗಳ ಸಂಶೋಧನೆ, ರಚನೆ ಹಾಗೂ ಪ್ರಸ್ತುತಿ ಕೂಡ. ಇವರು ನಮ್ಮ ಅಂಕಣಕಾರರು ಹೌದು ಎಂಬುದು ‘ವಿಶ್ವವಾಣಿ’ ಪತ್ರಿಕೆಯ ಪಾಲಿಗೆ ಖುಷಿಯ ಸಂಗತಿ.

Yagati Raghu Naadig Column: ಜಿಂಕೆಮರಿಯ ಬೇಟೆಗೆ ಬಲೆ ಬೀಸಿದ ಅಡುಗೆಭಟ್ಟ...

ಜಿಂಕೆಮರಿಯ ಬೇಟೆಗೆ ಬಲೆ ಬೀಸಿದ ಅಡುಗೆಭಟ್ಟ...

ವಿಕೃತವಾಗಿ ನಕ್ಕ ನಳಪಾಕ, ‘ಚಿಂತೆ ಬೇಡ ಧಣೀ, ಹಣ್ಣು ಮಾಗಿದೆ. ಇಂದು ರಾತ್ರಿ ತೊಟ್ಟು ಕಳಚಿ ಕೊಂಡು ರೆಂಬೆಯಿಂದ ಅದಾಗೇ ಬೀಳುತ್ತೆ. ಪಾದಪೂಜೆಗೆಂದು ಬೇರೊಂದು ಊರಿಗೆ ಹೋಗಿರುವ ಸ್ವಾಮೀಜಿಯ ಜತೆಗೆ, ಮ್ಯಾನೇಜರ್, ಮಿಕ್ಕ ಸಿಬ್ಬಂದಿಯೂ ತೆರಳಿದ್ದಾರೆ. ವಿದ್ಯಾರ್ಥಿಗಳೆಲ್ಲಾ ಊಟದ ನಂತರ ಕೊಂಚ ಓದಿ ಮಲಗಿ ಬಿಡುತ್ತಾರೆ. ಹೇಳೋರು ಕೇಳೋರು ಯಾರೂ ಇರೋಲ್ಲ. ಆಗ ನಿಮ್ಮ ಕೆಲಸವನ್ನು ಪೂರೈಸಿಕೊಳ್ಳೋರಂತೆ...’ ಎಂದು ಹೇಳಿ ಎರಡೂ ಕೈಗಳನ್ನು ಶಕುನಿಯಂತೆ ಉಜ್ಜಿಕೊಂಡ.

Yagati Raghu Naadig Column: ಉಕ್ಕೇರಿದ ಉಪಾಯ, ಮತ್ತೇರಿದ ಮದನ, ಕಿಕ್ಕೇರಿದ ಕಥನ

ಉಕ್ಕೇರಿದ ಉಪಾಯ, ಮತ್ತೇರಿದ ಮದನ, ಕಿಕ್ಕೇರಿದ ಕಥನ

ಅದಕ್ಕೆ ಹೊಸ ಶಿಷ್ಯರೊಬ್ಬರು, “ಅರೆ! ಹೌದಾ ಗುರುಗಳೇ? ಬಾಳೆಹಣ್ಣು-ಊದುಬತ್ತಿ-ಕರ್ಪೂರ ಮಾರುವ ನಮ್ಮೂರಿನ ಗೂಡಂಗಡಿಯಲ್ಲಿ ನೇತು ಹಾಕಿರೋ ಕ್ಯಾಲೆಂಡರ್‌ನಲ್ಲಿ ಒಂದಿಷ್ಟು ರೂಪದರ್ಶಿಗಳ ಜತೆ ಈ ಕಳ್ಳಬೆಕ್ಕು ನಿಂತಿರೋದನ್ನು ನೋಡಿದ್ದ ನೆನಪಿದೆ. ಸಂತ್ರಸ್ತೆಯ ಜಮೀನು ಕಸಿದ, ಶಾರದೆಯ ಮಾನ ಕಸಿಯಲು ಹೋದ ಈ ‘ಮದ್ಯ-ದೊರೆ’ ಜನನಾಯಕನಾ?!" ಎಂದು ಉದ್ಗರಿಸಿದಕ್ಕೆ ಹಳೆ ಶಿಷ್ಯರೆಲ್ಲರೂ ನಕ್ಕರು...

Yagati Raghu Naadig Column: ಜನಸೇವೆಯ ನೆಪದಲ್ಲಿ ಕಳ್ಳಬೆಕ್ಕಿನ ಶಯನಸೇವೆ...

ಜನಸೇವೆಯ ನೆಪದಲ್ಲಿ ಕಳ್ಳಬೆಕ್ಕಿನ ಶಯನಸೇವೆ...

ಅದಕ್ಕೆ ಬಾಯಿಬಿಡದ ಅವಧೂತರು, ಹಾಗೇ ಬೀದಿ ಬಾಗಿಲ ಕಡೆಗೆ ಬೆರಳು ತೋರಿದರು. ಅಂತೆಯೇ ತಿರುಗಿದ ಕಳ್ಳಬೆಕ್ಕು ಅದಾಗಲೇ ಅಲ್ಲಿಗೆ ಬಂದಿದ್ದ ವ್ಯಕ್ತಿಯನ್ನು ಕಂಡು ಬೆವರತೊಡಗಿತು. ಅದು ಬೇರಾರೂ ಅಲ್ಲ, ಭಾಷಣ ಮಾಡುತ್ತಿದ್ದ ಕಳ್ಳಬೆಕ್ಕಿಗೆ ಕೆಲ ಹೊತ್ತಿನ ಮುಂಚೆ ಹಿಡಿಶಾಪ ಹಾಕಿ ನೆಟಿಗೆ ಮುರಿದಾಕೆ! ಬೇರೇನೋ ನಿರೀಕ್ಷೆಯೊಂದಿಗೆ ಅವಧೂತರಲ್ಲಿಗೆ ಬಂದಿದ್ದ ಕಳ್ಳಬೆಕ್ಕಿಗೆ ಮತ್ತೇನೂ ಮಾತನಾಡಲಾಗದೆ ದುರ್ದಾನ ತೆಗೆದುಕೊಂಡಂತೆ ಜಾಗ ಖಾಲಿ ಮಾಡಿತು...!

Yagati Raghu Naadig Column: ಅವಧೂತರ ಕಾಲಿಗೇ ತೊಡರುಹಾಕಿಕೊಂಡ ಕಳ್ಳಬೆಕ್ಕು

ಅವಧೂತರ ಕಾಲಿಗೇ ತೊಡರುಹಾಕಿಕೊಂಡ ಕಳ್ಳಬೆಕ್ಕು

“ಅಲ್ಲೇನಿದೆ..?" ಎನ್ನುವಂತೆ ಶಿಷ್ಯರ ಹಣೆಯು ಪ್ರಶ್ನಾರ್ಥಕ ಚಿಹ್ನೆಯನ್ನು ಧರಿಸಿದಾಗ, “ಆ ಕಡೆಗೇ ಮತ್ತೊಮ್ಮೆ ಗಮನವಿಟ್ಟು ನೋಡ್ರಯ್ಯಾ" ಎಂದಷ್ಟೇ ನುಡಿದರು ಅವಧೂತರು. ಅಂತೆಯೇ ಶಿಷ್ಯರು ವೇದಿಕೆಯೆಡೆಗೇ ಕಣ್ಣು ನೆಟ್ಟರು. ಧೂಳೆಬ್ಬಿಸಿಕೊಂಡು ಬಂದ ಕಾರಿನಿಂದ ಕೆಳಗಿಳಿದ ಆಸಾಮಿ ಯೊಬ್ಬರು, ಜನರೆದುರು ಹಲ್ಲುಗಿಂಜುತ್ತಾ ಹುಸಿನಗೆ ಬೀರುತ್ತಾ ವೇದಿಕೆ ಯೇರಿದರು. ಅವಧೂತರು ಮತ್ತೊಮ್ಮೆ ಆ ಆಸಾಮಿ ಯ ಕಡೆಗೆ ಬೆರಳುಮಾಡಿ ತೋರಿಸಿ, “ ಬಂತು ನೋಡಿ... ಅದೇ ಕಳ್ಳಬೆಕ್ಕು" ಎಂದರು.

Yagati Raghu Naadig Column: ಕೀಚಕ ಕಳ್ಳಬೆಕ್ಕಿಗೆ ನಳಪಾಕನ ಶಕುನಿಬೋಧೆ

ಕೀಚಕ ಕಳ್ಳಬೆಕ್ಕಿಗೆ ನಳಪಾಕನ ಶಕುನಿಬೋಧೆ

ಪ್ರಾರ್ಥನೆಯಲ್ಲಿ ತೊಡಗಿದ್ದ ಆಕೆಯ ಕಂಠಸಿರಿಗೆ ಹೆಚ್ಚಿನವರು ತಲೆದೂಗುತ್ತಿದ್ದರೆ, ಸದರಿ ‘ಕಳ್ಳಬೆಕ್ಕು’ ಅವಳ ದೇಹಸಿರಿಯ ಮೇಲೆ ಕಳ್ಳಗಣ್ಣು ಹಾಕಿತ್ತು. ಕಾರ್ಯಕ್ರಮವೆಲ್ಲ ಸಂಪನ್ನಗೊಂಡು ಸಂಜೆಯ ಲಘು ಉಪಹಾರವೂ ಮುಗಿದ ನಂತರ, ಶಾರದೆ ವಿದ್ಯಾರ್ಥಿ ನಿಲಯದ ತನ್ನ ಕೋಣೆಯಲ್ಲಿದ್ದಳು. ಮ್ಯಾನೇಜರ್‌ ರಿಂದ ಆಕೆಗೆ ‘ಬುಲಾವ್’ ಬಂತು. ಅಂತೆಯೇ ಸಂಸ್ಥೆಯ ಕಚೇರಿಗೆ ಅವಳು ತೆರಳಿದಾಗ, ಮ್ಯಾನೇಜರ್, ಅಡುಗೆಭಟ್ಟ ‘ನಳಪಾಕ’ ಮುಂತಾದವರ ಜತೆಯಲ್ಲಿ ‘ಕಳ್ಳಬೆಕ್ಕು’ ಮಾತಿನಲ್ಲಿ ತೊಡಗಿತ್ತು.

Yagati Raghu Naadig Column: ಪ್ರೀತಿ ನೀತಿ ಇಲ್ಲದ ಮೇಲೆ, ಹೂವು ಅರಳಿತು ಹೇಗೆ...?

ಪ್ರೀತಿ ನೀತಿ ಇಲ್ಲದ ಮೇಲೆ, ಹೂವು ಅರಳಿತು ಹೇಗೆ...?

ಗುರುಮಾತೆಯ ಮಡಿಲಲ್ಲಿ, ಅವರ ನಿರಂತರ ಪಾಲನೆ-ಪೋಷಣೆಯಲ್ಲಿ ಬೆಳೆದ ಅವಧೂತರು, ಮಹಾನ್ ತೇಜೋವಂತರಾಗಿದ್ದು ಮತ್ತು ಅಸೀಮ ಸಾಧಕರಾಗಿದ್ದು ಹೇಗೆ? ಇಷ್ಟಾಗಿಯೂ ಪ್ರಚಾರ-ಪ್ರಸಿದ್ಧಿಗೆ ಹಂಬಲಿಸದ ಸರಳತನ ಅವರಲ್ಲಿ ಮೈಗೂಡಿಕೊಂಡಿದ್ದು ಹೇಗೆ? ಎಂಬ ಶಿಷ್ಯರ ‘ಮೌನ’ ಪ್ರಶ್ನೆಗಳಿಗೆ ಸ್ಥಳದಲ್ಲೇ ‘ವಾಚ್ಯ’ ಉತ್ತರ ಸಿಕ್ಕಿತ್ತು.

Yagati Raghu Naadig Column: ಸರ್ವಸಂಗ ಪರಿತ್ಯಾಗಿಯೇ ವ್ಯಾಮೋಹಕ್ಕೆ ಹಾಸಿಗೆ ಹಿಡಿದಾಗ...

ಸರ್ವಸಂಗ ಪರಿತ್ಯಾಗಿಯೇ ವ್ಯಾಮೋಹಕ್ಕೆ ಹಾಸಿಗೆ ಹಿಡಿದಾಗ...

“ಸ್ವಾಮೀಜಿ ಕೆಲ ಕಾಲದವರೆಗೆ ಕಾವಿಯನ್ನು ಸಡಿಲಿಸಿಬಿಟ್ಟರು ಅಂದರೆ, ಸನ್ಯಾಸ ಧರ್ಮದ ಮಿಕ್ಕೆಲ್ಲ ಆಯಾಮಗಳಲ್ಲೂ ಪರಿಣತರಾಗಿದ್ದ ಸ್ವಾಮೀಜಿ, ಕಾಮವನ್ನು ಗೆಲ್ಲುವಲ್ಲಿ ವಿಫಲರಾದರು ಅಂತ ಅಲ್ಲವೇ ಗುರುಗಳೇ? ಹೀಗಾಗಿ, ಶಾರದೆಯ ಮೇಲೆ ಕಣ್ಣುಹಾಕಿದ ರಣಹದ್ದಿನಿಂದ ಶುರುವಾದ ಅಪಸವ್ಯ ವನ್ನು ಅವರು ಮುಂದುವರಿಸಿದರು ಅಂತ ಅರ್ಥ ತಾನೇ?" ಎಂದು ಆ ಶಿಷ್ಯರು ಮನದಾಳದ ಮಾತಿಗೆ ದನಿಯಾದರು.

Yagati Raghu Naadig Column: ಬೌಬೌ ಬಾಲವೆಂಬುದು ಯಾವತ್ತಿದ್ರೂ ಡೊಂಕೇ!

ಬೌಬೌ ಬಾಲವೆಂಬುದು ಯಾವತ್ತಿದ್ರೂ ಡೊಂಕೇ!

ಪಾಕಿಸ್ತಾನದ ಮಿಲಿಟರಿ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಮಹಾಶಯರು, ಅಮೆರಿಕದ ಅಧ್ಯಕ್ಷರ ಜತೆಯಲ್ಲಿ ಮೇಜಿನ ಮುಂದೆ ಕೂತು ‘ಭೋಜನ’ ಮಾಡಿದ್ದು ಕೆಲ ದಿನಗಳ ಹಿಂದೆ ಸುದ್ದಿಯಾಗಿತ್ತು. ಆಗ ಕೆಲವಷ್ಟು ರಾಜಕೀಯ ಪಂಡಿತರು, “ಆ ಟ್ರಂಪಣ್ಣನೋ ಮಹಾನ್ ತಲೆ ತಿರುಕ, ಈ ಮುನೀರಣ್ಣನೋ ಮಹಾನ್ ತಲೆಹರಟೆ; ಎರಡೂ ಜತೆಗೂಡಿದರೆ ಏನಾದರೊಂದು ಯಡವಟ್ಟು ಗ್ಯಾರಂಟಿ ಕಣ್ರೀ" ಎಂಬ ಧಾಟಿಯಲ್ಲಿ ಮಾತಾಡುತ್ತಾ ಸಿಗರೇಟಿನ ಬೂದಿಯನ್ನು ಕೊಡವಿದ್ದರು.

Yagati Raghu Naadig Column: ಕಾವಿಯನ್ನು ಸಡಿಲಿಸಿ ಸ್ವಾಮೀಜಿ ಅಪಚಾರ ಎಸಗಿದರೇ ?

ಕಾವಿಯನ್ನು ಸಡಿಲಿಸಿ ಸ್ವಾಮೀಜಿ ಅಪಚಾರ ಎಸಗಿದರೇ ?

ಅವಧೂತರು ವಿಷಾದದ ದನಿಯಲ್ಲಿ, “ಸರ್ವಸಂಗ ಪರಿತ್ಯಾಗಿಯಾಗಿ ಇರಬೇಕಾಗಿದ್ದ ಆ ಮಹಾನುಭಾವ ತನ್ನ ಕಾವಿಯನ್ನು ಕೊಂಚ ಸಡಿಲಿಸಿದ್ದೇ ಅಪಸವ್ಯದ ಮುಂದುವರಿಕೆಗೆ ಮುನ್ನುಡಿ ಯಾಯಿತು" ಎಂದು ಹೇಳಿ, “ಛೇ... ಛೇ.." ಎಂದು ಲೊಚಗುಟ್ಟಿದರು. ಈ ಮಾತಿಗೆ ಶಿಷ್ಯರೊಬ್ಬರು ಸಂಕ್ಷೋಭೆಗೊಂಡು, “ಗುರುಗಳೇ, ಹೌದಾ...?" ಎನ್ನುತ್ತಾ ವ್ಯಗ್ರರಾದರು.

Yagati Raghu Naadig Column: ಕ್ಲೈಮಾಕ್ಸ್‌ʼಗೆ ಕಾಲಿಟ್ಟಿತು ಕಳ್ಳಬೆಕ್ಕಿನ ಕಥನ...

ಕ್ಲೈಮಾಕ್ಸ್‌ʼಗೆ ಕಾಲಿಟ್ಟಿತು ಕಳ್ಳಬೆಕ್ಕಿನ ಕಥನ...

“ನಿಮ್ಮ ಮನಸ್ಸಿನ ಗೊಂದಲ ನನಗರ್ಥವಾಯಿತು..." ಎಂಬ ದನಿ ತೇಲಿ ಬಂದಾಗಲೇ ಶಿಷ್ಯರು ಕಲ್ಪನಾ ಲೋಕದಿಂದ ವಾಸ್ತವಕ್ಕೆ ಬಂದಿದ್ದು. ಆ ದನಿ ಅವಧೂತರದ್ದು. ಕೆಲ ಕ್ಷಣದ ಮುಂಚೆ ಶಿಷ್ಯರೆಡೆಗೆ ನೋಡುತ್ತಾ “ಕಳ್ಳಬೆಕ್ಕಿನ ಬೇಟೆ ಎಂಬ ಲೀಗ್ ಮ್ಯಾಚ್‌ನಲ್ಲಿ ಮೊದಲ ವಿಕೆಟ್ ಬಿತ್ತು..." ಎಂದು ಹೇಳಿ ಕಣ್ಣು ಮಿಟುಕಿಸಿದ್ದ ಅವಧೂತರು, ಶಿಷ್ಯರು ತಮ್ಮದೇ ಕಲ್ಪನಾ ಲೋಕದಲ್ಲಿ ವಿಹರಿಸುವುದಕ್ಕೆ ಅನುವು ಮಾಡಿಕೊಟ್ಟಿದ್ದರು.

Yagati Raghu Naadig Column: ಕಳ್ಳಬೆಕ್ಕಿನ ಬೇಟೆಯ ಪಂದ್ಯದಲ್ಲಿ ಬಿತ್ತು ಮೊದಲ ವಿಕೆಟ್..‌ !

ಕಳ್ಳಬೆಕ್ಕಿನ ಬೇಟೆಯ ಪಂದ್ಯದಲ್ಲಿ ಬಿತ್ತು ಮೊದಲ ವಿಕೆಟ್..‌ !

“ಅಲ್ಲಯ್ಯಾ, ಅಡುಗೆ ಚೆನ್ನಾಗಿಲ್ಲ ಅಂತ ವಿದ್ಯಾರ್ಥಿನಿಲಯದ ಮಕ್ಕಳು ಹೇಳಿದಾಗೆಲ್ಲಾ, ‘ಮಾಡಿದ್ದು ಣ್ಣೋ ಮಹಾರಾಯಾ’ ಅಂತ ನೀನು ಹಂಗಿಸುತ್ತಿದ್ದೆಯಲ್ಲವೇ? ‘ಮಾಡಿದ್ದುಣ್ಣೋ ಮಹಾರಾಯಾ’ ಎಂಬ ಅದೇ ಡೈಲಾಗನ್ನು ನಿನಗೂ ಹೇಳಬೇಕಾದ ಕಾಲ ಬಂದಿದೆಯಪ್ಪಾ" ಎಂದಷ್ಟೇ ಹೇಳಿ, ಕರೆಯನ್ನು ತುಂಡರಿಸುವಂತೆ ಆಪ್ತಸಹಾಯಕರಿಗೆ ಸೂಚಿಸಿದರು. ನಂತರ ಶಿಷ್ಯರೆಡೆಗೆ ನೋಡುತ್ತಾ, “ಕಳ್ಳಬೆಕ್ಕಿನ ಬೇಟೆ ಎಂಬ ಲೀಗ್ ಮ್ಯಾಚ್‌ನಲ್ಲಿ ಮೊದಲ ವಿಕೆಟ್ ಬಿತ್ತು..." ಎನ್ನುತ್ತಾ ಕಣ್ಣು ಮಿಟುಕಿಸಿದರು.

Yagati Raghu Naadig Column: ಅವಧೂತರೊಂದಿಗೆ ಅಮಾಯಕಿಯ ಅನುಸಂಧಾನ

Yagati Raghu Naadig Column: ಅವಧೂತರೊಂದಿಗೆ ಅಮಾಯಕಿಯ ಅನುಸಂಧಾನ

ಕೆಲ ಕ್ಷಣದ ನಂತರ ‘ಬುದ್ಧೀ.... ನನ್ನಪ್ಪಾ...’ ಅಂತ ದೂರದಿಂದ ಅದ್ಯಾರೋ ಕರೆದಂತಾಯಿತು. ಅದು ‘ಅಪರಿಚಿತವಾಗಿದ್ದರೂ ಪರಿಚಿತ’ ಎನಿಸುವ ಬಾಲೆಯೊಬ್ಬಳ ದಿವ್ಯದನಿ. ಅದು ಶಾರದೆಯದ್ದು! ಗುರುಪೂರ್ಣಿಮೆಯ ದಿನದಂದು ‘ಗುರುಸೂತ್ರ’ದ ಪ್ರಭಾವವು ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ತೀವ್ರವಾಗಿರುತ್ತದೆ ಎಂಬ ಅನುಪಮ ಮಾಹಿತಿಯನ್ನು ಅದೆಲ್ಲಿಂದಲೋ ದಕ್ಕಿಸಿಕೊಂಡಿದ್ದ ಜಾಣೆ ಶಾರದೆ, ದೂರದಲ್ಲಿದ್ದು ಕೊಂಡೇ ನನ್ನೊಡನೆ ಸಂವಹಿಸಲು ಗುರುಪೂರ್ಣಿಮೆಯ ದಿನವನ್ನೇ ಆಯ್ದುಕೊಂಡಿದ್ದಳು!

Narada Sanchara: ಎಲ್ಲಾ ಗದ್ದುಗೆ ಮಹಿಮೆ!

ಎಲ್ಲಾ ಗದ್ದುಗೆ ಮಹಿಮೆ!

ಅಧಿಕಾರವನ್ನು ಬೆನ್ನತ್ತುವ ಪರಿಪಾಠವು ವ್ಯಕ್ತಿಯೊಬ್ಬನನ್ನು ಹೇಗೆಲ್ಲಾ ಪ್ರಲೋಭಿಸುತ್ತದೆ, ಯಾವೆಲ್ಲಾ ವಿಚಿತ್ರವಾದ ‘ಕತ್ತಲ ಹಾದಿ’ಗಳಲ್ಲಿ ಕರೆದೊಯ್ಯುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ಅಲ್ಲಿನ ರಾಯಗಢ ಜಿಲ್ಲೆಯ ಉಸ್ತುವಾರಿ ಸಚಿವರ ಹುದ್ದೆಯನ್ನು ದಕ್ಕಿಸಿಕೊಳ್ಳಲು ಶಿವಸೇನೆಯ (ಏಕನಾಥ್ ಶಿಂದೆ ಬಣದ) ಸಚಿವ ಭರತ್ ಗೋಗವಾಲೆ ಅವರು ‘ಅಘೋರಿ ಆಚರಣೆಗಳಿಗೆ’ ಮುಂದಾಗಿದ್ದಾರೆ ಎಂಬು ದು ಈಗ ಕೇಳಿ ಬಂದಿರುವ ಆರೋಪ.

Yagati Raghu Naadig Column: ಅಬಲೆಗೆ ಆತ್ಮಬಂಧುವಾದರಾ ಅವಧೂತರು..?

ಅಬಲೆಗೆ ಆತ್ಮಬಂಧುವಾದರಾ ಅವಧೂತರು..?

“ಅದೇನು ತಿಂಡಿ ಬೇಕು ಅಂತ ಹೇಳಿದ್ರೆ ನಾವೇ ಮಾಡಿಕೊಡೋಲ್ವೇ? ಗಂಡಸಿಗ್ಯಾಕೆ ಗೌರಿ ದುಃಖ? ನೀನ್ಯಾಕಪ್ಪಾ ಹೀಗೆ ಮೈ-ಕೈ ಮಸಿ ಮಾಡಿಕೊಳ್ಳೋಕೆ ಹೋದೆ..?" ಎಂಬ ವಾತ್ಸಲ್ಯಭರಿತ ದನಿಯುಕ್ಕಿಸಿದ ಗುರುಮಾತೆಯು, ಅವಧೂತರ ಮೈ-ಕೈಗಳಿಗೆ ಮೆತ್ತಿಕೊಂಡಿದ್ದ ಸೌದೆ ಒಲೆಯ ಮಸಿಯನ್ನು ತಮ್ಮ ಸೀರೆ ಸೆರಗಿನ ಅಂಚಿನಿಂದ ಒರೆಸಲು ಮುಂದಾದರು. “ಅಯ್ಯೋ ಬಿಡಮ್ಮಾ, ಪರವಾಗಿಲ್ಲಾ..." ಎಂದು ಅವಧೂತರು ಅಮ್ಮನಿಂದ ಬಿಡಿಸಿಕೊಳ್ಳುವ ವಿಫಲ ಯತ್ನದಲ್ಲಿದ್ದರು. ಆದರೆ ಅಮ್ಮ ಬಿಡಬೇಕಲ್ಲ?! ಮಗನು ಅಧ್ಯಾತ್ಮ ಸಿಂಹಾಸನದ ಸಾಮ್ರಾಟನೇ ಆಗಿದ್ದಿರಬಹುದು, ಆದರೆ ಅಮ್ಮನ ಕಣ್ಣಿನಲ್ಲಿ ಆತನಿನ್ನೂ ತುಂಟಪೋರನೇ, ಬಾಲಕೃಷ್ಣನೇ! ಅಷ್ಟೂ ಮಸಿಯನ್ನು ಒರೆಸಿದ ನಂತರ, ಅವಧೂತರನ್ನು ಒಂದೆಡೆ ನಿಲ್ಲಿಸಿ ಮಕ್ಕಳಿಗೆ ತೆಗೆಯುವಂತೆ ದೃಷ್ಟಿ ತೆಗೆದು ಕೈಬೆರಳುಗಳನ್ನು ಒಮ್ಮೆ ತಲೆಯ ಎರಡೂ ಬದಿಯಲ್ಲಿ ಮಡಿಸಿ ಪಟಗುಟ್ಟಿಸಿದರು ಗುರುಮಾತೆ. ವಾತ್ಸಲ್ಯದ ಖನಿಯೇ ಆಗಿದ್ದ ಅಮ್ಮನ ಕಾಲಿಗೆರಗಿದರು ಅವಧೂತರು.

Yagati Raghu Naadig Column: ಪೈಲಟ್-ಗೆಹ್ಲೋಟ್ ಕಾಳಗ

ಪೈಲಟ್-ಗೆಹ್ಲೋಟ್ ಕಾಳಗ

ರಾಜಸ್ಥಾನ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ಸಾಕಷ್ಟು ತಿಕ್ಕಾಟ ನಡೆದಿದ್ದು ನಿಮಗೆ ಗೊತ್ತೇ ಇದೆ. ಅವರಿಬ್ಬರ ನಡುವೆ ಘರ್ಷಣೆಯ ಕಿಡಿ ಹೊತ್ತಿಕೊಂಡು ಜುಲೈಗೆ ಐದು ವರ್ಷಗಳು ತುಂಬುತ್ತವೆ. ಇಷ್ಟಾಗಿಯೂ ಅಶೋಕ್ ಗೆಹ್ಲೋಟ್ ಅವರು ಈ ಚರ್ಚಾವಿಷಯವನ್ನು ಕೈಬಿಡಲು ಸಿದ್ಧರಿಲ್ಲವಂತೆ.

Yagati Raghu Naadig Column: ಪ್ರಾಮಾಣಿಕ ಪ್ರಾರ್ಥನೆಗೆ ಪರವಶನಾಗನೇ ಪರಮಾತ್ಮ ?

ಪ್ರಾಮಾಣಿಕ ಪ್ರಾರ್ಥನೆಗೆ ಪರವಶನಾಗನೇ ಪರಮಾತ್ಮ ?

ಶಿಷ್ಯರು ಕಟ್ಟಿಕೊಂಡಿದ್ದ ಮೌನಕೋಟೆಯನ್ನು ಮುರಿಯುವವರಂತೆ ಅವಧೂತರು, “ಏನ್ರಯ್ಯಾ, ಕಥೆ ಮುಂದುವರಿಸಿ ಅಂತ ಇಷ್ಟೂ ಹೊತ್ತು ಪೀಡಿಸುತ್ತಿದ್ದವರು ಈಗ ಸುಮ್ಮನಾಗಿ ಬಿಟ್ಟಿರಿಲ್ಲಾ? ಯಾರಾದ ರೊಬ್ಬರು ಕಥೆ ಹೇಳುವಾಗ, ಕೇಳುವವರು ‘ಹೂಂ... ಹೂಂ’ ಅಂತ ‘ಹೂಂ’ ಗುಟ್ಟುತ್ತಿರಬೇಕು, ಇಲ್ಲವೇ ‘ಆಮೇಲೆ... ಆಮೇಲೆ..?’ ಅಂತ ಕೇಳುತ್ತಿರಬೇಕು ಎಂಬುದನ್ನು ಮರೆತೇ ಬಿಟ್ಟಿರಾ?" ಎಂದು ತಮಾಷೆ ಮಾಡಿದರು.

Narada Sanchara: ಸಾಫ್ಟ್‌ ಕಂಪನಿ ಹಾರ್ಡ್ ಆದಾಗ...!!

ಸಾಫ್ಟ್‌ ಕಂಪನಿ ಹಾರ್ಡ್ ಆದಾಗ...!!

‘ಆರ್ಥಿಕ ಅಸ್ಥಿರತೆ’ ಎಂಬ ಪೆಡಂಭೂತವು ಕಂಪನಿಯೊಂದನ್ನು ಅಮರಿಕೊಂಡಾಗ, ಅದು ಕೈ ಗೊಳ್ಳುವ ಒಂದಿಷ್ಟು ‘ರಕ್ಷಣಾತ್ಮಕ ಆಟ’ಗಳ ಪೈಕಿ ಉದ್ಯೋಗ ಕಡಿತವೂ ಒಂದು. ಒಂದು ಕಡೆ ‘ಕೃತಕ ಬುದ್ಧಿಮತ್ತೆ’ (ಎಐ) ಎಂಬ ಮಾಯಾಂಗನೆ ಒಂದೊಂದೇ ಉದ್ಯೋಗ ವಲಯವನ್ನು ತನ್ನ ಮೋಹಜಾಲಕ್ಕೆ ಸೆಳೆಯು ತ್ತಿದ್ದರೆ, ಮತ್ತೊಂದೆಡೆ ಹೀಗೆ ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತವಾಗುತ್ತಿದೆ.

Yagati Raghu Naadig Column: ಹಾಲುಹುಣ್ಣಿಮೆಯಲ್ಲಿ ಹೊಮ್ಮಿತು ಹತಭಾಗ್ಯೆಯ ಕಥನ

ಹಾಲುಹುಣ್ಣಿಮೆಯಲ್ಲಿ ಹೊಮ್ಮಿತು ಹತಭಾಗ್ಯೆಯ ಕಥನ

ಹೊಸಶಿಷ್ಯರ ತವಕವನ್ನು ಕಂಡು ಮತ್ತೊಮ್ಮೆ ತುಂಟನಗೆ ನಕ್ಕ ಅವಧೂತರು ಕಥೆಯನ್ನು ಮುಂದುವರಿಸಲು ಉತ್ಸುಕರಾಗುತ್ತಿದ್ದಂತೆ, ಮೊಬೈಲ್ ಫೋನನ್ನು ಹಿಡಿದುಕೊಂಡೇ ಮನೆಯ ಹಜಾರದಿಂದ ಓಡಿಬಂದ ಅವಧೂತರ ಆಪ್ತ ಸಹಾಯಕರು, “ಬುದ್ಧೀ, ‘ನಳಪಾಕ’ನ ಫೋನು ಬಂದಿದೆ, ನಿಮ್ಮೊಂದಿಗೆ ಮಾತನಾಡಬೇಕಂತೆ" ಎಂದರು. ಆ ಮಾತಿಗೆ ಅವಧೂತರು, “ಅವನಿಗೆ ನಾಳೆ ಸಂಜೆ ಫೋನು ಮಾಡುವಂತೆ ತಿಳಿಸಿ ಸ್ವಾಮೀ" ಎಂದುತ್ತರಿಸಿದರು.

Yagati Raghu Naadig Column: ಕಳ್ಳಬೆಕ್ಕಿನ ಕಥಾನಕದಲ್ಲಿ ಕಾಲೂರಿದ ಖಾದಿ-ಖಾಕಿ...!

ಕಳ್ಳಬೆಕ್ಕಿನ ಕಥಾನಕದಲ್ಲಿ ಕಾಲೂರಿದ ಖಾದಿ-ಖಾಕಿ...!

“ನಮ್ಮ ಸಮಾಜದಲ್ಲಿ, ನಿಯೋಜಿತ ಕಾರ್ಯಭಾರದ ನೆರವೇರಿಕೆಗೆಂದು ಖಾಕಿ, ಖಾದಿ ಮತ್ತು ಕಾವಿ ವಸ್ತ್ರಗಳನ್ನು ಆಯ್ಕೆ ಮಾಡಿಕೊಂಡವರು ಭಾರಿ ಹುಷಾರಾಗಿರಬೇಕು; ಇವು ನಿರ್ದಿಷ್ಟ ಸ್ಥಾನಮಾನ ಅಥವಾ ಅಧಿಕಾರ ಭಾಗ್ಯವನ್ನು ದಕ್ಕಿಸಿಕೊಡುವ ದಿರಿಸುಗಳು ಎಂದೇ ಬಹುತೇಕರು ಭಾವಿಸಿದ್ದಾರೆ. ಒಂದು ಮಟ್ಟಕ್ಕೆ ಆ ಗ್ರಹಿಕೆ ನಿಜವೂ ಹೌದು.

Narada Sanchara: ಪಾತಾಳದಲ್ಲಿದ್ರೂ ಬಿಡಲ್ಲ!

Narada Sanchara: ಪಾತಾಳದಲ್ಲಿದ್ರೂ ಬಿಡಲ್ಲ!

ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷವು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಲಘಟ್ಟದಲ್ಲಿ ಸೇವೆ ಸಲ್ಲಿಸಿದ್ದ ಪ್ರಭಾಕರ ರಾವ್ ಅವರು, ಸಂಭಾವ್ಯ ಬಂಧನದಿಂದ ತಪ್ಪಿಸಿಕೊಳ್ಳಲು ಬರೋಬ್ಬರಿ ಒಂದು ವರ್ಷದವರೆಗೆ ಅಮೆರಿಕದಲ್ಲಿ ಠಿಕಾಣಿ ಹೂಡಿದ್ದರಂತೆ. ಈಗ ತನಿಖೆಯನ್ನು ಎದುರಿಸಲೇ ಬೇಕು ದೇಶದ ಸರ್ವೋಚ್ಚ ನ್ಯಾಯಾಲಯವು ಸೂಚಿಸಿರುವುದರಿಂದ ಪ್ರಭಾಕರ ರಾವ್ ಅವರು ತಲೆಬಾಗಲೇಬೇಕಾಗಿ ಬಂದಿದೆ

Narada Sanchara: ಎಲ್ಲಾ ಇದ್ದೂ ಏನೂ ಆಗ್ಲಿಲ್ಲ..!

ಎಲ್ಲಾ ಇದ್ದೂ ಏನೂ ಆಗ್ಲಿಲ್ಲ..!

ಪಕ್ಷದ ಅಧಿನಾಯಕ ಮತ್ತು ರಾಜ್ಯದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಈ ಸಭೆಯ ನೇತೃತ್ವ ವಹಿಸಿ ಚೆನ್ನಾಗಿಯೇ ನಡೆಸಿದರಂತೆ; ಇದಕ್ಕೂ ಮೊದಲು ಅವರು ರೋಡ್‌ಷೋನಲ್ಲಿ ಉತ್ಸಾಹ ಭರಿತರಾಗಿ ಪಾಲ್ಗೊಂಡು ಬರೋಬ್ಬರಿ 19 ಕಿಲೋಮೀಟರ್‌ನಷ್ಟು ನಡೆದುಕೊಂಡು ಬಂದರಂತೆ ಹಾಗೂ ಅದರ ನಡುವೆಯೇ ಬಹಳ ವರ್ಷಗಳ ನಂತರ ತಮ್ಮ ಸೋದರ ಎಂ.ಕೆ.ಅಳಗಿರಿಯವರ ನೆಲೆಗೂ ಒಂದು ‘ಫ್ಲೈಯಿಂಗ್ ವಿಸಿಟ್’ ಕೊಟ್ಟರಂತೆ.

Loading...