ಪ್ಯಾರಿಸ್ನಲ್ಲಿ ಕನ್ನಡದ ಕಂಪನ್ನು ಸೂಸಿದ ‘ವಿಶ್ವವಾಣಿ’
ಕನ್ನಡ ರಾಜ್ಯೋತ್ಸವದ ಸಂಭ್ರಮದ ಈ ತಿಂಗಳಿನಲ್ಲಿ ದೂರದ ಪ್ಯಾರಿಸ್ನಲ್ಲಿ ಕಸ್ತೂರಿ ಕನ್ನಡವು ತನ್ನ ಕಂಪನ್ನು ಸೂಸಿದೆ. ಬಹುತೇಕ ಪ್ರವಾಸಿಗರ ‘ಕನಸಿನ’ ನಗರವಾಗಿರುವ ಪ್ಯಾರಿಸ್ಗೆ ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ನೇತೃತ್ವದ 46 ಜನರ ನಿಯೋಗವು ತೆರಳಿ, ಕರ್ನಾಟಕದ ಪತಾಕೆಯನ್ನು ಹಾರಿಸಿದೆ.