ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಶ್ವವಾಣಿ ವಿಶೇಷ

Raghava Sharma Nidle Column: ಸುಪ್ರೀಂಕೋರ್ಟಿನಲ್ಲಿ ವಜಾಗೊಂಡದ್ದು ಸರಕಾರದ ಕಣ್ತಪ್ಪಿದ್ದು ಹೇಗೆ ?

ಸುಪ್ರೀಂಕೋರ್ಟಿನಲ್ಲಿ ವಜಾಗೊಂಡದ್ದು ಸರಕಾರದ ಕಣ್ತಪ್ಪಿದ್ದು ಹೇಗೆ ?

ಇಡೀ ಪ್ರಕರಣದಲ್ಲಿ ಎಸ್‌ಐಟಿಗೆ ಷಡ್ಯಂತ್ರದ ವಾಸನೆ ಬಡಿದ ಪರಿಣಾಮ, ಚಿನ್ನಯ್ಯನ ಹಿಂದೆ-ಮುಂದೆ ಇದ್ದ ಎಲ್ಲರನ್ನೂ ವಿಚಾರಣೆಗೊಳಪಡಿಸಿ, ಒಳಸಂಚಿನ ಜಾಲವನ್ನು ಬೇಧಿಸಲಾಗುತ್ತಿದೆ. ಕಳೆದೆರಡೂವರೆ ತಿಂಗಳಲ್ಲಿ ಬುರುಡೆ ಕೇಸು ದೇಶದಲ್ಲಿ ಸಂಚಲನ ಸೃಷ್ಟಿಸಿದರೂ, ಸುಪ್ರೀಂ ಕೋರ್ಟಿ ನದ ಮಹತ್ವದ ಬೆಳವಣಿಗೆಯನ್ನು 140 ದಿನಗಳ ಕಾಲ ಮುಚ್ಚಿಟ್ಟಿದ್ದೇಕೆ ಎನ್ನುವುದೇ ದಿಗ್ಭ್ರಮೆ ಮೂಡಿಸಿದೆ.

ಭೈರಪ್ಪ ಎಂಬ ಬೋಧಿವೃಕ್ಷದ ಕೆಳಗೆ ಕುಳಿತ ಅದ್ಭುತ ಕ್ಷಣ

ಭೈರಪ್ಪ ಎಂಬ ಬೋಧಿವೃಕ್ಷದ ಕೆಳಗೆ ಕುಳಿತ ಅದ್ಭುತ ಕ್ಷಣ

ಎತ್ತರದ ವ್ಯಕ್ತಿತ್ವ ಹೊಂದಿದ್ದ ಅಪರೂಪದ ಸಾಹಿತಿ ಎಸ್.ಎಲ್.ಭೈರಪ್ಪನವರ ಭೇಟಿಯಾದ ಅಮೂಲ್ಯ ಕ್ಷಣವಿದು. ಹೌದು 2023ರ ಜೂನ್ 7ರಂದು ನನ್ನ ಹುಟ್ಟುಹಬ್ಬ. ಇದೇ ಒಂದು ಸಣ್ಣ ಕಾರಣವಿಟ್ಟು ಕೊಂಡು ಈ ಬಾರಿ ನನ್ನಿಷ್ಟದ ಸಾಹಿತಿ ಎಸ್.ಎಲ್.ಭೈರಪ್ಪನವರನ್ನು ಭೇಟಿಯಾಗಿ ಅವರ ಜೊತೆ ಮಾತನಾಡಬೇಕೆಂಬ ಬಯಕೆ ಹುಟ್ಟಿಕೊಂಡಿತ್ತು. ವಾರದ ಮೊದಲೇ ಆಪ್ತರಿಂದ ಭೈರಪ್ಪನವರ ಮನೆಯ ಲ್ಯಾಂಡ್‌ಲೈನ್ ನಂಬರ್ ಪಡೆದು ಒಂದು ದಿನ ಕರೆ ಮಾಡಿದ್ದೆ.

ಭಟ್ಟರ ಮನೆಯಲ್ಲಿ ಕೊನೆ ದಿನಗಳನ್ನು ಕಳೆದ ಭೈರಪ್ಪ

ಭಟ್ಟರ ಮನೆಯಲ್ಲಿ ಕೊನೆ ದಿನಗಳನ್ನು ಕಳೆದ ಭೈರಪ್ಪ

ಮೈಸೂರಿನಿಂದ ಬೆಂಗಳೂರಿಗೆ ಆಗಮಿಸಿದ ಭೈರಪ್ಪ ನವರು ಕೆಲ ದಿನಗಳ ಕಾಲ ಭಟ್ಟರ ನಿವಾಸ ದಲ್ಲಿಯೇ ತಂಗಿದ್ದರು. ಬಳಿಕ ಭೈರಪ್ಪನವರ ಖಾಸಗಿ ತನಕ್ಕೆ ಧಕ್ಕೆಯಾಗಬಾರದು ಎನ್ನುವ ಕಾರಣಕ್ಕೆ ವಿಶ್ವೇಶ್ವರ ಭಟ್ಟರು, ತಮ್ಮ ಫ್ಲ್ಯಾಟ್ ಒಂದನ್ನು ಭೈರಪ್ಪನವರಿಗೆ ಬಿಟ್ಟುಕೊಟ್ಟರು. ಆ ಸಮಯದಲ್ಲಿ ‘ನೀವು ನನ್ನನ್ನು ಔಟ್ ಹೌಸ್‌ನಲ್ಲಿ ಉಳಿಸುತ್ತೀರಾ ಎಂದುಕೊಂಡಿದ್ದೆ. ಆದರೆ ಮನೆಯನ್ನೇ ಬಿಟ್ಟು ಕೊಟ್ಟಿದ್ದೀರಾ’ ಎಂದು ಭಟ್ಟರ ಬಗ್ಗೆ ಅಭಿಮಾನದ ಮಾತುಗಳನ್ನು ಭೈರಪ್ಪನವರು ಆಡಿದ್ದರು.

ಬದುಕಿನಿಂದಲೇ ಹುಟ್ಟಿಕೊಂಡ ಗೃಹಭಂಗ

ಬದುಕಿನಿಂದಲೇ ಹುಟ್ಟಿಕೊಂಡ ಗೃಹಭಂಗ

ಗೃಹಭಂಗ ಶುರುವಾಗುವುದೇ ಜಾವಗಲ್ಲಿನ 13 ವರ್ಷದ ಗಂಗಮ್ಮ 45 ವರ್ಷದ ರಾಮಣ್ಣನವರನ್ನು ಮದುವೆಯಾಗುವು ದರೊಂದಿಗೆ. ಸಂಸ್ಕಾರವೇ ಇಲ್ಲದ ಈಕೆ ಕೈಹಿಡಿದ ಗಳಿಗೆಯಲ್ಲೇ ಮೂರು ಊರಿನ ಶ್ಯಾನುಭೋಗಿಕೆ, 6 ಎಕರೆ ಗದ್ದೆ, 8 ಎಕರೆ ಹೊಲ, ಮುನ್ನೂರು ತೆಂಗಿನ ಮರದ ಒಡೆಯನಾಗಿದ್ದ ರಾಮಣ್ಣನವರ ಮನೆ ಒಡೆಯುವುದಕ್ಕೂ ಆರಂಭವಾಗುತ್ತದೆ.

Shashidhara Halady Column: ಒಂದು ತಲೆಮಾರಿನ ಓದುಗರ ಅಭಿರುಚಿ ಹೆಚ್ಚಿಸಿದ ಸಾಹಿತಿ

ಒಂದು ತಲೆಮಾರಿನ ಓದುಗರ ಅಭಿರುಚಿ ಹೆಚ್ಚಿಸಿದ ಸಾಹಿತಿ

ಭೈರಪ್ಪನವರ ಬಾಲ್ಯದ ದಟ್ಟ ಅನುಭವಗಳ ಹಂದರ ಹೊಂದಿರುವ ‘ಗೃಹಭಂಗ’ದ ಕುರಿತು ಈಗಾಗಲೇ ಸಾಕಷ್ಟು ವಿಶ್ಲೇಷಣೆಗಳು ನಡೆದಿವೆ. ಆದರೆ, ಪೂರ್ಣ ಪ್ರಮಾಣದಲ್ಲಿ ‘ಗೃಹಭಂಗ’ ವನ್ನು ವಿಶ್ಲೇಷಿಸುವ, ಚರ್ಚಿಸುವ ಕೆಲಸಕ್ಕೆ ಇನ್ನೂ ಅವಕಾಶವಿದೆ ಎಂದೇ ನನ್ನ ಅನಿಸಿಕೆ. ನಮ್ಮ ರಾಜ್ಯದ ಬಯಲುಸೀಮೆಯ (ಚನ್ನರಾಯಪಟ್ಟಣ ತಾಲೂಕು) ಹಳ್ಳಿಯ ಸಮತೋಲಿತ ಜೀವನವು, 1920-40ರ ದಶಕದ ಅವಧಿಯಲ್ಲಿ ಹೇಗೆ ನಲುಗಿತು, ಛಿದ್ರವಾಯಿತು ಎಂಬುದರ ಚಿತ್ರಣ ‘ಗೃಹಭಂಗ’ ದಲ್ಲಿದೆ.

Interview: ತವರಿನ ಬವಣೆಗೆ ಮಿಡಿದ ಭೈರಪ್ಪ ಹೃದಯ

ತವರಿನ ಬವಣೆಗೆ ಮಿಡಿದ ಭೈರಪ್ಪ ಹೃದಯ

ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ ಕಳಚಿ ಬಿದ್ದಿದೆ. ಕನ್ನಡದ ಹಿರಿಯ ಕಾದಂಬರಿ ಕಾರ, ಸರಸ್ವತಿ ಸಮ್ಮಾನ್, ಪದ್ಮಭೂಷಣ ಪುರಸ್ಕೃತ ಎಸ್‌ಎಲ್ ಭೈರಪ್ಪನವರು ಬುಧವಾರ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಕೊನೆಯದಾಗಿ ಭೈರಪ್ಪನವರು ವಿಶ್ವವಾಣಿ ಸಮೂಹಕ್ಕೆ ಸಂದರ್ಶನ ನೀಡಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು

ಅಕ್ಷರ ಜೀವಿಯ ಸಾಂಗತ್ಯ ನನ್ನ ಜೀವನದ ಸುವರ್ಣ ಗಳಿಗೆ

ಅಕ್ಷರ ಜೀವಿಯ ಸಾಂಗತ್ಯ ನನ್ನ ಜೀವನದ ಸುವರ್ಣ ಗಳಿಗೆ

ನಮ್ಮ ಜೀವನದಲ್ಲಿ ಎದುರಾದ ಅದೆಷ್ಟೋ ಸಂದಿಗ್ಧ ಪರಿಸ್ಥಿತಿಯಲ್ಲಿ ಭೈರಪ್ಪನವರ ಕಾದಂಬರಿ ಯಲ್ಲಿನ ಪಾತ್ರಗಳ ಸಮಸ್ಯೆಗಳು ನೆನಪಾಗುತ್ತವೆ. ಬಾಲ್ಯದಲ್ಲಿ ಓದುಗ ಪ್ರೇಮಿಯಾಗಿ ಅವರ ಕಾದಂಬರಿಯನ್ನು ಓದಿದ್ದೆ. ಆದರೆ ಅವರ ಕೊನೆಯ ಎಂಟು ತಿಂಗಳು ಅವರೊಂದಿಗೆ ಕಳೆಯುವ, ನಮ್ಮ ಮನೆಯಲ್ಲಿಯೇ ಅವರ ಸೇವೆಯನ್ನು ಮಾಡುವ ಭಾಗ್ಯ ದೊರಕುತ್ತದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ.

6 ವರ್ಷದಲ್ಲಿ 14849 ಮಕ್ಕಳ ಅಪಹರಣ

6 ವರ್ಷದಲ್ಲಿ 14849 ಮಕ್ಕಳ ಅಪಹರಣ

2020ರಿಂದ ಈವರೆಗೂ ರಾಜ್ಯದಲ್ಲಿ 14,878 ಮಕ್ಕಳು ನಾಪತ್ತೆ ಪ್ರಕರಣ ದಾಖಲಾಗಿದ್ದು, ಈ ಪೈಕಿ 13,542 ಪ್ರಕರಣಗಳಲ್ಲಿ ಮಕ್ಕಳು ಪೋಷಕರ ಮಡಿಲಿಗೆ ಸೇರಿದ್ದಾರೆ. ಬಾಕಿ 1336 ಮಕ್ಕಳು ನಿಗೂಢವಾಗಿದ್ದಾರೆ. ಅಪಹರಣಕ್ಕೆ ಒಳಗಾದ 10792 ಹೆಣ್ಣು ಮಕ್ಕಳ ಪೈಕಿ 1003 ಕಾಣೆಯಾಗಿದ್ದಾರೆ. 4086 ಗಂಡು ಮಕ್ಕಳ ಪೈಕಿ ೩೩೩ ಮಕ್ಕಳು ನಿಗೂಢವಾಗಿದ್ದಾರೆ.

ಬಿಪಿಎಲ್ ಕಾರ್ಡ್ ಇಲ್ದಿದ್ರೆ ಎಂಆರ್‌ʼಐ ಸ್ಕ್ಯಾನ್‌ ಹೊರೆ

ಬಿಪಿಎಲ್ ಕಾರ್ಡ್ ಇಲ್ದಿದ್ರೆ ಎಂಆರ್‌ʼಐ ಸ್ಕ್ಯಾನ್‌ ಹೊರೆ

ಒಟ್ಟು 29 ಸರಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯಗಳಿವೆ, ಸರಕಾರಿ- ಖಾಸಗಿ ಮಾದರಿಯಲ್ಲಿ ಯೋಜನೆ ಜಾರಿಯಾಗಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆ ಅನ್ವಯ ರಾಜ್ಯ ಸರಕಾರ, ಜಿಲ್ಲಾ ಆಸ್ಪತ್ರೆ ಗಳಲ್ಲಿ ನಡೆಸುತ್ತಿದ್ದ ಸಿಟಿ ಹಾಗೂ ಎಂಆರ್‌ಐ ಸ್ಕ್ಯಾನ್‌ಗಳು ನ್ನು ದುಬಾರಿಯಾಗಲಿವೆ.

Raghav Sharma Nidle Column: ಎನ್‌ಡಿಎಗೆ ತಲೆನೋವಾದ ಮೋದಿ-ನಿತೀಶರ ಹಳೆಯ ಮಿತ್ರ

ಎನ್‌ಡಿಎಗೆ ತಲೆನೋವಾದ ಮೋದಿ-ನಿತೀಶರ ಹಳೆಯ ಮಿತ್ರ

35 ವರ್ಷಗಳಿಂದ ಬಿಹಾರದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿರುವ ಕಾಂಗ್ರೆಸ್ ಬಗ್ಗೆ ಪ್ರಶಾಂತ್ ಕಿಶೋರ್ ತಲೆಕೆಡಿಸಿಕೊಂಡಂತಿಲ್ಲ. ಅವರ ಮುಖ್ಯ ಟಾರ್ಗೆಟ್ ಸಿಎಂ ನಿತೀಶ್ ಕುಮಾರ್ ಮತ್ತು ಸ್ಥಳೀಯ ಬಿಜೆಪಿ ನಾಯಕರೇ ಆಗಿದ್ದಾರೆ. ಭ್ರಷ್ಟಾಚಾರ ವಿಷಯದಲ್ಲಿ ಬಿಜೆಪಿಯ ಸ್ಥಳೀಯ ಪ್ರಭಾವಿ ನಾಯಕರ ನಿದ್ದೆಗೆಡಿಸಿರುವ ಪಿಕೆ, ಎನ್‌ಡಿಎ ಮತಬ್ಯಾಂಕ್ ಬೇಧಿಸುವ ಪಕ್ಕಾ ಲೆಕ್ಕಾಚಾರ ಹಾಕಿ ಕೊಂಡಂತಿದೆ.

ಮೋದಿ: ಬಲಿಷ್ಠ ಮತ್ತು ಸ್ವಾವಲಂಬಿ ಭಾರತದ ಶಿಲ್ಪಿ

ಮೋದಿ: ಬಲಿಷ್ಠ ಮತ್ತು ಸ್ವಾವಲಂಬಿ ಭಾರತದ ಶಿಲ್ಪಿ

ಇದೇ ಮಹತ್ತರ ದಿನದಂದು ನಮ್ಮ ರಾಷ್ಟ್ರ ಮತ್ತು ಜನರ ಸೇವೆಗೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟ ಮುತ್ಸದ್ಧಿ, ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಜನಿಸಿದ ದಿನ. ಇದು ಮೋದಿ ಅವರ 75ನೇ ಹುಟ್ಟುಹಬ್ಬವಾಗಿರುವುದರಿಂದ ಇನ್ನಷ್ಟು ಮಹತ್ವದ್ದಾಗಿದೆ. 140 ಕೋಟಿ ಭಾರತೀ ಯರ ಪರವಾಗಿ, ನಾನು ಮೋದಿಜಿಯವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ನವ ಭಾರತದ ನಿರ್ಮಾತೃ ಪ್ರಧಾನಿ ಮೋದಿ

ನವ ಭಾರತದ ನಿರ್ಮಾತೃ ಪ್ರಧಾನಿ ಮೋದಿ

ನವ ಭಾರತದ ನಿರ್ಮಾಣ ಇದು ಒಂದು ವಿಚಾರವಾಗಿ ಬಹಳ ವರ್ಷ ಭಾರತದ ನಾಗರಿಕರಲ್ಲಿ ಮೂಡಿತ್ತು. ನವ ಚಿಂತನೆಯ ಪ್ರಗತಿಯ ಅತ್ಯಂತ ಪ್ರಬಲ ಆರ್ಥಿಕತೆ, ಸಾಮಾಜಿಕ, ಸಮಾನತೆ, ಸರ್ವ ಜನಾಂಗದ ಏಳಿಗೆ, ಎಲ್ಲ ರಂಗದಲ್ಲೂ ಭಾರತ ನಂಬರ್ ಒನ್ ಇರಬೇಕು. ಬಡತನ, ಹಸಿವು, ನಿರುದ್ಯೋಗ ಸಮಸ್ಯೆ, ಸಂಪೂರ್ಣವಾಗಿ ಹೊಡೆದೋಡಿಸಬೇಕೆನ್ನುವ ಕಲ್ಪನೆ ನವಭಾರತದ ಕಲ್ಪನೆ.

ಕಾರ್ಯಕರ್ತರ ಪೋಷಣೆ, ಪಕ್ಷದ ಸಂಘಟನೆಗೆ ಒತ್ತು

ಕಾರ್ಯಕರ್ತರ ಪೋಷಣೆ, ಪಕ್ಷದ ಸಂಘಟನೆಗೆ ಒತ್ತು

ಒಂದು ಸಂಸ್ಥೆಯು ಎಲ್ಲ ರೀತಿಯಲ್ಲಿ ವೈಭವೋಪೇತವಾಗಿ ರೂಪುಗೊಳ್ಳುವಲ್ಲಿ ಅದರ ಕಾರ್ಯ ಕರ್ತರ ಅಪಾರ ನಿಷ್ಠೆ ಮತ್ತು ಶ್ರದ್ಧೆ ಅಗತ್ಯವಾಗಿರುತ್ತದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನ ಮತ್ತು ಅವರ ಸಾಂಸ್ಥಿಕ ದೃಷ್ಟಿಕೋನಕ್ಕೆ ಮಾರ್ಗದರ್ಶಿ ಮಂತ್ರವಾಗಿದೆ. ಪ್ರಧಾನ ಮಂತ್ರಿ ಮೋದಿ ಯವರು ಕಾರ್ಯಕರ್ತರನ್ನು ಎಂದಿಗೂ ಸಂಘಟನೆಯ ಕೇಂದ್ರ ಬಿಂದುವೆಂದು ಪರಿಗಣಿಸಿದ್ದಾರೆ.

ದೇಶ ಕಂಡ ದಕ್ಷತೆಯ ಆಡಳಿತಗಾರ

ದೇಶ ಕಂಡ ದಕ್ಷತೆಯ ಆಡಳಿತಗಾರ

ಶಿಸ್ತು, ಬದ್ಧತೆ, ಸಂಘಟನೆಯನ್ನು ತಪ್ಪಸ್ಸಿನ ರೀತಿಯಲ್ಲಿ ನೋಡುವ ಹಾಗೂ ಮಾತೃನೆಲದ ಮಹತ್ವ ತಿಳಿಸಿಕೊಡುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ಸಂಪರ್ಕಕ್ಕೆ ಬರುವ ದೇಶಪ್ರೇಮಿ ಯುವ ಜನರಿಗೆ ತಪೋಭೂಮಿಯಾಗಿದೆ. ಇಂಥ ಪುಣ್ಯಭೂಮಿಯಲ್ಲಿ ಬೆಳೆದ ಅಪರೂಪದ ಸಂಘಟನಾ ಶಿಲ್ಪಿ ಹಾಗೂ ಮಹಾನ್ ಶಕ್ತಿ ನರೇಂದ್ರ ಮೋದಿಯವರು.

Former Goal Keeper P R Brijesh with Vishwavani: ಒಲಿಂಪಿಕ್ಸ್‌ ಕ್ರೀಡಾಕೂಟದ ತಂಡದಲ್ಲಿ ಆಟಗಾರನಾಗಿದ್ದು ನನ್ನ ಅದೃಷ್ಠ

ಒಲಿಂಪಿಕ್ಸ್‌ ಕ್ರೀಡಾಕೂಟದ ತಂಡದಲ್ಲಿ ಆಟಗಾರನಾಗಿದ್ದು ನನ್ನ ಅದೃಷ್ಠ

ಭಾರತ ಹಾಕಿ ತಂಡ ಒಟ್ಟು 8 ಬಾರಿ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರೂ ಐಪಿಎಲ್ ಸೇರಿದಂತೆ ಇತರ ಕ್ರಿಕೆಟ್‌ನಿಂದಾಗಿ ಹಾಕಿ ಕ್ರೀಡೆಗೆ ಸಿಗಬೇಕಾದ ರಾಷ್ಟ್ರ ಮಾನ್ಯತೆ ಇನ್ನೂ ಸಿಕ್ಕಿಲ್ಲ. ಇತ್ತೀಚೆಗೆ ಮುಗಿದಿದ್ದ ‘ಸುಬ್ರೋತೋ ಕಪ್ ಸಬ್ ಜೂನಿಯರ್ ಫುಟ್ಬಾಲ್ ಟೂರ್ನಿ’ಯ ಫೈನಲ್ ಪಂದ್ಯವನ್ನು ವೀಕ್ಷಿಸಲು ಬೆಂಗಳೂರಿಗೆ ಆಗಮಿಸಿದ್ದ ಭಾರತ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ‘ವಿಶ್ವವಾಣಿ’ ಜೊತೆ ಮಾತನಾಡಿದರು.

Vishwavani Special: ಬಿಜೆಪಿಯಲ್ಲಿ ಮುಗಿಯದ ಮುನಿಸು

Vishwavani Special: ಬಿಜೆಪಿಯಲ್ಲಿ ಮುಗಿಯದ ಮುನಿಸು

ರಾಜ್ಯ ಬಿಜೆಪಿಯೊಳಗಿನ ಗುಂಪುಗಾರಿಕೆ ಇನ್ನೂ ಇದೆ. ಇದರಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ, ತಟಸ್ಥರ ಬಣ, ಅತೃಪ್ತರ ಬಣ, ಪ್ರತಿಪಕ್ಷ ನಾಯಕ ಅಶೋಕ ಬಣದ ಜತೆಗೆ ಮತ್ತೊಂದು ಬೆಂಗಳೂರು ಬಣಗಳಾಗಿ ವಿಂಗಡಣೆಯಾಗಿ ಪಕ್ಷದಲ್ಲಿ ಒಗ್ಗಟ್ಟು ಕಾಣಿಸಿಕೊಳ್ಳದೆ, ಕಾಂಗ್ರೆಸ್ ಸರಕಾರದ ವಿರುದ್ಧ ಯಾವುದೇ ಸಂಘಟಿತ ಹೋರಾಟ ಕಾಣುತ್ತಿಲ್ಲ. ಮಾತ್ರವಲ್ಲದೇ, ಯಾವ ಹೋರಾಟಕ್ಕೂ ತಾರ್ಕಿಕ ಅಂತ್ಯ ಸಿಗುತ್ತಿಲ್ಲ ಎಂಬ ಮಾತುಗಳು ಆ ಪಕ್ಷದ ಕಾರ್ಯಕರ್ತರಲ್ಲೇ ಗಂಭೀರ ಚರ್ಚೆಗಳು ನಡೆಯುತ್ತಿದೆ.

ಡಿಜಿಟಲ್‌ ಪಾವತಿ ಸರಾಗಗೊಳಿಸಿದ ಯುಪಿಐ

ಭಾರತದಲ್ಲಿನ ಡಿಜಿಟಲ್‌ ಪಾವತಿಯಲ್ಲಿ ಯುಪಿಐ ಪಾಲು 85%

ಭಾರತದಲ್ಲಿ ನಡೆಯುತ್ತಿರುವ ಒಟ್ಟಾರೆ ಡಿಜಿಟಲ್ ಪಾವತಿಯಲ್ಲಿ ‘ಯುಪಿಐ’ನ ಪಾಲು ಶೇ.85ರಷ್ಟು ದೊಡ್ಡ ಪ್ರಮಾಣದ್ದಾಗಿದೆ. ಜನರಿಗೆ ಮತ್ತು ವರ್ತಕರಿಗೆ ನಿತ್ಯದ ವ್ಯಾಪಾರ ವಹಿವಾಟಿನಲ್ಲಿನ ಹಣ ಪಾವತಿಯನ್ನು ‘ಡಿಜಿಟಲ್ ಪಾವತಿ’ ವ್ಯವಸ್ಥೆ ಬಲು ಸರಾಗಗೊಳಿಸಿದೆ. ಅದರಲ್ಲೂ ‘ಯುಪಿಐ’ ಸೌಲಭ್ಯ ಜಾರಿ ಬಳಿಕವಂತೂ ಡಿಜಿಟಲ್ ಪಾವತಿ ವ್ಯವಸ್ಥೆ ಅತ್ಯಂತ ವೇಗಗೊಂಡಿದೆ, ಬಹಳ ವಿಶ್ವಾಸಾರ್ಹ ವೆನಿಸಿದೆ.

POCSO Act: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 13,719 ಫೋಕ್ಸೊ ಪ್ರಕರಣ

POCSO Act: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 13,719 ಫೋಕ್ಸೊ ಪ್ರಕರಣ

18 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗುವುದು ಕಂಡುಬಂದರೆ, ಅಂತಹವರ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆಯಡಿ (ಪೋಕ್ಸೋ) ಪ್ರಕರಣ ದಾಖಲಾಗ ಲಿದೆ. ಈ ಸಂಬಂಧ 2022ರಿಂದ ಈ ವರ್ಷದ ಜುಲೈ ಅಂತ್ಯಕ್ಕೆ ರಾಜ್ಯದಲ್ಲಿ 13,719 ಪ್ರಕರಣಗಳು ದಾಖಲಾ ಗಿವೆ.

Chinnaswamy Stadium: ಯಾರದೋ ತಪ್ಪಿಗೆ ನನಗೇಕೆ ಈ ಶಿಕ್ಷೆ ?

Chinnaswamy Stadium: ಯಾರದೋ ತಪ್ಪಿಗೆ ನನಗೇಕೆ ಈ ಶಿಕ್ಷೆ ?

ಐಪಿಎಲ್ ಟ್ರೋಫಿ ಗೆದ್ದು ಬೆಂಗಳೂರಿಗೆ ಕೀರ್ತಿ ತಂದ ಎಲ್ಲಾ ಆಟಗಾರರನ್ನು ಬೆಂಗಳೂರಿನಲ್ಲಿ ಸತ್ಕರಿಸುವುದು ಕರ್ತವ್ಯವೂ ಆಗಿತ್ತು. ಆದರೆ ಆರ್‌ಸಿಬಿ, ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ಮತ್ತು ರಾಜ್ಯ ಸರಕಾರ ಜಂಟಿಯಾಗಿ ದಿಢೀರನೆ ಆ ಕಾರ್ಯಕ್ರಮ ಏರ್ಪಡಿಸಿದ್ದರಿಂದ, 11 ಮಂದಿಯ ಸಾವಿಗೆ ಕಾರಣವಾದ ಭಯಾನಕ ಕಾಲ್ತುಳಿತದ ಘಟನೆ ಇತಿಹಾಸದಲ್ಲೇ ಕಪ್ಪುಚುಕ್ಕೆ ಎನಿಸಿತು.

Raghava Sharma Nidle Column: ರಾಜಕೀಯ ಶುದ್ಧೀಕರಣವೋ, ವಿಪಕ್ಷಗಳ ವಿರುದ್ಧ ದಂಡಾಸ್ತ್ರವೋ ?

ರಾಜಕೀಯ ಶುದ್ಧೀಕರಣವೋ, ವಿಪಕ್ಷಗಳ ವಿರುದ್ಧ ದಂಡಾಸ್ತ್ರವೋ ?

ತಮಿಳುನಾಡಿನ ಡಿಎಂಕೆ ಸರಕಾರದಲ್ಲಿ ಸಚಿವರಾಗಿದ್ದ ಸೆಂಥಿಲ್ ಬಾಲಾಜಿ ಭ್ರಷ್ಟಾಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದರೂ, ಅವರನ್ನು ಸಚಿವ ಸ್ಥಾನದಿಂದ ಸಿಎಂ ಎಂ.ಕೆ. ಸ್ಟ್ಯಾಲಿನ್ ತೆಗೆದುಹಾಕಿರಲಿಲ್ಲ. ಹೀಗಾಗಿ, ಇದನ್ನು ತಡೆಯಲು ಹೊಸ ಕಾನೂನು ತರುವ ಮೂಲಕ, ‘ರಾಜಕೀಯ ನೈತಿಕತೆ’ಯ ಸಂದೇಶ ಸಾರಲು ಬಿಜೆಪಿ ಯತ್ನಿಸಿದೆ.

ಏನೇ ಆದರೂ ಮುಸುಕುಧಾರಿಗೆ ಸಂಕಷ್ಟ ?

ಧರ್ಮಸ್ಥಳ ಅನಾಮಧೇಯ ವ್ಯಕ್ತಿಯ ಬುರುಡೆ ಪ್ರಕರಣ

ಇಷ್ಟು ವರ್ಷಗಳ ಕಾಲ ಅದನ್ನು ಬಹಿರಂಗಪಡಿಸದೇ ಇದಿದ್ದು ಹಾಗೂ ಶವವನ್ನು ಹೂತಿಡುವ ಮೂಲಕ ಕೊಲೆಗೆ ಸಹಕರಿಸಿದ್ದಾನೆ ಎನ್ನುವ ಆರೋಪದಲ್ಲಿ ಶಿಕ್ಷೆ ವಿಧಿಸಬಹುದು. ಇದರೊಂದಿಗೆ ಆರಂಭದಲ್ಲಿ ನ್ಯಾಯಾಧೀಶರ ಮುಂದೆ ಹಾಜರಾಗುವ ಸಮಯದಲ್ಲಿ ಬುರುಡೆಯೊಂದನ್ನು ಹಿಡಿದು ಕೊಂಡು ಹೇಳಿಕೆ ನೀಡಿದ್ದ. ಇದೀಗ ಎಸ್‌ಐಟಿ ಅಧಿಕಾರಿಗಳು ಈ ಬುರುಡೆಗೂ ಈ ವ್ಯಕ್ತಿಗೂ ಸಂಬಂಧ ವೇನು ಎನ್ನುವ ತನಿಖೆಯನ್ನು ಆರಂಭಿಸುತ್ತಾರೆ.

ಗುಂಡಿ ಅಗೆದಿದ್ದು ಸಾಕು, ಬರ್ರಿ ವಾಪಸ್‌ !

ಗುಂಡಿ ಅಗೆದಿದ್ದು ಸಾಕು, ಬರ್ರಿ ವಾಪಸ್‌ !

ನ್ಯಾಯಾಧೀಶರ ಮುಂದೆ ಅನಾಮಿಕ ವ್ಯಕ್ತಿ ನೀಡಿದ್ದ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ರಚಿಸಿದ್ದ ವಿಶೇಷ ತನಿಖಾ ತಂಡವು, ಕಳೆದ 15 ದಿನಗಳಿಂದ ವ್ಯಕ್ತಿ ತೋರಿಸಿದ ಜಾಗದಲ್ಲೆಲ್ಲ ಅಗೆದರೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಆದರೆ ದಿನದಿಂದ ದಿನಕ್ಕೆ ರಾಜ್ಯ ಸರಕಾರ ಹಾಗೂ ಎಸ್‌ಐಟಿ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿರುವುದರಿಂದ ಎಸ್‌ಐಟಿಯನ್ನು ವಿಸರ್ಜನೆ ಮಾಡಲು ಸರಕಾರ ತೀರ್ಮಾನಿಸಿದೆ.

ಹೊಸ ಹುದ್ದೆಯಲ್ಲಿ ಹೊಂದಾಣಿಕೆ: ನೌಕಾಪಡೆಯ ನಿವೃತ್ತರಾದ ವಿಜಯ್ ಸುಬ್ರಮಣಿಯನ್ ಅಮೆಜಾನ್ ನಲ್ಲಿ ತನ್ನ ವೃತ್ತಿ ರೂಪಿಸಿಕೊಂಡಿದ್ದು ಹೇಗೆ?

ವಿಜಯ್ ಸುಬ್ರಮಣಿಯನ್ ಅಮೆಜಾನ್ ನಲ್ಲಿ ತನ್ನ ವೃತ್ತಿ ರೂಪಿಸಿಕೊಂಡಿದ್ದು ಹೇಗೆ

ಭಾರತವು ತ್ಯಾಗ, ಕರ್ತವ್ಯ ಮತ್ತು ದೇಶ ನಿರ್ಮಾಣವನ್ನು ಅನುರಣಿಸುವ ದಿನ 79ನೇ ಸ್ವಾತಂತ್ರ್ಯೋ ತ್ಸವವನ್ನು ಇಂದು ಆಚರಿಸುತ್ತಿರುವಾಗ ಅಮೆಜಾನ್ ಇಂಡಿಯಾ ತಮ್ಮ ಎರಡನೆಯ ವೃತ್ತಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾ ನಿವೃತ್ತರಿಗೆ ಗೌರವಿಸುತ್ತದೆ. ಸೇನಾಪಡೆಗಳಿಂದ ಇ-ಕಾಮರ್ಸ್ ಮತ್ತು ತಂತ್ರಜ್ಞಾನ ಕ್ಕೆ ಪರಿವರ್ತನೆಗೆ ಗಮನಾರ್ಹ ಅಳವಡಿಸಿಕೊಳ್ಳಬಲ್ಲತೆ ಮತ್ತು ಮೌಲ್ಯಯುತ ಕೌಶಲ್ಯಗಳ ಅಗತ್ಯ ವಾಗುತ್ತದೆ.

Vishwavani Global Achievers Award Ceremony at Bhutan: ಭೂತಾನ್‌ನಲ್ಲಿ ಕನ್ನಡ ಭಾವ ಲಹರಿ ಉಕ್ಕಿಸಿದ ವಿಶ್ವವಾಣಿ

ಭೂತಾನ್‌ನಲ್ಲಿ ಕನ್ನಡ ಭಾವ ಲಹರಿ ಉಕ್ಕಿಸಿದ ವಿಶ್ವವಾಣಿ

ಕೈಗೆಟಕುವ ಮೋಡಗಳ ಮಾಲೆ. ಎಲ್ಲಿ ನೋಡಿದರೆ ಹಸಿರು ಗಿರಿಗಳ ಸಾಲು. ಮನಕ್ಕೆ ತಂಗಾಳಿ, ಕಣ್ಣಿಗೆ ಕಂಪು ಸೂಸುವ ನಿಸರ್ಗ ರಮಣೀಯ ನೋಟ. ಹೃನ್ಮನ ಸೆಳೆಯುವ ಸೇಬು ತೋಟಗಳು, ಎಲ್ಲೆಲ್ಲಿಯೂ ನದಿ ಜಲಧಾರೆಗಳು, ಜಲಪಾತಗಳು, ಸುರಕ್ಷತೆಯ ಬಗ್ಗೆ ಕಿಂಚಿತ್ತೂ ಕಳವಳವಿಲ್ಲದ ಅಪರೂಪದ ದೇಶ ಭೂತಾನ್.

Loading...