ಗುಂಡಿ ಅಗೆದಿದ್ದು ಸಾಕು, ಬರ್ರಿ ವಾಪಸ್ !
ನ್ಯಾಯಾಧೀಶರ ಮುಂದೆ ಅನಾಮಿಕ ವ್ಯಕ್ತಿ ನೀಡಿದ್ದ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ರಚಿಸಿದ್ದ ವಿಶೇಷ ತನಿಖಾ ತಂಡವು, ಕಳೆದ 15 ದಿನಗಳಿಂದ ವ್ಯಕ್ತಿ ತೋರಿಸಿದ ಜಾಗದಲ್ಲೆಲ್ಲ ಅಗೆದರೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಆದರೆ ದಿನದಿಂದ ದಿನಕ್ಕೆ ರಾಜ್ಯ ಸರಕಾರ ಹಾಗೂ ಎಸ್ಐಟಿ ವಿರುದ್ಧ ಜನಾಕ್ರೋಶ ಹೆಚ್ಚಾಗುತ್ತಿರುವುದರಿಂದ ಎಸ್ಐಟಿಯನ್ನು ವಿಸರ್ಜನೆ ಮಾಡಲು ಸರಕಾರ ತೀರ್ಮಾನಿಸಿದೆ.