ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ಬೆಂಗಳೂರಿನಲ್ಲಿ ಸಿಂಗಾಪುರಕ್ಕಿಂತಲೂ ಉತ್ತಮ ಬಸ್​ ನಿಲ್ದಾಣ ನಿರ್ಮಿಸುತ್ತೇವೆ: ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರಿನಲ್ಲಿ ಸಿಂಗಾಪುರಕ್ಕಿಂತಲೂ ಉತ್ತಮ ಬಸ್​ ನಿಲ್ದಾಣ: ರಾಮಲಿಂಗಾರೆಡ್ಡಿ

ಮೆಜೆಸ್ಟಿಕ್‌ನಲ್ಲಿ 32 ಎಕರೆ ಜಾಗ ಇದೆ. ಬಸ್‌ಗಳು ನಿತ್ಯ 11 ಸಾವಿರ ಟ್ರಿಪ್ ಓಡಾಡುತ್ತದೆ. ಇಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ಮಾಡುವ ಉದ್ದೇಶ ಇದೆ. ಸಿಂಗಾಪುರ್‌ಗಿಂತ ಉತ್ತಮ ನಿಲ್ದಾಣ ಮಾಡುತ್ತೇವೆ ಎಂದು ವಿಧಾನ ಪರಿಷತ್‌ನಲ್ಲಿ ಸಾರಿಗೆ ಸಚಿವ

ಅಬ್ಬಾಟ್' ನಿಂದ ಭಾರತದಲ್ಲಿ ಜೈಯೆನ್ಸ್ ಸ್ಕೈಪಾಯಿಂಟ್ ಬಿಡುಗಡೆ

ಅಬ್ಬಾಟ್' ನಿಂದ ಭಾರತದಲ್ಲಿ ಜೈಯೆನ್ಸ್ ಸ್ಕೈಪಾಯಿಂಟ್ ಬಿಡುಗಡೆ

ಭಾರತದಲ್ಲಿ ಜೈಯೆನ್ಸ್ ಸ್ಕೈಪಾಯಿಂಟ್ ಬಿಡುಗಡೆ ಮಾಡಿರುವುದು ಹೃದಯ-ರಕ್ತನಾಳ ಸಂಬಂಧಿತ ರೋಗಗಳನ್ನು ಚಿಕಿತ್ಸೆ ನೀಡುವ ವೈದ್ಯರಿಗೆ ಮಹತ್ವದ ಪ್ರಗತಿಯನ್ನು ಸೂಚಿಸು ತ್ತದೆ. ಭಾರತದಲ್ಲಿ ಈ ರೋಗಗಳು ಇನ್ನೂ ಪ್ರಮುಖ ಸಾವಿನ ಕಾರಣಗಳಲ್ಲೊಂದಾಗಿವೆ. ಇಂದು ಅನೇಕ ರೋಗಿಗಳು ಹೆಚ್ಚುತ್ತಿರುವ ಹೈಪರ್‌ಟೆನ್ಷನ್, ಮಧುಮೇಹ, ಕೊಲೆಸ್ಟ್ರಾಲ್ ಮತ್ತು ಜೀವನ ಶೈಲಿ ಸಂಬಂಧಿತ ಅಪಾಯಗಳ ಕಾರಣದಿಂದ ಜೀವನದ ಆರಂಭಿಕ ಹಂತದಲ್ಲೇ ಗಂಭೀರ ತಡೆಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ

LPG Shortage: ಬೆಂಗಳೂರಿನ ಪಿಜಿಗಳಿಗೂ ತಟ್ಟಿದ ʼಎಲ್‌ಪಿಜಿʼ ಕೊರತೆ ಬಿಸಿ; ಊಟದ ಮೆನುವಿನಲ್ಲಿ ಬದಲಾವಣೆ

ಪಿಜಿಗಳಿಗೂ ತಟ್ಟಿದ ʼಎಲ್‌ಪಿಜಿʼ ಕೊರತೆ ಬಿಸಿ; ಊಟದ ಮೆನುವಿನಲ್ಲಿ ಬದಲಾವಣೆ

ಎಲ್‌ಪಿಜಿ ಪೂರೈಕೆಯಲ್ಲೂ ವ್ಯತ್ಯಯ ಆಗಿರುವ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಅದೇ ರೀತಿ ಪಿಜಿಗಳಲ್ಲೂ ಸಮಸ್ಯೆ ಉಂಟಾಗಿದ್ದು, ಬೆಂಗಳೂರಿನ ಜನಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಪಿಜಿಗಳಲ್ಲಿ ಗ್ಯಾಸ್‌ ಸಿಲಿಂಡರ್‌ಗಳು ಇಲ್ಲದೆ ಅಡುಗೆ ತಯಾರಿಗೆ ಸಮಸ್ಯೆಯಾಗಿದೆ.

ಇಎಸ್ಐ ಆಸ್ಪತ್ರೆಯ ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ.ಗಿರೀಶ್ ಎಂ.ಎಸ್ ಮತ್ತಿತರಿಗೆ ಪ್ರಶಸ್ತಿ

ಇಎಸ್ಐ ಆಸ್ಪತ್ರೆಯ ಡಾ.ಗಿರೀಶ್ ಎಂ.ಎಸ್ ಮತ್ತಿತರಿಗೆ ಪ್ರಶಸ್ತಿ

ಭಾರತ್ ಮಾತಾ ಅಭಿನಂದನ್ ಸಂಘಟನೆ ( ರಿ) ಹರಿಯಾಣ ಕರ್ನಾಟಕ ಘಟಕ ಮತ್ತು ಆಲ್ ರೌಂಡ್ ಸೋಶಿಯಲ್ ಡೆವಲಪ್ಮೆಂಟ್ ಅಸೋಸಿಯೇಷನ್ ಆರ್ಟ್ ಅಂಡ್ ಕಲ್ಚರ್ (ರಿ) ದೆಹಲಿ ಸಂಯೋಗದೊಂದಿಗೆ ಕಡಬಗೆರೆ ಕ್ರಾಸ್ ನ ಗಾಂಧಿ ವೃದ್ಧಾಶ್ರಮ ದಲ್ಲಿ, ಬೆಂಗಳೂರು ನಾರಿ ಶಕ್ತಿ ರಾಷ್ಟ್ರೀಯ ಪ್ರಶಸ್ತಿ 2026 ಮತ್ತು ಸ್ವಾಮಿ ವಿವೇಕಾನಂದ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು

Women's Day: ಮಹಿಳಾ ದಿನದ ಹಿನ್ನೆಲೆ: ಲಯನ್ಸ್ ಡಿಸ್ಟ್ರಿಕ್ಟ್ 317ಎಫ್ ನಿಂದ ಮಹಿಳೆಯರಿಗೆ 15 ಇ-ಆಟೋ ವಿತರಣೆ

ಲಯನ್ಸ್ ಡಿಸ್ಟ್ರಿಕ್ಟ್ 317ಎಫ್ ನಿಂದ ಮಹಿಳೆಯರಿಗೆ 15 ಇ-ಆಟೋ ವಿತರಣೆ

ಲಯನ್ಸ್ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 317ಎಫ್, ಜಿಲ್ಲಾ ಗವರ್ನರ್ ಲಯನ್ ಆಕಾಶ್ ಎ. ಸುವರ್ಣ ಅವರ ನೇತೃತ್ವದಲ್ಲಿ, ಮಹಿಳೆಯರಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಚಾಲನಾ ತರಬೇತಿ ಪಡೆದ ಮಹಿಳಾ ಫಲಾನುಭವಿಗಳನ್ನು ಆಯ್ಕೆ ಮಾಡಿ ಇ-ಆಟೋ ರಿಕ್ಷಾಗಳನ್ನು ನೀಡಲಾಯಿತು.

ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದ ಹಿನ್ನೆಲೆ ಎಲ್‌ಪಿಜಿ ಕೊರತೆ; ಕೇಂದ್ರದ ವಿರುದ್ಧ ಡಿ.ಕೆ. ಶಿವಕುಮಾರ್ ವಾಗ್ದಾಳಿ

ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದ ಹಿನ್ನೆಲೆ ಎಲ್‌ಪಿಜಿ ಕೊರತೆ: ಡಿಕೆಶಿ

DK Shivakumar: ದೇಶದ ವಿದೇಶಾಂಗ ನೀತಿ ಹಳ್ಳಹಿಡಿದಿದೆ. ಸರ್ಕಾರ ಇದರ ಬಗ್ಗೆ ತನ್ನ ನಿಲುವನ್ನು ವ್ಯಕ್ತಪಡಿಸಬೇಕು. ಸಂಸದರು ಸಹ ಇದರ ಬಗ್ಗೆ ಮಾತನಾಡಬೇಕು. ಕರ್ನಾಟಕ ಹೋಟೆಲ್ ಅಸೋಸಿಯೇಷನ್ ಅವರು ಹೋಟೆಲ್‌ಗಳನ್ನು ಮುಚ್ಚಲು ತೀರ್ಮಾನ ಮಾಡಿದ್ದಾರೆ. ಇದರಿಂದ ಆಸ್ಪತ್ರೆಗಳಿಗೂ ಹೊಡೆತ ಬೀಳಲಿದೆ. ಸರ್ಕಾರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಚರ್ಮರೋಗ ಚಿಕಿತ್ಸೆಯಲ್ಲಿ ನಕಲಿ ವೈದ್ಯರ ಹಾವಳಿ: ಎಚ್ಚರ ವಹಿಸುವಂತೆ ಐಎಡಿವಿಎಲ್ ಕರ್ನಾಟಕ ಘಟಕ ಮನವಿ

ಸರ್ಕಾರಿ ವೈದ್ಯಕೀಯ ಸಿಬ್ಬಂದಿಗಳ ಹೋರಾಟಕ್ಕೆ ಐಎಡಿವಿಎಲ್ ನೈತಿಕ ಬೆಂಬಲ

ದಂತ ವೈದ್ಯರು, ಬ್ಯೂಟಿಷಿಯನ್ಗಳು, ಬ್ಯೂಟಿ ಪಾರ್ಲರ್ಗಳು, ನಕಲಿ ಕಾಸ್ಮೆಟಾಲಜಿಸ್ಟ್ಗಳು, ತರಬೇತಿ ಇಲ್ಲದ ತಂತ್ರಜ್ಞರು ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಯಲ್ಲದ ಕೆಲವು ವೈದ್ಯರು ಕೂದಲು ಕಸಿ [ಕೂದಲು ಪ್ರತಿರೋಪಣ] ಲೇಸರ್ ಚಿಕಿತ್ಸೆ, ಇಂಜೆಕ್ಷನ್ಗಳು ಹಾಗೂ ಇತರ ಸೌಂದರ್ಯ ಚರ್ಮ ಚಿಕಿತ್ಸೆಗಳಂತಹ ಸಂಕೀರ್ಣ ವಿಧಾನಗಳನ್ನು ಸೂಕ್ತ ವೈದ್ಯಕೀಯ ತರಬೇತಿ ಇಲ್ಲದೇ ಮಾಡುತ್ತಿರುವುದು ಹೆಚ್ಚುತ್ತಿದೆ

ಡಿ.ಕೆ. ಶಿವಕುಮಾರ್‌ಗೆ ಉಜ್ವಲ ರಾಜಕೀಯ ಭವಿಷ್ಯವಿದೆ: ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸಿದ ಹಿನ್ನೆಲೆ ಸಿಎಂ ಅಭಿನಂದನೆ

ಡಿ.ಕೆ. ಶಿವಕುಮಾರ್‌ಗೆ ಉಜ್ವಲ ರಾಜಕೀಯ ಭವಿಷ್ಯವಿದೆ: ಸಿಎಂ

ಕೋಮುವಾದಿ ಶಕ್ತಿಗಳನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಜೊತೆಯಲ್ಲಿ ಡಿ.ಕೆ. ಶಿವಕುಮಾರ್ ಹಗಲಿರುಳು ದುಡಿದಿದ್ದಾರೆ. ಶಿವಕುಮಾರ್ ಅವರ ಸಂಘಟನಾ ಚಾತುರ್ಯ, ಸೈದ್ಧಾಂತಿಕ ಬದ್ಧತೆ ಮತ್ತು ಕಠಿಣ ಶ್ರಮ ನಮ್ಮ ಪಕ್ಷದ ಎಲ್ಲ ಯುವನಾಯಕರಿಗೆ ಮಾದರಿಯಾದುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

International Women's Day: ಅಂತರರಾಷ್ಟ್ರೀಯ ಮಹಿಳಾ ದಿನ: “ಆರೋಗ್ಯ ರಕ್ಷಣೆ” ಕುರಿತು ಜನ ಜಾಗೃತಿ

ಅಂತರರಾಷ್ಟ್ರೀಯ ಮಹಿಳಾ ದಿನ: “ಆರೋಗ್ಯ ರಕ್ಷಣೆ” ಕುರಿತು ಜನ ಜಾಗೃತಿ

ಅಂತರರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಗುಣಮಟ್ಟದ ಆರೋಗ್ಯ ಮತ್ತು ಹಣಕಾಸು ಸಾಕ್ಷರತೆ ಕುರಿತು ಜನ ಜಾಗೃತಿ ಮೂಡಿಸಲಾಯಿತು. ಕ್ಯಾಮ್ಸ್ ಕರ್ನಾಟಕ ದಕ್ಷಿಣ ವಲಯ-1,2 ಮತ್ತು ಗ್ರೀನ್ಸ್ ಇನೋವೇಟರ್ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆವಲಹಳ್ಳಿ ಯ ಕುವೆಂಪು ರಂಗ ಮಂದಿರದಲ್ಲಿ ದಕ್ಷಿಣ ವಲಯ-2ರ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ ಉದ್ಘಾಟಿಸಿದರು.

Women's Day celebration: ಎಪಿಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳಾ ದಿನಾಚರಣೆ

ಎಪಿಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳಾ ದಿನಾಚರಣೆ

ಎಪಿಎಸ್ ಶಿಕ್ಷಣ ಸಂಸ್ಥೆಗಳಿಂದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಅಮಿತೋತ್ಸಾಹದಿಂದ ಆಚರಿಸಲಾಯಿತು. ಪ್ರೊ.ಎನ್.ಅನಂತಾ ಸಭಾಂಗಣದಲ್ಲಿ ಗಣ್ಯ ಅತಿಥಿಗಳು, ಟ್ರಸ್ಟಿಗಳು, ಅಧ್ಯಾ ಪಕರು ಮತ್ತು ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಅಹಲ್ಯ ಶರ್ಮಾ ಭಾಗವಹಿಸಿ ಮಹಿಳೆಯ ಸಾಧನೆಯ ಬಗ್ಗೆ ಬೆಳಕು ಚೆಲ್ಲಿದರು.

Karnataka MLC Election: ವಿಧಾನ ಪರಿಷತ್‌ ಚುನಾವಣೆ; ಮೂರು ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ

ವಿಧಾನ ಪರಿಷತ್‌ ಚುನಾವಣೆ; 3 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ

ಈಶಾನ್ಯ ಶಿಕ್ಷಕರ ಕ್ಷೇತ್ರ, ಪೂರ್ವ ಪದವೀಧರ ಕ್ಷೇತ್ರ ಹಾಗೂ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಇನ್ನುಳಿದ 1 ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್​​ಗೆ ಬಿಟ್ಟುಕೊಟ್ಟಿದೆ. ಯಾವ ಕ್ಷೇತ್ರ ಯಾರು ಅಭ್ಯರ್ಥಿ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.

Mysuru News: ಮೈಸೂರು ಕುರುಬರಹಳ್ಳಿ 24 ಎಕರೆ ಜಮೀನು ವಿವಾದ; ಕಾನೂನು ಕ್ರಮಕ್ಕೆ ಟಿ.ಎಸ್. ಶ್ರೀವತ್ಸ ಆಗ್ರಹ

ಜಮೀನು ವಿವಾದ; ಕಾನೂನು ಕ್ರಮಕ್ಕೆ ಟಿ.ಎಸ್. ಶ್ರೀವತ್ಸ ಆಗ್ರಹ

ಸರ್ಕಾರದ ಜಮೀನು ಉಳಿಸುವ ನಿಟ್ಟಿನಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ತರಾತುರಿಯಲ್ಲಿ ನೋಂದಣಿ ರದ್ದಾಗಿರುವುದರ ಹಿಂದೆ ಅಕ್ರಮದ ವಾಸನೆ ಇದೆ. ಈ ಬೆಳವಣಿಗೆಗಳ ಹಿಂದೆ ಯಾರು ಇದ್ದಾರೆ ಎಂಬುದು ತಿಳಿಯಬೇಕು ಎಂದು ಶಾಸಕ ಟಿ.ಎಸ್. ಶ್ರೀವತ್ಸ ಆಗ್ರಹಿಸಿದ್ದಾರೆ.

ಶ್ರೀಮಂತ ವ್ಯಕ್ತಿಗಳನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ; ಬೆಳಗಾವಿಯಲ್ಲಿ ಖತರ್ನಾಕ್‌ ಮಹಿಳೆ ಅರೆಸ್ಟ್

ಹನಿಟ್ರ್ಯಾಪ್ ಮಾಡಿ ಹಣಕ್ಕೆ ಬೇಡಿಕೆ; ಬೆಳಗಾವಿಯಲ್ಲಿ ಮಹಿಳೆ ಅರೆಸ್ಟ್

Belagavi Honey trap Case: ಆರೋಪಿ ಮಹಿಳೆಯು, ಶ್ರೀಮಂತ ವ್ಯಕ್ತಿಗಳನ್ನು‌ ಪರಿಚಯ ಮಾಡಿಕೊಂಡು ಲಾಡ್ಜ್‌ಗೆ ಆಹ್ವಾನಿಸುತ್ತಿದ್ದಳು. ಲಾಡ್ಜ್‌ಗೆ ಬಂದ ವ್ಯಕ್ತಿಗಳಿಗೆ ಸ್ನಾನ ಮಾಡಿ ಬರುವಂತೆ ಹೇಳಿ, ಅವರು ಬಾತ್‌ರೂಮ್‌ಗೆ ಹೋದ ತಕ್ಷಣ ಹೊರಗಿನಿಂದ ಬಾಗಿಲು ಲಾಕ್ ಮಾಡಿ, ಅವರ ಹಣ, ಮೊಬೈಲ್ ಕದ್ದು ಎಸ್ಕೆಪ್ ಆಗುತ್ತಿದ್ದಳು.

ದೇವೇಗೌಡರ ಮನಸ್ಸು ನೋಯಿಸಲು ಇಷ್ಟವಿಲ್ಲ: ಡಿ.ಕೆ. ಶಿವಕುಮಾರ್ ಹೀಗ್ಯಾಕೆ ಅಂದ್ರು?

ದೇವೇಗೌಡರ ಮನಸ್ಸು ನೋಯಿಸಲು ಇಷ್ಟವಿಲ್ಲ ಎಂದ ಡಿಕೆಶಿ

DK Shivakumar: ದೇವೇಗೌಡರು ಮೇಕೆದಾಟು, ಎತ್ತಿನಹೊಳೆ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ಪಕ್ಷದ ಸದಸ್ಯರು ಲೋಕಸಭೆಯಲ್ಲಿ ಮಾತನಾಡುವಂತೆ ಹೇಳಲಿ. ಈ ವಯಸ್ಸಿನಲ್ಲಿ ಅವರ ಮೇಲೆ ವಾಗ್ದಾಳಿ ಮಾಡುವುದು ಸರಿಯಲ್ಲ. ನನಗೆ ಇಷ್ಟವೂ ಇಲ್ಲ. ಈ ವಯಸ್ಸಿನಲ್ಲಿ ಮನಸ್ಸು ನೋಯಿಸುವುದು ಬೇಡ ಎಂದುಕೊಂಡಿರುವೆ. ಅವರೇ ಇವುಗಳಿಗೆ ಪರಿಹಾರ ಸೂಚಿಸಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

LPG Shortage: ಗೃಹಬಳಕೆ ಎಲ್‌ಪಿಜಿ ಡೆಲಿವರಿಯೂ ವಿಳಂಬ; ಬುಕಿಂಗ್‌ ಮಾಡಿ ವಾರವಾದ್ರೂ ಸಿಗುತ್ತಿಲ್ಲ ಗ್ಯಾಸ್‌ ಸಿಲಿಂಡರ್‌!

ಗೃಹಬಳಕೆ ಎಲ್‌ಪಿಜಿ ಡೆಲಿವರಿಯೂ ವಿಳಂಬ; ವಾರವಾದ್ರೂ ಸಿಗುತ್ತಿಲ್ಲ!

Domestic LPG cylinder: ಮಧ್ಯಪ್ರಾಚ್ಯದಲ್ಲಿ ಯುದ್ಧ ಹಿನ್ನೆಲೆಯಲ್ಲಿ ಗ್ಯಾಸ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದರಿಂದ ಗ್ಯಾಸ್‌ ಪ್ಲಾಂಟ್‌ಗಳಲ್ಲಿ ಅನಿಲ ಕೊರತೆ ಹಿನ್ನೆಲೆಯಲ್ಲಿ ನೆಲಮಂಗಲ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗೂ ನಿಂತಲ್ಲೇ ನಿಂತಿವೆ. ಇದರಿಂದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

Mysore silk saree: ಮೈಸೂರು ರೇಷ್ಮೆ ಸೀರೆಗಳಿಗೆ ಭಾರಿ ಡಿಮ್ಯಾಂಡ್‌, ಆನ್‌ಲೈನ್‌ ಮಾರಾಟಕ್ಕೆ ಬ್ರೇಕ್‌

ಮೈಸೂರು ರೇಷ್ಮೆ ಸೀರೆಗೆ ಭಾರಿ ಡಿಮ್ಯಾಂಡ್‌, ಆನ್‌ಲೈನ್‌ ಮಾರಾಟಕ್ಕೆ ಬ್ರೇಕ್‌

ಕೆಎಸ್‌ಐಸಿ ಪ್ರತಿದಿನ ಸರಾಸರಿ 350 ರಿಂದ 400 ಸೀರೆಗಳನ್ನು ತಯಾರಿಸುತ್ತಿದೆ. ಆದರೆ ರಾಜ್ಯದ ಜನರು, ವಿಶೇಷವಾಗಿ ಸ್ಥಳೀಯ ಗ್ರಾಹಕರು, ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡುತ್ತಿರುವುದರಿಂದ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಸವಾಲಾಗುತ್ತಿದೆ. ಈ ಕಾರಣದಿಂದಾಗಿ, ಕೆಲವು ಸಮಯದವರೆಗೆ ಆನ್‌ಲೈನ್ ಆರ್ಡರ್‌ ಸ್ಥಗಿತಗೊಳಿಸಲು ಚಿಂತನೆ ನಡೆಸಲಾಗುತ್ತಿದೆ.

ಹಿಕಲ್ ಟೆಕ್ನಾಲಜೀಸ್‌ಗೆ ಡಸಾಲ್ಟ್ ಏವಿಯೇಷನ್ ಪ್ರಶಸ್ತಿಗಳ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ

ರಫೇಲ್ ಕಂಟ್ರೋಲ್ ಸಿಸ್ಟಮ್ಸ್ ಅಪ್ಲಿಕೇಶನ್‌ಗಳಿಗೆ ಉತ್ಪನ್ನಗಳ ತಯಾರಿಕೆ

ಈ ಮೈಲಿಗಲ್ಲು ಹಿಕಲ್‌ನಲ್ಲಿರುವ ನಮ್ಮ ತಂಡಗಳು ನಿರ್ಮಿಸಿರುವ ಎಂಜಿನಿಯರಿಂಗ್ ಹೂಡಿಕೆ, ನಿಖರ ಉತ್ಪಾದನಾ ಶಿಸ್ತು ಮತ್ತು ಗುಣಮಟ್ಟದ ಸಂಸ್ಕೃತಿಯ ವರ್ಷಗಳ ಪುರಾವೆಯಾಗಿದೆ" ಎಂದು ಹಿಕಲ್ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ ಯಶಸ್ ಜೈವೀರ್ ಹೇಳಿದರು. "ವಿಶ್ವದ ಅತ್ಯಂತ ಅತ್ಯಾಧುನಿಕ ಯುದ್ಧ ವಿಮಾನಗಳಲ್ಲಿ ಒಂದಾದ ರಫೇಲ್‌ಗಾಗಿ ನಿರ್ಣಾಯಕ ಉತ್ಪನ್ನಗಳನ್ನು ವಹಿಸಿಕೊಳ್ಳುವುದು ಭಾರತೀಯ ಏರೋ ಸ್ಪೇಸ್ ಉತ್ಪಾದನೆಯು ಜಾಗತಿಕ ವೇದಿಕೆಗೆ ಬಂದಿದೆ ಎಂಬುದಕ್ಕೆ ಒಂದು ಮನ್ನಣೆಯಾಗಿದೆ.

LPG crisis: ವಾಣಿಜ್ಯ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಸರಿಪಡಿಸಲು ತುರ್ತು ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ

ವಾಣಿಜ್ಯ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ; ಕೇಂದ್ರಕ್ಕೆ ಸಿಎಂ ಪತ್ರ

Commercial LPG shortage: ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದರಿಂದ ನಗರದ ಹಲವಾರು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳ ಕಾರ್ಯಾಚರಣೆ ಸ್ಥಗಿತಗೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸಮಸ್ಯೆ ಪರಿಹರಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Tejaswi Surya: ಎಲ್‌ಪಿಜಿ ಪೂರೈಕೆ ಕೊರತೆ, ಸರಿಪಡಿಸಲು ಸಂಸದ ತೇಜಸ್ವಿ ಸೂರ್ಯ ಮನವಿ

ಎಲ್‌ಪಿಜಿ ಪೂರೈಕೆ ಕೊರತೆ, ಸರಿಪಡಿಸಲು ಸಂಸದ ತೇಜಸ್ವಿ ಸೂರ್ಯ ಮನವಿ

ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ಹೋಟೆಲ್ ಹಾಗೂ ಆತಿಥ್ಯ ಕ್ಷೇತ್ರಕ್ಕೆ ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸುವಂತೆ ಮನವಿ ಮಾಡಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಕೂಡ ಮಾತುಕತೆ ನಡೆಸಲು ಮುಂದಾಗಿದ್ದಾರೆ.

Gulf war: ಇರಾನ್-‌ ಇಸ್ರೇಲ್‌ ಯುದ್ಧದ ಪರಿಣಾಮ ಬೆಂಗಳೂರು ಏರ್‌ಪೋರ್ಟ್‌ನಲ್ಲಿ 17 ವಿಮಾನ ಹಾರಾಟ ರದ್ದು

ಯುದ್ಧದ ಪರಿಣಾಮ ಬೆಂಗಳೂರು ಏರ್‌ಪೋರ್ಟ್‌ನಲ್ಲಿ 17 ವಿಮಾನ ಹಾರಾಟ ರದ್ದು

ಏರ್‌ಸ್ಪೇಸ್ ನಿರ್ಬಂಧ ಮತ್ತು ಭದ್ರತಾ ಕಾರಣದಿಂದ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರು ತಮ್ಮ ವಿಮಾನ ವೇಳಾಪಟ್ಟಿಯನ್ನು ಪರಿಶೀಲಿಸಲು ವಿಮಾನ ನಿಲ್ದಾಣ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದರಿಂದ ಮಧ್ಯಪ್ರಾಚ್ಯಕ್ಕೆ ಹೋಗುವ ಪ್ರಯಾಣಿಕರಿಗೆ ತಾತ್ಕಾಲಿಕ ತೊಂದರೆ ಉಂಟಾಗುವ ಸಾಧ್ಯತೆ ಇದೆ.

Fraud Case: ವರ್ಗಾವಣೆಗಾಗಿ ಗಿಳಿಶಾಸ್ತ್ರದ ಮೊರೆ ಹೋದ ಐಟಿ ಅಧಿಕಾರಿ, 35 ಲಕ್ಷ ರೂಪಾಯಿ ಮಂಗಮಾಯ!

ವರ್ಗಾವಣೆಗಾಗಿ ಗಿಳಿಶಾಸ್ತ್ರದ ಮೊರೆ ಹೋದ ಐಟಿ ಅಧಿಕಾರಿಗೆ ಲಕ್ಷ ಲಕ್ಷ ವಂಚನೆ!

ವರ್ಗಾವಣೆಯ ವಿಚಾರವಾಗಿ ಗಿಳಿಶಾಸ್ತ್ರ ಕೇಳಿದಾಗ, ದೊಡ್ಡ ಪೂಜೆ ಮಾಡಬೇಕು. ಅದಕ್ಕಾಗಿ ಮನೆಯಲ್ಲಿರುವ ಚಿನ್ನಾಭರಣಗಳನ್ನು ತರಬೇಕು ಎಂದು ಶೇಖರ್ ಸಲಹೆ ನೀಡಿದ್ದ. ಅವನ ಮಾತನ್ನು ನಂಬಿದ ಐಟಿ ಅಧಿಕಾರಿ ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 194 ಗ್ರಾಂ ಚಿನ್ನಾಭರಣ ಮತ್ತು 1 ಕೆಜಿ 300 ಗ್ರಾಂ ಬೆಳ್ಳಿಯನ್ನು ತೆಗೆದುಕೊಂಡು ಹೋಗಿ ಆತನಿಗೆ ನೀಡಿದ್ದರು.

Doctors Strike: ನಾಳೆಯಿಂದ ರಾಜ್ಯಾದ್ಯಂತ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್

ನಾಳೆಯಿಂದ ರಾಜ್ಯಾದ್ಯಂತ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್

ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಹಲವು ವರ್ಷಗಳಿಂದ ಬಾಕಿಯಿರುವ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಗಮನ ಸೆಳೆಯಲು ಈ ಮುಷ್ಕರಕ್ಕೆ ಕರೆ ನೀಡಿದೆ. ಕಳೆದ ನಾಲ್ಕು ವರ್ಷಗಳಿಂದ ನಡೆಯದಿರುವ ವೃಂದ ಮತ್ತು ನೇಮಕಾತಿ ಪ್ರಕ್ರಿಯೆ, 13 ವರ್ಷಗಳಿಂದ ಪರಿಷ್ಕರಣೆಗೊಳ್ಳದ ವೈದ್ಯರ ಜ್ಯೇಷ್ಠತಾ ಪಟ್ಟಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ಸೇರಿದಂತೆ ಒಟ್ಟು 15 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಘವು ಹೋರಾಟಕ್ಕೆ ಮುಂದಾಗಿದೆ.

ಸ್ವಿಗ್ಗಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದಲ್ಲಿ ಕ್ರೆಡಿಟ್ ಕಾರ್ಡ್‌ ಬಿಡುಗಡೆ

ಖಾಸಗಿ ಬ್ಯಾಂಕ್ʼಗಳ ಸಹಯೋಗದಲ್ಲಿ ಕ್ರೆಡಿಟ್ ಕಾರ್ಡ್‌ ಬಿಡುಗಡೆ

ಸ್ವಿಗ್ಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನ ಅಸ್ತಿತ್ವದಲ್ಲಿರುವ ಬಳಕೆದಾರರು ಸ್ವಿಗ್ಗಿ ಮತ್ತು ಕ್ಲಿಯರ್‌ಟ್ರಿಪ್, ನೈಕಾ, ಪೇಟಿಎಂ ಟ್ರಾವೆಲ್, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಮೈಂತ್ರಾದಂತಹ 30+ ಕ್ಕೂ ಹೆಚ್ಚು ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಲವಾದ ಕ್ಯಾಶ್‌ಬ್ಯಾಕ್ ಪ್ರಯೋಜನಗಳನ್ನು ಆನಂದಿಸುತ್ತಿದ್ದಾರೆ.

ಜಪಾನ್-ಭಾರತ ಮೊಬಿಲಿಟಿ ಶೃಂಗಸಭೆ 2026: ಶುದ್ಧ ಇಂಧನ, ಡಿಜಿಟಲ್ ಮೊಬಿಲಿಟಿ ಮತ್ತು ನಾವೀನ್ಯತೆ ಕುರಿತು ದ್ವಿಪಕ್ಷೀಯ ಸಹಕಾರಕ್ಕೆ ವೇಗ

ಶುದ್ಧ ಇಂಧನ, ಡಿಜಿಟಲ್ ಮೊಬಿಲಿಟಿ ಕುರಿತು ದ್ವಿಪಕ್ಷೀಯ ಸಹಕಾರಕ್ಕೆ ವೇಗ

ಭಾರತ ಹಾಗೂ ಜಪಾನ್‌ ನಡುವೆ ಮೊಬಿಲಿಟಿ ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಗರದ ತಾಜ್‌ವೆಸ್ಟೆಂಡ್‌ ಹೋಟೆಲ್‌ನಲ್ಲಿ ನಡೆದ ಜಪಾನ್-ಇಂಡಿಯಾ ಮೊಬಿಲಿಟಿ ಶೃಂಗಸಭೆ 2026 (Japan-India Mobility Summit) ಯಲ್ಲಿ ಭಾರತ ಮತ್ತು ಜಪಾನ್‌ನ ನೀತಿ ನಿರೂಪಕರು, ಉದ್ಯಮ ನಾಯಕರು ಮತ್ತು ನಾವೀನ್ಯಕಾರರನ್ನು ಪಾಲ್ಗೊಂಡಿದ್ದರು.

Loading...