ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ

ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್‌ ನ ನಾಯಕತ್ವ ಬದಲಾವಣೆ

ಕೋಟಕ್ ಮಹೀಂದ್ರಾ ಪ್ರೈಮ್ ಲಿಮಿಟೆಡ್‌ ನ ನಾಯಕತ್ವ ಬದಲಾವಣೆ

ಶಾರುಖ್ ಅವರು ಕೋಟಕ್ ಮಹೀಂದ್ರಾ ಪ್ರೈಮ್‌ ನಲ್ಲಿ ಅದ್ಭುತ ಬೆಳವಣಿಗೆ ಶಕ್ತಿ, ಶಿಸ್ತುಬದ್ಧ ರಿಸ್ಕ್ ಮ್ಯಾನೇಜ್‌ ಮೆಂಟ್ ಮತ್ತು ಗ್ರಾಹಕ ಕೇಂದ್ರಿತ ಮನೋಭಾವದ ಪರಂಪರೆಯನ್ನು ಬಿಟ್ಟು ಹೋಗುತ್ತಿದ್ದಾರೆ. ನಾವು ಸೂರಜ್ ಅವರನ್ನು ನಾಯಕತ್ವ ಸ್ಥಾನಕ್ಕೆ ಮನಃಪೂರ್ವಕವಾಗಿ ಸ್ವಾಗತಿಸುತ್ತಿದ್ದೇವೆ

Yamaha: ಬೆಂಗಳೂರಿನಲ್ಲಿ ಯಮಹಾದಿಂದ ಮೊಟ್ಟಮೊದಲ ‘ಮೆಗಾ ಮೈಲೇಜ್ ಚಾಲೆಂಜ್’ ಆಯೋಜನೆ

ಯಮಹಾದಿಂದ ಮೊಟ್ಟಮೊದಲ ‘ಮೆಗಾ ಮೈಲೇಜ್ ಚಾಲೆಂಜ್’ ಆಯೋಜನೆ

ಅಧಿಕೃತ ಡೀಲರ್‌ ಶಿಪ್‌ ಗಳಾದ Eye Automobiles, ವೈಟ್‌ ಫೀಲ್ಡ್ ಯಮಹಾ, ಗರುಡ ಮೋಟಾರ್‌ ಸೈಕಲ್ಸ್, ವಿನಾಯಕ ಮೋಟಾರ್ಸ್ ಮತ್ತು ಪನಾಚೆ ಎಂಟರ್‌ ಪ್ರೈಸಸ್ ಸಹಯೋಗ ದೊಂದಿಗೆ ಆಯೋಜಿಸಲಾಗಿದ್ದ ಈ ಸ್ಪರ್ಧೆಯಲ್ಲಿ ಯಮಹಾ ಗ್ರಾಹಕರು ಮತ್ತು ಅವರ ಕುಟುಂಬ ಸದಸ್ಯರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು.

ಹಗುರ ಮಾತುಗಳಿಂದ ಕ್ಷೇತ್ರದ ಮರ್ಯಾದೆ ಹಾಳು ಮಾಡಬೇಡಿ, ಶಾಸಕ ಪ್ರದೀಪ್ ಅವರೇ ಕ್ಷೇತ್ರದ ಅಭಿವೃದ್ದಿಗೆ ತೊಡೆ ತಟ್ಟಿ : ಸಂದೀಪ್‌ರೆಡ್ಡಿ ಸಲಹೆ

ಹಗುರ ಮಾತುಗಳಿಂದ ಕ್ಷೇತ್ರದ ಮರ್ಯಾದೆ ಹಾಳು ಮಾಡಬೇಡಿ

ಶಾಸಕರೇ ನಿಮಗೆ ಇನ್ನು ಕೇವಲ 1.5 ವರ್ಷವಷ್ಟೇ ಅಭಿವೃದ್ದಿಗೆ ಸಮಯವಿದೆ. ಈ ಅವಧಿ ಯಲ್ಲಾದರೂ ಜನತೆಯ ಕಷ್ಟವನ್ನು ನೋಡಿ. ಚಿಕ್ಕಬಳ್ಳಾಪುರಕ್ಕಾಗಿ ಶಾಸಕರಾಗಿ ಏನು ಮಾಡ ಬೇಕೋ ಅಷ್ಟನ್ನೇ ಮಾಡಿ. ನೀವು ಸ್ಕಾಲರ್‌ಶಿಫ್ ಕೊಡುತ್ತಿದ್ದೀರಿ, ಅಂಬುಲೆನ್ಸ್ ಬಿಟ್ಟಿದ್ದೀರಿ, ಶಾಲೆಯ ಮಕ್ಕಳಿಗೆ, ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಬಾಗಿನ ಕೊಡುವುದು ಇವೆಲ್ಲಾ ಮಾಡುತ್ತಿರುವುದು ಸಂತೋಷವೇ.

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ತುಮಕೂರು ಕೋರ್ಟ್

ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ

Chikkanayakanahalli News: ಚಿಕ್ಕನಾಯಕನಹಳ್ಳಿ ತಾಲೂಕಿನ ಭಾವನಹಳ್ಳಿ ಗ್ರಾಮದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಸಂಬಂಧ ದಾಖಲಾಗಿದ್ದ ಪೋಕ್ಸೊ ಪ್ರಕರಣದಲ್ಲಿ ಅಪರಾಧಿ ಧನಂಜಯನಿಗೆ ತುಮಕೂರಿನ ಪೋಕ್ಸೋ ವಿಶೇಷ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

Chinthamai News: ಚಿಂತಾಮಣಿ ನಗರದಲ್ಲಿ ಏಪ್ರಿಲ್ 1ರಿಂದ ಜನಗಣತಿ ಕಾರ್ಯ ಆರಂಭ : ಪೌರಾಯುಕ್ತ ಚಲಪತಿ

ಚಿಂತಾಮಣಿ ನಗರದಲ್ಲಿ ಏಪ್ರಿಲ್ 1ರಿಂದ ಜನಗಣತಿ ಕಾರ್ಯ ಆರಂಭ

ಜನಗಣತಿಯ ಸಂದರ್ಭದಲ್ಲಿ ಸಾರ್ವಜನಿಕರು ನೀಡುವ ಮಾಹಿತಿಯು ಅತ್ಯಂತ ಗೌಪ್ಯವಾಗಿರು ತ್ತದೆ. ಈ ಮಾಹಿತಿಯನ್ನು ಯಾವುದೇ ತನಿಖಾ ಸಂಸ್ಥೆಗಳಿಗಾಗಲಿ ಅಥವಾ ಇತರ ಉದ್ದೇಶ ಗಳಿಗಾಗಲಿ ಬಳಸಲಾಗುವುದಿಲ್ಲ. ಇದು ಕೇವಲ ರಾಷ್ಟ್ರದ ಅಭಿವೃದ್ಧಿ ಮತ್ತು ಯೋಜನಾ ರೂಪಣೆಯ ಉದ್ದೇಶಕ್ಕಾಗಿ ಮಾತ್ರ ಬಳಸಲ್ಪಡುತ್ತದೆ

Havyaka Special Awards: ಪ್ರಶಸ್ತಿಗಳು ಸಾಧಕರಿಗೆ ಗೌರವ; ಇತರರಿಗೆ ಸ್ಫೂರ್ತಿ: ಡಾ. ಗಿರಿಧರ ಕಜೆ

ಪ್ರಶಸ್ತಿಗಳು ಸಾಧಕರಿಗೆ ಗೌರವ; ಇತರರಿಗೆ ಸ್ಫೂರ್ತಿ: ಡಾ. ಗಿರಿಧರ ಕಜೆ

Havyaka Special Award: ಬೆಂಗಳೂರಿನ ಮಲ್ಲೇಶ್ವರಂನ ಹವ್ಯಕ ಭವನದಲ್ಲಿ ಭಾನುವಾರ '83ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ - ಹವ್ಯಕ ವಿಶೇಷ ಪ್ರಶಸ್ತಿ ಪ್ರದಾನ ಹಾಗೂ ಹವ್ಯಕ ಪತ್ರಿಕೆಯ ವಜ್ರಮಹೋತ್ಸವ' ಕಾರ್ಯಕ್ರಮ ಜರುಗಿತು. ಸಮಾರಂಭದಲ್ಲಿ ಸಾಧಕರಿಗೆ 2025-26 ಸಾಲಿನ ಹವ್ಯಕ ವಿಶೇಷ ಪ್ರಶಸ್ತಿಯನ್ನು ನೀಡಿ, ಗೌರವಿಸಲಾಯಿತು.

Chikkaballapur News: ಪ್ರೇಕ್ಷಕರನ್ನು ಹೊಸ ಚಿಂತನೆಗೆ ಹಚ್ಚಿದ ಕೋಟಿಗಾನಹಳ್ಳಿ ರಾಮಯ್ಯರ ಅಂಬೇಡ್ಕರ್ ಕೊಲಾಜ್ ನಾಟಕ : ಆರ್.ಆಂಜನೇಯರೆಡ್ಡಿ ಅಭಿಮತ

ಪ್ರೇಕ್ಷಕರನ್ನು ಹೊಸ ಚಿಂತನೆಗೆ ಹಚ್ಚಿದ ಅಂಬೇಡ್ಕರ್ ಕೊಲಾಜ್ ನಾಟಕ

ಆಧುನಿಕ ತಂತ್ರಜ್ಞಾನದ ಫಲವಾದ ಮೊಬೈಲ್ ಎಂಬ ಸಾಧನದ ಸೆಳೆತಕ್ಕೆ ಸಿಕ್ಕಿ ದಿಕ್ಕು ತಪ್ಪಿರುವ ಈ ಹೊತ್ತಿನಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಅವರಂತಹ ಚಿಂತಕ ಹೋರಾಟಗಾರರು ಅಂಬೇಡ್ಕರ್ ಎಂಬ ಮಹಾಮಾನವತಾವಾದಿಯನ್ನು ರಂಗರೂಪಕ್ಕಿಳಿಸಿ ಇಲ್ಲಿ ಪ್ರದರ್ಶನವಾಗು ವಂತೆ ನೋಡಿಕೊಂಡಿರುವುದು ಅತ್ಯಂತ ಮಹತ್ವದ ಸಂದರ್ಭವೆಂದೇ ನಾನು ಭಾವಿಸುತ್ತೇನೆ

IPL 2026: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 50ಕ್ಕೂ ಹೆಚ್ಚು ಮೊಬೈಲ್‌ ಕಳವು!; ಫೋನ್ ಕಳೆದುಕೊಂಡ ಮಹಿಳೆ ಹೇಳಿದ್ದೇನು? Video

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 50ಕ್ಕೂ ಹೆಚ್ಚು ಫೋನ್‌ ಕಳವು!

Mobile theft at Chinnaswamy stadium: ಎಲ್ಲಾ ಐಪಿಎಲ್‌ ಮ್ಯಾಚ್‌ಗಳ ವೇಳೆ ಕ್ರೀಡಾಂಗಣಗಳಲ್ಲಿ ಮೊಬೈಲ್‌ ಫೋನ್‌ಗಳ ಕಳ್ಳತನ ನಡೆಯುತ್ತಿದೆ. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ, ಭದ್ರತೆಯನ್ನು ಹೆಚ್ಚಿಸಬೇಕು ಎಂದು ಮಹಿಳೆಯೊಬ್ಬರು ವಿಡಿಯೊ ಮೂಲಕ ಮನವಿ ಮಾಡಿದ್ದಾರೆ.

ಅಮೆರಿಕಕ್ಕಿಂತ ಬೆಂಗಳೂರಿನ ಆರೋಗ್ಯ ಸೇವೆಯೇ ಬೆಸ್ಟ್‌; ಸ್ಟಾರ್ಟ್‌ ಅಪ್ ಸಂಸ್ಥಾಪಕನ ಮೆಚ್ಚುಗೆ

ಭಾರತೀಯ ಆರೋಗ್ಯ ಸೌಲಭ್ಯ ಬಗ್ಗೆ ಸ್ಟಾರ್ಟ್‌ಅಪ್ ಸಂಸ್ಥಾಪಕನ ಮೆಚ್ಚುಗೆ

Viral News: ವಿದೇಶಿ ಆರೋಗ್ಯ ಸೇವೆಗಿಂತ ಭಾರತದಲ್ಲಿ ಯಾವ ರೀತಿಯ ಉತ್ತಮ ಸೌಲಭ್ಯಗಳಿದೆ ಎನ್ನುವುದನ್ನು ಸ್ಟಾರ್ಟ್‌ಅಪ್ ಸಂಸ್ಥಾಪಕರೊಬ್ಬರು ಹೇಳಿದ್ದು, ಈ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಕೋರಮಂಗಲದಲ್ಲಿ ರೇಬಿಸ್ ನಿರೋಧಕ ಲಸಿಕೆ ಕೆಲವೇ ನಿಮಿಷಕ್ಕೆ ದೊರಕಿದೆ ಎಂದು ಭಾರತ್ ಅಗ್ರಿ ಸಂಸ್ಥಾಪಕ ಸಿದ್ಧಾರ್ಥ್ ಡಯಾಲಾನಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

IPL 2026 Tickets: ಈಡೇರಿದ ಶಾಸಕರ ಬೇಡಿಕೆ; ಪ್ರತಿ ಐಪಿಎಲ್‌ ಪಂದ್ಯಕ್ಕೂ ಸಿಗುತ್ತೆ 3 ಟಿಕೆಟ್‌!

ಶಾಸಕರಿಗೆ ಪ್ರತಿ ಐಪಿಎಲ್‌ ಪಂದ್ಯಕ್ಕೆ 3 ಟಿಕೆಟ್‌ ನೀಡಲು ಕೆಎಸ್‌ಸಿಎ ಅಸ್ತು

ಶಾಸಕರಿಗೆ ಐಪಿಎಲ್ ಪಂದ್ಯಗಳಿಗ ತಲಾ 3 ಟಿಕೆಟ್ ಸಿಗಲಿದೆ. ಅಂತಾರಾಷ್ಟ್ರೀಯ ಪಂದ್ಯಗಳಿಗೆ 2 ಟಿಕೆಟ್ ಜತೆಗೆ ಹೆಚ್ಚುವರಿ 2 ಟಿಕೆಟ್ ಖರೀದಿಗೆ ಅವಕಾಶ ಇರುತ್ತದೆ. ಇನ್ನು ಕೆಎಸ್‌ಸಿಎ ವ್ಯವಹಾರಗಳಲ್ಲಿ ಅತಿಯಾದ ಹಸ್ತಕ್ಷೇಪ ಮಾಡಲ್ಲ ಎಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ಕ್ರೀಡಾಂಗಣದಲ್ಲಿ ಆಸನ ಸಂಖ್ಯೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಲು ಕೆಎಸ್‌ಸಿಎಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು ಜೀವನ ದುಬಾರಿ ಅಲ್ಲ: 18,000 ರುಪಾಯಿಯಲ್ಲಿ ಐಷಾರಾಮಿ ಬದುಕು ಸಾಗಿಸುವ ಯುವತಿ; ಈ ಟಿಪ್ಸ್‌ ನೀವೂ ಫಾಲೋ ಮಾಡಿ

18,000 ರು.ಯಲ್ಲಿ ಬೆಂಗಳೂರಿನಲ್ಲಿ ಐಷಾರಾಮಿ ಬದುಕು ಸಾಗಿಸುವ ಯುವತಿ

Viral Video: ಬೆಂಗಳೂರಿನಲ್ಲಿ ಕಡಿಮೆ ಬಜೆಟ್‌ನಲ್ಲೂ ಜೀವನ ನಡೆಸಬಹುದು ಎಂದು ಯುವತಿಯೊಬ್ಬಳು ತೋರಿಸಿಕೊಟ್ಟಿದ್ದಾಳೆ. ಕೇವಲ 18,000 ರುಪಾಯಿಯಲ್ಲಿ ಅತ್ಯಂತ ಶಿಸ್ತು ಬದ್ಧವಾಗಿ ಹಣಕಾಸು ನಿರ್ವಹಣೆ ಮಾಡುತ್ತಿದ್ದಾಳೆ. ತನ್ನ ಮಾಸಿಕ ವೆಚ್ಚಗಳನ್ನು ನಿರ್ವಹಿಸುವ ರೀತಿಯನ್ನು ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ‌ಧೂಮಪಾನ ಮಾಡಿ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿದ ಟೆಕ್ಕಿ; ಶಿಕ್ಷಣ ಇದ್ದರೆ ಸಾಲದು ಸಂಸ್ಕಾರವೂ ಬೇಕು ಎಂದ ನೆಟ್ಟಿಗರು

ಬೆಂಗಳೂರು ವಿಮಾನ ನಿಲ್ದಾಣದಲ್ಲೇ ‌ಧೂಮಪಾನ ಮಾಡಿದ ಟೆಕ್ಕಿ

Viral Video: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಗೂಗಲ್ ತಂತ್ರಜ್ಞನೊಬ್ಬ ಧೂಮಪಾನ ಮಾಡಿದ್ದಲ್ಲದೆ ಪ್ರಶ್ನಿಸಿದವರ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆತನ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೃದಯದ ಪುನರಾವರ್ತಿತ ಅಸ್ವಸ್ಥತೆಯಿಂದ ಬಳಲುತ್ತಿದ್ದ 91 ವರ್ಷದ ವ್ಯಕ್ತಿಯ ಜೀವ ಉಳಿಸಿದ ಫೋರ್ಟಿಸ್ ಆಸ್ಪತ್ರೆ

91 ವರ್ಷದ ವ್ಯಕ್ತಿಯ ಜೀವ ಉಳಿಸಿದ ಆಸ್ಪತ್ರೆ

ಹೃದಯದ ಗಂಭೀರ ವಿದ್ಯುತ್ ಪ್ರವಾಹ ಅಸ್ವಸ್ಥತೆಯಿಂದ ಬಳಲುತ್ತಿದ್ದ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ರೋಗ ಸ್ಥಿತಿಯಿಂದ ತಲೆ ಸುತ್ತುವುದು, ಮೂರ್ಛೆ ಹೋಗು ವುದು, ಬೀಳುವುದು, ಹಠಾತ್ ಹೃದಯ ಸ್ತಂಭನ ಮತ್ತು ಹೃದಯ ವೈಫಲ್ಯಕ್ಕೆ ಕಾರಣವಾಗ ಬಹುದು, ವಿಶೇಷವಾಗಿ ವಯಸ್ಸಾದ ವ್ಯಕ್ತಿಗಳಲ್ಲಿ. ಪೇಸ್‌ಮೇಕರ್ ಅಳವಡಿಕೆಯ ಅಗತ್ಯವಿರುವ ಮರುಕಳಿಕೆಯ ಹೃದಯ ಅಸ್ವಸ್ಥತೆಗಳು ಸಾಮಾನ್ಯವಾಗಿ 56ರಿಂದ 88 ವರ್ಷ ವಯಸ್ಸಿನ ರೋಗಿಗಳಲ್ಲಿ ಕಂಡುಬರುತ್ತವೆ

ಅಪೋಲೋ ಆಸ್ಪತ್ರೆಯಿಂದ ಉನ್ನತ ಮಟ್ಟದ ಏರ್ ಆಂಬ್ಯುಲೆನ್ಸ್ ಸೇವಾ ಸೌಲಭ್ಯ

ಅಪೋಲೋ ಆಸ್ಪತ್ರೆಯಿಂದ ಏರ್ ಆಂಬ್ಯುಲೆನ್ಸ್ ಸೇವಾ ಸೌಲಭ್ಯ

ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಸಕಾಲದಲ್ಲಿ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಸಿಗು ವಂತೆ ಮಾಡಲು ಏರ್ ಆಂಬ್ಯುಲೆನ್ಸ್ ಸೇವೆಗಳನ್ನು ಈಗ ಮತ್ತಷ್ಟು ಬಲಪಡಿಸಲಾಗಿದೆ. ಅಪೋ ಲೋ ಆಸ್ಪತ್ರೆಯು ಈ ನಿಟ್ಟಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಏರ್ ಆಂಬ್ಯುಲೆನ್ಸ್ ಸೇವಾ ಪೂರೈಕೆದಾರರೊಂದಿಗೆ ಮಹತ್ವದ ಒಪ್ಪಂದ ಗಳನ್ನು ಮಾಡಿಕೊಂಡಿದೆ ಮತ್ತು ಎಂಓಯುಗಳಿಗೆ ಸಹಿ ಹಾಕಿದೆ.

ಆಧ್ಯಾತ್ಮಿಕ ವಿಜ್ಞಾನಿ ರಶ್ಮಿ ಅಯ್ಯಪ್ಪಗೆ ಜೀವಮಾನ ಸಾಧನೆ ಪ್ರಶಸ್ತಿ

ಆಧ್ಯಾತ್ಮಿಕ ವಿಜ್ಞಾನಿ ರಶ್ಮಿ ಅಯ್ಯಪ್ಪಗೆ ಜೀವಮಾನ ಸಾಧನೆ ಪ್ರಶಸ್ತಿ

ಉದ್ಯೋಗ್ ಯೋಗದಾನ್ ಪುರಸ್ಕಾರವು ಕೈಗಾರಿಕಾ ವಲಯದ ಅತ್ಯುನ್ನತ ಮನ್ನಣೆ ಯಾಗಿದ್ದು, ತಮ್ಮ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಗಳನ್ನು ನೀಡಿ ಶಾಶ್ವತ ಹೆಜ್ಜೆಗುರುತು ಮೂಡಿಸಿದ ವ್ಯಕ್ತಿಗಳನ್ನು ಗೌರವಿಸುವ ಪ್ರಶಸ್ತಿಯಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಟಿ, ಉದ್ಯಮಿ ಮತ್ತು ಸ್ವಾಸ್ಥ್ಯ ಪ್ರತಿಪಾದಕಿಯಾದ ಶಿಲ್ಪಾ ಶೆಟ್ಟಿ ಕುಂದ್ರಾ(Shilpa Shetty Kundra) ಅವರು ಪ್ರಶಸ್ತಿ ಪ್ರದಾನ ಮಾಡಿದರು

ಜೈಲಿನಲ್ಲಿರೋ ಕೈದಿಗಾಗಿ ಖಾಸಗಿ ಅಂಗದಲ್ಲಿ ತಂಬಾಕು, ಸಿಮ್ ಕಾರ್ಡ್‌ ರವಾನೆ; ಬೆಂಗಳೂರಿನಲ್ಲಿ ಯುವತಿ ಅರೆಸ್ಟ್

ಕೈದಿಗಾಗಿ ಖಾಸಗಿ ಅಂಗದಲ್ಲಿ ತಂಬಾಕು, ಸಿಮ್ ಕಾರ್ಡ್‌ ರವಾನಿಸಿದ ಯುವತಿ!

Bengaluru Central Prison: ಯುವತಿ ಸಾಗಿಸುತ್ತಿದ್ದ ನಿಷೇಧಿತ ವಸ್ತುಗಳನ್ನು ಬೆಂಗಳೂರು ಸೆಂಟ್ರಲ್‌ ಜೈಲಿನ ಸಿಬ್ಬಂದಿ ವಶಕ್ಕೆ ಪಡೆದು, ಪರಪ್ಪನ ಅಗ್ರಹಾರ ಪೊಲೀಸರಿಗೆ ಒಪ್ಪಿಸಿದ್ದಾರೆ. ಜೈಲು ಅಧೀಕ್ಷಕರು ನೀಡಿದ ದೂರಿನ ಆಧಾರದ ಮೇಲೆ ಯುವತಿ ಮೇಲೆ ಪ್ರಕರಣ ದಾಖಲಾಗಿದೆ.

Nanjangud Rathotsava: ನಂಜನಗೂಡು ರಥೋತ್ಸವದ ವೇಳೆ ನೂಕುನುಗ್ಗಲು; ಅಸ್ವಸ್ಥಗೊಂಡು ಓರ್ವ ಭಕ್ತ ಸಾವು, ಇಬ್ಬರಿಗೆ ಗಾಯ

ನಂಜನಗೂಡು ರಥೋತ್ಸವದ ವೇಳೆ ನೂಕುನುಗ್ಗಲು; ಓರ್ವ ಭಕ್ತ ಸಾವು

Nanjangud Stampede: ಮೈಸೂರು ಜಿಲ್ಲೆಯ ನಂಜನಗೂಡು ರಥೋತ್ಸವದ ವೇಳೆ ಅವಘಡ ನಡೆದಿದೆ. ಬೆಂಗಳೂರು ಮೂಲದ ನಂಜುಂಡಸ್ವಾಮಿ ಎಂಬುವವರು ಜನರ ಮಧ್ಯೆ ಸಿಲುಕಿ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಇದೇ ವೇಳೆ ಮತ್ತಿಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Mysuru News: ಹುಣಸೂರಿನಲ್ಲಿ ಹೃದಯ ವಿದ್ರಾವಕ ಘಟನೆ; ದಾಸವಾಳ ಹೂವು ನುಂಗಿ 6 ತಿಂಗಳ ಮಗು ಸಾವು

ಹುಣಸೂರಿನಲ್ಲಿ ದಾಸವಾಳ ಹೂವು ನುಂಗಿ 6 ತಿಂಗಳ ಮಗು ಸಾವು

Hunsur Child Death: ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಹೊಸ್ತಿಲಿಗೆ ಇಟ್ಟಿದ್ದ ದಾಸವಾಳ ಹೂವನ್ನು ಮಗು ನುಂಗಿದೆ. ಮಗುವಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ.

ಬಿಟ್ಟನಕುರಿಕೆಯಲ್ಲಿ 926ನೇ ಕೆರೆ ಹಸ್ತಾಂತರ; ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಗ್ಗೆ ಶ್ರೀ ವೀರಬಸವ ಸ್ವಾಮೀಜಿ ಶ್ಲಾಘನೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಗ್ಗೆ ವೀರಬಸವ ಸ್ವಾಮೀಜಿ ಶ್ಲಾಘನೆ

Tumkur News: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆರೆಯಲ್ಲಿ ತುಂಬಿದ್ದ ಹೂಳನ್ನು ತೆಗೆದು ಕೆರೆಗೆ ನೀರು ಸರಾಗವಾಗಿ ಹರಿದು ಸಂಗ್ರಹವಾಗುವಂತೆ ಮಾಡಿದ್ದಾರೆ. ಇದರಿಂದ ರೈತರಿಗೆ, ಸುತ್ತಮುತ್ತಲ ಗ್ರಾಮಸ್ಥರಿಗೆ ಬಹಳ ಅನುಕೂಲವಾಗುತ್ತದೆ. ಇಂತಹ ಅನೇಕ ರೀತಿಯ ಉತ್ತಮ ಕಾರ್ಯಗಳನ್ನು ನೆರವೇರಿಸುತ್ತಿರುವ ಧರ್ಮಸ್ಥಳದ ಕಾರ್ಯ ಪ್ರಶಂಸನೀಯ ಎಂದು ಬೆಳ್ಳಾವಿ ಕಾರದೇಶ್ವರ ಮಠದ ಶ್ರೀ ವೀರಬಸವ ಸ್ವಾಮೀಜಿ ತಿಳಿಸಿದ್ದಾರೆ.

IPL 2026 Tickets: ಶಾಸಕರು ಐಪಿಎಲ್ ಉಚಿತ ಟಿಕೆಟ್ ಕೇಳುವುದು ತಪ್ಪು: ಡಿ.ಕೆ. ಸುರೇಶ್ ಅಸಮಾಧಾನ

ಶಾಸಕರು ಐಪಿಎಲ್ ಉಚಿತ ಟಿಕೆಟ್ ಕೇಳುವುದು ತಪ್ಪು ಎಂದ ಡಿ.ಕೆ. ಸುರೇಶ್

DK Suresh: ಶಾಸಕರಿಗೆ ಉಚಿತವಾಗಿ ಐಪಿಎಲ್ (IPL) ಟಿಕೆಟ್ ನೀಡಬೇಕು ಎಂಬ ಬೇಡಿಕೆ ಬಗ್ಗೆ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಪ್ರತಿಕ್ರಿಯಿಸಿದ್ದು, ಐಪಿಎಲ್ ರಾಷ್ಟ್ರವನ್ನು ಪ್ರತಿನಿಧಿಸುವ ಪಂದ್ಯಾವಳಿ ಅಲ್ಲ. ವಾಣಿಜ್ಯ ಉದ್ದೇಶಿತ ಪಂದ್ಯಾವಳಿ. ಇವುಗಳ ಬಗ್ಗೆ ಜನಪ್ರತಿನಿಧಿಗಳು ಹೆಚ್ಚು ಗಮನಹರಿಸುವುದು ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

IPL 2026 Tickets: ನನ್ನ ಹೆಸರಲ್ಲಿ ಐಪಿಎಲ್‌ ಟಿಕೆಟ್, ಪಾಸ್‌ ವಿತರಿಸಬೇಡಿ: ಸ್ಪೀಕರ್‌ಗೆ ಶಾಸಕ ಸುರೇಶ್‌ ಕುಮಾರ್‌ ಪತ್ರ

ನನಗೆ ಐಪಿಎಲ್‌ ಟಿಕೆಟ್‌ ಬೇಡ; ಸ್ಪೀಕರ್‌ಗೆ ಶಾಸಕ ಸುರೇಶ್‌ ಕುಮಾರ್‌ ಪತ್ರ

ರಾಜ್ಯ ಸರ್ಕಾರ ಅಥವಾ ಕೆ.ಎಸ್.ಸಿ.ಎ. ವತಿಯಿಂದ ಶಾಸಕರಿಗೆ ನೀಡಲಾಗುವ ಐಪಿಎಲ್ ಪಂದ್ಯದ ಯಾವುದೇ ಪಾಸ್ ಅಥವಾ ಟಿಕೆಟ್‌ಗಳನ್ನು ನಾನು ಸವಿನಯವಾಗಿ ನಿರಾಕರಿಸುತ್ತಿದ್ದೇನೆ. ಹೀಗಾಗಿ ತಮ್ಮ ಹೆಸರಿನಲ್ಲಿ ಯಾವುದೇ ಟಿಕೆಟ್ ಅಥವಾ ಪಾಸ್‌ಗಳನ್ನು ವಿತರಿಸಬಾರದೆಂದು ಸ್ಪೀಕರ್‌ ಯು.ಟಿ. ಖಾದರ್‌ ಅವರಿಗೆ ಶಾಸಕ ಸುರೇಶ್‌ ಕುಮಾರ್‌ ಮನವಿ ಮಾಡಿದ್ದಾರೆ.

E-Swachhta Abhiyan: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿಂದು ಇ-ಸ್ವಚ್ಛತಾ ಅಭಿಯಾನ

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿಂದು ಇ-ಸ್ವಚ್ಛತಾ ಅಭಿಯಾನ

ಗಾಂಧೀಜಿಯವರ ಸ್ವಚ್ಛತೆಯೇ ಸೇವೆ ಮತ್ತು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಧ್ಯೇಯವಾಕ್ಯಗಳೊಂದಿಗೆ, ಮಾನ್ಯ ಶಾಸಕರ ಸೂಚನೆಯ ಮೇರೆಗೆ ಹಳಿಯಾಳ ತಾಲೂಕಿನ ಸಂಪೂರ್ಣ ಸ್ವಾಸ್ಥ್ಯಕ್ಕಾಗಿ ಈ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದೇವೆ. ಇದು ಕೇವಲ ಒಂದು ದಿನದ ಕಾರ್ಯಕ್ರಮವಲ್ಲ

Sari Swag Run 2026: ಮಹಿಳೆಯರ ಆರೋಗ್ಯದ ಬಗ್ಗೆ ಅರಿವು ಮೂಡಿಸಲು ಹುಬ್ಬಳ್ಳಿಯಲ್ಲಿ ಎಚ್‌ಸಿಜಿ ಆಸ್ಪತ್ರೆ ವತಿಯಿಂದ 'ಸಾರಿ ಸ್ವಾಗ್ ರನ್ 2026'

ಹುಬ್ಬಳ್ಳಿಯಲ್ಲಿ ಎಚ್‌ಸಿಜಿ ಆಸ್ಪತ್ರೆ ವತಿಯಿಂದ 'ಸಾರಿ ಸ್ವಾಗ್ ರನ್ 2026'

ನಡಿಗೆಯ ಬಳಿಕ ಭಾಗವಹಿಸಿದ ಎಲ್ಲರಿಗೂ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ ಹಾಗೂ ಬಿಎಂಐ ಸೇರಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಇದಕ್ಕಾಗಿ ಪ್ರತ್ಯೇಕ ಮಹಿಳಾ ಆರೋಗ್ಯ ಜಾಗೃತಿ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಇಲ್ಲಿ ಮಹಿಳೆಯರು ವೈದ್ಯಕೀಯ ವೃತ್ತಿ ಪರರೊಂದಿಗೆ ಸಮಾಲೋಚನೆ ನಡೆಸಿ, ಮುಂಜಾಗ್ರತಾ ಆರೋಗ್ಯ ಮತ್ತು ದಿನನಿತ್ಯದ ತಪಾಸಣೆ ಗಳ ಕುರಿತು ಮಾರ್ಗದರ್ಶನ ಪಡೆದರು

ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ಪಂಚ ಮಹಾರಥೋತ್ಸವಕ್ಕೆ ಚಾಲನೆ: ಉತ್ಸವವನ್ನು ಕಣ್ತುಂಬಿಕೊಳ್ಳಲಿರುವ ಲಕ್ಷಾಂತರ ಭಕ್ತರು Video

ನಂಜನಗೂಡು ಶ್ರೀಕಂಠೇಶ್ವರಸ್ವಾಮಿಯ ಪಂಚ ಮಹಾರಥೋತ್ಸವಕ್ಕೆ ಅದ್ಧೂರಿ ಚಾಲನೆ

Nanjangud Srikanteshwara Temple: ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ನಂಜನಗೂಡು ಶ್ರೀಕಂಠೇಶ್ವರಸ್ವಾಮಿಯ ಪಂಚ ಮಹಾರಥೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಮತ್ತು ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ರಥ ಚಲನ ಮಹೋತ್ಸವದಲ್ಲಿ 5 ರಥಗಳಿಗೆ ಪೂಜೆ ಸಲ್ಲಿಸಿ ರಥ ಕಟ್ಟಲು ಚಾಲನೆ ದೊರೆಯಿತು.

Loading...