ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
ಬೆಂಗಳೂರಿನ ನಾಲೆಡ್ಜಿಎಂ ಅಕಾಡೆಮಿಯಿಂದ "ಟ್ರಾನ್ಸೆಂಡೆನ್ಸ್ 2025" ಕಾರ್ಯಕ್ರಮ ಆಚರಣೆ

ನಾಲೆಡ್ಜಿಎಂ ಅಕಾಡೆಮಿಯಿಂದ "ಟ್ರಾನ್ಸೆಂಡೆನ್ಸ್ 2025" ಕಾರ್ಯಕ್ರಮ ಆಚರಣೆ

ಭಾರತೀಯ ಖಗೋಳ ವಿಜ್ಞಾನ ಸಂಸ್ಥೆಯ ಮತ್ತು ಇಂಡಿಯಾ TMT ಕೇಂದ್ರದ ಹಿರಿಯ ವಿಜ್ಞಾನಿಯಾದ ಡಾ.ರಾಮ್ಯಾ ಸೇತುರಾಮ್ ಅವರ ಭಾಷಣವು ವಿದ್ಯಾರ್ಥಿಗಳ ಅನ್ವೇಷಣಾ ಪ್ರಯಾಣಕ್ಕೆ ಪ್ರೇರಣೆ ಯಾಯಿತು. ಅಲ್ಲದೇ ಈ ಹಿರಿಯ ವಿಜ್ಞಾನಿಯು ಭಾರತ ಮಾತ್ರವಲ್ಲದೇ, ಚೀನಾ ಮತ್ತು ಫ್ರಾನ್ಸ್ನಲ್ಲಿ ಕೂಡ ಅವರ ಕಾರ್ಯ ಕ್ಷೇತ್ರವಾದ ಖಗೋಳಶಾಸ್ತ್ರದಲ್ಲಿ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿದ್ದಾರೆ

Bengaluru News: ನಾರಾಯಣ ಸೇವಾ ಸಂಸ್ಥಾನದಿಂದ ದಕ್ಷಿಣ ಭಾರತದ 700ಕ್ಕೂ ಹೆಚ್ಚು ದಿವ್ಯಾಂಗರಿಗೆ ಕೃತಕ ಅಂಗಾಂಗ ಜೋಡಣೆ

ದಕ್ಷಿಣ ಭಾರತದ 700 ಕ್ಕೂ ಹೆಚ್ಚು ದಿವ್ಯಾಂಗರಿಗೆ ಕೃತಕ ಅಂಗಾಂಗ ಜೋಡಣೆ

ದಿವ್ಯಾಂಗರು ಮತ್ತವರ ಕುಟುಂಬಕ್ಕೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡಲಾ ಗಿತ್ತು. ನಾರಾಯಣ ಸೇವಾ ಸಂಸ್ಥಾನದ ಬೆಂಗಳೂರು ಉಸ್ತುವಾರಿ ಖುಬಿಲಾಲ್ ಮೆನಾರಿಯಾ, ಮುಂಬೈ ಶಾಖೆ ಮುಖ್ಯಸ್ಥ ಲಲಿತ್ ಲೋಹರ್, ಸಾಮಾಜಿಕ ಕಾರ್ಯಕರ್ತ ರಾಕೇಶ್ ವೈಷ್ಣವ್, ಗಾನವಿ ಮತ್ತು ಮಾಧ್ಯಮ ಸಂಯೋಜಕರಾದ ಚಂದ್ರಶೇಖರಯ್ಯ ಮತ್ತಿತರರು ದಿವ್ಯಾಂಗರಿಗೆ ನೆರವಾದರು.

MP P C Mohan: ದಿವ್ಯಾಂಗರ ಶ್ರೇಯೋಭಿವೃದ್ಧಿಗೆ ಬದ್ಧ : ಸಂಸತ್ತಿನ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಮಿತಿ ಅಧ್ಯಕ್ಷ ಪಿ.ಸಿ. ಮೊಹನ್

ದಿವ್ಯಾಂಗರ ಶ್ರೇಯೋಭಿವೃದ್ಧಿಗೆ ಬದ್ಧ: ಸಂಸದ ಪಿ.ಸಿ. ಮೋಹನ್

ನಾರಾಯಣ ಸೇವಾ ಸಮಿತಿ ಕರ್ನಾಟಕದಲ್ಲೂ ಉತ್ತಮ ಸೇವೆ ಸಲ್ಲಿಸುತ್ತಿದೆ. ಮೂರನೇ ಬಾರಿಗೆ ಅತಿ ದೊಡ್ಡ ಕೃತಕ ಅಂಗಾಂಗ ಜೋಡಣಾ ಶಿಬಿರ ಏರ್ಪಡಿಸಿರುವುದು ಉತ್ತಮ ಬೆಳವಣಿಗೆ. ಈ ಸಂಸ್ಥೆಯವರು ದೇವರಂತೆ ದಿವ್ಯಾಂಗರಿಗೆ ನೆರವಾಗುತ್ತಿದೆ. ಬೇರೆಯವರಿಗಾಗಿ ಕೆಲಸ ಮಾಡುವ ಮೂಲಕ ಉದಾತ್ತ ಕಾರ್ಯದಲ್ಲಿ ನಿರತವಾಗಿದೆ

Chikkanayakanahalli Accident: ಮದ್ಯ ಸಾಗಿಸುತ್ತಿದ್ದ ವಾಹನ ಪಲ್ಟಿ

ಮದ್ಯ ಸಾಗಿಸುತ್ತಿದ್ದ ವಾಹನ ಪಲ್ಟಿ

ಹಂದನಕೆರೆ ಹೋಬಳಿಯ ಗೋಪಾಲಪುರದ ಕೆರೆಕೋಡಿ ಸಮೀಪ ಮದ್ಯ ಸಾಗಿಸುತ್ತಿದ್ದ ವಾಹನ ಮಗುಚಿ ಬಿದ್ದಿದೆ. ಆಯತಪ್ಪಿ ಕೆಳಕ್ಕೆ ಉರುಳಿದ್ದರಿಂದ ವಾಹನದಲ್ಲಿದ್ದ ನೂರಾರು ಮದ್ಯದ ಬಾಕ್ಸ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇದನ್ನು ಗಮನಿಸಿದ ಸ್ಥಳಿಯರು ಮದ್ಯದ ಬಾಕ್ಸ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಹಾಸನದಿಂದ ಚಳ್ಳಕೆರೆಗೆ ಮದ್ಯದ ಬಾಕ್ಸ್ ಸಾಗಣೆ ಮಾಡುವ ವೇಳೆ ಈ ಅವಘಡ ಸಂಭವಿಸಿದೆ

Karnataka Rains: ವಿಜಯನಗರ, ರಾಯಚೂರಲ್ಲಿ ಮಳೆ ಆರ್ಭಟ; ಸಿಡಿಲಿಗೆ ಇಬ್ಬರು ವ್ಯಕ್ತಿಗಳು, ಹಸು ಬಲಿ

ರಾಜ್ಯದಲ್ಲಿ ಮಳೆ ಆರ್ಭಟ; ಸಿಡಿಲಿಗೆ ಇಬ್ಬರು ವ್ಯಕ್ತಿಗಳು, ಹಸು ಬಲಿ

Karnataka Rains: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದಲ್ಲಿ ಸಿಡಿಲು ಬಡಿದು ಕೂಲಿ ಕಾರ್ಮಿಕ ಹಾಗೂ ಆಕಳು ಮೃತಪಟ್ಟಿದೆ. ಅದೇ ರೀತಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೆಗುಡದಿನ್ನಿ ಗ್ರಾಮದಲ್ಲಿ ಸಿಡಿಲು ಬಡಿದು ಪತಿ ಮೃತಪಟ್ಟು, ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮದುವೆಯಾಗಿ ವಂಚಿಸಿದ ಪೊಲೀಸ್; ನ್ಯಾಯಕ್ಕಾಗಿ ಸಖಿ ಕೇಂದ್ರದ ಮೊರೆ ಹೋದ ಮಹಿಳಾ ಸಿಬ್ಬಂದಿ

ಮದುವೆಯಾಗಿ ಮಹಿಳಾ ಸಿಬ್ಬಂದಿಗೆ ವಂಚಿಸಿದ ಪೊಲೀಸ್

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತೂರು ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಯೊಬ್ಬರು, ಮಹಿಳಾ ಸಿಬ್ಬಂದಿಯನ್ನು ಸುಮಾರು 4-5 ವರ್ಷ ಪ್ರೀತಿಸಿ ಮದುವೆಯಾಗಿದ್ದರು. ಇದೀಗ ಬೇರೊಂದು ಮದುವೆಯಾಗಲು ಹೊರಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ನ್ಯಾಯಕ್ಕಾಗಿ ಮಹಿಳಾ ಸಿಬ್ಬಂದಿ, ಸಖಿ ಕೇಂದ್ರದ ಮೊರೆ ಹೋಗಿದ್ದಾರೆ.

Road accident: ಮದ್ಯ ಸಾಗಿಸುತ್ತಿದ್ದ ವಾಹನ ಪಲ್ಟಿ; ಎಣ್ಣೆ ಬಾಟಲಿಗಾಗಿ ಮುಗಿಬಿದ್ದ ಸ್ಥಳೀಯರು!

ಮದ್ಯ ಸಾಗಿಸುತ್ತಿದ್ದ ವಾಹನ ಪಲ್ಟಿ; ಎಣ್ಣೆ ಬಾಟಲಿಗಾಗಿ ಮುಗಿಬಿದ್ದ ಸ್ಥಳೀಯರು

Road accident: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಗೋಪಾಲಪುರದ ಕೆರೆಕೋಡಿ ಸಮೀಪ ಅಪಘಾತ ನಡೆದಿದೆ. ಚಾಲಕನ ನಿಯಂತ್ರಣ ವಾಹನ ಉರುಳಿದಿದ್ದರಿಂದ ನೂರಾರು ಮದ್ಯದ ಬಾಕ್ಸ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಹಾಸನದಿಂದ ಚಳ್ಳಕೆರೆಗೆ ಮದ್ಯದ ಬಾಕ್ಸ್ ಸಾಗಣೆ ವೇಳೆ ಅವಘಡ ನಡೆದಿದೆ.

Karnataka weather: ನಾಳೆ ಬೆಂಗಳೂರು ಸೇರಿ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ!

ನಾಳೆ ಬೆಂಗಳೂರು, ಕೋಲಾರ ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ!

Karnataka weather: ಬೀದರ್‌ನಲ್ಲಿ ಶನಿವಾರ ರಾಜ್ಯದಲ್ಲೇ ಅತೀ ಹೆಚ್ಚು ಉಷ್ಣಾಂಶ 40.8 ಡಿ.ಸೆ ದಾಖಲಾಗಿದೆ. ಇನ್ನು ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮುಂದಿನ 3 ದಿನಗಳವರೆಗೆ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ. ನಂತರ 2-3 ಡಿಗ್ರಿ ಸೆಲ್ಸಿಯಸ್ ಕ್ರಮೇಣ ಹೆಚ್ಚಳವಾಗುತ್ತದೆ. ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

CET 2025: ಸಿಇಟಿ-2025 ಪರಿಷ್ಕೃತ ಕೀ ಉತ್ತರ ಪ್ರಕಟ; ಭೌತಶಾಸ್ತ್ರಕ್ಕೆ ಒಂದು ಕೃಪಾಂಕ

ಸಿಇಟಿ-2025 ಪರಿಷ್ಕೃತ ಕೀ ಉತ್ತರ ಪ್ರಕಟ; ಭೌತಶಾಸ್ತ್ರಕ್ಕೆ ಒಂದು ಕೃಪಾಂಕ

CET 2025: ಯುಜಿಸಿಇಟಿ 2025ರ ಪರೀಕ್ಷೆಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಏ.16 ಮತ್ತು ಏ.17ರಂದು ಪರೀಕ್ಷೆಗಳನ್ನು ನಡೆಸಲಾಗಿತ್ತು. ಏ.18ರಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಕೀ ಉತ್ತರ ಪ್ರಕಟಿಸಲಾಗಿತ್ತು. ಇದೀಗ ಪರಿಷ್ಕೃತ ಕೀ ಉತ್ತರ ಪ್ರಕಟವಾಗಿದೆ.

CM Siddaramaiah: ಸಿದ್ದರಾಮಯ್ಯ ಪಾಕಿಸ್ತಾನ ರತ್ನ ಎಂದ ಬಿಜೆಪಿ

ಸಿದ್ದರಾಮಯ್ಯ ಪಾಕಿಸ್ತಾನ ರತ್ನ; ಬಿಜೆಪಿ ವಾಗ್ದಾಳಿ

ಪಾಕಿಸ್ತಾನದ ಜತೆ ಯುದ್ಧಕ್ಕೆ ಬೆಂಬಲವಿಲ್ಲ ಎಂಬ ಹೇಳಿಕೆ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆಗೆ ಗುರಿಯಾಗಿದ್ದಾರೆ. ಅವರ ಹೇಳಿಕೆಗೆ ಬಿಜೆಪಿ ನಾಯಕರು ತೀಕ್ಷ್ಣ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ. ಕೆಲವರು ಸಿದ್ದರಾಮಯ್ಯ ಅವರನ್ನು "ಪಾಕಿಸ್ತಾನ ರತ್ನ" ಎಂದು ಕರೆದಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಪಾಕಿಸ್ತಾನ ಮಾಧ್ಯಮಗಳು ಕೂಡ ವರದಿ ಮಾಡಿವೆ.

Suthradaari Trailer: 'ಸೂತ್ರಧಾರಿ' ಚಿತ್ರದ ಟ್ರೈಲರ್ ರಿಲೀಸ್ ಮಾಡಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

'ಸೂತ್ರಧಾರಿ' ಟ್ರೈಲರ್ ರಿಲೀಸ್ ಮಾಡಿದ ನಟ ಧ್ರುವ ಸರ್ಜಾ

Suthradaari Trailer: ಮೇ 9 ಕ್ಕೆ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಸೂತ್ರಧಾರಿ ಚಿತ್ರದ ಟ್ರೇಲರ್ ಅನ್ನು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಅನಾವರಣ ಮಾಡಿದ್ದಾರೆ. ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ನವರಸನ್‌ ನಿರ್ಮಾಣ‌ ಮಾಡಿರುವ,‌ ಕಿರಣ್ ಕುಮಾರ್ ನಿರ್ದೇಶನದಲ್ಲಿ ಚಂದನ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ಚಿತ್ರ ಇದಾಗಿದೆ.

CM Siddaramaiah: ಸರ್ಕಾರದ ಬಳಿ ಹಣ ಇಲ್ಲ ಎನ್ನುವ ಬಿಜೆಪಿ ಸುಳ್ಳುಗಳಿಗೆ ಅಭಿವೃದ್ಧಿ ಮೂಲಕವೇ ಉತ್ತರ: ಸಿಎಂ

ಬಿಜೆಪಿ ಸುಳ್ಳುಗಳಿಗೆ ಅಭಿವೃದ್ಧಿ ಮೂಲಕವೇ ಉತ್ತರ: ಸಿಎಂ

CM Siddaramaiah: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ

Pahalgam Terror Attack: ಪಾಕ್ ವಿರುದ್ಧ ಯುದ್ಧ ಬೇಡ ಹೇಳಿಕೆ ವಿವಾದ: ಸಿಎಂ ಸ್ಪಷ್ಟನೆ ಏನು?

ಪಾಕ್ ವಿರುದ್ಧ ಯುದ್ಧ ಬೇಡ ಹೇಳಿಕೆ ವಿವಾದ: ಸಿಎಂ ಸ್ಪಷ್ಟನೆ ಏನು?

Pahalgam Terror Attack: ಪಾಕಿಸ್ತಾನದ ಜತೆ ಯುದ್ಧ ಮಾಡುವ ಅಗತ್ಯವಿಲ್ಲ ಎಂಬ ಹೇಳಿಕೆಗೆ ಟೀಕೆಗಳು ವ್ಯಕ್ತವಾದ ಹಿನ್ನೆಲೆ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ಅನಿವಾರ್ಯವಾದರೆ ಯುದ್ಧಕ್ಕೂ ಸಿದ್ದ ಎನ್ನುವ ಮಾತನ್ನು ನೆನ್ನೆ ನಾನು ಹೇಳಿದ್ದೆ. ಆದರೆ ಭಯೋತ್ಪಾದಕರ ವಿರುದ್ಧ, ಪಾಕಿಸ್ತಾನದ ವಿರುದ್ಧ ಯುದ್ಧವೇ ಬೇಡ ಎಂದು ಹೇಳಿದ್ದೇನೆ ಎಂದು ಸುಳ್ಳು ಸುದ್ದಿಯನ್ನು ಬಿಜೆಪಿ ಪ್ರಚಾರ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Stabbing case: ಜಾಸ್ತಿ ಚಾಟಿಂಗ್‌ ಮಾಡಬೇಡ ಎಂದಿದ್ದಕ್ಕೆ ಪತಿಗೇ ಚಾಕು ಇರಿದ ಪತ್ನಿ!

ಜಾಸ್ತಿ ಚಾಟಿಂಗ್‌ ಮಾಡಬೇಡ ಎಂದಿದ್ದಕ್ಕೆ ಪತಿಗೇ ಚಾಕು ಇರಿದ ಪತ್ನಿ!

Stabbing case: ಸದಾ ಮೊಬೈಲ್‌ನಲ್ಲಿ ಬೇರೆಯವರೊಂದಿಗೆ ಚಾಟ್ ಮಾಡುತ್ತಿದ್ದುದ್ದಕ್ಕೆ ಪತಿ ಬುದ್ಧಿವಾದ ಹೇಳಿದ್ದರು. ಇದರಿಂದ ಪತ್ನಿಗೆ ಸಿಟ್ಟು ಬಂದು, ಮಲಗಿದ್ದಾಗ ಪತಿಯನ್ನು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದಾಳೆ. ವಿಜಯಪುರದ ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mann Ki Baat: ಬಿಸಿಲ ನಾಡಿನಲ್ಲಿ ಸೇಬು ಕೃಷಿ; ಮುಧೋಳ ರೈತನನ್ನು ಹೊಗಳಿದ ಪ್ರಧಾನಿ ಮೋದಿ

ಮುಧೋಳದ ಸೇಬು ಬೆಳೆಗಾರನನ್ನು ಹೊಗಳಿದ ಪ್ರಧಾನಿ ಮೋದಿ

Mann Ki Baat: ಹಿಮದ ಪ್ರದೇಶದಲ್ಲಷ್ಟೇ ಭರಪೂರ ಸೇಬು ಬೆಳೆಬಹುದು ಎಂಬ ಕಲ್ಪನೆಯಿದೆ. ಆದರೆ, ಬಿಸಿಲ ನಾಡಿನಲ್ಲಿ ಸೇಬು ಬೆಳೆಯುವ ಮೂಲಕ ಅಚ್ಚರಿ ಮೂಡಿಸಿರುವ ಮುಧೋಳದ ರೈತ ಶ್ರೀಶೈಲ ತೇಲಿ ಅವರು, ಕಳೆದ ಎರಡೂವರೆ ವರ್ಷದಲ್ಲಿ ಸೇಬು ಬೆಳೆದು 15 ಲಕ್ಷ ರೂ.ಗಳ ಲಾಭ ಮಾಡಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟ ಅಶ್ವಿನಿ ಪುನೀತ್‌ ರಾಜ್‌ಕುಮಾರ್; ʼಜೂನಿಯರ್ ಟಾಯಿಸ್‌ ಇಂಟರ್‌ನ್ಯಾಶನಲ್‌ ಪ್ರಿಸ್ಕೂಲ್ʼ ಪ್ರವೇಶ ಜೂನ್‌ನಿಂದ ಆರಂಭ

ಪ್ರಿಸ್ಕೂಲ್ ಆರಂಭಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್

Ashwini Puneeth Rajkumar: ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಚಿತ್ರರಂಗದ ಜತೆಗೆ ಶಿಕ್ಷಣ ಕ್ಷೇತ್ರಕ್ಕೂ ಪ್ರವೇಶಿಸಿದ್ದಾರೆ. 'ಜೂನಿಯರ್ ಟಾಯಿಸ್‌ ಇಂಟರ್‌ನ್ಯಾಶನಲ್‌ ಪ್ರಿಸ್ಕೂಲ್' ಅನ್ನು ಪ್ರಾರಂಭಿಸಿದ್ದಾರೆ. ಸುನಿತಾ ಗೌಡ, ಸ್ಪೂರ್ತಿ ವಿಶ್ವಾಸ್, ಮತ್ತು ಶೃತಿ ಕಿರಣ್‌ ಅವರೊಂದಿಗೆ ಈ ಕಾರ್ಯಕ್ಕಾಗಿ ಕೈ ಜೋಡಿಸಿದ್ದಾರೆ.

Akshaya Trutiya Special: ಅಕ್ಷಯ ತೃತೀಯಾಗೆ ಎಂಟ್ರಿ ನೀಡಿದ ಕಂಟೆಂಪರರಿ ಡೈಮಂಡ್‌ ಜ್ಯುವೆಲರಿಗಳು

ಅಕ್ಷಯ ತೃತೀಯಾಗೆ ಎಂಟ್ರಿ ನೀಡಿದ ಕಂಟೆಂಪರರಿ ಡೈಮಂಡ್‌ ಜ್ಯುವೆಲರಿಗಳು

Akshaya Trutiya Special: ಈ ಬಾರಿ ಅಕ್ಷಯ ತೃತೀಯಾಗೆ ಮಧ್ಯಮ ವರ್ಗದವರು ಕೊಳ್ಳಬಹುದಾದ ಬೆಲೆಯಲ್ಲಿ ಕಂಟೆಂಪರರಿ ವಿನ್ಯಾಸದ ಡೈಮಂಡ್‌ ಆಭರಣಗಳು ಜ್ಯುವೆಲರಿ ಲೋಕದಲ್ಲಿ ಕಾಲಿಟ್ಟಿವೆ. ಯಾವ್ಯಾವ ಬಗೆಯವು ಚಾಲ್ತಿಯಲ್ಲಿವೆ? ಈ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ.

ಸಮುದಾಯದ ಶೈಕ್ಷಣಿಕ ಸಾಮಾಜಿಕ ಅಭಿವೃದ್ಧಿಯೇ ನಮ್ಮ ಸಂಘದ ಧ್ಯೇಯವಾಗಿದೆ

ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

ಡಾ.ಬಿ.ಆರ್.ಅಂಬೇಡ್ಕರ್ ಸಹಕಾರ ಸಂಘದ  ೫ ವರ್ಷಗಳ ಆಡಳಿತ ಮಂಡಳಿಗೆ ನೂತನ ಆಡಳಿತ ಮಂಡಳಿ ಇಂದಿನಿAದ ನಿಯಮಗಳಂತೆ ಚಾಲ್ತಿಗೆ ಬಂದಿದೆ.ನಮ್ಮ ಸಂಘವು ಚಿಕ್ಕಬಳ್ಳಾಪುರ ತಾಲೂಕು ವ್ಯಾಪ್ತಿಗೆ ಸೀಮಿತವಾಗಿದ್ದು 130 ಷೇರುದಾರ ರಿದ್ದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ಖಾತೆಯನ್ನು ತೆರೆದಿದ್ದು ಸಹಕಾರ ಸಂಘಗಳ ನಿಯಮದಂತೆ ಕಾರ್ಯನಿರ್ವಹಿಸಲಿದೆ

Star Summer Fashion: ನಟಿ ಕೃತಿ ಸನೋನ್‌ ಸಮ್ಮರ್‌ ಫ್ಯಾಷನ್‌ ಲವ್‌

Star Summer Fashion: ನಟಿ ಕೃತಿ ಸನೋನ್‌ ಸಮ್ಮರ್‌ ಫ್ಯಾಷನ್‌ ಲವ್‌

Star Summer Fashion: ಬೇಸಿಗೆ ಸೀಸನ್‌ ಆಕರ್ಷಕ ಪ್ರಯೋಗಾತ್ಮಕ ಫ್ಯಾಷನ್‌ವೇರ್ಸ್‌ ಧರಿಸಲು ಅವಕಾಶ ನೀಡುತ್ತದೆ. ಹಾಗಾಗಿ ನನಗೆ ಈ ಸೀಸನ್‌ ಇಷ್ಟ ಎನ್ನುವ ಬಾಲಿವುಡ್‌ ನಟಿ ಕೃತಿ ಸನೂನ್‌, ಮಾಧ್ಯಮದ ಸಂದರ್ಶನವೊಂದರಲ್ಲಿ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸೀಸನ್‌ ಟಿಪ್ಸ್‌ ಕೂಡ ನೀಡಿದ್ದಾರೆ.

Karnataka Weather: ಇಂದು ಬೆಳಗಾವಿ, ಧಾರವಾಡ ಸೇರಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಸಾಧ್ಯತೆ

ಇಂದು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಸಾಧ್ಯತೆ

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ಆಕಾಶ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 34 ° C ಮತ್ತು 23 ° C ಇರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

Chikkaballapur News: ದಾಳಿಯಲ್ಲಿ ಮಡಿದವರಿಗೆ ಕ್ಯಾಂಡಲ್ ಬೆಳಗಿ ಗೌರವ ಸಲ್ಲಿಕೆ,  ಬಿಜೆಪಿ ಮುಖಂಡ ಸಂದೀಪ್ ಬಿ ರೆಡ್ಡಿ ಮತ್ತು ಸಾರ್ವಜನಿಕರು ಭಾಗಿ

ಪಹಲ್ಗಾಮ್ ದಾಳಿ ಖಂಡಿಸಿ ಹಿಂದೂ ಸಂಘಟನೆಗಳ ಪಂಜಿನ ಮೆರವಣಿಗೆ

ಪೆಹಲ್ಗಾಂ ನಲ್ಲಿ ಪಾಕಿಸ್ತಾನ ಉಗ್ರರು ಭಾರತದ ಪ್ರವಾಸಿಗರ ಮೇಲೆ ನಡೆಸಿರುವ ಅಟ್ಟಹಾಸಕ್ಕೆ ನನ್ನ ಖಂಡನೆ ಇದೆ. ಇದೊಂದು ಹೇಡಿಗಳ ಕೃತ್ಯವಾಗಿದೆ. ಅಭಿವೃದ್ಧಿಯ ಮೂಲಕ ಭಾರತವನ್ನು ಎದುರಿಸಲಾಗದ ಪಾಕಿಸ್ತಾನ ಉಗ್ರರನ್ನು ಛೂ ಬಿಟ್ಟು ವಿಕೃತ ಆನಂದ ಪಡುತ್ತಿದೆ.

Chikkaballapur News: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಪುಟ್ಟಣ್ಣಯ್ಯ ಬಣದ ವತಿಯಿಂದ 28ರಂದು ಮಂಚೇನಹಳ್ಳಿ ಬಂದ್ ಗೆ ಕರೆ

28ರಂದು ಮಂಚೇನಹಳ್ಳಿ ಬಂದ್ ಗೆ ಕರೆ: ಲಕ್ಷ್ಮಿನಾರಾಯಣರೆಡ್ಡಿ

ಸೋಮವಾರ ನಡೆಯಲಿರುವ ಮಂಚೇನಹಳ್ಳಿ ಬಂದ್ ಕರೆಗೆ ಸ್ವಯಂ ಪ್ರೇರಿತವಾಗಿ ಭಾಗವಹಿಸಲು ಬರುತ್ತಿರುವ ಎಲ್ಲಾ ಸಂಘ-ಸಂಸ್ಥೆಗಳ ಮುಖಂಡರು ಕಾರ್ಯಕರ್ತರು, ಮಂಚೇನಹಳ್ಳಿ ಭಾಗದ ನಾಗರಿಕರಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದ ಅವರು ಶಾಂತಿಯುತವಾಗಿ ನಡೆಸುವ ಬಂದ್ ಹತ್ತಿಕ್ಕುವ ಕೆಲಸವನ್ನು ಜಿಲ್ಲಾಡಳಿತ ಪೊಲೀಸರು ಮಾಡಬಾರದು ಎಂದು ಎಚ್ಚರಿಸಿದರು

Vijayanagar News: ಕಾಶ್ಮೀರದ ಪಲ್ಗಾಮ ಜಿಲ್ಲೆಯಲ್ಲಿ ಉಗ್ರರಿಂದ ಹತರಾದ ವ್ಯಕ್ತಿಗಳ ಆತ್ಮಕ್ಕೆ ಶ್ರದ್ದಾಂಜಲಿ

ಉಗ್ರರಿಂದ ಹತರಾದ ವ್ಯಕ್ತಿಗಳ ಆತ್ಮಕ್ಕೆ ಶ್ರದ್ದಾಂಜಲಿ

ಭಯೋತ್ಪಾದಕರಿಂದ ಹತರಾದ ಮಂಜುನಾಥರಾವ್,ಭರತ ಭೂಷಣ, ಮಧುಸೂದನರಾವ್ ಅವರುಗಳ ಭಾವಚಿತ್ರ ಹಿಡಿದು ಹಾಗೂ ಮೇಣದಬತ್ತಿ ಹಚ್ಚಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಅಮಾಯಕ ಪ್ರವಾಸಿಗರನ್ನು ಉಗ್ರರು ಕೊಲೆ ಮಾಡಿದ್ದು ಅತ್ಯಂತ ಖಂಡನೀಯ , ಕೇಂದ್ರ ಸರ್ಕಾರ ಉಗ್ರರನ್ನು ಸದೆಬಡಿಯಬೇಕು ಎಂದು ಒತ್ತಾಯಿಸಿದರು

ಸತ್ಕರ್ಮಗಳಿಂದ ಮಾತ್ರ ಟೀಕಿಸುವವರಿಗೆ ಉತ್ತರ ಕೊಡಲು ಸಾಧ್ಯ: ಪ್ರಸನ್ನನಾಥ ಸ್ವಾಮೀಜಿ

ಚುಂಚಾದ್ರಿ ಉತ್ಸವ 2025ರ ಸಮಾರೋಪ

ನಮ್ಮ ಸತ್ಕರ್ಮಗಳಿಂದ ಮಾತ್ರ ನಮ್ಮನ್ನ ಟೀಕಿಸುವವರಿಗೆ ಉತ್ತರ ಕೊಡಲು ಸಾಧ್ಯ. ಬದುಕಿನಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ಅವಕಾಶ ಸಿಗುವುದು ಪುಣ್ಯದ ಕೆಲಸ. ಆ ನಿಟ್ಟಿನಲ್ಲಿ ಈ ಪ್ರಯತ್ನ ಪ್ರಶಂಸನೀಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದ್ದಾರೆ.