ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Girish mattannavar: ಗಿರೀಶ್‌ ಮಟ್ಟಣ್ಣವರ್‌ಗೆ ಸಂಕಷ್ಟ, ಶಾಸಕರ ಭವನದಲ್ಲಿ ಬಾಂಬ್‌ ಇಟ್ಟ ಪ್ರಕರಣಕ್ಕೆ ಮರುಜೀವ

ಗಿರೀಶ್‌ ಮಟ್ಟಣ್ಣವರ್‌ಗೆ ಸಂಕಷ್ಟ, ಶಾಸಕರ ಭವನದ ಬಾಂಬ್‌ ಪ್ರಕರಣಕ್ಕೆ ಮರುಜೀವ

bomb threat: ಪ್ರಕರಣ ಈಗಾಗಲೇ ಕೋರ್ಟ್‌ನಲ್ಲಿ ಖುಲಾಸೆಯಾಗಿದ್ದರೂ ಹೊಸ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಪುನಃ ತನಿಖೆ ನಡೆಸುವ ಅಗತ್ಯವಿದೆ. ಪ್ರಕರಣ ಖುಲಾಸೆಯಾದ ಬಳಿಕವೂ ಹಲವು ಸಂದರ್ಭಗಳಲ್ಲಿ ಈ ಕುರಿತು ಮಟ್ಟಣ್ಣವರ್‌ ಮಾತನಾಡಿದ್ದಾರೆ ಎಂದು ಪ್ರಶಾಂತ್ ಸಂಬರಗಿ ದೂರಿನಲ್ಲಿ ತಿಳಿಸಿದ್ದಾರೆ.

BS Yediyurappa: ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್‌ ರದ್ದು ಇಲ್ಲ: ‌ಕರ್ನಾಟಕ ಹೈಕೋರ್ಟ್‌

ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್‌ ರದ್ದು ಇಲ್ಲ: ಹೈಕೋರ್ಟ್‌

High court: ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂಬುದನ್ನು ಬಿಎಸ್‌ ಯಡಿಯೂರಪ್ಪ ಒಪ್ಪಿಕೊಂಡಿಲ್ಲ. ಸಂತ್ರಸ್ತೆಯ ಹೇಳಿಕೆಯನ್ನು ಮಾತ್ರ ಆಧರಿಸಿ ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿರುವುದು ಕಾನೂನುಬಾಹಿರ ಎಂದು ಗುರುವಾರ ನಡೆದ ವಿಚಾರಣೆಯಲ್ಲಿ ವಕೀಲ ನಾಗೇಶ್‌ ಅವರು ಹೈಕೋರ್ಟ್‌ ವಾದ ಮಂಡಿಸಿದ್ದರು.

Fire Accident: ಬಿಡದಿ ಬಳಿ ಅಗ್ನಿ ದುರಂತದಲ್ಲಿ ನಾಲ್ವರು ಕಾರ್ಮಿಕರ ದುರ್ಮರಣ, ಮೂವರಿಗೆ ಗಾಯ

ಬಿಡದಿ ಬಳಿ ಅಗ್ನಿ ದುರಂತದಲ್ಲಿ ನಾಲ್ವರು ಕಾರ್ಮಿಕರ ದುರ್ಮರಣ, ಮೂವರಿಗೆ ಗಾಯ

Ramanagara: ಅವಘಡದಲ್ಲಿ 7 ಮಂದಿಗೆ ಸುಟ್ಟ ಗಾಯಗಳಾಗಿದ್ದವು. ಗಾಯಾಳುಗಳನ್ನ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಗೊಂಡ ಮೂವರು ಕಾರ್ಮಿಕರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಘಟನೆಗೆ ಕಟ್ಟಡ ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯ ಕಾರಣ ಎಂದು ಕಾರ್ಮಿಕ ಸಂಘಟನೆಗಳು ಆರೋಪಿಸಿವೆ.

Karnataka Weather: ಗಮನಿಸಿ; ಬೆಂಗಳೂರು ಸಹಿತ ಈ ಜಿಲ್ಲೆಗಳಲ್ಲಿ ಇಂದು ಸುರಿಯಲಿದೆ ಭಾರಿ ಮಳೆ

ಬೆಂಗಳೂರು ಸಹಿತ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಭಾರಿ ಮಳೆ

ಕರ್ನಾಟಕ ಹವಾಮಾನ ವರದಿ: ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆ ಇಂದು ಕೂಡ ಮುಂದುವರಿಯಲಿದೆ. ಸಿಲಿಕಾನ್‌ ಸಿಟಿ, ಕರಾವಳಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗಲಿದೆ. ಎಂದು ಹವಾಮಾನ ಇಲಾಖೆ ತಿಳಿಸಿದ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಒಣ ಹವೆ ಇರಲಿದೆ.

Chikkaballapur News: ಎಲ್ಲಾ ಹಿರಿಯ ನಾಗರಿಕರಿಗೆ ಪ್ರೀತಿ, ಗೌರವ, ಕಾಳಜಿ ತೋರಿ ಸೇವೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ

ಹಿರಿಯ ನಾಗರಿಕರಿಗೆ ಕಾಳಜಿ ತೋರಿ ಸೇವೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ

ಪ್ರತಿಯೊಬ್ಬರ ಜೀವನದಲ್ಲಿಯೂ ಬಾಲ್ಯ, ಯೌವ್ವನ ಹಾಗೂ ಮುಪ್ಪು ಸಹಜವಾದುದು. ಹಿರಿಯ ನಾಗರಿಕರನ್ನು ಪ್ರತಿಯೊಬ್ಬರು ಗೌರವದಿಂದ ಕಾಣಬೇಕು ಹಾಗೂ ವಿವಿಧ ಇಲಾಖೆಗಳಿಂದ ಹಿರಿಯ ನಾಗರಿಕರಿಗೆ ಮತ್ತು ವಿಕಲಚೇತನರಿಗೆ ದೊರೆಯಬೇಕಾದ ಸೌಲಭ್ಯಗಳು ಅವರಿಗೆ ತಲುಪುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಬೇಕು

ಪವರ್ಡ್ ಬೈ ಇಂಡಿಯನ್ ಆಯಿಲ್ ನಲ್ಲಿ ಈ ಋತುವಿನ ಮೂರನೇ ಗೆಲುವಿನ ಮೂಲಕ ತನ್ನ ಗೆಲುವಿನ ಓಟ ಮುಂದುವರಿಕೆ

ನಾಲ್ಕು ವಾರಗಳಲ್ಲಿ ಮೂರನೇ ಟ್ರೋಫಿ ಗೆದ್ದ ಶ್ರೀಲಂಕಾದ ಎನ್.ತಂಗರಾಜ

ಶ್ರೀಲಂಕಾದ ಎನ್. ತಂಗರಾಜ ಅವರು ತನ್ನ ಗೆಲುವಿನ ಪಥದಲ್ಲಿ ಮುನ್ನಡೆದಿದ್ದು ಅವರ ನಾಲ್ಕು ವಾರಗಳಲ್ಲಿ ಎರಡನೆಯ ಶೀರ್ಷಿಕೆ ಮತ್ತು ಮೂರನೇ ಟ್ರೋಫಿಯನ್ನು ಗೆದ್ದಿದ್ದಾರೆ. ಬೆಂಗಳೂರಿನ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ (ಕೆಜಿಎ)ನಲ್ಲಿ ಆಡಿದ ಬೆಂಗಳೂರು ಓಪನ್ 2025 ಪವರ್ಡ್ ಬೈ ಇಂಡಿಯನ್ ಆಯಿಲ್ ನಲ್ಲಿ ಅವರ ಅಂತಿಮ ಸುತ್ತಿನ ಟು-ಅಂಡರ್ 69ರಲ್ಲಿ ಅಂತಿಮ ಸುತ್ತಿನಲ್ಲಿ ಸಾಧನೆ ಮೆರೆದರು

Athani MLA Lakshman Savadi: ಜೋಡೆತ್ತಿನ ಗೆಲುವು ನಿಶ್ಚಿತ ; ಲಕ್ಷ್ಮಣ ಸವದಿ

ಜೋಡೆತ್ತಿನ ಗೆಲುವು ನಿಶ್ಚಿತ ; ಲಕ್ಷ್ಮಣ ಸವದಿ

ಅಥಣಿ ಕ್ಷೇತ್ರದದಲ್ಲಿ 125 ಮತದಾರರಲ್ಲಿ 122 ಜನ ಬೆಂಬಲ ನೀಡಿದ್ದಾರೆ. ಕಾಗವಾಡ ಕ್ಷೇತ್ರದಲ್ಲಿ 20 ಕ್ಕೂ ಹೆಚ್ಚು ಪಿಕೆಪಿಎಸ್ ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ. ನಾವು ಯಾರಿಗೂ ಹಣ ಮತ್ತೊಂದು ಕೊಟ್ಟಿಲ್ಲ ಕೇವಲ ಊಟ ಮಾಡಿಸಿದ್ದೇವೆ. ಕ್ಷೇತ್ರದ ಜನ ಜೋಡೆತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಬೇಕೆಂಬ ಆಸೆ ಹೊಂದಿದ್ದು ಅವರ ಆಶೀರ್ವಾದದಿಂದ ಗೆಲ್ಲುತ್ತೇವೆ

Chikkaballapur News: ಮಾನಸಿಕ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ: ನ್ಯಾ.ಎಸ್.ವಿ.ಕಾಂತರಾಜು

ಮಾನಸಿಕ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ: ನ್ಯಾ.ಎಸ್.ವಿ.ಕಾಂತರಾಜು

ಸಾಮಾನ್ಯವಾಗಿ ಶರೀರದ ಕಾಯಿಲೆಗಳಲ್ಲಿ ನಾನಾ ಬಗೆ ಇರುವಂತೆ ಮಾನಸಿಕ ಕಾಯಿಲೆಗಳಲ್ಲೂ ನಾನಾ ಬಗೆಗಳಿವೆ. ಚಿತ್ತ ಚಂಚಲತೆ, ಚಿತ್ತ ವಿಕಲತೆ, ಮದ್ದು/ಮದ್ಯ ವ್ಯಸನ, ಬುದ್ದಿ ಮಾಂದ್ಯತೆ, ಮಕ್ಕಳಲ್ಲಿ ಕಂಡು ಬರುವ ನಡವಳಿಕೆ ದೋಷಗಳು ಮತ್ತಿತರ ಮನಸ್ಸಿನ ಕಾಯಿಲೆಗಳು, ಮನೋ ದೈಹಿಕ ಬೇನೆಗಳು ಸೇರಿದಂತೆ ಹಲವು ರೀತಿಯ ಮಾನಸಿಕ ರೋಗಗಳು ಇರುತ್ತವೆ.

Bagepally News: ಮಿಟ್ಟೇಮರಿ ಪುವಾಡಮ್ಮ ಕೆರೆ ಕೋಡಿ:ಗ್ರಾಮ ಪಂಚಾಯತಿ ವತಿಯಿಂದ ಗಂಗೆ ಪೂಜೆ ಹಾಗೂ ಬಾಗಿನ ಸಮರ್ಪಣೆ

ಗ್ರಾಮ ಪಂಚಾಯತಿ ವತಿಯಿಂದ ಗಂಗೆ ಪೂಜೆ ಹಾಗೂ ಬಾಗಿನ ಸಮರ್ಪಣೆ

ಕಳೆದ ಎರಡು ವರ್ಷಗಳಿಂದ ತುಂಬಿರಲಿಲ್ಲ ಪುವಾಡಮ್ಮ ಕೆರೆ ತುಂಬಿ ಬಂದಿದ್ದು ಕೋಡಿ ಹರಿದ ಶುಭ ಸಂಕೇತವಾಗಿ ಇಂದು ಗಂಗೆ ಪೂಜೆ ಮಾಡಿ ಬಾಗಿನ ಅರ್ಪಿಸಲಾಯಿತು. ಕಳೆದ ಎರಡು ದಿನಗಳಿಂದ ಬರದ ನಾಡಿನಲ್ಲಿ ಉತ್ತಮ ಮಳೆಯಾಗಿದ್ದು. ಕೆರೆ- ಕಟ್ಟೆಗಳು ತುಂಬಿ ಹರಿಯುತ್ತಿರುವುದರಿಂದ, ಬೆಳೆಗಳು ಸಮೃದ್ಧಿಯಾಗಿ ಬೆಳೆದಿವೆ.

ಬರಲಿದೆ ನಿಸಾನ್‌ ಕಂಪನಿ ಹೊಸ ಸಿ-ಎಸ್‌ಯುವಿ: ಭಾರತದಲ್ಲಿ ಬಿಡುಗಡೆ ಆಗಲಿರುವ ಟೆಕ್ಟಾನ್‌ ಮಾದರಿಯ ಮೊದಲ ನೋಟ

ಭಾರತದಲ್ಲಿ ಬಿಡುಗಡೆ ಆಗಲಿರುವ ಟೆಕ್ಟಾನ್‌ ಮಾದರಿಯ ಮೊದಲ ನೋಟ

ಶ್ರೇಷ್ಠವಾದ ಎಂಜಿನಿಯರಿಂಗ್‌, ದಕ್ಷತೆ, ವಿಶಿಷ್ಟವಾದ ವಿನ್ಯಾಸವನ್ನು ಹೇಳುವ ಪ್ರೀಮಿಯಂ ವರ್ಗದ ಕಾಂಪ್ಯಾಕ್ಟ್‌-ಎಸ್‌ಯುವಿಯನ್ನು ಈ ಹೆಸರು ಪ್ರತಿನಿಧಿಸುತ್ತದೆ. ವೃತ್ತಿ, ಹವ್ಯಾಸ ಮತ್ತು ಜೀವನಶೈಲಿ ಯಿಂದ ತಮ್ಮ ಜಗತ್ತನ್ನು ತಾವೇ ರೂಪಿಸಿ ಕೊಳ್ಳುತ್ತಿರುವವರಿಗೆ ಟೆಕ್ಟಾನ್‌ ಎಸ್‌ಯುವಿಯು ಆಯ್ಕೆಯ ವಾಹನದಂತೆ ಆಗಲಿದೆ.

Bangalore News: ಬೆಂಗಳೂರಿನಲ್ಲಿ 'ವಿಶ್ವ ದೃಷ್ಟಿ ದಿನ'ದ ಪ್ರಯುಕ್ತ ಜಾಗೃತಿ ವಾಕಥಾನ್

ಬೆಂಗಳೂರಿನಲ್ಲಿ 'ವಿಶ್ವ ದೃಷ್ಟಿ ದಿನ'ದ ಪ್ರಯುಕ್ತ ಜಾಗೃತಿ ವಾಕಥಾನ್

ವಾಕಥಾನ್ ಕಾರ್ಯಕ್ರಮವನ್ನು ವಿಧಾನಸೌಧದ ಮುಂದೆ ಶ್ರದ್ಧಾ ಐ ಕೇರ್ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ಮತ್ತು ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಐ ಹಾಸ್ಪಿಟಲ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರೊ. ಡಾ. ಶ್ರೀ ಗಣೇಶ್ ಹಾಗೂ ವಿ.ಪಿ. ಗೋಹೆಲ್ ಮೆಮೋರಿಯಲ್ ಟ್ರಸ್ಟ್‌ನ ಟ್ರಸ್ಟಿ ಶ್ರೀ ಪಿಯೂಷ್ ಜೈನ್ ಅವರು ಉದ್ಘಾಟಿಸಿದರು. ವಾಕಥಾನ್ ಅನ್ನು ವಿಧಾನ ಸೌಧದಿಂದ ಪ್ರಾರಂಭಿಸಲಾಯಿತು.

ಬೆಂಗಳೂರಿನಲ್ಲಿ ಚೆವ್ರಾನ್ ಇಂಡಿಯಾದ ಹೊಸ ಕೇಂದ್ರ ಉದ್ಘಾಟನೆ: ಚೆವ್ರಾನ್ ಇಂಜಿನ್‌ ನ ಮೊದಲ ವಾರ್ಷಿಕೋತ್ಸವ ಆಚರಣೆ

ಚೆವ್ರಾನ್ ಇಂಜಿನ್‌ ನ ಮೊದಲ ವಾರ್ಷಿಕೋತ್ಸವ ಆಚರಣೆ

ಆರ್‌ಎಂಝಡ್ ಇಕೋವರ್ಲ್ಡ್‌ ನಲ್ಲಿ ಸ್ಥಾಪಿತಗೊಂಡಿರುವ ಚೆವ್ರಾನ್ ಇಂಜಿನ್ ಕೇಂದ್ರವು 3,12,000 ಚದರ ಅಡಿಗಳ ವಿಸ್ತೀರ್ಣ ಹೊಂದಿದ್ದು, ಎಲ್‌ಇಇಡಿ-ಪ್ರಮಾಣೀಕೃತ ಅತ್ಯಾಧುನಿಕ ಕಟ್ಟಡವಾಗಿದೆ. ಸಹಯೋಗದ ಅವಕಾಶಗಳಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಈ ಕೇಂದ್ರವು ಡಿಜಿಟಲ್ ಆವಿಷ್ಕಾರ ತಜ್ಞರನ್ನು, ಉನ್ನತ ಡೊಮೇನ್ ಎಂಜಿನಿಯರಿಂಗ್ ಜ್ಞಾನದ ಜೊತೆಗೆ ಒಂದೇ ಸ್ಥಳದಲ್ಲಿ ಸೇರಿಸುವ ಅತ್ಯುತ್ಕೃಷ್ಟ ತಂತ್ರಜ್ಞಾನ ಕೇಂದ್ರವಾಗಿದೆ.

ವಾಚ್ ತಯಾರಿಕೆಯ ಪಯಣದಲ್ಲಿ ಒಂದು ಮೈಲಿಗಲ್ಲು: ಭಾರತದ ಮೊದಲ ವಾಂಡರಿಂಗ್ ಅವರ್ಸ್ ವಾಚ್ ಬಿಡುಗಡೆ ಮಾಡಿದ ಟೈಟಾನ್

ಭಾರತದ ಮೊದಲ ವಾಂಡರಿಂಗ್ ಅವರ್ಸ್ ವಾಚ್ ಬಿಡುಗಡೆ ಮಾಡಿದ ಟೈಟಾನ್

ಅತ್ಯಂತ ಪ್ರತಿಷ್ಠಿಕ ವಾಚ್ ತಯಾರಿಕಾ ಕಂಪನಿ ಆಗಿರುವ ಟೈಟಾನ್ ಭಾರತೀಯ ವಾಚ್ ತಯಾರಿಕಾ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ರಚಿಸಿದ್ದು, ಟೈಟಾನ್ ಇದೀಗ ಇನ್‌ ಫೈನೈಟ್‌ ಅಂಶದಿಂದ ಸ್ಫೂರ್ತಿ ಹೊಂದಿರುವ, ತನ್ನ ಮಹತ್ವದ ಹಬ್ಬದ ಉತ್ಪನ್ನ ಸಂಗ್ರಹವಾದ ಸ್ಟೆಲ್ಲರ್ 3.0 ಅನ್ನು ಬಿಡುಗಡೆ ಮಾಡಿದೆ.

DK Shivakumar: ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಿ: ಡಿಕೆಶಿ

ಮುಂಬೈ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ: ಡಿಕೆಶಿ

Greater Bengaluru Authority: ಬಾಂಬೆ ಮಾದರಿಯಲ್ಲಿ ಕೊಳಗೇರಿ ಪ್ರದೇಶಗಳ ಪುನಶ್ಚೇತನಕ್ಕೆ ಸಮಿತಿ ರಚಿಸಲು ಡಿಸಿಎಂ ಡಿ.ಕೆ. ಶಿವಕುಮಾರ್, ಜಿಬಿಎ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಬಿಎ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಮಿತಿಯ ಮೊದಲ ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಅವರು ಬೆಂಗಳೂರಿನಲ್ಲಿ 480 ಕೊಳಗೇರಿ ಪ್ರದೇಶಗಳಿದ್ದು ಅವುಗಳ ಅಭಿವೃದ್ಧಿ ಆಗಬೇಕು ಎಂದು ವಿಷಯ ಪ್ರಸ್ತಾಪಿಸಿದಾಗ ಡಿಸಿಎಂ ಡಿ.ಕೆ. ಶಿವಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

Bengaluru Rain: ಭಾರಿ ಮಳೆಗೆ ಬೆಂಗಳೂರು ತತ್ತರ; ರಸ್ತೆಯಲ್ಲೇ ಹರಿದ ನೀರು, ವಾಹನ ಸವಾರರ ಪರದಾಟ

ಸಂಜೆಯಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆ

ಬೆಂಗಳೂರಿನಲ್ಲಿ ರಾತ್ರಿಯಾಗಿತ್ತಿದ್ದಂತೆ ಮಳೆ ಆರಂಭವಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಶಿವಾನಂದ ಸರ್ಕಲ್, ಮಲ್ಲೇಶ್ವರಂ, ಚಾಮರಾಜಪೇಟೆ, ಕಾರ್ಪೋರೇಷನ್‌, ಲಾಲ್‌ಬಾಗ್, ರಿಚ್‌ಮಂಡ್‌ ಟೌನ್‌, ರಾಜರಾಜೇಶ್ವರಿ ನಗರ ಸೇರಿದಂತೆ ಪ್ರಮುಖ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ.

Minister Eshwar Khandre: ಮೂರು ಎಕರೆಗಿಂತ ಒಳಗಿನ ಅರಣ್ಯ ಭೂ ಒತ್ತುವರಿದಾರರ ಹಿತ ರಕ್ಷಣೆಗೆ ಬದ್ಧ : ಸಚಿವ ಈಶ್ವರ ಖಂಡ್ರೆ

ಮೂರು ಎಕರೆಗಿಂತ ಒಳಗಿನ ಅರಣ್ಯ ಭೂ ಒತ್ತುವರಿದಾರರ ಹಿತ ರಕ್ಷಣೆಗೆ ಬದ್ಧ

ಉತ್ತರಕನ್ನಡ ಮತ್ತು ಮಲೆನಾಡಿನ ಕೆಲವು ಪ್ರದೇಶದಲ್ಲಿ ಪ್ರತಿಶತ 80ರಷ್ಟು ಅರಣ್ಯ ಭೂಮಿ ಇರುವು ದರಿಂದ ಆ ಭಾಗದ ನೆರೆಸಂತ್ರಸ್ತರ ಪುನರ್ವಸತಿ, ವಸತಿ ಮತ್ತು ಜೀವನೋಪಾಯಕ್ಕೆ ಅಲ್ಲಿನ ಬಡಜನರು ಅರಣ್ಯ ಭೂಮಿಯನ್ನು ಅವಲಂಬಿಸುವುದು ಅನಿವಾರ್ಯವಾಗಿತ್ತು. ವಿವಿಧ ಯೋಜನೆಗಳಿಂದ ನಿರಾಶ್ರಿತರಾದವರ ಸಮಸ್ಯೆ ಮತ್ತು ಅಭಿವ್ರದ್ಧಿ ಕೆಲಸಗಳಿಗೆ ಅರಣ್ಯ ಭೂಮಿಯ ಅವಶ್ಯಕತೆ ಇರುವುದು ಕೂಡ ಸರ್ಕಾರದ ಗಮನದಲ್ಲಿದೆ

ಈ ದೀಪಾವಳಿಗೆ MATTER "22ನೇ ಶತಮಾನದ ಸ್ಮಾರ್ಟ್ ಮಾಲೀಕತ್ವ ಯೋಜನೆಗಳ" ಅನಾವರಣ

ಈ ದೀಪಾವಳಿಗೆ, ಸವಾರಿ ಸ್ವಂತದ್ದಾಗಿಸಿ, ಪ್ರಯಾಣದಂತೆಯೇ ಪಾವತಿಸಿ

ಭಾರತದ ಎಲೆಕ್ಟ್ರಿಕ್ ಮೊಬಿಲಿಟಿ ಪ್ರವರ್ತಕ ಮ್ಯಾಟರ್, ಈ ದೀಪಾವಳಿಯಲ್ಲಿ ತನ್ನ 22 ನೇ ಶತಮಾನದ ಸ್ಮಾರ್ಟ್ ಮಾಲೀಕತ್ವ ಯೋಜನೆಗಳನ್ನು ರಾಷ್ಟ್ರವ್ಯಾಪಿ ಬಿಡುಗಡೆ ಮಾಡುವುದಾಗಿ ಇಂದು ಘೋಷಿಸಿದೆ, ಇದು ಮಾಲೀಕತ್ವವನ್ನು ಎಂದಿಗಿಂತಲೂ ಸ್ಮಾರ್ಟ್, ಸರಳ ಮತ್ತು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ.

DK Shivakumar: ಬೆಂಗಳೂರಿನ ಜನರ ಸಮಸ್ಯೆ ಆಲಿಸಲು ವಾರಕ್ಕೆ 2 ದಿನ ‘ಉದ್ಯಾನ ನಡಿಗೆʼ: ಡಿ.ಕೆ. ಶಿವಕುಮಾರ್

ಬೆಂಗಳೂರಿನ ಜನರ ಸಮಸ್ಯೆ ಆಲಿಸಲು ‘ಉದ್ಯಾನ ನಡಿಗೆʼ: ಡಿಕೆಶಿ

Udyana Nadige: ಬೆಂಗಳೂರು ಜನರ ಸಮಸ್ಯೆ, ಅಭಿಪ್ರಾಯಗಳನ್ನು ಆಲಿಸಲು ಪ್ರತಿ ಶನಿವಾರ ಹಾಗೂ ಭಾನುವಾರದ ಬೆಳಗ್ಗೆ ವೇಳೆ ಪಾಲಿಕೆವಾರು 'ಉದ್ಯಾನ ನಡಿಗೆ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಜಿಬಿಎ ಸಭಾಂಗಣದಲ್ಲಿ ಅವರು ಮಾತನಾಡಿದರು.

ಈ ಹಬ್ಬದ ಋತುವಿಗೆ ಮೆನ್ ಆಫ್ ಪ್ಲಾಟಿನಂನ ಸಿಗ್ನೇಚರ್ ಆವೃತ್ತಿಯಲ್ಲಿ ಧೋನಿ ಸಹಿ ಹೊಂದಿದ ಪ್ಲಾಟಿನಂ ಆಭರಣಗಳು

ಸಿಗ್ನೇಚರ್ ಆವೃತ್ತಿಯಲ್ಲಿ ಧೋನಿ ಸಹಿ ಹೊಂದಿದ ಪ್ಲಾಟಿನಂ ಆಭರಣಗಳು

ಮೆನ್ ಆಫ್ ಪ್ಲಾಟಿನಂ ಮತ್ತೊಂದು ವಿಶಿಷ್ಟತೆಯ ಪದರವನ್ನು ಸೇರ್ಪಡೆ ಮಾಡುತ್ತದೆ. ಈ ಸಂಗ್ರಹದ ಪ್ರತಿ ಖರೀದಿಯಲ್ಲೂ ಗ್ರಾಹಕರಿಗೆ ಎಂ.ಎಸ್. ಧೋನಿ ಅವರನ್ನು ಭೇಟಿ ಮಾಡುವ ವಿಶೇಷ ಅವಕಾಶ ದೊರೆಯುತ್ತಿದ್ದು ಈ ಕಾರ್ಯಕ್ರಮ 2026ರ ಪ್ರಾರಂಭದಲ್ಲಿ ಮುಂಬೈನಲ್ಲಿ ನಡೆಯುತ್ತದೆ. ಈ ಸಕ್ರಿಯ ತೆಯು ಸೆಪ್ಟೆಂಬರ್ 18ರಿಂದ ನವೆಂಬರ್ 16, 2025ರವರೆಗೆ ಆಯ್ದ ರೀಟೇಲ್ ಮಳಿಗೆಗಳಲ್ಲಿ ನಡೆಯ ಲಿದ್ದು ಪ್ರಶಂಸೆಯನ್ನು ವೈಯಕ್ತಿಕ ಕ್ಷಣವಾಗಿಸುವ ಅವಕಾಶ ನೀಡುತ್ತದೆ.

Sadguru Sri Madhusudan Sai: ಸತ್ಯ ಸಾಯಿ ಗ್ರಾಮದಲ್ಲಿ ಶೀಘ್ರ ಡಿಜಿಟಲ್ ವ್ಯಸನ ಮುಕ್ತಿ ಕೇಂದ್ರ: ಸದ್ಗುರು ಶ್ರೀ ಮಧುಸೂದನ ಸಾಯಿ

ಸತ್ಯ ಸಾಯಿ ಗ್ರಾಮದಲ್ಲಿ ಶೀಘ್ರ ಡಿಜಿಟಲ್ ವ್ಯಸನ ಮುಕ್ತಿ ಕೇಂದ್ರ

Sathya Sai Grama: ಸಾಮಾಜಿಕ ಮಾಧ್ಯಮಗಳು ಮತ್ತು ಡಿಜಿಟಲ್ ಉಪಕರಣಗಳ ಅವಲಂಬನೆಯಿಂದ ಯುವಜನರ ಜೀವನದ ಗುಣಮಟ್ಟ ಕ್ಷೀಣಿಸುತ್ತಿದೆ. ಇದನ್ನು ತಡೆಯುವ ಸಲುವಾಗಿ ಸತ್ಯ ಸಾಯಿ ಗ್ರಾಮದಲ್ಲಿ ಶೀಘ್ರದಲ್ಲೇ ಡಿಜಿಟಲ್ ವ್ಯಸನ ನಿರ್ಮೂಲನಾ ಕೇಂದ್ರ ಆರಂಭಿಸುತ್ತೇವೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು.

DK Shivakumar: ಜಿಬಿಎ ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ: ಡಿ.ಕೆ. ಶಿವಕುಮಾರ್‌ ಸವಾಲು

ಜಿಬಿಎ ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ: ಡಿಕೆಶಿ

Greater Bengaluru Authority: ಮೊದಲ ಸಭೆಯಲ್ಲಿ ಅಜೆಂಡಾ ಇರುವುದಿಲ್ಲ. ಜಿಬಿಎ ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ತೀರ್ಮಾನವನ್ನು ಮೊದಲ ಸಭೆಯಲ್ಲಿ ಮಾಡಲಾಗುವುದು. ಈ ಸಭೆಗೆ ಗೈರಾಗುವ ಮೂಲಕ ಬಿಜೆಪಿ ನಾಯಕರು ಬೆಂಗಳೂರು ನಗರದ ವಿರುದ್ಧವಾಗಿ ನಿಂತಿದ್ದಾರೆ. ಜನರು ಕೊಟ್ಟ ಅಧಿಕಾರಕ್ಕೆ ದ್ರೋಹ ಬಗೆದಿದ್ದಾರೆ. ಜನರ ಪರವಾಗಿ ಧ್ವನಿ ಎತ್ತುವುದಕ್ಕಿಂತ ಅವರಿಗೆ ರಾಜಕಾರಣ ಮುಖ್ಯವಾಗಿದೆ. ಅವರ ಈ ನಡೆಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Anakru Award: ಅನಕೃ ಪ್ರಶಸ್ತಿಗೆ ಪ್ರೊ.ಎಲ್.ವಿ. ಶಾಂತಕುಮಾರಿ, ಶತಾವಧಾನಿ ಡಾ.ಆರ್. ಗಣೇಶ್‌ ಆಯ್ಕೆ

ಎಲ್.ವಿ. ಶಾಂತಕುಮಾರಿ, ಆರ್. ಗಣೇಶ್‌ಗೆ ಅನಕೃ ಪ್ರಶಸ್ತಿ

ಅನಕೃ ಪ್ರತಿಷ್ಠಾನವು ಪ್ರತಿವರ್ಷ ನೀಡುತ್ತ ಬಂದಿರುವ ಅನಕೃ ಪ್ರಶಸ್ತಿಗೆ 2024ನೇ ಸಾಲಿನಲ್ಲಿ ಪ್ರೊ.ಎಲ್.ವಿ. ಶಾಂತಕುಮಾರಿ ಮತ್ತು 2025ನೇ ಸಾಲಿನಲ್ಲಿ ಶತಾವಧಾನಿ ಡಾ. ಆರ್. ಗಣೇಶ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ನವೆಂಬರ್ 9ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

SR Vishwanath: ಜಿಬಿಎ ಸಂಪೂರ್ಣ ಸ್ಥಳೀಯ ಸಂಸ್ಥೆಗಳ ಅಧಿಕಾರ ಕಿತ್ತುಕೊಳ್ಳುವ ಪ್ರಾಧಿಕಾರ: ಎಸ್.ಆರ್.ವಿಶ್ವನಾಥ್

ರಾಜಕೀಯ ತೆವಲಿಗೆ ಜಿಬಿಎ ಮಾಡಿದ್ದು: ಎಸ್.ಆರ್. ವಿಶ್ವನಾಥ್

Greater Bengaluru Authority: ಪ್ರಾರಂಭದಿಂದಲೇ ಬೆಂಗಳೂರು ಇಬ್ಬಾಗವಾಗಬಾರದು; ಅದು ಒಂದಾಗಿರಬೇಕು ಎಂದು ಜಿಬಿಎ ತಿದ್ದುಪಡಿ 74ಕ್ಕೆ ವಿರೋಧವಾಗಿ ಪ್ರತೀ ಸಭೆಗಳಲ್ಲಿ ನಾವು ತಿಳಿಸುತ್ತಾ ಬಂದಿದ್ದೇವೆ. ಆದರೆ ಇಂದು ಕಾಂಗ್ರೆಸ್ಸಿನವರು, ಬಿಜೆಪಿ ಶಾಸಕರು ಸಭೆಗಳಲ್ಲಿ ಬಂದಿದ್ದರು ಮತ್ತು ಮಾತನಾಡಿದರು. ಪ್ರಸ್ತುತ ಅವರು ವಿರೋಧ ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಆಕ್ಷೇಪಿಸಿದ್ದಾರೆ.

CM Siddaramaiah: ಬೆಂಗಳೂರು ಜನರಿಗೆ ಸುಗಮ ಆಡಳಿತ, ಸಮರ್ಪಕ‌ ಅಭಿವೃದ್ಧಿಗಾಗಿ ಜಿಬಿಎ ಅಸ್ತಿತ್ವಕ್ಕೆ: ಸಿಎಂ ಸಿದ್ದರಾಮಯ್ಯ

ಚರ್ಚೆ-ಸಂವಾದದಿಂದ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ: ಸಿಎಂ

Greater Bengaluru Authority: ಚರ್ಚೆ-ಸಂವಾದದಿಂದ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ. ಏನೇ ವಿರೋಧಗಳಿದ್ದರೂ ಸಭೆಗೆ ಹಾಜರಾಗಿ ಚರ್ಚೆ ನಡೆಸಿ ಅಭಿವೃದ್ಧಿಗೆ ಪೂರಕವಾಗಿ ಸಹಕಾರ ನೀಡಬೇಕು. ಅಧಿಕಾರ ವಿಕೇಂದ್ರೀಕರಣವನ್ನು ವಿರೋಧಿಸುವವರು ಮತ್ತು ಬೆಂಗಳೂರಿನ ಅಭಿವೃದ್ಧಿ ಒಲ್ಲದವರು ಸಭೆಯನ್ನು ವಿರೋಧಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.

Loading...