ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ಉಡುಪಿ ಪರ್ಯಾಯ ಹಿನ್ನೆಲೆ 6 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಿ: ಹೆಬ್ಬಾಳ್ಕರ್ ನಿರ್ದೇಶನ

ಉಡುಪಿಯಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಿ: ಹೆಬ್ಬಾಳ್ಕರ್

Laxmi Hebbalkar: ಉಡುಪಿ ಪರ್ಯಾಯ ಸುಗಮವಾಗಿ ನಡೆಯಲು ರಸ್ತೆ ಅಭಿವೃದ್ಧಿ ಸೇರಿದಂತೆ ನಗರದಲ್ಲಿ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡಬೇಕು. ಸಮಯಾವಕಾಶ ಕಡಿಮೆ ಇರುವುದರಿಂದ ಸಮರೋಪಾದಿಯಲ್ಲಿ ಹಗಲು- ರಾತ್ರಿ ಕೆಲಸ ಮಾಡಬೇಕು. ಜಿಲ್ಲೆಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಪತ್ರಕರ್ತೆ ಕೆ.ಎಲ್‌. ನಂದಿನಿಗೆ ಮೈಸೂರು ವಿವಿಯಿಂದ ಪಿಎಚ್‌ಡಿ ಪ್ರದಾನ

ಪತ್ರಕರ್ತೆ ಕೆ.ಎಲ್‌. ನಂದಿನಿಗೆ ಮೈಸೂರು ವಿವಿಯಿಂದ ಪಿಎಚ್‌ಡಿ ಪ್ರದಾನ

ಪತ್ರಕರ್ತೆ ಕೆ.ಎಲ್ ನಂದಿನಿ ಅವರು 'ಸಿನಿಮಾ ಮತ್ತು ರಾಜಕೀಯ ರಂಗಕ್ಕೆ ಖ್ಯಾತ ನಟ ಡಾ. ಅಂಬರೀಶ್ ಅವರ ಕೊಡುಗೆ ಒಂದು ಅಧ್ಯಯನ' ವಿಷಯದಲ್ಲಿ ನಂದಿನಿ ಮಹಾ ಪ್ರಬಂಧ ಮಂಡಿಸಿದ್ದರು. ಮೈಸೂರು ವಿವಿಯ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಎನ್‌.ಮಮತಾ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಸಲ್ಲಿಸಿದ್ದರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಹಾಗಹಗಲೇ ಚಾಕು ಇರಿತ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಹಾಗಹಗಲೇ ಚಾಕು ಇರಿತ

Belagavi News: ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಹಣಕಾಸಿನ ವಿಚಾರಕ್ಕೆ ಗಲಾಟೆ ಆಗಿ ಕಿಡಿಗೇಡಿಗಳು ಚಾಕು ಇರಿದಿದ್ದಾರೆ ಎನ್ನಲಾಗಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

Siddaramaiah Record: ರಾಜಕೀಯ ಮರುಜನ್ಮ ನೀಡಿದ 'ಬಾದಾಮಿ'

Siddaramaiah Record: ರಾಜಕೀಯ ಮರುಜನ್ಮ ನೀಡಿದ 'ಬಾದಾಮಿ'

ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಮೇಲೆ ಅವರ ಅತ್ಯಾಪ್ತ ರಾಗಿದ್ದ ಸಚಿವರಾದ ಆರ್.ಬಿ.ತಿಮ್ಮಾಪುರ, ಸತೀಶ ಜಾರಕಿಹೊಳಿ ಹಾಗೂ ಜಮೀರ್ ಅಹ್ಮದ್ ಸೇರಿದಂತೆ ಮಾಜಿ ಸಚಿವ ಎಸ್.ಆರ್.ಪಾಟೀಲ, ದಿ.ಎಚ್.ವೈ.ಮೇಟಿ, ಶಾಸಕರಾದ ವಿಜಯಾ ನಂದ ಕಾಶಪ್ಪನ ವರ, ಜೆ.ಟಿ.ಪಾಟೀಲ ಸೇರಿದಂತೆ ಅಂದಿನ ಸಚಿವ ಸಂಪುಟವೇ ಬಾದಾಮಿ ಯಲ್ಲಿ ಬಿಡು ಬಿಟ್ಟು, ತಮ್ಮ ನಾಯಕನನ್ನು ಗೆಲ್ಲಿಸಿಕೊಂಡು ಬರಲು ಹಗಲಿರುಳು ಶ್ರಮವಹಿಸಿ ದರು.

Siddaramaiah Record: ಸಿದ್ದುಗೆ ಬಲ ತಂದ ಬೆಣ್ಣೆನಗರಿ

Siddaramaiah Record: ಸಿದ್ದುಗೆ ಬಲ ತಂದ ಬೆಣ್ಣೆನಗರಿ

ದಿ.ದೇವರಾಜು ಅರಸು ನಂತರ ಸುದೀರ್ಘ ಅವಧಿಗೆ ಸಿಎಂ ಆಗಿ ದಾಖಲೆ ಮಾಡಲಿರುವ ಸಿಎಂ ಸಿದ್ದರಾಮಯ್ಯ ಅವರಿಗೂ ರಾಜಕೀಯ ಮರುಹುಟ್ಟು ಕೊಟ್ಟಿದ್ದು, ತಮ್ಮ ರಾಜಕೀಯ ಬಲ ಪ್ರದರ್ಶನಕ್ಕೆ ಅವರು ವೇದಿಕೆಯನ್ನಾಗಿಸಿಕೊಂಡಿದ್ದು ಇದೇ ಮಧ್ಯ ಕರ್ನಾಟಕ ದಾವಣಗೆರೆ ಯನ್ನು.

Siddaramaiah Record: ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ʼಸಿದ್ದʼಹಸ್ತ

Siddaramaiah Record: ಕಲ್ಯಾಣ ಕರ್ನಾಟಕದ ಅಭಿವೃದ್ದಿಗೆ ʼಸಿದ್ದʼಹಸ್ತ

ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಬಾರಿ ರಾಜ್ಯ ನಗರಸಭೆಗಳ ಮೇಲ್ದರ್ಜೆ, ಏಮ್ಸ್‌ಗೆ ಬೇಡಿಕೆ ಬೀದರ್ ಮತ್ತು ರಾಯಚೂರು ನಗರಸಭೆ ಸಚಿವ ಸಂಪುಟ ಸಭೆ ನಡೆಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ.

ಪೂರ್ಣಾವಧಿ ಪೂರೈಸೋ ವಿಶ್ವಾಸ; ಸಿಎಂ ಅವರಿಗೆ ಶುಭವಾಗಲಿ, ಗುಡ್ ಲಕ್ ಎಂದ ಡಿ.ಕೆ. ಶಿವಕುಮಾರ್

ಪೂರ್ಣಾವಧಿ ಪೂರೈಸೋ ವಿಶ್ವಾಸ; ಸಿಎಂಗೆ ಶುಭವಾಗಲಿ ಎಂದ ಡಿಕೆಶಿ

DK Shivakumar: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಶಸ್ಸಾಗಲಿ, ಒಳ್ಳೆಯದಾಗಲಿ. ಅವರಿಗೆ ಹೆಚ್ಚು ಆರೋಗ್ಯ ಸಿಗಲಿ, ಜನರ ಸೇವೆ ಮಾಡುವ ಅವಕಾಶವನ್ನು ಭಗವಂತ ಅವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಪ್ರವಾಸಿ ತಾಣಗಳ ಕುರಿತು ಉಪಯುಕ್ತ ಮಾಹಿತಿ, ಸೊಗಸಾದ ಲೇಖನಗಳು: ಪ್ರವಾಸಿ ಪ್ರಪಂಚದ ಬಗ್ಗೆ ಬಸವರಾಜ ಹೊರಟ್ಟಿ ಮೆಚ್ಚುಗೆ

ಪ್ರವಾಸಿ ಪ್ರಪಂಚ ಪತ್ರಿಕೆ ಬಗ್ಗೆ ಬಸವರಾಜ ಹೊರಟ್ಟಿ ಮೆಚ್ಚುಗೆ

ನಿಮ್ಮ ಸಂಪಾದಕತ್ವದಲ್ಲಿ ಮೂಡಿಬರುತ್ತಿರುವ 'ಪ್ರವಾಸಿ ಪ್ರಪಂಚ' ವಾರಪತ್ರಿಕೆಯನ್ನು ನಾನು ಕಳೆದ ಕೆಲವು ತಿಂಗಳುಗಳಿಂದ ನಿಯಮಿತವಾಗಿ ಓದುತ್ತಿದ್ದೇನೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಅತ್ಯಂತ ಉಪಯುಕ್ತ ಮಾಹಿತಿ ಮತ್ತು ಸೊಗಸಾದ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ ಎಂದು ಪ್ರಶಂಸೆ ವ್ಯಕ್ತಪಡಿಸಿ, ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರಿಗೆ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಅವರು ʼಅಭಿನಂದನಾ ಪತ್ರʼ ಬರೆದಿದ್ದಾರೆ.

Siddaramaiah Record: ಸಿದ್ದರಾಮಯ್ಯ ಸೋತಾಗಲೂ, ಗೆದ್ದಾಗಲೂ ಜತೆಗಿದ್ದೇನೆ..!

ಸಿದ್ದರಾಮಯ್ಯ ಸೋತಾಗಲೂ, ಗೆದ್ದಾಗಲೂ ಜತೆಗಿದ್ದೇನೆ..!

ಗೆದ್ದಾಗ ಎಲ್ರೂ ತುಂಬ್ಕೊತ್ತಾರೆ, ಸೋತಾಗ ಒಬ್ರೂ ಇರೋದಿಲ್ಲ. ಹಿಂಗೆ ಎಲ್ಲಾ ರೀತಿಯ ಏಳುಬೀಳುಗಳನ್ನು ನೋಡಿಕೊಂಡೇ ಜತೆಯಲ್ಲಿ ಬಂದೆವು. ಆನಂತರ ಮತ್ತೆ ಚುನಾವಣೆ ಬಂತು. ಅಷ್ಟೊತ್ತಿಗೆ ವಿವೇಕಾನಂದನಗರ ಬಡಾವಣೆಯ ಮುಕುಂದಮಾಲಾ ಎಂಬ ಗಣಿತ ಮೇಷ್ಟ್ರು ಮನೆಗೆ ಬಾಡಿಗೆಗೆ ಬಂದಿದ್ದೆವು, ಆ ಚುನಾವಣೆಯಲ್ಲಿ ಗೆದ್ದೆವು. ಆಗ ಅವರ ಮನೆ ಮಾರುತ್ತೇವೆ

ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ, ಸಿಎಂ ಆಗಿ ಅವಧಿ ಪೂರ್ಣಗೊಳಿಸುವ ವಿಶ್ವಾಸವಿದೆ: ಸಿದ್ದರಾಮಯ್ಯ

ಸಿಎಂ ಆಗಿ ಅವಧಿ ಪೂರ್ಣಗೊಳಿಸುವ ವಿಶ್ವಾಸವಿದೆ: ಸಿದ್ದರಾಮಯ್ಯ

CM Siddaramaiah: ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ. ಈ ದಾಖಲೆ ಕಾಕತಾಳೀಯವಾಗಿ ಆಗಿದೆ. ದೇವರಾಜ ಅರಸು ಅವರು ಎಷ್ಟು ವರ್ಷ ಆಡಳಿತ ಮಾಡಿದ್ದಾರೆಂದು ತಿಳಿದಿರಲಿಲ್ಲ. ಜನರ ಆಶೀರ್ವಾದದಿಂದ ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Namma Metro Oranage Line: ನಮ್ಮ ಮೆಟ್ರೋ ಆರೆಂಜ್‌ ಲೈನ್‌ ಇನ್ನೂ ತಡ, ವಿಳಂಬದಿಂದಾಗಿ ದಿನಕ್ಕೆ 2 ಕೋಟಿ ರೂಪಾಯಿ ವೆಚ್ಚ ಹೆಚ್ಚಳ!

ನಮ್ಮ ಮೆಟ್ರೋ ಆರೆಂಜ್‌ ಲೈನ್‌ ತಡ, ದಿನಕ್ಕೆ 2 ಕೋಟಿ ರೂಪಾಯಿ ವೆಚ್ಚ ಏರಿಕೆ!

ಕೇಂದ್ರ ಸರ್ಕಾರವು 2024ರ ಆಗಸ್ಟ್‌ 16ರಂದು ನಮ್ಮ ಮೆಟ್ರೋ ಆರೆಂಜ್ ಲೈನ್ ಯೋಜನೆಗೆ ಅನುಮೋದನೆ ನೀಡಿತ್ತು. ಅದಾಗಿ ಒಂದೂವರೆ ವರ್ಷಕ್ಕಿಂತ ಹೆಚ್ಚು ಸಮಯ ಕಳೆದರೂ, ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಇನ್ನೂ ನಾಗರಿಕ ಕಾಮಗಾರಿಗಳಿಗಾಗಿ ಟೆಂಡರ್‌ಗಳನ್ನು ಆಹ್ವಾನಿಸಿಲ್ಲ. ಅಧಿಕಾರಿಗಳ ಪ್ರಕಾರ, ದಿನದಿನದ ವಿಳಂಬವೂ ಯೋಜನೆಗೆ ಆರ್ಥಿಕ ಹೊರೆ ಹೆಚ್ಚಿಸುತ್ತಿದ್ದು, ದಿನಕ್ಕೆ ಸರಾಸರಿ ₹2 ಕೋಟಿ ವೆಚ್ಚ ಏರಿಕೆಯಾಗುವ ಸಾಧ್ಯತೆ ಇದೆ.

Bomb Threat: ಮೈಸೂರು ಹಳೆ ಕೋರ್ಟ್‌ಗೆ ಬಾಂಬ್‌ ಬೆದರಿಕೆ ಸಂದೇಶ

ಮೈಸೂರು ಹಳೆ ಕೋರ್ಟ್‌ಗೆ ಬಾಂಬ್‌ ಬೆದರಿಕೆ ಸಂದೇಶ

ಹಳೆ ಕೋರ್ಟ್‌ನಲ್ಲಿ ಬಾಂಬ್‌ ಇಟ್ಟಿರುವುದಾಗಿ ಕಿಡಿಗೇಡಿಯೊಬ್ಬ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಈ ವಿಚಾರವನ್ನು ತಕ್ಷಣ ಪೊಲೀಸರು ಹಾಗೂ ನ್ಯಾಯಾಧೀಶರ ಗಮನಕ್ಕೆ ತರಲಾಗಿದೆ. ಕೂಡಲೇ ಕೋರ್ಟ್‌ನಿಂದ ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರು ಹೊರಗಡೆ ಬಂದಿದ್ದಾರೆ. ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನಪಡೆ ಆಗಮಿಸಿದೆ. ಕೋರ್ಟ್ ಆವರಣ ಹಾಗೂ ಒಳಗಡೆ ಇಂಚಿಂಚನ್ನೂ ಪರಿಶೀಲನೆ ನಡೆಸಲಾಗಿದೆ.

Assault Case: ರೌಡಿಶೀಟರ್‌ನ ಕೈ ಮುರಿದು, ಕಣ್ಣಿಗೆ ಇರಿದ ಪತ್ನಿ! ಪೊಲೀಸ್‌ ಠಾಣೆಗೆ ಓಡಿ ಬಂದ ಗಂಡ!

ರೌಡಿಶೀಟರ್‌ನ ಕೈ ಮುರಿದು, ಕಣ್ಣಿಗೆ ಇರಿದ ಪತ್ನಿ! ಠಾಣೆಗೆ ಓಡಿ ಬಂದ ಗಂಡ!

2ನೇ ಪತ್ನಿಯನ್ನು ಬಿಡು ಎಂದು ಮೊದಲ ಹೆಂಡತಿ ಈ ರೌಡಿಶೀಟರ್‌ಗೆ ತಗುಲಿಕೊಂಡು ಚೆನ್ನಾಗಿ ಗೂಸಾ ಕೊಟ್ಟಿದ್ದಾಳೆ. ಅವನ ಕೈ ಮುರಿದಿದ್ದಲ್ಲದೆ, ಕಣ್ಣಿಗೆ ಕೂಡ ಚಾಕುವಿನಿಂದ ಇರಿದಿದ್ದಾಳೆ. ಇದರಿಂದ ಬೆಚ್ಚಿಬಿದ್ದಿರುವ ಸೈಯದ್ ಅಸ್ಗರ್ ಪತ್ನಿ ವಿರುದ್ಧ ಜೆಜೆ ನಗರ ಠಾಣೆಗೆ ಓಡಿಬಂದು ದೂರು ನೀಡಿದ್ದಾರೆ. ಆತನಿಗೆ ಎರಡನೇ ಪತ್ನಿ ಸಾಥ್​​ ಕೊಟ್ಟಿದ್ದಾಳೆ.

Priyank Kharge: ಆರ್‌ಎಸ್‌ಎಸ್ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ: ಪ್ರಿಯಾಂಕ್‌ ಖರ್ಗೆ, ದಿನೇಶ್‌ ಗುಂಡೂರಾವ್‌ಗೆ ಕೋರ್ಟ್‌ ನೋಟಿಸ್

ಆರ್‌ಎಸ್‌ಎಸ್ ಕುರಿತು ಹೇಳಿಕೆ: ಪ್ರಿಯಾಂಕ್‌ ಖರ್ಗೆ, ಗುಂಡೂರಾವ್‌ಗೆ ನೋಟಿಸ್

ನಗರದ ನಿವಾಸಿ ಹಾಗೂ ಆರ್‌ಎಸ್‌ಎಸ್ ಸದಸ್ಯರಾದ ತೇಜಸ್ ಎ ಅವರು ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ ನ್ಯಾಯಾಲಯ ಮೂವರಿಗೆ ನೋಟಿಸ್ ಜಾರಿ ಮಾಡಿದೆ.‌ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 356(2) ಅಡಿಯಲ್ಲಿ ದೂರು ದಾಖಲಿಸಲಾಗಿದ್ದು, ಈ ಸಂಬಂಧ BNSS ನಿಯಮಾವಳಿಗಳಂತೆ ನ್ಯಾಯಾಲಯವು ದೂರುದಾರ ಮತ್ತು ಸಾಕ್ಷಿಗಳಾದ ಮಹೇಶ್ ಹಾಗೂ ಸತೀಶ್ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

KSRTC ticket Price: ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಸಿಹಿ ಸುದ್ದಿ, ಆಯ್ದ ಬಸ್‌ಗಳಲ್ಲಿ ಟಿಕೆಟ್‌ ದರ ವಿನಾಯಿತಿ

ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ, ಆಯ್ದ ಬಸ್‌ಗಳಲ್ಲಿ ಟಿಕೆಟ್‌ ದರ ವಿನಾಯಿತಿ

ಏಪ್ರಿಲ್‌ನಿಂದ ಜೂನ್ ಮತ್ತು ಅಕ್ಟೋಬರ್‌ನಿಂದ ಡಿಸೆಂಬರ್ ಸಮಯದಲ್ಲಿ ಪ್ರಯಾಣಿಕರ ಬೇಡಿಕೆ ಹೆಚ್ಚಿರುತ್ತೆ. ಈ ಸಮಯದಲ್ಲಿ ಕೆಎಸ್ಆರ್‌ಟಿಸಿ ಸಾಮಾನ್ಯವಾಗಿ ಪ್ರೀಮಿಯಂ ಸೇವೆಗಳ ದರವನ್ನು 10–15% ರಷ್ಟು ಹೆಚ್ಚಿಸುತ್ತದೆ. ಆದ್ರೆ ಇದೀಗ ಆಫ್ ಸೀಸನ್ ಸಮಯದಲ್ಲಿ ಬಸ್ ಟಿಕೆಟ್ ದರ ಇಳಿಸುವ ಮೂಲಕ, ಪ್ರಯಾಣಿಕರಿಗೆ ಇಲಾಖೆ ಬಿಗ್ ಆಫರ್ ನೀಡಿದೆ. ಕೆಲವು ಆಯ್ದ ಮಾರ್ಗಗಳಲ್ಲಿ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದ್ದು,. ಜನವರಿ 05 ರಿಂದಲೇ ದರ ರಿಯಾಯಿತಿ ಜಾರಿಯಾಗಿದೆ.

Techie Death: ಅಪಾರ್ಟ್‌ಮೆಂಟ್‌ನಲ್ಲೇ ಉಸಿರುಗಟ್ಟಿ ಮಹಿಳಾ ಟೆಕ್ಕಿ ಸಾವು

ಅಪಾರ್ಟ್‌ಮೆಂಟ್‌ನಲ್ಲೇ ಉಸಿರುಗಟ್ಟಿ ಮಹಿಳಾ ಟೆಕ್ಕಿ ಸಾವು

ಬೆಂಕಿ ಬಿದ್ದಿದ್ದ ಪರಿಣಾಮ ರೂಮಿನಿಂದ ಹೊರ ಬರಲಾಗದೇ ಉಸಿರುಗಟ್ಟಿ ಟೆಕ್ಕಿ ಶರ್ಮಿಳಾ ಸಾವನ್ನಪ್ಪಿರುವ ಶಂಕೆ‌ ವ್ಯಕ್ತವಾಗಿದೆ. ಬೆಂಕಿ ಹೊತ್ತಿಕೊಳ್ಳಲು ಏನು ಕಾರಣ ಎಂದು ಪೊಲೀಸರು ಹುಡುಕುತ್ತಿದ್ದಾರೆ. ಶಾರ್ಟ್ ಸೆರ್ಕ್ಯೂಟ್, ಬೆಡ್ ಲ್ಯಾಂಪ್ ಅಥವಾ ಮೇಣದ ಬತ್ತಿಯಿಂದ ಬೆಂಕಿ ಹೊತ್ತಿಕೊಂಡಿರಬಹುದಾ ಎಂಬ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಬೆಂಕಿಯಿಂದ ರೂಮಿನ ಬೆಡ್, ಕರ್ಟನ್ ಸೇರಿದಂತೆ ಎಲ್ಲಾ ಸುಟ್ಟು ಹೋಗಿವೆ.

Namma Mtero: ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಡಬಲ್‌ ಖುಷಿ ಸುದ್ದಿ

ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಡಬಲ್‌ ಖುಷಿ ಸುದ್ದಿ

2026ರ ಅಂತ್ಯದ ಒಳಗೆ ಈಗಾಗಲೇ ಸೇವೆ ಒದಗಿಸುತ್ತಿರುವ ಹಸಿರು, ಗುಲಾಬಿ ಮತ್ತು ಹಳದಿ ಮಾರ್ಗಗಳ ಜೊತೆ ಮತ್ತೆರಡು ಮಾರ್ಗಗಳಲ್ಲಿ ಮೆಟ್ರೋ ರೈಲುಗಳ ಸಂಚಾರದಿಂದ ನಗರದ ಟ್ರಾಫಿಕ್​​ ಸಮಸ್ಯೆಗೆ ಬಹುತೇಕ ಪರಿಹಾರ ಸಿಗಬಹುದೆಂಬ ನಿರೀಕ್ಷೆಯಿದೆ. ಪಿಂಕ್​ ಮತ್ತು ಬ್ಲೂ ಲೈನ್​​ಗಳಲ್ಲಿ ಮೆಟ್ರೋ ರೈಲುಗಳು ವಾಣಿಜ್ಯ ಸಂಚಾರ ನಡೆಸಲಿವೆ. ಮೇ ತಿಂಗಳಿನಲ್ಲಿ ಪಿಂಕ್ ಲೈನ್ ಮೊದಲ ಹಂತ ಓಪನ್ ಆದರೆ, ಡಿಸೆಂಬರ್​​ ವೇಳೆಗೆ ಬ್ಲ್ಯೂ ಲೈನ್​​ನ ಮೊದಲ ಹಂತವೂ ಕಾರ್ಯಾಚರಣೆ ಆರಂಭಿಸಲಿದೆ.

ರಾಜ್ಯದ ದೀರ್ಘಾವಧಿ ಸಿಎಂ ದಾಖಲೆ; ಸಿದ್ದರಾಮಯ್ಯಗೆ ಶುಭ ಹಾರೈಸಿದ ಡಿಸಿಎಂ ಡಿ.ಕೆ.ಶಿವಕುಮಾರ್‌

ದೀರ್ಘಾವಧಿ ಸಿಎಂ ದಾಖಲೆ; ಸಿದ್ದರಾಮಯ್ಯಗೆ ಶುಭ ಹಾರೈಸಿದ ಡಿ.ಕೆ.ಶಿವಕುಮಾರ್‌

DK Shivakumar: ಬಳ್ಳಾರಿಯಲ್ಲಿ ಶಾಂತಿ ನೆಲೆಸಬೇಕು. ಬಳ್ಳಾರಿ ಜನ ಈ ಹಿಂದೆ ಅನುಭವಿಸಿರುವುದೇ ಸಾಕು, ಮುಂದೆ ಯಾವುದೇ ತೊಂದರೆ ಆಗಬಾರದು. ನಮಗೆ ಅಷ್ಟೇ ಸಾಕು. ಈ ಹಿಂದೆ ಆಗಬಾರದ್ದೆಲ್ಲಾ ಆಗಿದೆ. ಮೊನ್ನೆ ನಡೆದ ದುರ್ಘಟನೆ ಆಗಬಾರದಿತ್ತು, ಆದರೆ ಆಗಿಹೋಗಿದೆ. ಇದರಿಂದ ನನಗೆ ದುಃಖವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಎಎಂಸಿ ಇಂಡಿಯಾ ಡೈರೆಕ್ಟ್ ಸೆಲ್ಲಿಂಗ್ ವತಿಯಿಂದ ಜ.7ರಂದು ಬೃಹತ್ ನೇಮಕಾತಿ ಶಿಬಿರ

ಜ.7ರಂದು ಬೃಹತ್ ನೇಮಕಾತಿ ಶಿಬಿರ

ಎಎಂಸಿ ಇಂಡಿಯಾ ಡೈರೆಕ್ಟ್ ಸೆಲ್ಲಿಂಗ್ ಪ್ರೈವೇಟ್ ಲಿಮಿಟೆಡ್, ಪ್ರಸಿದ್ಧ ಎಎಂಸಿ ಕುಕ್‌ವೇರ್ ಗುಂಪಿನ ಅಂಗ ಸಂಸ್ಥೆ, ಜ.7ರಂದು ಬೆಂಗಳೂರಿನಲ್ಲಿ ವಿಶೇಷ ನೇಮಕಾತಿ ಶಿಬಿರವನ್ನು ಆಯೋ ಜಿಸುತ್ತಿದೆ. ಈ ಕಾರ್ಯಕ್ರಮವು ಉದ್ಯೋಗಾಕಾಂಕ್ಷಿಗಳು, ಗೃಹಿಣಿಯರು ಹಾಗೂ ಉದ್ಯಮಿಗಳಿ ಗಾಗಿ ಹೊಸ ವೃತ್ತಿ ಅವಕಾಶಗಳನ್ನು ಅನ್ವೇಷಿಸಲು ವೇದಿಕೆಯಾಗಲಿದ್ದು, ಹೊಸ ಕೌಶಲ್ಯ ಗಳನ್ನು ಕಲಿಯಲು, ಸ್ವಂತ ವ್ಯವಹಾರ ಆರಂಭಿಸಲು ಮತ್ತು ಆರ್ಥಿಕ ಸ್ವಾವಲಂಬನೆ ಸಾಧಿಸಲು ಜನರನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.

Pratap Simha: ರಾಜ್ಯ ರಾಜಕಾರಣಕ್ಕೆ ಮಾಜಿ ಸಂಸದ ಪ್ರತಾಪ್‌ ಸಿಂಹ ಎಂಟ್ರಿ; ಯಾವ ಕ್ಷೇತ್ರದಿಂದ ಸ್ಪರ್ಧೆ?

ರಾಜ್ಯ ರಾಜಕಾರಣಕ್ಕೆ ಮಾಜಿ ಸಂಸದ ಪ್ರತಾಪ್‌ ಸಿಂಹ ಎಂಟ್ರಿ!

Karnataka politics: ಕೆಲ ತಿಂಗಳ ಹಿಂದೆಯಷ್ಟೇ ಸ್ಥಳೀಯ ಪತ್ರಿಕೆಗೆ ಸಂದರ್ಶನ ನೀಡಿದ್ದ ಪ್ರತಾಪ್ ಸಿಂಹ ಅವರು ಮೈಸೂರು ಜಿಲ್ಲೆಯಲ್ಲಿನ ವಿಧಾನಸಭಾ ಕ್ಷೇತ್ರದಿಂದಲೇ ರಾಜ್ಯ ರಾಜಕಾರಣ ಆರಂಭಿಸುತ್ತೇನೆ ಎಂದು ಹೇಳಿದ್ದರು. ಆದರೆ ಯಾವ ಕ್ಷೇತ್ರ ಎಂಬ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಆ ಕುತೂಹಲಕ್ಕೆ ಪ್ರತಾಪ್ ಸಿಂಹ ತೆರೆ ಎಳೆದಿದ್ದಾರೆ.

ಹಾವೇರಿಯಲ್ಲಿ ಸರಣಿ ಕಳ್ಳತನ; ಇಬ್ಬರು ಆರೋಪಿಗಳ ಬಂಧನ, 4.5 ಲಕ್ಷ ಮೌಲ್ಯದ ವಸ್ತುಗಳು ಜಪ್ತಿ

ಹಾವೇರಿಯಲ್ಲಿ ಸರಣಿ ಕಳ್ಳತನ; ಇಬ್ಬರು ಆರೋಪಿಗಳ ಬಂಧನ

Haveri News: ಹಾವೇರಿ ನಗರದ ನಾಗೇಂದ್ರ ಮಟ್ಟಿಯಲ್ಲಿ ಸಂಚಲನ ಮೂಡಿಸಿದ್ದ ಸರಣಿ ಕಳ್ಳತನ ಪ್ರಕರಣವನ್ನು ಭೇದಿಸಿರುವ ಹಾವೇರಿ ಶಹರ ಠಾಣೆಯ ಪೊಲೀಸರ ವಿಶೇಷ ತಂಡವು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಒಂದೇ ರಾತ್ರಿ 7ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಮಾಡಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಆರೋಪಿಗಳು ದೋಚಿದ್ದರು.

70ನೇ ವಾರ್ಷಿಕೋತ್ಸವದ ಪ್ರಯುಕ್ತ ತನ್ನ ಜನಪ್ರಿಯ R15 ಸರಣಿಯ ಮೇಲೆ ವಿಶೇಷ ರಿಯಾಯಿತಿ ಬೆಲೆ ಘೋಷಿಸಿದ ಯಮಹಾ

ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಆಫ್ ಕಂಪನೀಸ್

Yamaha R15 ಭಾರತದ ಮಾರುಕಟ್ಟೆಗೆ ಪ್ರವೇಶಿಸಿದ ದಿನದಿಂದಲೂ ಎಂಟ್ರಿ-ಲೆವೆಲ್ ಪರ್ಫಾ ರ್ಮೆನ್ಸ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಕ್ರಾಂತಿ ಮಾಡಿದೆ. ತನ್ನ ರೇಸಿಂಗ್ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ದೈನಂದಿನ ಬಳಕೆಗೆ ಯೋಗ್ಯವಾದ ಚಾಲನಾ ಅನುಭವ ಒದಗಿಸುತ್ತಿರುವ ಕಾರಣದಿಂದ ದೇಶದ ಯುವಜನತೆಯಲ್ಲಿ ಬಹಳ ಜನಪ್ರಿಯ ವಾಗಿದೆ.

ಸಿಇಎಸ್ 2026ರ 'ದಿ ಫಸ್ಟ್ ಲುಕ್'ನಲ್ಲಿ ‘ಎಐ ಬದುಕಿಗೆ ಸಂಗಾತಿ’ ಎಂಬ ಪರಿಕಲ್ಪನೆ ಪ್ರದರ್ಶಿಸಿದ ಸ್ಯಾಮ್‌ಸಂಗ್

‘ಎಐ ಬದುಕಿಗೆ ಸಂಗಾತಿ’ ಎಂಬ ಪರಿಕಲ್ಪನೆ ಪ್ರದರ್ಶಿಸಿದ ಸ್ಯಾಮ್‌ಸಂಗ್

ಸ್ಯಾಮ್‌ಸಂಗ್‌ನ ಡಿವೈಸ್ ಎಕ್ಸ್‌ ಪೀರಿಯನ್ಸ್ (ಡಿಎಕ್ಸ್) ವಿಭಾಗದ ಸಿಇಓ ಮತ್ತು ಮುಖ್ಯಸ್ಥ ರಾದ ಟಿ.ಎಂ. ರೋಹ್ ಅವರು 'ದ ಫಸ್ಟ್ ಲುಕ್' ಅನ್ನು ಉದ್ಘಾಟಿಸಿ ಮಾತನಾಡಿ, ಕಂಪನಿಯ ಎಐ ಸಾಮರ್ಥ್ಯವನ್ನು ಮತ್ತು ವಿಶಾಲವಾದ ಎಐ-ಆಧರಿತ ಕನೆಕ್ಟೆಡ್ ಎಕೋಸಿಸ್ಟಮ್‌ ಮೂಲಕ ಸ್ಯಾಮ್‌ಸಂಗ್ ಹೇಗೆ ಬಳಕೆದಾರರ ದೈನಂದಿನ ಜೀವನದಲ್ಲಿ ಎಐ ಸಂಗಾತಿಯ ಅನುಭವವನ್ನು ನೀಡಬಲ್ಲದು ಎಂಬುದನ್ನು ವಿವರಿಸಿದರು.

Bidar KDP Meeting: ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಬಿಜೆಪಿ ಶಾಸಕ- ಕಾಂಗ್ರೆಸ್‌ ಎಂಎಲ್‌ಸಿ; ಸಚಿವ ಖಂಡ್ರೆ ಎದುರೇ ಫೈಟಿಂಗ್‌!

ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಬಿಜೆಪಿ ಶಾಸಕ- ಕಾಂಗ್ರೆಸ್‌ ಎಂಎಲ್‌ಸಿ!

ಬಿಜೆಪಿ ಶಾಸಕ ಸಿದ್ದು ಪಾಟೀಲ್ ಅವರು ಹುಮ್ನಾಬಾದ್​​ನಲ್ಲಿ ಅರಣ್ಯ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಚಿವ ಈಶ್ವರ್​ ಖಂಡ್ರೆಗೆ ಹೇಳಿದ್ದಾರೆ. ಇದರಿಂದ ಕೆರಳಿದ ಭೀಮರಾವ್ ಪಾಟೀಲ್ ಅದನ್ನು ಕೇಳಲು ನೀನ್ಯಾರು? ಎಂದು ಏಕವಚನದಲ್ಲೇ ಪ್ರಶ್ನಿಸಿದ್ದಾರೆ. ಇದರಿಂದ ಇಬ್ಬರ ನಡುವೆ ಸಭೆಯಲ್ಲಿ ಜಗಳ ನಡೆದಿದೆ.

Loading...