ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ಡಿ.7ರಂದು ಸೋರೆಕಾಯಿಪುರದಲ್ಲಿ ಮಲೆನಾಡು ಗಿಡ್ಡ ಹೋರಿ ಹಬ್ಬ; 50 ರೈತರಿಗೆ ಜೋಡಿ ಹೋರಿ ಉಚಿತ ವಿತರಣೆ

ಡಿ.7ರಂದು ಸೋರೆಕಾಯಿಪುರದಲ್ಲಿ ಮಲೆನಾಡು ಗಿಡ್ಡ ಹೋರಿ ಹಬ್ಬ

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆಯ ಸೋರೆಕಾಯಿಪುರದ ಮಲ್ಲಿಗಮ್ಮ ದೇವಸ್ಥಾನ ಆವರಣದಲ್ಲಿ ಡಿ.7ರಂದು 'ಮಲೆನಾಡು ಗಿಡ್ಡ ಹೋರಿ ಹಬ್ಬ' ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ 50 ರೈತರಿಗೆ ಉಚಿತವಾಗಿ ಮಲೆನಾಡು ಗಿಡ್ಡ ತಳಿಯ ಜೋಡಿ ಹೋರಿಗಳನ್ನು ನೀಡಲಾಗುತ್ತದೆ.

DK Shivakumar: ದೆಹಲಿ ಪ್ರವಾಸದ ಬಗ್ಗೆ ಮಹ‌ತ್ವದ ಮಾಹಿತಿ ಕೊಟ್ಟ ಡಿ.ಕೆ. ಶಿವಕುಮಾರ್

ಕೇಂದ್ರ ಸಚಿವರ ಭೇಟಿಗೆ ಸಮಯ ಕೇಳಿದ್ದೇನೆ: ಡಿ.ಕೆ. ಶಿವಕುಮಾರ್

ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ ಎಲ್ಲಾ ಸಂಸದರು ರಾಜ್ಯದ ಹಿತಕ್ಕಾಗಿ ಹೋರಾಟ ನಡೆಸಬೇಕಿದೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನಿಯೋಗವನ್ನು ಕರೆದೊಯ್ಯುವುದಾಗಿ ಹೇಳಿದ್ದಾರೆ. ಈ ಬಗ್ಗೆ ನಾಳೆ ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜತೆ ಚರ್ಚೆ ಮಾಡಲಾಗುವುದು. ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುವ ಮುನ್ನ ಒಮ್ಮೆ ದೆಹಲಿಗೆ ಹೋಗಿ ಬರಬೇಕಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿಗೆ ರಾತ್ರಿ ಜೀವನದ ಹೊಸ ಯುಗ 'ಕಾವೋರ್'

ಬೆಂಗಳೂರಿಗೆ ರಾತ್ರಿ ಜೀವನದ ಹೊಸ ಯುಗ 'ಕಾವೋರ್'

ದೃಷ್ಟಿ, ಧ್ವನಿ ಮತ್ತು ರುಚಿಯ ಚಮತ್ಕಾರವಾಗಿ ರಚಿಸಲಾಗಿದೆ, ಕ್ಯಾವೊರ್ ವಿಶ್ವ-ದರ್ಜೆಯ ಮಿಶ್ರಣ ಶಾಸ್ತ್ರ, ಗೌರ್ಮೆಟ್ ಸುವಾಸನೆ ಮತ್ತು ರಾತ್ರಿಯ ಪ್ರತಿ ಗಂಟೆಗೆ ರೂಪಾಂತರಗೊಳ್ಳುವ ರೋಮಾಂಚಕ, ಕಾಂತೀಯ ವಾತಾವರಣವನ್ನು ಸಂಯೋಜಿಸುತ್ತದೆ. ಕೋಣೆ, ಲಯ, ನೆಲ ಎಲ್ಲವೂ ಒಟ್ಟಿಗೆ ಚಲಿಸುತ್ತದೆ ಮತ್ತು ನಿಧಾನಗೊಳಿಸಲು ನಿರಾಕರಿಸುವ ರಾತ್ರಿಯನ್ನು ಸೃಷ್ಟಿಸುತ್ತದೆ.

Karnataka Weather: ರಾಜ್ಯದಲ್ಲಿ ಹೆಚ್ಚಿದ ಚಳಿಯ ತೀವ್ರತೆ; ವಿಜಯಪುರನಲ್ಲಿ ಕನಿಷ್ಠ ಉಷ್ಣಾಂಶ ದಾಖಲು

ಹೆಚ್ಚಿದ ಚಳಿಯ ತೀವ್ರತೆ; ವಿಜಯಪುರನಲ್ಲಿ ಕನಿಷ್ಠ ಉಷ್ಣಾಂಶ ದಾಖಲು

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚಿದ್ದು, ಹಗಲಲ್ಲೂ ಮೈ ನಡುಗುವ ವಾತಾವರಣವಿದೆ. ಇನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವದಲ್ಲಿ ದಟ್ಟ ಮಂಜು ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮಕ್ಕಳಲ್ಲಿ ಹೆಚ್ಚುತ್ತಿರುವ ಒಬೆಸಿಟಿ ಕುರಿತು ಜಾಗೃತಿ ಮೂಡಿಸಲು ಗೆಟ್ ಸೆಟ್, ಗ್ರೋ! ಚಿಲ್ಡ್ರನ್ಸ್ ವೆಲ್ನೆಸ್ ಸಮ್ಮಿಟ್‌’ ಆಯೋಜನೆ

ಮಕ್ಕಳಲ್ಲಿ ಹೆಚ್ಚುತ್ತಿರುವ ಒಬೆಸಿಟಿ ಕುರಿತು ಜಾಗೃತಿ

ಇಡೀ ದಿನದ ಸಮ್ಮಿಟ್‌ನಲ್ಲಿ "ಮಕ್ಕಳು ಮತ್ತು ಬೊಜ್ಜು: ಬೆಳೆಯುತ್ತಿರುವ ಕಾಳಜಿ ಮತ್ತು ಅದನ್ನು ನಿಭಾಯಿಸುವ ಮಾರ್ಗಗಳು". ಈ ಶೀರ್ಷಿಕೆಯಡಿ ಸಂವಾದ ನಡೆಯಲಿದ್ದು, ತಜ್ಞ ವೈದ್ಯರು ಈ ಬಗ್ಗೆ ಮಕ್ಕಳಿಗೆ ಹಾಗೂ ಅವರ ಕುಟುಂಬಗಳಿಗೆ ವಿಷಯದ ಮನವರಿಕೆ ಮಾಡಿಕೊಡಲಿದ್ದಾರೆ, ಈ ಸಮ್ಮಿಟ್‌ ನಲ್ಲಿ ಮಕ್ಕಳು, ಶಿಕ್ಷಣ ಸಂಸ್ಥೆಗಳು ಸಹ ನೋಂದಣಿ ಮಾಡಿಕೊಳ್ಳಲು ಅರ್ಹವಾಗಿದೆ.

Kaneri Mutt Seer: ಕಾವಿ ಬಟ್ಟೆ ತೊಟ್ಟ ಬಸವ ತಾಲಿಬಾನಿಗಳು; ಮತ್ತೊಂದು ವಿವಾದಿತ ಹೇಳಿಕೆ ನೀಡಿದ ಕನ್ನೇರಿ ಶ್ರೀ!

ಬಸವ ತಾಲಿಬಾನಿಗಳು; ಮತ್ತೊಂದು ವಿವಾದಿತ ಹೇಳಿಕೆ ನೀಡಿದ ಕನ್ನೇರಿ ಶ್ರೀ!

Belagavi News: ಇತ್ತೀಚೆಗೆ ಲಿಂಗಾಯತ ಮಠಾಧೀಶರ ಬಗ್ಗೆ ಕನ್ನೇರಿ ಶ್ರೀ ಟೀಕೆ ಮಾಡಿದ್ದಕ್ಕೆ ಲಿಂಗಾಯತ ಸಮಾಜದಿಂದ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಸ್ವಾಮೀಜಿಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಪ್ರವೇಶಕ್ಕೆ ಜಿಲ್ಲಾಧಿಕಾರಿಗಳು ನಿರ್ಬಂಧ ವಿಧಿಸಿದ್ದರು. ಇದರ ಬೆನ್ನಲ್ಲೇ ಕನ್ನೇರಿ ಶ್ರೀ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ.

DCC Bank Recruitment: 10ನೇ ತರಗತಿ ಪಾಸಾದವರಿಗೆ  DCC ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ: ಇಲ್ಲಿದೆ ವಿವರ

ಡಿಸಿಸಿ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ

ರಾಯಚೂರು ಮತ್ತು ಕೊಪ್ಪಳ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ವಿವಿಧ ಶಾಖೆಗಳಲ್ಲಿ ಅಗತ್ಯವಿರುವ ಬರೋಬರಿ 70 ಪೋಸ್ಟ್‌ಗಳ ಭರ್ತಿಗೆ ಪ್ರಕಟಣೆ ಹೊರಡಿಸಲಾಗಿದೆ. ಪದವಿ, ಹತ್ತನೇ ಪಾಸಾದವರು ಈ ಹುದ್ದೆಗಳಿಗೆ ಡಿಸೆಂಬರ್ 22ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆ ವಿಧಾನ, ಇತರ ಮಾಹಿತಿ ಇಲ್ಲಿದೆ.

KV Prabhakar: ಪುಟ್ಟಣ್ಣ ಕಣಗಾಲ್ ಕನ್ನಡ ಸಂಸ್ಕೃತಿಯ ನೇಕಾರರು: ಕೆ.ವಿ. ಪ್ರಭಾಕರ್

ಪುಟ್ಟಣ್ಣ ಕಣಗಾಲ್ ಕನ್ನಡ ಸಂಸ್ಕೃತಿಯ ನೇಕಾರರು: ಕೆ.ವಿ. ಪ್ರಭಾಕರ್

ಪುಟ್ಟಣ್ಣ ಕಣಗಾಲ್ ಅವರು ಓದುಗರಿಗೆ ಸಿನಿಮಾವನ್ನೂ, ನೋಡುಗರಿಗೆ ಸಾಹಿತ್ಯವನ್ನೂ ತಲುಪಿಸುವ ಮೂಲಕ ಎರಡು ಕಲಾ ಮಾಧ್ಯಮಗಳ ಜೀವಂತಿಕೆ ಹೆಚ್ಚಿಸಿದರು. ಕನ್ನಡದ ಮಹತ್ವದ ಕಾದಂಬರಿಗಳನ್ನು ಮತ್ತು ಸಾಹಿತ್ಯ ಕೃತಿಗಳನ್ನು ಯಶಸ್ವಿಯಾಗಿ ಚಲನಚಿತ್ರಗಳಿಗೆ ಅಳವಡಿಸಿ, ಸಾಹಿತ್ಯ ಮತ್ತು ಚಲನಚಿತ್ರ ಮಾಧ್ಯಮಗಳ ನಡುವೆ ಸೇತುವೆಯಾಗಿದ್ದರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಶ್ಲಾಘಿಸಿದ್ದಾರೆ.

CS Shadakshari: ಶಿಕ್ಷಕರಿಗೆ ನಾಲೆಡ್ಜ್‌ ಇಲ್ಲ; ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಹೇಳಿಕೆಗೆ ವ್ಯಾಪಕ ಆಕ್ರೋಶ

ಶಿಕ್ಷಕರಿಗೆ ನಾಲೆಡ್ಜ್‌ ಇಲ್ಲ; ಷಡಾಕ್ಷರಿ ಹೇಳಿಕೆಗೆ ವ್ಯಾಪಕ ಆಕ್ರೋಶ

ಕೊಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಶಿಕ್ಷಕರಿಗೆ ನಾಲೆಡ್ಜ್‌ ಇಲ್ಲ ಎಂದು ಹೇಳಿದ್ದಾರೆ. ಇದು ಶಿಕ್ಷಕರಿಗೆ ಮಾಡಿರುವ ಘೋರ ಅವಮಾನ. ಇದನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಹೇಳಿದ್ದಾರೆ.

Datta Jayanti 2025: ನಾಳೆಯಿಂದ ದತ್ತ ಜಯಂತಿ, ಚಿಕ್ಕಮಗಳೂರಿನ ಈ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ

ನಾಳೆಯಿಂದ ದತ್ತ ಜಯಂತಿ, ಚಿಕ್ಕಮಗಳೂರಿನ ಈ ಪ್ರದೇಶಗಳಿಗೆ ನಿರ್ಬಂಧ

ದತ್ತ ಜಯಂತಿಯ (Datta Jayanti 2025) ಹಿನ್ನೆಲೆಯಲ್ಲಿ ಇಂದಿನಿಂದ ಡಿ.5ರ ಬೆಳಗ್ಗೆ 10 ಗಂಟೆಯವರೆಗೂ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಸಾಲಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಾತ್ರೇಯ ಪೀಠ, ಬಾಬಾಬುಡನ್ ಸ್ವಾಮಿ ದರ್ಗಾಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸ್ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಸುರಕ್ಷತಾ ಅನುಮತಿಗೆ ಸರ್ಕಾರ ಒತ್ತಾಯ; ಐಪಿಎಲ್‌ ಪಂದ್ಯ ಅನುಮಾನ

2026 ಐಪಿಎಲ್‌ ಪಂದ್ಯಾವಳಿ ಚಿನ್ನಸ್ವಾಮಿಯಿಂದ ಎತ್ತಂಗಡಿ ಖಚಿತ

IPL 2026: ಇತ್ತೀಚೆಗಷ್ಟೇ ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆ(ಎಂಸಿಎ)ಯು ಪಂದ್ಯಗಳನ್ನು ಪುಣೆಯಲ್ಲಿ ನಡೆಸಲು ಆರ್‌ಸಿಬಿಗೆ ಆಫರ್‌ ನೀಡಿತ್ತು. ಇದೀಗ ರಾಜ್ಯ ಸರ್ಕಾರದ ನಡೆ ನೋಡುವಾಗ ಆರ್‌ಸಿಬಿ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೊರಗೆ ನಡೆಯುವುದು ಖಚಿತ ಎನ್ನುವಂತಿದೆ.

Bengaluru Winter Season: ಫ್ರಿಡ್ಜ್‌ನೊಳಗೆ ಸಿಲಿಕಾನ್‌ ಸಿಟಿ; ಬೆಂಗಳೂರಲ್ಲಿ ದಾಖಲಾಯಾಯ್ತು ಕಂಡರಿಯದಷ್ಟು ಚಳಿ

ಚಳಿಗೆ ನಡುಗುತ್ತಿದೆ ಸಿಲಿಕಾನ್ ಸಿಟಿ

ಬೆಂಗಳೂರಿನಲ್ಲಿ ನ. 30ರಂದು ಈ ಹಿಂದೆಗಿಂತಲೂ ಅತಿ ಹೆಚ್ಚು ಎನ್ನಬಹುದಾದಷ್ಟು ಚಳಿ ಆವರಿಸಿದ್ದು, 21.6 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ಇಳಿದಿತ್ತು. ನಗರದ ಸುತ್ತಮುತ್ತ ಕಳೆದ ನಾಲ್ಕೈದು ದಿನಗಳಿಂದ ವಾತಾವರಣದಲ್ಲಿ ಏರುಪೇರಾಗಿದ್ದು, ಬೆಳಗ್ಗೆ ಎಂಟಾದರೂ ಆವರಿಸಿರುವ ಮಂಜು, ಚುಮು ಚುಮು ಚಳಿ ಜನರನ್ನು ಥರಗುಟ್ಟಿಸುತ್ತಿದೆ. ಬೆಳಗ್ಗೆ 9 ಗಂಟೆ ಕಳೆದು, ಸೂರ್ಯ ನೆತ್ತಿ ಮೇಲೆ ಬಂದರೂ ಎದುರಿಗಿರುವವರ ಮುಖ, ವಾಹನ ಕಾಣಿಸದಷ್ಟು ಮಂಜು ಆವರಿಸುತ್ತಿದೆ.

National Herald Case: ರಾಜಕೀಯ ದ್ವೇಷಕ್ಕೆ ಕಿರುಕುಳ; ಜೈಲಿಗೆ ಹಾಕಿದರೂ ರಾಹುಲ್ ಗಾಂಧಿ ಹಿಂಜರಿಯಲ್ಲ ಎಂದ ಡಿ.ಕೆ.ಶಿವಕುಮಾರ್‌

ಜೈಲಿಗೆ ಹಾಕಿದರೂ ರಾಹುಲ್ ಗಾಂಧಿ ಹಿಂಜರಿಯಲ್ಲ ಎಂದ ಡಿಕೆಶಿ

DK Shivakumar: ಯಂಗ್ ಇಂಡಿಯಾ ಅಗಲಿ, ನ್ಯಾಷನಲ್ ಹೆರಾಲ್ಡ್ ಆಗಲಿ ನಮ್ಮ ವೈಯಕ್ತಿಕ ಆಸ್ತಿಯಲ್ಲ ಎಂದು ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಈಗಾಗಲೇ ಘೋಷಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಆಸ್ತಿ. ಕಾಂಗ್ರೆಸ್ ಪಕ್ಷದ ಪಾಲಕರು ಅವರಾಗಿದ್ದಾರೆ. ಈ ಪ್ರಕರಣದಲ್ಲಿ ಕಿರುಕುಳ ನೀಡುವ ಅಗತ್ಯವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

Bengaluru Traffic: ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಗೆ ತಾಳ್ಮೆಗೆಟ್ಟ ಉತ್ತರ ಪ್ರದೇಶದ ಎಸ್‌ಪಿ ಸಂಸದ, ಟ್ರಾಫಿಕ್‌ ಪೊಲೀಸರ ಮೇಲೆ ಆಕ್ರೋಶ

ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಗೆ ತಾಳ್ಮೆಗೆಟ್ಟ ಉತ್ತರ ಪ್ರದೇಶ ಎಸ್‌ಪಿ ಸಂಸದ

ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಸಂಸದ ರಾಜೀವ್‌ ರೈ ಭಾನುವಾರ ಬೆಂಗಳೂರು ಟ್ರಾಫಿಕ್‌ (Bengaluru Traffic) ದಟ್ಟಣೆಯ ಫಜೀತಿಯನ್ನು ಅನುಭವಿಸಿದರು. ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಅವರು ಟ್ರಾಫಿಕ್‌ನಿಂದಾಗಿ ರಸ್ತೆಯಲ್ಲಿ ಬಾಕಿಯಾಗಿದ್ದು, ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಟ್ರಾಫಿಕ್‌ ಪೊಲೀಸರನ್ನು ಸಂಪರ್ಕಿಸಲು ಯತ್ನಿಸಿದರೂ ಯಾರೂ ಪ್ರತಿಕ್ರಿಯಿಸಲಿಲ್ಲ ಎಂದು ಸಿಟ್ಟಿಗೆದ್ದಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ವಿಪರೀತ ಚಳಿಗೆ ಥರಥರ ನಡುಗಿದ ಜನತೆ; ಇದೇನು ಬೆಂಗಳೂರಾ, ಲಂಡನ್ನಾ ಎಂದ ಅಮೆರಿಕನ್ ಯುವತಿ

ಸಿಲಿಕಾನ್ ಸಿಟಿಯಲ್ಲಿ ವಿಪರೀತ ಚಳಿಗೆ ಥರಥರ ನಡುಗಿದ ಜನತೆ

Severe cold wave hits Silicon City: ಸಿಲಿಕಾನ್ ಸಿಟಿಯಲ್ಲಿ ಅಸಹಜ ಚಳಿ ಜನರನ್ನು ಬೆಚ್ಚಿಬೀಳಿಸಿದೆ. ತೀವ್ರ ಚಳಿಯಿಂದ ಜನತೆ ಕಂಗೆಟ್ಟಿದ್ದಾರೆ. ರಾತ್ರಿ-ಹಗಲೆನ್ನದೆ ಒಂದೇ ರೀತಿಯ ಹವಾಮಾನಕ್ಕೆ ಜನತೆ ಮನೆಯೊಳಗೆ ಬೆಚ್ಚಗೆ ಕುಳಿತಿದ್ದಾರೆ. ಇದೀಗ ಅಮೆರಿಕದ ಯುವತಿಯೊಬ್ಬಳು ಬೆಂಗಳೂರಿನ ಚಳಿಗೆ ನಡುಗಿ ಹೋಗಿರುವುದಾಗಿ ತಿಳಿಸಿದ್ದಾಳೆ.

ಸೆಲ್ ಪ್ರೋಟೀನ್ ಸೇವಾ ಕೇಂದ್ರದೊಂದಿಗೆ ಬಯೋಫಾರ್ಮಾ ನಾವೀನ್ಯತೆಗೆ ಸಿಟಿವಾ ಮತ್ತು ವೀಡಾ ಲೈಫ್‌ಸೈನ್ಸ್‌ಗಳು ಚಾಲನೆ

ಬಯೋಫಾರ್ಮಾ ನಾವೀನ್ಯತೆಗೆ ಸಿಟಿವಾ ಮತ್ತು ವೀಡಾ ಲೈಫ್‌ಸೈನ್ಸ್‌ಗಳು ಚಾಲನೆ

ಸಿಟಿವಾ ತಂತ್ರಜ್ಞಾನದಿಂದ ಬೆಂಬಲಿತವಾಗಿರುವ ಮತ್ತು ವೀಡಾದ ಸೌಲಭ್ಯದಲ್ಲಿ ಇರುವ ಈ ಕೇಂದ್ರವು ತಯಾರಕರು, ಸಂಶೋಧಕರು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಸಮಗ್ರ ವಿಶ್ಲೇಷಣಾತ್ಮಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಬಹು ಗುಣಲಕ್ಷಣ DIGE (ಡಿಫರೆನ್ಷಿಯಲ್ ಜೆಲ್ ಎಲೆಕ್ಟ್ರೋ ಫೋರೆಸಿಸ್) ತಂತ್ರಗಳನ್ನು ಬಳಸಿಕೊಂಡು, ಇದು ಕೆಲಸದ ಹರಿವುಗಳನ್ನು ಸುಗಮಗೊಳಿಸುತ್ತದೆ ಮತ್ತು ವಿಶ್ಲೇಷಣೆ ಯ ವೇಗ ಮತ್ತು ನಿಖರತೆಯನ್ನು ಹೆಚ್ಚಿಸುತ್ತದೆ.

Karnataka Politics: ಸಿಎಂ ಸಿದ್ದರಾಮಯ್ಯ- ಡಿಕೆ ಶಿವಕುಮಾರ್‌ ನಡುವೆ ನಾಳೆ ಇನ್ನೊಂದು ಬ್ರೇಕ್‌ಫಾಸ್ಟ್‌ ಮೀಟಿಂಗ್

ಸಿಎಂ ಸಿದ್ದರಾಮಯ್ಯ- ಡಿಕೆ ಶಿವಕುಮಾರ್‌ ನಡುವೆ ನಾಳೆ ಇನ್ನೊಂದು ಮೀಟಿಂಗ್

ಮೊದಲ ಮೀಟಿಂಗ್‌ ಬಳಿಕ ಸಿಎಂ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಒಗ್ಗಟ್ಟಿನ ಸಂದೇಶ ರವಾನಿಸಿ, ಏನೇ ಇದ್ದರೂ ಹೈಕಮಾಂಡ್ ಹೇಳಿದಂತೆ ನಡೆಯುತ್ತೇವೆ ಎಂದಿದ್ದರು. ಆ ಬಳಿಕ ಸಿದ್ದರಾಮಯ್ಯ (CM Siddaramaiah) ಅವರು, ಡಿಕೆಶಿ ಕೂಡ ಮನೆಗೆ ಆಹ್ವಾನಿಸಿದ್ದಾರೆ, ಹೋಗುತ್ತೇನೆ ಎಂದಿದ್ದರು. ಇದೀಗ ಅದಕ್ಕೂ ಮುಹೂರ್ತ ಫಿಕ್ಸ್ ಆಗಿದ್ದು, ಮಂಗಳವಾರ ಬೆಳಗ್ಗೆ 9.30ಕ್ಕೆ ಡಿಕೆಶಿ ನಿವಾಸದಲ್ಲಿ ಮೀಟಿಂಗ್‌ ನಡೆಯಲಿದೆ.

ಮುಂದಿನ ಪೀಳಿಗೆಯ GPU ಸೂಪರ್‌ಪಾಡ್‌ ಪ್ರಾರಂಭಿಸಿದ ESDS ಸಾಫ್ಟ್‌ವೇರ್ ಸೊಲ್ಯೂಷನ್ ಲಿಮಿಟೆಡ್

ಮುಂದಿನ ಪೀಳಿಗೆಯ GPU ಸೂಪರ್‌ಪಾಡ್‌ ಪ್ರಾರಂಭ

ಪ್ರಸ್ತುತ ಎಐ ಮೇಲೆ ಹೆಚ್ಚುತ್ತಿರುವ ಬೇಡಿಕೆ ಪರಿಹರಿಸಲು “ಗ್ರಾಫಿಕ್‌ ಪ್ರೋಸೆಸಿಂಗ್‌ ಯುನಿಟ್ಸ್‌” (ಜಿಪಿಯು) ಉತ್ತಮ ಹಾದಿಯಾಗಿದೆ. ಜಾಗತಿಕ AI ಮೌಲ್ಯವು 2030 ರ ವೇಳೆಗೆ ಸುಮಾರು $15.7 ಟ್ರಿಲಿಯನ್ ಡಾಲರ್‌ ಸಮೀಪಿಸುವ ನಿರೀಕ್ಷೆಯಿದೆ, ಅದೇ ರೀತಿ, ಶೇ.80ರಷ್ಟು ಹೂಡಿಕೆಯು GPU ಕಡೆಗೆ ಕೇಂದ್ರೀಕರಿಸಿದೆ. ಜಿಪಿಯು ಮೇಲೆ ಹೆಚ್ಚಿನ ವಿಶ್ವಾಸಾರ್ಹತೆ ಹೊಂದಿದ್ದು, ಪರಿಸರ ವ್ಯವಸ್ಥೆಯ ಅಗತ್ಯಕ್ಕೂ ಸ್ನೇಹಮಯ ವಾಗಿದೆ.

MLA Subbareddy: ಯುವಜನತೆ ಹೆಚ್ಚು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಶಾಸಕ ಸುಬ್ಬಾರೆಡ್ಡಿ ಕರೆ

ಯುವಜನತೆ ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಶಾಸಕ ಸುಬ್ಬಾರೆಡ್ಡಿ ಕರೆ

ಇತ್ತೀಚಿಗೆ ಯುವಜನತೆ ಕ್ರೀಡೆಗಳತ್ತ ಹೆಚ್ಚು ಒಲವು ತೋರುತ್ತಿಲ್ಲ. ಮೊಬೈಲ್, ಇಂಟರ್ ನೆಟ್ ಗಳಿಗೆ ದಾಸರಾಗಿ ಕ್ರೀಡೆ‌ ಗಳನ್ನು ಮರೆಯುತ್ತಿದ್ದಾರೆ. ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡಾ ಮನೋ ಭಾವ ಬೆಳೆಸಿಕೊಳ್ಳಬೇಕು. ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯ ಸಹ ಲಭಿಸುತ್ತದೆ. ಇದರ ಜೊತೆಗೆ ಗ್ರಾಮಗಳಲ್ಲಿ ಒಗ್ಗಟ್ಟು ಸಹ ಬೆಳೆಯುತ್ತದೆ

Minister K.H. Muniyappa: ಸದ್ಯಕ್ಕೆ ದಲಿತ ಸಿಎಂ ವಿಚಾರ ಬೇಡ ಎಂದ ಸಚಿವ ಕೆ.ಹೆಚ್.ಮುನಿಯಪ್ಪ

ಸದ್ಯಕ್ಕೆ ದಲಿತ ಸಿಎಂ ವಿಚಾರ ಬೇಡ ಎಂದ ಸಚಿವ ಕೆ.ಹೆಚ್.ಮುನಿಯಪ್ಪ

ಸ್ವಂತ ವಾಹನ ಇರುವವರು ಹಾಗೂ ಕೆಲಸ ಮಾಡುತ್ತಿರುವವರ ಸೇರಿದಂತೆ ಹಲವರ ಕಾರ್ಡ್‌ಗಳು ಎಪಿಎಲ್ ಆಗಿ ಬದಲಾಗಿದೆ. ಒಂದು ವೇಳೆ ಅರ್ಹರಾಗಿದ್ದು ತಮ್ಮ ಕಾರ್ಡ್ ಎಪಿಎಲ್ ಆಗಿದ್ದರೇ ಅಂತಹ ವರು ತಹಸೀಲ್ದಾರ್‍ ರವರಿಗೆ ಕೂಡಲೇ ಅರ್ಜಿ ಸಲ್ಲಿಸಿ ಬದಲಾಯಿಸಿಕೊಳ್ಳಬಹುದು

Cyclone Ditwah: ಸೈಕ್ಲೋನ್‌ ದಿತ್ವಾ ಪ್ರಭಾವ- ಇಂದು ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ, ಇನ್ನೂ 3 ದಿನ ತೀವ್ರ ಚಳಿ

ಸೈಕ್ಲೋನ್‌ ದಿತ್ವಾ ಪ್ರಭಾವ- ಇಂದು ಮಳೆ, ಇನ್ನೂ 3 ದಿನ ತೀವ್ರ ಚಳಿ

ದಿತ್ವಾ ಚಂಡಮಾರುತದ (Cyclone Ditwah) ಪ್ರಭಾವದಿಂದ ಮುಂದಿನ ಮೂರು ದಿನಗಳ ಕಾಲ ಚಳಿಯ ವಾತಾವರಣ ಮುಂದುವರೆಯಲಿದೆ. ಬೆಂಗಳೂರಲ್ಲಿ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮೈಕೊರೆವ ಚಳಿಯೊಂದಿಗೆ ತುಂತುರು ಮಳೆ ಕೂಡ ಅಲ್ಲಲ್ಲಿ ಬೀಳುವುದು ಮುಂದುವರಿಯಲಿದೆ.

ದೀಕ್ಷಾ ಸ್ಟೆಮ್ ನೂತನ ಅಕಾಡೆಮಿ ಉದ್ಘಾಟನೆ

ದೀಕ್ಷಾ ಸ್ಟೆಮ್ ನೂತನ ಅಕಾಡೆಮಿ ಉದ್ಘಾಟನೆ

ನಮ್ಮ ಕಾರ್ನಿವಲ್ ನಲ್ಲಿ , ಕರ್ನಾಟಕದ ಪರಂಪರೆಯ ರೋಮಾಂಚಕ ಆಚರಣೆ, ಕಲೆ, ಸಂಸ್ಕೃತಿ, ಸಾಂಪ್ರದಾಯಿಕ ಆಟಗಳು ಮತ್ತು ಸಮುದಾಯದ ತೊಡಗಿಸಿಕೊಳ್ಳು ವಿಕೆಯು ವಿಶೇಷವಾಗಿತ್ತು. ಹೊಸ ಅಕಾಡೆಮಿಕ್ ಬ್ಲಾಕ್ನಲ್ಲಿರುವ ಸುಧಾರಿತ ಪ್ರಯೋಗಾಲಯಗಳು, ವಿನ್ಯಾಸ ಸ್ಟುಡಿಯೋಗಳು, ಸಹಯೋಗದ ಕಲಿಕೆಯ ಸ್ಥಳಗಳು ಮತ್ತು AI- ಚಾಲಿತ ಭಾಷಾ ಪರಿಕರಗಳಿಂದ ವರ್ಧಿಸಲ್ಪಟ್ಟ ಸಂವಹನ ಇಂಗ್ಲಿಷ್ ಲ್ಯಾಬ್‌ಗಳೊಂದಿಗೆ ಭವಿಷ್ಯದ-ಸಿದ್ಧ ಕಲಿಕೆಯ ಅನುಭವವನ್ನು ನೀಡಲು ಸಿದ್ದವಾಗಿವೆ

Ranveer Singh: ತುಳುನಾಡ ದೈವಕ್ಕೆ ರಣವೀರ್‌ ಸಿಂಗ್‌ ಅಪಮಾನ, ಕದ್ರಿಗೆ ಬಂದು ಕ್ಷಮೆಯಾಚಿಸಲು ಆಗ್ರಹ

ದೈವಕ್ಕೆ ರಣವೀರ್‌ ಸಿಂಗ್‌ ಅಪಮಾನ, ಕದ್ರಿಗೆ ಬಂದು ಕ್ಷಮೆ ಯಾಚಿಸಲು ಆಗ್ರಹ

ಗೋವಾ ಫಿಲ್ಮೋತ್ಸವದಲ್ಲಿ ಈ ಘಟನೆ ನಡೆದಿದೆ. ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕಾಂತಾರ ಚಾಪ್ಟರ್‌ 1 (Kantara Chapter 1) ಚಿತ್ರದಲ್ಲಿ ರಿಷಬ್‌ ಶೆಟ್ಟಿ (Rishab Shetty) ಅಭಿನಯವನ್ನು ಕೊಂಡಾಡುವ ಭರದಲ್ಲಿ, ರಿಷಬ್‌ ಸಮ್ಮುಖದಲ್ಲಿಯೇ ಚಾಮುಂಡಿ ದೈವದ ಅವಾಹನೆಯನ್ನು ರಣವೀರ್‌ ಸಿಂಗ್‌ ಅಣಕಿಸಿದ್ದರು. ತುಳುನಾಡಿನ ದೈವಕ್ಕೆ ರಣವೀರ್‌ ಸಿಂಗ್‌ ಅಪಮಾನ ಮಾಡಿದ್ದಾರೆಂದು ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Road Accident: ಪ್ರವಾಸಕ್ಕೆ ಬಂದಿದ್ದ ಶಾಲಾ ಬಸ್ ಪಲ್ಟಿ, ಒಬ್ಬ ವಿದ್ಯಾರ್ಥಿ ಸಾವು, 26 ಮಕ್ಕಳಿಗೆ ಗಾಯ

ಶಾಲಾ ಪ್ರವಾಸದ ಬಸ್ ಪಲ್ಟಿ, ಒಬ್ಬ ವಿದ್ಯಾರ್ಥಿ ಸಾವು, 26 ಮಕ್ಕಳಿಗೆ ಗಾಯ

Uttara Kannada News: ಮೈಸೂರಿನ (Mysuru) ತರಳಬಾಳು ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳು ಗೋಕರ್ಣಕ್ಕೆ ಪ್ರವಾಸಕ್ಕೆ ಹೊರಟಿದ್ದರು. ಉತ್ತರ ಕನ್ನಡದ ಹೊನ್ನಾವರದ ಬಳಿಯ ಸುಳೆ ಮುರ್ಕಿ ಕ್ರಾಸ್ ಬಳಿ ಬಸ್‌ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Loading...