ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Gruhalakshmi Scheme: ನಾಳೆಯಿಂದ ಗೃಹಲಕ್ಷ್ಮಿ ಯೋಜನೆಯ 24ನೇ ಕಂತಿನ ಹಣ ಸಂದಾಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌

ನಾಳೆಯಿಂದ ಗೃಹಲಕ್ಷ್ಮಿ 24ನೇ ಕಂತಿನ ಹಣ ಸಂದಾಯ: ಹೆಬ್ಬಾಳ್ಕರ್‌

Laxmi Hebbalkar: 24ನೇ ಕಂತಿನ ಹಣ ಬಿಡುಗಡೆಗೆ ಹಣಕಾಸು ಇಲಾಖೆಯವರು ಈಗಾಗಲೇ ಅನುಮತಿ ನೀಡಿದ್ದು, ಸೋಮವಾರದಿಂದ ಹಣ ಸಂದಾಯವಾಗಲಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದ್ದಾರೆ. ಇನ್ನು ಸತ್ತವರ ಅಕೌಂಟ್‌ಗೂ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯ ಆಗುತ್ತಿರುವ ಬಗ್ಗೆ ಸಚಿವರು ಪ್ರತಿಕ್ರಿಯಿಸಿ, ಈ ಬಗ್ಗೆ ಪರಿಶೀಲನೆ ಮಾಡಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ರಾಜಣ್ಣ ನನಗೂ ಆಪ್ತರೇ, ನಾನು ಯಾರ ಮೇಲೂ ಜಗಳಕ್ಕೆ ಹೋಗಿಲ್ಲ ಎಂದ ಡಿ.ಕೆ.ಶಿವಕುಮಾರ್‌

ರಾಜಣ್ಣ ನನಗೂ ಆಪ್ತರೇ, ನಾನು ಯಾರ ಮೇಲೂ ಜಗಳಕ್ಕೆ ಹೋಗಿಲ್ಲ: ಡಿಕೆಶಿ

DK Shivakumar: ಮುಖ್ಯಮಂತ್ರಿಯವರ ಆಪ್ತ ಬಳಗದವರನ್ನು ಭೇಟಿ ಮಾಡಿದ್ದೀರಿ ಎಂಬ ಪ್ರಶ್ನೆಗೆ ಸದಾಶಿವನಗರದ ನಿವಾಸದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಪ್ರತಿಕ್ರಿಯಿಸಿದ್ದಾರೆ. ಮಾಜಿ ಸಚಿವ ರಾಜಣ್ಣ ಅವರು ನಮ್ಮ ಜತೆ ಕೆಲಸ ಮಾಡಿರುವವರು. ನನಗೆ ಯಾರ ಜತೆಯೂ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Pulse Polio Campaign 2025: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ಪಲ್ಸ್ ಪೋಲಿಯೋ ಅಭಿಯಾನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ಡಿಸೆಂಬರ್‌ 21ರಿಂದ 24ರವರೆಗೆ ಬೆಂಗಳೂರು ಸೇರಿ ರಾಜ್ಯಾದ್ಯಂತ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ – 2025 ಹಮ್ಮಿಕೊಂಡಿದ್ದು, ಐದು ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪಲ್ಸ್‌ ಪೋಲಿಯೋ ಲಸಿಕೆ ಹಾಕಿಸುವಂತೆ ಪೋಷಕರಿಗೆ ರಾಜ್ಯ ಸರ್ಕಾರ ಮನವಿ ಮಾಡಿದೆ.

ಭಾರತೀಯ ಕಾಫಿ ಮಾರುಕಟ್ಟೆ ವೃದ್ಧಿಗೆ ಪ್ರಯತ್ನ

ಭಾರತೀಯ ಕಾಫಿ ಮಾರುಕಟ್ಟೆ ವೃದ್ಧಿಗೆ ಪ್ರಯತ್ನ

ಭಾರತದ ಕಾಫಿ ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಜನತೆ, ಉದ್ಯಮಿಗಳ ಮನಗೆದ್ದಿದೆ. ಹೀಗಿರುವಾಗ ಭವಿಷ್ಯದಲ್ಲಿಯೂ ಭಾರತದ ಕಾಫಿಗೆ ಉತ್ತಮ ಮಾರುಕಟ್ಟೆ ದೊರಕುವುದು ನಿಸ್ಸಂಶ ಯ ಎಂದರು. ದೇಶದ ಜಿಡಿಪಿ ಪ್ರಗತಿಯು ಶೇ.6.5 ರಿಂದ 7ಕ್ಕೆ ಹೆಚ್ಚಾಗಿದೆ. 330 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆಯಲ್ಲಿಯೂ ಪ್ರಗತಿಯಾಗಿದೆ.

Seasonal Flu: ರಾಜ್ಯದಲ್ಲಿ ಹವಾಮಾನ ಬದಲಾವಣೆಯಿಂದ ಸೀಸನಲ್‌ ಫ್ಲೂ ಆತಂಕ; ಮಾರ್ಗಸೂಚಿ ಬಿಡುಗಡೆ

ಸೀಸನಲ್‌ ಫ್ಲೂ ಆತಂಕ; ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹವಾಮಾನ ಬದಲಾಗುತ್ತಿದೆ. ಇದರಿಂದಾಗಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ರಾಜ್ಯದಲ್ಲಿ ಸದ್ಯ ಸೀಸನಲ್ ಫ್ಲೂ (seasonal flu) ಭೀತಿ ಶುರುವಾಗಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

Karnataka Weather: ಆರೆಂಜ್‌ ಅಲರ್ಟ್‌; ಇಂದು ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತೀವ್ರ ಶೀತ ಗಾಳಿ ಸಾಧ್ಯತೆ!

ಇಂದು ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತೀವ್ರ ಶೀತ ಗಾಳಿ ಸಾಧ್ಯತೆ!

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಪ್ರಮುಖವಾಗಿ ಶುಭ್ರ ಆಕಾಶ ಇರಲಿದ್ದು, ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವದಲ್ಲಿ ದಟ್ಟ ಮಂಜು ಕವಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Gudibande News: ಗುಡಿಬಂಡೆ ಟಿಎಪಿಸಿಎಂಎಸ್ ಅಧಿಕಾರ ಹಿಡಿದ ಎನ್‌ಡಿಎ ಕೂಟ: ಗಂಗಿರೆಡ್ಡಿ ಅಧ್ಯಕ್ಷ, ಭಾಗ್ಯಮ್ಮ ಉಪಾಧ್ಯಕ್ಷರಾಗಿ ಆಯ್ಕೆ

ಗುಡಿಬಂಡೆ ಟಿಎಪಿಸಿಎಂಎಸ್ ಅಧಿಕಾರ ಹಿಡಿದ ಎನ್‌ಡಿಎ ಕೂಟ

ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ಎನ್‌ಡಿಎ ಮುಖಂಡರ ನಡುವೆ ಭಾರೀ ಪೈಪೋಟಿ ನಡೆದಿತ್ತು. ತಮ್ಮ ಬೆಂಬಲಿತ ಸದಸ್ಯರನ್ನು ಉಳಿಸಿಕೊಳ್ಳಲು ಉಭಯ ಪಕ್ಷಗಳ ನಾಯಕರು ಹರ ಸಾಹಸ ಪಟ್ಟಿದ್ದರು. ಈ ವೇಳೆ ಕೆಲಕಾಲ ರಾಜಕೀಯ ಹೈಡ್ರಾಮಾ ಕೂಡ ನಡೆಯಿತು. ಅಧಿಕಾರ ಹಿಡಿಯಲು ಕಾಂಗ್ರೆಸ್ ನಡೆಸಿದ ತಂತ್ರಗಾರಿಕೆಯನ್ನು ಮೆಟ್ಟಿ ನಿಲ್ಲುವಲ್ಲಿ ಎನ್‌ಡಿಎ ಯಶಸ್ವಿಯಾಗಿದೆ.

Gauribidanur News: ಜಗತ್ತಿಗೆ ಶಾಂತಿಯನ್ನು ಸಂವರ್ಧನೆ ಮಾಡಲು ಧ್ಯಾನದ ಅಗತ್ಯವಿದೆ: ಡಾ.ಕೆ.ವಿ. ಪ್ರಕಾಶ್

ತೀರ್ಥ ಶಾಲೆಯಲ್ಲಿ ನಡೆದ ವಿಶ್ವ ಧ್ಯಾನ ದಿನಾಚರಣೆಯಲ್ಲಿ ಭಾಗವಹಿಸಿ ಹೇಳಿಕೆ

ವಿಶ್ವಸಂಸ್ಥೆ 2024 ಡಿಸೆಂಬರ್ 21ರಂದು ವಿಶ್ವ ಧ್ಯಾನ ದಿನವೆಂದು  ಘೋಷಿಸಿದ್ದು ಜಗತ್ತಿನಾದ್ಯಂತ ಈ ದಿನವನ್ನು ಆಚರಿಸುತ್ತಾರೆ. ಧ್ಯಾನದಿಂದ ಏಕಾಗ್ರತೆ ಹೆಚ್ಚಾಗುತ್ತದೆ. ಏಕಾಗ್ರತೆಯಿಂದ ಮಾನಸಿಕ ಸ್ಥಿರತೆ ಮತ್ತು ಸಮತೋಲನವನ್ನು ಸಾಧಿಸಬಹುದು. ನಮ್ಮ ಗುರಿಯನ್ನು ಸಾಧಿಸಲು ಧ್ಯಾನ ಹೆಚ್ಚು ಸಹಕಾರಿ ಯಾಗಿದೆ.

Gudibande News: ಲಕ್ಷ್ಮೀಸಾಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಲಕ್ಷ್ಮೀಸಾಗರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಲಕ್ಷ್ಮೀಸಾಗರ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಬೆಳೆಸಲು ಎಲ್ಲರೂ ಶ್ರಮಿಸುತ್ತೇವೆ. ಸಂಘದ ಷೇರುದಾರರು ಉತ್ತಮ ಹಾಗೂ ಗುಣಮಟ್ಟದ ಹಾಲನ್ನು ಪೂರೈಸಬೇಕು. ಜೊತೆಗೆ ಸಂಘಕ್ಕೆ ಒಂದು ಕಟ್ಟಡದ ಅವಶ್ಯಕತೆಯಿದೆ. ಈ ನಿಟ್ಟಿನಲ್ಲೂ ನಾವೆಲ್ಲರೂ ಶ್ರಮಿಸುತ್ತೇವೆ. ಆದಷ್ಟು ಶೀಘ್ರವಾಗಿ ಸಂಘಕ್ಕೆ ಹೊಸ ನಿವೇಶನ ಹಾಗೂ ಕಟ್ಟಡವನ್ನು ಕಟ್ಟಲು ಎಲ್ಲಾ ರೀತಿಯಲ್ಲೂ ಶ್ರಮಿಸುತ್ತೇವೆ

Gauribidanur News: ಸಾದರ ಸಮುದಾಯದ ಏಳಿಗೆಯೇ ಸಂಘದ ಪ್ರಧಾನ ಧ್ಯೇಯವಾಗಿದೆ: ಗೌರವಾಧ್ಯಕ್ಷ ಪಿ.ಟಿ.ಶ್ರೀನಿವಾಸ್

ಹಿಂದೂ ಸಾದರ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ವ್ಯವಸಾಯವನ್ನೇ ಮುಖ್ಯ ಕಸುಬಾಗಿಸಿಕೊಂಡು ಸಮಾಜದ ಜೊತೆಯಲ್ಲಿ ಸಹಬಾಳ್ವೆಯಿಂದ ಬದುಕು ತ್ತಿರುವ ಹಿಂದು ಸಾದರ ಸಮಾಜವು ಇತ್ತೀಚಿನ ಕಾಲಘಟ್ಟದಲ್ಲಿ ವ್ಯವಸಾಯದಿಂದ ಸಾಕಷ್ಟು ನಷ್ಟ ಅನುಭವಿಸಿ ಆರ್ಥಿಕವಾಗಿ ಸಂಕಷ್ಟದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೆಲವರಿಗೆ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಲಾಗದೆ ಕೈಚಲ್ಲಿರುವುದನ್ನು ಕಂಡಿದ್ದೇವೆ.

Sixth Kannada Literary Conference: ಕನ್ನಡ ಮಾಧ್ಯಮಕ್ಕೆ ಉದ್ಯೋಗ ಮೀಸಲಾತಿ ಸಿಗಲಿ : ಸಮ್ಮೇಳನಾಧ್ಯಕ್ಷ ಡಾ.ಬಿ.ನಂಜುಂಡಸ್ವಾಮಿ

ಕನ್ನಡ ಮಾಧ್ಯಮಕ್ಕೆ ಉದ್ಯೋಗ ಮೀಸಲಾತಿ ಸಿಗಲಿ

ಗ್ರಂಥಾಲಯಗಳು ಸಹ ಓದುಗರ ಕೊರತೆ ಎದುರಿಸಿದೆ. ಸರ್ಕಾರ ಪುಸ್ತಕಗಳ ಖರೀದಿ ಮಾಡಬೇಕಿದೆ. ಪಟ್ಟಣ ನಗರದಲ್ಲಿ ಪ್ರತಿ ಪ್ರಜೆಯಿಂದ ಲೈಬ್ರರಿ ಸೆಸ್ ವಸೂಲಿ ಮಾಡಲಾಗುತ್ತಿದೆ. ಆದರೆ ಗ್ರಂಥಾ ಲಯಕ್ಕೆ ಪುಸ್ತಕಗಳು ಖರೀದಿ ಆಗುತ್ತಿಲ್ಲ. ಅಂತೂ ಇಂತೂ ಖರೀದಿ ನಡೆದರೆ ಅದರ ಹಣ ಬರಲು ಮೂರು ನಾಲ್ಕು ವರ್ಷ ಬೇಕಿದೆ. ಈ ಜೊತೆಗೆ ಪ್ರಕಾಶಕರ ಸ್ಥಿತಿ ಶೋಚನೀಯ ಎಂದು ಬೇಸರ ವ್ಯಕ್ತಪಡಿಸಿದ ಅವರು ಸರ್ಕಾರ ಪುಸ್ತಕೋದ್ಯಮ ರಕ್ಷಿಸಬೇಕಿದೆ. ಈ ಕಾಯಕ ಎಲ್ಲಾ ಕನ್ನಡಿಗರ ಕರ್ತವ್ಯ

ನಾಳೆಯಿಂದ ಪಲ್ಸ್ ಪೋಲಿಯೋ ಅಭಿಯಾನ; ನಿಮ್ಮ ಹತ್ತಿರದ ಪೋಲಿಯೋ ಬೂತ್ ಹೀಗೆ ಚೆಕ್‌ ಮಾಡಿ

ನಾಳೆಯಿಂದ ಪಲ್ಸ್ ಪೋಲಿಯೋ ಅಭಿಯಾನ; ಬೂತ್ ಹೀಗೆ ಚೆಕ್‌ ಮಾಡಿ

Pulse Polio Campaign 2025: ಆರೋಗ್ಯ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೋಲಿಯೋ ಬೂತ್, ಪ್ರಾಥಮಿಕ ಆಸ್ಪತ್ರೆ ಮಾಹಿತಿ ಪಡೆಯಲು QR ಕೋಡ್ ಬಿಡುಗಡೆ ಮಾಡಿದೆ. ಹಾಗೆಯೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಜಿಬಿಎ ನೀಡಿರುವ ಕ್ಯೂಆರ್‌ ಕೋಡ್ ಮತ್ತು ಲಿಂಕ್‌ ಮೂಲಕ ಹತ್ತಿರದ ಪೋಲಿಯೋ ಬೂತ್ ಮಾಹಿತಿ ಪಡೆಯಬಹುದಾಗಿದೆ.

World Meditation Day: ಕೈವಾರದಲ್ಲಿ ಇಂದು ವಿಶ್ವಧ್ಯಾನ ದಿನಾಚರಣೆ

World Meditation Day: ಕೈವಾರದಲ್ಲಿ ಇಂದು ವಿಶ್ವಧ್ಯಾನ ದಿನಾಚರಣೆ

ಧ್ಯಾನವು ಜೀವನದಲ್ಲಿ ಶಾಂತಿ ಮತ್ತು ಸಂತೋಷವನ್ನು ತರುವ ಒಂದು ಶಕ್ತಿಯುತವಾದ ಸಾಧನ ವಾಗಿದೆ. ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರು ತಮ್ಮ ಬೋಧನೆಗಳಲ್ಲಿ ಧ್ಯಾನದ ಮಹತ್ವ ವನ್ನು ಸಾರಿದ್ದಾರೆ. ಈ ಕಾರಣದಿಂದ ಮಠದಲ್ಲಿ ಆತ್ಮಧ್ಯಾನ ಮಂದಿರವನ್ನು ನಿರ್ಮಿಸಲಾಗಿದೆ. ಪ್ರತಿನಿತ್ಯ ಧ್ಯಾನಾಸಕ್ತರು ಬಂದು ಧ್ಯಾನವನ್ನು ಮಾಡುತ್ತಾರೆ

ಭಾರತದ ಕಾಫಿಗೆ ಬೇಡಿಕೆ ಹೆಚ್ಚಿದ ಹಿನ್ನೆಲೆ ವಿದೇಶಗಳಿಂದ ಮುಕ್ತ ವ್ಯಾಪಾರ ಒಪ್ಪಂದ: ಜೋಶಿ

ಭಾರತದ ಕಾಫಿಗೆ ಹೆಚ್ಚಿದ ಜಾಗತಿಕ ಬೇಡಿಕೆ: ಪ್ರಲ್ಹಾದ್‌ ಜೋಶಿ

ಭಾರತ ಇಂದು 4 ಲಕ್ಷ ಟನ್‌ ಕಾಫಿಯನ್ನು ಉತ್ಪಾದಿಸುತ್ತಿದ್ದು, ಶೇ.70ರಷ್ಟು ಕಾಫಿ ರಫ್ತು ಮಾಡುತ್ತಿದೆ. ಶೇ.30ರಷ್ಟು ಮಾತ್ರ ಸ್ಥಳೀಯವಾಗಿ ಬಳಕೆಯಾಗುತ್ತಿದೆ. ಚಿಕ್ಕಮಗಳೂರು ಕಾಫಿ, ಅರೋಕೋ ಕಾಫಿ ಸೇರಿದಂತೆ ದೇಶದೆಲ್ಲೆಡೆ ಕಾಫಿ ಬೆಳೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

ದ್ವೇಷ ಭಾಷಣ ತಡೆ ಕಾಯ್ದೆ; ಜಿಹಾದಿ ಮನಸ್ಥಿತಿಯವರನ್ನು ಮೊದಲು ಜೈಲಿಗೆ ಹಾಕಬೇಕಾಗುತ್ತದೆ ಎಂದ ಜೋಶಿ

ಜಿಹಾದಿ ಮನಸ್ಥಿತಿ ಉಳ್ಳವರನ್ನು ಮೊದಲು ಜೈಲಿಗೆ ಹಾಕಬೇಕಾಗುತ್ತದೆ: ಜೋಶಿ

Pralhad Joshi: ಬಾಳೆಹೊನ್ನೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಬಹಳ ಜನ ಜಿಹಾದಿ ಮನಸ್ಥಿತಿಯಲ್ಲಿ ಭಾಷಣ ಮಾಡುವರು ಇದ್ದಾರೆ. ಸರ್ಕಾರ ಮೊದಲು ಇಂಥವರನ್ನು ಒಳಗೆ ಹಾಕಬೇಕಿದೆ. ರಾಜ್ಯದಲ್ಲಿ ಈ ಮಸೂದೆ ಅನುಷ್ಠಾನ ಆಗುವುದಿಲ್ಲ ಎಂದು ಹೇಳಿದ್ದಾರೆ.

1915ರಲ್ಲಿ ಬ್ರಿಟೀಷರ ಕಾಲದಲ್ಲೇ ನಿರ್ಮಾಣವಾಗಿರುವ ಜಿಲ್ಲಾ ಕೇಂದ್ರದ ರೈಲು ಮಾರ್ಗಕ್ಕೆ ಬೇಕಿದೆ ಕಾಯಕಲ್ಪ

ಮೂಲ ಸೌಕರ್ಯಗಳಿಗೆ ಬೇಕಿದೆ ಪ್ರಥಮಾದ್ಯತೆ

ಜಿಲ್ಲಾ ಕೇಂದ್ರದ ರೈಲು ಸಂಚಾರ ಆರಂಭವಾಗಿ ದಶಕಗಳೇ ಕಳೆದರೂ ನಿಲ್ದಾಣದಲ್ಲಿ ಮೂಲ ಸೌಕರ್ಯ ಗಳ ಕೊರತೆ ಎದ್ದು ಕಾಣುತ್ತಿದ್ದು ಸರಿಯಾದ ಪ್ಲಾಟ್ ಫಾರ್ಮ್, ಮಳೆ ಬಿಸಿಲಿಂದ ಆಶ್ರಯ ಪಡೆಯುವ ಛಾವಣಿ,ಶುದ್ಧ ಕುಡಿಯುವ ನೀರು, ಮತ್ತು ಜನಬಳಕೆಗೆ ಬರುವಂತಹ ಶೌಚಾಲಯಗಳಿಲ್ಲದೆ ಪ್ರಯಾ ಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

Bharath Ranganath: ಯುರೋಪಿಯನ್ ಶೃಂಗಸಭೆಯಲ್ಲಿ ಕನ್ನಡಿಗ ಭರತ್ ರಂಗನಾಥ್‌ಗೆ ಡಾಕ್ಟರೇಟ್‌ ಪದವಿ

ಕನ್ನಡಿಗ ಭರತ್ ರಂಗನಾಥ್‌ಗೆ ಡಾಕ್ಟರೇಟ್‌ ಪದವಿ

European Summit: ʼಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನದಲ್ಲಿ AI ಅಳವಡಿಕೆʼ ವಿಷಯದ ಕುರಿತು ಕ್ಯಾಲಿಫೋರ್ನಿಯಾ ಪಬ್ಲಿಕ್‌ ಯೂನಿವರ್ಸಸಿಟಿಯಲ್ಲಿ ಮಂಡಿಸಿದ ಪ್ರಬಂಧಕ್ಕಾಗಿ ಕನ್ನಡಿಗ ಭರತ್ ರಂಗನಾಥ್ ಅವರಿಗೆ ತಮಿಳುನಾಡಿನ ಪೆರಂಬಲೂರಿನಲ್ಲಿ ನಡೆದ ಯುರೋಪಿಯನ್ ಶೃಂಗಸಭೆಯಲ್ಲಿ ಡಾಕ್ಟರೇಟ್‌ ಪದವಿ ನೀಡಲಾಗಿದೆ.

ಸದ್ದಿಲ್ಲದೇ ಬೆಳ್ಳುಳ್ಳಿ ಬೆಲೆ ಏರಿಕೆ

ಸದ್ದಿಲ್ಲದೇ ಬೆಳ್ಳುಳ್ಳಿ ಬೆಲೆ ಏರಿಕೆ

ಈಗ ಸದ್ಯ ಈರುಳ್ಳಿ ಟೊಮೆಟೊಗಿಂತ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬಹುಬೇಡಿಕೆ ವಸ್ತುವಾಗಿದೆ. ಪ್ರತಿಯೊಬ್ಬರೂ ಬೆಳ್ಳುಳ್ಳಿ ಬೆಲೆ ಕೇಳಿ ಹೇಗೆ ಖರೀದಿ ಮಾಡುವುದು? ಎಂಬ ಜಿಜ್ಞಾಸೆಯಲ್ಲಿದ್ದಾರೆ. ದರ ಹೆಚ್ಚಾಗುತ್ತಿರುವುದರಿಂದ ಬೆಳ್ಳುಳ್ಳಿ ಬಳಕೆ ಕಡಿಮೆಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಅದರಲ್ಲಿ ಜನಸಾಮಾನ್ಯರು ಬೆಳ್ಳುಳ್ಳಿ ಬಳಸುವುದನ್ನು ಮರೆತು ಬಿಡುವಂತಾಗಿದೆ.

ಡಿ.25ರಿಂದ ದ್ವಿತೀಯ ವಿಶ್ವ ಆಯುರ್ವೇದ ಸಮ್ಮೇಳನ; ಬೈಕ್ ರ್‍ಯಾಲಿಗೆ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಚಾಲನೆ

ಡಿ.25ರಿಂದ ದ್ವಿತೀಯ ವಿಶ್ವ ಆಯುರ್ವೇದ ಸಮ್ಮೇಳನ

2nd Ayurveda World Summit: ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ಡಿಸೆಂಬರ್ 25ರಿಂದ 28ವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ದ್ವಿತೀಯ ಆಯುರ್ವೇದ ಸಮ್ಮೇಳನದ ಜನಜಾಗೃತಿಗಾಗಿ, ಬೆಂಗಳೂರಿನ ಗಿರಿನಗರಲ್ಲಿ ಬೃಹತ್ ಆಯುರ್ವೇದ ಬೈಕ್ ಜಾಥಾಗೆ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಚಾಲನೆ ನೀಡಿದರು.

Women's Kannada Rajyotsava: ಡಿ.23 ರಂದು ಮಹಿಳಾ ಕನ್ನಡ ರಾಜ್ಯೋತ್ಸವ

ಡಿ.23 ರಂದು ಮಹಿಳಾ ಕನ್ನಡ ರಾಜ್ಯೋತ್ಸವ

ಈ ಬಾರಿ ಮಹಿಳೆಯರೇ ಒಗ್ಗೂಡಿ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವ ವಿಶೇಷ ಪ್ರಯತ್ನ ಮಾಡು ತ್ತಿದ್ದೇವೆ. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಹಿಳೆಯ ರಿಂದ ಬೈಕ್ ರ‍್ಯಾಲಿ ನಡೆಯಲಿದೆ ಎಂದರು. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಕಾರ್ಯಕ್ರಮವನ್ನು ಉದ್ಘಾಟಿಸ ಲಿದ್ದಾರೆ. ಶಾಸಕ ಸುರೇಶಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.

Karnataka Weather: ತೀವ್ರ ಶೀತ ಗಾಳಿ; ನಾಳೆ ಬೀದರ್‌, ಕಲಬುರಗಿ ಸೇರಿ 7 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ

ತೀವ್ರ ಶೀತ ಗಾಳಿ ಹಿನ್ನೆಲೆ ನಾಳೆ ರಾಜ್ಯದ 7 ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌

Cold Wave Alert For Karnataka: ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಭಾನುವಾರ ತೀವ್ರ ಶೀತಗಾಳಿ ಸಾಧ್ಯತೆ ಮತ್ತು ಗದಗ, ಕೊಪ್ಪಳ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮೈಸೂರಿನಲ್ಲಿ ಘೋರ ಘಟನೆ; ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಬಾಲಕಿ ಸಾವು

ಮೈಸೂರಿನಲ್ಲಿ ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಬಾಲಕಿ ಸಾವು

Mysuru News: ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಜಯಗಿರಿ ಹಾಡಿಯಲ್ಲಿ ಘಟನೆ ನಡೆದಿದೆ. ತಾಯಿ ಸ್ನಾನ ಮಾಡಿಸಲು ಪಾತ್ರೆಯಲ್ಲಿ ಬಿಸಿ ನೀರಿಟ್ಟು, ತಣ್ಣೀರು ತರಲು ಹೋಗಿದ್ದಾರೆ. ಈ ವೇಳೆ ಮಗು ಬಿಸಿ ನೀರಿನ ಪಾತ್ರೆಗೆ ಬಿದ್ದು ಮೃತಪಟ್ಟಿದೆ.

Bagalkot News: ಬುದ್ಧಿಮಾಂದ್ಯ ಬಾಲಕನ ಕಣ್ಣಿಗೆ ಖಾರದ ಪುಡಿ ಎರಚಿ, ಪೈಪ್‌ನಿಂದ ಹೊಡೆದ ಶಿಕ್ಷಕ ದಂಪತಿ!

ಬುದ್ಧಿಮಾಂದ್ಯ ಬಾಲಕನ ಕಣ್ಣಿಗೆ ಖಾರದ ಪುಡಿ ಎರಚಿ ಹಲ್ಲೆಗೈದ ಶಿಕ್ಷಕ!

ಬಾಗಲಕೋಟೆಯಲ್ಲಿ ವಸತಿಶಾಲೆಯ ಮಾಲೀಕ ಹಾಗೂ ಶಿಕ್ಷಕ ಅಕ್ಷಯ್ ಎಂಬಾತ ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಬಾಲಕನನ್ನು ಪ್ಲಾಸ್ಟಿಕ್ ಪೈಪ್‌ನಿಂದ ರಕ್ತ ಹೆಪ್ಪುಗಟ್ಟುವಂತೆ ಥಳಿಸಲಾಗಿದೆ, ಆ ಸಂದರ್ಭದಲ್ಲಿ ಬಾಲಕನ ಕಣ್ಣಿಗೆ ಖಾರದಪುಡಿ ಎರಚಿ, ಚಿತ್ರಹಿಂಸೆ ನೀಡಲಾಗಿದೆ.

ದ್ವೇಷ ಭಾಷಣ ತಡೆ ಕಾಯ್ದೆಯಡಿ ಪ್ರಿಯಾಂಕ್ ಖರ್ಗೆ ಮೊದಲ ಅಪರಾಧಿ; ಕ್ಷಮೆಗೆ ಗೋವಿಂದ ಕಾರಜೋಳ ಆಗ್ರಹ

ಪ್ರಿಯಾಂಕ್ ಖರ್ಗೆ ಕೂಡಲೇ ಕ್ಷಮೆ ಕೇಳಲಿ: ಗೋವಿಂದ ಕಾರಜೋಳ ಆಗ್ರಹ

Govind Karjol: ಆಡಳಿತ- ವಿಪಕ್ಷದ ನಡುವೆ ಟೀಕೆ -ಟಿಪ್ಪಣಿ ನಡೆಯುವುದು ಪ್ರಜಾಪ್ರಭುತ್ವದ ಸೌಂದರ್ಯ. ಟೀಕೆ ಟಿಪ್ಪಣಿಗಳು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಇರಬೇಕು. ಜನರ ಕಲ್ಯಾಣಕ್ಕಾಗಿ ಇರಬೇಕು. ವೈಯಕ್ತಿಕ ದ್ವೇಷದಿಂದ ಹಿರಿಯರನ್ನು ಅಪಮಾನ ಮಾಡುವ ಶಬ್ದ ಬಳಸುವುದು ಯೋಗ್ಯವಲ್ಲ, ತರವಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.

Loading...