ಮುಷ್ಕಿ ಸಮೀಪದ ಶಿರಗಣಿ ಗ್ರಾಮದ ರಸ್ತೆಯ ಕಣ್ಣೀರ ಕಥೆಯಿದು
ಸ್ವಾತಂತ್ರ್ಯ ಪಡೆದು 78 ವರ್ಷದ ಹೊಸ್ತಿಲಲ್ಲಿದ್ದರೂ, ಗ್ರಾಮಾಂತರ ಭಾಗದ ಈ ಕುಗ್ರಾಮ ಮೂಲಭೂತ ಅವಶ್ಯಕತೆಗಳಿಂದ ವಂಚಿತಗೊಂಡಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವ ವಿಚಾರವಾಗಿದೆ. ಸುಮಾರು ಏಳರಿಂದ ಎಂಟು ಕಿ.ಮೀಗಳಷ್ಟು ದೂರದಿಂದ ತಮ್ಮ ಅವಶ್ಯಕತೆಗಾಗಿ ಜನರು ನಡೆದು ಸಾಗುವ ಪರಿಸ್ಥಿತಿ ಇಂದಿಗೂ ಇದೆಯೆಂದರೂ ಅದು ಆಡಳಿತ ನಡೆಸುವ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.