ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Pahalgam Terror Attack: ಪಹಲ್ಗಾಮ್ ಭಯೋತ್ಪಾದಕರ ದಾಳಿಗೆ ಸದ್ಗುರು ತೀವ್ರ ಖಂಡನೆ

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸದ್ಗುರು ತೀವ್ರ ಖಂಡನೆ

Pahalgam Terror Attack: ಭಯೋತ್ಪಾದನೆಯ ಉದ್ದೇಶ ಯುದ್ಧ ಅಲ್ಲ, ಸಮಾಜದಲ್ಲಿ ಭಯವನ್ನು ಉಂಟುಮಾಡಿ ಅದರ ಶಕ್ತಿಗುಂದಿಸುವುದು. ಆತಂಕವನ್ನು ಹರಡಿ, ಸಮಾಜವನ್ನು ಒಡೆದು, ದೇಶದ ಆರ್ಥಿಕ ಪ್ರಗತಿಯನ್ನು ತಡೆದು ಎಲ್ಲಾ ಹಂತದಲ್ಲೂ ನಿರಂಕುಶತೆಯನ್ನು ನಿರ್ಮಿಸುವುದು. ಈ ದೇಶದ ಸ್ವಾಯತ್ತತೆಯನ್ನು ಕಾಪಾಡಿ ಅದನ್ನು ಪೋಷಿಸಬೇಕೆಂದರೆ, ಇಂತಹ ವಿಷಯಗಳನ್ನು ಅತ್ಯಂತ ಕಠಿಣವಾದ ಕ್ರಮಗಳ ಮೂಲಕ ನಿಭಾಯಿಸಿ ದೀರ್ಘಕಾಲಿಕವಾದ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಈಶ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ತಿಳಿಸಿದ್ದಾರೆ.

Karnataka Rain: ಏಪ್ರಿಲ್‌ 26ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ!

ಮುಂದಿನ ಮೂರು ದಿನ ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರಿ ಮಳೆ!

Karnataka Rain: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಮುಖ್ಯವಾಗಿ ಸ್ಪಷ್ಟ ಆಕಾಶವಿರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 35° C ಮತ್ತು 24° C ಇರಬಹುದು ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Pahalgam Terror Attack: ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ

Pahalgam Terror Attack: ಶಿವಮೊಗ್ಗದ ಮಂಜುನಾಥ್‌ ರಾವ್‌ ಹಾಗೂ ಹಾವೇರಿ ಮೂಲದ ಬೆಂಗಳೂರು ನಿವಾಸಿ ಭರತ್‌ ಭೂಷಣ್‌ ಕುಟುಂಬಕ್ಕೆ ಪರಿಹಾರ ಘೋಷಿಸಲಾಗಿದೆ. ಇನ್ನು ಕಾಶ್ಮೀರಕ್ಕೆ ತೆರಳಿರುವ 40 ಕ್ಕೂ ಅಧಿಕ ಕನ್ನಡಿಗರನ್ನು ವಿಶೇಷ ವಿಮಾನ ವ್ಯವಸ್ಥೆ ಮಾಡಿ ಸುರಕ್ಷಿತವಾಗಿ ಕರೆತರಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನೂ ಕಾಶ್ಮೀರಕ್ಕೆ ಕಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

MEIL: 12,800 ಕೋಟಿ ರೂ. ಮೌಲ್ಯದ ಪರಮಾಣು ವಿದ್ಯುತ್ ಯೋಜನೆ; ಎನ್‌ಪಿಸಿಐಎಲ್‌ನಿಂದ ಎಂ.ಇ.ಐ.ಎಲ್‌ಗೆ ಖರೀದಿ ಆದೇಶ ಹಸ್ತಾಂತರ

ಎನ್‌ಪಿಸಿಐಎಲ್‌ನಿಂದ ಎಂ.ಇ.ಐ.ಎಲ್‌ಗೆ ಖರೀದಿ ಆದೇಶ ಹಸ್ತಾಂತರ

MEIL: ತಲಾ 700 ಮೆಗಾ ವ್ಯಾಟ್ ಪರಮಾಣು ವಿದ್ಯುತ್ ಉತ್ಪಾದನೆಯ ಕೈಗಾ ಸ್ಥಾವರದ 5 ಮತ್ತು 6ನೇ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) ನಿಂದ ದೇಶದ ಪ್ರಮುಖ ಮೂಲ ಸೌಕರ್ಯ ಸಂಸ್ಥೆ ಎಂಇಐಎಲ್ (MEIL) ಗೆ ₹12,800 ಕೋಟಿ ಮೊತ್ತದ ಇಪಿಸಿ ಒಪ್ಪಂದದ ಖರೀದಿ ಆದೇಶವನ್ನು ಹಸ್ತಾಂತರಿಸಿದೆ. ಈ ಕುರಿತ ವಿವರ ಇಲ್ಲಿದೆ.

Yuddhakaanda Movie: ʼಯುದ್ಧಕಾಂಡʼ ಯಶಸ್ವಿ ಪ್ರದರ್ಶನ: ಚಿತ್ರತಂಡದಿಂದ ಸಕ್ಸಸ್‌ ಮೀಟ್‌

ʼಯುದ್ಧಕಾಂಡʼ ಯಶಸ್ವಿ ಪ್ರದರ್ಶನ: ಚಿತ್ರತಂಡದಿಂದ ಸಕ್ಸಸ್‌ ಮೀಟ್‌

Yuddhakaanda Movie: ಅಜೇಯ್ ರಾವ್ ನಿರ್ಮಿಸಿ, ನಾಯಕನಾಗಿ ನಟಿಸಿರುವ ʼಯುದ್ಧಕಾಂಡʼ ಚಿತ್ರ ಕಳೆದ ಏಪ್ರಿಲ್ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈ ಸಂತಸವನ್ನು ಅಜೇಯ್ ರಾವ್ ಹಾಗೂ ಚಿತ್ರತಂಡದವರು ಸಕ್ಸಸ್ ಮೀಟ್‌ನಲ್ಲಿ ಹಂಚಿಕೊಂಡರು. ಈ ಕುರಿತ ವಿವರ ಇಲ್ಲಿದೆ.

Birla Opus Paints: ಬಿರ್ಲಾ ಓಪಸ್ ಪೇಂಟ್ಸ್ ಬೆಂಗಳೂರಿನಲ್ಲಿ ಮೊದಲ ಪೇಂಟ್ಸ್ ಸ್ಟುಡಿಯೋ!

ಬೆಂಗಳೂರಿನಲ್ಲಿ ಬಿರ್ಲಾ ಓಪಸ್ ಪೇಂಟ್ಸ್ ಸ್ಟುಡಿಯೊ!

ಆದಿತ್ಯ ಬಿರ್ಲಾ ಗ್ರೂಪ್ ಅಡಿಯಲ್ಲಿ ಗ್ರಾಸಿಂ ಇಂಡಸ್ಟ್ರೀಸ್ ಭಾಗವಾಗಿರುವ ಬಿರ್ಲಾ ಓಪಸ್ ಪೇಂಟ್ಸ್ ಬೆಂಗಳೂರಿನಲ್ಲಿ ತನ್ನ ಹೊಸ ಬಿರ್ಲಾ ಓಪಸ್ ಪೇಂಟ್ ಸ್ಟುಡಿಯೊ ಪ್ರಾರಂಭಿಸಿದೆ. ಬಿರ್ಲಾ ಓಪಸ್ ಪೇಂಟ್ಸ್ ಬೆಂಗಳೂರು ಸ್ಟುಡಿಯೊವನ್ನು ಸಾಮಾನ್ಯ ರೀಟೇಲ್ ದಯಾಕವಾಗಿ ಪರಿವರ್ತಿಸಲಾಗಿದೆ. ಪೇಂಟ್ ಸ್ಟುಡಿಯೊಗಳನ್ನು ಸೃಜನಶೀಲತೆಯ ಕೇಂದ್ರಗಳಾಗಿ ವಿನ್ಯಾಸಗೊಳಿಸಿದ್ದು ಅವು ಸಾಂಪ್ರದಾಯಿಕ ಪೇಂಟ್ ಮಳಿಗೆಗಳಾಗಿ ರೂಪುಗೊಂಡಿದೆ.

Chikkaballapur shootout: ಚಿಕ್ಕಬಳ್ಳಾಪುರದಲ್ಲಿ ರಸ್ತೆ ನಿರ್ಮಾಣ ವಿರೋಧಿಸಿದ ವ್ಯಕ್ತಿ ಮೇಲೆ ಫೈರಿಂಗ್‌; ಮಾಜಿ ಎಂಎಲ್‌ಸಿ ಸಂಬಂಧಿ ಅರೆಸ್ಟ್‌

ರಸ್ತೆ ನಿರ್ಮಾಣ ವಿರೋಧಿಸಿದ ವ್ಯಕ್ತಿ ಮೇಲೆ ಗುಂಡಿನ ದಾಳಿ

Chikkaballapur shootout: ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಕನಗಾನಕೊಪ್ಪದಲ್ಲಿ ಬುಧವಾರ ಘಟನೆ ನಡೆದಿದೆ. ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ರಸ್ತೆ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದ್ದರಿಂದ ರೈತ ಚಿಕನ್‌ ರವಿ ಮೇಲೆ ಸಕಲೇಶಕುಮಾರ್‌ ಎಂಬಾತ ಫೈರಿಂಗ್‌ ಮಾಡಿದ್ದಾರೆ.

Pahalgam Terror Attack: ಕಾಶ್ಮೀರ ಎಂದಿಗೂ ನಮ್ಮದೇ; ಉಗ್ರರ ದಾಳಿಗೆ ನಟ ಯಶ್‌, ಶಿವಣ್ಣ, ಸುದೀಪ್‌ ಸೇರಿ ಪ್ರಮುಖ ನಟ, ನಟಿಯರ ಖಂಡನೆ

ಉಗ್ರರ ದಾಳಿಗೆ ನಟ ಯಶ್‌, ಸುದೀಪ್‌ ಸೇರಿ ಪ್ರಮುಖ ನಟ, ನಟಿಯರ ಖಂಡನೆ

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26ಕ್ಕೂ ಹೆಚ್ಚು ಪ್ರವಾಸಿಗರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಈ ಘಟನೆಯನ್ನು ಸ್ಯಾಂಡಲ್‌ವುಡ್‌ ನಟರಾದ ಯಶ್‌, ಸುದೀಪ್‌, ಶಿವಣ್ಣ, ಧ್ರುವ ಸರ್ಜಾ, ನಟಿ ರಾಧಿಕಾ ಪಂಡಿತ್‌ ಸೇರಿ ಹಲವರು ಖಂಡಿಸಿದ್ದು, ದುಷ್ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಕಾಶ್ಮೀರ ಪ್ರವಾಸಕ್ಕೆ ತೆರಳಿದವರ ನೆರವಿಗಾಗಿ ಕಲಬುರಗಿ, ಯಾದಗಿರಿ ಜಿಲ್ಲಾಡಳಿತದಿಂದ ಸಹಾಯವಾಣಿ

ಪ್ರವಾಸಿಗರ ನೆರವಿಗಾಗಿ ಕಲಬುರಗಿ, ಯಾದಗಿರಿ ಜಿಲ್ಲಾಡಳಿತದಿಂದ ಸಹಾಯವಾಣಿ

Pahalgam Terror Attack: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ದಾಳಿಯಲ್ಲಿ ಕೆಲವು ಪ್ರವಾಸಿಗರು ಮೃತರಾಗಿ ಹಾಗೂ ಹಲವರು ಗಾಯಗೊಂಡಿದ್ದಾರೆ. ಹೀಗಾಗಿ ಜಿಲ್ಲೆಯಿಂದ ಜಮ್ಮು ಕಾಶ್ಮೀರ ಪ್ರವಾಸಕ್ಕೆ ತೆರಳಿ ಸಂಕಷ್ಟದಲ್ಲಿರುವವರ ಮಾಹಿತಿ ತಿಳಿಸುವಂತೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲಾಡಳಿತ ಮನವಿ ಮಾಡಿದೆ.

Pahalgam Terror Attack: ಕಾಶ್ಮೀರದಿಂದ ಕನ್ನಡಿಗರನ್ನು ವಿಶೇಷ ವಿಮಾನದಲ್ಲಿ ಕರೆತರಲು ರಾಜ್ಯ ಸರ್ಕಾರ ವ್ಯವಸ್ಥೆ

ಕಾಶ್ಮೀರದಿಂದ ಕನ್ನಡಿಗರನ್ನು ಸುರಕ್ಷಿತವಾಗಿ ಸಕಲ ವ್ಯವಸ್ಥೆ

Pahalgam Terror Attack: ಕರ್ನಾಟಕದ ಪ್ರವಾಸಿಗರಲ್ಲಿ ಮಂಜುನಾಥ್ ಹಾಗೂ ಭರತ್ ಭೂಷಣ್ ಎಂಬುವರು ಮೃತರಾಗಿರುವ ಬಗ್ಗೆ ಮಾಹಿತಿ ಇದೆ. ಕನ್ನಡಿಗರ ರಕ್ಷಣೆ ಹಾಗೂ ಇನ್ನಿತರ ವ್ಯವಸ್ಥೆಗಳಿಗಾಗಿ ಅಧಿಕಾರಿಗಳ ತಂಡವನ್ನು ಕಾಶ್ಮೀರಕ್ಕೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Pahalgam Terror Attack: ಪ್ರವಾಸಿಗರ ಮೇಲೆ ನಡೆಸಿರುವ ದಾಳಿ ಅತ್ಯಂತ ಹೇಯ, ಹೇಡಿತನದ ಕೃತ್ಯ: ಎಂ‌.ಬಿ.ಪಾಟೀಲ್‌ ಆಕ್ರೋಶ

ಪಹಲ್ಗಾಮ್‌ ದಾಳಿಕೋರರನ್ನು ಸದೆಬಡಿಯಬೇಕು: ಎಂ.ಬಿ. ಪಾಟೀಲ್‌ ಆಕ್ರೋಶ

Pahalgam Terror Attack: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ನಡೆಸಿರುವ ದಾಳಿ ಅತ್ಯಂತ ಹೇಯ ಮತ್ತು ಹೇಡಿತನದ ಕೃತ್ಯವಾಗಿದೆ. ಇದಕ್ಕೆ ಕಾರಣರಾದ ಉಗ್ರಗಾಮಿಗಳನ್ನು ಯಾವ ಮುಲಾಜೂ ಇಲ್ಲದೆ ಸದೆಬಡಿಯುವ ಕೆಲಸ ಆಗಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌.ಬಿ. ಪಾಟೀಲ್‌ ತಿಳಿಸಿದ್ದಾರೆ.

Pahalgam Terror Attack: ಕೊಪ್ಪಳದ 19 ಮಂದಿ ಶ್ರೀನಗರದಲ್ಲಿ ಸೇಫ್; ಕೂದಲೆಳೆ ಅಂತರದಲ್ಲಿ ಪಾರಾದ ಯಾದಗಿರಿ ಕುಟುಂಬ!

ಕೊಪ್ಪಳದ 19 ಮಂದಿ ಶ್ರೀನಗರದಲ್ಲಿ ಸೇಫ್!

Pahalgam Terror Attack: ಕರ್ನಾಟಕ ರಾಜ್ಯದಿಂದ ಕೂಡ ಹಲವು ಪ್ರವಾಸಿಗರು ಕಾಶ್ಮೀರಕ್ಕೆ ತೆರಳಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕದಲ್ಲಿದ್ದಾರೆ. ಇದೀಗ ಕೊಪ್ಪಳದ 4 ಕುಟುಂಬಗಳ 19 ಸದಸ್ಯರು ಹಾಗೂ ಯಾದಗಿರಿಯ ಕುಟುಂಬ ಸುರಕ್ಷಿತವಾಗಿದೆ ಎಂದು ತಿಳಿದುಬಂದಿದೆ.

Pahalgam Terror Attack: ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಸಾಂತ್ವನ

ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಸಿಎಂ ಸಾಂತ್ವನ

Pahalgam Terror Attack: ಕಾಶ್ಮೀರ ಪ್ರವಾಸಕ್ಕೆಂದು ತೆರಳಿರುವ 40ಕ್ಕೂ ಅಧಿಕ ಕನ್ನಡಿಗರು ಭಯೋತ್ಪಾದಕ ದಾಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಅವರೆಲ್ಲರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯಾರೊಬ್ಬರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Om Prakash Murder Case: ಕತ್ತು ಸೀಳಿ ಕೊಲ್ಲುವುದು ಹೇಗೆ ಎಂದು ಇಂಟರ್‌ನೆಟ್‌ನಲ್ಲಿ ಸರ್ಚ್‌ ಮಾಡಿದ್ದ ಓಂ ಪ್ರಕಾಶ್‌ ಪತ್ನಿ

ಕತ್ತು ಸೀಳುವ ರೀತಿ ಇಂಟರ್‌ನೆಟ್‌ ಸರ್ಚ್‌ ಮಾಡಿದ್ದ ಓಂ ಪ್ರಕಾಶ್‌ ಪತ್ನಿ

ಪಲ್ಲವಿಯ ಫೋನ್ ಅನ್ನು ಪರಿಶೀಲಿಸಿದಾಗ, ಕುತ್ತಿಗೆಯ ಬಳಿಯ ರಕ್ತನಾಳಗಳನ್ನು ಯಾವ ರೀತಿ ಸೀಳಿದರೆ ವ್ಯಕ್ತಿ ಸಾಯಬಹುದು ಎಂಬುದರ ಕುರಿತು ಇಂಟರ್ನೆಟ್‌ನಲ್ಲಿ ಈಕೆ ಹುಡುಕಾಡಿದ್ದು ಕಂಡುಬಂದಿತ್ತು. ಐದು ದಿನಗಳಲ್ಲಿ ಈಕೆ ಇದೇ ರೀತಿಯ ಪ್ರಶ್ನೆಯನ್ನು ಗೂಗಲ್‌ನಲ್ಲಿ ಕೇಳಿದ್ದನ್ನು ಸರ್ಚ್‌ ಹಿಸ್ಟರಿ ತೋರಿಸಿದೆಯಂತೆ.

Tumkur (Chikkanayakahalli) News: ಮದ್ಯ ಅಕ್ರಮ ಮಾರಾಟಕ್ಕೆ ಅಬಕಾರಿ ಅಧಿಕಾರಿಗಳೇ ಸಾಥ್: ಮಹಿಳೆಯರ ಆರೋಪ

ಮದ್ಯ ಅಕ್ರಮ ಮಾರಾಟಕ್ಕೆ ಅಬಕಾರಿ ಅಧಿಕಾರಿಗಳೇ ಸಾಥ್

ಬಾರ್, ವೈನ್ ಶಾಪ್‌ಗಳ ಮುಂದೆ ಬೆಳಗಿನಜಾವ 5 ಗಂಟೆಯಿಂದಲೇ ಮದ್ಯ ಮಾರಾಟ ನಡೆಯುತ್ತಿದೆ. ಪುರಸಭೆಯ ವಿವಿಧ ಬಡಾವಣೆ ಗಳ ಕಿರಾಣಿ, ಟೀ ಶಾಪ್‌ಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಬಹುತೇಕ ಕೂಲಿ ಕಾರ್ಮಿಕರು ತಮ್ಮ ಒಂದು ದಿನದ ಕೂಲಿ ಹಣದ ಅರ್ಧದಷ್ಟನ್ನು ಮದ್ಯ ಸೇವನೆಗೆ ವಿನಿಯೋಗಿ ಸುತ್ತಿದ್ದಾರೆ. ಹಲವು ಕುಟುಂಬಗಳು ಬೀದಿಗೆ ಬಂದಿವೆ. ಕೌಟಂಬಿಕ ಹಾಗು ಸಾಮಾಜಿಕ ಕಲಹಗಳು ಹೆಚ್ಚಾಗಿ ಅಶಾಂತಿ ಮೂಡುತ್ತಿದೆ

Gold Price Today: ಚಿನ್ನದ ದರದಲ್ಲಿ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on 23rd April 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 275ರೂ. ಇಳಿಕೆ ಕಂಡು ಬಂದಿದ್ದು, 9,015ರೂ. ಇದ್ದು, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 300ರೂ. ಇಳಿಕೆ ಆಗಿ ಪ್ರಸ್ತುತ 9,835 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 72,120 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 90,150 ರೂ. ಮತ್ತು 100 ಗ್ರಾಂಗೆ 9,01,500 ರೂ. ನೀಡಬೇಕಾಗುತ್ತದೆ.

Chikkaballapur News: ಬಾಗೇಪಲ್ಲಿ:ಕೃಷಿ ಇಲಾಖೆಯಲ್ಲಿ ಲೋಕಾಯುಕ್ತ ಪೊಲೀಸರಿಂದ ಕಡತಗಳ ತನಿಖೆ

ಕೃಷಿ ಇಲಾಖೆಯಲ್ಲಿ ಲೋಕಾಯುಕ್ತ ಪೊಲೀಸರಿಂದ ಕಡತಗಳ ತನಿಖೆ

ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ಅಟಲ್ ಫಸಲ್ ಭೀಮಾ ಯೋಜನೆ, ಕೃಷಿ ಯಂತ್ರೋಪಕರಗಳ, ಕೃಷಿ ಹೊಂಡ, ಅವಾರ್ಡ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳ ಹೆಸರಿ ನಲ್ಲಿ ಖಾಸಗಿ ವ್ಯಕ್ತಿಗಳು ಪಡೆದಿರುವುದು, ಕಾಮಗಾರಿಗಳು ಆಗದೇ, ಕೆಲಸಗಳು ಮಾಡದೇ ಕೋಟ್ಯಾಂತರ ರೂಪಾಯಿಗಳು ಅವ್ಯವಹಾರ ಆಗಿರುವುದು ತಾಲ್ಲೂಕಿನ ಕೆಲ ರೈತರು ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು

Chikkaballapur News: ಕನ್ನಡ ಭವನ ಲೋಕಾರ್ಪಣೆ, ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಒಲಿದು ಬರದ ಶುಭ ಮುಹೂರ್ತ

ಮೊದಲ ಬಾರಿ ಇಲಾಖೆ ಸಚಿವರ ನಿರೀಕ್ಷೆಯಲ್ಲಿ ಮುಂದೂಡಿಕೆ

ಬರೋಬ್ಬರಿ 13 ವರ್ಷಗಳ ಹಿಂದೆ ಡಾ.ಕೆ.ಸುಧಾಕರ್ ಶಾಸಕರಾಗಿ ವೀರಪ್ಪ ಮೊಯಿಲಿ ಕೇಂದ್ರ ಮಂತ್ರಿಗಳಾಗಿದ್ದ ಅವಧಿಯಲ್ಲಿ ಪ್ರಾರಂಭವಾದ ರಂಗಮಂದಿರದ ಕಾಮಗಾರಿ ಅಂದು ಕೊಂಡಂತೆ ಆಗಿದಿದ್ದರೆ ಜನಬಳಕೆಗೆ ಬಂದು ದಶಕವೇ ಕಳೆಯುತ್ತಿತ್ತು.ಆದರೆ ರಾಜಕೀಯ ಇಚ್ಛಾಶಕ್ತಿ, ಅನುದಾನದ ಕೊರತೆ ಜನಪ್ರತಿನಿಧಿಗಳ ಪ್ರತಿಷ್ಟೆಗಳ ನಡುವೆ ಸದ್ಯ ಕಾಮಗಾರಿ ಪೂರ್ಣ ಗೊಂಡು ಲೋಕಾರ್ಪಣೆಗೆ ಸಜ್ಜಾಗುವ ವೇಳೆಗೆ ಭರ್ತಿ 12 ವರ್ಷಗಳು ಕಳೆದಿವೆ ಎಂದರೆ ಆಶ್ಚರ್ಯ ವಾಗುತ್ತದೆ

Pahalgam Terror Attack: ಉಗ್ರರ ಅಟ್ಟಹಾಸಕ್ಕೆ 3ನೇ ಕನ್ನಡಿಗ ಬಲಿ, ಬೆಂಗಳೂರಿನ ಮಧುಸೂದನ್‌ ರಾವ್‌ ಸಾವು

ಉಗ್ರರ ಅಟ್ಟಹಾಸಕ್ಕೆ 3ನೇ ಕನ್ನಡಿಗ ಬಲಿ, ಬೆಂಗಳೂರಿನ ಮಧುಸೂದನ್‌ ರಾವ್‌ ಸಾವು

ಇದರೊಂದಿಗೆ ದಾಳಿಯಲ್ಲಿ ಕರ್ನಾಟಕದ ಮೂವರು ಮೃತಪಟ್ಟಂತಾಗಿದೆ. ದಾಳಿಯಲ್ಲಿ ಶಿವಮೊಗ್ಗ ಮೂಲದ ಮಂಜುನಾಥ್ ರಾವ್​, ಬೆಂಗಳೂರಿನ ಭರತ್​ ಭೂಷಣ್ ಮೃತಪಟ್ಟಿದ್ದರು. ಮೃತಪಟ್ಟ ಕನ್ನಡಿಗರ ಶವಗಳನ್ನು ಬೆಂಗಳೂರಿಗೆ ತರಲು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸ್ಥಳದಲ್ಲಿದ್ದು ವ್ಯವಸ್ಥೆ ಮಾಡುತ್ತಿದ್ದಾರೆ.

CM Siddaramaiah: ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ಗೆ ಕೊಲೆ ಬೆದರಿಕೆ ಇಮೇಲ್‌

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ಗೆ ಕೊಲೆ ಬೆದರಿಕೆ ಇಮೇಲ್‌

“ಇಬ್ಬರನ್ನೂ ಕೊಲೆ ಮಾಡಿ ಫ್ರಿಜ್ ಮತ್ತು ಟ್ರ್ಯಾಲಿ ಬ್ಯಾಗ್‌ಗೆ ತುಂಬುವುದಾಗಿ" ಇ-ಮೇಲ್ ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಇ-ಮೇಲ್ ಅನ್ನು ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವರು, ನಗರ ಪೊಲೀಸ್ ಕಮಿಷನರ್‌ಗೂ ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೊಲೆ ಬೆದರಿಕೆ ಬಗ್ಗೆ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ.

Pahalgam Terror Attcak: ಶ್ರೀನಗರ ತಲುಪಿದ ಸಂತೋಷ್‌ ಲಾಡ್‌, ಕಾಶ್ಮೀರ ಪ್ರವಾಸಿಗರಿಗಾಗಿ ಸಹಾಯವಾಣಿ

ಶ್ರೀನಗರ ತಲುಪಿದ ಸಂತೋಷ್‌ ಲಾಡ್‌, ಕಾಶ್ಮೀರ ಪ್ರವಾಸಿಗರಿಗಾಗಿ ಸಹಾಯವಾಣಿ

ಕರ್ನಾಟಕದ ಇಬ್ಬರು ಪಹಲ್ಗಾಮ್‌ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದು, ಮೃತರಾದ ಶಿವಮೊಗ್ಗದ ಮಂಜುನಾಥ್‌ ಹಾಗೂ ಬೆಂಗಳೂರಿನ ಭರತ್‌ ಭೂಷಣ್‌ ಅವರ ಶವಗಳನ್ನು ಬೆಂಗಳೂರಿಗೆ ಕಳಿಸುವ ಪ್ರಕ್ರಿಯೆಯಲ್ಲಿ ಸಂತೋಷ್‌ ಲಾಡ್‌ ತೊಡಗಿಕೊಂಡರು. ಕಾಶ್ಮೀರದಲ್ಲಿರುವ ಕನ್ನಡಿಗರಿಗೆ ಸಹಾಯವಾಣಿ ತೆರೆಯಲಾಗಿದೆ.

Pahalgam Terror Attack: ಹಿಂದೂ ಎಂದು ಖಚಿತಪಡಿಸಿಕೊಂಡು ಗುಂಡಿಕ್ಕಿದರು: ಬೆಂಗಳೂರು ನಿವಾಸಿಯೂ ಸೇರಿ ಇಬ್ಬರು ಕನ್ನಡಿಗರ ಬಲಿ

ಹಿಂದೂ ಎಂದು ಗುಂಡಿಕ್ಕಿದರು: ಬೆಂಗಳೂರು ನಿವಾಸಿಯೂ ಸೇರಿ 2 ಕನ್ನಡಿಗರ ಬಲಿ

ಮೃತ ಭರತ್‌ ಭೂಷಣ್‌ ಹಾವೇರಿ ಜಿಲ್ಲೆ ರಾಣೇಬೆನ್ನೂರು ಮೂಲದವರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭರತ್‌ ಭೂಷಣ್‌ ಬೆಂಗಳೂರಿನ ಮತ್ತಿಕೆರೆ ಜೆ.ಪಿ.ಪಾರ್ಕ್‌ ಬಳಿ ಕುಟುಂಬದೊಂದಿಗೆ ನೆಲೆಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಪತ್ನಿ ಸುಜಾತಾ ಮತ್ತು ಮೂರು ವರ್ಷದ ಮಗು ಜತೆಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದರು.

Pahalgam Terror Attack: ಗುಂಡು ಹಾರಿಸುವ ಮುನ್ನ ಮೋದಿಯನ್ನು ನಿಂದಿಸಿ, ಕುರಾನ್‌ ಶ್ಲೋಕ ಪಠಿಸಲು ಹೇಳಿದ ಉಗ್ರರು, ಸಾವಿನ ಸಂಖ್ಯೆ 28ಕ್ಕೆ

ಗುಂಡಿಕ್ಕುವ ಮುನ್ನ ಮೋದಿಗೆ ಉಗ್ರರ ನಿಂದನೆ, ಕುರಾನ್‌ ಶ್ಲೋಕ ಹೇಳಲು ಆಗ್ರಹ

ಮೊದಲು ಪಾತಕಿಗಳು ಅವರನ್ನು ಟೆಂಟ್‌ನಿಂದ ಆಚೆ ಕರೆದರು. ನಂತರ, ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿದ್ದಕ್ಕಾಗಿ ಅವರನ್ನು ದೂಷಿಸಿದರು. ಮೋದಿಯವರನ್ನು ಅವಾಚ್ಯ ಪದಗಳಿಂದ ನಿಂದಿಸಿದರು. ನಂತರ, ʼಕಾಶ್ಮೀರಿ ಉಗ್ರಗಾಮಿಗಳು ಮುಗ್ಧ ಜನರು, ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುತ್ತಾರೆ ಎಂಬುದನ್ನು ತಾವು ನಿರಾಕರಿಸುತ್ತೇವೆʼ ಎಂದು ಹೇಳಿದರು.

ಡಾ ಗಿರೀಶ್, ಮಂಜುನಾಥ ಸಿ .ಆರ್ ರಿಗೆ ಡಾ.ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ

ಡಾ ಗಿರೀಶ್, ಮಂಜುನಾಥ ಸಿ .ಆರ್ ರಿಗೆ ಡಾ.ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ

ಇಎಸ್ಐ ಆಸ್ಪತ್ರೆಯ ಚರ್ಮರೋಗ ವಿಭಾಗದ ಮುಖ್ಯಸ್ಥ ಡಾ ಗಿರೀಶ್ ಹಾಗೂ ಮಂಜುನಾಥ ಸಿ .ಆರ್, ಅವರಿಗೆ ಡಾ ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ನೀಡಿ ಮಾತನಾಡಿದ ಡಾ. ಮಲಕಪ್ಪ ಅಲಿಯಾಸ್ ಮಹೇಶ್ ಅವರು ನಾಗರಿ ಲಿಪಿ ಸಂಸ್ಥೆಯ ಬಗ್ಗೆ ಪ್ರಶಸ್ತಿಯ ಪ್ರಾಮುಖ್ಯತೆ ತಿಳಿಸಿದರು