ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
KSRTC Strike: ಆಗಸ್ಟ್‌ 5ರಿಂದ ಸಾರಿಗೆ ನೌಕರರ ಮುಷ್ಕರ, ಮಾತುಕತೆಗೆ ಕರೆದ ರಾಜ್ಯ ಸರಕಾರ

ಆಗಸ್ಟ್‌ 5ರಿಂದ ಸಾರಿಗೆ ನೌಕರರ ಮುಷ್ಕರ, ಮಾತುಕತೆಗೆ ಕರೆದ ರಾಜ್ಯ ಸರಕಾರ

KSRTC, BMTC: ಬಸ್​​ಗಳ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ರಾಜ್ಯ ಸರ್ಕಾರ, ಖಾಸಗಿ ಬಸ್ ಮಾಲೀಕರ ಜೊತೆ ಸಭೆ ಕರೆದಿದೆ. ಸಾರಿಗೆ ಇಲಾಖೆ ಆಯುಕ್ತರು ಇಂದು ಮಧ್ಯಾಹ್ನ 12 ಗಂಟೆಗೆ ಸಿಬ್ಬಂದಿ ಜೊತೆ ಚರ್ಚೆ ನಡೆಸಲಿದ್ದಾರೆ.

Actress Ramya: ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕಳಿಸಿದ ಮೂವರು ಸಿಸಿಬಿ ಪೊಲೀಸರಿಂದ ಅಂದರ್‌

ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕಳಿಸಿದ ಮೂವರು ಸಿಸಿಬಿ ಪೊಲೀಸರಿಂದ ಅಂದರ್‌

Actor Darshan: ದರ್ಶನ್‌ ಕೇಸ್‌ ಬಗ್ಗೆ ಜು. 24ರಂದು ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ಸ್ಟೇಟ್‌ಮೆಂಟ್ ಉಲ್ಲೇಖಿಸಿ ರಮ್ಯಾ ಪೋಸ್ಟ್‌ ಒಂದನ್ನು ಶೇರ್‌ ಮಾಡಿದ್ದರು. ಸಾಮಾನ್ಯ ಜನರಿಗೆ ಎಲ್ಲೋ ಒಂದು ಕಡೆ ಹೋಪ್ ಇದೆ. ನ್ಯಾಯ ಸಿಗುತ್ತೆ ಎಂದಿದ್ದರು. ಅದಾದ ಮೇಲೆ ಅವರಿಗೆ ದರ್ಶನ್‌ ಅಭಿಮಾನಿಗಳಿಂದ ಅಶ್ಲೀಲ ಮೆಸೇಜ್ ಬರಲು ಆರಂಭವಾಗಿತ್ತು.

Rabies disease: ಬೆಂಗಳೂರಿನಲ್ಲಿ 6 ತಿಂಗಳಲ್ಲಿ ರೇಬಿಸ್‌ನಿಂದ 17 ಜನರ ಸಾವು

ಬೆಂಗಳೂರಿನಲ್ಲಿ 6 ತಿಂಗಳಲ್ಲಿ ರೇಬಿಸ್‌ನಿಂದ 17 ಜನರ ಸಾವು

Bengaluru: ರಾಜ್ಯದಲ್ಲಿ 23 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ 17 ರೇಬಿಸ್ ಪ್ರಕರಣಗಳು ಧೃಢಪಟ್ಟಿದ್ದರೆ, ಈ ವರ್ಷ 6 ತಿಂಗಳಲ್ಲೇ 17 ಜನರು ರೇಬಿಸ್​ಗೆ ಬಲಿಯಾಗಿದ್ದು ಆತಂಕ ಹೆಚ್ಚಿಸಿದೆ.

Actress Ramya: ಇಂದು ಪ್ರಜ್ವಲ್‌ ರೇವಣ್ಣ ಶಿಕ್ಷೆಯ ಪ್ರಮಾಣ ಪ್ರಕಟ, ಕೋರ್ಟ್‌ಗೆ ವೆಲ್‌ ಡನ್‌ ಎಂದ ನಟಿ ರಮ್ಯಾ

ಇಂದು ಪ್ರಜ್ವಲ್‌ ಶಿಕ್ಷೆಯ ಪ್ರಮಾಣ ಪ್ರಕಟ, ವೆಲ್‌ ಡನ್‌ ಎಂದ ರಮ್ಯಾ

Prajwal Ravanna Case: ಪ್ರಜ್ವಲ್​ ರೇವಣ್ಣ ದೋಷಿ ಎಂದು ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಆದೇಶ ಹೊರಡಿಸಿದ್ದಾರೆ. ಅದರ ಬೆನ್ನಲ್ಲೇ ನಟಿ ರಮ್ಯಾ ಅವರು ಇನ್​ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದು, ʼಎಲ್ಲ ಮಹಿಳೆಯರಿಗೂ ನ್ಯಾಯ ಸಂದಿದೆ. ವೆಲ್​ಡನ್ ಹೈಕೋರ್ಟ್ʼ ಎಂದು ನಟಿ ಬರೆದಿದ್ದಾರೆ.

Rakshabandhan Shopping 2025: ವೀಕೆಂಡ್‌ನಲ್ಲೇ ಆರಂಭವಾಯ್ತು ರಕ್ಷಾ ಬಂಧನದ ಶಾಪಿಂಗ್!

ವೀಕೆಂಡ್‌ನಲ್ಲೇ ಆರಂಭವಾಯ್ತು ರಕ್ಷಾ ಬಂಧನದ ಶಾಪಿಂಗ್!

Rakshabandhan Shopping 2025: ವೀಕೆಂಡ್‌ನಲ್ಲೆ ರಕ್ಷಾ ಬಂಧನ ಹಬ್ಬದ ಶಾಪಿಂಗ್ ಆರಂಭಗೊಂಡಿದೆ. ಇದಕ್ಕೆ ಪೂರಕ ಎಂಬಂತೆ ಮಾರುಕಟ್ಟೆಗಳಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಡಿಸೈನರ್ ರಾಖಿಗಳು ಬಿಡುಗಡೆಗೊಂಡಿವೆ. ಈ ಬಾರಿ ಯಾವ್ಯಾವ ಬಗೆಯ ರಾಖಿಗಳು ಬಂದಿವೆ? ಮಾರಾಟಗಾರರು ಏನು ಹೇಳುತ್ತಾರೆ? ಇಲ್ಲಿದೆ ವರದಿ.

Varamahalaxmi Saree Draping 2025: ವರಮಹಾಲಕ್ಷ್ಮಿಗೆ ಆಕರ್ಷಕವಾಗಿ ಸೀರೆ ಉಡಿಸಿ ಅಲಂಕರಿಸಿ

ವರ ಮಹಾಲಕ್ಷ್ಮಿಗೆ ಆಕರ್ಷಕವಾಗಿ ಸೀರೆ ಉಡಿಸಿ ಅಲಂಕರಿಸಿ

Varamahalaxmi Saree Draping 2025: ಮನೆಯ ವರಮಹಾಲಕ್ಷ್ಮಿ ದೇವಿಗೆ ಸೀರೆ ಉಡಿಸುವುದು ಒಂದು ಕಲೆ. ಆಕರ್ಷಕವಾಗಿ ಹಾಗೂ ಕಲಾತ್ಮಕವಾಗಿ ಹೇಗೆಲ್ಲಾ ಸೀರೆ ಉಡಿಸಬಹುದು? ಎಂಬುದನ್ನು ಸೀರೆ ಡ್ರೆಪಿಂಗ್ ಎಕ್ಸ್‌ಪರ್ಟ್ ಚೈತನ್ಯಾ ಸಿಂಪಲ್ಲಾಗಿ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Karnataka Madiga Mahasabha: ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಹೋರಾಟಗಾರರನ್ನ ತಡೆದ ಪೊಲೀಸರು.

ಕರ್ನಾಟಕ ಮಾದಿಗ ಮಹಾಸಭಾ ಒಳಮೀಸಲು ಜಾರಿಗೆ ಆಗ್ರಹಿಸಿ ಅರೆಬೆತ್ತಲೆ ಪ್ರತಿಭಟನೆ

ನಗರ ಹೊರವಲಯ ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಜಿಲ್ಲೆಯ ನಾನಾ ತಾಲೂಕುಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಒಳಮೀಸಲಾತಿ ಹೋರಾಟಗಾರರು ಅವಕಾಶ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಉದ್ದೇಶದಿಂದ ಸುಪ್ರಿಂಕೋರ್ಟ್ ತನ್ನ ತೀರ್ಪ ನ್ನು ನೀಡಿ ಆಯಾ ರಾಜ್ಯ ಸರಕಾರಗಳು ಒಳಮೀಸಲಾತಿ ಕಲ್ಪಿಸಲು ಅವಕಾಶ ನೀಡಿ ತೀರ್ಪನ್ನು ನೀಡಿ ಜೂ.೧ ೨೦೨೫ಕ್ಕೆ ಒಮದು ವರ್ಷ ಪೂರ್ಣಗೊಂಡಿದೆ.

ಆಶಾ ಕಾರ್ಯಕರ್ತೆಯರಿಂದ ಆ.12-14ರ ವರೆಗೆ ಮೂರು ದಿನಗಳ ಅಹೋರಾತ್ರಿ ಧರಣಿ

ಆ.12-14ರ ವರೆಗೆ ಮೂರು ದಿನಗಳ ಅಹೋರಾತ್ರಿ ಧರಣಿ

ಆಶಾ ಕಾರ್ಯಕರ್ತೆಯರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆ.12 ರಿಂದ 14ರ ವರೆಗೆ ಮೂರು ದಿನಗಳು ಕಾಲ ರಾಜ್ಯವ್ಯಾಪಿ ಜಿಲ್ಲಾ ಮಟ್ಟದಲ್ಲಿ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಿ ಸರ್ಕಾರ "ಮಾತು ಕೊಟ್ಟಂತೆ ನಡೆದುಕೊಳ್ಳಬೇಕೆಂದು" ನೆನಪಿಸಲು ಮುಂದಾಗಿದ್ದೇವೆ

Chikkaballapur News: ಯುವಜನತೆ ದುಶ್ಚಟಗಳಿಗೆ ದಾಸರಾಗದಿದ್ದರೆ ಭವಿಷ್ಯದ ಬದುಕು ಹಸನಾಗುತ್ತದೆ: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಯುವಜನತೆ ದುಶ್ಚಟಗಳಿಗೆ ದಾಸರಾಗದಿದ್ದರೆ ಭವಿಷ್ಯದ ಬದುಕು ಹಸನು

ಪ್ರತಿಯೊಬ್ಬರೂ ಒಂದಲ್ಲ ಒಂದು ವ್ಯಸನಕ್ಕೆ ಒಳಗಾಗಿರುತ್ತಾರೆ. ಬಹುತೇಕರು ಉದ್ಯೋಗದ ಜೊತೆಗೆ ಕ್ರೀಡೆ, ಸಂಗೀತ, ಸಾಹಿತ್ಯ, ವ್ಯಾಯಾಮ ಇನ್ನಿತರ ಸಕಾರಾತ್ಮಕ ವಿಚಾರಗಳಲ್ಲಿ ವ್ಯಸನರಾಗಿರುತ್ತಾರೆ, ಅನಿವಾರ್ಯ ಕಾರಣಗಳಿಂದ ಕೆಲವರು ಕೆಟ್ಟ ವ್ಯಸನಗಳಿಗೆ ದಾಸರಾಗಿರುತ್ತಾರೆ. ಇಂತಹ ವ್ಯಸನ ಗಳಿಗೆ ಒಳಗಾಗದಂತೆ ಜನರಲ್ಲಿ ಅರಿವು ಮೂಡಿಸಲು ಬಹಳ ವರ್ಷಗಳ ಹಿಂದೆಯೇ ಡಾ. ಮಹಾಂತ ಶಿವ ಯೋಗಿ ಸ್ವಾಮಿಗಳು ಮಾಡಿದ ಸಾಮಾಜಿಕ ಪರಿವರ್ತನೆಯ ಕ್ರಮಗಳು ನಮ್ಮೆಲ್ಲರಿಗೆ ಪ್ರೇರಣಾದಾಯಕ ವಾಗಿದೆ.

Chikkaballapur News: ಸುಮಾರು ವರ್ಷಗಳಿಂದ ಪುರಾತನ ಕಾಲದ ಸ್ಮಶಾನಕ್ಕಾಗಿ ಹೋರಾಟ ಮಾಡುತ್ತಿರುವ ಗ್ರಾಮಸ್ಥರು

ಸ್ಮಶಾನ ವಿಚಾರ ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ ಗ್ರಾಮಸ್ಥರು

ಪುರಾತನ ಕಾಲದಿಂದಲೂ ಸ್ಮಶಾನವಿದ್ದು ಸ್ಮಶಾನದಲ್ಲಿ ಮೃತಪಟ್ಟ ವ್ಯಕ್ತಿಗಳನ್ನು ಹೂಣಲು ಅವಕಾಶ ಮಾಡಿಕೊಡದೆ ಇರುವ ಕಾರಣಕ್ಕೆ ರಸ್ತೆಯಲ್ಲಿ ಶವ ವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಚಿಂತಾಮಣಿ ತಾಲೂಕಿನ ಅಂಬಾಜಿದುರ್ಗ ಹೋಬಳಿಯ ಮಿಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

Bengaluru News: ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ ಯಶಸ್ವಿಯಾದ ಶಾಸನತಂತ್ರ ಕಾರ್ಯಾಗಾರ

ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ ಯಶಸ್ವಿಯಾದ ಶಾಸನತಂತ್ರ ಕಾರ್ಯಾಗಾರ

Bengaluru News: ಬೆಂಗಳೂರಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ ಶ್ರೀರಾಮಚಂದ್ರಾಪುರಮಠದ ನೂತನ ಆಡಳಿತ ವ್ಯವಸ್ಥೆ ಶಾಸನತಂತ್ರದ ಕಾರ್ಯಾಗಾರ ಜರುಗಿತು. ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ತಿಮ್ಮಪ್ಪಯ್ಯ ಮಡಿಯಾಲ್ ಚಾಲನೆ ನೀಡಿದರು. ಈ ಕುರಿತ ಮಾಹಿತಿ ಇಲ್ಲಿದೆ.

Ex MLA J K Krishna Reddy: 40ಕ್ಕೂ ಅಧಿಕ ಕಂಪನಿಗಳು ಭಾಗಿಯಾಗುವ ಸಾಧ್ಯತೆ: ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ

ಆ.೯ ರಂದು ಚಿಂತಾಮಣಿಯಲ್ಲಿ ಬೃಹತ್ ಉದ್ಯೋಗ ಮೇಳ

ಮಸ್ತೇನಹಳ್ಳಿ, ಕೋಲಾರ, ನರಾಸಾಪುರ, ಪೀಣ್ಯ, ದೊಮ್ಮಸಂದ್ರ, ಆನೇಕಲ್ ಸೇರಿದಲ್ಲಿ 40ಕ್ಕಿಂತ ಹೆಚ್ಚು ಕಂಪನಿಗಳು ಭಾಗಿಯಾಗಲಿದ್ದು, ಎಸ್‌ಎಸ್‌ ಎಲ್‌ಸಿ, ಪಿಯುಸಿ, ಡಿಗ್ರಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವೆಂದು ಹೇಳಿದರು. ಈ ಹಿಂದೆಯೂ ಸಹ ೨೦೧೮ರಲ್ಲಿ  ಉದ್ಯೋಗ ಮೇಳಾ ಆಯೋಜನೆ ಮಾಡಲಾಗಿದ್ದು ಮತ್ತೆ ೯ ಆಗಸ್ಟ್ ರಂದು ನಡೆಯಲಿರುವ ಉದ್ಯೋಗ ಮೇಳ ಬಡವರ ಮಕ್ಕಳಿಗೆ ಉದ್ಯೋಗ ಕಲ್ಪಿಸಲು ಉತ್ತಮ ಅವಕಾಶವಾಗಿದೆ ಎಂದು ವಿವರಿಸಿದರು.

MP Dr K Sudhakar: ಜಿಲ್ಲಾ ಉಸ್ತುವಾರಿ ಸಚಿವರು ಹೆಚ್.ಎನ್.ವ್ಯಾಲಿ ನೀರನ್ನು ಬಳಸಲಿ, ಸಂಪುಟ ಸಹೋದ್ಯೋಗಿಗಳಿಗೂ ಕುಡಿಸಿ ತೋರಿಸಲಿ :  ಸಂಸದ ಡಾ.ಕೆ.ಸುಧಾಕರ್ ಸವಾಲು

ಹೆಚ್.ಎನ್.ವ್ಯಾಲಿ ನೀರನ್ನು ಸಂಪುಟ ಸಹೋದ್ಯೋಗಿಗಳಿಗೂ ಕುಡಿಸಿ ತೋರಿಸಲಿ

ಪ್ರತಿಕಾ ಹೇಳಿಕೆ ನೀಡಿರುವ ಅವರು, ಕೆ.ಸಿ ವ್ಯಾಲಿ ಮತ್ತು ಎಚ್.ಎನ್ ವ್ಯಾಲಿ ಯೋಜನೆಗಳಡಿಯಲ್ಲಿ ೩ನೇ ಹಂತದ ಶುದ್ಧೀಕರಣ ಅಗತ್ಯವಿಲ್ಲ, ಕೇವಲ ೩ ಹಂತದ ಶುದ್ಧೀಕರಣದ ಬಳಿಕ ಕುಡಿಯುವ ನೀರಿಗಾಗಿ ಬಳಸಬಹುದು ಎಂಬ ರಾಜ್ಯ ಸರ್ಕಾರದ ನಿಲುವು ಕಳವಳಕಾರಿ ಹಾಗೂ ಖಂಡನೀಯ ಎಂದು ಕಿಡಿಕಾರಿದ್ದಾರೆ.

Chikkaballapur News: ಸರಕಾರಿ ಶಾಲೆ, ವಸತಿ ಶಾಲೆ, ಅಂಗನವಾಡಿಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

ಅಂಗನವಾಡಿಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

ಚಿಕ್ಕಬಳ್ಳಾಪುರ ತಾಲ್ಲೂಕಿನ ಪೋಶೆಟ್ಟಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡೆ ಗಾನಹಳ್ಳಿ ಅಂಗನ ವಾಡಿ ಕೇಂದ್ರ, ಕೊಲಿಮೇನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ ಅಲ್ಲಿ ಮಕ್ಕಳಿಗೆ ನೀಡುತ್ತಿರುವ ಆಹಾರದ ಗುಣಮಟ್ಟವನ್ನು ಹಾಗೂ ಸ್ವಚ್ಛತೆಯ ಬಗ್ಗೆ ಪರಿಶೀಲಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

Chikkaballapur News: ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗ ಮಂಜೂರು ಮಾಡಲು ಮನವಿ

ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗ ಮಂಜೂರು ಮಾಡಲು ಮನವಿ

ನಮ್ಮ ಸಮುದಾಯದ ಆರಾಧ್ಯ ದೈವವಾದ ಕೈವಾರ ತಾತಯ್ಯ ನವರ ಪುತ್ಥಳಿ ನಿರ್ಮಾಣಕ್ಕಾಗಿ ನಮ್ಮ ಸಮುದಾಯದ ಮುಖಂಡರಾದ ಜಿ.ಟಿ.ಶ್ರೀನಿವಾಸ್ ಎಂಬುವವರು ತಮಗೆ ಸೇರಿದ ಗುಡಿಬಂಡೆ ಸ.ನಂ 259/3 ರಲ್ಲಿ ಜಾಗ ನೀಡಿದ್ದರು. ಈ ಸ.ನಂ ನಲ್ಲಿ ಅ ಖರಾಬು 9 ಗುಂಟೆ ಹಾಗೂ ಖರಾಬು 2 ಗುಂಟೆ ಇದೆ. ಈ ಜಾಗವನ್ನು ಈ ಹಿಂದೆಯೇ ಶ್ರೀ ವೆಂಕಟೇಶ್ವರ ಚಿತ್ರ ಮಂದಿರದ ಉದ್ದೇಶಕ್ಕಾಗಿ ಭೂ ಪರಿವರ್ತನೆ ಯಾಗಿರುತ್ತದೆ.

Rakshak Bullet: ಬಿಗ್‌ಬಾಸ್‌ ಖ್ಯಾತಿಯ ರಕ್ಷಕ್‌ ಬುಲೆಟ್‌ ಕಾರು ಡಿಕ್ಕಿಯಾಗಿ ಯುವಕನ ಕಾಲು ಮುರಿತ

ರಕ್ಷಕ್‌ ಬುಲೆಟ್‌ ಕಾರು ಡಿಕ್ಕಿಯಾಗಿ ಯುವಕನ ಕಾಲು ಮುರಿತ

Rakshak Bullet: ಅಜಾಗರೂಕತೆಯಿಂದ ಜೀಪ್ ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದಿರುವ ಆರೋಪ ರಕ್ಷಕ್‌ ಬುಲೆಟ್‌ ವಿರುದ್ಧ ಕೇಳಿಬಂದಿದೆ. ಮಾನ್ಯತಾ ಟೆಕ್ ಪಾರ್ಕ್‌ನ ಶಿವರಾಜ್ ಕುಮಾರ್ ಮನೆ ತಿರುವಿನಲ್ಲಿ ಅಪಘಾತ ನಡೆದಿದೆ. ನಂತರ ಗಾಯಳು ಯುವಕನನ್ನು ಟ್ಯಾಕ್ಸಿಯಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Chikkanayakanahalli News: ಓವರ್ ಡೋಸ್ ಇಂಜೆಕ್ಷನ್ ಆರೋಪ : ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ

ಓವರ್ ಡೋಸ್ ಇಂಜೆಕ್ಷನ್ ಆರೋಪ : ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ

ಪುಷ್ಪಾವತಿ ಅವರು ಜುಲೈ 22 ರಂದು ಮನೆಯವರ ಜೊತೆ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಸಾಯಿಗಂಗಾ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಆಗ ತಪಾಸಣೆ ಮಾಡುತ್ತಿದ್ದ ಡ್ಯೂಟಿ ನರ್ಸ್ ಡಾಕ್ಟರ್ ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಆದರೆ ಆಸ್ಪತ್ರೆಯಿಂದ ದೂರ ಇದ್ದ ಕಾರಣ ಅವರು ಬರಲು ಆಗುವುದಿಲ್ಲ ಎಂದಿದ್ದರು. ನರ್ಸ್ ಏನು ಸಮಸ್ಯೆ ಎಂದು ಪುಷ್ಪಾವತಿ ಅವರನ್ನು ಕೇಳಿದ್ದಾರೆ.

ಪ್ಯಾಸೆಂಜರ್ ವೆಹಿಕಲ್ ಎಕ್ಸ್‌ಪೋ 2.0 ರಲ್ಲಿ ಅತ್ಯಾಧುನಿಕ ಸಾರಿಗೆ ಉತ್ಪನ್ನಗಳ ಪ್ರದರ್ಶನ

ಎಕ್ಸ್‌ಪೋ 2.0 ರಲ್ಲಿ ಅತ್ಯಾಧುನಿಕ ಸಾರಿಗೆ ಉತ್ಪನ್ನಗಳ ಪ್ರದರ್ಶನ

ಚೆನ್ನೈನಲ್ಲಿ ನಡೆದ ಪ್ಯಾಸೆಂಜರ್ ವೆಹಿಕಲ್ ಎಕ್ಸ್‌ಪೋ 2.0 ರಲ್ಲಿ ಈ ಒಡಂಬಡಿಕೆಗೆ ಸಹಿ ಹಾಕಲಾ ಗಿದ್ದು, ಈ ಒಡಂಬಡಿಕೆಗೆ ತಮಿಳುನಾಡು ಸರ್ಕಾರದ ಕೈಗಾರಿಕಾ ಸಚಿವರಾದ ಡಾ. ಟಿ.ಆರ್.ಬಿ. ರಾಜಾ, ತಮಿಳುನಾಡು ಸರ್ಕಾರದ ಪ್ರತಿನಿಧಿಗಳು ಮತ್ತು ಆಲ್ ಓಮ್ನಿಬಸ್ ಓನರ್ಸ್ ಅಸೋಸಿ ಯೇಷನ್ (ಎಓಬಿಓಎ) ಸದಸ್ಯರ ಸಮ್ಮುಖದಲ್ಲಿ ಸಹಿ ಹಾಕಲಾಯಿತು.

Actor Santhosh Balaraj: ತೀವ್ರ ಅನಾರೋಗ್ಯ; ಸ್ಯಾಂಡಲ್‌ವುಡ್‌ ಯುವ ನಟ ಸಂತೋಷ್ ಬಾಲರಾಜ್ ಸ್ಥಿತಿ ಗಂಭೀರ

ಸ್ಯಾಂಡಲ್‌ವುಡ್‌ ಯುವ ನಟ ಸಂತೋಷ್ ಬಾಲರಾಜ್ ಸ್ಥಿತಿ ಗಂಭೀರ

Actor Santhosh Balaraj: 34 ವರ್ಷದ ನಟ ಸಂತೋಷ್‌ ಬಾಲರಾಜ್‌ ಅವರು ಕರಿಯಾ-2, ಕೆಂಪ, ಗಣಪ, ಬರ್ಕ್ಲಿ, ಸತ್ಯ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಇವರ ತಂದೆ ಅನೇಕಲ್ ಬಾಲರಾಜ್ ಅವರು ನಟ ದರ್ಶನ್‌ಗೆ ಕರಿಯ ಸಿನಿಮಾ ನಿರ್ಮಾಣ ಮಾಡಿದ್ದರು.

Haveri News: ವಿವಾಹಿತ ಯುವತಿಗೆ ಮೆಸೇಜ್; ಹುಟ್ಟುಹಬ್ಬದ ದಿನವೇ ಕಾಂಗ್ರೆಸ್ ಯುವ ಮುಖಂಡನ ಹತ್ಯೆ

ಹುಟ್ಟುಹಬ್ಬದ ದಿನವೇ ಕಾಂಗ್ರೆಸ್ ಯುವ ಮುಖಂಡನ ಹತ್ಯೆ

Congress leader murdered: ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಕೊಲೆ ನಡೆದಿದೆ. ಹೆಣ್ಣಿನ ವಿಚಾರಕ್ಕೆ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಡಾಬಾದಿಂದ ಕಿಡ್ನ್ಯಾಪ್‌ ಮಾಡಿ, ಕೊಲೆಗೈದ ಬಳಿಕ ಶವವನ್ನು ವರದಾ ನದಿಗೆ ಶವ ಎಸೆಯಲಾಗಿದೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kandeelu Movie: ʼಕಂದೀಲುʼ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ: ನಿರ್ದೇಶಕಿ ಯಶೋದ ಪ್ರಕಾಶ್‌

ರಾಷ್ಟ್ರ ಪ್ರಶಸ್ತಿ ನಿರೀಕ್ಷಿಸಿರಲಿಲ್ಲ: ಕಂದೀಲು ಚಿತ್ರದ ನಿರ್ದೇಶಕಿ

Kandeelu Movie: ಜನರನ್ನು ತಲುಪುವುದು ನಮ್ಮ ಉದ್ದೇಶವಾಗಿದೆ. ರಿಯಲಿಸ್ಟಿಕ್‌ ಕಥೆ ಆಧಾರಿತ ಚಿತ್ರಗಳನ್ನು ಮಾಡಬೇಕೆಂಬ ಬಯಕೆ ಇದೆ. ಇನ್ನೂ ಕಂದೀಲು ಸಿನಿಮಾ ರಿಲೀಸ್‌ ಮಾಡಿಲ್ಲ. ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಮಾಡುವುದು ನಮ್ಮ ಮೊದಲ ಆದ್ಯತೆಯಾಗಿರುತ್ತದೆ ಎಂದು ನಿರ್ದೇಶಕಿ ಯಶೋದ ಪ್ರಕಾಶ್ ಕೊಟ್ಟುಕತ್ತೀರ ತಿಳಿಸಿದ್ದಾರೆ.

ಬಫರ್ ಜೋನ್: ರಾಜ್ಯ ಸರ್ಕಾರದ ತೀರ್ಮಾನಕ್ಕೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಕ್ರೋಶ

ಕೆರೆಗಳ ಸುತ್ತಲಿನ ಬಫರ್ ಜೋನ್ ಕಡಿಮೆ ಮಾಡುವ ಮಸೂದೆಗೆ ಒಪ್ಪಿಗೆ: ಆಕ್ರೋಶ

ಸರ್ಕಾರವು ರಾಜ್ಯದ ಕೆರೆಗಳನ್ನು ಭವಿಷ್ಯಕ್ಕಾಗಿ ರಕ್ಷಿಸಬೇಕಾದ ಸಂದರ್ಭದಲ್ಲಿ ಬಫರ್ ಜೋನ್ ಕಡಿಮೆ ಮಾಡುವುದು ಕೆರೆ ಸುತ್ತ ಕಮರ್ಷಿಯಲ್ ಮತ್ತು ಇಂಡಸ್ಟ್ರೀಯಲ್ ಚಟುವಟಿಕೆಗೆ ಅವಕಾಶ ಕೊಟ್ಟಂತೆ ಆಗುತ್ತೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಿಯಲ್ ಎಸ್ಟೇಟ್ ಕಂಪನಿಗಳಿಗೆ ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ಕೆರೆಗಳ ಸುತ್ತಲಿನ ಬಫರ್ ಜೋನ್ ಕಡಿಮೆ ಮಾಡಲಾಗುತ್ತಿದೆ

Chandrashekhar Siddi: ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆಗೆ ಶರಣು

ಕಾಮಿಡಿ ಕಿಲಾಡಿಗಳು ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆಗೆ ಶರಣು

Chandrashekhar Siddi: ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಶೋನಲ್ಲಿ ಮಿಂಚಿದ ನಂತರ ಚಂದ್ರಶೇಖರ್‌ ಸಿದ್ದಿ ಅವರಿಗೆ ಇನ್ನಷ್ಟು ಅವಕಾಶಗಳು ಅರೆಸಿಬಂದಿದ್ದವು. ಕೆಲ ಧಾರಾವಾಹಿಗಳಲ್ಲಿ ಸಹ ಪಾತ್ರ ನಿಭಾಯಿಸಿದ್ದ ಅವರು, ಸ್ಥಳೀಯವಾಗಿ ಸಹ ಉತ್ತಮ ಕಲಾವಿದರಾಗಿ ಗುರುತಿಸಿಕೊಂಡಿದ್ದರು.

HD Deve Gowda: ಟ್ರಂಪ್‌ ಕುರುಡರಾಗಿರಬೇಕು ಅಥವಾ ಅಜ್ಞಾನಿ ಆಗಿರಬೇಕು: ಎಚ್.ಡಿ. ದೇವೇಗೌಡ ಕಿಡಿ

ಟ್ರಂಪ್‌ ಕುರುಡರಾಗಿರಬೇಕು ಅಥವಾ ಅಜ್ಞಾನಿ ಆಗಿರಬೇಕು: ಎಚ್‌ಡಿಡಿ

HD Deve Gowda: ಭಾರತದ ಆರ್ಥಿಕತೆ ಸತ್ತಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರ ಹೇಳಿಕೆ ಬಗ್ಗೆ ತೀವ್ರ ಅಚ್ಚರಿ ವ್ಯಕ್ತಪಡಿಸಿರುವ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರು, ಬಹುಶಃ ಟ್ರಂಪ್‌ ಕುರುಡರಾಗಿರಬೇಕು ಅಥವಾ ಅಜ್ಞಾನಿ ಆಗಿರಬೇಕು ಎಂದು ಟೀಕಿಸಿದ್ದಾರೆ.

Loading...