ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Bagepally News: ನಿವೇಶನ ಕೊಡುವಲ್ಲಿ ವಿಳಂಬ, ಗುರ್ತಿಸಲ್ಪಟ್ಟ ಸ್ಥಳದಲ್ಲಿ ಗುಡಿಸಲು ಹಾಕಿದ ನಾಗರಿಕರು, ಸ್ಥಳಕ್ಕೆ ದೌಡಾಯಿಸಿದ ತಹಸೀಲ್ದಾರ್

ಗುರ್ತಿಸಲ್ಪಟ್ಟ ಸ್ಥಳದಲ್ಲಿ ಗುಡಿಸಲು ಹಾಕಿದ ನಾಗರಿಕರು

ಗುಡಿಸಲು ನಿರ್ಮಾಣ ಮಾಡುತ್ತಿರುವುದು ತಪ್ಪು, ನಾವು ನಿಮ್ಮ ಮನವಿಗಳಿಗೆ ಸ್ಪಂದಿಸಿ ಸ್ಥಳವನ್ನೂ ಗುರ್ತಿಸಲಾಗಿದೆ. ಇದನ್ನು ಪುರಸಭೆಯವರಿಗೂ ಹಸ್ತಾಂತರಿಸಿದ್ದೇವೆ. ನಿವೇಶನಗಳನ್ನು ನೀಡಲು ಸಮಿತಿ ಯೊಂದಿದೆ. ಆ ಸಮಿತಿಯ ಮುಂದೆ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ. ಹಾಗೇಯೆ ಅರ್ಹ ಫಲಾನು ಭವಿಗಳನ್ನು ಗುರ್ತಿಸಿ, ನಿವೇಶನಗಳ ಹಂಚಿಕೆ ಮಾಡಲಾಗುತ್ತದೆ

Chinthamani News: ಬನಹಳ್ಳಿ ಗ್ರಾಮಾಭಿವೃದ್ದಿ ಟ್ರಸ್ಟ್ ನಿಂದ 90 ಹಸುಗಳಿಗೆ ವಿಮಾ ಹಣ ಪಾವತಿ: ಮಂಜುನಾಥ

ಬನಹಳ್ಳಿ ಗ್ರಾಮಾಭಿವೃದ್ದಿ ಟ್ರಸ್ಟ್ ನಿಂದ 90 ಹಸುಗಳಿಗೆ ವಿಮಾ ಹಣ ಪಾವತಿ

ಶ್ರೀ ಬನಹಳ್ಳಿ ಗ್ರಾಮಾಭಿವೃದ್ಧಿ ಟ್ರಸ್ಟ್ ವತಿಯಿಂದ  ಟ್ರಸ್ಟ್ ಅಧ್ಯಕ್ಷ ಬಿ ಎನ್ ನಾರಾಯಣ ಸ್ವಾಮಿ, ಕಾರ್ಯದರ್ಶಿ ಮತ್ತು  ಕೈವಾರ ಹಾಲು ಉತ್ಪಾದಕರ ಸಹಕಾರ  ಸಂಘದ ಉಪಾಧ್ಯಕ್ಷರು ಬಿ ಜಿ ಮಂಜು ನಾಥ್ ರವರಿಂದ ಹಸುಗಳಿಗೆ ತಗುಲುವ ವಿಮಯ ಮೊತ್ತವನ್ನು ಉತ್ಪಾದಕರ ಪರವಾಗಿ ಟ್ರಸ್ಟ್ ವತಿ ಯಿಂದ ಒಂದು ಹಸುಗೆ ೯೫೮ ರೂಪಾಯಿಯಂತೆ ೯೦ ಹಸುಗಳಿಗೆ ಉಚಿತವಾಗಿ ನೀಡಿದರು.

Chikkaballapur News: ಲಯನ್ಸ್ ಸಂಸ್ಥೆಯಿಂದ ಡಿ.ಟಿ ಶ್ರೀನಿವಾಸ್‌ಮೂರ್ತಿಗೆ ಆಚಾರ್ಯ ಶ್ರೇಷ್ಠ ಪ್ರಶಸ್ತಿ ಪ್ರದಾನ

ಡಿ.ಟಿ ಶ್ರೀನಿವಾಸ್‌ಮೂರ್ತಿಗೆ ಆಚಾರ್ಯಶ್ರೇಷ್ಠ ಪ್ರಶಸ್ತಿ ಪ್ರದಾನ

ಲಯನ್ಸ್ ಸಂಸ್ಥೆ ಸೇವಾ ಕಾರ್ಯಗಳಿಗೆ ಹೆಸರಾದ ಸಂಸ್ಥೆಯಾಗಿದೆ. ವಿಶ್ವದಾದ್ಯಂತ ಲಯನ್ಸ್ನ ಶಾಖೆ ಗಳಿದ್ದು ಕಾಲಕಾಲಕ್ಕೆ ಸಮಾಜಕ್ಕೆ ಬೇಕಾದ ಸೇವಾಕಾರ್ಯಗಳನ್ನು ಮಾಡುತ್ತಾ ಜವಾಬ್ದಾರಿಯುತ ನಾಗರೀಕರನ್ನು ಕಟ್ಟುವಲ್ಲಿ ಮುನ್ನಡೆದಿದ್ದೇವೆ. ಕಳೆದ 20 ವರ್ಷಗಳಿಂದ ಚಿಕ್ಕಬಳ್ಳಾಪುರ ಘಟಕವು ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಪ್ರತಿವರ್ಷ ಇಂಜನಿಯರ‍್ಸ್ ಡೇ ಅಂಗವಾಗಿ ವಿವಿಧ ಕ್ಷೇತ್ರದ ಗಣ್ಯರನ್ನು ಆರಿಸಿ ಅವರಿಗೆ ಆಚಾರ್ಯ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡುತ್ತಾ ಬರಲಾಗಿದೆ

Chitradurga News: ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ, ಪ್ರಜಾಪ್ರಭುತ್ವದ ಅರಿವು ಅಗತ್ಯ

ಪ್ರಜಾಪ್ರಭುತ್ವದ ದಿನಾಚರಣೆ: ಮತದಾನ ಮತ್ತು ಪರಿಸರ ಪ್ರತಿಜ್ಞೆ

ರಾಜ್ಯ ಸರಕಾರವು 'ನಮ್ಮ ಮತ ನಮ್ಮ ಹಕ್ಕು' ಘೋಷಣೆಯಡಿ ಪ್ರಜಾಪ್ರಭುತ್ವವನ್ನು ಆಚರಿಸುವ ಮೂಲಕ ನಾವೆಲ್ಲರೂ ಒಟ್ಟಿಗೆ ಇರೋಣ. ಪ್ರಜಾಪ್ರಭುತ್ವವು ಯುವಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ, ನಾಗರಿಕ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಹಾಗೂ ಸಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಜೊತೆಗೆ ನಮ್ಮ ಭೂಮಿ, ಪರಿಸರವೂ ಪ್ರಭುತ್ವದ ಭಾಗವಾಗಿದೆ

ವಿಶ್ವದ ಅತಿದೊಡ್ಡ ಅಂತಾರಾಷ್ಟ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಾಂಗ್ರೆಸ್ ಮತ್ತು ಎಕ್ಸ್‌ಪೋಸಿಷನ್ (IMECE) ಇಂಡಿಯಾ ಸಮಾವೇಶ ಯಶಸ್ವಿ

ಎಕ್ಸ್‌ಪೋಸಿಷನ್ (IMECE) ಇಂಡಿಯಾ ಸಮಾವೇಶ ಯಶಸ್ವಿ

IMECE ಭಾರತವು ಜಾಗತಿಕ ಸಹಯೋಗಗಳನ್ನು ಸಕ್ರಿಯಗೊಳಿಸುವ ಮೂಲಕ, ಎಂಜಿನಿಯರಿಂಗ್ ಸಂಶೋಧನೆಯನ್ನು ಮುಂದುವರೆಸುವ ಮೂಲಕ ಮತ್ತು ಭಾರತವನ್ನು ನಾವೀನ್ಯತೆ-ಚಾಲಿತ ಆರ್ಥಿಕತೆ ಯಾಗಿ ಮರುಕಲ್ಪಿಸಲು ಶೈಕ್ಷಣಿಕ-ಉದ್ಯಮ ಪಾಲುದಾರಿಕೆಗಳನ್ನು ಬಲಪಡಿಸುವ ಮೂಲಕ ಈ ದೃಷ್ಟಿ ಕೋನವನ್ನು ಸಂಪೂರ್ಣವಾಗಿ ಪೂರೈಸುತ್ತದೆ.

Pralhad Joshi: ಕಾಂಗ್ರೆಸ್‌ ಆಡಳಿತದಲ್ಲಿ ಕರ್ನಾಟಕ ಡ್ರಗ್ಸ್‌, ಗಾಂಜಾ ಮಾಫಿಯಾ ತಾಣವಾಗಿದೆ: ಜೋಶಿ

ಕಾಂಗ್ರೆಸ್‌ ಆಡಳಿತದಲ್ಲಿ ಕರ್ನಾಟಕ ಡ್ರಗ್ಸ್‌, ಗಾಂಜಾ ಮಾಫಿಯಾ ತಾಣ: ಜೋಶಿ

Pralhad Joshi: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ದುರಾಡಳಿತದ ಪರಮಾವಧಿ ಎಲ್ಲೇ ಮೀರಿದೆ. ಒಂದು ಸುಸಂಸ್ಕೃತಿಯ ರಾಜ್ಯವಾಗಿರುವ ಕರ್ನಾಟಕವನ್ನು ಇದೀಗ ಅಪರಾಧಿಗಳ ಸ್ವರ್ಗವನ್ನಾಗಿಸುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಅವರು, ಡ್ರಗ್ಸ್‌, ಗಾಂಜಾ ಮಾಫಿಯಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Dharmasthala Case: ಬಂಗ್ಲೆಗುಡ್ಡದಲ್ಲಿ ಸದ್ಯಕ್ಕಿಲ್ಲ ಗುಂಡಿ ಅಗೆಯುವ ಕಾರ್ಯ; ಹೆಚ್ಚಿನ ಸಾಕ್ಷ್ಯ ಸಂಗ್ರಹಕ್ಕೆ ಮುಂದಾದ ಎಸ್‌ಐಟಿ

ಧರ್ಮಸ್ಥಳ ಪ್ರಕರಣ; ಬಂಗ್ಲೆಗುಡ್ಡದಲ್ಲಿ ಸದ್ಯಕ್ಕಿಲ್ಲ ಗುಂಡಿ ಅಗೆಯುವ ಕಾರ್ಯ

Dharmasthala Case: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು (ಸೋಮವಾರ) ಸ್ಥಳಕ್ಕೆ ಭೇಟಿ ನೀಡಲು ನಿರ್ಧರಿಸಿತ್ತು. ಆದರೆ, ಹೆಚ್ಚಿನ ಮಾಹಿತಿ ಸಂಗ್ರಹದ ನಂತರವಷ್ಟೇ ಬಂಗ್ಲೆಗುಡ್ಡದಲ್ಲಿ ಅಗೆಯಲು ಎಸ್‌ಐಟಿ ತೀರ್ಮಾನ ಮಾಡಿದೆ ಎನ್ನಲಾಗಿದೆ.

Vitla Pindi Mahotsav: ಕೃಷ್ಣನೂರು ಉಡುಪಿಯಲ್ಲಿ ಜನ್ಮಾಷ್ಟಮಿ, ಲೀಲೋತ್ಸವ ಸಂಭ್ರಮ; ಬಗೆ ಬಗೆಯ ವೇಷ, ಹುಲಿ ಕುಣಿತದ ವೈಭವಕ್ಕೆ ಮಾರುಹೋದ ಭಕ್ತರು

ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಹೀಗಿತ್ತು

ಕೃಷ್ಣನೂರು ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಅದ್ಧೂರಿಯಾಗಿ ನೆರವೇರಿದೆ. ಉಡುಪಿ ಮಠದಲ್ಲಿ ಸೆಪ್ಟೆಂಬರ್‌ 14ರಂದು ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿದರೆ, ಸೆಪ್ಟೆಂಬರ್‌ 15ರಂದು ಅದ್ಧೂರಿಯಾಗಿ ವಿಟ್ಲಪಿಂಡಿ ಆಚರಿಸಲಾಯಿತು. ಈ ವೇಳೆ ಹುಲಿ ಕುಣಿತ, ವಿವಿಧ ವೇಷಗಳು ನೆರೆದವರ ಮೈರೋಮಾಂಚನಗೊಳಿಸಿತು. ಹೇಗಿತ್ತು ಕೃಷ್ಣನೂರಿನಲ್ಲಿ ಈ ಬಾರಿಯ ಅಷ್ಟಮಿ ವೈಭವ ಹೇಗಿತ್ತು ಎನ್ನುವ ವಿವರ ಇಲ್ಲಿದೆ.

Pralhad Joshi: ಆಹಾರ ಇಲಾಖೆ ಕಡತಗಳ ನಿರ್ವಹಣೆ, ಸ್ಥಳ ಸ್ವಚ್ಛತೆಗೆ ವಿಶೇಷ ಅಭಿಯಾನ: ಜೋಶಿ

ಆಹಾರ ಇಲಾಖೆ ಕಡತಗಳ ನಿರ್ವಹಣೆ, ಸ್ಥಳ ಸ್ವಚ್ಛತೆಗೆ ವಿಶೇಷ ಅಭಿಯಾನ: ಜೋಶಿ

Pralhad Joshi: ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಡತಗಳ ನಿರ್ವಹಣೆ ಮತ್ತು ಸ್ಥಳ ಸ್ವಚ್ಛತೆಗೆ ಪೂರಕವಾಗಿ ಅಕ್ಟೋಬರ್‌ ತಿಂಗಳಲ್ಲಿ ವಿಶೇಷ ಅಭಿಯಾನಕ್ಕೆ ಸಿದ್ಧತೆ ನಡೆಸಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಬರ್ಲಿಂಗ್ಟನ್ ಇಂಗ್ಲಿಷ್, ಆರಂಭಿಕ ಬಾಲ್ಯ ಶಿಕ್ಷಣದಲ್ಲಿ ಮ್ಯಾಜಿಕ್ ಆಫ್ ಅರ್ಲಿಯೊಂದಿಗೆ ಬದಲಾವಣೆ ಪ್ರೇರೇಪಿಸುತ್ತದೆ ಬೆಂಗಳೂರಿನಲ್ಲಿ ಕಾರ್ಯಾಗಾರ

ಬದಲಾವಣೆ ಪ್ರೇರೇಪಿಸುತ್ತದೆ ಬೆಂಗಳೂರಿನಲ್ಲಿ ಕಾರ್ಯಾಗಾರ

ಅಡಿಪಾಯದ ವರ್ಷಗಳಲ್ಲಿ ಮಕ್ಕಳ ಕೇಂದ್ರಿತ ಶಿಕ್ಷಣ ಮತ್ತು ಸಂತೋಷದಾಯಕ ಕಲಿಕೆಯ ಶಕ್ತಿಯನ್ನು ಆಚರಿಸುವುದು. ನಾಲ್ಕು ಗಂಟೆಗಳ ಕಾರ್ಯಾಗಾರವು ಅಭಿವೃದ್ಧಿಗೆ ಸೂಕ್ತವಾದ ಶಿಕ್ಷಣ ಶಾಸ್ತ್ರಗಳು, ಮಕ್ಕಳ ಕೇಂದ್ರಿತ ಅಭ್ಯಾಸಗಳು ಮತ್ತು ಯುವ ಮನಸ್ಸುಗಳನ್ನು ಬೆಳೆಸುವಲ್ಲಿ ಸಮಗ್ರ ಯೋಗಕ್ಷೇಮದ ಪಾತ್ರದ ಮೇಲೆ ಒತ್ತು ನೀಡಿತು. ಆರಂಭಿಕ ವರ್ಷಗಳ ಶಿಕ್ಷಣವನ್ನು ಸಂತೋಷ, ಆಶ್ಚರ್ಯ ಮತ್ತು ಜೀವಮಾನದ ಕುತೂಹಲದ ಆಚರಣೆಯಾಗಿ ಪರಿವರ್ತಿಸಲು ಒಟ್ಟಾಗಿ ದಾರಿ ಮಾಡಿಕೊಟ್ಟ ಶಿಕ್ಷಕರು ಮತ್ತು ಶಾಲಾ ನಾಯಕರ ಸಂಯೋಜನೆಯನ್ನು ಸಂವಾದಾತ್ಮಕ ಅಧಿವೇಶನವು ಸ್ವಾಗತಿಸಿತು.

Youtube Channels: ಯೂಟ್ಯೂಬ್ ಚಾನೆಲ್‌ಗಳಿಗೆ ಲೈಸೆನ್ಸ್‌ ಕಡ್ಡಾಯ ಮಾಡಲು ಕ್ರಮ ಎಂದ ಸಿಎಂ

ಯೂಟ್ಯೂಬ್ ಚಾನೆಲ್‌ಗಳಿಗೆ ಲೈಸೆನ್ಸ್‌ ಕಡ್ಡಾಯ ಮಾಡಲು ಕ್ರಮ ಎಂದ ಸಿಎಂ

CM Siddaramaiah: ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಮ್ಮ‌ ಸರ್ಕಾರ ಸದಾ ಸಿದ್ಧ. ಯಾವತ್ತೂ ಇದಕ್ಕೆ ಧಕ್ಕೆ ತರುವ ಕೆಲಸವನ್ನು ನಾನೂ ಯಾವತ್ತೂ ಮಾಡಿಲ್ಲ, ನಮ್ಮ ಸರ್ಕಾರವೂ ಮಾಡುವುದಿಲ್ಲ. ಆದರೆ ಬ್ಲ್ಯಾಕ್ ಮೇಲ್ ಮತ್ತು ಕೀಳು ಮಟ್ಟದ ಪ್ರಾಕ್ಟೀಸ್‌ ಮಾಡುತ್ತಿರುವ ಯೂಟ್ಯೂಬ್ ಚಾನೆಲ್‌ಗಳು ಸಮಾಜಕ್ಕೆ ಶಾಪ ಆಗಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Cauvery Theerthodbhava 2025: ಅ.17ರಂದು ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ

ಅ.17ರಂದು ತಲಕಾವೇರಿಯಲ್ಲಿ ʼಕಾವೇರಿ ತೀರ್ಥೋದ್ಭವʼ

Cauvery Theerthodbhava: ಕಾವೇರಿಯ ಉಗಮ ಸ್ಥಾನ ತಲಕಾವೇರಿಯ ಕುಂಡಿಕೆಯಲ್ಲಿ ಮೊಗೆದಷ್ಟು ನೀರು ಉತ್ಪತ್ತಿಯಾಗುತ್ತಿರುವುದು ವಿಸ್ಮಯಕಾರಿಯಾಗಿದ್ದು, ಈ ಜೀವಜಲವನ್ನು ಕೊಡಗಿನವರು ಸೇರಿದಂತೆ ಸಹಸ್ರಾರು ಮಂದಿ ಭಕ್ತಿಯಿಂದ ಪೂಜಿಸುತ್ತಾರೆ. ಈ ಬಾರಿಯ ತೀರ್ಥೋದ್ಭವ ದಿನಾಂಕವನ್ನು ಭಗಂಡೇಶ್ವರ-ತಲಕಾವೇರಿ ದೇವಾಲಯ ಅಧಿಕಾರಿಗಳು ಘೋಷಿಸಿದ್ದಾರೆ.

CM Siddaramaiah: ಕೃಷಿಕ್ರಾಂತಿ-ಹಸಿರು ಕ್ರಾಂತಿ ವೇಗದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ: ಸಿಎಂ ಸಿದ್ದರಾಮಯ್ಯ

ಕೃಷಿಕ್ರಾಂತಿ-ಹಸಿರು ಕ್ರಾಂತಿ ವೇಗದಲ್ಲಿ ಆಹಾರ ಉತ್ಪಾದನೆ ಆಗುತ್ತಿಲ್ಲ: ಸಿಎಂ

CM Siddaramaiah: ಕೃಷಿ ವಿವಿಗಳು Lab to Land ಜತೆಗೆ Land to Lab ಕಡೆಗೆ ಗಮನ ಹರಿಸುವ ಕೆಲಸ ಮಾಡಬೇಕು. ಕಡಿಮೆ ಮಳೆಯಲ್ಲೂ ಉತ್ತಮ ಬೆಳೆ ಬೆಳೆಯುವ ರೀತಿ ಸುಸ್ಥಿರ ಕೃಷಿಗೆ ಪೂರಕವಾಗಿ ಅಧ್ಯಯನಗಳು ನಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ವಿವಿಗಳಿಗೆ ಕರೆ ನೀಡಿದ್ದಾರೆ.

CBI Raid: ವಾಲ್ಮೀಕಿ ನಿಗಮ ಹಗರಣ ತನಿಖೆಗೆ ಸಿಬಿಐ ಎಂಟ್ರಿ; ಬಳ್ಳಾರಿ ಕಾರ್ಪೋರೇಟರ್‌ ಮನೆ ಮೇಲೆ ದಾಳಿ

ಬಳ್ಳಾರಿ ಕಾರ್ಪೋರೇಟರ್‌ ಮನೆ ಮೇಲೆ ಸಿಬಿಐ ದಾಳಿ

Valmiki corporation scam: ವಾಲ್ಮೀಕಿ ಹಗರಣಕ್ಕೂ ಮುನ್ನ ಕಾರ್ಪೋರೇಟರ್ ಗೋವಿಂದರಾಜು ಮನೆಯನ್ನು ಮಾಜಿ ಸಚಿವ ನಾಗೇಂದ್ರ ಅವರಿಗೆ ಮಾರಾಟ ಮಾಡಲಾಗಿತ್ತು. ಆದರೆ ಖರೀದಿಯಾಗಿರಲಿಲ್ಲ, ಹಣದ ವಹಿವಾಟು ಆಗಿದ್ದರಿಂದ ಸಿಬಿಐ ದಾಳಿಯಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

DK Shivakumar: ರಾಜಕೀಯವಾಗಿ ಬದುಕಿದ್ದೇನೆ ಎಂದು ತೋರಿಸಿಕೊಳ್ಳಲು ಪ್ರತಾಪ್ ಸಿಂಹ ಯತ್ನ: ಡಿಕೆಶಿ

ರಾಜಕೀಯವಾಗಿ ಬದುಕಿದ್ದೇನೆ ಎಂದು ತೋರಿಸಿಕೊಳ್ಳಲು ಪ್ರತಾಪ್ ಸಿಂಹ ಯತ್ನ

DK Shivakumar: ಪ್ರತಾಪ್ ಸಿಂಹರಿಗೆ ಅವರ ಪಕ್ಷದಲ್ಲಿ ಟಿಕೆಟ್ ಕೊಟ್ಟಿಲ್ಲ. ಹೀಗಾಗಿ ತಾನು ರಾಜಕೀಯವಾಗಿ ಬದುಕಿದ್ದೇನೆ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Movie Ticket Price: 200 ರೂ. ಸಿನಿಮಾ ಟಿಕೆಟ್ ದರದ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಮಲ್ಟಿಪ್ಲೆಕ್ಸ್ ಒಕ್ಕೂಟ; ಹೈಕೋರ್ಟ್‌ಗೆ ಅರ್ಜಿ

ಏಕರೂಪ ಟಿಕೆಟ್ ದರದ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ಮಲ್ಟಿಪ್ಲೆಕ್ಸ್ ಒಕ್ಕೂಟ

ರಾಜ್ಯ ಸರ್ಕಾರ ಏಕರೂಪ ಟಿಕೆಟ್ ದರದ ವಿರುದ್ಧ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ ಹೊಂಬಾಳೆ ಫಿಲ್ಮ್ಸ್‌, ವಿಕೆ ಫಿಲ್ಮ್ಸ್‌ ಮತ್ತು ಮಲ್ಟಿಪ್ಲೆಕ್ಸ್ ಒಕ್ಕೂಟ ಹೈಕೋರ್ಟ್‌ ಮೆಟ್ಟಿಲೇರಿವೆ. ಮಂಗಳವಾರ (ಸೆಪ್ಟೆಂಬರ್‌ 16) ಹೈಕೋರ್ಟ್‌ ಈ ಬಗ್ಗೆ ವಾದ ಆಲಿಸಲಿದೆ. ಏಕರೂಪ ಟಿಕೆಟ್ ದರದ ನಿಯಮ ಪ್ರಕಾರ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್​ನಲ್ಲಿ ಟಿಕೆಟ್​ನ ಮೂಲ ಬೆಲೆ 200 ರೂಪಾಯಿ ದಾಟುವಂತಿಲ್ಲ.

Actor Shabarish Shetty: ನಾನು ಸತ್ತರೆ ಅದಕ್ಕೆ ನಂದ ಕಿಶೋರ್, ಸಾರಾ ಗೋವಿಂದು ಕಾರಣ: ನಟ ಶಬರೀಶ್ ಶೆಟ್ಟಿ ಕಣ್ಣೀರು

ನಾನು ಸತ್ತರೆ ಅದಕ್ಕೆ ನಂದ ಕಿಶೋರ್, ಸಾರಾ ಗೋವಿಂದು ಕಾರಣ

Fraud Case: ನಿರ್ದೇಶಕ ನಂದಕಿಶೋರ್ ಮೇಲೆ ವಂಚನೆ ಆರೋಪ ಮಾಡಿದ್ದ ನಟ ಶಬರೀಶ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದರು. ಅದರೆ, ಸಮಸ್ಯೆ ಪರಿಹರಿಸುವುದಾಗಿ ಸಾರಾ ಗೋವಿಂದು ಅವರು ಹೇಳಿ ಸುಮ್ಮನಾಗಿದ್ದಾರೆ ಎಂದು ಶಬರೀಶ್ ಶೆಟ್ಟಿ ನೋವು ತೋಡಿಕೊಂಡಿದ್ದಾರೆ.

CM Siddaramaiah: ಮತಾಂಧತೆಯ ವರ್ತನೆಯನ್ನು ಎಲ್ಲರೂ ಒಗ್ಗಟ್ಟಾಗಿ ಖಂಡಿಸಬೇಕು- ಸಿಎಂ ಸಿದ್ದರಾಮಯ್ಯ

ಮತಾಂಧತೆಯ ವರ್ತನೆಯನ್ನು ಎಲ್ಲರೂ ಒಗ್ಗಟ್ಟಾಗಿ ಖಂಡಿಸಬೇಕು: ಸಿಎಂ

CM Siddaramaiah: ಸಾಹಿತಿ ಬಾನು ಮುಷ್ತಾಕ್ ಅವರು ಅನ್ಯಧರ್ಮದವರೆಂದು, ದಸರಾ ಉದ್ಘಾಟಿಸಬಾರದೆಂದು ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಸಹಿಷ್ಣುತೆ ಹಾಗೂ ಸಹಬಾಳ್ವೆಯನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಜಾತಿಧರ್ಮ, ವರ್ಗ ವ್ಯವಸ್ಥೆಯನ್ನು ಮೀರಿ, ಸಮಾನತೆ ನೆಲೆಸಬೇಕೆಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಪಟ್ಟಭದ್ರಹಿತಾಸಕ್ತಿಗಳು, ಮತಾಂಧತೆಯ ವರ್ತನೆಯನ್ನು ಎಲ್ಲರೂ ಒಗ್ಗಟ್ಟಾಗಿ ಖಂಡಿಸಬೇಕು. ಚರ್ಚೆಯೇ ಪ್ರಜಾಪ್ರಭುತ್ವದ ಜೀವಾಳ. ಜನರನ್ನು ತಪ್ಪದಾರಿಗೆಳೆಯುವ ಪ್ರಯತ್ನಗಳು ಖಂಡನೀಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೆ.16,17 ರಂದು ವಿದ್ಯುತ್‌ ವ್ಯತ್ಯಯ

ಬೆಂಗಳೂರಿನ ಈ ಪ್ರದೇಶಗಳಲ್ಲಿ ಸೆ.16,17 ರಂದು ವಿದ್ಯುತ್‌ ವ್ಯತ್ಯಯ

Bengaluru Power Cut: ಕೆಪಿಟಿಸಿಎಲ್‌ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಆಡುಗೋಡಿ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಸೆ.16 ರಂದು ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

Actress Tara: ಹಿರಿಯ ನಟ, ರಾಜಕಾರಣಿ ಅಂಬರೀಷ್‌ಗೂ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿ; ತಾರಾ ಮನವಿ

ಅಂಬರೀಷ್‌ಗೂ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲು ತಾರಾ ಮನವಿ

Actor Ambareesh: ನಟ ಮತ್ತು ರಾಜಕಾರಣಿ ಅಂಬರೀಷ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಹಿರಿಯ ನಟಿ ತಾರಾ ಅನುರಾಧ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ತಾರಾ ಪತ್ರ ಬರೆದು, ಅಂಬರೀಷ್‌ ಅವರಿಗೂ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕೆಂದು ಆಗ್ರಹಿಸಿದ್ದಾರೆ.

Devanahalli toll plaza: ನಾನು ಕನ್ನಡ ಮಾತನಾಡಲ್ಲ; ದೇವನಹಳ್ಳಿ ಟೋಲ್‌ಗೇಟ್‌ ಮ್ಯಾನೇಜರ್‌ ದರ್ಪ!

ನಾನು ಕನ್ನಡ ಮಾತನಾಡಲ್ಲ; ದೇವನಹಳ್ಳಿ ಟೋಲ್‌ಗೇಟ್‌ ಮ್ಯಾನೇಜರ್‌ ದರ್ಪ!

Language row: ಟೋಲ್‌ಗೇಟ್‌ ಮ್ಯಾನೇಜರ್‌ ಕನ್ನಡ ಮಾತನಾಡಲು ನಿರಾಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮ್ಯಾನೇಜರ್‌ ತೆಲುಗು ಭಾಷಿಕನಾಗಿದ್ದು, ಟೋಲ್‌ಗೇಟ್‌ನಲ್ಲಿ ಕೆಲಸಕ್ಕೆ ಬಂದು ಒಂದು ವರ್ಷವಾದರೂ ಮ್ಯಾನೇಜರ್ ಕನ್ನಡ ಕಲಿಯಲು ಸಹ ಆಸಕ್ತಿ ತೋರಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

MB Patil: ರಾಜ್ಯದಲ್ಲಿ ಜಪಾನ್‌ ಕಂಪನಿಗಳಿಂದ 4,000 ಕೋಟಿ ರೂ. ಹೂಡಿಕೆ ಖಾತ್ರಿ: ಎಂ.ಬಿ. ಪಾಟೀಲ್‌

ಜಪಾನ್‌ ಕಂಪನಿಗಳಿಂದ 4,000 ಕೋಟಿ ರೂ. ಹೂಡಿಕೆ ಖಾತ್ರಿ: ಎಂ.ಬಿ. ಪಾಟೀಲ್‌

MB Patil: ಜಪಾನ್‌ ದೇಶದ ವಿವಿಧ ಉದ್ಯಮಗಳು ರಾಜ್ಯದಲ್ಲಿ 4,000 ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡುವುದು ಖಾತ್ರಿಯಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Tiptur News: ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಕ್ರೀಡಾಕೂಟ

ತಿಪಟೂರಿನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಕ್ರೀಡಾಕೂಟ

Tiptur News: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಮೆಟ್ರಿಕ್ ನಂತರ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತ ತಂಡಗಳಿಗೆ ನಗದು ಬಹುಮಾನ, ಟ್ರೋಫಿ ವಿತರಿಸಲಾಗಿದೆ.

Yadgir News: ಯಾದಗಿರಿಯಲ್ಲಿ ಜಲ ಜೀವನ್ ಮಿಷನ್ ಹೆಸರಲ್ಲಿ ಕೋಟ್ಯಂತರ ರೂ. ಅಕ್ರಮ; ಐವರ ವಿರುದ್ಧ ಎಫ್‌ಐಆರ್‌

ಯಾದಗಿರಿಯಲ್ಲಿ ಜಲ ಜೀವನ್ ಮಿಷನ್ ಹೆಸರಲ್ಲಿ ಕೋಟ್ಯಂತರ ರೂ. ಅಕ್ರಮ

Jal Jeevan Mission scam: ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದಲ್ಲಿ ಜೆಜೆಎಂ ಅವ್ಯವಹಾರ ನಡೆದಿದೆ. ನೀರಿನ ದಾಹ ನಿಗಿಸಬೇಕಾದ ಅಧಿಕಾರಿಗಳಿಂದಲೇ ಹಣ ಗುಳುಂ ಆಗಿದೆ. ಹೀಗಾಗಿ ಆರ್‌ಡಬ್ಲ್ಯುಎಸ್‌ ಇಇ ಸೇರಿ ಐವರ ವಿರುದ್ಧ ಯಾದಗಿರಿ ನಗರ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.

Loading...