ಹೆಚ್.ಎನ್.ವ್ಯಾಲಿ ನೀರು ವಿಷಕನ್ಯೆಯ ರೀತಿ ಬಳಕೆಗೆ ಬಂದವರ ಮುಗಿಸುತ್ತದೆ
ರಾಜರ ಆಳ್ವಿಕೆಯಲ್ಲಿ ಶತೃಗಳನ್ನು ಸಂಹರಿಸಲು ವಿಷಕನ್ಯೆಯ ಬಳಸುತ್ತಿದ್ದರು. ಆದರೆ ಸ್ವಾತಂತ್ರ್ಯ ನಂತರದ ಪ್ರಜಾಪ್ರಭುತ್ವದಲ್ಲಿ ನಮ್ಮನ್ನಾಳುವ ಸರಕಾರಗಳು, ಜನತೆ ಕುಡಿಯಲು ಶುದ್ಧ ನೀರು ಕೊಡಿ ಎಂದು ಕೇಳಿದರೆ, ಬೆಂಗಳೂರಿನ ಕೊಳಚೆ ನೀರನ್ನು ಎರಡು ಹಂತದಲ್ಲಿ ಶುದ್ಧೀಕರಿಸಿ ಕೆರೆಗಳಿಗೆ ಹರಿಸುತ್ತಿವೆ. ಅದನ್ನೂ ಕೂಡ ಪರಿಪೂರ್ಣವಾಗಿ ಮಾಡದ ಕಾರಣ ವಿಷದ ನೀರು ಕರೆಗಳಿಗೆ ಬಂದು ತುಂಬಿದೆ