ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Pahalgam Terror Attack: ಪಹಲ್ಗಾಮ್ ದಾಳಿ ಕೇಂದ್ರದ ಪೂರ್ವ ನಿಯೋಜಿತ ಕೃತ್ಯ ಎಂದ ವ್ಯಕ್ತಿ ವಿರುದ್ಧ ಕೇಸ್‌

ಉಗ್ರರ ದಾಳಿ ಕೇಂದ್ರದ ಪೂರ್ವ ನಿಯೋಜಿತ ಕೃತ್ಯ ಎಂದ ವ್ಯಕ್ತಿ ವಿರುದ್ಧ ಕೇಸ್‌

Pahalgam Terror Attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಏಪ್ರಿಲ್ 22ರಂದು ಉಗ್ರರು ಪ್ರವಾಸಿಗರ ಮೇಲೆ ದಾಳಿ ಮಾಡಿದ್ದರು. ಆದರೆ, ಇದು ಬಿಹಾರ ಚುನಾವಣೆಯಲ್ಲಿ ಹಿಂದೂ ಮತಗಳ ಕ್ರೋಡೀಕರಿಸಲು ಮೋದಿ ಸರ್ಕಾರದ ಪೂರ್ವ ನಿಯೋಜಿತ ಕೃತ್ಯ ಎಂದು ವ್ಯಕ್ತಿ ಹೇಳಿದ್ದ. ಯೂಟ್ಯೂಬ್ ಚಾನೆಲ್‌ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ಹಿನ್ನೆಲೆಯಲ್ಲಿ ವ್ಯಕ್ತಿ ವಿರುದ್ದ ಪ್ರಕರಣ ದಾಖಲಾಗಿದೆ.

Pralhad Joshi: ದೇಶದಲ್ಲಿ ಆಹಾರ ಧಾನ್ಯ, ಅಗತ್ಯ ವಸ್ತುಗಳ ಕೊರತೆ ಇಲ್ಲ: ಜೋಶಿ

ದೇಶದಲ್ಲಿ ಆಹಾರ ಧಾನ್ಯ, ಅಗತ್ಯ ವಸ್ತುಗಳ ಕೊರತೆ ಇಲ್ಲ: ಜೋಶಿ

Pralhad Joshi: ರಾಷ್ಟ್ರೀಯ ಭದ್ರತೆ ಹಿನ್ನೆಲೆಯಲ್ಲಿ ಇ-ಕಾಮರ್ಸ್‌ ವೇದಿಕೆಗಳಲ್ಲಿ ಕಡಿಮೆ ಶಕ್ತಿ, ಅತಿ ಕಡಿಮೆ ಫ್ರಿಕ್ವೆನ್ಸಿ ಉಳ್ಳ ವಾಕಿ ಟಾಕಿ ಸಾಧನ ಮಾರಾಟ ಮಾಡದಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Election: ಜಿ.ಪಂ, ತಾಪಂ ಚುನಾವಣೆಗಾಗಿ ಶಬರಿಯಂತೆ ಕಾಯುತ್ತಿರುವ ಸ್ಪರ್ಧಾಕಾಂಕ್ಷಿಗಳು

ಜಿ.ಪಂ, ತಾಪಂ ಚುನಾವಣೆಗಾಗಿ ಶಬರಿಯಂತೆ ಕಾಯುತ್ತಿರುವ ಸ್ಪರ್ಧಾಕಾಂಕ್ಷಿಗಳು

ಪಂಚಾಯತ್ ಚುನಾವಣೆಗಳ ವಿಳಂಬದಿAದ ಗ್ರಾಮೀಣಾಭಿವೃದ್ದಿಗೆ ಕೇಂದ್ರ ಸರಕಾರ ನೀಡಬೇ ಕಿರುವ ಸಹಾಯಧನ ಬಿಡುಗಡೆಯಾಗಿಲ್ಲ ಎಂಬ ಅಂಶ ಕೇಳಿಬಂದಿದೆ. ಅಲ್ಲದೆ ಸರಿಯಾದ ಕಾಲಕ್ಕೆ ಪಂಚಾ ಯಿತಿ ಚುನಾವಣೆ ನಡೆಸುವುದು ಸಾಂವಿಧಾನಿಕ ಕರ್ತವ್ಯವಾಗಿದ್ದು ಇದರ ಉಲ್ಲಂಘನೆ ಯಾಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯಲ್ಲಿ ಚುನಾವಣೆ ನಡೆದರೆ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆಯಿಂದ ಎಲೆಕ್ಷನ್ ಬಾಡಿ ಸಿಗುತ್ತದೆ

MLA C B Suresh Babu: ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಮನೆ ಬಾಗಿಲಿಗೆ ಬಂದಿದ್ದೇನೆ: ಶಾಸಕ ಸಿ.ಬಿ.ಸುರೇಶ್ ಬಾಬು

ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ಮನೆಬಾಗಿಲಿಗೆ ಬಂದಿದ್ದೇನೆ

ನಮ್ಮ ಕ್ಷೆತ್ರದ ಜನರಿಗಾಗಿ ಅವರ ಸಮಸ್ಯೆಗಳಿಗಾಗಿ ನಡೆಯುತ್ತಿದ್ದು ನಮ್ಮ ಕ್ಷೇತ್ರದ  ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಬೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಸಂಬಂಧ ಪಟ್ಟ ಅಧಿಕಾರಿಗಳಿಂದ ಪರಿಹಾರವನ್ನು ಕೊಡಿಸುವ ಉದ್ದೇಶಹೊಂದಿದೆ ಎಂದ ಅವರು ಈ ಬಾಗದ ಜನರ ಬೇಡಿಕೆಯಾದ ಬಸ್ ಸೌಲಭ್ಯವನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗು ವುದು

Sri Kshetra Horanadu: ಶ್ರೀ ಕ್ಷೇತ್ರ ಹೊರನಾಡಿನಲ್ಲಿ 5ನೇ ಧರ್ಮಕರ್ತ ಡಿ.ಬಿ. ವೆಂಕಟಸುಬ್ಬಾ ಜೋಯಿಸ್ ದಂಪತಿ ಪುತ್ಥಳಿ ಅನಾವರಣ

ಹೊರನಾಡಿನಲ್ಲಿ ಡಿ.ಬಿ. ವೆಂಕಟಸುಬ್ಬಾ ಜೋಯಿಸ್ ದಂಪತಿ ಪುತ್ಥಳಿ ಅನಾವರಣ

Sri Kshetra Horanadu: ಶ್ರೀ ಕ್ಷೇತ್ರ ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂಣೇಶ್ವರಿ ದೇವಸ್ಥಾನದಲ್ಲಿ ಕ್ಷೇತ್ರದ 5ನೇ ಧರ್ಮಕರ್ತರಾದ ದಿ. ಡಿ.ಬಿ. ವೆಂಕಟಸುಬ್ಬಾ ಜೋಯಿಸ್ ಮತ್ತು ದಿ. ನರಸಮ್ಮ ವೆಂಕಟಸುಬ್ಬಾ ಜೋಯಿಸ್ ಅವರ ಕಂಚಿನ ಪುತ್ಥಳಿಯನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ಅವರು ಅನಾವರಣ ಮಾಡಿದರು.

Chikkaballapur News: ಹಾಲುಮತ ಸಮುದಾಯದ ಮಕ್ಕಳು ವಿದ್ಯಾಭ್ಯಾಸಕ್ಕೆ ಒತ್ತು ನೀಡಿದರೆ ಜಗತ್ತನ್ನು ಬೆಳಗುವರು : ಸಿದ್ಧರಾಮಾನಂದಪುರಿ ಸ್ವಾಮೀಜಿ

ಹಾಲುಮತ ಸಮುದಾಯದ ಮಕ್ಕಳು ವಿದ್ಯಾಭ್ಯಾಸಕ್ಕೆ ಒತ್ತು ನೀಡಲಿ

ಹಾಲುಮತ ಸಮುದಾಯದ ಮಕ್ಕಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳುವ ಪರಿಪಾಠ ಬಿಡಬೇಕು. ಹೊರಗಿನ ಪ್ರಪಂಚದಲ್ಲಿ ಅವರು ಉತ್ತಮವಾದ ಶಿಕ್ಷಣ ಪಡೆಯಬೇಕು. ಆ ಮೂಲಕ ನಮ್ಮ ಮಕ್ಕಳು ಉದ್ದಿಮೆದಾರರಾಗಿ, ರಾಜಕಾರಣಿಗಳಾಗಿ, ವ್ಯಾಪಾರಿಗಳಾಗಿ ಸಮಾಜವನ್ನು ಮುನ್ನಡೆಸಿ ಅಲ್ಲಿ ಮನೆಯ ಜ್ಯೋತಿಯನ್ನು ಬೆಳಗಬೇಕು. ಸಂಬಂಧಗಳಿಗೆ ನವಚೈತನ್ಯ ನೀಡುವ ಬೀರಪ್ಪನ ಜಾತ್ರೆ ವರ್ಷದಿಂದ ವರ್ಷಕ್ಕೆ ಸುಧಾರಣೆ ಆಗಲಿ

MLA K H Puttaswamy Gowda: ಅದ್ಧೂರಿಯಾಗಿ ನಡೆದ ಮಾರಮ್ಮ ದೇವಿಯ ಬೆಳ್ಳಿ ಹಬ್ಬದ ವಾರ್ಷಿಕೋತ್ಸವ

ಅದ್ಧೂರಿಯಾಗಿ ನಡೆದ ಮಾರಮ್ಮ ದೇವಿಯ ಬೆಳ್ಳಿ ಹಬ್ಬದ ವಾರ್ಷಿಕೋತ್ಸವ

ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ದೇವಾಲಯದ ಧಾರ್ಮಿಕ ಪೂಜಾಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿ ಗ್ರಾಮ ದೇವರ ಆರಾಧನೆ, ವಾರ್ಷಿಕೋತ್ಸವ ಇತ್ಯಾದಿಗಳಿಂದ ಗ್ರಾಮಕ್ಕೆ ಶುಭವಾಗಲಿದೆ. ವೈಮನಸ್ಸು ದೂರವಾಗಿ ಶಾಂತಿ ನೆಲಸಲು ಸಹಕಾರಿ ಅಗುವುದರ ಜೊತೆಗೆ ಮಾನವ ಸಂಬಂಧಗಳು ಬೆಸೆಯಲು ಸಾಧ್ಯವಾಗುತ್ತದೆ

Karnataka Weather: ಮುಂದಿನ 3 ದಿನ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ; ಯೆಲ್ಲೋ ಅಲರ್ಟ್‌ ಘೋಷಣೆ

ಮುಂದಿನ 3 ದಿನ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ

Karnataka Weather: ಮುಂದಿನ 5 ದಿನಗಳವರೆಗೆ ಕರ್ನಾಟಕದ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆಗಳಿಲ್ಲ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಮಧ್ಯಮ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

Sri Kshetra Horanadu: ಉಗ್ರರ ನಿಗ್ರಹಕ್ಕೆ ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಿಂದ ಭಾರತೀಯ ಸೇನೆಗೆ 10 ಲಕ್ಷ ದೇಣಿಗೆ

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಿಂದ ಭಾರತೀಯ ಸೇನೆಗೆ 10 ಲಕ್ಷ ದೇಣಿಗೆ

Sri Kshetra Horanadu: ಶ್ರೀ ಕ್ಷೇತ್ರ ಹೊರನಾಡಿನ 5ನೇ ಧರ್ಮಕರ್ತರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಧರ್ಮಕರ್ತ ಭೀಮೇಶ್ವರ ಜೋಶಿ ಅವರು, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಅವರಿಗೆ 10 ಲಕ್ಷ ರೂ.ಗಳ ಚೆಕ್ ಅನ್ನು ಹಸ್ತಾಂತರಿಸಿದ್ದಾರೆ.

Malleshwaram Manipal Hospital: ಮಲ್ಲೇಶ್ವರಂ ಮಣಿಪಾಲ್ ಅಸ್ಪ್ರತೆಯಲ್ಲಿ ಕ್ಯಾತ್ ಲ್ಯಾಬ್ ಉದ್ಘಾಟನೆ

ಮಣಿಪಾಲ್ ಆಸ್ಪತ್ರೆ ಅತ್ಯಾಧುನಿಕ CATH ಪ್ರಯೋಗಾಲಯ ಉದ್ಘಾಟನೆ

ಮಲ್ಲೇಶ್ವರಂ ಮಣಿಪಾಲ್ ಆಸ್ಪತ್ರೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ ಬದ್ಧತೆಯನ್ನು ಹೆಚ್ಚಿಸಿದೆ. ಆಸ್ಪತ್ರೆಯ CATH ಪ್ರಯೋಗಾಲಯವು ರೋಗಿಗಳ ಹೆಚ್ಚುತ್ತಿರುವ ಬೇಡಿಕೆ ಮತ್ತು ಹೃದ್ರೋಗ ಪ್ರಕರಣಗಳಲ್ಲಿನ ಗಮನಾರ್ಹ ಏರಿಕೆಯನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

Mothers Day: ತನ್ನ ಮಳಿಗೆಗಳಲ್ಲಿ ಪರ್ಫ್ಯೂಮ್ ತಯಾರಿಕಾ ಕಾರ್ಯಕ್ರಮ ಆಯೋಜಿಸುವ ಮೂಲಕ ಅದ್ದೂರಿಯಾಗಿ ಅಮ್ಮಂದಿರ ದಿನ ಆಚರಿಸಲಿರುವ ಟೈಟಾನ್ ವರ್ಲ್ಡ್‌

ಟೈಟಾನ್ ಮಳಿಗೆಗಳಲ್ಲಿ ಉಡುಗೊರೆ ಸಂಭ್ರಮ ಆಚರಿಸಿ, ಅಚ್ಚರಿಪಡಿ

ಅಮ್ಮಂದಿರನ್ನು ಆ ದಿನ ಮಳಿಗೆಗೆ ಕರೆದುಕೊಂಡು ಬಂದು ಆಕೆಗೆ ಅವಿಸ್ಮರಣೀಯ ಉಡುಗೊರೆ ನೀಡಲು ಸಂಸ್ಥೆಯು ಆಹ್ವಾನ ನೀಡಿದೆ. ಮೇ 10 ಮತ್ತು 11ರಂದು ಭಾರತದಾದ್ಯಂತ ಇರುವ 163ಕ್ಕೂ ಹೆಚ್ಚು ಟೈಟಾನ್ ವರ್ಲ್ಡ್ ಮಳಿಗೆಗಳಿಗೆ ಗ್ರಾಹಕರು ತಮ್ಮ ತಾಯಂದಿರೊಂದಿಗೆ ಆಗಮಿಸಿ ಅಲ್ಲಿ ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿಕೊಳ್ಳಬಹುದಾಗಿದೆ. ಚಿರ ಬಾಂಧವ್ಯವನ್ನು ಸಂಭ್ರಮಿಸಲು ಸಂಸ್ಥೆಯು ವಿಶೇಷ ಪರ್ಫ್ಯೂಮ್ ತಯಾರಿಕಾ ಕಾರ್ಯಕ್ರಮವನ್ನು ಆಯೋಜಿಸಿದೆ

Operation sindoor: ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್; ದೂರಿನ ಬೆನ್ನಲ್ಲೇ ಯೂಟರ್ನ್!

ವಿಜಯಪುರದಲ್ಲಿ ಪಾಕ್ ಪರ ವಿದ್ಯಾರ್ಥಿನಿ ಪೋಸ್ಟ್

Operation sindoor: ವಿಜಯಪುರ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ದಂತ ವೈದ್ಯಕೀಯ ವಿದ್ಯಾರ್ಥಿನಿ ಪಾಕ್ ಪರ ಪೋಸ್ಟ್ ಹಾಕಿದ್ದಾಳೆ. ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ವಿದ್ಯಾರ್ಥಿನಿ ಕ್ಷಮೆಯಾಚಿಸಿ, ತನ್ನಿಂದ ತಪ್ಪಾಗಿರುವುದಾಗಿ ಒಪ್ಪಿಕೊಂಡಿದ್ದಾಳೆ.

Chikkanayakanahalli (Tumkur) News: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿರಂತರ ಅಧ್ಯಯನದಿಂದ ಸಾಧನೆ ಸಾಧ್ಯ: ಶಾಸಕ ಸಿ.ಬಿ.ಸುರೇಶ್ ಬಾಬು

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಿರಂತರ ಅಧ್ಯಯನ ದಿಂದ ಸಾಧನೆ ಸಾಧ್ಯ

ಪ್ರವೇಶ ಬಯಸಿ ತರಬೇತಿ ಪಡೆಯಲು ಬಂದಿದ್ದೀರಿ ಈ ಒಂದು ತರಬೇತಿ ಶಿಬಿರದಲ್ಲಿ ಎಲ್ಲಾ ಪರಿಕರ ಗಳನ್ನು ನಿಮಗೆ ಪ್ರಾತ್ಯಕ್ಷಿಕೆಯ ರೂಪದಲ್ಲಿ ಲಭ್ಯವಾಗಿ ಇದರ ಸಾಕಷ್ಟು ಮೌಲ್ಯವನ್ನು ಪಡೆದಿದ್ದೀರಿ ಇದರಿಂದ ಮುಂದಿನ ಶೈಕ್ಷಣಿಕ ಪ್ರಗತಿಗೆ 10 ಹಲವು ದಾರಿಗಳನ್ನು ಕಲ್ಪಿಸಿ ಕೊಡುತ್ತದೆ ಇದರಿಂದ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ

Hombale Films: ʼಕಾಂತಾರ ಚಾಪ್ಟರ್‌ 1ʼ ಚಿತ್ರದ ಜೂನಿಯರ್‌ ಆರ್ಟಿಸ್ಟ್‌ ಸಾವು; ಸ್ಪಷ್ಟನೆ ನೀಡಿದ ಹೊಂಬಾಳೆ ಫಿಲ್ಮ್ಸ್‌

ಜೂನಿಯರ್‌ ಆರ್ಟಿಸ್ಟ್‌ ಸಾವು; ಹೊಂಬಾಳೆ ಫಿಲ್ಮ್ಸ್‌ನಿಂದ ಸ್ಪಷ್ಟನೆ

Kantara Chapter 1: ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಪ್ರೊಡಕ್ಷನ್‌ ಕಂಪನಿ ಹೊಂಬಾಳೆ ಫಿಲ್ಮ್ಸ್‌ ʼಕಾಂತಾರ ಚಾಪ್ಟರ್‌ 1ʼ ಚಿತ್ರದ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಈ ಸಿನಿಮಾದ ಚಿತ್ರೀಕರಣ ಕುಂದಾಪುರದಲ್ಲಿ ನಡೆಯುತ್ತಿದೆ. ಈ ಮಧ್ಯೆ ಜೂನಿಯರ್‌ ಆರ್ಟಿಸ್ಟ್‌ ಒಬ್ಬರು ಮೃತಪಟ್ಟಿದ್ದಾರೆ. ಈ ಬಗ್ಗೆ ಇದೀಗ ಹೊಂಬಾಳೆ ಫಿಲ್ಮ್ಸ್‌ ನೀಡಿದೆ.

Chikkaballapur News: ಮೇ 12 ರಂದು ಶ್ರೀ ಭಗವಾನ್ ಬುದ್ಧ ಜಯಂತಿ

ಮೇ 12 ರಂದು ಶ್ರೀ ಭಗವಾನ್ ಬುದ್ಧ ಜಯಂತಿ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಬಳ್ಳಾಪುರ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಭಗವಾನ್ ಬುದ್ಧ ಜಯಂತಿಯನ್ನು ಮೇ 12 ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆ ಯನ್ನು ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಸುಧಾಕರ್  ಅವರು ನೆರವೇರಿಸಲಿದ್ದಾರೆ

Chikkaballapur News: ಜಂಗಮಕೋಟೆ ಕೈಗಾರಿಕಾ ಪ್ರದೇಶಕ್ಕೆ ಕಂಠಕವಾದ ಸಂಘಟನೆಗಳ ಜಟಾಪಟಿ

ಶಿಡ್ಲಘಟ್ಟ ತಾಲೂಕಿಗೆ ಕೈತಪ್ಪಲಿದೆಯೇ ಪ್ರಥಮ ಕೈಗಾರಿಕಾ ಪ್ರದೇಶದ ಅವಕಾಶ

ಜಂಗಮಕೋಟೆ ಹೋಬಳಿಯಲ್ಲಿ ತಲೆಯೆತ್ತಲಿರುವ ಡೀಪ್‌ಟೆಕ್ ಕೈಗಾರಿಕಾ ವಲಯಕ್ಕೆ ಭೂಮಿ ಬಿಟ್ಟುಕೊಡುವಲ್ಲಿ ಮುಂದುವರೆದಿರುವ ರೈತಸಂಘಟನೆಗಳ ಜಟಾಪಟಿ ಸದ್ಯ ಮುಗುಯುವ ಲಕ್ಷಣ ಕಾಣುತ್ತಿಲ್ಲ.ರೈತ ಸಂಘಟನೆಗಳ ಪರ ವಿರೋಧದ ಪ್ರಬಲ ಅಲೆಗೆ ಸಿಕ್ಕು ತಾಲೂಕಿನ ಪ್ರಥಮ ಕೈಗಾರಿಕಾ ವಲಯ ನಿರ್ಮಾಣವು ಇಲ್ಲಿಂದ ಕೈತಪ್ಪಿದರೂ ಅಚ್ಚರಿಪಡು ವಂತಿಲ್ಲ ಎಂಬ ಸನ್ನಿವೇಶ ನಿರ್ಮಾಣ ವಾಗಿದೆ.

Chikkaballapur News: ಗೌರಿಬಿದನೂರಿನ ಜಿಟಿಟಿಸಿ ಸರ್ಕಾರಿ ಉಪಕರಣಗಾರ, ತರಬೇತಿ ಕೇಂದ್ರದಿಂದ ಮನವಿ

ಕೌಶಲ್ಯಾಧಾರಿತ ತರಬೇತಿ ಪಡೆಯಲು ವಿದ್ಯಾರ್ಥಿಗಳಿಗೆ ಸಲಹೆ

ಸರ್ಕಾರಿ ಉಚಿತ ಅಲ್ಪಾವಧಿ ಕೌಶಾಲ್ಯಾಭಿವೃದ್ಧಿ ತರಬೇತಿಗಳಲ್ಲಿ ಟರ್ನರ್, ಫಿಟ್ಟರ್ ಸೇರಿದಂತೆ ಇತರೆ ತರಬೇತಿಗಳನ್ನು ನೀಡಲಾಗುತ್ತದೆ. ಈ ಸಂಸ್ಥೆ ಕಾಲೇಜು ಸ್ಥಾಪನೆಯಾಗಿದ್ದು 1972ರಲ್ಲಿ, ಈಗಾಗಲೇ 50 ವರ್ಷ ಪೂರೈಸಿದೆ, ರಾಜ್ಯದಲ್ಲಿ 33 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, ಗೌರಿಬಿದ ನೂರಿನಲ್ಲಿ 2016 ರಲ್ಲಿ ಸಂಸ್ಥೆ ಆರಂಭವಾಗಿದ್ದು, 2017ರಿಂದ ದೀರ್ಘಾವಧಿ ಕೋರ್ಸುಗಳನ್ನು ನಡೆಸಲಾಗುತ್ತಿದೆ

Operation Sindoor: ಯಕ್ಷಗಾನದಲ್ಲೂ ಮಿಂಚಿದ ಆಪರೇಷನ್ ಸಿಂದೂರ; ಕಲಾವಿದರ ಸಂಭಾಷಣೆಯ ವಿಡಿಯೋ ವೈರಲ್‌!

ಯಕ್ಷಗಾನದಲ್ಲೂ ಮಿಂಚಿದ ಆಪರೇಷನ್ ಸಿಂದೂರ

Operation Sindoor: ಉಡುಪಿಯ ಪಾವಂಜೆ ಮೇಳದ ಯಕ್ಷಗಾನದಲ್ಲಿ ಭಾರತದ ʼಆಪರೇಷನ್ ಸಿಂದೂರʼದ ಬಗ್ಗೆ ಕಲಾವಿದರ ಸಂಭಾಷಣೆ ಪ್ರೇಕ್ಷಕರ ಗಮನ ಸೆಳೆದಿದೆ. ಈ ವಿಡಿಯೋವನ್ನು ಶಾಸಕ ಸುನಿಲ್ ಕುಮಾರ್ ಅವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Chikkaballapur News: ಮಂಚೇನಹಳ್ಳಿ ಶೂಟೌಟ್ ಪ್ರಕರಣದ ಹಿಂದಿನ ಸೂತ್ರದಾರಿ ಹುಡುಕಿ: ಎಸ್.ಆರ್.ಹಿರೇಮಠ್ ಸೂಚನೆ

ಮಂಚೇನಹಳ್ಳಿ ಶೂಟೌಟ್ ಪ್ರಕರಣದ ಹಿಂದಿನ ಸೂತ್ರದಾರಿ ಹುಡುಕಿ

ಜಿಲ್ಲೆಯಲ್ಲಿ ರೈತಸಂಘಟನೆಗಳು ಪ್ರಕೃತಿಯ ಮೂಲಗಳಾದ ಬೆಟ್ಟಗುಡ್ಡ, ನೆಲ, ಜಲ ಗೋಕುಂಟೆ, ಗೋ ಕಾಡುಗಳನ್ನು ಉಳಿಸಲು ಮುಂದಾಗಿರುವ ಸಂದರ್ಭದಲ್ಲಿ ಹಾಡಹಗಲೇ ಕ್ವಾರಿಯ ಮಾಲಿಕನ ಸಂಬಂಧಿ ಈ ನೆಲದ ಕಾನೂನಿನಂತೆ ನಡೆದುಕೊಳ್ಳದೆ ತನ್ನ ದುಷ್ಟಕೂಟವನ್ನು ಕಟ್ಟಿಕೊಂಡು ರಸ್ತೆ ನಿರ್ಮಾಣಕ್ಕೆ ಅಡ್ಡಿಪಡಿಸಿದ ರೈತರ ಮೇಲೆ ಗುಂಡಿನ ದಾಳಿ ನಡೆಸಿರುವುದು ಅಕ್ಷಮ್ಯ. ಇಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ ಕಂದಾಯ ಮತ್ತು ಗಣಿ ಇಲಾಖೆ ಅಧಿಕಾರಿಗಳೇ ಇದಕ್ಕೆ ನೇರ ಹೊಣೆ ಹೊರಬೇಕು

Bengaluru airport: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್‌; ಪ್ರಯಾಣಿಕರಿಗೆ 3 ಗಂಟೆ ಮುಂಚೆ ಆಗಮಿಸಲು ಸೂಚನೆ

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್‌

Bengaluru airport: ಪ್ರಯಾಣಿಕರು ತಮ್ಮ ವಿಮಾನ ನಿರ್ಗಮನದ ಕನಿಷ್ಠ ಮೂರು ಗಂಟೆಗಳ ಮುನ್ನ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೂಲಕ, ಚೆಕ್-ಇನ್, ಭದ್ರತಾ ತಪಾಸಣೆ ಮತ್ತು ಬೋರ್ಡಿಂಗ್ ಪ್ರಕ್ರಿಯೆಯನ್ನು ಸುಗಮವಾಗಿ ಕೈಗೊಳ್ಳಬಹುದು ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.

Karnataka High Court: ಪಾಕಿಸ್ತಾನದ ಮಕ್ಕಳನ್ನು ಮರಳಿ ಕಳಿಸುವ ಸರಕಾರದ ಆದೇಶದಲ್ಲಿ ಮಧ್ಯಪ್ರವೇಶಕ್ಕೆ ಹೈಕೋರ್ಟ್ ನಕಾರ

ಪಾಕ್‌ ಮಕ್ಕಳನ್ನು ಮರಳಿ ಕಳಿಸುವ ಸರಕಾರದ ಆದೇಶ ತಡೆಯಲು ಹೈಕೋರ್ಟ್ ನಕಾರ

ತಮ್ಮ ವಿರುದ್ಧ ಬವಲವಂತದ ಕ್ರಮ ಕೈಗೊಳ್ಳದಂತೆ ಸರಕಾರಕ್ಕೆ ನಿರ್ದೇಶನ ಕೋರಿ ಭಾರತೀಯ ತಾಯಿ ಮತ್ತು ಪಾಕಿಸ್ತಾನದ ತಂದೆಗೆ ಜನಿಸಿದ ಪಾಕಿಸ್ತಾನದ ಮೂವರು ಅಪ್ರಾಪ್ತ ಮಕ್ಕಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಕರ್ನಾಟಕ ಹೈಕೋರ್ಟ್‌ (Karnataka High Court) ಆದೇಶಿಸಿದೆ.

heranje-krishna-bhat: ಸಾಹಿತಿ, ಸಾಂಸ್ಕೃತಿಕ ಸಂಘಟಕ ಹೆರಂಜೆ ಕೃಷ್ಣ ಭಟ್‌ ನಿಧನ

ಸಾಹಿತಿ, ಸಾಂಸ್ಕೃತಿಕ ಸಂಘಟಕ ಹೆರಂಜೆ ಕೃಷ್ಣ ಭಟ್‌ ನಿಧನ

ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಸಂಸ್ಕೃತ ಉಪನ್ಯಾಸಕರು, ವಿಭಾಗ ಮುಖ್ಯಸ್ಥರಾಗಿ ಸುದೀರ್ಘ ಅವಧಿ ಸೇವೆ ಸಲ್ಲಿಸಿದ್ದ ಭಟ್ಟರು (Heranje Krishna Bhat) ನಿವೃತ್ತಿಯ ಬಳಿಕ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ನಿರ್ದೇಶಕರಾಗಿ ಅನೇಕ ವರ್ಷಗಳ ಕಾಲ ಮಹತ್ವದ ಸೇವೆ ಸಲ್ಲಿಸಿದ್ದರು.

Treason: ಕರ್ನಾಟಕದಲ್ಲಿ ಪಾಕ್‌ ಪ್ರೇಮಿ; ವಿಜಯಪುರದ ವಿದ್ಯಾರ್ಥಿನಿಯಿಂದ ಪಾಕ್​ ಪರ ಪೋಸ್ಟ್​​, ದೂರು ದಾಖಲು

ವಿಜಯಪುರದ ವಿದ್ಯಾರ್ಥಿನಿಯಿಂದ ಪಾಕ್​ ಪರ ಪೋಸ್ಟ್​​, ದೂರು ದಾಖಲು

ಆಪರೇಷನ್ ಸಿಂದೂರದ ಮೂಲಕ ಪಾಕಿಸ್ತಾನಕ್ಕೆ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ. ಕರ್ನಾಟಕದಲ್ಲೂ ಕೂಡ ಕೆಲ ಪಾಕ್‌ ಪ್ರೇಮಿಗಳು ಮತ್ತೆ ಬಾಲ ಬಿಚ್ಚುತ್ತಿದ್ದಾರೆ. ವಿಜಯಪುರ ಮೂಲದ ಮೆಡಿಕಲ್‌ ವಿದ್ಯಾರ್ಥಿನಿಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ ಪಾಕ್‌ ಪರ ಪೋಸ್ಟ್‌ ಹಂಚಿಕೊಂಡಿರುವುದು ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯ ವಿರುದ್ದ ದೇಶದ್ರೋಹದ ಅಡಿ ಪ್ರಕರಣ ದಾಖಲು ಮಾಡಲಾಗಿದೆ.

Operation Sindoor: ಯುದ್ಧದ ಬಗ್ಗೆ ಸುಳ್ಳು ಸುದ್ದಿ ಹರಡುವವರ ಮೇಲೆ ಕ್ರಮ: ಕಮಿಷನರ್‌

ಯುದ್ಧದ ಬಗ್ಗೆ ಸುಳ್ಳು ಸುದ್ದಿ ಹರಡುವವರ ಮೇಲೆ ಕ್ರಮ: ಕಮಿಷನರ್‌

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕಮಿಷನರ್ ದಯಾನಂದ್, ಭಾರತದ ಗಡಿ ಭಾಗಗಳಲ್ಲಿ ಸಾಕಷ್ಟು ಬೆಳವಣಿಗೆ (Operation Sindoor) ಆಗಿವೆ. ಅಧಿಕೃತ ಮಾಧ್ಯಮಗಳ ಮೂಲಕ ಈ ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತದೆ. ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದರು.