ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

CM Siddaramaiah: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ, ಕುಟುಂಬಕ್ಕೆ ಕ್ಲೀನ್‌ ಚಿಟ್‌

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ, ಕುಟುಂಬಕ್ಕೆ ಕ್ಲೀನ್‌ಚಿಟ್‌

MUDA Scam Case: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಕುಟುಂಬಕ್ಕೆ ಕ್ಲೀನ್‌ ಚಿಟ್‌ ನೀಡಲಾಗಿದೆ. ನಿವೃತ್ತ ನ್ಯಾಯಾಧೀಶ ದೇಸಾಯಿ ಸಮಿತಿಯ ವರದಿಯಲ್ಲಿ ಕ್ಲೀನ್ ಚಿಟ್ ನೀಡಲಾಗಿದ್ದು, ಈ ವರದಿಯನ್ನು ಕ್ಯಾಬಿನೆಟ್ ಅಂಗೀಕರಿಸಿದೆ.

Bengaluru News: ಸೆಪ್ಟೆಂಬರ್‌ 6ರಿಂದ 12ರವರೆಗೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ಸೆಪ್ಟೆಂಬರ್‌ 6ರಿಂದ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Power Outage: ಬೆಂಗಳೂರು ನಗರದ 66/11 ಕೆ.ವಿ. ಬಾಣಸವಾಡಿಯ ಶಕ್ತಿ ಪರಿವರ್ತಕ-3ರಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಸೆ. 6ರಿಂದ ಸೆ. 12ರವರೆಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಿವಿಧೆಡೆ ಮಧ್ಯಂತರವಾಗಿ ವಿದ್ಯುತ್ ವ್ಯತ್ಯಯ ಉಂಟಾಗುವುದು ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ, ಮಾಜಿ ದೇವದಾಸಿಯರ ಮರು ಸಮೀಕ್ಷೆಗೆ ಸಿಎಂ ಚಾಲನೆ

ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆಗೆ ಸಿಎಂ ಚಾಲನೆ

CM Siddaramaiah: ರಾಜ್ಯಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಹಾಗೂ ಮಾಜಿ ದೇವದಾಸಿಯರ ಮರು ಸಮೀಕ್ಷೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಧಾನಸೌಧದಲ್ಲಿ ಗುರುವಾರ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ.

ದುಬೈಯಲ್ಲಿ ಮನೆ ಮಾಡುವವರಿಗೊಂದು ಸಿಹಿ ಸುದ್ದಿ; ಮನೆ ಖರೀದಿಗೆ ಶೇ. 100ರಷ್ಟು ಸಾಲ ಕೊಡಲು ಒಂದಾದ ಪರ್ವ-ಗೋಲ್‌ ಸಂಸ್ಥೆಗಳು

ಮನೆ ಖರೀದಿಗೆ ಶೇ. 100ರಷ್ಟು ಸಾಲ ಕೊಡಲು ಒಂದಾದ ಪರ್ವ-ಗೋಲ್‌ ಸಂಸ್ಥೆ

ದುಬೈಯಲ್ಲಿ ಮನೆ ಖರೀದಿಸಬೇಕು ಎಂದು ಕನಸು ಕಾಣುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ಶೇ. 100ರಷ್ಟು ಸಾಲ ಕೊಡಲು ಕರ್ನಾಟಕದ ಎರಡು ಕಂಪನಿಗಳು ಮುಂದೆ ಬಂದಿವೆ. ದುಬೈನಲ್ಲಿ ಕನ್ನಡಿಗರಿಗಾಗಿ ಕನ್ನಡಿಗರೇ ಕಟ್ಟಿರುವ ಪರ್ವ ರಿಯಲ್ ಎಸ್ಟೇಟ್ ಕಂಪನಿ ಹಾಗೂ ಬೆಂಗಳೂರಿನ ಗೋಲ್ ಕಾರ್ಪೋರೇಷನ್ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿವೆ.

Raju Gowda: ''ಸರಿಯಾದ ತನಿಖೆಯಾದರೆ ರಾಜ್ಯ ಸರ್ಕಾರದ ಶೇ. 80ರಷ್ಟು ಜನಪ್ರತಿನಿಧಿಗಳು ಜೈಲಿಗೆ ಹೋಗ್ತಾರೆʼʼ: ರಾಜು ಗೌಡ

ರಾಜ್ಯ ಸರ್ಕಾರದ ವಿರುದ್ಧ ರಾಜು ಗೌಡ ವಾಗ್ದಾಳಿ

ʼʼಒಂದು ದಿನ ವಿಧಾನಸೌಧವನ್ನೇ ಜೈಲು ಮಾಡುವ ಕಾಲ ಬರುತ್ತದೆ. ಈ ಸರ್ಕಾರದಲ್ಲಿ ಒಬ್ರು, ಇಬ್ರು ಜೈಲಿಗೆ ಹೋಗುವ ಪರಿಸ್ಥಿತಿ ಇಲ್ಲ. ಸರಿಯಾದ ತನಿಖೆಯಾದರೆ ಈ ಸರ್ಕಾರದಲ್ಲಿ ಶೇ. 80ರಷ್ಟು ಜನಪ್ರತಿನಿಧಿಗಳು ಜೈಲಿಗೆ ಹೋಗ್ತಾರೆʼʼ ಎಂದು ಮಾಜಿ ಸಚಿವ ರಾಜು ಗೌಡ ವಾಗ್ದಾಳಿ ನಡೆಸಿದರು.

Youtuber Sameer: ಯೂಟ್ಯೂಬರ್‌ ಸಮೀರ್‌ಗೆ ತಪ್ಪದ ಸಂಕಷ್ಟ; ಬೆಂಗಳೂರಿನ ಬಾಡಿಗೆ ಮನೆ ಮೇಲೆ ಪೊಲೀಸರಿಂದ ದಾಳಿ

ಸಮೀರ್‌ ಬಾಡಿಗೆ ಮನೆ ಮೇಲೆ ಪೊಲೀಸರಿಂದ ದಾಳಿ

Dharmasthala Case: ಧರ್ಮಸ್ಥಳದ ವಿರುದ್ಧ ಎಐ ವಿಡಿಯೊ ಮಾಡಿ ಸುಳ್ಳು ಆರೋಪ ಹೊರಿಸಿದ ಯೂಟ್ಯೂಬರ್‌ ಸಮೀರ್‌ ಎಂ.ಡಿ.ಗೆ ಮತ್ತೆ ಸಂಕಷ್ಟ ಎದುರಾಗಿದೆ. ಸೆಪ್ಟೆಂಬರ್‌ 4ರಂದು ಬೆಳ್ತಂಗಡಿ ಪೊಲೀಸರು ಆತನ ಬೆಂಗಳೂರಿನ ಬಾಡಿಗೆ ಮನೆಗೆ ದಾಳಿ ನಡೆಸಿದೆ.

Cult Movie: ಝೈದ್ ಖಾನ್ ಅಭಿನಯದ ʼಕಲ್ಟ್ʼ ಚಿತ್ರದ ʼಅಯ್ಯೊ ಶಿವನೇʼ ಹಾಡು ಸೆ.10ಕ್ಕೆ ರಿಲೀಸ್‌

ʼಕಲ್ಟ್ʼ ಚಿತ್ರದ ʼಅಯ್ಯೊ ಶಿವನೇʼ ಹಾಡು ಸೆ.10ಕ್ಕೆ ರಿಲೀಸ್‌

Cult Movie: ಝೈದ್ ಖಾನ್ ನಾಯಕರಾಗಿ ನಟಿಸುತ್ತಿರುವ ಹಾಗೂ ʼಉಪಾಧ್ಯಕ್ಷʼ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದ ʼಕಲ್ಟ್ʼ ಚಿತ್ರದ ಮೊದಲ ಹಾಡು ʼಅಯ್ಯೊ ಶಿವನೇʼ ಇದೇ ಸೆಪ್ಟೆಂಬರ್ 10 ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಲಿದೆ.

Sudhir Attavar: ಸುಧೀರ್ ಅತ್ತಾವರ್ ಅವರ ʼಆದಿ ಮಹಾ ಶಕ್ತಿ ಮಹಾಮಾಯಿಯೇʼ ಹಾಡಿಗೆ ವಿದ್ಯಾಭೂಷಣ್ ಧ್ವನಿ

ಸುಧೀರ್ ಅತ್ತಾವರ್ ಬರೆದಿರುವ ಹಾಡಿಗೆ ವಿದ್ಯಾಭೂಷಣ್ ಧ್ವನಿ

ಸಹಸ್ರಾರು ಭಕ್ತಿ ಗೀತೆಗಳನ್ನು ಭಕ್ತಿ ಪರವಶತೆಯಿಂದ ಹಾಡಿ ದೇಶ-ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ವಿದ್ಯಾಭೂಷಣ್ ಅವರು ಸಾಹಿತ್ಯ ಅಕಾಡಮಿ ಪುರಸ್ಕೃತ ಸಾಹಿತಿ-ನಿರ್ದೇಶಕ ಸುಧೀರ್ ಅತ್ತಾವರ್ ಬರೆದಿರುವ ʼಆದಿ ಮಹಾ ಶಕ್ತಿ ಮಹಾಮಾಯಿಯೇ...ʼ ಎನ್ನುವ ಹಾಡನ್ನು ಪ್ರಪ್ರಥಮ ಬಾರಿಗೆ ಸಿನಿಮಾಕ್ಕಾಗಿ ಹಾಡಿದ್ದಾರೆ.

GST Council: ನೂತನ ಜಿಎಸ್​ಟಿ: ಮಧ್ಯಮ ವರ್ಗಕ್ಕೆ ಗುಡ್‌, ರಾಜ್ಯದ ಆದಾಯಕ್ಕೆ ಬ್ಯಾಡ್!‌ 70 ಸಾವಿರ ಕೋಟಿ ನಷ್ಟ ಅಂದಾಜು

ಮಧ್ಯಮ ವರ್ಗಕ್ಕೆ ಗುಡ್‌, ರಾಜ್ಯದ ಆದಾಯಕ್ಕೆ ಬ್ಯಾಡ್!‌ 70 ಸಾವಿರ ಕೋಟಿ ನಷ್ಟ

Krishna Byre Gowda: ಜಿಎಸ್‌ಟಿ ದರ ಸರಳೀಕರಣದಿಂದ ರಾಜ್ಯದ ಮೇಲೆ ಆಗುವ ಪರಿಣಾಮದ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದು, 2024 ಮತ್ತು 25ನೇ ಸಾಲಿಗೆ 70 ಸಾವಿರ ಕೋಟಿ ಒಂದು ವರ್ಷಕ್ಕೆ ಖೋತಾ ಆಗಲಿದೆ ಎಂದು ಹೇಳಿದ್ದಾರೆ. ಆರ್ಥಿಕವಾಗಿ ಮತ್ತಷ್ಟು ಹೊರೆಯಾಗುವ ಆತಂಕವನ್ನು ಕೃಷ್ಣ ಬೈರೇಗೌಡ ವ್ಯಕ್ತಪಡಿಸಿದ್ದಾರೆ.

Amit Shah: ಅಗತ್ಯ ಬಿದ್ದರೆ ಧರ್ಮಸ್ಥಳ ಕೇಸ್‌ ಎನ್‌ಐಎಗೆ: ಸಂತರ ನಿಯೋಗಕ್ಕೆ ಅಮಿತ್‌ ಶಾ ಭರವಸೆ

ಅಗತ್ಯ ಬಿದ್ದರೆ ಧರ್ಮಸ್ಥಳ ಕೇಸ್‌ ಎನ್‌ಐಎಗೆ: ಸಂತರಿಗೆ ಅಮಿತ್‌ ಶಾ ಭರವಸೆ

Dharmasthala Case: ಪಂಚಮಸಾಲಿ ಲಿಂಗಾಯತ ಮಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ನೇತೃತ್ವದ ಈ ನಿಯೋಗದಲ್ಲಿ, ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಪೀಠಗಳ ಒಟ್ಟು ಎಂಟು ಸ್ವಾಮೀಜಿಗಳು ಭಾಗವಹಿಸಿದ್ದರು.

Astemida Isira: ಸೆಪ್ಟೆಂಬರ್ 7ಕ್ಕೆ ಬೆಂಗಳೂರಿನಲ್ಲಿ'ಅಸ್ಟೆಮಿದ ಐಸಿರ'- ರಾಜಧಾನಿಯ ತುಳುವರ ಈ ಹಬ್ಬದಲ್ಲಿ ಏನೇನಿರಲಿದೆ?

ಸೆಪ್ಟೆಂಬರ್ 7ಕ್ಕೆ ಬೆಂಗಳೂರಿನಲ್ಲಿ 'ಅಸ್ಟೆಮಿದ ಐಸಿರ'

Astemida Isira 2025: ತುಳುವರ ಅತಿದೊಡ್ಡ ಹಬ್ಬ‘ಅಸ್ಟೆಮಿದ ಐಸಿರ’ ಕಾರ್ಯಕ್ರಮಕ್ಕೆ ಕೌಂಟ್‌ಡೌನ್ ಶುರುವಾಗಿದೆ. ತುಳುನಾಡ ಜವನೆರ್ ಬೆಂಗಳೂರು (ರಿ) ಆಯೋಜನೆ ಮಾಡುತ್ತಿರುವ ಎಂಟನೇ ವರ್ಷದ ‘ಅಸ್ಟೆಮಿದ ಐಸಿರ’ ಕಾರ್ಯಕ್ರಮ ಇದೇ ಬರುವ ಸೆಪ್ಟೆಂಬರ್ 7ನೇ ತಾರೀಕಿನಂದು ವಿಜಯನಗರದ ಬಂಟರ ಭವನದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

Gold Rate Today: ಚಿನ್ನದ ದರದಲ್ಲಿ ಕೊಂಚ ಇಳಿಕೆ; ಇಂದಿನ ರೇಟ್‌ ಎಷ್ಟಿದೆ ಗೊತ್ತಾ?

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold price today on 3rd Sep 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 10ರೂ. ಏರಿಕೆ ಕಂಡಿದ್ದು, 9,795 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 11ರೂ. ಏರಿಕೆಯಾಗಿ 10,686 ರೂ.ಗೆ ತಲುಪಿದೆ.

Pratap Simha: ಬಾಬರ್‌ ಇಲ್ಲದಿದ್ದರೂ ಬಾನು ಮುಷ್ತಾಕ್ ಅಂಥವರು ಇದ್ದಾರೆ: ಪ್ರತಾಪ್‌ ಸಿಂಹ

ಬಾಬರ್‌ ಇಲ್ಲದಿದ್ದರೂ ಬಾನು ಮುಷ್ತಾಕ್ ಅಂಥವರು ಇದ್ದಾರೆ: ಪ್ರತಾಪ್‌ ಸಿಂಹ

Banu Mushtaq: ಹಿಂದೆ ಯಾವನೋ ಘಜ್ನಿ, ಅಕ್ಬರ್, ಬಾಬರ್ ಬಂದಿದ್ದ ಅಂತ ಹೇಳಬೇಡಿ. ಇಂದು ಬಾಬರ್ ಇಲ್ಲದೆ ಇದ್ದರೂ ಮುಷ್ತಾಕ್ ಅಂಥವರು ನಮ್ಮ ಮಧ್ಯೆ ಇದ್ದಾರೆ. ಅದಕ್ಕಾಗಿ ಎಚ್ಚರಿಕೆ ನೀಡಲು ನಾನು ಬಂದಿದ್ದೇನೆ. ದೇಶ ಉಳಿಸಿಕೊಳ್ಳಲು ಹಿಂದೂಗಳು ಜಾತಿ ಬಿಟ್ಟು ಒಂದಾಗಬೇಕು ಎಂದಿದ್ದಾರೆ ಪ್ರತಾಪ್‌ ಸಿಂಹ.

Harassment: ಆತನ ಹೆಸರು ವಂದೇ ಮಾತರಂ, ಮಾಡಿದ್ದು ಇಂಥ ಹಲ್ಕಾ ಕೆಲಸ!

ಆತನ ಹೆಸರು ವಂದೇ ಮಾತರಂ, ಮಾಡಿದ್ದು ಇಂಥ ಹಲ್ಕಾ ಕೆಲಸ!

Bengaluru: ಬೆಂಗಳೂರಿನಲ್ಲಿ ರಾಜಸ್ಥಾನದ ಬಲೋತ್ರ ಜಿಲ್ಲೆಯ ದಂಪತಿ ವಾಸವಾಗಿದ್ದಾರೆ. ಸ್ವಂತ ಬಿಜಿನೆಸ್ ಮಾಡಲು 4 ಕೋಟಿ ರೂಪಾಯಿ ವರದಕ್ಷಿಣೆಗಾಗಿ ವಂದೇ ಮಾತರಂ ತನ್ನ ಪತ್ನಿಯ ಬಳಿ ಬೇಡಿಕೆ ಇಟ್ಟಿದ್ದಾನೆ. ಹಣ ತರದಿದ್ದಕ್ಕೆ ವಾಟ್ಸ್ಯಾಪ್ ಗ್ರೂಪ್‌ಗಳಲ್ಲಿ ತನ್ನ ಪತ್ನಿಯ ಖಾಸಗಿ ಫೋಟೋ ವೈರಲ್ ಮಾಡಿದ್ದಾನೆ.

Veerendra Puppy: ಆನ್‌ಲೈನ್‌ ಬೆಟ್ಟಿಂಗ್‌ನಿಂದ 2000 ಕೋಟಿ ರೂ. ಸಂಗ್ರಹಿಸಿದ ವೀರೇಂದ್ರ ಪಪ್ಪಿ, ಮತ್ತೆ 55 ಕೋಟಿ ವಶ

ಆನ್‌ಲೈನ್‌ ಬೆಟ್ಟಿಂಗ್‌ನಿಂದ 2000 ಕೋಟಿ ರೂ. ಸಂಗ್ರಹಿಸಿದ ವೀರೇಂದ್ರ ಪಪ್ಪಿ!

ED Raid: ಶಾಸಕ ವೀರೇಂದ್ರಗೆ ಸಂಬಂಧಿಸಿದಂತೆ ಆಸ್ತಿಯನ್ನು ಇಡಿ ಅಧಿಕಾರಿಗಳು ಶೋಧ ನಡೆಸಿದ್ದು, ಸದ್ಯ ವೀರೇಂದ್ರಗೆ ಸೇರಿದ ಬ್ಯಾಂಕ್ ಅಕೌಂಟ್‌ಗಳಲ್ಲಿದ್ದ 55 ಕೋಟಿ ರೂಪಾಯಿಯನ್ನು ಜಪ್ತಿ ಮಾಡಿದ್ದಾರೆ. ಒಟ್ಟು 9 ಬ್ಯಾಂಕ್ ಖಾತೆಗಳು, ಒಂದು ಡಿಮ್ಯಾಟ್ ಅಕೌಂಟ್ ಹಾಗೂ 262 ಮ್ಯೂಲ್ ಖಾತೆಗಳಲ್ಲಿದ್ದ ಅಂದಾಜು 55 ಕೋಟಿ ರೂ. ಜಪ್ತಿ ಮಾಡಿದ್ದಾರೆ.

KN Rajanna: ಸಿದ್ದರಾಮಯ್ಯ ಇರುವವರೆಗೂ ನಾನು ಕಾಂಗ್ರೆಸ್‌ನಲ್ಲೇ: ಕೆಎನ್‌ ರಾಜಣ್ಣ

ಸಿದ್ದರಾಮಯ್ಯ ಇರುವವರೆಗೂ ನಾನು ಕಾಂಗ್ರೆಸ್‌ನಲ್ಲೇ: ಕೆಎನ್‌ ರಾಜಣ್ಣ

CM Siddaramaiah: ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವವರೆಗೂ ಹಾಗೂ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿಕೊಂಡಿರುವವರೆಗೂ ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ. ಬೇರೆ ಯಾವುದೇ ಪಕ್ಷಕ್ಕೆ ಹೋಗಲ್ಲ. ನಾನು ಬಿಜೆಪಿಗೆ ಹೋಗುತ್ತೇನೆ ಎಂದು ಯಾವನು ಹೇಳಿದ್ದು ಎಂದು ರಾಜಣ್ಣ ಸಿಡಿಮಿಡಿ ಮಾಡಿದ್ದಾರೆ.

Fire Accident: ಬೆಂಗಳೂರಿನಲ್ಲಿ ಶಾರ್ಟ್‌ ಸರ್ಕ್ಯೂಟ್ ದುರಂತ, ಬೆಂಕಿಯಲ್ಲಿ ಸುಟ್ಟುಹೋದ 18 ತಿಂಗಳ ಮಗು

ಶಾರ್ಟ್‌ ಸರ್ಕ್ಯೂಟ್‌, ಬೆಂಕಿಯಲ್ಲಿ ಸುಟ್ಟುಹೋದ 18 ತಿಂಗಳ ಮಗು

Bengaluru: ಪುತ್ರಿ ಅನು ಸೇರಿದಂತೆ ಪುಷ್ಕರ್ ಕುಮಾರ್, ಜ್ಯೋತಿಕುಮಾರಿ​ ದಂಪತಿ ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಅಪಾರ್ಟ್​ಮೆಂಟ್​ನ 10X10 ಅಳತೆ ರೂಮ್​ನಲ್ಲಿ ವಾಸವಿದ್ದರು. ಮಗುವನ್ನು ಮನೆಯಲ್ಲೇ ಬಿಟ್ಟು ಪೋಷಕರು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಶಾರ್ಟ್ ​ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡು ದುರಂತ ಸಂಭವಿಸಿದೆ.

Basangouda Patil Yatnal: ಶಾಸಕನಾಗಿ ಈ ಥರ ಮಾತಾಡಬಾರದು: ಯತ್ನಾಳ್‌ಗೆ ಹೈಕೋರ್ಟ್‌ ಛೀಮಾರಿ

ಶಾಸಕನಾಗಿ ಈ ಥರ ಮಾತಾಡಬಾರದು: ಯತ್ನಾಳ್‌ಗೆ ಹೈಕೋರ್ಟ್‌ ಛೀಮಾರಿ

ಕೊಪ್ಪಳ ಟೌನ್ ಪೊಲೀಸ್ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಯತ್ನಾಳ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾ.ಎಂ.ಐ. ಅರುಣ್ ಅವರ ನ್ಯಾಯಪೀಠ ನಡೆಸಿದೆ. ಇದೇ ವೇಳೆ ಪೊಲೀಸರು ಬಲವಂತದ ಕ್ರಮ ಜರುಗಿಸಬಾರದು. ತನಿಖೆಗೆ ಯತ್ನಾಳ್‌ ಸಹಕರಿಸಬೇಕು ಎಂದು ಮಧ್ಯಂತರ ಆದೇಶ ನೀಡಿತು.

Karnataka Weather: ಯೆಲ್ಲೋ ಅಲರ್ಟ್‌; ಇಂದು ಬೆಂಗಳೂರು, ಮೈಸೂರು ಸೇರಿ ಈ ಜಿಲ್ಲೆಗಳಲ್ಲಿ ಬಿರುಸಿನ ಮಳೆ ಸಾಧ್ಯತೆ!

ಇಂದು ಬೆಂಗಳೂರು, ಮೈಸೂರು ಸೇರಿ ಈ ಜಿಲ್ಲೆಗಳಲ್ಲಿ ಬಿರುಸಿನ ಮಳೆ ಸಾಧ್ಯತೆ!

Karnataka Rains: ಕರ್ನಾಟಕ ಕರಾವಳಿಯಲ್ಲಿ ಗುರುವಾರ ಗಂಟೆಗೆ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ. ಕರಾವಳಿ ಜಿಲ್ಲೆಗಳು ಹೊರತುಪಡಿಸಿ, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಇಂದು ಯೆಲ್ಲೋ ಅಲರ್ಟ್‌ ನೀಡಲಾಗಿದೆ.

Spoorthivani Column: ಗೋಪಿಯರು ಕೊಡುವ ಬೆಣ್ಣೆಯೇ ರುಚಿ: ತಾಯಿಗೆ ಈ ಮಾತು ಹೇಳಿ ಜಗತ್ತಿಗೆ ಸಂದೇಶ ಕೊಟ್ಟ ಶ್ರೀಕೃಷ್ಣ

ಜಗತ್ತಿಗೆ ಸಂದೇಶ ಕೊಟ್ಟ ಶ್ರೀಕೃಷ್ಣ

ಕೃಷ್ಣನು ಹಾಡಿ ನರ್ತಿಸಿ ಗೋಪಿಕೆಯರ ಮನರಂಜಿಸುತ್ತಿದ್ದ. ಹಾಗೆ ನರ್ತಿಸಿದ ನಂತರವೇ ಅವನಿಗೆ ಬೆಣ್ಣೆ ಸಿಗುತ್ತಿತ್ತು. ಒಂದು ದಿನ ಕೃಷ್ಣನ ತಾಯಿ ಯಶೋದೆಯು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಾಳೆ. ಆಗ ಕೃಷ್ಣ, ʼʼಹೇ ಮಾತೆಯೇ! ಗೋಪಿಕೆಯರು ಯಾವುದೇ ನಿರೀಕ್ಷೆಗಳಿಲ್ಲದೆ, ಯಾವುದೇ ಬಂಧನಗಳಿಲ್ಲದೇ, ಹೃದಯತುಂಬಿದ ಪ್ರೇಮದಿಂದ ಕೊಡುವ ಆ ಬೆಣ್ಣೆಯನ್ನು ತಿನ್ನುವುದರಲ್ಲಿ ಎಂಥಾ ಆನಂದವಿದೆ!ʼʼ ಎಂದು ಉತ್ತರಿಸಿದ್ದ.

ಸೆ.5ರಂದು ಸರ್ವಪಲ್ಲಿ ರಾಧಾಕೃಷ್ಣನ್ 138ನೇ ಜಯಂತಿ ಅಂಗವಾಗಿ ಅದ್ದೂರಿ ಶಿಕ್ಷಕರ ದಿನಾಚರಣೆ

138 ನೇ ಜಯಂತಿ ಅಂಗವಾಗಿ ಅದ್ದೂರಿ ಶಿಕ್ಷಕರ ದಿನಾಚರಣೆ

5 ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಪಟ್ಟಣದ ಎವಿಕೆ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ತಾಲ್ಲೂಕು ಶಿಕ್ಷಕರ ದಿನಾಚರಣೆ ಸಮಿತಿ ತಿಳಿಸಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸಮಿತಿ ನಡೆಸುವ ಶಿಕ್ಷಕರ ದಿನಾ ಚರಣೆ ಕಾರ್ಯಕ್ರಮದ ಘನ ಉಪಸ್ಥಿತಿ ಕೇಂದ್ರದ ರೈಲ್ವೆ ಸಚಿವ ವಿ.ಸೋಮಣ್ಣ ವಹಿಸಲಿದ್ದಾರೆ.

Gubbi News: ಗುಬ್ಬಿಯಲ್ಲಿ ಸೆ.7 ರಂದು ವಿಶ್ವ ಛಾಯಾಗ್ರಹಣ ದಿನಾಚರಣೆ : ಹಿರಿಯ ಛಾಯಾಗ್ರಾಹಕರಿಗೆ ಗೌರವ, ಸರ್ವ ಸದಸ್ಯರ ಸಭೆ

ಗುಬ್ಬಿಯಲ್ಲಿ ಸೆ.7 ರಂದು ವಿಶ್ವ ಛಾಯಾಗ್ರಹಣ ದಿನಾಚರಣೆ

186 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಹಿರಿಯ ಛಾಯಾಗ್ರಾಹಕರಿಗೆ ಗೌರವ ಸಮರ್ಪಣೆ ಹಾಗೂ ಸಂಘದ ಸರ್ವ ಸದಸ್ಯರ ಮಹಾಸಭೆಯನ್ನು ಇದೇ ತಿಂಗಳ 7 ರಂದು ಪಟ್ಟಣದ ಹೊರ ವಲಯ ಹೇರೂರು ಗ್ರಾಮದ ಶ್ರೀ ಗುರು ಸಿದ್ಧರಾಮೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು ತಾಲ್ಲೂಕು ಛಾಯಾಗ್ರಾಹಕರ ಸಂಘ ತಿಳಿಸಿದೆ.

Bagepally News: ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಕರವೆಯಿಂದ ರಸ್ತೆಯಲ್ಲಿ ಪೈರು ನಾಟಿ ಮಾಡಿ ವಿನೂತನ ಪ್ರತಿಭಟನೆ

ಕರವೆಯಿಂದ ರಸ್ತೆಯಲ್ಲಿ ಪೈರು ನಾಟಿ ಮಾಡಿ ವಿನೂತನ ಪ್ರತಿಭಟನೆ

ಬಾಗೇಪಲ್ಲಿ ಪಟ್ಟಣದ ಕೇಂದ್ರದಲ್ಲಿ 6 ಮತ್ತು 7 ನೇ ವಾರ್ಡಿನ ಮೂಲಕ ಕೊತ್ತಪಲ್ಲಿ ಗ್ರಾಮಕ್ಕೆ ಸಂಚರಿ ಸುವ ರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ. ಈ ರಸ್ತೆಯಲ್ಲಿ ಒಂದು ಎರಡು ಅಡಿಗಳ ಅಳದ ಗುಣಿ ಗಳಿವೆ, ಇಲ್ಲಿ ಪಾದಚಾರಿಗಳು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಗಿದೆ.

Gudibande News: ಆರೋಗ್ಯಕರ ಜೀವನ ನಡೆಸಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಅಗತ್ಯ: ನ್ಯಾ.ಸವಿತಾ ರುದ್ರಗೌಡ

ಆರೋಗ್ಯಕರ ಜೀವನ ನಡೆಸಲು ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಅಗತ್ಯ

ರಾಷ್ಟ್ರ ಬಲಿಷ್ಠವಾಗಬೇಕಾದರೆ ಶಕ್ತಿಯುತ ಯುವ ಸಮೂಹ ನಿರ್ಮಾಣವಾಗಬೇಕಿದೆ. ವಿದ್ಯಾರ್ಥಿ ಗಳು ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯದಿಂದ ಇದ್ದರೆ ಮಾತ್ರ ನವ ಭಾರತ ನಿರ್ಮಾಣ ಮಾಡಲು ಸಾಧ್ಯ ವಾಗಲಿದೆ. ಈ ನಿಟ್ಟಿನಲ್ಲಿ ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆರು ಪೌಷ್ಟಿಕ ಆಹಾರದ ಬಗ್ಗೆ ಜನರಿಗೆ, ಮಕ್ಕಳಿಗೆ ತಿಳುವಳಿಕೆ ಮಾಡಿಸುತ್ತಿದ್ದಾರೆ. ಎಲ್ಲಾ ವಯೋಮಾನದವರು ಸಹ ಹಣ್ಣು, ತರಕಾರಿ ಗಳನ್ನು ಹೆಚ್ಚು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು.

Loading...