ತೀರ್ಥಕ್ಷೇತ್ರಗಳಲ್ಲಿ ಸೋಪು, ಶಾಂಪೂ ಮಾರಾಟ ನಿಷೇಧ: ರಾಜ್ಯ ಸರ್ಕಾರ ಆದೇಶ
ಪುಣ್ಯಕ್ಷೇತ್ರಗಳ ನದಿ ತೀರಗಳಲ್ಲಿ ಸೋಪು ಮತ್ತು ಶಾಂಪೂ ಬಳಸಿ ಸ್ನಾನ ಮಾಡುತ್ತಿರುವುದರಿಂದ ಅಲ್ಲಿರುವ ಮೀನು, ಏಡಿ, ಆಮೆ ಮತ್ತಿತರ ಜೀವಜಾಲಕ್ಕೆ ತೊಂದರೆ ಆಗುತ್ತಿದೆ. ಕೆಲವು ಕಡೆಗಳಲ್ಲಿ ಪವಿತ್ರ ಮೀನುಗಳು ಕೂಡ ಇದ್ದು, ಅವುಗಳಿಗೂ ತೊಂದರೆ ಆಗುತ್ತಿದೆ. ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸೋಪು ಹಾಗೂ ಶಾಂಪೂ ಬಳಕೆಯನ್ನು ನಿಷೇಧಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದರು.