ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ

ಬಿಸಿಲ ಝಳ ತಪ್ಪಿಸಲು ಕೊಡೆಗಳ ವಿತರಿಸಿ ಮಾನವೀಯತೆ ಮೆರೆದ ಸಮಾಜ ಸೇವಕ ಜಯಕುಮಾರ್

ಬೀದಿಬದಿ ವ್ಯಾಪಾರಿಗಳ ನೆರವಿಗೆ ನಿಂತ ಜೈ ಫೌಂಡೇಷನ್

ಬಿಸಿಲಿನ ತಾಪದಿಂದ ವ್ಯಾಪಾರಿಗಳು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಅವರು ನೆರಳಲ್ಲಿ ನಿಂತು ವ್ಯಾಪಾರ ಮಾಡಿ ಜೀವನ ನಡೆಸುವಂತಾಗಲಿ ಎನ್ನುವ ಕಾರಣದಿಂದ ಈ ಸಣ್ಣ ಪ್ರಯತ್ನ ಮಾಡಿದ್ದೇನೆ. ನನ್ನಂತೆ ಇತರರೂ ಅಶಕ್ತರ ನೆರವಿಗೆ ನಿಲ್ಲುವ ಕೆಲಸ ಮಾಡಬೇಕಿದೆ. ಆಗಲೇ ಸಮಸಮಾಜದ ಆಶಯ ಈಡೇರಲು ಸಾಧ್ಯ.

Chikkaballapur News: ಅಂಬೇಡ್ಕರ್ ಗುರುವಾಗಿ ಪಡೆದ ಯಾವ ಚಳವಳಿಗೆ ಎಂದೂ ಸಾವಿಲ್ಲ: ಡಾ.ಎಂ.ವೆಂಕಟಸ್ವಾಮಿ

ಅಂಬೇಡ್ಕರ್ ಗುರುವಾಗಿ ಪಡೆದ ಯಾವ ಚಳವಳಿಗೆ ಎಂದೂ ಸಾವಿಲ್ಲ

ದಲಿತ ಜನಾಂಗಗಳಿಗಾಗಿ ಸೇವೆ ಸಲ್ಲಿಸಿದ ಕಾರಣಕ್ಕೆ ನನಗೆ ದಲಿತ ಚೇತನ ಪ್ರಶಸ್ತಿ ನೀಡಿದ್ದಾರೆ. ದಸಂಸ ಹುಟ್ಟಿ 50 ವರ್ಷಗಳ ಆಯುಷ್ಯ ಕಳೆದಿದೆ. ಈ ನಡುವೆ ಚಿರಸ್ಥಾಯಿಯಾಗಿ ಉಳಿಯು ವಂತಹ ಚಾರಿತ್ರಿಕ ಹೋರಾಟಗಳನ್ನು ಮಾಡಿದೆ. ಮುಂದೆಯೂ ಕೂಡ 50 ವರ್ಷ ಖಚಿತವಾಗಿ ಈ ಹೋರಾಟ ಮುನ್ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೋಲಾರ ಪಿಡಿಒ ಸಂಘದ ಚುನಾವಣೆ: ಜಿಲ್ಲಾಧ್ಯಕ್ಷ ಮಹೇಶ್ ಕುಮಾರ್, ಉಪಾಧ್ಯಕ್ಷೆ ಮಂಗಳಾಂಬ Video

ಕೋಲಾರ ಪಿಡಿಒ ಸಂಘದ ಜಿಲ್ಲಾಧ್ಯಕ್ಷರಾಗಿ ಮಹೇಶ್ ಕುಮಾರ್ ಆಯ್ಕೆ

ಕೋಲಾರ ಪಂಚಾಯತ್‌ ಅಭಿವೃದ್ದಿ ಸಂಘದ (PDO) ಜಿಲ್ಲಾಧ್ಯಕ್ಷರಾಗಿ ಕೆ. ಮಹೇಶ್‌ ಕುಮಾರ್, ಉಪಾಧ್ಯಕ್ಷರಾಗಿ ಎಂ. ಮಂಗಳಾಂಬ ಹಾಗೂ ಖಜಾಂಚಿಯಾಗಿ ಎನ್. ಸಂಪರಾಜ್ ಜಯಭೇರಿ ಭಾರಿಸಿದ್ದಾರೆ. ತಾಲೂಕು ಪಂಚಾಯತ್‌ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹೇಶ್ ಕುಮಾರ್ 77 ಮತ, ಎ.ಚಂಗಲರಾಯಗೌಡ 42 ಮತ, ಉಪಾಧ್ಯಕ್ಷ ಸ್ಥಾನದ ಎಂ. ಮಂಗಳಾಂಬ 61 ಮತ, ಎಸ್.ಎನ್. ಮೇಘಾ 55 ಮತ, ಖಜಾಂಚಿ ಸ್ಥಾನದ ಅಭ್ಯರ್ಥಿ ಎನ್. ಸಂಪರಾಜ್ 66 ಮತ, ಆರ್.ಮಂಜುನಾಥ ಪ್ರಸಾದ್ 51 ಮತ ಪಡೆದುಕೊಂಡರು. ಆಯ್ಕೆ ವೇಳೆ ತಾ.ಪಂ. ಇಒ ಮಂಜುನಾಥ್, ಹುತ್ತೂರು ಪಿಡಿಒ ಜಿ. ಲಕ್ಷ್ಮೀ, ಐತರಾಸನಹಳ್ಳಿಯ ಜಿ.ಎಸ್. ಸತೀಶ್ ಕುಮಾರ್, ಕೊಂಡರಾಜನಹಳ್ಳಿಯ ಎಂ. ರಾಮಕೃಷ್ಣ,ಮಾರ್ಜೇನಹಳ್ಳಿಯ ಎಚ್.ಸಿ. ಮಧುಮತಿ, ಮುದುವತ್ತಿಯ ಎಚ್.ಎಂ.ರವಿ, ನರಸಾಪುರ ಎಂ. ಮುನಿರಾಜು, ಶಾಪೂರಿನ ಕೆ.ಸಿ. ಬಾಲಾಜಿ, ವಕ್ಕಲೇರಿಯ ಎ. ಭಾರತಮ್ಮ ಮತ್ತಿತರರು ಉಪಸ್ಥಿತರಿದ್ದರು.

Deputy Commissioner G.Prabhu: ತೆರೆದ ಕೊಳವೆ ಬಾವಿಗಳಿಂದಾಗುವ ಅವಘಡಗಳನ್ನು ಸಹಿಸಲ್ಲ: ಜಿಲ್ಲಾಧಿಕಾರಿ ಜಿ.ಪ್ರಭು

ತೆರೆದ ಕೊಳವೆ ಬಾವಿಗಳಿಂದಾಗುವ ಅವಘಡಗಳನ್ನು ಸಹಿಸಲ್ಲ

ಜಿಲ್ಲೆಯಲ್ಲಿ ಮುಂಗಾರು ಮಾನ್ಸೂನ್ ಮಳೆ ಬರುವವರೆಗೂ ಮುಂದಿನ 3 ರಿಂದ 4 ತಿಂಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ  ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನದ ಕಾರ್ಯಪಾಲಕ ಅಭಿಯಂತರರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು

ಮಾರ್ಚ್‌ 27ರ ವಿಶೇಷ ಸಚಿವ ಸಂಪುಟ ಸಭೆ ಮುಂದೂಡಿಕೆ; ಕಾರಣವೇನು?

ನಾಳೆಯ ವಿಶೇಷ ಸಚಿವ ಸಂಪುಟ ಸಭೆ ಮುಂದೂಡಿಕೆ

Special Cabinet Meeting: ಬಾಗಲಕೋಟೆ ಮತ್ತು ದಾವಣೆಗೆರೆ ದಕ್ಷಿಣ ಕ್ಷೇತ್ರಗಳಿಗೆ ಉಪ ಚುನಾವಣೆ (Byelection) ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ (ಮಾರ್ಚ್‌ 26) ಮಧ್ಯಾಹ್ನ 12 ಗಂಟೆಗೆ ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ ಎಂದು ಸರ್ಕಾರದ ಅಪರ ಕಾರ್ಯದರ್ಶಿ ಆರ್‌. ಚಂದ್ರಶೇಖರ್‌ ತಿಳಿಸಿದ್ದಾರೆ.

ಪವರ್‌ಪ್ಲೇ ಭಾರತದ ಮೊದಲ ನಿರ್ಮಾಣಕ್ಕಾಗಿ AI ಕಾರ್ಯಪಡೆ ಪ್ರಾರಂಭ

ಪವರ್‌ಪ್ಲೇ ಭಾರತದ ಮೊದಲ ನಿರ್ಮಾಣಕ್ಕಾಗಿ AI ಕಾರ್ಯಪಡೆ ಪ್ರಾರಂಭ

ಪವರ್‌ಪ್ಲೇ ಅನುಭವಿ ವ್ಯಕ್ತಿಯನ್ನು ಲೂಪ್‌ನಲ್ಲಿ ಇರಿಸಿಕೊಳ್ಳುವ ಮೂಲಕ 99% ವರೆಗಿನ ನಿಖರತೆಯ ಮಟ್ಟವನ್ನು ನಿರ್ವಹಿಸುತ್ತದೆ, ನಿರ್ಣಾಯಕ ನಿರ್ಧಾರಗಳನ್ನು ಅಂತಿಮಗೊಳಿ ಸುವ ಮೊದಲು AI- ರಚಿತವಾದ ಔಟ್‌ಪುಟ್‌ಗಳನ್ನು ಪರಿಶೀಲಿಸಲಾಗುತ್ತದೆ ಮತ್ತು ಮೌಲ್ಯೀ ಕರಿಸಲಾಗುತ್ತದೆ ಎಂದು ಖಚಿತಪಡಿಸುತ್ತದೆ - ಫಲಿತಾಂಶದ ಆಧಾರದ ಮೇಲೆ ಗ್ರಾಹಕರಿಗೆ ಶುಲ್ಕ ವಿಧಿಸಲು ಕಂಪನಿಗೆ ಅನುವು ಮಾಡಿಕೊಡುವ ಮಾದರಿ.

ಆಲಮಟ್ಟಿ ವಿಚಾರವಾಗಿ ರೈತರಿಗೆ ಕೊಟ್ಟ ಮಾತನ್ನು ಸರ್ಕಾರ ಉಳಿಸಿಕೊಳ್ಳಲಿದೆ: ಡಿ.ಕೆ. ಶಿವಕುಮಾರ್

ಆಲಮಟ್ಟಿ ವಿಚಾರ; ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದ ಡಿಕೆಶಿ

DK Shivakumar: ಆಲಮಟ್ಟಿ ವಿಚಾರವಾಗಿ ಸಚಿವ ಎಚ್.ಕೆ. ಪಾಟೀಲ್ ಗುರುವಾರ ವಿಧಾನ ಪರಿಷತ್ತಿನಲ್ಲಿ ಮಂಡಿಸಿದ ನಿರ್ಣಯದ ಪರವಾಗಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಕೃಷ್ಣಾ ಮೇಲ್ದಂಡೆ ವಿಚಾರವಾಗಿ ರೈತರಿಗೆ ಕೊಟ್ಟ ಮಾತನ್ನು ನಾವು ಉಳಿಸಿಕೊಳ್ಳುತ್ತೇವೆ. ನೀರನ್ನು ಒದಗಿಸಿಕೊಡಲು ಬದ್ಧವಾಗಿದ್ದೇವೆ. ಹಣಕಾಸಿನ ವಿಚಾರವಾಗಿ ಸವಾಲುಗಳಿದ್ದು ಇದರ ಬಗ್ಗೆ ನಮ್ಮ ಸರ್ಕಾರ ಏನಾದರೂ ಮಾಡಿಯೇ ಮಾಡುತ್ತದೆ ಎಂದು ತಿಳಿಸಿದ್ದಾರೆ.

20ನೇ ವರ್ಷಾಚರಣೆಯಲ್ಲಿ ಮೌರ್ಯ ಕಾನ್ಸೆಪ್ಟ್ಸ್ ಸಾಧನೆ ದೇಶದಾದ್ಯಂತ 135 ದ್ವಿಚಕ್ರ ವಾಹನಗಳ ವಿತರಣೆ

20ನೇ ವರ್ಷಾಚರಣೆಯಲ್ಲಿ ಮೌರ್ಯ ಕಾನ್ಸೆಪ್ಟ್ಸ್

ಉದ್ಯೋಗಿ ಕಲ್ಯಾಣಕ್ಕೆ ಆದ್ಯತೆ ನೀಡುವ ಮೂಲಕ ಮೌರ್ಯ ಕಾನ್ಸೆಪ್ಟ್ಸ್ ತನ್ನ 20ನೇ ವರ್ಷದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ಸಂಸ್ಥೆಯ ವತಿಯಿಂದ ದೇಶದಾದ್ಯಂತ ತನ್ನ ಸಿಬ್ಬಂದಿಗೆ 135 ದ್ವಿಚಕ್ರ ವಾಹನಗಳನ್ನು ವಿತರಿಸಲಾಗಿದ್ದು, ಉದ್ಯೋಗಿ ಪ್ರಥಮ HONESTY DELIVERED ಧೋರಣೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.

ಬೆಂಗಳೂರು ಹಿತಕ್ಕೆ ನಮ್ಮ ತೀರ್ಮಾನ ಟೀಕಿಸುತ್ತಿರುವವರು, ಮುಂದೆ ಸ್ಮರಿಸುತ್ತಾರೆ ಎಂದ ಡಿ.ಕೆ. ಶಿವಕುಮಾರ್

ಬೆಂಗಳೂರಿನ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೇನೆ ಎಂದ ಡಿಕೆಶಿ

DK Shivakumar: ವಿಧಾನಸಭೆಯಲ್ಲಿ ಗ್ರೇಟರ್ ಬೆಂಗಳೂರು ವಿಚಾರವಾಗಿ ನಡೆದ ಚರ್ಚೆಗೆ ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಗುರುವಾರ ಉತ್ತರಿಸಿದರು. ಬೆಂಗಳೂರು ನಗರದ ಹಿತಕ್ಕೆ ನಾವು ಕೈಗೊಂಡಿರುವ ಅನೇಕ ತೀರ್ಮಾನಗಳ ಬಗ್ಗೆ ವಿರೋಧ ಪಕ್ಷದವರು ಟೀಕೆ ಮಾಡಬಹುದು, ಮಾಡಲಿ. ಆದರೆ ಮುಂದಿನ ಐದು ವರ್ಷಗಳ ನಂತರ ಡಿ.ಕೆ. ಶಿವಕುಮಾರ್ ಉತ್ತಮ ನಿರ್ಧಾರ ಕೈಗೊಂಡರು ಎಂದು ಹೇಳುತ್ತಾರೆ. ನನಗೆ ಅಷ್ಟೇ ಸಾಕು ಎಂದು ಅವರು ಹೇಳಿದ್ದಾರೆ.

ಶಾಲೆಗಳಲ್ಲಿ ʼವಂದೇ ಮಾತರಂʼ 6 ಚರಣ ಹಾಡುವುದು ಕಡ್ಡಾಯ ಆದೇಶ ವಿರೋಧಿಸಿ ಅರ್ಜಿ; ಹೈಕೋರ್ಟ್‌ ಹೇಳಿದ್ದೇನು?

ʼವಂದೇ ಮಾತರಂʼ 6 ಚರಣ ಹಾಡುವುದು ಕಡ್ಡಾಯ ಆದೇಶ ವಿರೋಧಿಸಿ ಅರ್ಜಿ

Karnataka High Court: ಶಾಲೆಗಳಲ್ಲಿ ಪ್ರತಿದಿನ ಬಂಕಿಮ ಚಟರ್ಜಿ ಅವರ 'ವಂದೇ ಮಾತರಂ' ಗೀತೆಯನ್ನು ಎಲ್ಲ 6 ಚರಣಗಳೊಂದಿಗೆ ಕಡ್ಡಾಯವಾಗಿ ಹಾಡುವ ವಿಚಾರಕ್ಕೆ ಸಂಬಂಧಿಸಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ನಡೆಸಿತು. ಬಳಿಕ ಅರ್ಜಿ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಿತು.

ಹವ್ಯಕ ವಿಶೇಷ ಪ್ರಶಸ್ತಿ ಪ್ರಕಟ; ಮಾರ್ಚ್ 29ರಂದು ಸಂಸ್ಥಾಪನೋತ್ಸವದಲ್ಲಿ ಪ್ರಶಸ್ತಿ ಪ್ರದಾನ

ಹವ್ಯಕ ವಿಶೇಷ ಪ್ರಶಸ್ತಿ ಪ್ರಕಟ

Havyaka Special Award: ಶ್ರೀ ಅಖಿಲ ಹವ್ಯಕ ಮಹಾಸಭೆಯು ನೀಡುವ ವಾರ್ಷಿಕ ವಿಶೇಷ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಮಾರ್ಚ್‌ 29ರಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ 83ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ 2025-26ನೇ ಸಾಲಿನ ಪ್ರಶಸ್ತಿ ಪ್ರದಾನ ನಡೆಯಲಿದೆ.

ʼʼನಾವು ವಿಐಪಿಗಳು, ಸರದಿಯಲ್ಲಿ ನಿಲ್ಲಲು ಸಾಧ್ಯವಿಲ್ಲʼʼ: ಐಪಿಎಲ್ ಟಿಕೆಟ್ ಒದಗಿಸುವಂತೆ ಶಾಸಕ ವಿಜಯಾನಂದ್ ಕಾಶಪ್ಪನವರ್ ಆಗ್ರಹ

ಐಪಿಎಲ್ ಟಿಕೆಟ್ ಒದಗಿಸುವಂತೆ ಆಗ್ರಹಿಸಿದ ಹುನಗುಂದ ಶಾಸಕ

Hungund MLA seeks IPL tickets: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘವು ಪ್ರತಿ ಶಾಸಕರಿಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) 5 ಟಿಕೆಟ್‌ಗಳನ್ನು ಒದಗಿಸಬೇಕು ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ್ ಕಾಶಪ್ಪನವರ್ ಮನವಿ ಮಾಡಿದ್ದಾರೆ. ಶಾಸಕರು ವಿಐಪಿಗಳು. ಸರದಿಯಲ್ಲಿ ನಿಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಶಾಸಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಮಾಡಬೇಕು ಎಂದೂ ಹೇಳಿದರು.

"ರಾಜ್ಯದಲ್ಲಿ  ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಿಲ್ಲ, ಹೆಚ್ಚಿನ ತೈಲ ಸಂಗ್ರಹಿಸಬೇಡಿ"; ಇಂಡಿಯನ್‌ ಆಯಿಲ್‌ ಮನವಿ

ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯಿಲ್ಲ; ಇಂಡಿಯನ್‌ ಆಯಿಲ್‌

Indian Oil: ಭಾರತದಲ್ಲಿಯೂ ತೈಲದ ಕೊರತೆ ಇದೆ ಎಂಬ ಸುದ್ದಿಯನ್ನು ಕೇಂದ್ರ ಸರ್ಕಾರ ಅಲ್ಲಗಳೆದಿದ್ದು, ತೈಲ ಪೂರೈಕೆಯ ಕುರಿತು ಮಾಹಿತಿ ಹಂಚಿಕೊಂಡಿದೆ. ಇದೀಗ ಈ ಕುರಿತು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್ ಲಿಮಿಟೆಡ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಯಾವುದೇ ರೀತಿಯ ಕೊರತೆ ಇಲ್ಲ ಎಂದು ಹೇಳಿದೆ.

ವಿಧಾನಸಭೆ ಕಲಾಪದಲ್ಲಿ ಡಿಕೆಶಿ-ಮುನಿರತ್ನ ನಡುವೆ ತೀವ್ರ ವಾಗ್ವಾದ; ಹೇ ರೇ*ಸ್ಟ್ ಕುಳಿತುಕೋ ಎಂದ ಡಿಸಿಎಂ Video

ವಿಧಾನಸಭೆ ಕಲಾಪದಲ್ಲಿ ಡಿಕೆಶಿ-ಮುನಿರತ್ನ ನಡುವೆ ತೀವ್ರ ವಾಗ್ವಾದ

Clash Erupts Between DKS-Munirathna: ಬಜೆಟ್ ಅಧಿವೇಶನದ ಕೊನೆಯ ದಿನವಾದ ಗುರುವಾರ (ಮಾ. 26) ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಮುನಿರತ್ನ ನಡುವೆ ತೀವ್ರ ವಾಗ್ವಾದ ನಡೆದಿದೆ. ವೈಯಕ್ತಿಕ ನಿಂದನೆ, ಆರೋಪ-ಪ್ರತ್ಯಾರೋಪಕ್ಕೆ ತಿರುಗಿತು. ಇದು ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ ಡಿ.ಕೆ. ಶಿವಕುಮಾರ್ ತಾಳ್ಮೆ ಕಳೆದುಕೊಂಡು ಮುನಿರತ್ನ ಅವರನ್ನು ʼʼಹೇ ರೇಪಿಸ್ಟ್, ಕುಳಿತುಕೋʼʼ ಎಂದು ಕಿಡಿಕಾರಿದರು.

ಎಸ್​​ಎಸ್​​ಎಲ್​ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಮಾರ್ಚ್‌ 30ರ ಬದಲು ಹೊಸ ದಿನಾಂಕ ನಿಗದಿ

ಎಸ್​​ಎಸ್​​ಎಲ್​ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ

SSLC Examination: ಮಾರ್ಚ್‌ 30ರಂದು ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಮಹಾವೀರ ಜಯಂತಿ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಅದರ ಬದಲು ಮಾರ್ಚ್‌ 31ರಂದು ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

"ಬೇಕಾದಷ್ಟು ನನ್ನ ಚಚ್ಚವ್ರೆ...": ಅಧಿವೇಶನದ ವೇಳೆ ಡಿ.ಕೆ. ಶಿವಕುಮಾರ್‌ ಬೇಸರ Video

"ಬೇಕಾದಷ್ಟು ನನ್ನ ಚಚ್ಚವ್ರೆ...": ಡಿ.ಕೆ. ಶಿವಕುಮಾರ್‌ ಹೀಗೆ ಹೇಳಿದ್ದೇಕೆ?

ʼʼಪ್ರತಿಪಕ್ಷ ನಾಯಕ ಆರ್. ಅಶೋಕ್‌, ಅಶ್ವತ್ಥ ನಾರಾಯಣ್‌ ಸೇರಿದಂತೆ ಅನೇಕ ಹಿರಿಯ ನಾಯಕರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ, ಟೀಕೆಗಳನ್ನೂ ಮಾಡಿದ್ದಾರೆ. ಚಿನ್ನವನ್ನು ಪರೀಕ್ಷಿಸುವಾಗ ಚಿನ್ನವನ್ನು ಬೆಂಕಿಗೆ ಹಾಕುವಂತೆ, ಮನುಷ್ಯನನ್ನು ಪರೀಕ್ಷೆ ಮಾಡಲು ಟೀಕೆ, ಆಪಾದನೆಗಳು ಬರುತ್ತವೆ. ಆಗ ನಾವು ಯಾವ ರೀತಿ ತಿದ್ದಿಕೊಳ್ಳಬೇಕೆಂದು ಪ್ರಯತ್ನಿಸುತ್ತೇವೆ. ಟೀಕೆ ಮಾಡಿದರೆಂದರೆ ನಾನು ಯಾರ ಮೇಲೂ ಕೋಪಿಸಿಕೊಳ್ಳುವುದಿಲ್ಲ. ಹಾಗೆ ಮಾಧ್ಯಮದವರು ಸಹ ಬೇಕಾದಷ್ಟು ನನ್ನನ್ನು ಚಚ್ಚುತ್ತಾರೆ. ಬೇಕಾದಷ್ಟು ಸಂದರ್ಭಗಳಲ್ಲೂ ನಾನು ನೋಡಿದ್ದೇನೆ. ನನ್ನ ಮನೆ ಮೇಲೆ ರೇಡ್‌ ಆದಾಗ ಹಾಗೂ ಬೇರೆ ಬೇರೆ ಸಂದರ್ಭಗಳಲ್ಲಿ ಹೀಗೆ ಆಗಿದೆʼʼ ಎಂದು ಅಧಿವೇಶನದ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಪಾಲಕರಿಗೆ ಗುಡ್‌ನ್ಯೂಸ್‌; 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ

1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ ಸಡಿಲಿಕೆ ಘೋಷಿಸಿದ ರಾಜ್ಯ ಸರ್ಕಾರ

Madhu Bangarappa: ಶಾಲಾ ದಾಖಲಾತಿ ವಯಸ್ಸಿನ ಮಿತಿಯ ವಿಚಾರವಾಗಿ ಗೊಂದಲದಲ್ಲಿದ್ದ ಪಾಲಕರಿಗೆ ರಾಜ್ಯ ಸರ್ಕಾರ ತಾತ್ಕಾಲಿಕ ರಿಲೀಫ್‌ ಮೂಡಿದೆ. 1ನೇ ತರಗತಿ ಪ್ರವೇಶಕ್ಕೆ ಕಡ್ಡಾಯವಾಗಿ 6 ವರ್ಷ ತುಂಬಿರಬೇಕು ಎಂಬ ನಿಯಮದಲ್ಲಿ ಈ ವರ್ಷವೂ ಸಡಿಲಿಕೆ ಮಾಡುವುದಾಗಿ ಅಧಿವೇಶನದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದರು.

Shantaram siddi: ಪರಿಷತ್‌ ಸಭಾಪತಿ ಪೀಠ ಅಲಂಕರಿಸಿದ ಶಾಂತಾರಾಮ ಸಿದ್ಧಿ, ಕೋಟ ಶ್ರೀನಿವಾಸ ಪೂಜಾರಿ ಹರ್ಷ

ಪರಿಷತ್‌ ಸಭಾಪತಿ ಪೀಠ ಅಲಂಕರಿಸಿದ ಶಾಂತಾರಾಮ ಸಿದ್ಧಿ, ಕೋಟ ಹರ್ಷ

ಸಿದ್ದಿ ಸಮುದಾಯದ ರಾಜಕಾರಣಿಯೊಬ್ಬರು ಪೀಠದಲ್ಲಿ ಆಸೀನರಾಗಿರುವುದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು. ಪರಿಷತ್‌ ಸಭಾಪತಿ ವಿರಮಿಸಿದ್ದ ವೇಳೆ, ಸದನದಲ್ಲಿದ್ದ ಹಿರಿಯ ಸದಸ್ಯ ಶಾಂತರಾಮ ಸಿದ್ದಿಯವರಿಗೆ ಅವಕಾಶ ಸಿಕ್ಕಿದ್ದು, ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಬಗ್ಗೆ ಬಿಜೆಪಿ ಹರ್ಷ ವ್ಯಕ್ತಪಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೆ ಸುತ್ತಿಕೊಂಡ ಮುಡಾ ಹಗರಣ; ಹೈಕೋರ್ಟ್‌ನಿಂದ ತುರ್ತು ನೋಟಿಸ್‌

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ, ಕುಟುಂಬಸ್ಥರಿಗೆ ಹೈಕೋರ್ಟ್‌ ನೋಟಿಸ್‌

MUDA Scam Case: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರಿಗೆ ಹೈಕೋರ್ಟ್ ಗುರುವಾರ ತುರ್ತು ನೋಟಿಸ್ ಜಾರಿ ಮಾಡಿದೆ. ಸಿದ್ದರಾಮಯ್ಯ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಸಲ್ಲಿಸಿದ ಬಿ ರಿಪೋರ್ಟ್‌ ಅನ್ನು ಅಂಗೀಕರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಈ ನೋಟಿಸ್‌ ಜಾರಿ ಮಾಡಿದೆ.

ಆಟೋ ಓಡಿಸುತ್ತಲೇ ರೀಲ್ಸ್‌ ನೋಡುವುದರಲ್ಲಿ ಚಾಲಕ ಬ್ಯುಸಿ; ಮನವಿಗೂ ಕ್ಯಾರೇ ಇಲ್ಲ: ಬೆಂಗಳೂರಿನಲ್ಲಾದ ಭಯಾನಕ ಅನುಭವ ಬಿಚ್ಚಿಟ್ಟ ಯುವತಿ

ಆಟೋ ಓಡಿಸುತ್ತಲೇ ರೀಲ್ಸ್‌ ನೋಡುವುದರಲ್ಲಿ ಚಾಲಕ ಬ್ಯುಸಿ; ವಿಡಿಯೊ ಇಲ್ಲಿದೆ

Viral Video: ಬೆಂಗಳೂರಿನ ಬ್ಯುಸಿ ಟ್ರಾಫಿಕ್ ನಡುವೆ ಆಟೋ ಚಾಲಕನೊಬ್ಬ ಮೊಬೈಲ್‌ನಲ್ಲಿ ವಿಡಿಯೊ ನೋಡುತ್ತ ಸಾಗುತ್ತಿದ್ದ ಘಟನೆವೊಂದು ಕಂಡು ಬಂದಿದೆ. ಚಾಲಕ ರಸ್ತೆ ಮೇಲೆ ಗಮನ ಕೇಂದ್ರೀಕರಿಸುವ ಬದಲು ಮೊಬೈಲ್‌ನಲ್ಲಿ ಸ್ಕ್ರಾಲ್‌ ಮಾಡುವುದರಲ್ಲಿ ಮಗ್ನನಾಗಿದ್ದ ಬಗ್ಗೆ ಯುವತಿಯೊಬ್ಬಳು ವಿಡಿಯೊ ಮಾಡಿದ್ದಾಳೆ.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯುವ ಜನತೆಗೆ ಅವಕಾಶ; ಅಡಿಗಾಸ್‌ ಸಂಸ್ಥೆಯಿಂದ ವಿಶೇಷ ತರಬೇತಿ!

ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಡಿಗಾಸ್‌ ಸಂಸ್ಥೆಯಿಂದ ಯುವ ಜನತೆಗೆ ಅವಕಾಶ

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಅಡಿಗಾಸ್ ಯಾತ್ರಾ ಸಂಸ್ಥೆ ಇದೀಗ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆಸಕ್ತಿ ಇರುವ ಯುವ ಪ್ರತಿಭೆಗಳಿಗೆ ಸುವರ್ಣಾವಕಾಶ ಕಲ್ಪಿಸಿದೆ. ಯಾವುದೇ ಪದವಿ ಹೊಂದಿದವರು, ಪ್ರವಾಸೋದ್ಯಮದಲ್ಲಿ ಆಸಕ್ತಿಯುಳ್ಳವರು ಹಾಗೂ ಪ್ರೆಶರ್ಸ್‌ ಈ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

Murder Case: ಪತಿಯಿಂದ ನಡುರಸ್ತೆಯಲ್ಲಿ ಪತ್ನಿಯ ಬರ್ಬರ ಕೊಲೆ, ಶವದ ಮೇಲೆ ಕಾರು ಹತ್ತಿಸಿ ವಿಕೃತಿ

ಪತ್ನಿಯನ್ನು ನಡುರಸ್ತೆಯಲ್ಲಿ ಕೊಂದು, ಶವದ ಮೇಲೆ ಕಾರು ಹತ್ತಿಸಿದ ವಿಕೃತ

ಆರೋಪಿ ಪತಿ ಎರ್ಟಿಗಾ ಕಾರಿನಲ್ಲಿ ಪತ್ನಿಯನ್ನು ಕರೆದುಕೊಂಡು ಬಂದು, ಬಳೂರಗಿ ಗ್ರಾಮದ ಬಳಿ ನಿಲ್ಲಿಸಿದ್ದಾನೆ. ಬಳಿಕ ಪತ್ನಿಯನ್ನು ಕಾರಿನಿಂದ ಬಲವಂತವಾಗಿ ಕೆಳಗಿಳಿಸಿ, ನಡುರಸ್ತೆಯಲ್ಲೇ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಶವದ ಮೇಲೆ ಕಾರು ಹಾಯಿಸಿ ವಿಕೃತಿ ಮೆರೆದಿದ್ದಾನೆ.

No Alcohol: ಮಕ್ಕಳಿಗೆ ಮದ್ಯ ನೀಡಬೇಡಿ: ಬಾರ್‌ಗಳಿಗೆ ಹೈಕೋರ್ಟ್‌ ಕಠಿಣ ನಿರ್ದೇಶನ

ಮಕ್ಕಳಿಗೆ ಮದ್ಯ ನೀಡಬೇಡಿ: ಬಾರ್‌ಗಳಿಗೆ ಹೈಕೋರ್ಟ್‌ ಕಠಿಣ ನಿರ್ದೇಶನ

ಮಕ್ಕಳಿಗೆ ಮದ್ಯ ಮಾರಾಟ ಮಾಡಿದ್ದಕ್ಕಾಗಿ ತಮ್ಮ ವಿರುದ್ಧ ಅಬಕಾರಿ ಕಾಯ್ದೆ ಮತ್ತು ಬಾಲ ನ್ಯಾಯ(ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ದಾಖಲಾಗಿರುವ ಪ್ರಕರಣವನ್ನು ಪ್ರಶ್ನಿಸಿ ಲೆಗಸಿ ಬ್ರೂಯಿಂಗ್ ಕಂಪನಿ(ಎಲ್‌ಬಿಸಿ)ಯ ಪಾಲುದಾರ ವಿ ಚಿಟ್ಟಿ ಬಾಬು ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ಪ್ರಕರಣ ರದ್ದುಗೊಳಿಸಲು ನಿರಾಕರಿಸಿ ಆದೇಶ ಹೊರಡಿಸಿದ್ದಾರೆ.

ಪಾಲ್ ಜಾನ್ ‘ಕಾರಿಗರಿ’ ಬಿಡುಗಡೆ – ವಿಸ್ಕಿಯಿಂದ ಸಂಸ್ಕೃತಿಯತ್ತ ಹೊಸ ಹೆಜ್ಜೆ

ಪಾಲ್ ಜಾನ್ ‘ಕಾರಿಗರಿ’ ಬಿಡುಗಡೆ

ಕಾರ್ಯಕ್ರಮದ ಆರಂಭಿಕ ವಾಕ್‌ಥ್ರೂ ಮರದ ನವೀನ ಕಲಾಕೃತಿಗಳ ಮತ್ತು ವಿಸ್ಕಿ ತಯಾರಿಕೆ ಯ ನಡುವಿನ ಸಾಮ್ಯತೆಯನ್ನು ಒತ್ತಿಹೇಳುತ್ತ, ಅತಿಥಿಗಳನ್ನು ವಸ್ತು, ಪ್ರಕ್ರಿಯೆ ಮತ್ತು ಸೂಕ್ಷ್ಮತೆ ಗಳೊಂದಿಗೆ ಸಂಪರ್ಕಿಸುವಂತೆ ಮಾಡಿತು. ಅತಿಥಿಗಳಿಗೆ ಮೊದಲು ಪಾಲ್ ಜಾನ್‌ನ ನಿರ್ವಾಣ ಎಕ್ಸ್‌ಪ್ರೆಷನ್ ಪರಿಚಯಿಸಲಾಯಿತು.

Loading...