ಜಂಗಮಕೋಟೆ ಹೋಬಳಿಯಲ್ಲೇ ಕೈಗಾರಿಕೆ ಸ್ಥಾಪಿಸಬೇಕು ಎಂದು ಉಪವಾಸ ಸತ್ಯಾಗ್ರಹ
76 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ನಮ್ಮ ಬೇಡಿಕೆಗಳಿಗೆ ಸ್ಪಂದನೆ ತೋರಿಲ್ಲ. ನಮ್ಮದು ಬಡವರ ಪರವಾದ ಹೋರಾಟವಾಗಿದೆ. ಇಲ್ಲಿಗೆ ಬಂದರೆ ಯಾವ ಲಾಭವೂ ಆಗುವುದಿಲ್ಲ. ಆದರೆ ರಿಯಲ್ ಎಸ್ಟೇಟ್ ಪರವಾಗಿ ಪ್ರತಿಭಟನೆ ನಡೆಸುತ್ತಿರುವ ಮತ್ತೊಂದು ರೈತಸಂಘದ ವೇದಿಕೆಗೆ ಹತ್ತಾರುಬಾರಿ ಹೋಗಿ ಅಹವಾಲು ಆಲಿಸು ತ್ತಾರೆ. ಅವರಿಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಡುತ್ತಾರೆ