ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ

ದಾವಣಗೆರೆ ದಕ್ಷಿಣ ಉಪಚುನಾವಣೆ; ಕಾಂಗ್ರೆಸ್‌ ಟಿಕೆಟ್‌ ಘೋಷಣೆಗೂ ಮುನ್ನವೇ ಸಮರ್ಥ್‌ ಶಾಮನೂರು ನಾಮಪತ್ರ ಸಲ್ಲಿಕೆ!

ಟಿಕೆಟ್‌ ಘೋಷಣೆಗೂ ಮುನ್ನವೇ ಸಮರ್ಥ್‌ ಶಾಮನೂರು ನಾಮಪತ್ರ ಸಲ್ಲಿಕೆ!

Karnataka bypolls: ದಾವಣಗೆರೆಯಲ್ಲಿ ತಾಯಿ ಪ್ರಭಾ ಮಲ್ಲಿಕಾರ್ಜುನ ನೇತೃತ್ವದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನರು, ನಮ್ಮ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಟಿಕೆಟ್ ಘೋಷಣೆಗೂ ಮೊದಲೇ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

BESCOM: ಪೂರ್ವ ಮುಂಗಾರು ಮಳೆ ಅಬ್ಬರ; ವಿದ್ಯುತ್ ಸುರಕ್ಷತಾ ಕ್ರಮ ಅನುಸರಿಲು ಬೆಸ್ಕಾಂ ಮನವಿ

ಭಾರಿ ಮಳೆ; ವಿದ್ಯುತ್ ಸುರಕ್ಷತಾ ಕ್ರಮ ಅನುಸರಿಸಲು ಬೆಸ್ಕಾಂ ಮನವಿ

BESCOM: ಗಾಳಿ-ಮಳೆ ಸಂದರ್ಭದಲ್ಲಿ ಕರೆಗಳ ಒತ್ತಡದಿಂದ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಕೆಲವೊಮ್ಮೆ ಲಭ್ಯವಾಗುವುದಿಲ್ಲ, ಹೀಗಾಗಿ ಬೆಸ್ಕಾಂ ವಾಟ್ಸ್ ಆಪ್ ಸಂಖ್ಯೆಗಳಿಗೆ ವಿದ್ಯುತ್ ಸಮಸ್ಯೆ ಕುರಿತ ಸಂದೇಶಗಳನ್ನು ಕಳುಹಿಸಲು ಬೆಸ್ಕಾಂ ಮನವಿ ಮಾಡಿದೆ. ಈ ಕುರಿತ ವಿವರ ಇಲ್ಲಿದೆ.

Wildfire: ಕುದುರೆಮುಖ ರಕ್ಷಿತಾರಣ್ಯದಲ್ಲಿ ಭಾರಿ ಕಾಳ್ಗಿಚ್ಚು, ಶೋಲಾ ಕಾಡು ಧಗಧಗ

ಕುದುರೆಮುಖ ರಕ್ಷಿತಾರಣ್ಯದಲ್ಲಿ ಭಾರಿ ಕಾಳ್ಗಿಚ್ಚು, ಶೋಲಾ ಕಾಡು ಧಗಧಗ

ಅರಣ್ಯ ವೀಕ್ಷಕರ ನೇಮಕ ಮಾಡಿಕೊಳ್ಳದೇ ಇರುವುದೇ ಅನಾಹುತಕ್ಕೆ ಕಾರಣವಾಗಿದೆ. ಬೆಂಕಿ ನಿಯಂತ್ರಣ ರೇಖೆ, ವೀಕ್ಷಣಾ ಗೋಪುರ ಯಾವುದನ್ನೂ ಇಲಾಖೆ ಮಾಡಿಲ್ಲ. ಅರಣ್ಯ ವಾರದಿಂದ ಹೊತ್ತಿ ಉರಿಯುತ್ತಿದ್ದರೂ ಸ್ಥಳಕ್ಕೆ ಯಾರೂ ಭೇಟಿ ನೀಡಿಲ್ಲ ಎಂದು ಪರಿಸರವಾದಿಗಳು ದೂರಿದ್ದಾರೆ.

Bengaluru's Second Airport: ಬೆಂಗಳೂರಿನ 2ನೇ ಏರ್‌ಪೋರ್ಟ್‌ಗೆ ರಾಜ್ಯ ಸರ್ಕಾರದಿಂದ ಟೆಂಡರ್ ಆಹ್ವಾನ

ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟೆಂಡರ್

ಪ್ರಸ್ತಾವಿತ ಬೆಂಗಳೂರಿನ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ವಾಯು ಸಂಚಾರ ಬೇಡಿಕೆಯನ್ನು ಪೂರೈಸಲು ಮತ್ತು ಕರ್ನಾಟಕದ ದೀರ್ಘಕಾಲೀನ ವಾಯುಯಾನ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಭದ್ರಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

Hippopotamus Attack: ತಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆ ದಾಳಿಗೆ ಪಶುವೈದ್ಯೆ ಬಲಿ

ತಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆ ದಾಳಿಗೆ ಪಶುವೈದ್ಯೆ ಬಲಿ

ಗುರುವಾರ ರಾತ್ರಿ 10:30ರ ಸುಮಾರಿಗೆ ಡಾ.ಸಮೀಕ್ಷಾ ರೆಡ್ಡಿ ಅವರು ಸನ್ ಕಾನರ್ ಹಕ್ಕಿಯ ಚಿಕಿತ್ಸೆಗಾಗಿ ಮೃಗಾಲಯದ ಆಸ್ಪತ್ರೆಗೆ ತೆರಳಿದ್ದರು. ಬಳಿಕ ರಾತ್ರಿ 11:45ರ ಸುಮಾರಿಗೆ ಗರ್ಭಿಣಿ ನೀರಾನೆಯ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮೆರಾ ಮೂಲಕ ಪರೀಕ್ಷಿಸಲು ಆವರಣದ ಒಳಗೆ ಹೋಗಿದ್ದರು. ಈ ವೇಳೆ ನೀರಾನೆ ಹಠಾತ್ತಾಗಿ ಅವರ ಮೇಲೆ ದಾಳಿ ಮಾಡಿದೆ.

Railways news: ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು 35 ದಿನ ಸಂಪೂರ್ಣ ರದ್ದು, ಹಲವು ಎಕ್ಸ್‌ಪ್ರೆಸ್‌ ರೈಲುಗಳ ಬದಲಾವಣೆ

ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು 35 ದಿನ ಸಂಪೂರ್ಣ ರದ್ದು

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮತ್ತು ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲುಗಳನ್ನು ಒಟ್ಟು 35 ದಿನಗಳ ಕಾಲ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 56629 (ಮಂಗಳೂರು – ಸುಬ್ರಹ್ಮಣ್ಯ ರಸ್ತೆ) ಮತ್ತು 56630 (ಸುಬ್ರಹ್ಮಣ್ಯ ರಸ್ತೆ – ಮಂಗಳೂರು) ಮಾರ್ಚ್ 23ರಿಂದ ಏಪ್ರಿಲ್ 14ರವರೆಗೆ ಹಾಗೂ ಜೂನ್ 10ರಿಂದ ಜೂನ್ 21ರವರೆಗೆ ಸಂಚರಿಸುವುದಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಿಸಿದೆ.

73 ವರ್ಷದ ಮಹಿಳೆಯ ಎದೆಯಲ್ಲಿ ಪತ್ತೆಯಾಗಿದ್ದ ಉದರದ ಅಂಗಾಂಗಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಅಪರೂಪದ ಪ್ರಕರಣ: ವೈದ್ಯರ ತಂಡದ ಸಾಧನೆ

ಮಹಿಳೆಯ ದೇಹದಲ್ಲಿನ ಈ ಸಂಕೀರ್ಣ ಸ್ವರೂಪದ ಆರೋಗ್ಯ ಸಮಸ್ಯೆಗೆ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ಲ್ಯಾಪರೊಸ್ಕೋಪಿಕ್ ಮತ್ತು ಜಠರಗರುಳಿನ ಶಸ್ತ್ರಚಿಕಿತ್ಸಕ ಡಾ. ಪ್ರಣವ್ ಹೊನ್ನಾವರ ಶ್ರೀನಿವಾಸನ್ ಮತ್ತು ಅವರ ಶಸ್ತ್ರಚಿಕಿತ್ಸಾ ತಂಡವು ನಡೆಸಿದ ಕಡಿಮೆ ನೋವಿನ ಸುಲಭದ ಶಸ್ತ್ರಚಿಕಿತ್ಸೆ ಮೂಲಕ ಈ ಸಂಕೀರ್ಣ ಬಗೆಯ ಆರೋಗ್ಯ ಸಮಸ್ಯೆಯನ್ನು ಯಶಸ್ವಿ ಯಾಗಿ ಗುಣಪಡಿಸಲಾಗಿದೆ.

Murder Case: ಸೊಸೆಯನ್ನು ಕಾಮದಾಹಕ್ಕೆ ಬಳಸಿಕೊಂಡ ಅಪ್ಪ ಮಗನಿಂದಲೇ ಸುಪಾರಿ ಹತ್ಯೆ!

ಸೊಸೆಯನ್ನು ಕಾಮದಾಹಕ್ಕೆ ಬಳಸಿಕೊಂಡ ಅಪ್ಪ ಮಗನಿಂದಲೇ ಸುಪಾರಿ ಹತ್ಯೆ!

ಹಂಪಣ್ಣ ಮದ್ಯವ್ಯಸನಿಯೂ ಆಗಿದ್ದ. ತನ್ನ ಕಾಮತೃಷೆ ಈಡೇರಿಸಿಕೊಳ್ಳಲು ದುಡ್ಡು ಕೊಟ್ಟು ಬೇರೆ ಮಹಿಳೆಯರನ್ನು ಶೆಡ್​​ಗೆ ಕರೆಸಿಕೊಳ್ಳುತ್ತಿದ್ದ. ಮಗನ ಹೆಂಡತಿ ಅಂದರೆ ಸೊಸೆ, ಜಮೀನಿಗೆ ಕೆಲಸಕ್ಕೆ ಬಂದಾಗಲೂ ಬಿಡುತ್ತಿರಲಿಲ್ಲ. ತನ್ನ ಪತ್ನಿಯ ಜೊತೆಗೆ ತಂದೆ ಅನೈತಿಕ ಸಂಬಂಧ ಹೊಂದಿರುವ ವಿಚಾರ ಗೊತ್ತಾಗಿದ್ದೇ ತಡ ನರಸರೆಡ್ಡಿ ರೊಚ್ಚಿಗೆದ್ದಿದ್ದು, ತಂದೆಯನ್ನೇ ಮುಗಿಸಿಬಿಡುವ ಪ್ಲ್ಯಾನ್ ಮಾಡಿದ್ದ.

Acid Attack: ಮಾಜಿ ಪತ್ನಿ, 4 ವರ್ಷದ ಮಗುವಿನ ಮೇಲೂ ಆ್ಯಸಿಡ್ ಎರಚಿದ ಪಾತಕಿ

ಮಾಜಿ ಪತ್ನಿ, 4 ವರ್ಷದ ಮಗುವಿನ ಮೇಲೂ ಆ್ಯಸಿಡ್ ಎರಚಿದ ಪಾತಕಿ

ಕಳೆದ ಹಲವು ವರ್ಷಗಳಿಂದ ಪತಿ ಸುಹೇಲ್ ಹಾಗೂ ಪತ್ನಿ ತಾಸೀನಾ ನಡುವೆ ಜಗಳ ನಡೆಯುತ್ತಿತ್ತು. ಪದೇ ಪದೇ ಗಲಾಟೆ ಹಿನ್ನೆಲೆಯಲ್ಲಿ ಪತಿ ಪತ್ನಿ ಇಬ್ಬರೂ ಮುಸ್ಲಿಂ ಧಾರ್ಮಿಕ ಪದ್ಧತಿಯಂತೆ ವಿಚ್ಛೇದನ ಪಡೆದಿದ್ದರು. ಆಗಾಗ ಗಲಾಟೆ ಮಾಡುತ್ತಿರುವ ಆರೋಪದ ಮೇಲೆ ಸುಹೇಲ್ ವಿರುದ್ಧ ಮಾಜಿ ಪತ್ನಿ ತಾಸೀನಾ ಕೇಸ್ ದಾಖಲು ಮಾಡಿದ್ದಳು.

Chikkaballapur News: ಸೇವಾ ಮನೋಭಾವದಲ್ಲಿ ಮೆರೆಯಿಸಿದ ಸಚಿವ ಡಾ.ಎಂ.ಸಿ.ಸುಧಾಕರ್ ಜನ್ಮದಿನಾಚರಣೆ

ವೃದ್ಧಾಶ್ರಮದಲ್ಲಿ ಅನ್ನದಾನದ ವ್ಯವಸ್ಥೆ

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್, ಉದ್ಯಮಿ ನಂದಿ ಮುರುಳಿ ಹಾಗೂ ಮುಖಂಡರಾದ ರಾಜಾಕಾಂತ್, ಮೋಹನ್ ರೆಡ್ಡಿ ಸೇರಿದಂತೆ ಹಲವು ಗಣ್ಯರು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಚಿವರ ಆರೋಗ್ಯ, ದೀರ್ಘಾಯುಷ್ಯ ಹಾಗೂ ರಾಜಕೀಯದಲ್ಲಿ ಮತ್ತಷ್ಟು ಉನ್ನತ ಸ್ಥಾನಮಾನಕ್ಕಾಗಿ ಪ್ರಾರ್ಥಿಸಿದರು.

Cleanliness Movement: ಜಿಲ್ಲೆಯಾದ್ಯಂತ ಮಾ.23ರಿಂದ “ಪುರಾತನ ಕಲ್ಯಾಣಿಗಳ ಸ್ವಚ್ಛತೆ-ವಿಶೇಷ ಆಂದೋಲನ” : ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನವೀನ್ ಭಟ್

ಮಾ.23 ರಿಂದ “ಪುರಾತನ ಕಲ್ಯಾಣಿಗಳ ಸ್ವಚ್ಚತೆ-ವಿಶೇಷ ಆಂದೋಲನ

‘ನೀರು’ ಪ್ರತಿಯೊಂದು ಜೀವ ಸಂಕುಲಕ್ಕೂ ಮೂಲ ಆಧಾರ. ನೀರು ಇಲ್ಲದಿದ್ದರೆ ಮನುಷ್ಯ ಒಳಗೊಂಡಂತೆ ಸಲಕ ಜೀವ ರಾಶಿಗಳ ಬದುಕು ದುಸ್ಥರವಾಗಲಿದೆ. ಈ ದಿಸೆಯಲ್ಲಿ ಜಲ ಮೂಲ ಗಳ ಸಂರಕ್ಷಣೆ ಪ್ರತಿಯೊಬ್ಬರ  ಆದ್ಯ ಧ್ಯೇಯವಾಗಿದೆ. ಅದರಲ್ಲೂ ಯಾವುದೇ ನದಿ ನಾಲೆ ಗಳಿಲ್ಲದ ಬಯಲು ಸೀಮೆ ಎನಿಸಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಲ ಮೂಲ ಗಳ ಸಂರಕ್ಷಣೆ ಅತ್ಯಂತ ಪ್ರಾಮುಖ್ಯವೆನಿಸಿದೆ.

ಮಾ.23ರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರೈತ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ: ಭಕ್ತಹಳ್ಳಿ ಪ್ರತೀಶ್

23ರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರೈತ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ

ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ಭೂ ಸ್ವಾಧೀನದ ಅಂತಿಮ ಅಧಿಸೂಚನೆಯ ಆದೇಶದಂತೆ ತ್ವರಿತ ಗತಿಯಲ್ಲಿ ದರಪಟ್ಟಿ ನಿಗಧಿ ಮಾಡಲು ಒತ್ತಾಯಿಸಿ ಮಾ.23ರಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅನಿರ್ಧಿಷ್ಠಾವಧಿ ಧರಣಿ ನಡೆಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಅವರಿಗೆ ರೈತರ ಪರ ಹೋರಾಟ ಸಮಿತಿ ಮನವಿ ಪತ್ರ ನೀಡಿದರು.

Hosatodaku: ಮಟನ್‌ ಬೆಲೆ 1500 ರೂ., ಆದರೂ ಹೊಸತೊಡಕಿಗಾಗಿ ಮಾಂಸದಂಗಡಿಗಳ ಮುಂದೆ ಕ್ಯೂ

ಮಟನ್‌ ಬೆಲೆ 1500 ರೂ., ಆದರೂ ಹೊಸತೊಡಕಿಗಾಗಿ ಮಾಂಸದಂಗಡಿಗಳ ಮುಂದೆ ಕ್ಯೂ

ಹೊಸತೊಡಕು ಹಿನ್ನೆಲೆ ಇಂದು ಬೆಳಗಿನ ಜಾವ 4 ಗಂಟೆಗೇ ಮಟನ್ ಸ್ಟಾಲ್ ಓಪನ್ ಆಗಿದ್ದು, ಮಾಂಸಪ್ರಿಯರು ನಸುಕಿನ ಜಾವದಲ್ಲೇ ಎದ್ದು ಬಂದು ಮಟನ್‌ ಖರೀದಿಗೆ ಮುಗಿಬಿದ್ದಿದ್ದಾರೆ. ನೂಕುನುಗ್ಗಲು ತಪ್ಪಿಸಲು ಮಾಲೀಕರು ಬರೋಬ್ಬರಿ ನಾಲ್ಕೈದು ಕೌಂಟರ್‌ಗಳನ್ನು ತೆರೆದು ಮಟನ್ ವಿತರಣೆ ಮಾಡುತ್ತಿದ್ದಾರೆ.

Lockup death: ಹುಳಿಯಾರು ಠಾಣೆಯಲ್ಲಿ ಲಾಕಪ್ ಡೆತ್: ತನಿಖೆಗೆ ಆಗ್ರಹ

ಹುಳಿಯಾರು ಠಾಣೆಯಲ್ಲಿ ಲಾಕಪ್ ಡೆತ್: ತನಿಖೆಗೆ ಆಗ್ರಹ

ಯಳನಾಡು ಗ್ರಾಮದಲ್ಲಿ ಇಸ್ಪೀಟ್ ಆಡುತ್ತಿದ್ದಾರೆಂಬ ಖಚಿತ ಮಾಹಿತಿಯ ಮೇರೆಗೆ ಹುಳಿಯಾರು ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಕಾಂತರಾಜು (45) ಸೇರಿದಂತೆ ಆರು ಜನರನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆತಂದಿದ್ದರು. ಆದರೆ, ಠಾಣೆಗೆ ಬಂದ ಕೆಲವೇ ಸಮಯದಲ್ಲಿ ಕಾಂತರಾಜು ಮೃತಪಟ್ಟಿದ್ದಾರೆ.

Tumkur news: ಪೊಲೀಸರ ವಶದಲ್ಲಿದ್ದಾಗ ವ್ಯಕ್ತಿಯ ಸಾವು, ಕೆರಳಿದ ಗ್ರಾಮಸ್ಥರಿಂದ ಪ್ರತಿಭಟನೆ

ಪೊಲೀಸರ ವಶದಲ್ಲಿದ್ದಾಗ ವ್ಯಕ್ತಿಯ ಸಾವು, ಕೆರಳಿದ ಗ್ರಾಮಸ್ಥರಿಂದ ಪ್ರತಿಭಟನೆ

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಯಳನಾಡು ಗ್ರಾಮಸ್ಥರು ಠಾಣೆಗೆ ಮುತ್ತಿಗೆ ಹಾಕಿ, ಶವವನ್ನು ಠಾಣೆಯೊಳಗೇ ಇಟ್ಟು ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಘಟನಾ ಸ್ಥಳಕ್ಕೆ ಮಾಜಿ ಸಚಿವ ಮಾಧುಸ್ವಾಮಿ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು. ತುಮಕೂರು ಎಸ್ಪಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Zero development, Bogus bills: ಅಭಿವೃದ್ಧಿ ಶೂನ್ಯ, ಬೋಗಸ್ ಬಿಲ್‌ಗಳದ್ದೇ ಹವಾ

ಅಭಿವೃದ್ಧಿ ಶೂನ್ಯ, ಬೋಗಸ್ ಬಿಲ್‌ಗಳದ್ದೇ ಹವಾ

ತಾಲೂಕಿನ ವಿವಿಧ ಇಲಾಖೆಗಳಲ್ಲಿ ಅಭಿವೃದ್ಧಿ ಕೆಲಸಗಳು ಕೇವಲ ಕಾಗದದ ಮೇಲೆ ಸೀಮಿತ ವಾಗಿದ್ದು, ಯಾವುದೇ ಕೆಲಸ ಮಾಡದೆಯೇ ನೂರಕ್ಕೆ ನೂರರಷ್ಟು ಹಣ ಪಾವತಿ ಮಾಡಿ ಕೊಳ್ಳುವ ಮೂಲಕ ಕೋಟ್ಯಂತರ ರು. ಸಾರ್ವಜನಿಕ ಹಣ ದುರ್ಬಳಕೆಯಾಗುತ್ತಿದೆ. ಸರಕಾರಿ ಅನುದಾನದ ದುರ್ಬಳಕೆ ಮಿತಿ ಮೀರಿದ್ದು, ಪಂಚಾಯತ್ ರಾಜ್ ಇಲಾಖೆಯಿಂದ ಹಿಡಿದು ಶಿಕ್ಷಣ ಮತ್ತು ವಸತಿ ನಿಲಯಗಳವರೆಗೆ ಭ್ರಷ್ಟಾಚಾರದ ಜಾಲ ವ್ಯಾಪಿಸಿದೆ.

Water Crisis: 411 ಹಳ್ಳಿಗಳಲ್ಲಿ ಕುಡಿವ ನೀರಿನ ಅಭಾವ

411 ಹಳ್ಳಿಗಳಲ್ಲಿ ಕುಡಿವ ನೀರಿನ ಅಭಾವ

ಉತ್ತರಕನ್ನಡ ಜಿಲ್ಲೆ ಶೇ. 80ರಷ್ಟು ಅರಣ್ಯ ಪ್ರದೇಶ ಹೊಂದಿದ್ದು, ಜಿಲ್ಲೆಯ ಹಲವು ತಾಲೂಕು ಗಳಲ್ಲಿ ಬೇಸಿಗೆಯ ಆರಂಭದಲ್ಲೇ ನೀರಿನ ಅಭಾವ ತಲೆದೋರುತ್ತಿದೆ. ಜಿಲ್ಲೆಯ ಸುಮಾರು 411 ಹಳ್ಳಿಗಳು ಕುಡಿಯುವ ನೀರಿನ ತುಟಾಗ್ರತೆ ಎದುರಿಸುವ ಸಾಧ್ಯತೆಯಿದೆ ಎಂದು ಗುರುತಿಸಲಾಗಿದೆ.

Ramadan: ಸಂಭ್ರಮದ ರಂಜಾನ್‌ಗೆ ಮುಸ್ಲಿಮರಿಂದ ಭರ್ಜರಿ ಸಿದ್ದತೆ

ಸಂಭ್ರಮದ ರಂಜಾನ್‌ಗೆ ಮುಸ್ಲಿಮರಿಂದ ಭರ್ಜರಿ ಸಿದ್ದತೆ

ಹಗಲಿನಲ್ಲಿ ಸಾಕಷ್ಟು ಬಿಸಿಲಿರುವ ಕಾರಣ ಸಂಜೆ ಮಗರಿಬ್ ಪ್ರಾರ್ಥನೆ ಮುಗಿಸಿ ಉಪವಾಸ (ರೋಜಾ) ಅಂತ್ಯಗೊಳಿಸಿದ ನಂತರ ಮುಸ್ಲಿಂ ಬಾಂಧವರು ಕುಟುಂಬ ಸಮೇತ ಮಾರುಕಟ್ಟೆಗೆ ಆಗಮಿಸಿ, ಖರೀದಿಯಲ್ಲಿ ತೊಡಗುತ್ತಿದ್ದಾರೆ. ಗಾಂಧಿ ಚೌಕ್, ಕೆ.ಸಿ ಮಾರ್ಕೆಟ್ ಗಳಲ್ಲಿ ರಂಜಾನ್ ಶಾಪಿಂಗ್ಗಾಗಿ ಕೆಲ ಅಂಗಡಿಗಳು ತಲೆ ಎತ್ತಿವೆ.

Hubballi news: ಸ್ಟಂಟ್ & ಕ್ರ್ಯಾಶ್‌ ರೀಲ್ಸ್‌ ಹುಚ್ಚಾಟಕ್ಕೆ ಬಿಜೆಪಿ ಮುಖಂಡನ ಪುತ್ರ ಬಲಿ

ಸ್ಟಂಟ್ & ಕ್ರ್ಯಾಶ್‌ ರೀಲ್ಸ್‌ ಹುಚ್ಚಾಟಕ್ಕೆ ಬಿಜೆಪಿ ಮುಖಂಡನ ಪುತ್ರ ಬಲಿ

ಆಡಿ (AUDI) ಕಾರು ಮತ್ತು ಬೈಕ್‌ನಲ್ಲಿ ಅತೀ ವೇಗವಾಗಿ ರೈಡ್‌ ಮಾಡಿ ‘ಸ್ಟಂಟ್ ಹಾಗೂ ಕ್ರ್ಯಾಶ್’ ರೀಲ್ಸ್ ಚಿತ್ರೀಕರಿಸಲು ಈ ಬಾಲಕರು ಪ್ಲ್ಯಾನ್‌ ಮಾಡಿದ್ದರು. ವೇಗವಾಗಿ ಬಂದ ಕಾರು, ಬೈಕ್‌ನಲ್ಲಿದ್ದ ನಮೀಷ್‌ಗೆ ಬಲವಾಗಿ ಗುದ್ದಿದೆ. ಕಾರು ಬೈಕ್‌ಗೆ ಗುದ್ದಿದ ರಭಸಕ್ಕೆ ನಮೀಷ್ ಸುಮಾರು 30 ಅಡಿ ದೂರಕ್ಕೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ತಾಲೂಕು ಆಸ್ಪತ್ರೆ

ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ತಾಲೂಕು ಆಸ್ಪತ್ರೆ

ರಾಮದುರ್ಗ ತಾಲೂಕು ವೈದ್ಯಾಧಿಕಾರಿ ಡಾ.ನವೀನ ಕಾಶಿನಾಥ ನಿಜಗುಲಿ ಅವರು ಶಾಸಕ ಅಶೋಕ ಪಟ್ಟಣ ಅವರ ಮಾರ್ಗದರ್ಶನಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಮೇಲಾಧಿಕಾರಿಗಳು. ಸಿಬ್ಬಂದಿಗಳ ಸಹಕಾರದೊಂದಿಗೆ ಬಡ ರೋಗಿಗಳಿಗೆ ಉತ್ತಮ ಕೆಲಸ ಮಾಡುತ್ತಿದ್ದಾರೆ.

MLA Yashwant Rayagouda Patil: ಶಾಸಕ ಯಶವಂತರಾಯಗೌಡ್ರೀಗೆ ಸಚಿವ ಸ್ಥಾನ ನೀಡಿ: ಧರ್ಮರಾಜ ಅವುಜಿ ಆಗ್ರಹ

ಶಾಸಕ ಯಶವಂತರಾಯಗೌಡ್ರೀಗೆ ಸಚಿವ ಸ್ಥಾನ ನೀಡಿ

ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹೈಕಮಾಂಡ ಪಕ್ಷದ ವರಿಷ್ಠರು ಸಾಕಷ್ಟು ಬಾರಿ ಭಾಷಣದಲ್ಲಿ ಶಾಸಕ ಪಾಟೀಲರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಹೇಳಿದ್ದೀರಿ ? ಸ್ವಾತಂತ್ರ್ಯ ಸಿಕ್ಕು 75 ವರ್ಷಗತಿಸಿದರೂ ಇಂಡಿ ಮತಕ್ಷೇತ್ರ ಸಚಿವ ಸ್ಥಾನ ಸಿಗದೆ ಇರುವುದು ದೌರ್ಭಾಗ್ಯ. ನಿಷ್ಕಲ್ಮಷ ರಾಜಕೀಯ ಸಂತನಿಗೆ ಸಚಿವ ಸ್ಥಾನ ನೀಡಿದರೆ ಮಾತ್ರ ಕಾಂಗ್ರೆಸ್ ಕೊಟ್ಟ ಮಾತು ಉಳಿಸಿದಂತಾಗುತ್ತದೆ

ಸಮವಸ್ತ್ರದಲ್ಲೇ ರಾಮಚಂದ್ರ ರಾವ್‌ ಮಹಿಳೆಯರೊಂದಿಗೆ ನಡೆಸಿದ ಸರಸದ ವಿಡಿಯೊ ಅಸಲಿ; ತನಿಖಾ ತಂಡದಿಂದ ಬಯಲಾಯ್ತು ಸತ್ಯ

ರಾಮಚಂದ್ರ ರಾವ್‌ ಸರಸದ ವಿಡಿಯೊ ಅಸಲಿ ಎಂದ ತನಿಖಾ ತಂಡ

DGP Ramachandra Rao Case: ಐಪಿಎಸ್‌ ಅಧಿಕಾರಿ ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲೇ ಸಮವಸ್ತ್ರ ಧರಿಸಿ ಮಹಿಳೆಯರೊಂದಿಗೆ ಸರಸವಾಡಿರುವ ವಿಡಿಯೊಗಳು ಅಸಲಿ ಎನ್ನುವುದು ಇದೀಗ ಸಾಬೀತಾಗಿದೆ. ನಡೆಸಿದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್. ಹಿತೇಂದ್ರ ನೇತೃತ್ವದ ಐಪಿಎಸ್​​ ಅಧಿಕಾರಿಗಳ ತಂಡದ 100 ಪುಟಗಳ ವರದಿಯಲ್ಲಿ ವಿಡಿಯೊದ ಸತ್ಯಾಸತ್ಯತೆ ಹೊರ ಬಿದ್ದಿದೆ.

Robbery Case: ಬುರ್ಖಾ ಧರಿಸಿ 80 ಲಕ್ಷ ರುಪಾಯಿ ಮೌಲ್ಯದ ಕಂಪ್ಯೂಟರ್‌ ಬಿಡಿಭಾಗಗಳನ್ನು ಕದ್ದ ಅಪ್ಪ-ಮಗ

80 ಲಕ್ಷ ರು. ಮೌಲ್ಯದ ಕಂಪ್ಯೂಟರ್‌ ಬಿಡಿಭಾಗ ಕದ್ದ ಅಪ್ಪ-ಮಗ

Bengaluru News: ಬುರ್ಖಾ ಧರಿಸಿ ಅಪ್ಪ-ಮಗನ ಜೋಡಿ ಬರೋಬ್ಬರಿ 80 ಲಕ್ಷ ರುಪಾಯಿ ಮೌಲ್ಯದ ಕಂಪ್ಯೂಟರ್‌ ಬಿಡಿ ಭಾಗಗಳನ್ನು ಕದ್ದ ಘಟನೆ ನಡೆದಿದೆ. ಸದ್ಯ ಇವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ನಾಗಾವರದಲ್ಲಿ ಈ ಘಟನೆ ನಡೆದಿದೆ.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಹೋದರಿ ಜವರಮ್ಮ ನಿಧನ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಹೋದರಿ ಇನ್ನಿಲ್ಲ

Former PM HD Deve Gowda: ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಸಹೋದರಿ ಜವರಮ್ಮ (88) ವಯೋಸಹಜ ಕಾಯಿಲೆಯಿಂದ ನಿಧನ ಹೊಂದಿದರು. ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಜವರಮ್ಮ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.

Loading...