ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ರನ್ನೇ ಯಾಮಾರಿಸಿದ ಬುರ್ಖಾಧಾರಿ ಮಹಿಳೆ; ಹಿಂದು ಮಹಿಳೆ ಪರ ನೆರವು ಕೋರಿದ್ದು ಮತಾಂತರಗೊಂಡ ಮಗಳೇ!

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ರನ್ನೇ ಯಾಮಾರಿಸಿದ ಬುರ್ಖಾಧಾರಿ ಮಹಿಳೆ!

Udupi News: ಉಡುಪಿಯಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ಹಿಂದೂ ಮಹಿಳೆಗಾಗಿ ನೆರವು ಕೋರಲು ಬಂದಾಗ ಪ್ರತಿಕ್ರಿಯಿಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರು, ಇದರಿಂದ ಉಡುಪಿಯ ಬಿಜೆಪಿಯವರು ಕಲಿಯಬೇಕು ಎಂದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಆತ್ಮವಿಶ್ವಾಸದಿಂದ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು: ಕೋಟಕ್ ವರದಿ

ಬೆಂಗಳೂರಿನಲ್ಲಿ ಮೊದಲ ಮನೆ ಖರೀದಿಗೆ ಮುಂದಾಗುತ್ತಿರುವ ಜೆನ್ ಜೀ ತಲೆಮಾರು

ಕೋಟಕ್ ಮಹೀಂದ್ರಾ ಬ್ಯಾಂಕ್ ಪ್ರಕಾರ, ಉದ್ಯೋಗ ಭದ್ರತೆ, ಸುಧಾರಿತ ಮೂಲಸೌಕರ್ಯ ಮತ್ತು ಸರಳ ಸಾಲ ಪ್ರಕ್ರಿಯೆಗಳು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮನೆ ಖರೀದಿಸುವವರು ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತಿವೆ. ಈ ಹಿಂದೆ ಬಾಡಿಗೆ ಮನೆಯಲ್ಲಿದ್ದ ಜೆನ್ ಜೀ ಮತ್ತು ಯುವ ಮಿಲೇನಿಯಲ್ಸ್‌ ಈಗ ಮೊದಲಿನಿಗಿಂತಲೂ ಬೇಗನೆ ಸ್ವಂತ ಮನೆ ಹೊಂದುವತ್ತ ಹೆಜ್ಜೆ ಹಾಕುತ್ತಿರುವು ದನ್ನು ಬ್ಯಾಂಕ್ ಗಮನಿಸಿದೆ.

ಪುಣೆಯ 100 ಕೋಟಿ ಹೂಡಿಕೆಯೊಂದಿಗೆ ಭಾರತದಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ವೇಗಗೊಳಿಸಲು ಮುಂದಾಗಿರುವ GE ಏರೋಸ್ಪೇಸ್

ಉತ್ಪಾದನಾ ಸಾಮರ್ಥ್ಯಕ್ಕೆ ವೇಗ ನೀಡಲು GE ಏರೋಸ್ಪೇಸ್ ಮುಂದು

ಕಳೆದ ಎರಡು ವರ್ಷಗಳಲ್ಲಿ ಘೋಷಿಸಲಾದ ₹410 ಕೋಟಿಗೆ ಈ ಇತ್ತೀಚಿನ ಹೂಡಿಕೆ ಸೇರ್ಪಡೆ ಯಾಗಿದ್ದು, GE ಏರೋಸ್ಪೇಸ್ ತನ್ನ ಪುಣೆ ಕೇಂದ್ರದಲ್ಲಿ ಕಳೆದ ಮೂರು ವರ್ಷಗಳಲ್ಲಿ ₹510 ಕೋಟಿಗಿಂತ ಹೆಚ್ಚಿನ ಹೂಡಿಕೆಯನ್ನು ಮಾಡಿದೆ. ಹಿಂದಿನ ಹೂಡಿಕೆಗಳು ಮುಂದಿನ ಪೀಳಿಗೆಯ ಎಂಜಿನ್ ಘಟಕಗಳಿಗೆ ಉತ್ಪಾದನಾ ಪ್ರಕ್ರಿಯೆಗಳು, ಯಾಂತ್ರೀಕೃತಗೊಳಿಸುವಿಕೆ ಮತ್ತು ಸುಧಾರಿತ ಸಾಮರ್ಥ್ಯಗಳನ್ನು ಸುಧಾರಿಸುವತ್ತ ಗಮನ ಹರಿಸಿವೆ.

House Lease Scam: ಬೆಂಗಳೂರಿನಲ್ಲಿ ಮನೆ ಲೀಸ್‌, ಬಾಡಿಗೆ ಹೆಸರಲ್ಲಿ 200 ಕೋಟಿ ವಂಚನೆ: ದೂರು ದಾಖಲು, ಕಂಪನಿ‌ ಮಾಲೀಕ ಎಸ್ಕೇಪ್‌

ಬೆಂಗಳೂರಿನಲ್ಲಿ ಮನೆ ಲೀಸ್‌, ಬಾಡಿಗೆ ಹೆಸರಲ್ಲಿ 200 ಕೋಟಿ ವಂಚನೆ

ಬೆಂಗಳೂರಿನಲ್ಲಿ ಮನೆ ಲೀಸ್‌ ಹಾಗೂ ಬಾಡಿಗೆಗೆ ಕೊಡಿಸುವುದಾಗಿ 300ಕ್ಕೂ ಹೆಚ್ಚು ಜನರಿಗೆ ಜಾನ್ಸ್ ಅಸೆಟ್ ಮ್ಯಾನೇಜ್‌ಮೆಂಟ್‌ ಕಂಪನಿ ವಂಚಿಸಿದೆ. ಈ ಬಗ್ಗೆ ಇಂದಿರಾನಗರ ಠಾಣೆಯಲ್ಲಿ ದೂರು ದಾಖಲಾಇದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಕಂಪನಿಯ ಮಾಲೀಕ ಸದ್ಯ ಪರಾರಿಯಾಗಿದ್ದಾನೆ.

ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ ಪಾದ ತಪಾಸಣಾ ಶಿಬಿರ

ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ಮಧುಮೇಹ ಪಾದ ತಪಾಸಣಾ ಶಿಬಿರ

ಮಧುಮೇಹದಿಂದಾಗಿ ಪಾದಗಳಲ್ಲಿ ಉಂಟಾಗುವ ನರಗಳ ಸಂವೇದನೆ ಕುಂಠಿತವಾಗುವುದು, ರಕ್ತ ಪ್ರವಾಹದ ಅಡಚಣೆ ಹಾಗೂ ಪಾದದ ಮೇಲಿನ ಅಸಾಮಾನ್ಯ ಒತ್ತಡದಿಂದ ಹುಣ್ಣುಗಳು ಉಂಟಾಗು ವಂತಹ ಸಮಸ್ಯೆಗಳು ಅನೇಕ ಬಾರಿ ಗಂಭೀರ ಸ್ಥಿತಿಗೆ ತಲುಪುತ್ತವೆ. ಇವುಗಳನ್ನು ಸಮಯೋಚಿತ ತಪಾಸಣೆಯ ಮೂಲಕ ತಡೆಗಟ್ಟಬಹುದಾಗಿದೆ.

ಅಧಿಕ ಮಾಸದ ಪ್ರಯುಕ್ತ ಜೂನ್ 15ರವರೆಗೆ ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಪೂಜೆ

ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಪೂಜೆ

Bengaluru News: ಬೆಂಗಳೂರು ನಗರದ ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವಿಚಾರಣಾಕರ್ತ ಗಿರಿರಾಜಾಚಾರ್ ಮತ್ತು ನೂತನ ವ್ಯವಸ್ಥಾಪಕ ನಂದಕಿಶೋರಾಚಾರ್ ಅವರ ನೇತೃತ್ವದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು.

Dubare Elephant Camp: ಕೊಡಗಿನ ದುಬಾರೆಯಲ್ಲಿ ಘೋರ ಘಟನೆ; ಸಾಕಾನೆಗಳ ಕಾದಾಟದ ವೇಳೆ ಸಿಲುಕಿ ಮಹಿಳೆ ಸಾವು!, Video

ದುಬಾರೆಯಲ್ಲಿ ಸಾಕಾನೆಗಳ ಕಾದಾಟದ ವೇಳೆ ಮಹಿಳೆ ಸಾವು!

ಕೊಡಗಿನ ದುಬಾರೆಯ ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸಲಾಗುತ್ತಿತ್ತು. ಈ ವೇಳೆ 'ಕಂಜನ್' ಎಂಬ ಆನೆಯು ಮತ್ತೊಂದು ಆನೆಯಾದ 'ಮಾರ್ತಾಂಡ'ನಿಗೆ ಜೋರಾಗಿ ತಿವಿದಿದೆ. ಆನೆಗಳ ನಡುವೆ ಇದ್ದಕ್ಕಿದ್ದಂತೆ ಕಾದಾಟ ಶುರುವಾಗಿದ್ದು, ಈ ವೇಳೆ ಆನೆಯಡಿ ಸಿಲುಕಿ ತಮಿಳುನಾಡು ಮೂಲದ ಪ್ರವಾಸಿ ಮಹಿಳೆ ಮೃತಪಟ್ಟಿದ್ದಾರೆ.

ಸಂಬಂಧಿಕರ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದು, ಶವ ಹೂತು ಹಾಕಿದ ಪಾಪಿ ತಂದೆ!

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದು, ಶವ ಹೂತು ಹಾಕಿದ ತಂದೆ!

Tumkur Murder Case: ತುಮಕೂರು ಜಿಲ್ಲೆ ಶಿರಾ ತಾಲೂಕು ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತನ್ನ ವಿರೋಧದ ನಡುವೆಯೂ ಸಂಬಂಧಿಕರ ಹುಡುಗನನ್ನು ಪ್ರೀತಿಸಿದ ಹಿನ್ನೆಲೆಯಲ್ಲಿ ಕೋಪಗೊಂಡ ತಂದೆಯು ಮಗಳನ್ನು ಕೊಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಮೇ 20ಕ್ಕೆ ಸಾರಿಗೆ ಮುಷ್ಕರ; ಸೇವೆಗೆ ಗೈರಾದರೆ ಶಿಸ್ತು ಕ್ರಮ, ಸಿಬ್ಬಂದಿಗೆ ಖಡಕ್‌ ಎಚ್ಚರಿಕೆ ಕೊಟ್ಟ  KSRTC

ಮೇ 20ಕ್ಕೆ ಸಾರಿಗೆ ಮುಷ್ಕರ; ಸೇವೆಗೆ ಗೈರಾದರೆ ಶಿಸ್ತು ಕ್ರಮ

ಮೇ 20ರಂದು ಸಾರಿಗೆ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ನೌಕರರಿಗೆ ಕೆಎಸ್ಆರ್​ಟಿಸಿ ಖಡಕ್ ಎಚ್ಚರಿಕೆ ನೀಡಿದೆ. ಬುಧವಾರ ಮುಷ್ಕರದಲ್ಲಿ ಭಾಗಿಯಾಗದಂತೆ ಸಿಬ್ಬಂದಿಗೆ ಸೂಚಿಸಿದ್ದು, ಯಾವುದೇ ಮುಷ್ಕರ ಮಾಡುವಂತಿಲ್ಲ. ಮುಷ್ಕರಕ್ಕೆ ಬೆಂಬಲವನ್ನು ಸೂಚಿಸುವಂತಿಲ್ಲ ಎಂದು ಆದೇಶಿಸಿದೆ.

ಬಿರಿಯಾನಿ ತಿನ್ನಲು ಹೋಗ್ತಿದ್ದ ವಿದ್ಯಾರ್ಥಿಗೆ ಚಾಕು ಇರಿದು ಬೈಕ್‌ ಕಳ್ಳತನ!

ಬಿರಿಯಾನಿ ತಿನ್ನಲು ಹೋಗಿದ್ದ ವಿದ್ಯಾರ್ಥಿಗೆ ಚಾಕು ಇರಿದು ಬೈಕ್‌ ಕಳ್ಳತನ

ಬಿರಿಯಾನಿ ತಿನ್ನಲು ಹೋದ ವಿದ್ಯಾರ್ಥಿಗೆ ಚಾಕು ಇರಿದು, ಬೈಕ್‌ ಕಸಿದುಕೊಂಡು ಪರಾರಿಯಾದ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ಬಂಜಾರ ಲೇಔಟ್‌ನಲ್ಲಿ ನಡೆದಿದೆ. ಬಿಬಿಎ ಓದುತ್ತಾ ಫ್ಲಿಪ್​ ಕಾರ್ಟ್​​ನಲ್ಲಿ ಕೆಲಸ ಮಾಡುತ್ತಿದ್ದ ಧೀರಜ್ ಮೇಲೆ ಹಲ್ಲೆ ನಡೆದಿದೆ.

ಸ್ವಚ್ಛತೆಯಿಲ್ಲದಿದ್ದರೂ ಶುಲ್ಕವಂತೂ ಕೊಡಲೇಬೇಕು

ಸ್ವಚ್ಛತೆಯಿಲ್ಲದಿದ್ದರೂ ಶುಲ್ಕವಂತೂ ಕೊಡಲೇಬೇಕು

ನಗರದಲ್ಲಿರುವ ಅನೇಕ ಭಾಗದಲ್ಲಿ ಉಚಿತ ಸಾರ್ವಜನಿಕ ಶೌಚಾಲಯ ಎಂಬ ಬರಹವಿದ್ದರೂ, ಕೆಳಭಾಗ ದಲ್ಲಿ ಪೇ ಅಂಡ್ ಯೂಸ್, ನೀಟ್ ಅಂಡ್ ಕ್ಲೀನ್ ಎಂಬ ಸ್ಟಿಕರ್ ಅಂಟಿಸಿ ಮೂತ್ರ ವಿಸರ್ಜನೆಗೆ 5 ರು. ಹಾಗೂ ಮಲ ವಿಸರ್ಜನೆಗೆ 10 ರು. ಶುಲ್ಕ ವಿಧಿಸಲಾಗುತ್ತಿದೆ. ಇದರಿಂದ ಬಡವರು, ದಿನಗೂಲಿ ಕಾರ್ಮಿಕ ರು ಹಾಗೂ ಸಾಮಾನ್ಯ ಜನರು ಪ್ರತಿ ಸಲ ಶುಲ್ಕವನ್ನು ಕೊಟ್ಟು ಹೋಗಬೇಕಾದ ಪರಿಸ್ಥಿತಿ ಬಂದಿದೆ. ಅನೇಕ ಸಮಯದಲ್ಲಿ ಐದು ರುಪಾಯಿ ಕೊಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಹಲವರು ರಸ್ತೆಬದಿ ಯಲ್ಲಿಯೇ ಮಾಡುತ್ತಿದ್ದಾರೆ

ಬೆಂಗಳೂರು-ಮುಂಬೈ ಹೊಸ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಚಾಲನೆ

ಬೆಂಗಳೂರು-ಮುಂಬೈ ಹೊಸ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಚಾಲನೆ

ಬೆಂಗಳೂರು ಮತ್ತು ಮುಂಬೈ (Banglore- Mumbai) ನಡುವೆ ಹೊಸ ಎಕ್ಸ್‌ಪ್ರೆಸ್‌ ರೈಲು ಆರಂಭಗೊಂಡಿದ್ದು, ಇದಕ್ಕೆ ಬೈಯ್ಯಪ್ಪನಹಳ್ಳಿ ಬಳಿಯ ಎಸ್ಎಂವಿಟಿ ರೈಲ್ವೆ ನಿಲ್ದಾಣದಲ್ಲಿ ಚಾಲನೆ ನೀಡಲಾಗಿದೆ. ಮೇ 23 ರಿಂದ ರೈಲು ಸಂಖ್ಯೆ 16553 ಎಸ್ಎಂವಿಟಿ ಬೆಂಗಳೂರು – ಮುಂಬೈ ಲೋಕಮಾನ್ಯ ತಿಲಕ್ ಟರ್ಮಿನಸ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ಸಂಚಾರ ಆರಂಭಿಸಲಿದೆ.

ರಾಜ್ಯಾದ್ಯಂತ ವರುಣನ ಆರ್ಭಟ; ಭಾರೀ ಮಳೆಗೆ 2 ಸಾವು, ಅಪಾರ ಹಾನಿ

ರಾಜ್ಯಾದ್ಯಂತ ವರುಣನ ಆರ್ಭಟ

Rain Alert: ಭಾನುವಾರ ರಾಜ್ಯದಲ್ಲಿ ವರುಣ ಆರ್ಭಟಿಸಿದ್ದಾನೆ. ಮಳೆಯಿಂದಾಗಿ ಹಲವು ಕಡೆ ನಾನಾ ಅವಾಂತರಗಳು ಸೃಷ್ಟಿಯಾಗಿವೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

Kollur Accident: ಕೊಲ್ಲೂರು ಬಳಿ ಮೀನು ಸಾಗಣೆ ವಾಹನ-ಜೀಪ್ ಡಿಕ್ಕಿ; ಕೇರಳ ಮೂಲದ ಇಬ್ಬರು ಪ್ರವಾಸಿಗರ ಸಾವು

ಕೊಲ್ಲೂರು ಬಳಿ ಭೀಕರ ಅಪಘಾತ; ಕೇರಳ ಮೂಲದ ಇಬ್ಬರ ಸಾವು

Udupi News: ಉಡುಪಿ ಜಿಲ್ಲೆ ಕೊಲ್ಲೂರಿನ ಕೊಡಚಾದ್ರಿಯ ದಳಿ ಎಂಬಲ್ಲಿ ಭೀಕರ ಅಪಘಾತ ನಡೆದಿದೆ. ಮೀನು ಸಾಗಾಟದ ವಾಹನ ಹಾಗೂ ಜೀಪ್ ಡಿಕ್ಕಿಯಾದ ಪರಿಣಾಮ ಕೇರಳ ಮೂಲದ ಇಬ್ಬರು ಪ್ರವಾಸಿಗರು ಮೃತಪಟ್ಟಿದ್ದು, ಎಂಟು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಗ್ಯಾರಂಟಿಗಳಿಗೆ ಹಣ ಹೊಂದಿಸಲು ಎಷ್ಟು ತೆರಿಗೆ ಹೇರಿಕೆ ಮಾಡಿದ್ದೀರಿ?; ರಾಜ್ಯ ಸರ್ಕಾರದ ವಿರುದ್ಧ ಎಚ್‍.ಡಿ. ಕುಮಾರಸ್ವಾಮಿ ಕಿಡಿ

ಗ್ಯಾರಂಟಿಗಳಿಗೆ ಹಣ ಹೊಂದಿಸಲು ಎಷ್ಟು ತೆರಿಗೆ ಹೇರಿಕೆ ಮಾಡಿದ್ದೀರಿ?

ಕಳೆದ ಮೂರು ವರ್ಷಗಳಲ್ಲಿ ಮದ್ಯ, ಬಸ್‌, ವಿದ್ಯುತ್ ಸೇರಿ ಅನೇಕ ಬಾಬತ್ತುಗಳ ಮೇಲೆ ನಿರಂತರವಾಗಿ ತೆರಿಗೆವಿಧಿಸಿ ಬೆಲೆ ಏರಿಕೆ ಮಾಡಲಾಗಿದೆ. ಒಂದೆಡೆ ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಜನರ ಮೂಗಿಗೆ ತುಪ್ಪ ಸವದುತ್ತಿರುವ ಸರ್ಕಾರವು ಮತ್ತೊಮ್ಮೆ ಅದಕ್ಕೂ ಮೀರಿ ಬೆಲೆ ಏರಿಕೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

Gubbi News: ಪ್ರಸ್ತುತ ದಿನಮಾನದಲ್ಲಿ ದೈಹಿಕ ಆರೋಗ್ಯ ಮುಖ್ಯ: ಜಿ.ಪ್ರಸನ್ನಕುಮಾರ್

ಪ್ರಸ್ತುತ ದಿನಮಾನದಲ್ಲಿ ದೈಹಿಕ ಆರೋಗ್ಯ ಮುಖ್ಯ: ಜಿ.ಪ್ರಸನ್ನಕುಮಾರ್

ಕ್ರೀಡಾ ಜಗತ್ತಿನಲ್ಲಿ ಬೆಳೆದ ಸಾವಿರಾರು ಮಂದಿ ಬದುಕು ಕಂಡುಕೊಂಡಿದ್ದಾರೆ. ನಗರ ಪ್ರದೇಶದಲ್ಲಿ ಮಕ್ಕಳನ್ನು ಕೈಹಿಡಿದು ನಡೆಸುವ ದೃಶ್ಯ ನೋಡುತ್ತೇವೆ. ಶಾಲೆ ಅಷ್ಟೇ ನೋಡುವ ಮಕ್ಕಳು ಇನ್ನಿತರ ಚಟುವಟಿಕೆ ಬಗ್ಗೆ ತೊಡಗದೆ ಚಿಕ್ಕ ವಯಸ್ಸಿನಲ್ಲೇ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಆಟದಲ್ಲಿ ತೊಡಗಿಸಬೇಕು. ಮೈದಾನದಲ್ಲಿ ಬೆವರು ಹರಿಸಿ ಆಟ ಆಡಿದ್ದಲ್ಲಿ ದೈಹಿಕ ಆರೋಗ್ಯ ಪ್ರಾಪ್ತಿಯಾಗುತ್ತದೆ. ನಂತರ ಮಾನಸಿಕ ಆರೋಗ್ಯ ಕೂಡ ಉತ್ತಮಗೊಳ್ಳುತ್ತದೆ

Self Harming: ಮಕ್ಕಳ ಕೊರಗು: ಗೃಹಿಣಿ ಆತ್ಮಹತ್ಯೆ

Self Harming: ಮಕ್ಕಳ ಕೊರಗು: ಗೃಹಿಣಿ ಆತ್ಮಹತ್ಯೆ

ಮದುವೆಯಾಗಿ 4 ವರ್ಷಗಳಾದರೂ ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. ಗಂಡ-ಹೆಂಡತಿ ನಡುವೆ ಈ ವಿಷಯ ಮತ್ತು ಬೇರೆ ಮನೆ ಮಾಡುವ ವಿಚಾರದಲ್ಲಿ ವೈಮನಸ್ಸು ಮೂಡಿದ್ದು, ತಾಲ್ಲೂಕಿನ ಮಂಚನ ಬಲೆಯ ಅಜ್ಜಿಯ ಮನೆಗೆ ಬಂದಿದ್ದಳು. ಈ ವೇಳೆ ಮನ ನೊಂದು ರುಚಿತಾ ಮನೆಯಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಯುವತಿ ನಿಗೂಢ ನಾಪತ್ತೆ; ಅಪಹರಣದ ಶಂಕೆ, ಇಬ್ಬರ ಮೇಲೆ ಅನುಮಾನ

ಯುವತಿ ನಿಗೂಢ ನಾಪತ್ತೆ; ಅಪಹರಣದ ಶಂಕೆ, ಇಬ್ಬರ ಮೇಲೆ ಅನುಮಾನ

ಮಗಳ ನಾಪತ್ತೆಯ ಹಿಂದೆ ಫಾಜಿಲ್ ಮತ್ತು ಜಾರಾ ಎಂಬುವವರ ಕೈವಾಡ ಇರಬಹುದು ಎಂದು ಪೋಷಕರು ಬಲವಾದ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರ ಮೊಬೈಲ್ ಸಂಖ್ಯೆ ಗಳನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮಗಳನ್ನು ಹುಡುಕುವಲ್ಲಿ ನಿರತರಾಗಿದ್ದರಿಂದ ಪೊಲೀಸ್ ಠಾಣೆಗೆ ದೂರು ನೀಡಲು ತಡವಾಗಿದೆ ಎಂದು ಪೋಷಕರು ತಿಳಿಸಿದ್ದಾರೆ.

ಚಿಂತಾಮಣಿಯಲ್ಲಿ ನಕಲಿ 'ಫಿನೋಲೆಕ್ಸ್' ಕೇಬಲ್ ಜಾಲ ಪತ್ತೆ: ಪ್ರಖ್ಯಾತ ಕಂಪನಿ ಮ್ಯಾನೇಜರ್‌ನಿಂದಲೇ ದೂರು, ಪೊಲೀಸ್ ದಾಳಿ

ಚಿಂತಾಮಣಿಯಲ್ಲಿ ನಕಲಿ'ಫಿನೋಲೆಕ್ಸ್'ಕೇಬಲ್ ಜಾಲ ಪತ್ತೆ

ಚಿಂತಾಮಣಿ ನಗರದಲ್ಲಿ ನಡೆಸಿದ ಮಾರುಕಟ್ಟೆ ಸಮೀಕ್ಷೆಯ ವೇಳೆ,ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಸಮೀಪವಿರುವ 'ಭರತ್ ಇಂಜಿನಿಯರಿಂಗ್ ವರ್ಕ್ಸ್ ಎಂಬ ಮಳಿಗೆಯಲ್ಲಿ ಫಿನೋಲೆಕ್ಸ್ ಬ್ರ‍್ಯಾಂಡ್ ಹೆಸರಿನ ನಕಲಿ ಸಬ್‌ಮರ್ಸಿಬಲ್ ಎಲೆಕ್ಟ್ರಿಕಲ್ ಕೇಬಲ್‌ಗಳನ್ನು ಉದ್ದೇಶಪೂರ್ವಕವಾಗಿ ಮಾರಾಟ ಮತ್ತು ವಿತರಣೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

Shidlaghatta News: ಜನರ ವಿಶ್ವಾಸವೇ ನನ್ನ ರಾಜಕೀಯ ಶಕ್ತಿ: ಪುಟ್ಟು ಆಂಜಿನಪ್ಪ

ಜನರ ವಿಶ್ವಾಸವೇ ನನ್ನ ರಾಜಕೀಯ ಶಕ್ತಿ: ಪುಟ್ಟು ಆಂಜಿನಪ್ಪ

ಶಿಡ್ಲಘಟ್ಟ ಕ್ಷೇತ್ರವನ್ನು ನಾಲ್ಕು ದಶಕಗಳ ಕಾಲ ಪ್ರತಿನಿಧಿಸಿ ಸಚಿವರಾಗಿ ಹಾಗೂ ಶಾಸಕರಾಗಿ ಜನಸೇವೆ ಸಲ್ಲಿಸಿರುವ ವಿ. ಮುನಿಯಪ್ಪ ಅವರ ಸೇವೆಯನ್ನು ಸ್ಮರಿಸಿದರು. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಅವರು ಶೀಘ್ರ ಗುಣಮುಖರಾಗಿ ಮತ್ತೆ ಜನರ ನಡುವೆ ಬರಲಿ. ಅವರ ಅನುಭವ ಹಾಗೂ ಮಾರ್ಗದರ್ಶನ ಪಕ್ಷಕ್ಕೂ ಕ್ಷೇತ್ರದ ಅಭಿವೃದ್ಧಿಗೂ ಅಗತ್ಯವಾಗಿದೆ

ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಹುರುಳಿಕಾಯಿ ಮತ್ತು ಸೌತೆಕಾಯಿಗೆ ದೊರೆತ ಉತ್ತಮ ಬೆಲೆ

ರೈತರ ಮೊಗದಲ್ಲಿ ಮಂದಹಾಸ: ಹುರುಳಿಕಾಯಿ, ಸೌತೆಕಾಯಿಗೆ ದೊರೆತ ಉತ್ತಮ ಬೆಲೆ

ಚಿಕ್ಕಬಳ್ಳಾಪುರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಕಳೆದ ಎರಡು ವಾರದಿಂದ 10 ಕೆ.ಜಿ ಬೀನ್ಸ್ ಒಂದು ಸಾವಿರದಿಂದ 1300 ರೂಗೆ ಜಿಗಿದಿದೆ ಮತ್ತು ಸೌತೆಕಾಯಿ ಸಹ ಒಂದು ಮೂಟೆ 600 ರಿಂದ 800 ರೂ ವರೆಗೆ ಖರೀದಿ ಆಗಿರುವುದು ರೈತರಿಗೆ ಸ್ವಲ್ಪ ಸಂತೋಷವಾಗಿದೆ.ಇನ್ನೂ ಅನೇಕ ತರಕಾರಿಗಳಿಗೆ ರೇಟ್ ನುಗ್ಗೆಕಾಯಿ ಕೆ.ಜಿಗೆ 60, ಕ್ಯಾರೆಟ್ 40, ಟೊಮೆಟೋ 50 ರೂ ಹೀಗೆ ಸ್ವಲ್ಪ ಮಟ್ಟಿಗೆ ಎಲ್ಲಾ ತರಕಾರಿ ಗಳ ಬೆಲೆ ಏರುಗತಿಯಲ್ಲಿರುವುದು ರೈತರಿಗೆ ಖುಷಿ ತಂದಿದೆ.

ಪೌರಾಯುಕ್ತರ ವಿರುದ್ಧ ಮಾಜಿ ನಗರಸಭಾ ಸದಸ್ಯ ಮೊಹಮ್ಮದ್ ಶಫೀಕ್ ಆಕ್ರೋಶ: ಸತ್ಯಾಂಶ ಮರೆಮಾಚಬೇಡಿ

ಪೌರಾಯುಕ್ತರ ವಿರುದ್ಧ ಮಾಜಿ ನಗರಸಭಾ ಸದಸ್ಯ ಮೊಹಮ್ಮದ್ ಶಫೀಕ್ ಆಕ್ರೋಶ

ಚಿಂತಾಮಣಿ ನಗರದ ಅವರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಅಧಿಕಾರಿ ಗಳು ಸತ್ಯಾಂಶ ಮರೆ ಮಾಚದೆ ಸಾರ್ವಜನಿಕರ ಮುಂದೆ ವಾಸ್ತವಾಂಶ ಇಡಬೇಕು ಎಂದು ಆಗ್ರಹಿಸಿದರು. ನಗರದಲ್ಲಿ ನಡೆದಿರುವ ಹಲವು ಪ್ರಮುಖ ಘಟನೆಗಳನ್ನು ಉಲ್ಲೇಖಿಸಿದ ಅವರು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದರು.

Scholarship Distribution: ಬಿಲ್ಲವಾಸ್ ಕತಾರ್‌ನಿಂದ 100 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ವಿತರಣೆ

ಬಿಲ್ಲವಾಸ್ ಕತಾರ್‌ನಿಂದ 100 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ವಿತರಣೆ

Billawas Qatar: ಬಿಲ್ಲವಾಸ್ ಕತಾರ್ ವತಿಯಿಂದ ಮಂಗಳೂರಿನ ಕುದ್ರೋಳಿಯ ಶ್ರೀ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರ್ಹ 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಗಣ್ಯರು, ಸಮುದಾಯದ ಮುಖಂಡರು, ಪೋಷಕರು ಮತ್ತು ವಿದ್ಯಾರ್ಥಿಗಳ ಸ್ಫೂರ್ತಿದಾಯಕ ಸಹಭಾಗಿತ್ವದೊಂದಿಗೆ ಸಭೆಯು ಎಲ್ಲರ ಗಮನ ಸೆಳೆಯಿತು.

Viprotsava 2026: ಮಂಡ್ಯದಲ್ಲಿ ಅದ್ಧೂರಿಯಾಗಿ ನೆರವೇರಿದ ವಿಪ್ರೋತ್ಸವ-2026

ಮಂಡ್ಯದಲ್ಲಿ ಅದ್ಧೂರಿಯಾಗಿ ನೆರವೇರಿದ ವಿಪ್ರೋತ್ಸವ-2026

ಮಂಡ್ಯ ಜಿಲ್ಲಾ ಗಾಯತ್ರಿ ಸಭಾ ಭವನದಲ್ಲಿ “ವಿಪ್ರೋತ್ಸವ-2026” ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕೃತಿಕ ಭರತನಾಟ್ಯ, ಭಜನೆ ಹಾಗೂ ಹಾಸ್ಯ ಕಾರ್ಯಕ್ರಮಗಳು ಸಭಿಕರ ಮನಗೆದ್ದವು. ಕಲಾವಿದರು ತಮ್ಮ ಅದ್ಭುತ ಪ್ರದರ್ಶನಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

Loading...