ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

DK Shivakumar: ಖಾತಾ ಮಾಡಿಸಲು ಲಂಚ ಕೇಳಿದ ಆರ್‌ಓ ವಿರುದ್ಧ ಕ್ರಮಕ್ಕೆ ಡಿ.ಕೆ. ಶಿವಕುಮಾರ್ ಸೂಚನೆ

ಲಂಚ ಕೇಳಿದ ಆರ್‌ಓ ವಿರುದ್ಧ ಕ್ರಮಕ್ಕೆ ಡಿ.ಕೆ. ಶಿವಕುಮಾರ್ ಸೂಚನೆ

Bengaluru Nadige Abhiyana: ಖಾತಾ ಮಾಡಿಸಲು 10-15 ಸಾವಿರ ಲಂಚ ಕೇಳುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕೆ.ಆರ್. ಪುರಂ ಆರ್‌ಓ ಬಸವರಾಜ್ ಅವರ ವಿರುದ್ಧ ಕ್ರಮ ಜರುಗಿಸುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬೆಂಗಳೂರಿನ ಕೆ.ಆರ್. ಪುರಂನ ಟಿ.ಸಿ. ಪಾಳ್ಯದ ವೆಂಗಯ್ಯ ಪಾರ್ಕ್‌ನಲ್ಲಿ ಶನಿವಾರ ʼಬೆಂಗಳೂರು ನಡಿಗೆʼ ಅಭಿಯಾನದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ವೇಳೆ ಅವರು ಸೂಚನೆ ನೀಡಿದರು.

Kaneri Swamiji: ಡಿಸಿ ನೋಟಿಸ್‌ ಬಳಿಕ ಬಾಗಲಕೋಟೆ ತೊರೆದ ಕನೇರಿ ಸ್ವಾಮೀಜಿ; ಮೂಲ ಮಠಕ್ಕೆ ವಾಪಸ್‌

ಡಿಸಿ ನೋಟಿಸ್‌ ಬಳಿಕ ಬಾಗಲಕೋಟೆ ತೊರೆದ ಕನೇರಿ ಸ್ವಾಮೀಜಿ

Adrushya Kadhsiddheshwar Swamiji : ವಿಜಯಪುರ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ, ಕನೇರಿ ಶ್ರೀಗಳು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿಕ್ಕಾಲಗುಂಡಿ ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ (ಕನೇರಿ ಶಾಖಾ ಮಠ) ಕಳೆದ ಎರಡು ದಿನಗಳಿಂದ ವಾಸ್ತವ್ಯ ಹೂಡಿದ್ದರು. ಆದರೆ, ಆದರೆ, ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗಬಹುದು ಎಂದು ಜಿಲ್ಲಾಧಿಕಾರಿ ನೋಟಿಸ್ ಜಾರಿಗೊಳಿಸಿದ್ದಹಿನ್ನೆಲೆ ಸ್ವಾಮೀಜಿ ಜಿಲ್ಲೆಯನ್ನು ತೊರೆದಿದ್ದಾರೆ.

Self Harming: ಸೀನಿಯರ್‌ ಕಿರುಕುಳ, ಬೆಂಗಳೂರಿನ ಪಿಜಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

ಸೀನಿಯರ್‌ ಕಿರುಕುಳ, ಬೆಂಗಳೂರಿನ ಪಿಜಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ

Harassment: ಸನಾ ಸಾವಿಗೆ ಆಕೆ ಓದುತ್ತಿದ್ದ ಕಾಲೇಜಿನ ಪಾಸ್ ಔಟ್ ವಿದ್ಯಾರ್ಥಿ ಕಾರಣ ಎಂದು ಹೇಳಲಾಗುತ್ತಿದೆ. ಮೃತ ಸನಾ ಕುಟುಂಬದವರಿಂದ ರಿಫಾಸ್ ಎನ್ನುವ ವಿದ್ಯಾರ್ಥಿಯ ವಿರುದ್ಧ ಆರೋಪ ಕೇಳಿ ಬಂದಿದೆ. ಸನಾ ಪರ್ವೀನ್ ಓದುತ್ತಿದ್ದ ಕಾಲೇಜಿನಲ್ಲಿ ರಿಫಾಸ್ ಸಹ ಓದುತ್ತಿದ್ದ. ಈತ ಪಾಸ್ ಔಟ್ ಆಗಿದ್ದರೂ ಸನಾಗೆ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ.

Robbery Case: ಮಚ್ಚಿನಿಂದ ಕೈಬೆರಳು ಕತ್ತರಿಸಿ ಮಹಿಳೆಯ ದರೋಡೆ ಮಾಡಿದ ಇಬ್ಬರ ಸೆರೆ

ಮಚ್ಚಿನಿಂದ ಕೈಬೆರಳು ಕತ್ತರಿಸಿ ಮಹಿಳೆಯ ದರೋಡೆ ಮಾಡಿದ ಇಬ್ಬರ ಸೆರೆ

Crime News: ಆರೋಪಿಗಳನ್ನು ಪ್ರವೀಣ್ ಮತ್ತು ಯೋಗಾನಂದ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಉಷಾ ಮತ್ತು ವರಲಕ್ಷ್ಮಿ ಎಂಬ ಇಬ್ಬರು ಮಹಿಳೆಯರು ಸೆಪ್ಟೆಂಬರ್ 13ರಂದು ರಾತ್ರಿ ಗಣೇಶ ಹಬ್ಬದ ಆರ್ಕೆಸ್ಟ್ರಾದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಆರೋಪಿಗಳು ಹಲ್ಲೆ ಮಾಡಿ ಚಿನ್ನದ ಸರ ದರೋಡೆ ಮಾಡಿದ್ದರು.

Body Found: ಬೆಂಗಳೂರಿನ ಲಾಡ್ಜ್‌ನಲ್ಲಿ ಪುತ್ತೂರಿನ ಯುವಕನ ಶವ ಪತ್ತೆ, ಜತೆಗಿದ್ದ ಯುವತಿ ನಾಪತ್ತೆ

ಬೆಂಗಳೂರಿನ ಲಾಡ್ಜ್‌ನಲ್ಲಿ ಯುವಕನ ಶವ ಪತ್ತೆ, ಜತೆಗಿದ್ದ ಯುವತಿ ನಾಪತ್ತೆ

Bengaluru: ಯುವಕ ತಕ್ಷಿತ್ ಸಾವಿನ ಸುತ್ತ ಅನುಮಾನದ ಹುತ್ತ ಮೂಡಿದೆ. ತಕ್ಷಿತ್ ಹಾಗೂ ಯುವತಿ ಪಣಂಬೂರಿನ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಮೈಸೂರಿನಲ್ಲಿ ಓದೋಕೆ ಹೋಗ್ತೀನಿ ಅಂತ ಹೇಳಿ ಇಬ್ಬರೂ ಬೆಂಗಳೂರಿಗೆ ಬಂದಿದ್ದಾರೆ. ಗುರುವಾರ ಯುವತಿ ರೂಂ ಚೆಕೌಟ್‌ ಮಾಡಿದ್ದರೆ, ಶನಿವಾರ ಯುವಕನ ಶವ ಪತ್ತೆಯಾಗಿದೆ.

Gold Rate Oct 18th 2025: ಚಿನ್ನ ದರದಲ್ಲಿ ಕೊಂಚ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold and silver rate in bengaluru: ಇಂದು 22ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 175 ರೂ. ಇಳಿಕೆ ಕಂಡಿದ್ದು, 11,995 ರೂ. ಆಗಿದೆ. 24 ಕ್ಯಾರಟ್‌ 1 (Gold Price) ಗ್ರಾಂ ಚಿನ್ನದ ದರದಲ್ಲಿ 191 ರೂ. ಇಳಿಕೆ ಕಂಡು, 13,086 ರೂ ಆಗಿದೆ.

Hasanamba Devi: ಹಾಸನಾಂಬಾ ದೇವಿ ದರ್ಶನಕ್ಕೆ ಜನಸಾಗರ, ಬೆಂಗಳೂರಿನಿಂದ ಹಾಸನ ಬಸ್‌ ತಾತ್ಕಾಲಿಕ ಸ್ಥಗಿತ

ಹಾಸನಾಂಬಾ ದರ್ಶನಕ್ಕೆ ಜನಸಾಗರ, ಬೆಂಗಳೂರು- ಹಾಸನ ಬಸ್‌ ತಾತ್ಕಾಲಿಕ ಸ್ಥಗಿತ

KSRTC: ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಭಕ್ತರನ್ನು ನಿಯಂತ್ರಿಸಲು ಅಸಾಧ್ಯದ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ತಾತ್ಕಾಲಿಕವಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ತಾತ್ಕಾಲಿಕವಾಗಿ ದರ್ಶನದ ಟಿಕೆಟ್‌ ಬುಕಿಂಗ್‌ ಕೂಡ ಸ್ಥಗಿತಗೊಳಿಸಲಾಗಿದೆ.

Self Harming: ಉಡುಪಿಯಲ್ಲಿ ಅಣ್ಣ-ತಂಗಿ ನೇಣಿಗೆ ಬಲಿ, ಕಾರಣ ನಿಗೂಢ

ಉಡುಪಿಯಲ್ಲಿ ಅಣ್ಣ-ತಂಗಿ ನೇಣಿಗೆ ಬಲಿ, ಕಾರಣ ನಿಗೂಢ

Udupi News: ಮಲ್ಲೇಶ್ (23) ಮತ್ತು ಪವಿತ್ರಾ (17) ಮೃತರಾಗಿದ್ದು, ಪವಿತ್ರಾ ತಾಯಿ ಮನೆಯಲ್ಲಿ ಇಲ್ಲದ ವೇಳೆ ಇಬ್ಬರೂ ನೇಣಿಗೆ ಕೊರಳೊಡ್ಡಿದ್ದಾರೆ. ಇವರಿಬ್ಬರೂ ಅಕ್ಕ- ತಂಗಿಯರ ಮಕ್ಕಳಾಗಿದ್ದು, ಸೋದರ ಸಂಬಂಧಿಗಳು. ಇಬ್ಬರೂ ರಾಯಚೂರು ಮೂಲದವರು ಎಂದು ತಿಳಿದುಬಂದಿದೆ.

Murder Case: ಸಂಶಯಕ್ಕೆ ಪತ್ನಿ ಬಲಿ, ಲೇಡಿ ಕಂಡಕ್ಟರ್‌ನ ಇರಿದು ಕೊಂದ ಕಾನ್‌ಸ್ಟೇಬಲ್

ಸಂಶಯಕ್ಕೆ ಪತ್ನಿ ಬಲಿ, ಲೇಡಿ ಕಂಡಕ್ಟರ್‌ನ ಇರಿದು ಕೊಂದ ಕಾನ್‌ಸ್ಟೇಬಲ್

Belagavi crime: ಸಂಶಯ ಪಟ್ಟುಕೊಂಡು ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಗಂಡನಿಂದ ಪಾರಾಗಲು ಕಾಶಮ್ಮ ನೆಲ್ಲಿಗಣಿ ಅಧಿಕೃತವಾಗಿ ವಿಚ್ಛೇದನವನ್ನೂ ಪಡೆದಿದ್ದರು. ವಿಚ್ಛೇದನದ ನಂತರವೂ ಆರೋಪಿ ಸಂತೋಷ್, ಕಾಶಮ್ಮನಿಗೆ ನಿರಂತರವಾಗಿ ಕರೆಮಾಡಿ ನಿಂದಿಸುತ್ತಿದ್ದನೆಂದು ಆಕೆಯ ಕುಟುಂಬದವರು ಹೇಳಿದ್ದಾರೆ.

Priyank Kharge: ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಭಗವಾಧ್ವಜಗಳ ತೆರವು

ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಭಗವಾಧ್ವಜಗಳ ತೆರವು

RSS: ಚಿತ್ತಾಪುರದ ಪುರಸಭೆ ನೌಕರರು, ಸಿಬ್ಬಂದಿಗಳು ರಾತ್ರೋ ರಾತ್ರಿ ಆಗಮಿಸಿ, ಪರವಾನಗಿ ಇಲ್ಲದೇ ಅಳವಡಿಸಲಾಗಿದೆ ಎಂದು ಭಗವಾ ಧ್ವಜಗಳನ್ನೆಲ್ಲ ತೆರವುಗೊಳಿಸಿದ್ದಾರೆ. ಪೋಸ್ಟರ್‌ಗಳನ್ನು ಹರಿದುಹಾಕಿದ್ದಾರೆ. ಸಂಘದ ಅಭಿಮಾನಿಗಳು, ಕಾರ್ಯಕರ್ತರು ಇದನ್ನು ವಿರೋಧಿಸಿ ಪುರಸಭೆಗೆ ಧಿಕ್ಕಾರ ಕೂಗಿದ್ದಾರೆ.

Kaneri Swamiji: ವಿಜಯಪುರದ ಬೆನ್ನಲ್ಲೇ ಕನ್ನೇರಿ ಶ್ರೀಗಳಿಗೆ ಬಾಗಲಕೋಟೆಯಿಂದಲೂ ಗಡಿಪಾರು, ಚಿಕ್ಕಾಲಗುಂಡಿ ಮಠ ತೊರೆಯುವಂತೆ ನೋಟಿಸ್

ವಿಜಯಪುರದ ಬೆನ್ನಲ್ಲೇ ಕನ್ನೇರಿ ಶ್ರೀಗಳಿಗೆ ಬಾಗಲಕೋಟೆಯಿಂದಲೂ ಗಡಿಪಾರು

Bagalakote: ಲಿಂಗಾಯತ ಶ್ರೀಗಳಿಗೆ ಅವಮಾನಕಾರಿಯಾಗಿ ಮಾತನಾಡಿದ್ದು, ಪ್ರಕ್ಷುಬ್ಧತೆಗೆ ಕಾರಣವಾಗಲಿದೆ ಎಂಬ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ಕನ್ನೇರಿ ಶ್ರೀಗಳನ್ನು ನಿರ್ಬಂಧಿಸಲಾಗಿತ್ತು. ಇದೀಗ ಬಾಗಲಕೋಟೆ ಜಿಲ್ಲೆಯಲ್ಲೂ ಅವರಿಗೆ ಜಿಲ್ಲಾಧಿಕಾರಿಗಳು ನೋಟಿಸ್‌ ನೀಡಿದ್ದು, ಚಿಕ್ಕಾಲಗುಂಡಿ ಮಲ್ಲಿಕಾರ್ಜುನ ಮಠದಿಂದ ಆಚೆ ಕಳಿಸಲಾಗಿದೆ.

ಮಂತ್ರ ಮಾಗಲ್ಯದ ಮೂಲಕ ಹೊಸ ಬಾಳಿಗೆ ಕಾಲಿಟ್ಟ ಗಾಯಕಿ ಸುಹಾನಾ ಸೈಯದ್‌

ಮಂತ್ರ ಮಾಗಲ್ಯದ ಮೂಲಕ ಹೊಸ ಬಾಳಿಗೆ ಕಾಲಿಟ್ಟ ಸುಹಾನಾ ಸೈಯದ್‌

Mantra Mangalya: ಸುಹಾನಾ ಸೈಯದ್‌ ಅವರು ಮಂತ್ರ ಮಾಂಗಲ್ಯದ ಆಶಯದಂತೆ ನಿತೀನ್‌ ಶಿವಾಂಶ್‌ ಅವರನ್ನು ಸರಳವಾಗಿ ಅಂತರ್ ಧರ್ಮೀಯ ವಿವಾಹವಾದರು. ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸರ ಸರ್ಪಗಾವಲಿನಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.

RSS: ಆರೆಸ್ಸೆಸ್‌ ಪಥಸಂಚಲನದಲ್ಲಿ ಭಾಗವಹಿಸಿದ ಪಿಡಿಒ ಅಮಾನತು

ಆರೆಸ್ಸೆಸ್‌ ಪಥಸಂಚಲನದಲ್ಲಿ ಭಾಗವಹಿಸಿದ ಪಿಡಿಒ ಅಮಾನತು

Raichur news: ಪ್ರತಿಯೊಬ್ಬ ಸರ್ಕಾರಿ ನೌಕರನು ಉನ್ನತ ನೈತಿಕ ಆದರ್ಶಗಳನ್ನು ಹೊಂದಿರತಕ್ಕದ್ದು ಮತ್ತು ರಾಜಕೀಯವಾಗಿ ತಟಸ್ಥವಾಗಿರಬೇಕು ಹಾಗೂ ತನ್ನ ಪದೀಯ ಕರ್ತವ್ಯ ನಿರ್ವಹಣೆಯ ಮೇಲೆ ಪ್ರಭಾವ ಬೀರಬಹುದಾದ ಯಾರೇ ವ್ಯಕ್ತಿ ಅಥವಾ ಸಂಸ್ಥೆಯ ಯಾವುದೇ ಹಣಕಾಸು ಅಥವಾ ಇತರೆ ಆಮಿಷಗಳಿಗೆ ಒಳಗಾಗತಕ್ಕದ್ದಲ್ಲವೆಂಬ ನಿಯಮ ಮೀರಿದ್ದಾರೆ ಎಂದು ನೋಟಿಸ್‌ನಲ್ಲಿ ತಿಳಿಸಲಗಿದೆ.

Karnataka Weather: ಇಂದಿನ ಹವಾಮಾನ; ಬೆಂಗಳೂರು, ಮಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಮಳೆಯಾರ್ಭಟ ಸಾಧ್ಯತೆ

ಇಂದು ಬೆಂಗಳೂರು, ಮಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಮಳೆಯಾರ್ಭಟ ಸಾಧ್ಯತೆ

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29 ° C ಮತ್ತು 21 ° C ಆಗಿರಬಹುದು.

Deepavali Makeup 2025: ದೀಪಾವಳಿ ಹಬ್ಬಕ್ಕಿರಲಿ ಟ್ರೆಡಿಷನಲ್ ಗ್ರ್ಯಾಂಡ್ ಮೇಕಪ್

ದೀಪಾವಳಿ ಹಬ್ಬಕ್ಕಿರಲಿ ಟ್ರೆಡಿಷನಲ್ ಗ್ರ್ಯಾಂಡ್ ಮೇಕಪ್

Traditional ‌Grand Makeup: ದೀಪಾವಳಿ ಹಬ್ಬದಲ್ಲಿ ನೀವು ಧರಿಸುವ ಗ್ರ್ಯಾಂಡ್ ಸೀರೆ ಅಥವಾ ಉಡುಪಿಗೆ ಮ್ಯಾಚ್ ಆಗುವಂತಹ ಟ್ರೆಡಿಷನಲ್ ಗ್ರ್ಯಾಂಡ್ ಮೇಕಪ್‌ಗೆ ಸೈ ಎನ್ನಬೇಕು. ಇದಕ್ಕಾಗಿ ಒಂದಿಷ್ಟು ಸಿಂಪಲ್ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್.

snake entered Janaushadhi Center: ಜನೌಷಧಿ ಕೇಂದ್ರಕ್ಕೆ ನುಗ್ಗಿದ ಕಾಳಿಂಗಸರ್ಪ: ಹಾವು ನೋಡಲು ಜನವೋಜನ

ಜನೌಷಧಿ ಕೇಂದ್ರಕ್ಕೆ ನುಗ್ಗಿದ ಕಾಳಿಂಗಸರ್ಪ

ನಗರದ ಅಂಬೇಡ್ಕರ್ ವೃತ್ತದ ಬಳಯಿರುವ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಮಾಲಿಕ ನಾಗೇಂದ್ರ ಎಂಬುವರು ಶುಕ್ರವಾರ ಎಂದಿನಂತೆ ಅಂಗಡಿಯ ಬಾಗಿಲು ತೆರೆದು ವ್ಯಾಪಾರಕ್ಕೆ ಅಣಿಯಾಗುತ್ತಿದ್ದರು. ಈ ವೇಳೆ ಹಾವಿನ ಬುಸ್‌ಗುಡುವ ಶಬ್ಧಕೇಳಿದ ಅವರು ಹುಡುಕಾಟ ನಡೆಸಿದ್ದಾರೆ.

MLA KH Puttaswamy Gowda: ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸಿ : ಶಾಸಕ ಪುಟ್ಟಸ್ವಾಮಿಗೌಡ ತಾಕೀತು

ಗುಣಮಟ್ಟದೊಂದಿಗೆ ಕಾಮಗಾರಿ ಪೂರ್ಣಗೊಳಿಸಿ

ಗಂಗಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು ಎರಡು ಕೋಟಿ ರೂಪಾಯಿ ಗಳ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಒಂದಷ್ಟು ಕಾಮಗಾರಿಗಳು ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಕೋರಿಕೆಯಂತೆ ಗಂಗಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳ ಲಾಗುವುದು

Legislative Council Member T.A. Saravana: ಗುಡಿಬಂಡೆ ಪಟ್ಟಣಕ್ಕೆ ಭರವಸೆ ಸಮಿತಿ ಅಧ್ಯಕ್ಷ ಶರವಣ ಭೇಟಿ, ಸಾರ್ವಜನಿಕರಿಂದ ಸಮಸ್ಯೆ ಆಲಿಸಿದ ಎಂ.ಎಲ್.ಸಿ

ಗುಡಿಬಂಡೆ ಪಟ್ಟಣಕ್ಕೆ ಭರವಸೆ ಸಮಿತಿ ಅಧ್ಯಕ್ಷ ಶರವಣ ಭೇಟಿ

ಭರವಸೆ ಸಮಿತಿ ವತಿಯಿಂದ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಮ್ಮ ಸರ್ಕಾರ ಹಾಗೂ ಸದನದಲ್ಲಿ ಚರ್ಚೆಯಾದ ಭರವಸೆಗಳ ಸಂಬಂಧ ಈ ಭೇಟಿ ಮಾಡಲಾಗಿದೆ. ಆದರೆ ಸದನದಲ್ಲಿ ನಡೆದ ಭರವಸೆಗಳು ಇನ್ನೂ ಭರವಸೆಯಾಗಿಯೇ ಉಳಿದಿದ್ದು, ಈ ಸಂಬಂಧ ಸದನದಲ್ಲೂ ಚರ್ಚೆ ನಡೆದಿದ್ದು, ಜನರಿಂದ ದೂರುಗಳು ಸಹ ಬಂದಿದೆ

MB Patil: ಬೆಂಗಳೂರು ಸುತ್ತಮುತ್ತ ಅರ್ಬನ್ ಫಾರೆಸ್ಟ್‌ಗೆ ಅವಕಾಶ: ಎಂ.ಬಿ. ಪಾಟೀಲ್‌

ಬೆಂಗಳೂರು ಸುತ್ತಮುತ್ತ ಅರ್ಬನ್ ಫಾರೆಸ್ಟ್‌ಗೆ ಅವಕಾಶ: ಎಂ.ಬಿ. ಪಾಟೀಲ್‌

Brigade Foundation: ಬ್ರಿಗೇಡ್‌ ಫೌಂಡೇಷನ್‌ ಶುಕ್ರವಾರ ದೇವನಹಳ್ಳಿ ಸಮೀಪದ ಹರಳೂರಿನಲ್ಲಿ ಇರುವ ಕೆಐಎಡಿಬಿ ಏರೋಸ್ಪೇಸ್‌ ಪಾರ್ಕ್-‌2ರಲ್ಲಿ ಏರ್ಪಡಿಸಿದ್ದ, ಒಂದು ಲಕ್ಷ ಗಿಡ ನೆಡುವ ಕಾರ್ಯಕ್ರಮ ʻಫ್ರಮ್‌ ಸ್ಯಾಪ್ಲಿಂಗ್ಸ್‌ ಟು ಎ ಸ್ಯಾಂಕ್ಚುರಿʼ ಕಾರ್ಯಕ್ರಮಕ್ಕೆ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಚಾಲನೆ ನೀಡಿ, ಮಾತನಾಡಿದರು.

ಸತ್ಯ ಸಾಯಿ ಗ್ರಾಮದ ಹೊಸ ಆಸ್ಪತ್ರೆಯಲ್ಲಿ ಶೀಘ್ರ ಫರ್ಟಿಲಿಟಿ ಕೇಂದ್ರ ಆರಂಭ: ಸದ್ಗುರು ಶ್ರೀ ಮಧುಸೂದನ ಸಾಯಿ

ಸತ್ಯ ಸಾಯಿ ಗ್ರಾಮದ ಹೊಸ ಆಸ್ಪತ್ರೆಯಲ್ಲಿ ಶೀಘ್ರ ಫರ್ಟಿಲಿಟಿ ಕೇಂದ್ರ ಆರಂಭ

Sadguru Sri Madhusudan Sai: ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ನೂತನ ಆಸ್ಪತ್ರೆಯಲ್ಲಿ ಫಲವತ್ತತೆ ಕೊರತೆ ನಿವಾರಿಸುವ 'ಫರ್ಟಿಲಿಟಿ ಲ್ಯಾಬ್' ಆರಂಭಿಸಲಾಗುವುದು ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಮಹತ್ವದ ಘೋಷಣೆ ಮಾಡಿದ್ದಾರೆ.

Pavagada News: ತುಮಕೂರು-ರಾಯದುರ್ಗ ರೈಲು ಮಾರ್ಗ ವರ್ಷದೊಳಗೆ ಪೂರ್ಣ: ಸಚಿವ ವಿ. ಸೋಮಣ್ಣ

ತುಮಕೂರು-ರಾಯದುರ್ಗ ರೈಲು ಮಾರ್ಗ ವರ್ಷದೊಳಗೆ ಪೂರ್ಣ

V Somanna: ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಶುಕ್ರವಾರ ಪಾವಗಡಕ್ಕೆ ಭೇಟಿ ನೀಡಿ, ಕೆ. ರಾಂಪುರ ಹಾಗೂ ಟಿ.ಎನ್. ಪೇಟೆ ಬಳಿ ನಿರ್ಮಾಣವಾಗುತ್ತಿರುವ ರೈಲ್ವೆ ಕಾಮಗಾರಿ ಹಾಗೂ ರೈಲ್ವೆ ಸ್ಟೇಷನ್ ಕಾಮಗಾರಿ ವೀಕ್ಷಣೆ ಮಾಡಿದರು.

Vote theft Case: ಸುಟ್ಟ ಸ್ಥಿತಿಯಲ್ಲಿ ವೋಟರ್ ಲಿಸ್ಟ್‌ ಸೇರಿ ವಿವಿಧ ದಾಖಲೆ ಪತ್ತೆ; 'ವೋಟ್ ಚೋರಿ'ಗೆ ಮತ್ತಷ್ಟು ಪುಷ್ಟಿ?

ಆಳಂದದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ವೋಟರ್ ಲಿಸ್ಟ್‌

Voter list: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಶಕಾಪುರ್ ಗ್ರಾಮದ ಹಳ್ಳದ ಬಳಿ ಮತದಾರರ ಪಟ್ಟಿ ಸೇರಿ ವಿವಿಧ ದಾಖಲೆಗಳನ್ನು ಸುಟ್ಟು ಹಾಕಿರುವುದು ಬೆಳಕಿಗೆ ಬಂದಿದೆ. ಈ ಘಟನೆಯು ಜಿಲ್ಲೆಯಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ, ಡಿವೈಎಸ್ಪಿ ತಮ್ಮರಾಯ ಪಾಟೀಲ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Kantara: Chapter 1: ಕಾಂತಾರದ ಬಗ್ಗೆ ದೈವ ಯಾವ ಮಾತೂ ಆಡಿಲ್ಲ: ಪೆರಾರ ದೈವಸ್ಥಾನ ಸ್ಪಷ್ಟನೆ

ಕಾಂತಾರದ ಬಗ್ಗೆ ದೈವ ಯಾವ ಮಾತೂ ಆಡಿಲ್ಲ: ಪೆರಾರ ದೈವಸ್ಥಾನ ಸ್ಪಷ್ಟನೆ

Sri Kshethra Perara: ಕಾಂತಾರ ಸಿನಿಮಾ ಅಭಿಮಾನಿಗಳು ದೈವದ ಅನುಕರಣೆ ಮಾಡುತ್ತಿರುವುದು ದೈವನರ್ತಕರು, ದೈವಾರಾಧಕರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ದೈವವೂ ಎಚ್ಚರಿಕೆ ನೀಡಿತ್ತು ಎನ್ನಲಾಗಿತ್ತು. ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನಾನು ನೋಡಿಕೊಳ್ಳುತ್ತೇನೆ. ಅಪಚಾರ ಮಾಡುವವರಿಗೆ ನಾನು ಬುದ್ಧಿ ಕಲಿಸುತ್ತೇನೆ ಎಂದು ದೈವ ಹೇಳಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಇದೀಗ ಪಡುಪೆರಾರ ದೇವಸ್ಥಾನ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

Nelamangala News: ಕಣೇಗೌಡನಹಳ್ಳಿ ಗ್ರಾಪಂ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎನ್. ಶ್ರೀನಿವಾಸ್

ಕಣೇಗೌಡನಹಳ್ಳಿ ಗ್ರಾಪಂ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ಎನ್. ಶ್ರೀನಿವಾಸ್

Kanegowdanahalli Gram Panchayat: ಕಣೇಗೌಡನಹಳ್ಳಿ ​ಗ್ರಾಮ ಪಂಚಾಯಿತಿಯ ಹೊಸ ಕಟ್ಟಡವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮತ್ತು ನೆಲಮಂಗಲ ತಾಲೂಕು ಪಂಚಾಯಿತಿ ಸಹಯೋಗದಲ್ಲಿ ನಿರ್ಮಿಸಲಾಗಿದೆ. ನೂತನ ಕಟ್ಟಡವನ್ನು ಶಾಸಕ ಎನ್.ಶ್ರೀನಿವಾಸ್‌ ಅವರು ಶುಕ್ರವಾರ ಉದ್ಘಾಟಿಸಿದ್ದಾರೆ.

Loading...