ಹಾಲುಮತ ಸಮುದಾಯದ ಮಕ್ಕಳು ವಿದ್ಯಾಭ್ಯಾಸಕ್ಕೆ ಒತ್ತು ನೀಡಲಿ
ಹಾಲುಮತ ಸಮುದಾಯದ ಮಕ್ಕಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳುವ ಪರಿಪಾಠ ಬಿಡಬೇಕು. ಹೊರಗಿನ ಪ್ರಪಂಚದಲ್ಲಿ ಅವರು ಉತ್ತಮವಾದ ಶಿಕ್ಷಣ ಪಡೆಯಬೇಕು. ಆ ಮೂಲಕ ನಮ್ಮ ಮಕ್ಕಳು ಉದ್ದಿಮೆದಾರರಾಗಿ, ರಾಜಕಾರಣಿಗಳಾಗಿ, ವ್ಯಾಪಾರಿಗಳಾಗಿ ಸಮಾಜವನ್ನು ಮುನ್ನಡೆಸಿ ಅಲ್ಲಿ ಮನೆಯ ಜ್ಯೋತಿಯನ್ನು ಬೆಳಗಬೇಕು. ಸಂಬಂಧಗಳಿಗೆ ನವಚೈತನ್ಯ ನೀಡುವ ಬೀರಪ್ಪನ ಜಾತ್ರೆ ವರ್ಷದಿಂದ ವರ್ಷಕ್ಕೆ ಸುಧಾರಣೆ ಆಗಲಿ