ಭಾರೀ ಮಳೆಗೆ ಮೆಕ್ಕೆಜೋಳ ಶೇ, 40 ಇಳುವರಿ ಕುಸಿತ
ಹೆಚ್ಚು ಮೆಕ್ಕೆಜೋಳ ಬೆಳೆಯುವ ದಾವಣಗೆರೆ, ಚಿತ್ರದುರ್ಗ, ಹಾವೇರಿ ಸೇರಿದಂತೆ ಹಲವೆಡೆ ಮೆಕ್ಕೆಜೋಳ ಬೆಳೆದಿದ್ದ ರೈತರು ಈ ಬಾರಿ ಒಳ್ಳೆಯ ಫಸಲಿನ ನಿರೀಕ್ಷೆಯಲ್ಲಿಉತ್ತಮ ಆದಾಯ ಬರುತ್ತದೆ, ಸಾಲ-ಸೋಲ ತೀರಿಸಿಕೊಂಡು ನೆಮ್ಮಂದಿಯಿಂದಿರಬಹುದು ಎಂಬ ಕನಸು ಇಟ್ಟು ಕೊಂಡಿದ್ದರು. ಆದರೆ ಮಳೆಯ ಕಣ್ಣಾಮುಚ್ಚಾಲೆ ಆಟಕ್ಕೆ ಈ ಬಾರಿಯೂ ಮೆಕ್ಕೆಜೋಳ ಬೆಳೆದಿದ್ದ ರೈತರು ಇಳುವರಿ ಕುಸಿತದಿಂದ ನಷ್ಟ ಅನುಭವಿಸುವ ಎಲ್ಲ ಲಕ್ಷಣಗಳು ಕಂಡು ಬರುತ್ತಿವೆ.