ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Shidlaghatta News: ಜನರ ವಿಶ್ವಾಸವೇ ನನ್ನ ರಾಜಕೀಯ ಶಕ್ತಿ: ಪುಟ್ಟು ಆಂಜಿನಪ್ಪ

ಜನರ ವಿಶ್ವಾಸವೇ ನನ್ನ ರಾಜಕೀಯ ಶಕ್ತಿ: ಪುಟ್ಟು ಆಂಜಿನಪ್ಪ

ಶಿಡ್ಲಘಟ್ಟ ಕ್ಷೇತ್ರವನ್ನು ನಾಲ್ಕು ದಶಕಗಳ ಕಾಲ ಪ್ರತಿನಿಧಿಸಿ ಸಚಿವರಾಗಿ ಹಾಗೂ ಶಾಸಕರಾಗಿ ಜನಸೇವೆ ಸಲ್ಲಿಸಿರುವ ವಿ. ಮುನಿಯಪ್ಪ ಅವರ ಸೇವೆಯನ್ನು ಸ್ಮರಿಸಿದರು. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಅವರು ಶೀಘ್ರ ಗುಣಮುಖರಾಗಿ ಮತ್ತೆ ಜನರ ನಡುವೆ ಬರಲಿ. ಅವರ ಅನುಭವ ಹಾಗೂ ಮಾರ್ಗದರ್ಶನ ಪಕ್ಷಕ್ಕೂ ಕ್ಷೇತ್ರದ ಅಭಿವೃದ್ಧಿಗೂ ಅಗತ್ಯವಾಗಿದೆ

ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಹುರುಳಿಕಾಯಿ ಮತ್ತು ಸೌತೆಕಾಯಿಗೆ ದೊರೆತ ಉತ್ತಮ ಬೆಲೆ

ರೈತರ ಮೊಗದಲ್ಲಿ ಮಂದಹಾಸ: ಹುರುಳಿಕಾಯಿ, ಸೌತೆಕಾಯಿಗೆ ದೊರೆತ ಉತ್ತಮ ಬೆಲೆ

ಚಿಕ್ಕಬಳ್ಳಾಪುರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಕಳೆದ ಎರಡು ವಾರದಿಂದ 10 ಕೆ.ಜಿ ಬೀನ್ಸ್ ಒಂದು ಸಾವಿರದಿಂದ 1300 ರೂಗೆ ಜಿಗಿದಿದೆ ಮತ್ತು ಸೌತೆಕಾಯಿ ಸಹ ಒಂದು ಮೂಟೆ 600 ರಿಂದ 800 ರೂ ವರೆಗೆ ಖರೀದಿ ಆಗಿರುವುದು ರೈತರಿಗೆ ಸ್ವಲ್ಪ ಸಂತೋಷವಾಗಿದೆ.ಇನ್ನೂ ಅನೇಕ ತರಕಾರಿಗಳಿಗೆ ರೇಟ್ ನುಗ್ಗೆಕಾಯಿ ಕೆ.ಜಿಗೆ 60, ಕ್ಯಾರೆಟ್ 40, ಟೊಮೆಟೋ 50 ರೂ ಹೀಗೆ ಸ್ವಲ್ಪ ಮಟ್ಟಿಗೆ ಎಲ್ಲಾ ತರಕಾರಿ ಗಳ ಬೆಲೆ ಏರುಗತಿಯಲ್ಲಿರುವುದು ರೈತರಿಗೆ ಖುಷಿ ತಂದಿದೆ.

ಪೌರಾಯುಕ್ತರ ವಿರುದ್ಧ ಮಾಜಿ ನಗರಸಭಾ ಸದಸ್ಯ ಮೊಹಮ್ಮದ್ ಶಫೀಕ್ ಆಕ್ರೋಶ: ಸತ್ಯಾಂಶ ಮರೆಮಾಚಬೇಡಿ

ಪೌರಾಯುಕ್ತರ ವಿರುದ್ಧ ಮಾಜಿ ನಗರಸಭಾ ಸದಸ್ಯ ಮೊಹಮ್ಮದ್ ಶಫೀಕ್ ಆಕ್ರೋಶ

ಚಿಂತಾಮಣಿ ನಗರದ ಅವರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಅಧಿಕಾರಿ ಗಳು ಸತ್ಯಾಂಶ ಮರೆ ಮಾಚದೆ ಸಾರ್ವಜನಿಕರ ಮುಂದೆ ವಾಸ್ತವಾಂಶ ಇಡಬೇಕು ಎಂದು ಆಗ್ರಹಿಸಿದರು. ನಗರದಲ್ಲಿ ನಡೆದಿರುವ ಹಲವು ಪ್ರಮುಖ ಘಟನೆಗಳನ್ನು ಉಲ್ಲೇಖಿಸಿದ ಅವರು ಅಧಿಕಾರಿಗಳ ಕಾರ್ಯವೈಖರಿಯನ್ನು ಪ್ರಶ್ನಿಸಿದರು.

Scholarship Distribution: ಬಿಲ್ಲವಾಸ್ ಕತಾರ್‌ನಿಂದ 100 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ವಿತರಣೆ

ಬಿಲ್ಲವಾಸ್ ಕತಾರ್‌ನಿಂದ 100 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ವಿತರಣೆ

Billawas Qatar: ಬಿಲ್ಲವಾಸ್ ಕತಾರ್ ವತಿಯಿಂದ ಮಂಗಳೂರಿನ ಕುದ್ರೋಳಿಯ ಶ್ರೀ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅರ್ಹ 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಗಣ್ಯರು, ಸಮುದಾಯದ ಮುಖಂಡರು, ಪೋಷಕರು ಮತ್ತು ವಿದ್ಯಾರ್ಥಿಗಳ ಸ್ಫೂರ್ತಿದಾಯಕ ಸಹಭಾಗಿತ್ವದೊಂದಿಗೆ ಸಭೆಯು ಎಲ್ಲರ ಗಮನ ಸೆಳೆಯಿತು.

Viprotsava 2026: ಮಂಡ್ಯದಲ್ಲಿ ಅದ್ಧೂರಿಯಾಗಿ ನೆರವೇರಿದ ವಿಪ್ರೋತ್ಸವ-2026

ಮಂಡ್ಯದಲ್ಲಿ ಅದ್ಧೂರಿಯಾಗಿ ನೆರವೇರಿದ ವಿಪ್ರೋತ್ಸವ-2026

ಮಂಡ್ಯ ಜಿಲ್ಲಾ ಗಾಯತ್ರಿ ಸಭಾ ಭವನದಲ್ಲಿ “ವಿಪ್ರೋತ್ಸವ-2026” ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ನಡೆದ ಸಾಂಸ್ಕೃತಿಕ ಭರತನಾಟ್ಯ, ಭಜನೆ ಹಾಗೂ ಹಾಸ್ಯ ಕಾರ್ಯಕ್ರಮಗಳು ಸಭಿಕರ ಮನಗೆದ್ದವು. ಕಲಾವಿದರು ತಮ್ಮ ಅದ್ಭುತ ಪ್ರದರ್ಶನಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಲಕ್ಷಗಟ್ಟಲೆ ಆದಾಯ ತರುವ ಕಾರ್ಪೊರೇಟ್ ಉದ್ಯೋಗ ತ್ಯಜಿಸಿ ನೂರಾರು ಬೀದಿನಾಯಿಗಳಿಗೆ ಆಶ್ರಯದಾತನಾದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್

ನೂರಾರು ಬೀದಿ ನಾಯಿಗಳಿಗೆ ಆಸರೆಯಾದ ಬೆಂಗಳೂರಿನ ಎಂಜಿನಿಯರ್

Viral News: ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಬೆಂಗಳೂರಿನ ಯುವಕ ಈಗ ನೂರಾರು ಬೀದಿ ನಾಯಿಗಳಿಗೆ ಆಶ್ರಯದಾತರಾಗಿದ್ದಾರೆ. ಇದೀಗ ಅವರ ವೃತ್ತಿ ತೊರೆದು ದೊಡ್ಡಬಳ್ಳಾಪುರದ ತೋಟದಲ್ಲಿ ನೂರಾರು ನಾಯಿಗಳ ಜತೆ ವಾಸಿಸುತ್ತಿದ್ದಾರೆ. ಇಲ್ಲಿರುವ ಫಾರ್ಮ್ ಹೌಸ್‌ ಅನ್ನು ನಾಯಿಗಳ ಅನುಕೂಲಕಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅವು ಮುಕ್ತವಾಗಿ ಓಡಬಹುದಾದ ದೊಡ್ಡ ತೆರೆದ ಮೈದಾನಗಳು, ಈಜಲು ಕೊಳಗಳಿವೆ. ಅಲ್ಲದೆ ಬೀದಿ ನಾಯಿಗಳ ಸುರಕ್ಷತೆಗಾಗಿ ಬೇಲಿಗಳನ್ನು ಅಳವಡಿಸಲಾಗಿದೆ.

ವಿವಿಧ ಮಹಾನಗರ ಪಾಲಿಕೆಗಳಲ್ಲಿ ಅನ್ಯ ಇಲಾಖೆ ಅಧಿಕಾರಿಗಳು ಮಾತೃ ಇಲಾಖೆಗೆ ವಾಪಸ್: ಲೋಕೋಪಯೋಗಿ ಇಲಾಖೆಯಲ್ಲೂ ಜಾರಿಗೆ ಆಗ್ರಹ

ಪಾಲಿಕೆಗಳಲ್ಲಿ ಅನ್ಯ ಇಲಾಖೆ ಅಧಿಕಾರಿಗಳು ಮಾತೃ ಇಲಾಖೆಗೆ ವಾಪಸ್

ಲೋಕೋಪಯೋಗಿ ಇಲಾಖೆಯಲ್ಲಿ ಹಲವು ವರ್ಷಗಳಿಂದ ಅನ್ಯ ಇಲಾಖೆಗಳ ಅಧಿಕಾರಿಗಳು ನಿಯೋ ಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವುದರಿಂದ ಇಲಾಖೆಯ ಮೂಲ ಸಿಬ್ಬಂದಿಗೆ ಪದೋನ್ನತಿ, ವರ್ಗಾವಣೆ ಹಾಗೂ ಆಡಳಿತಾತ್ಮಕ ಅವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ ಅಸಮಾಧಾನ ವ್ಯಾಪಕವಾಗಿದೆ ಎಂದು ಅವರು ತಿಳಿಸಿದ್ದಾರೆ.

ಶಾಲೆಯಲ್ಲಿ ಹಾಜರಾತಿ ವೇಳೆ ‘yes sir’ ಬದಲು ʼಜೈ ಶ್ರೀರಾಮ್ʼ ಅಂತ ಹೇಳಿ: ವಿದ್ಯಾರ್ಥಿಗಳಿಗೆ ಶಾಸಕ ಯತ್ನಾಳ್ ಕರೆ

ಹಾಜರಾತಿ ವೇಳೆ ‘yes sir’ ಬದಲು ʼಜೈ ಶ್ರೀರಾಮ್ʼ ಅಂತ ಹೇಳಿ: ಯತ್ನಾಳ್

ಜೂನ್‌ನಲ್ಲಿ ಶಾಲೆಗಳು ಆರಂಭವಾದ ಬಳಿಕ ಪ್ರತಿಯೊಬ್ಬರಿಗೂ ಕೇಸರಿ ಶಾಲು ವಿತರಣೆ ಮಾಡುತ್ತೇನೆ. ಕೇಸರಿ ಶಾಲು ಧರಿಸುವುದಕ್ಕೆ ನಿಷೇಧ ಹೇರಲು ಕಾಂಗ್ರೆಸ್‌ನವರಿಗೆ ಅಧಿಕಾರ ಕೊಟ್ಟವರು ಯಾರು? ಕೇಸರಿ ಶಾಲು ಹಾಕಲು ನಮಗೆ ಹಕ್ಕಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಶಾಸಕ ಯತ್ನಾಳ್‌ ಕಿಡಿಕಾರಿದ್ದಾರೆ.

ಆರ್ಟ್‌ ಆಫ್‌ ಗಿವಿಂಗ್‌: ಶೇರ್‌ ಟು ಶೈನ್‌ ಈ ಬಾರಿಯ ಘೋಷವಾಕ್ಯ, ಸಾಧಕರಿಗೆ ಸನ್ಮಾನ, ಹಲವು ಕಾರ್ಯಕ್ರಮ

ಆರ್ಟ್‌ ಆಫ್‌ ಗಿವಿಂಗ್‌: ಶೇರ್‌ ಟು ಶೈನ್‌ ಈ ಬಾರಿಯ ಘೋಷವಾಕ್ಯ

ಒಡಿಶಾ ಭುವನೇಶ್ವರದ ಕಳಿಂಗಾ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಸ್ಡ್ರೀಯಲ್‌ ಟೆಕ್ನಾಲಜಿ, ಕಳಿಂಗಾ ಇನ್ಸ್‌ಟಿಟ್ಯೂಟ್‌ ಆಫ್‌ ಸೋಶಿಯಲ್‌ ಸೈನ್ಸ್ ಸ್‌ ನ ಸಂಸ್ಥಾಪಕರು ಹಾಗೂ ಸಂಸತ್ತಿನ ಮಾಜಿ ಸದಸ್ಯರಾದ ಡಾ.ಅಚ್ಯುತ ಸಮಂತಾ ಅವರು ಆರಂಭಿಸಿದ ಆರ್ಟ್‌ ಆಫ್‌ ಗಿವಿಂಗ್‌ನ ವಾರ್ಷಿಕೋ ತ್ಸವ ಕಳೆದ 13 ವರ್ಷಗಳಿಂದ ನಗರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

Bangalore News: ವಿದ್ಯಾರ್ಥಿಗಳನ್ನು ಸಾಮರ ಇಂಟರ್ ಇಸ್ಲಾಮಿಕ್ ನ್ಯಾಷನಲ್ ಶಾಲೆಗೆ ಸೇರ್ಪಡೆ ಮಾಡದಂತೆ ಶಾಲೆ ಮುಂಭಾಗ ನೋಟೀಸ್ ಅಂಟಿಸಿದ ಶಾಲಾ ಶಿಕ್ಷಣ ಇಲಾಖೆ

ವಿದ್ಯಾರ್ಥಿಗಳನ್ನು ಶಾಲೆಗೆ ಸೇರ್ಪಡೆ ಮಾಡದಂತೆ ಶಾಲೆ ಮುಂಭಾಗ ನೋಟೀಸ್

ಸಾಮರ್ ಇಂಟರ್ನ್ಯಾಷನಲ್ ಇಸ್ಲಾಮಿಕ್ ಶಾಲೆಯ 1 ರಿಂದ 10ನೆಯ ತರಗತಿಗಳ ಮಾನ್ಯತೆಯನ್ನು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಸೆಕ್ಷನ್-39 ರಂತೆ ಹಿಂಪಡೆದು ಸೆಕ್ಷನ್-34 ರಂತೆ ನೋಂದಣಿಯನ್ನು ರದ್ದುಪಡಿಸಿದೆ. ಈ ಕಾರಣದಿಂದ ಸದರಿ ಶಾಲೆಯನ್ನು ಇಲಾಖೆಯು ಮುಚ್ಚಿಸಿದ್ದು ಮಕ್ಕಳನ್ನು 2026-27ರ ಸಾಲಿಗೆ ದಾಖಲು ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದೆ.

Liquor price hike: ರಾಜ್ಯದಲ್ಲಿ ನೂತನ ಅಬಕಾರಿ ಸುಂಕ ನೀತಿ ಜಾರಿ; ಕೆಲ ಬ್ರ್ಯಾಂಡ್‌ಗಳ ಮದ್ಯದ ದರ ಭಾರಿ ಹೆಚ್ಚಳ!

ನೂತನ ಅಬಕಾರಿ ಸುಂಕ ನೀತಿ ಜಾರಿ; ಮದ್ಯದ ದರ ಭಾರಿ ಏರಿಕೆ

ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ AIB ಆಧಾರಿತ ಅಬಕಾರಿ ಸುಂಕ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಪರಿಷ್ಕೃತ ದರಗಳಲ್ಲಿ ಜನಪ್ರಿಯ ಇಂಡಿಯನ್ ಮೇಡ್ ಲಿಕರ್ ಬ್ರ್ಯಾಂಡ್‌ಗಳು ಮತ್ತು ಬಿಯರ್ ಬ್ರ್ಯಾಂಡ್‌ಗಳ ದರಗಳನ್ನು ಒಳಗೊಂಡಿದ್ದು, ಅವುಗಳ ಪ್ಯಾಕ್ ಗಾತ್ರ, ಮದ್ಯಾಂಶದ ಪ್ರಮಾಣ ಮತ್ತು ಸ್ಲ್ಯಾಬ್ ವ್ಯವಸ್ಥೆಯ ಆಧಾರದ ಮೇಲೆ ದರಗಳು ಬದಲಾಗಲಿವೆ.

Kodagu News: ಕೊಡಗಿನ ಕಾಡಿನಲ್ಲಿ ಅಕ್ರಮವಾಗಿ ಚರ್ಚ್ ನಿರ್ಮಾಣ; ಉದ್ಘಾಟನೆಗೆ ತಮಿಳುನಾಡಿನಿಂದ ಬಂದಿದ್ದ 40ಕ್ಕೂ ಹೆಚ್ಚು ಮಂದಿ ವಶಕ್ಕೆ

ಕೊಡಗಿನ ಕಾಡಿನಲ್ಲಿ ಅಕ್ರಮವಾಗಿ ಚರ್ಚ್ ನಿರ್ಮಾಣ; 40 ಮಂದಿ ವಶಕ್ಕೆ

ಕೊಡಗು ಜಿಲ್ಲೆಯ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರಿನ ಗಿರಿಜನರಿಂದ ಕಾಡಿನಲ್ಲಿ ಅಕ್ರಮವಾಗಿ ಚರ್ಚ್ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಉದ್ಘಾಟನೆ ಕಾರ್ಯಕ್ರಮಕ್ಕೆ ತಮಿಳುನಾಡಿನಿಂದ ಜನರನ್ನು ಕರೆಸಲಾಗಿತ್ತು. ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ, 40ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಬಕ್ರೀದ್ ಹಬ್ಬದ ಹಿನ್ನೆಲೆ ಅನಧಿಕೃತ ಕುರಿ ಮತ್ತು ಮೇಕೆ ಮಾರುಕಟ್ಟೆ ಶೆಡ್ ತೆರವು

ಬಕ್ರೀದ್ ಹಬ್ಬದ ಹಿನ್ನೆಲೆ ಅನಧಿಕೃತ ಕುರಿ, ಮೇಕೆ ಮಾರುಕಟ್ಟೆ ಶೆಡ್ ತೆರವು

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ನಗರ ಪಾಲಿಕೆಯ ವಿವಿಧ ಪ್ರದೇಶಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಕುರಿ ಮತ್ತು ಮೇಕೆ ಮಾರುಕಟ್ಟೆ ಶೆಡ್ ಗಳ ವಿರುದ್ಧ ಬೆಂಗಳೂರು ಉತ್ತರ ನಗರ ಪಾಲಿಕೆ ವತಿಯಿಂದ ಇಂದು ಜಂಟಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

Gudibande News: ಶ್ರೀ ಗಂಗಾ ಭಗೀರಥ ತಾಯಿ ಪುರ್ನಪ್ರತಿಷ್ಟಾಪನಾ ಮಹೋತ್ಸವ ವೈಭವ; ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿಶೇಷ ಪೂಜೆ

ಶ್ರೀ ಗಂಗಾ ಭಗೀರಥ ತಾಯಿ ಪುರ್ನಪ್ರತಿಷ್ಟಾಪನಾ ಮಹೋತ್ಸವ ವೈಭವ

ದೇವಸ್ಥಾನದ ಆವರಣದಲ್ಲಿ ಮೂರು ದಿನಗಳ ಕಾಲ ವಿವಿಧ ವೈದಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿತ್ತು. ವೇದಮೂರ್ತಿಗಳ ನೇತೃತ್ವದಲ್ಲಿ ಗಣಪತಿ ಪೂಜೆ, ಗಂಗೆ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ ಹಾಗೂ ವಾಸ್ತು ಹೋಮ ಸೇರಿದಂತೆ ಹಲವು ಧಾರ್ಮಿಕ ವಿಧಿ ವಿಧಾನಗಳನ್ನು ವೇದಮಂತ್ರಗಳ ಘೋಷದೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.

Two-wheeler Adventure: ಚಿಂತಾಮಣಿಯಿಂದ ಲಡಾಖ್‌ವರೆಗೆ ದ್ವಿಚಕ್ರ ವಾಹನದಲ್ಲಿ ಸಾಹಸಯಾತ್ರೆ: ವಿಶ್ವಶಾಂತಿಗಾಗಿ ಇಬ್ಬರು ಸ್ನೇಹಿತರ ಪಯಣ : ಶುಭಕೋರಿದ ಚಿಂತಾಮಣಿ ನಾಗರೀಕರು

ವಿಶ್ವಶಾಂತಿಗಾಗಿ ಇಬ್ಬರು ಸ್ನೇಹಿತರ ಪಯಣ : ಶುಭಕೋರಿದ ಚಿಂತಾಮಣಿ ನಾಗರೀಕರು

ಈ ಯಾತ್ರೆಯ ಹಿಂದೆ ಕೇವಲ ಪ್ರವಾಸದ ಹಂಬಲವಷ್ಟೇ ಅಲ್ಲ, ಉನ್ನತ ಉದ್ದೇಶಗಳೂ ಇವೆ.  ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧದ ಭೀತಿ ಕಡಿಮೆಯಾಗಲಿ ಎನ್ನುವ ಆಶಯ.ದೇಶದ ಜನತೆ ಎದುರಿಸುತ್ತಿರುವ ಪೆಟ್ರೋಲ್,ಡೀಸೆಲ್ ಮತ್ತು ಗ್ಯಾಸ್ ಬೆಲೆ ಏರಿಕೆಯ ಸಂಕಷ್ಟಗಳು ದೂರ ವಾಗಲಿ ಎಂಬ ಪ್ರಾರ್ಥನೆ ಜತೆಗೆ ದೇಶಾದ್ಯಂತ ಶಾಂತಿ ಮತ್ತು ಸೌಹಾರ್ದತೆ ನೆಲೆಸಲಿ ಎಂಬ ಸಂದೇಶ ಸಾರಲು ಇವರು ಮುಂದಾಗಿದ್ದಾರೆ.

Shivam Associates Scam: 4,500 ಕೋಟಿ ರೂ. ವಂಚನೆ ಆರೋಪ; ಶಿವಂ ಅಸೋಸಿಯೇಟ್ಸ್‌ ಹಗರಣದ ತನಿಖೆ ಸಿಐಡಿಗೆ ವರ್ಗಾವಣೆ

ಬೆಳಗಾವಿ ಶಿವಂ ಅಸೋಸಿಯೇಟ್ಸ್‌ ಹಗರಣದ ತನಿಖೆ ಸಿಐಡಿಗೆ ವರ್ಗಾವಣೆ

ಶಿವಾನಂದ ನೀಲಣ್ಣವರ ವಿರುದ್ಧ ಕೆಪಿಐಡಿ ಆಕ್ಟ್ ಸೆಕ್ಷನ್ 9, ಬಡ್ಸ್ ಆಕ್ಟ್ ಸೆಕ್ಷನ್ 21, (1), (2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶಿವಂ ಅಸೋಸಿಯೇಟ್ಸ್ ಮೂಲಕ ಯಾವುದೇ ಸೆಬಿ, ಆರ್​​ಬಿಐ, ಸಹಕಾರ ಇಲಾಖೆ ಮಾರ್ಗಸೂಚಿಗಳನ್ನು ಪಾಲಿಸದೇ ಅನಧಿಕೃತವಾಗಿ ಠೇವಣಿಗಳನ್ನು ಸಂಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾಹಿತಿ ನೀಡಿದ್ದಾರೆ.

ಚಿಂತಾಮಣಿ-ಮುರುಗಮಲ್ಲ ರಸ್ತೆಯಲ್ಲಿ ಭೀಕರ ಅಪಘಾತ: ಬಸ್ಸಿನ ಹಿಂಭಾಗಕ್ಕೆ ಬೈಕ್ ಡಿಕ್ಕಿ,ಸವಾರನಿಗೆ ಗಂಭೀರ ಗಾಯ!

ಖಾಸಗಿ ಬಸ್ ಹಿಂಬದಿಗೆ ಬೈಕ್ ಡಿಕ್ಕಿ ಸವಾರನಿಗೆ ಗಾಯ

ಗಾಯಗೊಂಡ ಸವಾರನನ್ನು ಶಿಡ್ಲಘಟ್ಟ ತಾಲ್ಲೂಕಿನ ಅಜಾದ್ ನಗರದ ನಿವಾಸಿ 27 ವರ್ಷದ ಅತೀಕ್ ಪಾಷಾ ಎಂದು ಗುರುಸಿಲಾಗಿದ್ದು,ಗಾಯಾಳುವನ್ನು ಕೂಡಲೇ ಚಿಂತಾಮಣಿಯ ಸಾರ್ವ ಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳು ಚಿಂತಾಮಣಿ ಮೂಲಕ ಮರಗಮಲ್ಲಾಗೆ ಹೋಗುತ್ತಿದ್ದ ಎನ್ನಲಾಗಿದೆ.

MLA BN Ravikumar: ಮೇ.18ರಂದು ಶಾಸಕ ಬಿ.ಎನ್.ರವಿಕುಮಾರ್ ನೇತೃತ್ವದಲ್ಲಿ ದೇವೇಗೌಡರ ಜನ್ಮದಿನ ಸಂಭ್ರಮ

ಮೇ.18ರಂದು ಶಾಸಕ ನೇತೃತ್ವದಲ್ಲಿ ದೇವೇಗೌಡರ ಜನ್ಮದಿನ ಸಂಭ್ರಮ

ಶಾಸಕ ಬಿ. ಎನ್. ರವಿಕುಮಾರ್ ಮಾತನಾಡಿ,ಮಾಜಿ ಪ್ರಧಾನಿ ದೇವೇಗೌಡರು ರೈತರ ಹಾಗೂ ಸಾಮಾನ್ಯ ಜನರ ಧ್ವನಿಯಾಗಿ ದೇಶದ ರಾಜಕಾರಣದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ

MLA K.H.Puttaswamy Gowda: ನನ್ನ ಅವಧಿಯಲ್ಲಿಯೇ ಅಂಗನವಾಡಿಗಳಗೆ ಸ್ವಂತ ಕಟ್ಟಡ ಒದಗಿಸುವೆ: ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ

ನನ್ನ ಅವಧಿಯಲ್ಲಿಯೇ ಅಂಗನವಾಡಿಗಳಗೆ ಸ್ವಂತ ಕಟ್ಟಡ ಒದಗಿಸುವೆ

ತಾಲೂಕಿನ ನಗರಗೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಅಂಗನವಾಡಿ ಕೇಂದ್ರವನ್ನು ಉದ್ಘಾ ಟಿಸಿ ಮಾತನಾಡುತ್ತಾ, ಅಂಗನವಾಡಿ ಕೇಂದ್ರ ಮಕ್ಕಳ ಬೆಳವಣಿಗೆ, ಲಾಲನೆ ಪಾಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ,ಅಂಗನವಾಡಿ ಸಹಾಯಕಿಯರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಮನೆಯಲ್ಲಿ ತಾಯಿ ಬಿಟ್ಟರೆ ಮಕ್ಕಳು ಹೆಚ್ಚು ಸಮಯವನ್ನು ಅಂಗನವಾಡಿ ಕೇಂದ್ರ ಗಳಲ್ಲಿ ಕಳೆಯು ತ್ತಾರೆ.

Transport workers strike: ಬಿಎಂಟಿಸಿ ನೌಕರರಿಗೆ ಗುಡ್‌ ನ್ಯೂಸ್‌; ಮುಷ್ಕರಕ್ಕೂ ಮೊದಲೇ 11 ತಿಂಗಳ ಹಿಂಬಾಕಿ ವೇತನ ಬಿಡುಗಡೆ

ಬಿಎಂಟಿಸಿ ನೌಕರರಿಗೆ 11 ತಿಂಗಳ ಹಿಂಬಾಕಿ ವೇತನ ಬಿಡುಗಡೆ

BMTC employees: 4 ನಿಗಮಗಳ ಸಾರಿಗೆ ನೌಕರರಿಗೆ 26 ತಿಂಗಳ ಹಿಂಬಾಕಿ ನೀಡಲು ನೀಡಲು ಇತ್ತೀಚೆಗೆ ರಾಜ್ಯ ಸರ್ಕಾರ ಒಪ್ಪಿಕೊಂಡಿತ್ತು. ಅದರಂತೆ ಮೊದಲ ಹಂತದಲ್ಲಿ 450 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿತ್ತು. ಇದೀಗ ಬಿಎಂಟಿಸಿ ನೌಕರರಿಗೆ 11 ತಿಂಗಳ ಹಿಂಬಾಕಿ ಹಣವನ್ನು ಬಿಡುಗಡೆ ಮಾಡಲಾಗಿದೆ.

Sirsi News: ಮಳೆ ಮಾಪನ ಕೇಂದ್ರಗಳ ವೈಫಲ್ಯ: ಹವಾಮಾನ ಆಧಾರಿತ ಬೆಳೆ ವಿಮೆ ವಂಚನೆ ಖಂಡಿಸಿ ಶಿರಸಿಯಲ್ಲಿ ರಾಜ್ಯಪಾಲರಿಗೆ ಮನವಿ

ಹವಾಮಾನ ಆಧಾರಿತ ಬೆಳೆ ವಿಮೆ ವಂಚನೆ ಖಂಡಿಸಿ ಶಿರಸಿಯಲ್ಲಿ ರಾಜ್ಯಪಾಲರಿಗೆ ಮನವಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ಉಂಟಾ ಗಿರುವ ತೀವ್ರ ಅವ್ಯವಸ್ಥೆ ಹಾಗೂ ಮಳೆ ಮಾಪನ ಕೇಂದ್ರಗಳ ದುರಸ್ತಿಯನ್ನು ಖಂಡಿಸಿ, ರೈತರಿಗೆ ನ್ಯಾಯಬದ್ಧ ವಿಮೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಶಿರಸಿ ಉಪವಿಭಾಗದ ಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಯಿತು.

ಬಡ ಹಿಂದು ಮಹಿಳೆಗಾಗಿ ಸಚಿವೆ ಹೆಬ್ಬಾಳ್ಕರ್‌ ಬಳಿ ನೆರವು ಯಾಚಿಸಿದ ಮುಸ್ಲಿಂ ಮಹಿಳೆಯರು; ಸಾಮರಸ್ಯಕ್ಕೆ ಸಾಕ್ಷಿಯಾದ ಉಡುಪಿ

ಬಡ ಹಿಂದು ಮಹಿಳೆಗಾಗಿ ಸಚಿವೆ ಬಳಿ ನೆರವು ಯಾಚಿಸಿದ ಮುಸ್ಲಿಂ ಮಹಿಳೆಯರು

Laxmi Hebbalkar: 35 ವರ್ಷಗಳ ಹಿಂದೆ ಸರ್ಕಾರದಿಂದ ನಿವೇಶನ ಮಂಜೂರು ಆಗಿದ್ದರೂ ಅರಣ್ಯ ಇಲಾಖೆಯ ಅಡ್ಡಿಯಿಂದಾಗಿ ಮನೆ ಕಟ್ಟಲಾಗದೆ ದಿಕ್ಕೆಟ್ಟು ಹೋಗಿದ್ದ ವಿಧವೆ ಹಿಂದು ಮಹಿಳೆಯೊಬ್ಬರ ಪರವಾಗಿ ನೆರೆಮನೆಯ ಮುಸ್ಲಿಂ ಮಹಿಳೆಯರು ಧ್ವನಿಯೆತ್ತಿದ ಅಪರೂಪದ ಪ್ರಸಂಗ ಉಡುಪಿಯಲ್ಲಿ ನಡೆದಿದೆ.

ಲಂಚವಿಲ್ಲದೇ 'ಬಿ' ಖಾತಾದಿಂದ 'ಎ' ಖಾತಾ ಪರಿವರ್ತನೆ, ಮನೆ ಬಾಗಿಲಿಗೆ ಇ-ಖಾತೆ: ಡಿ.ಕೆ. ಶಿವಕುಮಾರ್

ಲಂಚವಿಲ್ಲದೇ 'ಬಿ' ಯಿಂದ 'ಎ' ಖಾತಾ ಪರಿವರ್ತನೆ: ಡಿ.ಕೆ. ಶಿವಕುಮಾರ್

DK Shivakumar: ʼನನ್ನ ಇ-ಖಾತಾ, ನನ್ನ ಹಕ್ಕುʼ ಅಭಿಯಾನದಿಂದ ಬೆಂಗಳೂರಿನ ಸಾರ್ವಜನಿಕರು ಒಂದೇ ಒಂದು ರೂಪಾಯಿ ಲಂಚ ನೀಡದೆ ತಮ್ಮ ಆಸ್ತಿಗಳನ್ನು 'ಬಿ' ಖಾತೆಯಿಂದ 'ಎ' ಖಾತೆಗೆ ಪರಿವರ್ತನೆ ಹಾಗೂ ಮನೆ ಬಾಗಿಲಲ್ಲೇ ಇ-ಖಾತೆ ಪಡೆಯಬಹುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Bidadi township: ರಿಯಲ್ ಎಸ್ಟೇಟ್ ಮೂಲಕ ಆಸ್ತಿ ಮಾಡಿರುವುದು ಕುಮಾರಸ್ವಾಮಿ ಕುಟುಂಬದವರೇ: ಡಿ.ಕೆ. ಶಿವಕುಮಾರ್ ತಿರುಗೇಟು

ಬಿಡದಿ ಟೌನ್‌ಶಿಪ್‌ಗೆ ಅಧಿಸೂಚನೆ ಹೊರಡಿಸಿದ್ದೇ ಎಚ್‌ಡಿಕೆ: ಡಿಕೆಶಿ

DK Shivakumar: ಕುಮಾರಸ್ವಾಮಿ ಅವರು ಬಿಡದಿ ಟೌನ್ ಶಿಪ್ ಮಾಡುವುದು ಬೇಡ ಎಂದು ನಿನ್ನೆ ಹೇಳಿದ್ದಾರಲ್ಲಾ? ಅದನ್ನು ಆರಂಭಿಸಿದ್ದು ಯಾರು? ಅವರೇ ಅಧಿಸೂಚನೆ ಹೊರಡಿಸಿದ್ದಾರೆ. ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿರುವವರು ಯಾರು?, ಇಂತಹವರು ಬೇರೆಯವರ ಬಗ್ಗೆ ಮಾತನಾಡುವುದು ಬೇಡ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.

Loading...