ಉಡುಪಿ ವಿಟ್ಲ ಪಿಂಡಿ ಉತ್ಸವ ವಿಶೇಷ
Udupi krishna janmashtami: ಎಲ್ಲೆಲ್ಲೋ ಪುಟ್ಟ ಪುಟ್ಟ ಬಾಲ ಕೃಷ್ಣರು, ಅಲ್ಲಲ್ಲಿ ವಿವಿಧ ರೀತಿಯ ವೇಷಧಾರಿಗಳು, ಕೃಷ್ಣನ ಬಾಲ ಲೀಲೆಗಳನ್ನು ನೆನಪಿಸುವ ವಿವಿಧ ಕಲಾ ಪ್ರದರ್ಶನಗಳು... ಕೃಷ್ಣ ಜನ್ಮಾಷ್ಟಮಿ ವೇಳೆ ಎರಡು ದಿನಗಳ ಕಾಲ ಸಂಪೂರ್ಣ ಉಡುಪಿ ನಗರಿಯೇ ನಂದ ಗೋಕುಲವಾಗುವುದು. ಸರಿಸುಮಾರು ಸಾವಿರ ವರ್ಷಗಳಿಂದ ನಡೆಯುತ್ತಿರುವ ಈ ಆಚರಣೆಯ ವೈಭವ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. ಇಲ್ಲಿದೆ ಇದರ ಹಿನ್ನೆಲೆ, ವೈಭವದ ದರ್ಶನ.