ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Tigress Dashami dies: ಶಿವಮೊಗ್ಗ ಮೃಗಾಲಯದಲ್ಲಿ ಹುಲಿ ದಶಮಿ ಅನಾರೋಗ್ಯದಿಂದ ಸಾವು

ಶಿವಮೊಗ್ಗ ಮೃಗಾಲಯದ ಹುಲಿ ದಶಮಿ ಅನಾರೋಗ್ಯದಿಂದ ಸಾವು

ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದ ಹೆಣ್ಣು ಹುಲಿ ದಶಮಿಗೆ ಕಳೆದ 10 ದಿನಗಳಿಂದ ಚಿಕಿತ್ಸೆ ನಡೆಯುತ್ತಿತ್ತು. ಇಂದು ಚಿಕಿತ್ಸೆಗೆ ಸ್ಪಂದಿಸದೇ ದಶಮಿ ಹುಲಿ ಸಾವನ್ನಪ್ಪಿದೆ. ಸೋಮವಾರ ಪಶು ವೈದ್ಯಕೀಯ ಕಾಲೇಜಿನ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ತಿಳಿದುಬಂದಿದೆ.

Udupi Vitla Pindi Utsav: ವಿಟ್ಲಪಿಂಡಿ ಉತ್ಸವದಲ್ಲಿ ಅವಘಡ; ರಥದಿಂದ ಕೆಳಗೆ ಬಿದ್ದ ಕೃಷ್ಣನ ಮಣ್ಣಿನ ಮೂರ್ತಿ, ಭಕ್ತರಲ್ಲಿ ಆತಂಕ!

ವಿಟ್ಲಪಿಂಡಿ ಉತ್ಸವದ ವೇಳೆ ರಥದಿಂದ ಕೆಳಗೆ ಬಿದ್ದ ಕೃಷ್ಣನ ಮಣ್ಣಿನ ಮೂರ್ತಿ!

ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಲೀಲೋತ್ಸವದ ಅಂಗವಾಗಿ ವಿಟ್ಲಪಿಂಡಿ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ. ಚಾತುರ್ಮಾಸದ ಹಿನ್ನೆಲೆ ಪ್ರತಿಷ್ಠಾಪಿಸಲಾಗಿದ್ದ ಕೃಷ್ಣನ ಮಣ್ಣಿನ ಮೂರ್ತಿಯನ್ನು ರಥೋತ್ಸವದ ಬಳಿಕ ಇಳಿಸುವಾಗ ಆಕಸ್ಮಿಕವಾಗಿ ಸ್ವಾಮೀಜಿಗಳ ಕೈಯಿಂದ ಜಾರಿ ಕೆಳಗೆ ಬಿದ್ದು, ಭಗ್ನವಾಗಿದೆ.

Ganeshotsav DJ Ban: ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಹೊಸ ಮಾರ್ಗಸೂಚಿ ಜಾರಿ; ಡಿಜೆ ಬಳಕೆ ನಿಷೇಧ

ಬೆಂಗಳೂರಿನಲ್ಲಿ ಗಣೇಶೋತ್ಸವದ ವೇಳೆ ಡಿಜೆ ಬಳಕೆ ನಿಷೇಧ

ಬೆಂಗಳೂರಿನಲ್ಲಿ ಗಣೇಶ ಹಬ್ಬಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಂಡಿದ್ದು, ಉತ್ಸವ ಮತ್ತು ಮೆರವಣಿಗೆಗಳನ್ನು ಯಾವುದೇ ಕಾರಣಕ್ಕೂ ನಿಗದಿ ಮಾಡಿದ ಸಮಯ ಮೀರಿ ಮಾಡುವಂತಿಲ್ಲ. ಸುಪ್ರೀ ಕೋರ್ಟ್ ಆದೇಶದಂತೆ ಯಾವುದೇ ಡಿಜೆ ಬಳಕೆ ಮಾಡಲು ಅವಕಾಶ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಲಿಕಾನ್‌ ಸಿಟಿಯ ರಸ್ತೆಯ ಸ್ಥಿತಿ ನೋಡಿ: ವಿಡಿಯೊ ಮೂಲಕ ಬೆಂಗಳೂರಿಗರ ಸಂಕಷ್ಟ ತಿಳಿಸಿದ ಮಹಿಳೆ

ಬೆಂಗಳೂರಿನ ಗುಂಡಿ ಬಿದ್ದ ರಸ್ತೆ ಸ್ಥಿತಿಯನ್ನು ಟೀಕಿಸಿದ ಮಹಿಳೆ

Viral News: ಬೆಂಗಳೂರಿನ ಪ್ರಯಾಣಿಕರಿಗೆ ಟ್ರಾಫಿಕ್ ಜಾಮ್ ಹಾಗೂ ಗುಂಡಿ ಬಿದ್ದ ರಸ್ತೆಗಳ ಸಮಸ್ಯೆ ಹೊಸತಲ್ಲ. ಈ ಬಗ್ಗೆ ಹಲವರು ಧ್ವನಿ ಎತ್ತಿದರೂ ಪರಿಹಾರ ಸಿಕ್ಕಿಲ್ಲ. ಇದೀಗ ಇಲ್ಲಿನ ರಸ್ತೆಗಳ ದುಸ್ಥಿತಿ ಹಾಗೂ ಸಂಚಾರ ದಟ್ಟಣೆಗೆ ರೋಸಿಹೋದ ಮಹಿಳೆ ವಿಡಿಯೊ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ದಸರಾ ಆಹಾರ ಮೇಳದಲ್ಲಿ ಸಿರಿಧಾನ್ಯ, ಸಾವಯವ ಉತ್ಪನ್ನಗಳಿಗೆ ವಿಶೇಷ ಆದ್ಯತೆ: ಮಹಾರಾಜ ಮೈದಾನದಲ್ಲಿ ಅ.11ರಿಂದ 25ರವರೆಗೆ ಆಯೋಜನೆ

ದಸರಾ ಆಹಾರ ಮೇಳದಲ್ಲಿ ಸಿರಿಧಾನ್ಯ, ಸಾವಯವ ಉತ್ಪನ್ನಗಳಿಗೆ ವಿಶೇಷ ಆದ್ಯತೆ

ದಸರಾ ಪ್ರವಾಸಕ್ಕೆ ಮೈಸೂರಿಗೆ ಆಗಮಿಸುವ ಜನರಿಗೆ ವಿವಿಧ ಪ್ರದೇಶಗಳ ಆಹಾರ ಸಂಸ್ಕೃತಿಯನ್ನು ಒಂದೇ ಸ್ಥಳದಲ್ಲಿ ಪರಿಚಯಿಸುವುದು ಈ ಬಾರಿಯ ಮೇಳದ ಪ್ರಮುಖ ಉದ್ದೇಶ. ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಖಾದ್ಯಗಳೊಂದಿಗೆ ಭಾರತದ ವಿವಿಧ ರಾಜ್ಯಗಳ ಪ್ರಸಿದ್ಧ ಆಹಾರಗಳನ್ನು ಸವಿಯುವ ಅವಕಾಶವೂ ಇರಲಿದೆ.

MLA GB Jyotiganesh: ರಾಜಕೀಯವಾಗಿ ಮುಂದುವರೆಯಲು ಇತರೆ ಸಮುದಾಯಗಳ ಬೆಂಬಲ ಅಗತ್ಯ

ರಾಜಕೀಯವಾಗಿ ಮುಂದುವರೆಯಲು ಬೆಂಬಲ ಅಗತ್ಯ

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತುಮಕೂರು ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ "ಜಿಲ್ಲಾ ವೀರಶೈವ ಲಿಂಗಾಯಿತ ನೌಕರರ ಸಮಾವೇಶ, ಅಭಿನಂದನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ" ಕಾರ್ಯಕ್ರಮವು ವಿಜೃಂಭಣೆ ಯಿಂದ ನೆರವೇರಿತು.

ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್‌ ಪ್ರಾಯೋಗಿಕ ಸಂಚಾರ

ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್‌

ರೈಲಿನ ಸುರಕ್ಷತಾ ಮಾನದಂಡಗಳು, ಹಳಿಗಳ ಸ್ಥಿತಿಗತಿ, ಬ್ರೇಕಿಂಗ್ ಕ್ಷಮತೆ ಹಾಗೂ ವಿದ್ಯುತ್ ಎಳೆತದ ಪ್ರತಿಕ್ರಿಯೆಗಳನ್ನು ತಂಡವು ಸೂಕ್ಷ್ಮವಾಗಿ ಮೌಲ್ಯಮಾಪನ ಮಾಡುತ್ತಿದೆ. ಈ ಪ್ರಾಯೋಗಿಕ ಪರೀಕ್ಷೆ ಯಲ್ಲಿ ಸಂಗ್ರಹಿಸಲಾದ ತಾಂತ್ರಿಕ ದತ್ತಾಂಶಗಳನ್ನು ಆಧರಿಸಿ, ರೈಲ್ವೆ ಅಧಿಕಾರಿಗಳು ವಾಣಿಜ್ಯ ವೇಳಾ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ.

ಸಿದ್ದರಾಮಯ್ಯ ಅವರದ್ದು ಬಡವರಿಗಾಗಿ ಮಾಡಿದ ಹೋರಾಟದ ರಾಜಕಾರಣ: ಡಿಸಿಎಂ ಜಿ.ಪರಮೇಶ್ವರ್‌

ಸಿದ್ದರಾಮಯ್ಯ ಅವರದ್ದು ಬಡವರಿಗಾಗಿ ಮಾಡಿದ ರಾಜಕಾರಣ: ಡಿಸಿಎಂ

ಬೆಂಗಳೂರು ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಆಯೋಜಿಸಿದ್ದ "ರಜತ ಮಹೋತ್ಸವ ಹಾಗೂ ಹಿಂದುಳಿದ ಜಾತಿಗಳ ಬೃಹತ್ ಜನ ಜಾಗೃತಿ ಸಮಾವೇಶ" ಮತ್ತು ನಿಕಟಪೂರ್ವ ಮುಖ್ಯಮಂತ್ರಿಗ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರು ಮಾತನಾಡಿದ್ದಾರೆ.

ಕಳಪೆ ಆಹಾರ ನೀಡಿದ 23 ಪಿಜಿಗಳಿಗೆ ನೋಟಿಸ್ ಜಾರಿ

ಕಳಪೆ ಆಹಾರ ನೀಡಿದ 23 ಪಿಜಿಗಳಿಗೆ ನೋಟಿಸ್ ಜಾರಿ

ಆಹಾರದ 12 ಮಾದರಿ ಸಂಗ್ರಹ: ಪಿಜಿಗಳಲ್ಲಿ ತಯಾರಿಸುವ ಹಾಗೂ ನೀಡುವ ಆಹಾರದ ಗುಣ ಮಟ್ಟ ಪರಿಶೀಲಿಸಲು ಅಧಿಕಾರಿಗಳು 12 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿದ್ದಾರೆ. ಆಹಾರ ಸಂಗ್ರಹಣೆ, ತಯಾರಿಕೆ, ಸ್ವಚ್ಛತೆ ಹಾಗೂ ಸುರಕ್ಷತಾ ನಿಯಮಗಳನ್ನು ಅಧಿಕಾರಿ ಗಳು ಪರಿಶೀಲಿಸಿದ್ದಾರೆ.

ಬೆಂಗಳೂರು-ದೆಹಲಿಗೆ ಹೊಸ ಕಂಟೇನರ್‌ ರೈಲು ಸೇವೆ ಆರಂಭ: ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಚಾಲನೆ

ಬೆಂಗಳೂರು-ದೆಹಲಿಗೆ ಹೊಸ ಕಂಟೇನರ್‌ ರೈಲು ಸೇವೆ ಆರಂಭ

ರೈಲು ಸೇವೆಯಿಂದ ಸುಮಾರು ನಾಲ್ಕರಿಂದ ಐದು ದಿನಗಳಷ್ಟು ಸಮಯ ಉಳಿತಾಯವಾಗಲಿದ್ದು, ಕೈಗಾರಿಕೆಗಳ ಉತ್ಪಾದನಾ ಮತ್ತು ಸರಕು ನಿರ್ವಹಣಾ ಯೋಜನೆಗೆ ಇದು ನೆರವಾಗಲಿದೆ ಎಂದರು. ರಸ್ತೆಗಿಂತ ಶೇ.30ರಷ್ಟು ಕಡಿಮೆ ವೆಚ್ಚ: ಕಂಟೇನರ್ ರೈಲು ಸೇವೆಯ ಪ್ರಮುಖ ಪ್ರಯೋಜನವೆಂದರೆ ಕಡಿಮೆ ಸಾರಿಗೆ ವೆಚ್ಚ. ರಸ್ತೆ ಮೂಲಕ ಸರಕು ಸಾಗಣೆಗೆ ಹೋಲಿಸಿದರೆ ರೈಲಿನ ಮೂಲಕ ಸುಮಾರು ೩೦ರಷ್ಟು ಕಡಿಮೆ ವೆಚ್ಚದಲ್ಲಿ ಸರಕು ಸಾಗಿಸಬಹುದಾಗಿದೆ

ತಾಂತ್ರಿಕ ದೋಷ: ಲಂಡನ್‌ಗೆ ತೆರಳುತ್ತಿದ್ದ ವರ್ಜಿನ್‌ ಅಟ್ಲಾಂಟಿಕ್‌ ವಿಮಾನ ತುಮಕೂರಿನಲ್ಲಿ ಸುತ್ತು ಹಾಕಿ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ; 270 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

ಲಂಡನ್‌ಗೆ ತೆರಳುತ್ತಿದ್ದ ವಿಮಾನ ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

Virgin Atlantic Flight: ಲಂಡನ್‌ಗೆ ತೆರಳುತ್ತಿದ್ದ ವರ್ಜಿನ್‌ ಅಂಟ್ಲಾಟಿಕ್‌ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, 270 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಊಟ ಮಾಡುವಾಗಲೇ ಹೃದಯಾಘಾತ; ಮಗಳ ಮುಂದೆಯೇ ಪ್ರಾಣಬಿಟ್ಟ ತಂದೆ, ಆಘಾತಕಾರಿ ವಿಡಿಯೊ ಇಲ್ಲಿದೆ!

ಊಟ ಮಾಡುವಾಗಲೇ ಹೃದಯಾಘಾತ; ಮಗಳ ಮುಂದೆಯೇ ತಂದೆ ಸಾವು!

Ramanagara News: ರಾಮನಗರ ತಾಲೂಕಿನ ಮಂಚಶೆಟ್ಟಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಶಿವಲಿಂಗಯ್ಯ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಗಳ ಕಣ್ಣೆದುರೇ ತಂದೆಗೆ ಹೃದಯಾಘಾತ ಸಂಭವಿಸಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದ ಹಿನ್ನೆಲೆಯಲ್ಲಿ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹೆಲಿಕಾಪ್ಟರ್‌ನಲ್ಲಿ ಓಡಾಡಿ ಬಣ್ಣದ ಮಾತನಾಡಿದರೆ ಪ್ರಜಾಸೇವಕರಾಗಲು ಹೇಗೆ ಸಾಧ್ಯ? ಸಿಎಂ ವಿರುದ್ಧ ವಿಜಯೇಂದ್ರ ಕಿಡಿ

ಬಳ್ಳಾರಿ ಚಲೋ ಪಾದಯಾತ್ರೆ; ಸಿಎಂ ವಿರುದ್ಧ ವಿಜಯೇಂದ್ರ ವಾಗ್ದಾಳಿ!

ಬಳ್ಳಾರಿ ಚಲೋ ಪಾದಯಾತ್ರೆ ಆರನೇ ದಿನಕ್ಕೆ ಕಾಲಿಟ್ಟಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉತ್ತರ ಕರ್ನಾಟಕದ ಪ್ರವಾಸದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವ್ಯಂಗ್ಯವಾಡಿದರು. ಗಂಗಾವತಿಯ ಜಂಗಮರ ಕಲ್ಗುಡಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಅವರು ನಿನ್ನೆ ‘ನಾಡಿನ ದೊರೆ’ ಎಂದು ಕರೆಯಬೇಡಿ, ‘ಪ್ರಜಾಸೇವಕ’ ಎಂದು ಕರೆಯಿರಿ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸ್ಕೂಟರ್ ಗುಂಡಿಗೆ ಬಿದ್ದು ಮಹಿಳೆಗೆ ಗಂಭೀರ ಗಾಯ; ಚಿಕಿತ್ಸೆಗೆ 2 ಲಕ್ಷ ರೂಪಾಯಿ ಖರ್ಚು

ರಸ್ತೆ ಸರಿಪಡಿಸಿ; ಆಸ್ಪತ್ರೆಯಿಂದ ಮಹಿಳೆ ಮನವಿ

ಸ್ಕೂಟರ್ ಗುಂಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಮಹಿಳೆಯೊಬ್ಬರು ರಸ್ತೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಬೆಂಗಳೂರಿನ ವೈಟ್‌ಫೀಲ್ಡ್-ವರ್ತೂರ್ ರಸ್ತೆಯಲ್ಲಿ ನೆಕ್ಸಸ್ ಮಾಲ್ ಬಳಿಯ ಗುಂಡಿ ಬಳಿ ತನ್ನ ಸ್ಕೂಟರ್ ಬಿದ್ದು ಹಿಮ್ಮಡಿ ಪುಡಿಯಾಗಿದೆ. ಇದರಿಂದ ಚಿಕಿತ್ಸೆಗೆ ಬರೋಬ್ಬರಿ 2 ಲಕ್ಷ ರೂ. ಖರ್ಚಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಅಧಿಕಾರಿಗಳ ಗಮನ ಸೆಳೆದಿದ್ದಾರೆ.

Chief Jail Superintendent Suspend: ‘ಕೈದಿಗಳ ಬಿಂದಾಸ್ ಲೈಫ್’ ವಿಡಿಯೊ ಪ್ರಕರಣ: ಕರ್ತವ್ಯಲೋಪ ಮೇಲ್ನೋಟಕ್ಕೆ ಸಾಬೀತು: ಜೈಲು ಮುಖ್ಯ ಅಧೀಕ್ಷಕಿ ಅನಿತಾ ಆರ್. ಅಮಾನತು

ಜೈಲು ಮುಖ್ಯ ಅಧೀಕ್ಷಕಿ ಅನಿತಾ ಆರ್. ಅಮಾನತು

ಅಮಾನತು ಅವಧಿಯಲ್ಲಿ ಅನಿತಾ ಆರ್. ಅವರ ಕೇಂದ್ರ ಸ್ಥಾನವನ್ನು ವಿಜಯಪುರದ ನೂತನ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಸದ್ಯ ಅವರು ಮೈಸೂರಿನ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆ ಯಲ್ಲಿ ಮುಖ್ಯ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸರ್ಕಾರದ ಮುಂದಿನ ಆದೇಶದವರೆಗೆ ಆ ಕರ್ತವ್ಯದಿಂದ ಬಿಡುಗಡೆಗೊಂಡು ವಿಜಯಪುರದ ನೂತನ ಕೇಂದ್ರ ಕಾರಾಗೃಹ ದಲ್ಲಿ ಅಮಾನತು ಅವಧಿಯ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಬೆಂಗಳೂರಿಗೆ ತೆರಳುತ್ತಿದ್ದ ಬಳಿ ಕೆಎಸ್​ಆರ್​ಟಿಸಿ ಬಸ್​ಗೆ ಬೆಂಕಿ​: ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು

ಬೆಂಗಳೂರಿಗೆ ತೆರಳುತ್ತಿದ್ದ ಬಳಿ ಕೆಎಸ್​ಆರ್​ಟಿಸಿ ಬಸ್​ಗೆ ಬೆಂಕಿ

Bus Fire Accident: ವಿರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 'ಇವಿ ಪವರ್ ಪ್ಲಸ್' ಎಸಿ ಸ್ಲೀಪರ್ ಎಲೆಕ್ಟ್ರಿಕ್ ಬಸ್ ಶನಿವಾರ ಸಂಜೆ ಮೈಸೂರು ಬಳಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಪಿಎಸ್‌ಐ ಸಂಗೀತಾ ಜತೆ ಫೋಟೋ ವೈರಲ್: ರೌಡಿ ಶೀಟರ್‌ಗೆ ಠಾಣೆಯಲ್ಲೇ ಸನ್ಮಾನ!

ರೌಡಿ ಶೀಟರ್‌ಗೆ ಠಾಣೆಯಲ್ಲೇ ಸನ್ಮಾನ!

ದೇವಲಗಾಣಗಾಪುರ ಠಾಣೆಯ ಪಿಎಸ್‌ಐ ಸಂಗೀತಾ ಅವರು ರೌಡಿ ಶೀಟರ್ ಮಾರುತಿ ಜತೆ ಫೋಟೋ ತೆಗೆಸಿಕೊಂಡಿದ್ದು, ಆತನನ್ನು ಸನ್ಮಾನಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಲ್ಲದೆ, ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲೂ ಮಾರುತಿ ಭಾಗಿಯಾಗಿರು ವುದು ಚರ್ಚೆಗೆ ಕಾರಣವಾಗಿದೆ.

ಶಿಕ್ಷಕರ ದಿನಾಚರಣೆ ನಿಮಿತ್ತ ಬೃಹತ್ ರಕ್ತದಾನ ಶಿಬಿರ: ಸಿಇಒ ರಾಹುಲ್ ಶಿಂಧೆ ಕರೆಗೆ ಭರ್ಜರಿ ಸ್ಪಂದನೆ, ರಕ್ತ ಸಂಗ್ರಹದಲ್ಲಿ ದಾಖಲೆ ಬರೆದ ಬೆಳಗಾವಿ

ರಕ್ತ ಸಂಗ್ರಹದಲ್ಲಿ ದಾಖಲೆ ಬರೆದ ಬೆಳಗಾವಿ

ಸರಕಾರಿ ಕಚೇರಿಗಳಲ್ಲಿ ನಡೆಯುವ ಗಣ್ಯರ ದಿನಾಚರಣೆಗಳು ಇತ್ತೀಚಿನ ದಿನಗಳಲ್ಲಿ ಕೇವಲ ಫೋಟೊ ಪೂಜೆಗೆ ಮಾತ್ರ ಸೀಮಿತ ಆಗಿವೆ. ಆದರೆ ಬೆಳಗಾವಿ ಜಿಲ್ಲಾ ಪಂಚಾಯಿತಿ ವಿನೂತನ ಪ್ರಯತ್ನದ ಮೂಲಕ ಯಶಸ್ವಿ ಆಗಿದೆ. ಬೃಹತ್ ರಕ್ತದಾನ ಶಿಬಿರದ ಮೂಲಕ ಶಿಕ್ಷಕರ ದಿನಾಚರಣೆಯನ್ನು ರಾಜ್ಯದಲ್ಲೇ ಮಾದರಿಯಾಗಿ ಆಚರಣೆ ಮಾಡಿದೆ.

ರಾಜ್ಯದಲ್ಲಿ ದುರ್ಬಲವಾದ ಮುಂಗಾರು; ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆ

ರಾಜ್ಯದಲ್ಲಿ ದುರ್ಬಲವಾದ ಮುಂಗಾರು; ಹಲವು ಜಿಲ್ಲೆಗಳಲ್ಲಿ ಮಳೆ ಕೊರತೆ

Karnataka Weather: ರಾಜ್ಯಾದ್ಯಂತ ಮುಂಗಾರು ದುರ್ಬಲಗೊಂಡಿದ್ದು, . ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಿದೆ. ಒಳನಾಡಿನಲ್ಲಿಯೂ ಮಳೆಯ ಕೊರತೆ ಕಂಡು ಬಂದಿದೆ. ರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಲಿದೆ.

Vijayalakshmi Balekundri: ಕಸಾಪ ಚುನಾವಣೆಗೆ ಸ್ಫರ್ಧಿಸಲು ಸಿದ್ದ: ಬಾಳೇಕುಂದ್ರಿ

ಕಸಾಪ ಚುನಾವಣೆಗೆ ಸ್ಫರ್ಧಿಸಲು ಸಿದ್ದ: ಬಾಳೇಕುಂದ್ರಿ

ಕರ್ನಾಟಕದಲ್ಲಿ ಸುಮಾರು 48 ಸಾವಿರ ಸರಕಾರಿ ಶಾಲೆಗಳಿದ್ದು, ಕಳೆದ ಕೆಲವು ವರ್ಷಗಳಲ್ಲಿ ಸುಮಾರು 6 ಸಾವಿರ ಶಾಲೆಗಳು ಮುಚ್ಚಿರುವುದು ಆತಂಕಕಾರಿ ಬೆಳವಣಿಗೆ. ಸರಕಾರಿ ಶಾಲೆಗಳಲ್ಲಿ ಸುಮಾರು 38 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಕಳೆದ ಎರಡು ವರ್ಷಗಳಿಂದ ದಾಖಲಾತಿ ಪ್ರಮಾಣವೂ ಕುಸಿಯು ತ್ತಿದೆ. ಹೀಗಾಗಿ ಕನ್ನಡ ಶಾಲೆಗಳ ಉಳಿವಿಗಾಗಿ ಸರಕಾರದ ಜತೆಗೆ ಸಮಾಜವೂ ಕೈಜೋಡಿಸ ಬೇಕಾದ ಅಗತ್ಯವಿದೆ

ಯಾರೊಂದಿಗೂ ಕೆಪಿಎಸ್‌ಸಿ ಡೀಲ್ ಮಾಡಿಲ್ಲ: ಸಿಐಡಿ ವಿಚಾರಣೆಯಲ್ಲಿ ಶಿವಶಂಕರಪ್ಪ ಸಾಹುಕಾರ್ ಹೇಳಿಕೆ

ಹಗರಣ ಒಪ್ಪಿಕೊಳ್ಳಲು ಶಿವಶಂಕರಪ್ಪ ನಕಾರ

ಜ್ಞಾನೇಂದ್ರ ಜತೆ ನನ್ನದು ಬರೀ ಆಡಳಿತ ವ್ಯವಹಾರ. ಅದನ್ನು ಬಿಟ್ಟು ಹಣಕಾಸಿನ ಮಾತು ಕತೆ ಯಾಗಲಿ, ಪರೀಕ್ಷೆ ವಿಚಾರ ಆಗಲಿ ಮಾತನಾಡಿಲ್ಲ. ಬಸವರಾಜ್ ಕನ್ನಾಳೆ(Basavaraj Kannale) ಯನ್ನು ನಾನು ಮುಖಾಮುಖಿ ಭೇಟಿಯೂ ಆಗಿಲ್ಲ. ನಾನು ಈ ಅವ್ಯವಹಾರದಲ್ಲಿ ಪರೋಕ್ಷವಾಗಿ ಯೂ ಕೈ ಹಾಕಿಲ್ಲ ಎಂದು ಸಿಐಡಿ ಮುಂದೆ ಹೇಳಿದ್ದಾರೆ.

Padayatra reached 5th Day: ಬಿರು ಬಿಸಿಲಲ್ಲೂ ಬಿಜೆಪಿ ಜಾಥಾ, ಶಿಕ್ಷಕರ ದಿನಾಚರಣೆಯಲ್ಲಿ ಬಿವೈವಿ ಭಾಗಿ: ಪಾದಯಾತ್ರೆ ಮಧ್ಯೆ ರೈತರ ಜತೆ ಸಂವಾದ

ಪಾದಯಾತ್ರೆ ಮಧ್ಯೆ ರೈತರ ಜತೆ ಸಂವಾದ

ಮರಳಿ ಗ್ರಾಮದಲ್ಲಿ ನವಲಿ ಜಲಾಶಯ ನಿರ್ಮಾಣದ ಸಾಧಕ- ಬಾಧಕಗಳ ಕುರಿತು ರೈತ ಸಂಘಟನೆ ಮುಖಂಡರೊಂದಿಗೆ ಸಂವಾದ ನಡೆಸಿದರು. ಶನಿವಾರ ಬೆಳಗ್ಗೆ ಪಾದಯಾತ್ರೆ ಆರಂಭಕ್ಕೂ ಮೊದಲು ಎಪಿಎಂಸಿ 1ನೇ ಗೇಟ್ ನ ಶಿವಕಿರಣ ಟ್ರೇಡಿಂಗ್ ಸಮೀಪ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಭಾಗಿಯಾದ ರಾಜ್ಯಾಧ್ಯಕ್ಷ ಬಿವೈವಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದರು.

ಅರಮನೆ ಮೈದಾನದಿಂದ ಸಿದ್ದರಾಮಯ್ಯ ಸಂದೇಶ?: ಇಂದು ಅಹಿಂದ ಸಮಾವೇಶ

ಇಂದು ಅಹಿಂದ ಸಮಾವೇಶ

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ರಜತ ಮಹೋತ್ಸವದ ನೆಪದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಳಾಗಿದೆ. ಈ ಕಾರ್ಯಕ್ರಮ ಕೇವಲ ಒಬಿಸಿ ಸಮಾವೇಶವಾಗಿರದೇ, ಅಹಿಂದ ಸಮಾವೇಶವಾಗುವುದು ನಿಶ್ಚಿತವಾಗಿರುವುದರಿಂದ ಸಿದ್ದರಾಮ ಯ್ಯ ಈ ಸಮಾವೇಶದಲ್ಲಿ ತಮ್ಮ ಮೌನ ಮುರಿಯುವ ಅಥವಾ ಮುಂದಿನ ಆಲೋಚನೆ ಬಗ್ಗೆ ಬಹಿರಂಗವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

Pourakarmikas: ಪೌರಕಾರ್ಮಿಕರು ಕೆಲಸಕ್ಕೆ ಸಮರ್ಪಕವಾಗಿ ಹಾಜರಾಗದಿದ್ರೆ ನಿರ್ದಾಕ್ಷಿಣ್ಯವಾಗಿ ವಜಾ: ಸಚಿವ ಕೃಷ್ಣಬೈರೇಗೌಡ ಎಚ್ಚರಿಕೆ

ಪೌರಕಾರ್ಮಿಕರು ಕೆಲಸಕ್ಕೆ ಹಾಜರಾಗದಿದ್ರೆ ನಿರ್ದಾಕ್ಷಿಣ್ಯವಾಗಿ ವಜಾ

Krishna Byre Gowda: ಕೆಲಸಕ್ಕೆ ನಿಯಮಿತವಾಗಿ ಹಾಜರಾಗದ ಪೌರಕಾರ್ಮಿಕರಿಗೆ ಮೂರು ಬಾರಿ ನೋಟಿಸ್ ನೀಡಲಾಗುವುದು. ನೋಟಿಸ್‌ಗಳಿಗೆ ಸ್ಪಂದಿಸದಿದ್ದರೆ ನಿಯಮಾನುಸಾರ ಸೇವೆಯಿಂದ ಸಿಬ್ಬಂದಿಯನ್ನು ವಜಾಗೊಳಿಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು.

Loading...