ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

ಪ್ರೀತಿಸುವಂತೆ ಸಹಪಾಠಿ ಒತ್ತಾಯ; ಶಾಲಾ ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರೀತಿಸುವಂತೆ ಸಹಪಾಠಿ ಒತ್ತಾಯ; ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಭೆಮಳಖೇಡ ಗ್ರಾಮದಲ್ಲಿ ಘಟನೆ ನಡೆದಿದೆ. ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಗೆ ಲವ್ ಮಾಡುವಂತೆ ಸಹಪಾಠಿ ಚುಡಾಯಿಸುತ್ತಿದ್ದ. ಪ್ರೀತಿಸುವಂತೆ ಒತ್ತಡ ಹಾಕಿದ್ದರಿಂದ ಶಾಲಾ ಕಟ್ಟಡದ ಮೇಲಿಂದ ಜಿಗಿದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ.

BY Vijayendra: ಆದಾಯ ಸಂಗ್ರಹದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ: ಬಿ.ವೈ. ವಿಜಯೇಂದ್ರ

ಆದಾಯ ಸಂಗ್ರಹದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ: ಬಿ.ವೈ. ವಿಜಯೇಂದ್ರ

BY Vijayendra: ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿ ಕೈ ತೊಳೆದುಕೊಳ್ಳುವ ಕುತಂತ್ರಕ್ಕೆ ಈ ಬಜೆಟ್ಟನ್ನು ಸೀಮಿತ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.

Edelweiss Life Insurance: ಎಫ್‌ವೈ27ರ ವೇಳೆಗೆ ಎಡೆಲ್ವೈಸ್ ಲೈಫ್ ಇನ್ಶೂರೆನ್ಸ್ ಬ್ರೇಕ್-ಈವನ್ ತಲುಪುವ ಗುರಿ

ಬಂಡವಾಳದ ದೃಷ್ಟಿಕೋನದಿಂದ, ಕಂಪನಿ ಉತ್ತಮ ಬಂಡವಾಳ ಹೊಂದಿದೆ

ಕಂಪನಿಯು ಕ್ಯೂ3ಎಫ್‌ವೈ26ನಲ್ಲಿ ಬಲವಾದ ವೇಗವನ್ನು ಕಂಡಿತು. ಇದರ ವೈಯಕ್ತಿಕ ಎಪಿಇ ವರ್ಷದಿಂದ ವರ್ಷಕ್ಕೆ 38% ರಷ್ಟು ಬೆಳೆದಿದೆ, ಇದು ಉದ್ಯಮದ ಸರಾಸರಿಗಿಂತ ಹೆಚ್ಚಿನದಾಗಿದೆ. ಎಫ್‌ವೈ26 ರಲ್ಲಿ, ಕಂಪನಿಯು ಸುಮಾರು 650 ಕೋಟಿ ರೂ.ಗಳ ಹೊಸ ವ್ಯವಹಾರ ಮತ್ತು ಸುಮಾರು 2400 ಕೋಟಿ ರೂ.ಗಳ ಒಟ್ಟು ಪ್ರೀಮಿಯಂ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ.

ಎಲ್‌ಪಿಜಿ ಕೊರತೆ ಬಗ್ಗೆ ಸಂಸದರು ಸಂಸತ್ತಿನಲ್ಲಿ ಧ್ವನಿ ಎತ್ತಿ ಜನರಿಗೆ ನ್ಯಾಯ ಒದಗಿಸಲಿ: ಡಿ.ಕೆ. ಶಿವಕುಮಾರ್ ಆಗ್ರಹ

ಎಲ್‌ಪಿಜಿ ಕೊರತೆ ಬಗ್ಗೆ ಸಂಸದರು ಧ್ವನಿ ಎತ್ತಲಿ: ಡಿಕೆಶಿ ಆಗ್ರಹ

LPG Cylinder Shortage: ಈ ಇಂಧನ ಬೆಲೆ ಏರಿಕೆಯಿಂದ ಜನ ಪರದಾಡುತ್ತಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರ ಏನೂ ಮಾಡಲು ಆಗುವುದಿಲ್ಲ. ಕೇಂದ್ರ ಸರ್ಕಾರ ಇದಕ್ಕೆ ಹೊಣೆ. ಕೇಂದ್ರ ಸರ್ಕಾರ ವಿದೇಶಾಂಗ ನೀತಿ ಬಗ್ಗೆ ಸ್ಪಷ್ಟವಾಗಿ ಮಾತನಾಡುತ್ತಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೃಹ ಬಳಕೆ ವಿದ್ಯುತ್‌ ಅನ್ಯ ಉದ್ದೇಶಗಳಿಗೆ ಬಳಸಿದ್ರೆ ಬೀಳುತ್ತೆ ಕೇಸ್‌: ಬೆಸ್ಕಾಂ ಎಚ್ಚರಿಕೆ

ಗೃಹ ಬಳಕೆ ವಿದ್ಯುತ್‌ ಅನ್ಯ ಉದ್ದೇಶಗಳಿಗೆ ಬಳಸಿದ್ರೆ ಬೀಳುತ್ತೆ ಕೇಸ್‌

BESCOM: ಗೃಹ ಬಳಕೆಗೆ ಪಡೆದ (ಎಲ್‌ಟಿ 1) ವಿದ್ಯುತ್‌ ಸಂಪರ್ಕವನ್ನು ಕೆಲವು ಗ್ರಾಹಕರು ಅಂಗಡಿ-ಮುಂಗಟ್ಟು, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆಗಳು, ಅತಿಥಿ ಗೃಹಗಳು, ಮೆಸ್‌, ಸರ್ವೀಸ್ ಅಪಾರ್ಟ್‌ಮೆಂಟ್‌, ಪೇಯಿಂಗ್‌ ಗೆಸ್ಟ್‌, ಕಚೇರಿ ಮುಂತಾದ ಉದ್ದೇಶಗಳಿಗೆ (ಎಲ್‌ಟಿ 1 ಸಂಪರ್ಕ) ಅನಧಿಕೃತವಾಗಿ ಬಳಸುತ್ತಿರುವುದು ಬೆಸ್ಕಾಂ ಗಮನಕ್ಕೆ ಬಂದ್ದಿದ್ದು, ಇಂತಹ ಸಂಪರ್ಕಗಳನ್ನು ತಕ್ಷಣವೇ ಕಡಿತಗೊಳಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬೆಸ್ಕಾಂ ಎಚ್ಚರಿಸಿದೆ.

ಆಟವಾಡುವ ವೇಳೆ ನೀರಿನ ಸಂಪ್‌ಗೆ ಬಿದ್ದು ಎರಡೂವರೆ ವರ್ಷದ ಮಗು ಸಾವು

ನೀರಿನ ಸಂಪ್‌ಗೆ ಬಿದ್ದು ಎರಡೂವರೆ ವರ್ಷದ ಮಗು ಸಾವು

ಬೆಂಗಳೂರು ಉತ್ತರ ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಘಟನೆ ನಡೆದಿದೆ. ಕಾರು ತೊಳೆಯಲು ಸಂಪಿನ ಕ್ಯಾಪ್‌ ತೆರೆದು ಮನೆಯೊಳಗೆ ತಂದೆ ತೆರಳಿದ್ದರು. ಈ ವೇಳೆ ಆಟವಾಡುತ್ತಿದ್ದ ಮಗು ಸಂಪ್‌ಗೆ ಬಿದ್ದು ಮೃತ ಪಟ್ಟಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

KSIC: ದೂರವಾದ ಮೈಸೂರು ರೇಷ್ಮೆ ಸೀರೆ ಉದ್ಯಮ ಆತಂಕ

KSIC: ದೂರವಾದ ಮೈಸೂರು ರೇಷ್ಮೆ ಸೀರೆ ಉದ್ಯಮ ಆತಂಕ

ಮೈಸೂರು ರೇಷ್ಮೆ ಹೆಸರಿನಲ್ಲಿ ಮೈಸೂರಿನಲ್ಲಿ ಕುತಂತ್ರಿಗಳ ದೊಡ್ಡ ಜಾಲವೊಂದು ಕೆಲಸ ಮಾಡುತ್ತಿದೆ. ಅದರ ಪರಿಣಾವೇ ಮೈಸೂರಿನ ಕೆಲ ಖಾಸಗಿ ಸೀರೆ ಮಳಿಗೆಗಳ ಮೇಲೆ ಕೆಎಸ್‌ ಐಸಿ ಪದ ಬಳಕೆಯ ದುರುಪಯೋಗ ಆಗಿದೆ. ಮೈಸೂರು ರೇಷ್ಮೆ ಸೀರೆ ಮಾದರಿ ಹೋಲುವ ಚೀನಾ ರೇಷ್ಮೆ ಸೀರೆಗಳನ್ನೇ ಮೈಸೂರು ರೇಷ್ಮೆ ಸೇರೆ ಎಂದು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ, ಆದರೆ ಇದನ್ನು ಪ್ರಶ್ನಿಸಬೇಕಾದ ಮಂದಿ ಜಾಣ ಕುರುಡರಾಗಿರುವುದು ನಿಜಕ್ಕೂ ಕಳವಳಕಾರಿ ಸಂಗತಿ.

ಮಕ್ಕಳ ಅಶ್ಲೀಲ ಚಿತ್ರ,  ವಿಡಿಯೋ ಸಂಗ್ರಹವೂ ಅಪರಾಧ; ಮಹತ್ವದ ಆದೇಶ ನೀಡಿದ ಹೈಕೋರ್ಟ್‌

ಮಕ್ಕಳ ಅಶ್ಲೀಲ ಚಿತ್ರ, ವಿಡಿಯೋ ಸಂಗ್ರಹವೂ ಅಪರಾಧ; ಹೈಕೋರ್ಟ್‌

ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೊಗಳನ್ನು ಮೊಬೈಲ್‌ ಫೋನ್‌ನಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ (ಪೋಕ್ಸೊ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯಡಿ (ಐಟಿ) ಅಪರಾಧವಾಗಲಿದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಕೇರಳದ ತ್ರಿಶೂರು ಜಿಲ್ಲೆಯ ಚೊಟ್ಟೂರುಪುರ ಕಿಲ್ಲನೂರಿನ ಪಿ.ಜೆ.ಬಿನೋಜ್‌ ಎಂಬಾತ ಪ್ರಕರಣದ ಕುರಿತು ಅರ್ಜಿ ಸಲ್ಲಿಸಿದ್ದ.

ಹೆಚ್ಚುತ್ತಿದೆ ಯುವಜನರಲ್ಲಿ ಮರೆವಿನ  ಕಾಯಿಲೆ; ಏನು ಪರಿಹಾರ?

ಯುವಜನರಲ್ಲಿ ಮರೆವಿನ ಸಮಸ್ಯೆ: ಇದಕ್ಕೆ ಕಾರಣವೇನು?

Health Tips: ಇಂದಿನ ಯುವಕರಲ್ಲಿ ಸದಾ ಕಾಲ ಅಬ್ಸೆಂಟ್‌ ಮೈಂಡ್‌, ಸಣ್ಣ ಪುಟ್ಟ ವಿಷಯಗಳನ್ನು ಸಹ ಬಹುಬೇಗ ಮರೆತು ಬಿಡುತ್ತಾರೆ. ಇದಕ್ಕೆ ಕಾರಣ ಏನು? ಚಿಕ್ಕ ವಯಸ್ಸಿನ ಯಾವ ಸಂಗತಿಗಳು ಸಣ್ಣ ವಯಸ್ಸಿನಲ್ಲೇ ಮರೆವಿನ ಸಮಸ್ಯೆಗೆ ಕಾರಣವಾಗುತ್ತದೆ? ಎನ್ನುವ ವಿಚಾರಗಳನ್ನು ಪ್ರೊ. ಸುತ್ತೂರು ಮಾಲಿನಿ ಅವರು ಮಾಹಿತಿ ನೀಡಿದ್ದಾರೆ..

No Gas Trouble: ಪರ್ಯಾಯ ಅನಿಲ; ನಿತ್ಯ ದಾಸೋಹಿಗಳಿಗಿಲ್ಲ ಟೆನ್ಶನ್

ಪರ್ಯಾಯ ಅನಿಲ; ನಿತ್ಯ ದಾಸೋಹಿಗಳಿಗಿಲ್ಲ ಟೆನ್ಶನ್

ಬೆಂಗಳೂರಿನ ಅದಮ್ಯಚೇತನ, ಇಸ್ಕಾನ್‌ನ ಅಕ್ಷ ಯಪಾತ್ರ, ಸಿದ್ದಗಂಗಾ ಮಠ, ಧರ್ಮಸ್ಥಳ ದಂತಹ ಕ್ಷೇತ್ರದಲ್ಲಿ ನಿತ್ಯ ಲಕ್ಷಾಂತರ ಜನರಿಗೆ ಅನ್ನಪ್ರಸಾದ ವನ್ನು ಸಿದ್ಧಪಡಿಸಲಾಗುತ್ತದೆ. ಆದರೆ ಈ ಎಲ್ಲ ಕಡೆ ಸೋಲಾರ್, ಹಬೆಯಾಧಾರಿತ ಆಹಾರ ತಯಾರಿಕಾ ಕ್ರಮ ಅಥವಾ ಸೋಲಾರ್ ಬಳಸುವುದರಿಂದ ವಾಣಿಜ್ಯ ಸಿಲಿಂಡರ್‌ಗಳ ಕೊರತೆ ಯಾದರೂ ಚಿಂತಿಸುತ್ತಿಲ್ಲ.

ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಪರೀಕ್ಷೆ ಆಯೋಜಿಸಿ: ಜಿಲ್ಲಾಧಿಕಾರಿ ಜಿ.ಪ್ರಭು ಸೂಚನೆ

ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಪರೀಕ್ಷೆ ಆಯೋಜಿಸಿ

10ನೇ ತರಗತಿಯ ಪರೀಕ್ಷೆಗಳು ಇದೆ ತಿಂಗಳ 18 ರಿಂದ ಏಪ್ರಿಲ್ 2 ರವರೆಗೆ ಜಿಲ್ಲೆಯಲ್ಲಿನ 53 ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ.ಟಿ.ವಿ ನಿಗಾ ವ್ಯವಸ್ಥೆಯ ನಿಗಾದಡಿ ನಡೆಯುತ್ತವೆ. ರಾಜ್ಯ ಮಟ್ಟದ ಅಧಿಕಾರಿಗಳು ವೆಬ್ ಕಾಸ್ಟಿಂಗ್ ಆನ್ ಲೈನ್ ವ್ಯವಸ್ಥೆ ಮುಖಾಂತರವೇ ಮೇಲುಸ್ತುವಾರಿ ಮಾಡು ತ್ತಿರುತ್ತಾರೆ

Ramzan fast: ರಂಜಾನ್ ಉಪವಾಸ 21ನೇ ದಿನ ಇಫ್ತಿಯಾರ್ ಕೂಟ ಏರ್ಪಡಿಸಿ ಶುಭಾಶಯ ಕೋರಿದ ಜಯಕುಮಾರ್

ಇಫ್ತಿಯಾರ್ ಕೂಟ ಏರ್ಪಡಿಸಿ ಶುಭಾಶಯ ಕೋರಿದ ಜಯಕುಮಾರ್

ಭಾರತದ ಜೀವನಕ್ರಮದಲ್ಲಿಯೇ ಸಹೋದರತೆ, ಭ್ರಾತೃತ್ವ, ಸಹಿಷ್ಣುತೆ, ಧರ್ಮಜಾಗೃತಿ ಜೀವನ ಪಾಠವನ್ನು ಕಲಿಸಲಾಗಿದೆ.ಹೀಗಾಗಿಯೇ ನಮ್ಮ ಸಂವಿಧಾನದ ಹೃದಯವಾದ ಪೀಠಿಕೆಯಲ್ಲಿ ಭಾರತದ ಪ್ರೆಜೆಗಳಾದ ನಾವು ಭಾರತವನ್ನು ಒಂದು ಸರ್ವತಂತ್ರ ಸ್ವತಂತ್ರ, ಸಾರ್ವಭೌಮ, ಜಾತ್ಯಾತೀತ ಗಣರಾಜ್ಯವನ್ನಾಗಿ ರೂಪಿಸಲು ನಾವು ಕಟಿಬದ್ಧರಾಗಿದ್ದೇವೆ ಎಂದ ತಿಳಿಸಿದೆ

Lok Adalat: ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಮಾ.14ರಂದು ಲೋಕ್ ಅದಾಲತ್‌ನಲ್ಲಿ ಭಾಗವಹಿಸಿ: ನ್ಯಾ.ರೋಷನ್ ಷಾ

ಮಾ.14ರಂದು ಲೋಕ್ ಅದಾಲತ್‌ನಲ್ಲಿ ಭಾಗವಹಿಸಿ

ಅಪರಾಧಿಕ ರಾಜಿಯೋಗ್ಯ ಪ್ರಕರಣಗಳು, ಬ್ಯಾಂಕ್ ವಸೂಲಾತಿ ಪ್ರಕರಣಗಳು, ಉದ್ಯೋಗ ಸಂಬಂಧಿತ ಪ್ರಕರಣಗಳು, ಕೈಗಾರಿಕಾ ಕಾರ್ಮಿಕರ ವೇತನ ಪ್ರಕರಣಗಳು, ಗ್ರಾಹಕರ ವೇದಿಕೆ ಸಂಬಂಧಿತ ವ್ಯಾಜ್ಯಗಳು, ರಿಯಲ್ ಎಸ್ಟೇಟ್ ಪ್ರಕರಣಗಳು, ಸಾಲ ವಸೂಲಾತಿ, ಚೆಕ್ ಅಮಾ ನತ್ತು ಪ್ರಕರಣಗಳು, ಭೂಸ್ವಾಧೀನ, ವೇತನ ಭತ್ಯೆ ಹಾಗೂ ಪಿಂಚಣಿ ಪ್ರಕರಣಗಳು ಸೇರಿದಂತೆ ಸಾರ್ವಜನಿಕ ಉಪಯುಕ್ತ ಸೇವೆಗಳ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸ ಬಹುದು

Indefinite sit-in: ಹಣ ಕಳೆದುಕೊಂಡ ಗ್ರಾಹಕರಿಂದ ಅನಿರ್ದಿಷ್ಟ ಧರಣಿ

ಹಣ ಕಳೆದುಕೊಂಡ ಗ್ರಾಹಕರಿಂದ ಅನಿರ್ದಿಷ್ಟ ಧರಣಿ

ಮೂರು ತಿಂಗಳು ಕಳೆದರೂ ಅಧಿಕಾರಿಗಳು ರಮ್ಯಾ ವಿರುದ್ಧ ಕ್ರಮ ಕೈಗೊಂಡಿಲ್ಲ, ಕಾನೂನು ಕ್ರಮ ಜರುಗಿಸಬೇಕು. ನಮಗೆ ನ್ಯಾಯ ದೊರಕಿಸಿಕೊಡಬೇಕು ಇಲ್ಲಿಯವರೆಗೂ ಹಣ ಕಳೆದು ಕೊಂಡವರಿಗೆ ಪರಿಹಾರ ನೀಡಿಲ್ಲ, ಹಾಲಗಾನಹಳ್ಳಿ ಅಂಚೆ ಕಚೇರಿಯಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ಗ್ರಾಮೀಣ ಸೇವಕಿಯಾಗಿ ಕೆಲಸ ಮಾಡುತ್ತಿರುವ ರಮ್ಯ ವಂಚನೆಯ ಕೃತ್ಯ ಎಸಗಿದ್ದಾಳೆ

ವಡ್ಡಗೆರೆ ದೇವಸ್ಥಾನದಲ್ಲಿ ಹೈಟೆಕ್‌ ಕಳ್ಳರ ಕೈಚಳಕ; ಕೋಟಿ ರುಪಾಯಿ ಮೌಲ್ಯದ ಚಿನ್ನ-ಬೆಳ್ಳಿ ಕಳವು

ವಡ್ಡಗೆರೆ ದೇವಸ್ಥಾನದಿಂದ ಕೋಟಿ ರುಪಾಯಿ ಮೌಲ್ಯದ ಚಿನ್ನ-ಬೆಳ್ಳಿ ಕಳವು

Tumakuru News: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡಗೆರೆ ಶ್ರೀ ವೀರನಾಗಮ್ಮ ದೇವಾಲಯದ ಗರ್ಭಗುಡಿ ಸೇರಿ 4 ಬಾಗಿಲನ್ನು ಗ್ಯಾಸ್ ಕಟರ್‌ನಿಂದ ತುಂಡರಿಸಿ 1 ಕೋಟಿ ರುಪಾಯಿಗೂ ಅಧಿಕ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಜತೆ ಸಿಸಿಟಿವಿಯ ಡಿವಿಆರ್ ಅನ್ನು ಕಳ್ಳರು ಹೊತ್ತೊಯ್ದಿದ್ದಾರೆ.

40 ಲಕ್ಷ ಭಾರತೀಯರು ಬಳಸುತ್ತಿದ್ದಾರೆ ವಿವಾಹೇತರ ಡೇಟಿಂಗ್ ಆ್ಯಪ್; ಅಗ್ರ ಸ್ಥಾನದಲ್ಲಿರುವ ನಗರ ಯಾವುದು ಗೊತ್ತೇ?

ಅತೀ ಹೆಚ್ಚು ಡೇಟಿಂಗ್ ಆಪ್ ಬಳಸುತ್ತಿರುವ ಭಾರತದ ನಗರ ಯಾವುದು?

ದೇಶಾದ್ಯಂತ ಈಗ ವಿವಾಹೇತರ ಸಂಬಂಧಗಳು ಹೆಚ್ಚಾಗುತ್ತಿದೆ. ಇದಕ್ಕೆ ವೇದಿಕೆ ನಿರ್ಮಿಸಿಕೊಟ್ಟಿರುವುದು ವಿವಾಹೇತರ ಡೇಟಿಂಗ್ ಅಪ್ಲಿಕೇಶನ್. ಸುಮಾರು 40 ಲಕ್ಷ ಭಾರತೀಯರು ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ ಬಳಸುತ್ತಿದ್ದು, ಇದರಲ್ಲಿ ಹೆಚ್ಚಿನ ಪುರುಷರು 25 ರಿಂದ 30 ವರ್ಷ ವಯಸ್ಸಿನ ಮಹಿಳೆಯರನ್ನು ಹುಡುಕಲು ಒಲವು ತೋರುತ್ತಿರುವುದು ಅದೇ ರೀತಿ ಮಹಿಳೆಯರು 30 ರಿಂದ 40 ವರ್ಷ ವಯಸ್ಸಿನ ಪುರುಷರನ್ನು ಹುಡುಕುತ್ತಿರುವುದನ್ನು ಅಂಕಿ ಅಂಶಗಳು ಬಹಿರಂಗ ಪಡಿಸಿವೆ.

Rohit Shetty: ಹಾರ್ಪಿಕ್‌ನಿಂದ ಹೊಸ 'ಹಾರ್ಪಿಕ್ ಬಾತ್‌ರೂಮ್ ಅಲ್ಟ್ರಾ ಕ್ಲೀನರ್'ಗೆ ಬಾಲಿವುಡ್‌ ನಿರ್ದೇಶಕ ರೋಹಿತ್ ಶೆಟ್ಟಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ

ಬಾಲಿವುಡ್‌ ನಿರ್ದೇಶಕ ರೋಹಿತ್ ಶೆಟ್ಟಿ ಬ್ರ್ಯಾಂಡ್ ಅಂಬಾಸಿಡರ್

ಭಾರತದ ನಗರ ಪ್ರದೇಶದ ಮನೆಗಳಲ್ಲಿ ಹಳದಿ ಕಲೆಗಳು, ಉಪ್ಪುನೀರಿನ ಪಾಚಿಯಂತಹ ಪದರ (Limescale) ಮತ್ತು ತುಕ್ಕಿನಂತಹ ಕಠಿಣ ಕಲೆಗಳು ದೊಡ್ಡ ಸಮಸ್ಯೆಯಾಗಿವೆ. ಕಾಲಾನಂತರ ದಲ್ಲಿ, ಇಂತಹ ಕಲೆಗಳನ್ನು ತೆಗೆಯುವುದು ಅಸಾಧ್ಯವೆಂದು ಗ್ರಾಹಕರು ನಂಬತೊಡಗಿದ್ದಾರೆ ಮತ್ತು ಸೂಕ್ತ ಪರಿಹಾರವಿಲ್ಲದೆ ಡಿಟರ್ಜೆಂಟ್, ಬ್ಲೀಚ್ ಅಥವಾ ಫಿನೈಲ್‌ನಂತಹ ಸಾಮಾನ್ಯ ವಸ್ತುಗಳ ಮೇಲೆ ಅವಲಂಬಿತರಾಗಿದ್ದಾರೆ.

ಎಲ್ಲರಿಗೂ ರೋಗ ನಿರೋಧಕ ಲಸಿಕೆ: ಮೊಟ್ಟ ಮೊದಲಿಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಆರಂಭ

ಎಲ್ಲರಿಗೂ ರೋಗ ನಿರೋಧಕ ಲಸಿಕೆ

ನಗರದ ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಸ್ಪರ್ಶ್‌ ಆಸ್ಪತ್ರೆಯಲ್ಲಿ ಮೊದಲಿಗೆ ಈ ಲಸಿಕೆ ನೀಡುವು ದನ್ನು ಪ್ರಾರಂಭಿಸಲಾಗುತ್ತಿದ್ದು ಬಳಿಕ ಸ್ಪರ್ಶ್‌ ಸಮೂಹದ ಇತರೇ ಅಸ್ಪತ್ರೆಗಳಲ್ಲಿ (ಯಲಹಂಕ, ಬಾಣಸವಾಡಿ, ಸರ್ಜಾಪುರ, ಯಶವಂತಪುರ, ಆರ್‌.ಆರ್‌,ನಗರ) ಹಂತ ಹಂತವಾಗಿ ಈ ಸೌಲಭ್ಯ ಲಭ್ಯವಾಗಲಿದೆ.

ಇಂದಿರಾ ಕ್ಯಾಂಟೀನ್‌ ಅಡುಗೆ ಕೋಣೆಗೂ ವ್ಯಾಪಿಸಿದ ಇರಾನ್‌ ಯುದ್ಧ ತಾಪ: ವೆರೈಟಿ ಮೆನುಗೆ ಕತ್ತರಿ; ಮೊಸರನ್ನವೇ ಗತಿ

ಇಂದಿರಾ ಕ್ಯಾಂಟೀನ್‌, ಬಿಸಿಯೂಟಕ್ಕೂ ತಟ್ಟಿದ ಸಿಲಿಂಡರ್‌ ಕೊರತೆಯ ಎಫೆಕ್ಟ್‌

LPG Crisis: ಜಾಗತಿಕ ಮಟ್ಟದಲ್ಲಿ ಎದುರಾಗಿರುವ ಎಲ್‌ಪಿಜಿ ಅಭಾವವು ಇದೀಗ ರಾಜ್ಯಕ್ಕೂ ತಟ್ಟಿದೆ. ಕೆಲವು ಹೋಟೆಲ್‌ಗಳು ಬಂದ್‌ ಆಗುವ ಭೀತಿ ಎದುರಿಸುತ್ತಿದ್ದರೆ, ಇನ್ನು ಕೆಲವು ಕಡೆ ವೆರೈಟಿ ಮೆನುಗೆ ಕತ್ತರಿ ಹಾಕಿ ಕೆಲವೇ ಕೆಲವು ಐಟಂಗಳನ್ನಷ್ಟೇ ನೀಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್‌, ಶಾಲೆಗಳ ಮಧ್ಯಾಹ್ನ ಬಿಸಿಯೂಟ ಬಂದ್‌ ಆಗುವ ಆತಂಕ ಎದುರಿಸುತ್ತಿವೆ.

ACKO ಡ್ರೈವ್‌ ಸೇವಾ ಕೇಂದ್ರವು ದೇಶಾದ್ಯಂತ ಫ್ರಾಂಚೈಸಿ ವಿಸ್ತರಿಸುವುದಾಗಿ ಘೋಷಣೆ

ದೇಶಾದ್ಯಂತ ಫ್ರಾಂಚೈಸಿ ವಿಸ್ತರಿಸುವುದಾಗಿ ACKO ಡ್ರೈವ್‌ ಘೋಷಣೆ

ಬೆಂಗಳೂರಿನಲ್ಲಿ 1.23 ಕೋಟಿಗೂ ಹೆಚ್ಚು ನೋಂದಾಯಿತ ವಾಹನಗಳು ಮತ್ತು 2024–25ನೇ ಹಣಕಾಸು ವರ್ಷದಲ್ಲಿ 7.22 ಲಕ್ಷ ವಾಹನಗಳು ಸೇರ್ಪಡೆಯಾಗಿವೆ. ನಗರವು ಸಂಘಟಿತ, ತಂತ್ರ ಜ್ಞಾನ-ನೇತೃತ್ವದ ಆಟೋ ಸೇವಾ ವ್ಯವಹಾರಗಳಿಗೆ ದೊಡ್ಡ ಮತ್ತು ಸ್ಥಿರವಾಗಿ ವಿಸ್ತರಿಸುತ್ತಿರುವ ನೆಲೆಯನ್ನು ನೀಡುತ್ತದೆ.

WHO: ಭಾರತದ ಮಕ್ಕಳಲ್ಲಿ ಉಂಟಾಗುವ ಸ್ಥೂಲಕಾಯತೆ ತಡೆಗಟ್ಟಲು ಡಬ್ಲ್ಯೂಎಚ್‌ಒ ಫೌಂಡೇಶನ್ ಮತ್ತು ನೋವೋ ನಾರ್ಡಿಸ್ಕ್ ಸಹಭಾಗಿತ್ವ

'ಡಬ್ಲ್ಯೂಎಚ್‌ಒ ಫೌಂಡೇಶನ್' -'ನೋವೋ ನಾರ್ಡಿಸ್ಕ್' ಸಂಸ್ಥೆಗಳ ಸಹಭಾಗಿತ್ವ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಇಂದು ಜಾಗತಿಕವಾಗಿ ಅಪೌಷ್ಟಿಕತೆಗಿಂತಲೂ, ಅತಿಯಾದ ತೂಕ ಮತ್ತು ಸ್ಥೂಲಕಾಯತೆ ಹೆಚ್ಚಿನ ಸಾವುಗಳಿಗೆ ಕಾರಣವಾಗುತ್ತಿವೆ. ಇದು ಹೃದಯ ರಕ್ತನಾಳದ ಕಾಯಿಲೆಗಳು ಮತ್ತು ಟೈಪ್ 2 ಮಧುಮೇಹ ಸೇರಿದಂತೆ ಹಲವಾರು ಸಾಂಕ್ರಾಮಿಕ ವಲ್ಲದ ರೋಗಗಳಿಗೆ ನೇರ ಸಂಬಂಧ ಹೊಂದಿದೆ.

ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿಗೆ ರಿಲೀಫ್‌; ಜಾಮೀನು ಮಂಜೂರು

ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿಗೆ ಜಾಮೀನು ಮಂಜೂರು

MLA Dr. Chandru Lamani: ಗುತ್ತಿಗೆದಾರನಿಂದ 5 ಲಕ್ಷ ರುಪಾಯಿ ಲಂಚ‌ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದು ಬಂಧನಕ್ಕೊಳಗಾಗಿದ್ದ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ‌ ಡಾ. ಚಂದ್ರು ಲಮಾಣಿ ಅವರಿಗೆ ಜಾಮೀನು ಮಂಜೂರಾಗಿದೆ. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ದಿಢೀರ್ ಯುದ್ಧದಿಂದ ಅಡುಗೆ ಅನಿಲ ಸಮಸ್ಯೆ: ಸಿಲಿಂಡರ್ ಪೂರೈಕೆಗೆ ಕೇಂದ್ರದಿಂದ ಅಗತ್ಯ ಕ್ರಮ ಎಂದ ವಿಜಯೇಂದ್ರ

ಸಿಲಿಂಡರ್ ಪೂರೈಕೆಗೆ ಕೇಂದ್ರದಿಂದ ಅಗತ್ಯ ಕ್ರಮ: ವಿಜಯೇಂದ್ರ

BY Vijayendra: ಅಡುಗೆ ಅನಿಲ ಸಿಲಿಂಡರ್ ಪೂರೈಕೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ದಿಢೀರ್ ಯುದ್ಧದ ಪರಿಣಾಮ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಯಾವುದೇ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರಕ್ಕೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

ಶಿಕ್ಷಕಿಯ ನಿರ್ಲಕ್ಷ್ಯ; ಅಂಗನವಾಡಿ ಬಳಿ ಆಡುತ್ತಿದ್ದ ಮಗುವಿನ ಮರ್ಮಾಂಗಕ್ಕೆ ಗಾಯ

ಅಂಗನವಾಡಿ ಬಳಿ ಆಡುತ್ತಿದ್ದ ಮಗುವಿನ ಮರ್ಮಾಂಗಕ್ಕೆ ಗಾಯ

Chikkamagaluru News: ಚಿಕ್ಕಮಗಳೂರು ನಗರದ ಗೌರಿ ಕಾಲುವೆ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಘೋರ ನಡೆದಿದ್ದು, ಆಟವಾಡುತ್ತಿದ್ದ ವೇಳೆ ಮಗುವಿಗೆ ಕಬ್ಬಿಣದ ಜಾಲರಿ ತಂತಿ ತಗುಲಿ ಮರ್ಮಾಂಗಕ್ಕೆ ಗಾಯವಾಗಿದೆ. ಶಿಕ್ಷಕಿ ನಿರ್ಲಕ್ಷ್ಯ ತೋರಿದ್ದರಿಂದಲೇ ಈ ಘಟನೆ ನಡೆದಿದೆ ಎಂದು ಪೋಷಕರು ದೂರಿದ್ದಾರೆ.

Loading...