ನಾಗರಭಾವಿಯಲ್ಲಿ ಸಪ್ನ ಬುಕ್ ಹೌಸ್ 27ನೇ ಶಾಖೆ ಪ್ರಾರಂಭ
ಬೆಂಗಳೂರಿನ ನಾಗರಭಾವಿಯಲ್ಲಿ ಸಪ್ನ ಬುಕ್ ಹೌಸ್ 27ನೇ ಶಾಖೆ ಉದ್ಘಾಟನೆಯಾಗಿದೆ. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ನಾಡೋಜ ಪ್ರೊ. ಹಂಪ ನಾಗರಾಜಯ್ಯ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟಿ ಸಪ್ತಮಿಗೌಡ, ಕಣ್ವ ಡಯಾಗ್ನೋಸ್ಟಿಕ್ಸ್ ಸಂಸ್ಥಾಪಕ ಡಾ.ಎಚ್.ಎಂ.ವೆಂಕಟಪ್ಪ, ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಕೆಪಿಟಿಸಿಲ್ ಮಾಜಿ ನಿರ್ದೇಶಕ ಎಸ್. ಶಿವಮಲ್ಲು, ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕರಾದ ನಿತಿನ್ ಶಾ ಮತ್ತು ನಿಜೇಶ್ ಎನ್. ಶಾ, ಪ್ರಧಾನ ವ್ಯವಸ್ಥಾಪಕ ಆರ್.ದೊಡ್ಡೇಗೌಡರು ಉಪಸ್ಥಿತರಿದ್ದರು.