ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Uttara Kannada News: ಭಟ್ಕಳ ಅರಣ್ಯದಲ್ಲಿ ಜಾನುವಾರು ಮೂಳೆ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

ಭಟ್ಕಳದಲ್ಲಿ ಜಾನುವಾರು ಮೂಳೆ ಪತ್ತೆ; ಇಬ್ಬರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಗುಡ್ಡದಲ್ಲಿ ಜಾನುವಾರುಗಳ ರಾಶಿ ರಾಶಿ ಮೂಳೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಮಗ್ಗಂ ಕಾಲೋನಿ ನಿವಾಸಿ ಮೊಹಮ್ಮದ್ ಸಮಾನ್ ಹಾಗೂ ಚೌಥನಿ ನಿವಾಸಿ ಮೊಹಮ್ಮದ್ ರಾಹೀನ್ ಬಂಧಿತರು. ಇತರ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಆರೋಗ್ಯ ಮತ್ತು ಮನೆಗಳಲ್ಲಿ ಸಂತೋಷದ ಜಾಗತಿಕ ಆಂದೋಲನ ಆಚರಣೆ

ಆರೋಗ್ಯ ಮತ್ತು ಮನೆಗಳಲ್ಲಿ ಸಂತೋಷದ ಜಾಗತಿಕ ಆಂದೋಲನ ಆಚರಣೆ

1983ರಲ್ಲಿ ಅಪೋಲೋ ಪ್ರಾರಂಭವಾದಾಗ, ಅದು ಕೇವಲ ಆಸ್ಪತ್ರೆಯ ಹುಟ್ಟಾಗಿರಲಿಲ್ಲ, ಬದಲಾಗಿ ಒಂದು ಚಳುವಳಿಯ ಹುಟ್ಟಾಗಿತ್ತು. ನಾಲ್ಕು ದಶಕಗಳಲ್ಲಿ, ಆ ಚಳುವಳಿ 200 ಮಿಲಿಯನ್ ಜೀವಗಳನ್ನು ಮುಟ್ಟಿದ, 185 ರಾಷ್ಟ್ರಗಳಲ್ಲಿ ವಿಶ್ವಾಸವನ್ನು ಬೆಳೆಸಿದ ಮತ್ತು ಆರೋಗ್ಯ ರಕ್ಷಣೆಯಲ್ಲಿ ಸಾಧ್ಯವಾದ ದ್ದನ್ನು ಮರು ವ್ಯಾಖ್ಯಾನಿಸಿದ ಶಕ್ತಿಯಾಗಿ ಬೆಳೆದಿದೆ.

Dharmasthala Case: ಬಂಗ್ಲೆಗುಡ್ಡದಲ್ಲಿ ಸಿಕ್ಕ ಮಾನವ ಅವಶೇಷ ಯಾರದ್ದು? ಎಸ್‌ಐಟಿ ತಂಡ ಹೇಳಿದ್ದೇನು?

ಬಂಗ್ಲೆಗುಡ್ಡದಲ್ಲಿ ಸಿಕ್ಕ ಮಾನವ ಅವಶೇಷ ಯಾರದ್ದು?

ಧರ್ಮಸ್ಥಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ವಿಶೇಷ ತನಿಖಾ ತಂಡ ಇದೀಗ ಬಂಗ್ಲೆಗುಡ್ಡೆಯಲ್ಲಿ ಶೋಧ ಕಾರ್ಯ ನಡೆಸಿದೆ. ಸೌಜನ್ಯಾ ಮಾವ ವಿಠ್ಠಲ್ ಗೌಡ ಅವರ ಹೇಳಿಕೆ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು 13 ಎಕ್ರೆ ವ್ಯಾಪ್ತಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ತನಿಖೆ ನಡೆಸಿದ್ದಾರೆ. ಈ ವೇಳೆ ಕೆಲವು ಮಾನವ ಶರೀರದ ಅವಶೇಷ, ವಿಷದ ಬಾಟಲ್‌, ಹಗ್ಗದ ತುಂಡು ಇತ್ಯಾದಿ ಪತ್ತೆಯಾಗಿದೆ.

ಟಿವಿಎಸ್ ಮೋಟಾರ್ ಕಂಪನಿ ಮತ್ತು ನಾಯ್ಸ್ ಪಯೋನೀರ್ ಭಾರತದ ಮೊದಲ ಇವಿ ಸ್ಮಾರ್ಟ್‌ವಾಚ್ ಸಂಯೋಜನೆ

ಭಾರತದ ಮೊದಲ ಇವಿ ಸ್ಮಾರ್ಟ್‌ವಾಚ್ ಸಂಯೋಜನೆ

ನೈಜ-ಸಮಯದ ಸವಾರಿ ಅಂಕಿ ಅಂಶಗಳನ್ನು ನೀಡುತ್ತದೆ: ಬ್ಯಾಟರಿ, ಟೈರ್ ಒತ್ತಡ, ಶ್ರೇಣಿ ಮತ್ತು ಸುರಕ್ಷತಾ ಎಚ್ಚರಿಕೆಗಳನ್ನು ಸರಳವಾಗಿ ವೀಕ್ಷಿಸಬಹುದಾದ ಸ್ವರೂಪದಲ್ಲಿ. ಸುರಕ್ಷಿತ ಏಪಿಐಗಳು ಮತ್ತು ಬಳಕೆದಾರರ ಅನುಮತಿಗಳ ಮೇಲೆ ನಿರ್ಮಿಸಲಾಗಿದೆ, ಭಾರತದಲ್ಲಿ ಬುದ್ಧಿವಂತ, ಸಂಪರ್ಕಿತ ಚಲನ ಶೀಲತೆಯ ಭವಿಷ್ಯವನ್ನು ಅನ್‌ಲಾಕ್ ಮಾಡುವಾಗ ಗೌಪ್ಯತೆಯನ್ನು ಖಚಿತಪಡಿಸುತ್ತದೆ.

Actor Ranjith: ಅಕ್ಕನ ವಿರುದ್ಧವೇ ಠಾಣೆ ಮೆಟ್ಟಿಲೇರಿದ ಬಿಗ್‌ ಬಾಸ್‌ ರಂಜಿತ್; ಏನಿದು ವಿವಾದ?

ಅಕ್ಕನ ವಿರುದ್ಧವೇ ಠಾಣೆ ಮೆಟ್ಟಿಲೇರಿದ ಬಿಗ್‌ ಬಾಸ್‌ ರಂಜಿತ್

ಬಿಗ್‌ ಬಾಸ್‌ ಕನ್ನಡ ರಿಯಾಲಿಟಿ ಶೋ ವೇಳೆ ದೊಡ್ಮನೆಯಲ್ಲಿ ಕಿರಿಕ್‌ ಮಾಡಿಕೊಂಡಿದ್ದ ನಟ ರಂಜಿತ್ ಇದೀಗ ತಮ್ಮ ಮನೆಯಲ್ಲೇ ಜಗಳವಾಡಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದಿದೆ. ಸದ್ಯ ಅವರು ಮತ್ತು ಸಹೋದರಿ ಜಗಳ ಮಾಡುತ್ತಿರುವ ವಿಡಿಯೊ ಹೊರ ಬಂದಿದ್ದು, ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಎಐ ತಂತ್ರಜ್ಞಾನದಿಂದ ಹಬ್ಬಗಳು ಇನ್ನಷ್ಟು ಸ್ಮಾರ್ಟ್ ಮತ್ತು ಸಿಹಿ!

ಎಐ ತಂತ್ರಜ್ಞಾನದಿಂದ ಹಬ್ಬಗಳು ಇನ್ನಷ್ಟು ಸ್ಮಾರ್ಟ್ ಮತ್ತು ಸಿಹಿ!

ಪಾರಂಪರಿಕ ಪೂಜೆಯಿಂದ ಹಿಡಿದು ಆಫೀಸ್ ಪಾರ್ಟಿಗಳವರೆಗೆ—ಹಬ್ಬದ ಉಡುಪು ಆಯ್ಕೆ ಕೆಲವೊಮ್ಮೆ ತಲೆಕೆಡಿಸಬಹುದು. ಎಐ ಉಪಕರಣಗಳು ನಿಮ್ಮ wardrobe ಅನ್ನು ವಿಶ್ಲೇಷಿಸಿ, ಮಿಕ್ಸ್ & ಮ್ಯಾಚ್ ಆಯ್ಕೆಗಳು ನೀಡಬಹುದು ಅಥವಾ ಟ್ರೆಂಡಿಂಗ್ ಸ್ಟೈಲ್‌ಗಳನ್ನು ಪುನರ್‌ಸೃಜಿಸಲು ಸಲಹೆ ನೀಡ ಬಹುದು. ನೀವು ಸಾಂಪ್ರದಾಯಿಕ ಸೀರೆ ಆಯ್ಕೆ ಮಾಡುತ್ತಿದ್ದೀರಾ ಅಥವಾ ಫ್ಯೂಷನ್ ಲುಕ್‌ಗಾಗಿ ಹೋಗುತ್ತಿದ್ದೀರಾ

Sirsi News: ಅತೀ ಹೆಚ್ಚು ಅಡಕೆ ವಿಕ್ರಿ: 20 ಕೋಟಿ ರೂ. ಅಧಿಕ ಲಾಭ

ಅತೀ ಹೆಚ್ಚು ಅಡಕೆ ವಿಕ್ರಿ: 20 ಕೋಟಿ ರೂಪಾಯಿಗೂ ಅಧಿಕ ಲಾಭ

ಈ ಸಾರಿ ನಮ್ಮ ಅಡಿಕೆ ಅಂಗಳದಲ್ಲಿ ಅತೀ ಹೆಚ್ಚು ಅಡಕೆ ವಿಕ್ರಿಯಾಗಿದ್ದು ದಾಖಲೆ ನಿರ್ಮಿಸಿದ್ದಲ್ಲದೇ 20 ರೋಟಿ ರೂಪಾಯಿಗೂ ಅಧಿಕ ಲಾಭವನ್ನು ಟಿ ಎಸ್ ಎಸ್ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದರು. ಇಂದು ಟಿಎಸ್ ಎಸ್ ನ ಸಭಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಮಾಹಿತಿ ನೀಡಿದರು.

Elevated Corridor: ಬೆಂಗಳೂರಿನ ಆಕಾಶದಲ್ಲಿ 110 ಕಿ.ಮೀ ಉದ್ದದ ಕಾರಿಡಾರ್!‌ 18,000 ಕೋಟಿ ವೆಚ್ಚದ ಯೋಜನೆಗೆ ಡಿಪಿಆರ್

ಬೆಂಗಳೂರಿನ ಆಕಾಶದಲ್ಲಿ 110 ಕಿ.ಮೀ ಉದ್ದದ ಕಾರಿಡಾರ್!‌ 18,000 ಕೋಟಿ ವೆಚ್ಚ

Bengaluru: ಬೆಂಗಳೂರಿನಾದ್ಯಂತ ಚಲಿಸುವ ಈ ಕಾರಿಡಾರ್‌ಗೆ ಭೂಸ್ವಾಧೀನಕ್ಕಾಗಿ ರೂ 3,000 ಕೋಟಿ ಸೇರಿದಂತೆ ರೂ 18,000 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ. ಡಿಪಿಆರ್ ಅನ್ನು ಸೆಪ್ಟೆಂಬರ್ 25ರೊಳಗೆ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸುವ ನಿರೀಕ್ಷೆಯಿದೆ. ಅನುಮೋದನೆ ಪಡೆದ ನಂತರ, ಯೋಜನೆಯು 25 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

CM Siddaramaiah: ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಕಮೆಂಟ್‌, ಭದ್ರಾವತಿ ವ್ಯಕ್ತಿ ಮೇಲೆ ದೂರು

ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಕಮೆಂಟ್‌, ವ್ಯಕ್ತಿ ಮೇಲೆ ದೂರು

ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದ ವ್ಯಕ್ತಿಯೊಬ್ಬರ ವಿರುದ್ಧ ಭದ್ರಾವತಿ (Bhadravathi) ನಗರದಲ್ಲಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಷಡಾಕ್ಷರಿ ಎಂಬವರ ಫೇಸ್‌ಬುಕ್ ಖಾತೆಯಿಂದ ಸಿದ್ದರಾಮಯ್ಯ ಅವರ ವಿಡಿಯೊವೊಂದಕ್ಕೆ ಕಮೆಂಟ್ ಮಾಡಲಾಗಿತ್ತು.

Banu mushtaq: ಬಾನು ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ; ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಬಾನು ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ; ಸುಪ್ರೀಂ ಕೋರ್ಟ್‌ಗೆ ಅರ್ಜಿ

Mysuru Dasara: ದಸರಾ ಉತ್ಸವದ ಉದ್ಘಾಟನೆಗೆ ಹಿಂದೂಯೇತರ ವ್ಯಕ್ತಿಯನ್ನು ಆಹ್ವಾನಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುತ್ತಿದ್ದೇವೆ. ಈ ಕಾರ್ಯಕ್ರಮ ಸೆಪ್ಟೆಂಬರ್ 22ರಂದು ನಿಗದಿಯಾಗಿದ್ದು, ಅದಕ್ಕಾಗಿಯೇ ನಾವು ತುರ್ತು ವಿಚಾರಣೆಗೆ ವಿನಂತಿಸುತ್ತಿದ್ದೇವೆ ಎಂದು ವಕೀಲರು ಸುಪ್ರೀಂ ಪೀಠದ ಮುಂದೆ ವಾದಿಸಿದ್ದಾರೆ.

Gold Rate Today: ಚಿನ್ನದ ದರದಲ್ಲಿ ಭಾರೀ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold price today on 18th Sep 2025: 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 50ರೂ ಇಳಿಕೆಯಾಗಿ , 10,190 ರೂ.ಗೆ ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 54ರೂ. ಇಳಿಕೆಯಾಗಿ 11,117 ರೂ ಆಗಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ81,520 ರೂ. ಬಾಳಿದರೆ, 10 ಗ್ರಾಂಗೆ ನೀವು 1,01,900 ರೂ. ಹಾಗೂ 100 ಗ್ರಾಂಗೆ 10,19,000 ರೂ. ನೀಡಬೇಕಾಗುತ್ತದೆ.

Murder Case: ಕೆಲಸ ನೀಡಿದ ಮಹಿಳೆಯನ್ನೇ ಕಲ್ಲಿನಿಂದ ಜಜ್ಜಿ ಸಾಯಿಸಿದ ಅಪ್ರಾಪ್ತ!

ಕೆಲಸ ನೀಡಿದ ಮಹಿಳೆಯನ್ನೇ ಕಲ್ಲಿನಿಂದ ಜಜ್ಜಿ ಸಾಯಿಸಿದ ಅಪ್ರಾಪ್ತ!

Hassan Crime: ಈಕೆಯನ್ನು ಹತ್ಯೆಗೈದ ಬಾಲಕ ಚಿಕ್ಕಂದಿನಲ್ಲಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡು, ಮೀನಾಕ್ಷಮ್ಮ ಅವರ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದ. ಸೆ.15ರಂದು ಬಾಲಕ ಮೀನಾಕ್ಷಮ್ಮ ಜೊತೆಗೆ ಜಗಳ ತೆಗೆದಿದ್ದಾನೆ. ನಂತರ ಆಕೆಯ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ.

ನವೆಂಬರ್‌ನಲ್ಲಿ 'ಸಮಾಜಮುಖಿ ಸಾಹಿತ್ಯ ಸಂಭ್ರಮ': ಸಾಹಿತ್ಯಾಸಕ್ತರಿಗೆ ಮುಕ್ತ ಆಹ್ವಾನ

'ಸಮಾಜಮುಖಿ ಸಾಹಿತ್ಯ ಸಂಭ್ರಮ':ಸಾಹಿತ್ಯಾಸಕ್ತರಿಗೆ ಮುಕ್ತ ಆಹ್ವಾನ

ಕಳೆದ ಎಂಟು ವರ್ಷಗಳಿಂದ 'ಸಮಾಜಮುಖಿ ಪ್ರಕಾಶನ' ಮತ್ತು ಅದರ ಸಹ ಸಂಸ್ಥೆಗಳು ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ವೈಚಾರಿಕ ಚಿಂತನೆಗೆ ಮಹತ್ವದ ಕೊಡುಗೆ ನೀಡುತ್ತಾ ಬಂದಿವೆ. ಈ ಹಿನ್ನೆಲೆ ಯಲ್ಲಿ, ಪ್ರಚಲಿತ ಸಾಹಿತ್ಯ ಸಮ್ಮೇಳನಗಳ ರಾಜಕೀಯ ಹಸ್ತಕ್ಷೇಪ ಮತ್ತು ವಾಣಿಜ್ಯೀಕರಣದಿಂದ ಭಿನ್ನವಾದ, ಕೇವಲ ಸಾಹಿತ್ಯಿಕ ಮೌಲ್ಯಗಳಿಗೆ ಆದ್ಯತೆ ನೀಡುವ ಸಮ್ಮೇಳನ ಆಯೋಜಿಸಲಾಗುತ್ತಿದೆ.

Digital Arrest: ಬೆಂಗಳೂರು ಪೊಲೀಸರ ಲೋಗೋ ತೋರಿಸಿ ನಿವೃತ್ತ ವೈದ್ಯೆಗೆ 70 ಗಂಟೆ ಡಿಜಿಟಲ್‌ ಆರೆಸ್ಟ್‌, ಹೃದಯಾಘಾತದಿಂದ ಸಾವು

ನಿವೃತ್ತ ವೈದ್ಯೆಗೆ 70 ಗಂಟೆ ಡಿಜಿಟಲ್‌ ಆರೆಸ್ಟ್‌, ಹೃದಯಾಘಾತದಿಂದ ಸಾವು

Cyber Crime: ಕಾನೂನು ಜಾರಿ ಅಧಿಕಾರಿಗಳಂತೆ ನಟಿಸಿ ಸೈಬರ್ ವಂಚಕರು ಮೂರು ದಿನಗಳ ಕಾಲ ಈ ವೃದ್ಧೆಗೆ ನಿರಂತರ ಕಿರುಕುಳ ನೀಡಿದ್ದರು. ಇದಾದ ನಂತರ 76 ವರ್ಷದ ನಿವೃತ್ತ ವೈದ್ಯೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

POCSO case: ಬಾಲಕಿಯ ಮೇಲೆ ಅತ್ಯಾಚಾರ, ಯೋಗ ಗುರುವಿನ ಬಂಧನ

ಬಾಲಕಿಯ ಮೇಲೆ ಅತ್ಯಾಚಾರ, ಯೋಗ ಗುರುವಿನ ಬಂಧನ

Bengaluru Crime: ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಯೋಗ ಸೆಂಟರ್‌ ನಡೆಸುತ್ತಿರುವ ಆರೋಪಿ ನಿರಂಜನ ಮೂರ್ತಿ ಇನ್ನೂ ಏಳೆಂಟು ಮಹಿಳೆಯರ ಮೇಲೂ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದೆ. ಬಾಲಕಿಯರಿಗೂ ಈತ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಲಾಗಿದೆ.

Bengaluru Roads: ʼಹದಗೆಟ್ಟ ರಸ್ತೆಗಳು, ಧೂಳುʼ ಹಿನ್ನೆಲೆಯಲ್ಲಿ ಬೆಂಗಳೂರು ತೊರೆಯಲು ಮುಂದಾದ ಸ್ಟಾರ್ಟಪ್‌

ʼಹದಗೆಟ್ಟ ರಸ್ತೆಗಳು, ಧೂಳುʼ ಬೆಂಗಳೂರು ತೊರೆಯಲು ಮುಂದಾದ ಸ್ಟಾರ್ಟಪ್‌

Bengaluru Stratup: ಬ್ಲ್ಯಾಕ್‌ಬಕ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಯಬಾಜಿ ಈ ಕುರಿತು ʼಎಕ್ಸ್‌ʼನಲ್ಲಿ ಪೋಸ್ಟ್‌ ಹರಿಬಿಟ್ಟಿದ್ದಾರೆ. ORR ನಲ್ಲಿರುವ ಕಂಪನಿಯ ನೆಲೆಯು ಸುಮಾರು ಒಂದು ದಶಕದಿಂದ 'ಕಚೇರಿ ಮತ್ತು ಮನೆ' ಎರಡೂ ಆಗಿತ್ತು. ಆದಾಗ್ಯೂ, ಹಾಳಾದ ರಸ್ತೆಗಳು, ಗುಂಡಿಗಳು ಮತ್ತು ಧೂಳಿನಿಂದಾಗಿ ಪರಿಸ್ಥಿತಿ ಅಸಹನೀಯವಾಗಿದೆ ಎಂದಿದ್ದಾರೆ. '

DK Shivakumar: ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ಡಿಸಿಎಂ ಡಿಕೆ ಶಿವಕುಮಾರ್ ಗಡುವು

ರಸ್ತೆ ಗುಂಡಿ ಮುಚ್ಚಲು ಗುತ್ತಿಗೆದಾರರಿಗೆ ಡಿಸಿಎಂ ಡಿಕೆ ಶಿವಕುಮಾರ್ ಗಡುವು

Pot holes: ನವೆಂಬರ್ ಒಳಗೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ. ಸ್ವಚ್ಛ ಬೆಂಗಳೂರು ಮತ್ತು ಸುಗಮ ಸಂಚಾರ ನಮ್ಮ ಗುರಿಯಾಗಿರುವುದರಿಂದ, ಜಿಬಿಎ ಸಾಧ್ಯವಾದಷ್ಟು ಬೇಗ ಗುಂಡಿಗಳ ಸಮಸ್ಯೆ ಪರಿಹರಿಸುತ್ತದೆ" ಎಂದು ಡಿಸಿಎಂ 'ಎಕ್ಸ್' ನಲ್ಲಿ ಪೋಸ್ಟ್‌ ಮಾಡಿದ್ದಾರೆ.

CM Siddaramaiah: ಆರ್‌ಎಸ್‌ಎಸ್‌ ಕುರಿತ ಹೇಳಿಕೆ: ಸಿಎಂ ಸಿದ್ದರಾಮಯ್ಯ ವಿರುದ್ಧದ ಖಾಸಗಿ ದೂರು ವಜಾ

ಆರ್‌ಎಸ್‌ಎಸ್‌ ಕುರಿತ ಹೇಳಿಕೆ: ಸಿಎಂ ಸಿದ್ದರಾಮಯ್ಯ ವಿರುದ್ಧದ ದೂರು ವಜಾ

ಸಿಎಂ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಎನ್ ಕಿರಣ್ ಎಂಬವರು ಖಾಸಗಿ ದೂರು ದಾಖಲಿಸಿದ್ದರು. ಇದೀಗ ಬೆಂಗಳೂರಿನ 42ನೇ ACMM ಕೋರ್ಟ್ ಸಿಎಂ ಸಿದ್ದರಾಮಯ್ಯ ವಿರುದ್ಧ ದಾಖಲಾಗಿದ್ದ ಖಾಸಗಿ ದೂರು ವಜಾಗೊಳಿಸಿ ಆದೇಶ ಹೊರಡಿಸಿದೆ.

Dharmasthala Case: ಮಹೇಶ್‌ ಶೆಟ್ಟಿ ತಿಮರೋಡಿ ಮೇಲೆ ಶಸ್ತ್ರಾಸ್ತ್ರ ಕಾಯಿದೆ ಅಡಿ ಎಫ್‌ಐಆರ್‌

ಮಹೇಶ್‌ ಶೆಟ್ಟಿ ತಿಮರೋಡಿ ಮೇಲೆ ಶಸ್ತ್ರಾಸ್ತ್ರ ಕಾಯಿದೆ ಅಡಿ ಎಫ್‌ಐಆರ್‌

Thimarodi: ಎಸ್ಐಟಿ ಎಸ್ಪಿ ಸೈಮನ್ ಅವರ ದೂರು ಆಧರಿಸಿ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧ ಇದೀಗ ಶಸ್ತ್ರಾಸ್ತ್ರ ಕಾಯ್ದೆ 25(1), 25(1-A), 24(1-B), (A) ರಡಿ ಕೇಸ್ ದಾಖಲಾಗಿದೆ. ಮಹೇಶ ಶೆಟ್ಟಿ ತಿಮರೋಡಿ ಮನೆಯಲ್ಲಿ ಬಂದೂಕು ಸೇರಿದಂತೆ ಮಾರಕಾಸ್ತ್ರಗಳು ಪತ್ತೆಯಾಗಿದ್ದವು.

Navaratri Fashion 2025: ನವರಾತ್ರಿ ಡಿಸೈನರ್‌ವೇರ್ಸ್‌ ಸೆಲೆಕ್ಷನ್‌ಗೆ ಇಲ್ಲಿದೆ 5 ಐಡಿಯಾ

ನವರಾತ್ರಿ ಡಿಸೈನರ್‌ವೇರ್ಸ್‌ ಸೆಲೆಕ್ಷನ್‌ಗೆ ಇಲ್ಲಿದೆ 5 ಐಡಿಯಾ

Navaratri Fashion 2025: ನವರಾತ್ರಿ ಸಂಭ್ರಮಿಸಲು ಮಹಿಳೆ ಹಾಗೂ ಪುರುಷರಿಗೆ ನಾನಾ ಶೈಲಿಯ ಟ್ರೆಡಿಷನಲ್ ಡಿಸೈನರ್‌ವೇರ್‌ಗಳು ಬಿಡುಗಡೆಗೊಂಡಿವೆ. ಅವುಗಳನ್ನು ಸೆಲೆಕ್ಷನ್ ಮಾಡುವುದು ಹೇಗೆ? ಎಂಬುದರ ಬಗ್ಗೆ ಡಿಸೈನರ್‌ಗಳು ಒಂದಿಷ್ಟು ಐಡಿಯಾಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತಂತೆ ಇಲ್ಲಿದೆ ವಿವರ.

Bagepally News: ಜಿ.ವಿ ಶ್ರೀರಾಮರೆಡ್ಡಿ ಬಡಾವಣೆಗೆ ಮೂಲಸೌಲಭ್ಯಗಳಿಗೆ ಒತ್ತಾಯಿಸಿ ಪ್ರತಿಭಟನೆ

ಜಿ.ವಿ ಶ್ರೀರಾಮರೆಡ್ಡಿ ಬಡಾವಣೆಗೆ ಮೂಲಸೌಲಭ್ಯಗಳಿಗೆ ಒತ್ತಾಯಿಸಿ ಪ್ರತಿಭಟನೆ

ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲದಿಂದ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಎಲ್ಲಂದ ರಲ್ಲೆ ನಿಲ್ಲುತ್ತಿದೆ. ಅಷ್ಟೇ ಅಲ್ಲದೆ ಒಂದು ಬೀದಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದ್ದು, ಅವೈಜ್ಞಾನಿಕವಾಗಿ ಇಬ್ಬದಿಗಳಲ್ಲೂ ಚರಂಡಿ ಇಲ್ಲದೆಯೇ ರಸ್ತೆ ಕಾಮಗಾರಿ ಮುಗಿಸ ಲಾಗಿದೆ. ಇನ್ನೊಂದು ಬೀದಿಯಲ್ಲಿ ಅರ್ಧಬರ್ಧ ಸಿಸಿ ರಸ್ತೆ ಮಾಡಲಾಗಿದೆ.

Bagepally News: ಗರ್ಭಿಣಿ, ಕಾಯಿಲೆ ಇರುವ ಶಿಕ್ಷಕರಿಗೆ ವಿನಾಯಿತಿ ನೀಡಿ: ಬಿಇಓ ವೆಂಕಟೇಶಪ್ಪಗೆ ಮನವಿ

ಗರ್ಭಿಣಿ, ಕಾಯಿಲೆ ಇರುವ ಶಿಕ್ಷಕರಿಗೆ ವಿನಾಯಿತಿ ನೀಡಿ

೨೦೨೫ನೇ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅವಧಿಯಲ್ಲಿ ದಸರಾ ಹಾಗೂ ನವರಾತ್ರಿ ಹಬ್ಬಗಳಿವೆ. ಶಿಕ್ಷಕರು ಹಬ್ಬಗಳಲ್ಲಿ ಪಾಲ್ಗೊಳ್ಳಲು ಸಮೀಕ್ಷೆಯನ್ನು ಒಂದು ವಾರ ಮುಂದೂಡಬೇಕು. ವರ್ಷಪೂರ್ತಿ ದುಡಿಯುವ ಶಿಕ್ಷಕರು ಕುಟುಂಬದ ಜತೆ ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದು ಬಹಳ ಮುಖ್ಯ ವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದೆ.

Dr M C Sudhakar: ಶಿಕ್ಷಣ ಎಂಬುದು ಶಕ್ತಿ ಆಗಬೇಕೆ ಹೊರತು ಶಿಕ್ಷೆಯಾಗಬಾರದು: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್

ಚಿಂತಾಮಣಿಯಲ್ಲಿ ಅದ್ದೂರಿಯಾಗಿ ಶಿಕ್ಷಕರ ದಿನಾಚರಣೆ ಆಚರಣೆ

ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ. ಡಿಜಿಟಲ್ ಕ್ರಾಂತಿ ಯಿಂದಾಗಿ ಶಾಲಾ ಶಿಕ್ಷಣ ಹಂತದಲ್ಲಿಯೇ ಆಧುನಿಕ ತಂತ್ರಜ್ಞಾನದ ನೆರವಿನ ಮೂಲಕ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದರ ಮೂಲಕ ವಿದ್ಯಾರ್ಥಿಗಳ ಜ್ಞಾನಮಟ್ಟವನ್ನು ಹೆಚ್ಚಿಸಬಹುದಾಗಿದೆ. ಶಾಲೆಗಳಲ್ಲಿ ಸ್ಮಾಟ್  ಕ್ಲಾಸುಗಳ  ಮೂಲಕ ತರಗತಿಗಳಲ್ಲಿ ಪಾಠ ಬೋಧನೆ ಮಾಡಬೇಕು.

Dr M C Sudhkar: ಶಿಕ್ಷಕರ ಬೇಡಿಕೆ ಈಡೇರಿಸುವಂತೆ ಉನ್ನತ ಶಿಕ್ಷಣ ಸಚಿವರಿಗೆ ಮನವಿ

ಶಿಕ್ಷಕರ ಬೇಡಿಕೆ ಈಡೇರಿಸುವಂತೆ ಉನ್ನತ ಶಿಕ್ಷಣ ಸಚಿವರಿಗೆ ಮನವಿ

ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರಿಗೆ ಆನ್‌ಲೈನ್ ಕಾರ್ಯಗಳು ಮಾಡಲು ಸಮಸ್ಯೆಯಾಗುತ್ತಿದ್ದು ಕ್ಲಸ್ಟರ್ ಹಂತದಲ್ಲಿ ದ್ವಿತೀಯ ದರ್ಜೆ ಸಹಾಯಕರನ್ನು ನೇಮಿಸಿ ಆನ್‌ಲೈನ್ ಕೆಲಸ ಕಾರ್ಯಗಳನ್ನು ನಿರ್ವಹಿಸಲು ವ್ಯವಸ್ಥೆ ಮಾಡಬೇಕು ಅಕ್ಷರದಾಸೋಹ ಕಾರ್ಯಕ್ರಮದಲ್ಲಿ ಕೆಲವು ಜಿಲ್ಲೆಗಳಲ್ಲಿ ಮೊಟ್ಟೆ ಖರೀದಿ ಮತ್ತು ಸರಬರಾಜು ಮಾಡುವುದಕ್ಕೆ ಜಿಲ್ಲಾಡಳಿತದ ವತಿಯಿಂದ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ.

Loading...