ಪುನಾರಚನೆ ಭೀತಿ: ಸಚಿವರಲ್ಲಿ ಹೆಚ್ಚಿದ ಕುರ್ಚಿ ಪ್ರೀತಿ
ಎಐಸಿಸಿ ಮೂಲಗಳ ಪ್ರಕಾರ ಸಚಿವ ಸಂಪುಟ ಪುನಾರಚನೆ ನಡೆದರೆ ಅದು ಜುಲೈ ಅಂತದ ವೇಳೆಗೆ ನಡೆಯುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ರಾಜ್ಯ ಸಂಪುಟದಲ್ಲಿರುವ ಸುಮಾರು 25ಕ್ಕೂ ಹೆಚ್ಚು ಸಚಿವರನ್ನು ಬದಲಿಸುವ ಆಲೋಚನೆ ಪಕ್ಷದ ಹಿರಿಯ ನಾಯಕರದ್ದಾಗಿದೆ, ಅಷ್ಟೇ ಅಲ್ಲ ಸಚಿವ ಸ್ಥಾನದ ಅಧಿಕಾರವನ್ನು ಹೆಚ್ಚಿನ ಅವಧಿ ಅನುಭವಿಸಿದವರಿಗೆ ಪಕ್ಷ ಸಂಘಟನೆಯ ಬೇರೆ ಬೇರೆ ಹೊಣೆಗಾರಿಕೆ ಗಳನ್ನು ವಹಿಸಿಕೊಡಬೇಕೆನ್ನುವ ಚಿಂತನೆಯೂ ಪಕ್ಷದ ವರಿಷ್ಠರದ್ದಾಗಿದೆ.