ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Chikkaballapur News: ಮಹಿಳಾ ಕಾಲೇಜಿನ ಇಂಗ್ಲಿಷ್ ಅಧ್ಯಾಪಕ ನರಸಿಂಹಮೂರ್ತಿಗೆ ಪಿ.ಎಚ್.ಡಿ ಪ್ರದಾನ

ಮಹಿಳಾ ಕಾಲೇಜಿನ ಇಂಗ್ಲಿಷ್ ಅಧ್ಯಾಪಕ ನರಸಿಂಹಮೂರ್ತಿಗೆ ಪಿ.ಎಚ್.ಡಿ ಪ್ರದಾನ

ನಗರ ಹೊರವಲಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇಂಗ್ಲೀಷ್ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ನರಸಿಂಹಮೂರ್ತಿ ಎಸ್.ಜಿ ಇವರು ರಾಜಸ್ಥಾನದ ಸನ್‌ರೈಸ್ ಯುನಿವರ್ಸಿಟಿ ಪ್ರಾಧ್ಯಾಪಕ ಡಾ.ಆರತಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಮಂಡಿಸಿದ ಸೋಶಿಯಲ್ ರಿಫಾರ್ಮೇಷನ್ ಇನ್ ದಿ ರೈಟಿಂಗ್ಸ್ ಆಫ್ ಮುಲ್ಕ್ ರಾಜ್‌ ಆನಂದ್ ವಿಷಯದಲ್ಲಿ ಪಿಎಚ್‌ಡಿ ಪ್ರಧಾನ ಮಾಡಲಾಗಿದೆ.

H D Kumaraswamy: ವಿಶ್ವ ಕ್ರೀಡಾಕೂಟದ ಮುಕ್ತಾಯ ಸಮಾರಂಭಕ್ಕೆ ಆಗಮಿಸುವಂತೆ ಹೆಚ್.ಡಿ.ಕುಮಾರಸ್ವಾಮಿಗೆ ಆಹ್ವಾನ

ಕ್ರೀಡಾಕೂಟದ ಮುಕ್ತಾಯ ಸಮಾರಂಭ: ಹೆಚ್.ಡಿ.ಕುಮಾರಸ್ವಾಮಿಗೆ ಆಹ್ವಾನ

ಭಾರತ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ನವದೆಹಲಿಯ ಜವಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯು ತ್ತಿರುವ ವಿಶ್ವ ಕ್ರೀಡಾಕೂಟದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸುವಂತೆ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರ ಸ್ವಾಮಿಗೆ ನವದೆಹಲಿಯ ಅವರ ನಿವಾಸದಲ್ಲಿ ಆಹ್ವಾನ ನೀಡಲಾಯಿತು

Gudibande News: ಹೆಚ್.ಐ.ವಿ ಏಡ್ಸ್ ಕುರಿತು ಎಲ್ಲರೂ ಜಾಗೃತರಾಗಿ, ತಡೆಗಟ್ಟಬೇಕು : ಸುದರ್ಮನ್

ಹೆಚ್.ಐ.ವಿ ಏಡ್ಸ್ ಕುರಿತು ಎಲ್ಲರೂ ಜಾಗೃತರಾಗಿ, ತಡೆಗಟ್ಟಬೇಕು

ಒಬ್ಬರಿಂದ ಒಬ್ಬರಿಗೆ ಹರಡುವಂತಹುದಾಗಿದೆ. ಈ ಕಾಯಿಲೆ ಬರುವುದಕ್ಕೂ ಮುನ್ನ ಎಚ್ಚೆತ್ತು ಕೊಳ್ಳಬೇಕು. ಹೆಚ್.ಐ.ವಿ ಬಾದಿತರನ್ನು ಗೌರವಯುತವಾಗಿ ಕಾಣಬೇಕಿದೆ, ಸಮಾಜದಲ್ಲಿ  ಬಾಳ್ವೇಯನ್ನು ಮಾಡಬೇಕು. ವರ್ಷ ಪೂರ್ತಿ ಕಾರ್ಯಕ್ರಮಗಳಲ್ಲಿ ತಿಳುವಳಿಕೆ ಮತ್ತು ಅರಿವು ಮೂಡಿಸಿ ಮುಂದಿನ ಪೀಳಿಗೆಗೆ ಏಡ್ಸ್ ಮುಕ್ತ ಆರೋಗ್ಯಕರ ಸಮಾಜವನ್ನು ಸೃಷ್ಟಿಸುವಂತಹ ಜವಾಬ್ದಾರಿ ನಮ್ಮೆಲ್ಲರಾದಾಗಿದೆ

DK Shivakumar: ಕೆಂಪೇಗೌಡರ ಸ್ಮಾರಕಗಳ ಅಭಿವೃದ್ಧಿಗೆ 103 ಕೋಟಿ, ನಗರ ವಿನ್ಯಾಸ ಕಾಲೇಜು ಸ್ಥಾಪನೆಗೆ 100 ಕೋಟಿ ಮೀಸಲು: ಡಿ.ಕೆ.ಶಿವಕುಮಾರ್

ಕೆಂಪೇಗೌಡರ ಸ್ಮಾರಕಗಳ ಅಭಿವೃದ್ಧಿಗೆ 103 ಕೋಟಿ ಅನುದಾನ ಮೀಸಲು: ಡಿಕೆಶಿ

DK Shivakumar: ನಾಡಪ್ರಭು ಕೆಂಪೇಗೌಡರ ಎಲ್ಲಾ ಸ್ಮಾರಕಗಳನ್ನು ಪುನರುಜ್ಜೀವನಗೊಳಿಸಲು ₹103 ಕೋಟಿ ಅನುದಾನ ಹಾಗೂ ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ನಗರ ವಿನ್ಯಾಸ ಕಾಲೇಜು ಸ್ಥಾಪನೆಗೆ ₹100 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

Rahul Patil: ಆಂಥ್ರೋಪಿಕ್‌ ಸಿಟಿಒ ಆಗಿ ಪಿಇಎಸ್ ವಿವಿ ಹಳೆಯ ವಿದ್ಯಾರ್ಥಿ ರಾಹುಲ್ ಪಾಟೀಲ್ ನೇಮಕ

ಆಂಥ್ರೋಪಿಕ್‌ ಸಿಟಿಒ ಆಗಿ ಬೆಂಗಳೂರಿನ ರಾಹುಲ್ ಪಾಟೀಲ್ ನೇಮಕ

PES University: ರಾಹುಲ್‌ ಪಾಟೀಲ್‌ ಅವರು ವಿಶ್ವದ ಪ್ರಮುಖ Al ಸಂಶೋಧನಾ ಕಂಪನಿಗಳಲ್ಲಿ ಒಂದಾದ ಆಂಥ್ರೋಪಿಕ್‌ನಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.ನಮ್ಮ ಹಳೆಯ ವಿದ್ಯಾರ್ಥಿ ರಾಹುಲ್‌ ಪಾಟೀಲ್ ಅವರು ಆಂಥ್ರೋಪಿಕ್‌ನ ಮುಖ್ಯ ತಂತ್ರಜ್ಞಾನಾಧಿಕಾರಿಯಾಗಿ (ಸಿಟಿಒ) ನೇಮಕಗೊಂಡಿರುವುದನ್ನು ಹೆಮ್ಮೆಯ ಕ್ಷಣವೆಂದು ಭಾವಿಸುತ್ತೇವೆ ಎಂದು ಪಿಇಎಸ್‌ ವಿಶ್ವವಿದ್ಯಾಲಯ ತಿಳಿಸಿದೆ.

ರಾಷ್ಟ್ರಪಿತ ಗಾಂಧೀಜಿ ಮತ್ತು ಶಾಂತಿದೂತ ಶಾಸ್ತ್ರೀಜಿ ಅವರಿಗೆ ಎಮಿನೆಂಟ್ ಕೋಚಿಂಗ್ ಕ್ಲಾಸಿಸ್ ಬೆಳಗಾವಿಯಲ್ಲಿ ಹುಟ್ಟು ಹಬ್ಬದ ನಮನಗಳು

ಗಾಂಧೀಜಿ, ಶಾಸ್ತ್ರೀಜಿಗೆ ಬೆಳಗಾವಿಯಲ್ಲಿ ಹುಟ್ಟು ಹಬ್ಬದ ನಮನಗಳು

ಚಳುವಳಿಯಲ್ಲಿ ಅಹಿಂಸೆಯ ತತ್ವಗಳು ಭಾರತ ಸ್ವಾತಂತ್ರ್ಯ ಪ್ರಮುಖ ಪಾತ್ರ ವಹಿಸಿ ಜಗತ್ತಿನಾದ್ಯಂತ ಶಾಂತಿಯುತ ಪ್ರತಿರೋಧಕ ಶಕ್ತಿಯನ್ನು ತೋರಿಸಿದವರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು. ಗಾಂಧೀಜಿಯವರ ಪ್ರಕಾರ ಅಹಿಂಸೆ ಎಂದರೆ ಶಾರೀರಿಕ ಮತ್ತು ಮಾನಸಿಕ ಹಿಂಸೆಯನ್ನು ಸಂಪೂರ್ಣ ವಾಗಿ ತ್ಯಜಿಸುವುದು. ಪ್ರೀತಿ ಶಾಂತಿ ಮತ್ತು ಸಮಾನತೆಯ ತತ್ವಗಳ ಆಧಾರದ ಮೇಲೆ ಹೋರಾಡುವುದು.

Sathya Sai Grama: ಆರೋಗ್ಯ ಕ್ಷೇತ್ರದಲ್ಲಿ ಎಐ ಕ್ರಾಂತಿ ಸ್ವಾಗತಿಸಲು ಸಜ್ಜಾದ ಸತ್ಯ ಸಾಯಿ ಸಂಸ್ಥೆಗಳು

ಆರೋಗ್ಯ ಕ್ಷೇತ್ರದಲ್ಲಿ ಎಐ ಕ್ರಾಂತಿಗೆ ಸಜ್ಜಾದ ಸತ್ಯ ಸಾಯಿ ಸಂಸ್ಥೆಗಳು

Sadguru Sri Madhusudan Sai: ಭಾರತದಲ್ಲಿ 6 ಸಾವಿರ ಸಾಯಿ ಸ್ವಾಸ್ಥ್ಯ ಕೇಂದ್ರಗಳನ್ನು ಆರಂಭಿಸುವ ಸಂಕಲ್ಪ ಮಾಡಿದ್ದೇವೆ. ವಿದೇಶಗಳಲ್ಲಿಯೂ ಇಂಥ ಕೇಂದ್ರಗಳನ್ನು ಆರಂಭಿಸಲಿದ್ದೇವೆ. ಒಟ್ಟು 100 ಕೋಟಿ ಜನರಿಗೆ ವೈದ್ಯಕೀಯ ಸೇವೆ ಒದಗಿಸುವಂತೆ ಆಗಬೇಕು ಎನ್ನುವ ಗುರಿಯಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದ್ದಾರೆ.

ಆತ್ಮವಿಶ್ವಾಸಕ್ಕಿಂತ ದೊಡ್ಡ ಸಂಪತ್ತು ಈ ಜಗತ್ತಿನಲ್ಲಿ ಬೇರೆ ಇಲ್ಲ: ರಾಘವೇಶ್ವರ ಭಾರತೀ ಶ್ರೀ

ʼನವರಾತ್ರ ನಮಸ್ಯಾ' ಸಮಾರೋಪ ಧಾರ್ಮಿಕ ಸಭೆ

Sri Raghaveshwara Bharathi Swamiji: ನಾವು ಮಾಡುವ ಕೆಲಸದಲ್ಲಿ ಯಶಸ್ಸು ಸಾಧ್ಯ ಎನ್ನುವ ಆತ್ಮವಿಶ್ವಾಸ ಇದ್ದರೆ ಆ ಕೆಲಸದಲ್ಲಿ ಸಾಧನೆ ಖಚಿತ. ಆರಂಭದಲ್ಲಿಯೇ ಸಾಧ್ಯವಾ.. ಸಾಧ್ಯವಿಲ್ಲ ಎನ್ನುವ ಅನುಮಾನಗಳು ಹುಟ್ಟಿದರೆ ಒಂದು ಹೆಜ್ಜೆಯನ್ನೂ ಮುಂದಿಡುವುದಕ್ಕೆ ಸಾಧ್ಯವಿಲ್ಲ ಎಂದು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು.

MLA Yasir Ahmed Khan Pathan: ಜಮೀನು ಅತಿಕ್ರಮಣ ಆರೋಪ; ಶಿಗ್ಗಾವಿ ಶಾಸಕ ಪಠಾಣ್‌ ವಿರುದ್ಧ ಎಫ್‌ಐಆ‌ರ್

ಜಮೀನು ಅತಿಕ್ರಮಣ ಆರೋಪ; ಶಿಗ್ಗಾವಿ ಶಾಸಕ ಪಠಾಣ್‌ ವಿರುದ್ಧ ಎಫ್‌ಐಆ‌ರ್

Haveri News: ಶಾಸಕ ಯಾಸೀರ್‌ ಅಹ್ಮದ್ ಖಾನ್ ಪಠಾಣ್, ಮುಖಬುಲ್ ಅಹ್ಮದ್‌ಖಾನ್ ಪಠಾಣ್‌ ಅವರು ವ್ಯಕ್ತಿಯೊಬ್ಬರ ಜಮೀನಿನಲ್ಲಿ ಅತಿಕ್ರಮ ಪ್ರವೇಶ ಮಾಡಿ, ಮಾವಿನ ಗಿಡಗಳನ್ನು ನಾಶಪಡಿಸಿ ಕಳ್ಳತನ ಮಾಡಿಸಿದ್ದಾರೆ ಎಂದು ದೂರು ಸಲ್ಲಿಸಲಾಗಿದೆ. ಹೀಗಾಗಿ ಎಫ್‌ಐಆರ್‌ ದಾಖಲಾಗಿದೆ.

ಕ್ಯಾಬ್‍ನಲ್ಲಿದ್ದ ಅಪರೂಪದ ಸಹಪ್ರಯಾಣಿಕನನ್ನು ಕಂಡು ಅಚ್ಚರಿಗೊಂಡ ಯುವಕ; ಸೆಲ್ಫಿ ವೈರಲ್

ಕ್ಯಾಬ್‍ನಲ್ಲಿದ್ದ ಸಹಪ್ರಯಾಣಿಕನನ್ನು ಕಂಡು ಅಚ್ಚರಿಗೊಂಡ ಯುವಕ

Selfie photo goes viral: ಬೆಂಗಳೂರಿನಲ್ಲಿ ಶೇರ್ಡ್ ಕ್ಯಾಬ್ ಬುಕ್ ಮಾಡಿದ ಯುವಕನೊಬ್ಬ ಕಾರಿನೊಳಗಿದ್ದ ಸಹಪ್ರಯಾಣಿಕನನ್ನು ನೋಡಿ ಅಚ್ಚರಿಗೊಂಡಿದ್ದಾನೆ. ಕೂಡಲೇ ಸೆಲ್ಫಿ ತೆಗೆದ ಆತ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಭಾರಿ ವೈರಲ್ ಆಗಿದೆ. ಅಷ್ಟಕ್ಕೂ ಆ ಸಹಪ್ರಯಾಣಿಕ ಯಾರು ಗೊತ್ತಾ? ಇಲ್ಲಿದೆ ಸ್ಟೋರಿ...

BIMS Hospital: ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೆಳಗಾವಿ ಜಿಲ್ಲೆಗೆ ಗರಿ ಇದ್ದಂತೆ: ಲಕ್ಷ್ಮಿ ಹೆಬ್ಬಾಳ್ಕರ್‌

ಬೆಳಗಾವಿಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ

Laxmi Hebbalkar: ಬೆಳಗಾವಿಯಲ್ಲಿ ನಿರ್ಮಾಣವಾಗಿರುವ ಈ ಅತ್ಯಾಧುನಿಕ ಆಸ್ಪತ್ರೆಗೆ ನಮ್ಮ ಸರ್ಕಾರ ತಜ್ಞ ವೈದ್ಯರ ನೇಮಕ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿದೆ. ಸಾರ್ವಜನಿಕರು ಇದರ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆ ಎಂಬ ಕೀಳರಿಮೆಯಿಂದ ಎಲ್ಲರೂ ಹೊರಬರಬೇಕು. ಈ ಆಸ್ಪತ್ರೆಯು ಆರೋಗ್ಯ ಕ್ಷೇತ್ರದಲ್ಲಿ ನಾವು ಮಾಡುತ್ತಿರುವ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಲಕ್ಷ್ಮಿ ಹೆಬ್ಬಾಳ್ಕರ್‌ ತಿಳಿಸಿದ್ದಾರೆ.

Karnataka Weather: ನಾಳೆ ಬೆಂಗಳೂರು ಸೇರಿ 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಭಾರಿ ಮಳೆ ನಿರೀಕ್ಷೆ

ನಾಳೆ ರಾಜ್ಯದ 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌; ಭಾರಿ ಮಳೆ ನಿರೀಕ್ಷೆ

Weather Forecast: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27°C ಮತ್ತು 21°C ಆಗುವ ಸಾಧ್ಯತೆ ಇದೆ.

Cylinder Blast: ಹೊಸಪೇಟೆ ಸಿಲಿಂಡರ್ ಸ್ಫೋಟ ದುರಂತ: ಮೃತರ ಸಂಖ್ಯೆ 4ಕ್ಕೇರಿಕೆ, ತಲಾ 5 ಲಕ್ಷ ರೂ. ಪರಿಹಾರ ಘೋಷಣೆ

ಸಿಲಿಂಡರ್ ಸ್ಫೋಟ ದುರಂತ: ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಣೆ

Vijayanagara News: ಹೊಸಪೇಟೆಯ ಗಾದಿಗನೂರಿನಲ್ಲಿ ಮನೆಯಲ್ಲಿದ್ದ ಅಡುಗೆ‌ ಅನಿಲ ಸಿಲಿಂಡರ್ ಸ್ಫೋಟಗೊಂಡು ಗಂಭೀರ ಗಾಯಗಳಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳ ಪೈಕಿ ಶನಿವಾರ ಮತ್ತೆ ಇಬ್ಬರು ಮೃತಪಟ್ಟಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

Sirsi News: ಭೂಮಿ ಹಕ್ಕಿಗಾಗಿ ಸರ್ಕಾರದ ವಿರುದ್ಧ ಸಮರ ಸಾರಿದ ಅರಣ್ಯವಾಸಿಗಳು; ಶಿರಸಿಯಲ್ಲಿ ಬೃಹತ್ ಮೇಲ್ಮನವಿ ಅಭಿಯಾನ

ಭೂಮಿ ಹಕ್ಕಿಗಾಗಿ ಸರ್ಕಾರದ ವಿರುದ್ಧ ಸಮರ ಸಾರಿದ ಅರಣ್ಯವಾಸಿಗಳು

Sirsi News: ಶಿರಸಿಯಲ್ಲಿ ಬೃಹತ್ ಅರಣ್ಯವಾಸಿಗಳ ಐತಿಹಾಸಿಕ ಮಹಾಸಂಗ್ರಾಮ ಮೇಲ್ಮನವಿ ಅಭಿಯಾನವು, ರಾಜ್ಯ ಅರಣ್ಯ ಭೂಮಿ ಹಕ್ಕು ಹೊರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಶನಿವಾರ ಜರುಗಿತು. ಇಪ್ಪತ್ತು ಸಾವಿರಕ್ಕೂ ಹೆಚ್ಚು ಆಕ್ಷೇಪಣಾ ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ.

Namma Metro: ಮೆಟ್ರೋ ಹಳಿಗೆ ಹಾರಿದ ಮತ್ತೊಬ್ಬ ಪ್ರಯಾಣಿಕ; ರೈಲಿನಡಿ ಸಿಲುಕಿ ಒದ್ದಾಟ

ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಮತ್ತೊಬ್ಬ ಪ್ರಯಾಣಿಕ!

Self Harming: ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಆ.11ರಂದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ನಡೆದಿತ್ತು. ಟ್ರೈನ್​ ಬರುತ್ತಿದ್ದಂತೆ ವ್ಯಕ್ತಿಯೊಬ್ಬ ಟ್ರ್ಯಾಕಿಗೆ ಜಿಗಿದಿದ್ದ. ಇದೀಗ ಮತ್ತೊಬ್ಬ ಪ್ರಯಾಣಿಕ, ಇದೇ ನಿಲ್ದಾಣದಲ್ಲಿ ಆತ್ಮಹತ್ಯೆ ಯತ್ನಿಸಿರುವುದು ಕಂಡುಬಂದಿದೆ.

BIMS Hospital: ಬೆಳಗಾವಿ ಬಿಮ್ಸ್‌ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟಿಸಿದ ಸಿಎಂ

ಬಿಮ್ಸ್‌ ಆವರಣದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟಿಸಿದ ಸಿಎಂ

Belagavi News: ಬೆಳಗಾವಿಯಲ್ಲಿ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡದ ಉದ್ಘಾಟನೆ ಸೇರಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಶನಿವಾರ ಚಾಲನೆ ನೀಡಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಬಡಜನರಿಗೆ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸಲು ಪ್ರತೀ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು, ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನನ್ನ ಗುರಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

CM Siddaramaiah: ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರನ್ನು ಆತಂಕಗೊಳಿಸಿದೆ: ಸಿಎಂ ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರನ್ನು ಆತಂಕಗೊಳಿಸಿದೆ: ಸಿದ್ದರಾಮಯ್ಯ

CM Siddaramaiah: ಎನ್‌ಡಿಆರ್‌ಎಫ್ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎನ್‌ಡಿಆರ್‌ಎಫ್ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸುತ್ತಿಲ್ಲ. ಬಿಜೆಪಿಯವರು ಕಾಮಾಲೆ ಕಣ್ಣಿನಿಂದ ಎಲ್ಲವನ್ನೂ ನೋಡುತ್ತಿದ್ದು, ಗ್ಯಾರಂಟಿ ಯೋಜನೆಗಳ ಯಶಸ್ಸು ಅವರಲ್ಲಿ ಆತಂಕವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

Girls Missing Case: ಮುಳಬಾಗಿಲಿನಲ್ಲಿ ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಬಾವಿಯಲ್ಲಿ ಶವವಾಗಿ ಪತ್ತೆ!

ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರು ಬಾವಿಯಲ್ಲಿ ಶವವಾಗಿ ಪತ್ತೆ!

Kolar News: ನಾಪತ್ತೆಯಾಗಿದ್ದ ಬಾಲಕಿಯರು ಮುಳಬಾಗಿಲು ತಾಲೂಕಿನ ಕುಪ್ಪಂಪಾಳ್ಯ ಬಳಿಯಿರುವ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದುಷ್ಕರ್ಮಿಗಳು ಕೊಲೆ ಮಾಡಿ ಬಿಸಾಡಿರಬಹುದು ಅಥವಾ ಬಾಲಕಿಯರು ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರಗೆ ಭವ್ಯ ಸ್ವಾಗತ ಕೋರಿದ ಚಿಕ್ಕಬಳ್ಳಾಪುರ ಮುಖಂಡರು

ಬಿ.ವೈ. ವಿಜಯೇಂದ್ರಗೆ ಭವ್ಯ ಸ್ವಾಗತ ಕೋರಿದ ಚಿಕ್ಕಬಳ್ಳಾಪುರ ಮುಖಂಡರು

ತಾಲೂಕು ಮುದ್ದೇನಹಳ್ಳಿ ಗ್ರಾಮದಲ್ಲಿ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ವತಿಯಿಂದ ನಡೆಯು ತ್ತಿರುವ ""ಭಗವಾನ್ ಶ್ರೀ ಸತ್ಯಸಾಯಿ ಬಾಬಾ ರವರ""೧೦೦ನೇ ಜನುಮದಿನದ ವಾರ್ಷಿಕೋತ್ಸವದ ಭಾಗಿಯಾಗಲು ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ  ಬಿ.ವೈ.ವಿಜಯೇಂದ್ರ ಯಡಿಯೂರಪ್ಪ ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ  ಪದಾಧಿಕಾರಿಗಳು ಮುಖಂಡರು ಭವ್ಯವಾಗಿ ಸ್ವಾಗತಿಸಿ ಬರಮಾಡಿ ಕೊಂಡರು.

Chikkaballapur News: ಸತ್ಯ ಸಾಯಿ ಗ್ರಾಮದಲ್ಲಿ ವೈಭವದಿಂದ ನಡೆದ ಉಮಾ-ಮಹೇಶ್ವರ ಕಲ್ಯಾಣ ಮಹೋತ್ಸವ

ವೈಭವದಿಂದ ನಡೆದ ಉಮಾ-ಮಹೇಶ್ವರ ಕಲ್ಯಾಣ ಮಹೋತ್ಸವ

ಸಂಪ್ರದಾಯಬದ್ಧವಾಗಿ ನಡೆದ ಕಲ್ಯಾಣ ಮಹೋತ್ಸವನ್ನು ನೆರೆದ ಭಕ್ತರು ಶ್ರದ್ಧೆಯಿಂದ ಕಣ್ತುಂಬಿ ಕೊಂಡರು. ಕನ್ಯಾವರಣದಲ್ಲಿ ವರನ ಪಕ್ಷದವರು ಕನ್ಯಾದಾನಕ್ಕಾಗಿ ಕೋರುವ ಪವಿತ್ರ ಕ್ಷಣವೊಂದು ಇತ್ತು. ಬಳಿಕ ದೇವತಾ ಆಹ್ವಾನದ ಮೂಲಕ ಭಕ್ತಿಭಾವದೊಂದಿಗೆ ವೈವಾಹಿಕ ಕಾರ್ಯಗಳು ಆರಂಭ ವಾದವು. ಮಹಾ ಸಂಕಲ್ಪದ ಘೋಷಣೆಯಿಂದ ವಿವಾಹದ ಉದ್ದೇಶವು ಪ್ರಕಟವಾಯಿತು. ನಂತರ ಮಧುಪರ್ಕ ಪೂಜೆ ನೆರವೇರಿತು.

Chikkaballapur News: ಶಾಶ್ವತ ನೀರಾವರಿಗಾಗಿ ಮಾಡು ಇಲ್ಲವೇ ಮಡಿ ಹೋರಾಟವಿಲ್ಲದೆ ಅನ್ಯ ಮಾರ್ಗವಿಲ್ಲ: ನ್ಯಾ ವಿ.ಗೋಪಾಲ ಗೌಡ

ಶಾಶ್ವತ ನೀರಾವರಿಗಾಗಿ ಮಾಡು ಇಲ್ಲವೇ ಮಡಿ ಹೋರಾಟವಿಲ್ಲದೆ ಅನ್ಯ ಮಾರ್ಗವಿಲ್ಲ

ನೀರಾವರಿ ವಿಚಾರವಾಗಿ ಬಯಲು ಸೀಮೆಯ ಜಿಲ್ಲೆಗಳಲ್ಲಿ ಮೂರು ದಶಕಗಳಿಂದ ಹೋರಾಟ ನಡೆದಿದೆ. ಆದರೆ ಇನ್ನು ಮುಂದೆ ಮತ್ತೊಂದು ರೀತಿಯ ಬೇರೆ ಮಾರ್ಗದ ಹೋರಾಟವು ನಡೆಯಲಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಸುವೆ. ರೈತರು, ಕೃಷಿ ಕಾರ್ಮಿಕರು, ಕನ್ನಡ ಪರ ಹೋರಾಟ ಗಾರರು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗದವರೂ ಈ ಹೋರಾಟದಲ್ಲಿ ಜೊತೆ ಯಾಗಬೇಕು ಎಂದರು.

ಅ.6 ರಂದು ಜಸ್ಟೀಸ್ ವಿ. ಗೋಪಾಲಗೌಡರ ಅಭಿನಂದನಾ ಸಮಾರಂಭ: ಅಭಿನಂದನಾ ಗ್ರಂಥ, ಸಾಕ್ಷ್ಯ ಚಿತ್ರ ಬಿಡುಗಡೆ

ಅ.6 ರಂದು ಜಸ್ಟೀಸ್ ವಿ. ಗೋಪಾಲಗೌಡರ ಅಭಿನಂದನಾ ಸಮಾರಂಭ

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ವಿ.ಗೋಪಾಲಗೌಡ ಅವರ ಅಭಿನಂದನಾ ಸಮಾರಂಭ ಇದೇ 6 ರ ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯುತ್ತಿದ್ದು, ಅಭಿನಂದನಾ ಗ್ರಂಥ, ಸಾಕ್ಷ್ಯ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಭಿನಂದನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಎನ್.‌ ಪಿಳ್ಳಪ್ಪ, ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್‌ ಎಂ.ಎನ್.‌ ವೆಂಕಟಾ ಚಲಯ್ಯ ಕಾರ್ಯಕ್ರಮ ಉದ್ಘಾಟಿಸಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದಾರೆ.

ಮಹಿಳೆಯರಿಯಾಗಿ ಸಿದ್ಧಪಡಿಸಿರುವ ಕೈಗಡಿಯಾರಗಳ ಸಂಗ್ರಹ ʼಗ್ಲಿಮ್ಮರ್ಸ್‌ʼಅನ್ನು ಆಲಿಯಾ ಭಟ್‌ ಅವರ ಮೂಲಕ ಬಿಡುಗಡೆ ಮಾಡಿಸಿದ ಟೈಟನ್‌ ರಾಗಾ

ಆಲಿಯಾ ಭಟ್‌ ರಿಂದ ʼಗ್ಲಿಮ್ಮರ್ಸ್‌ʼ ಟೈಟನ್‌ ರಾಗಾ ಬಿಡುಗಡೆ

ತಮ್ಮ ಬಾಳಿನ ಬೆಳಕನ್ನು ತಾವೇ ನಿರ್ಧರಿಸುವ ಮಹಿಳೆಯರನ್ನು ಈ ಕೈಗಡಿಯಾರಗಳ ಸಂಗ್ರಹವು ಬಹಳ ಸಂಭ್ರಮದಿಂದ ಕಾಣುತ್ತದೆ. ಇಂತಹ ಮಹಿಳೆಯರು ತಾವಿರುವ ಸ್ಥಳಕ್ಕೆ ಒಂದು ಹೊಸ ಅರ್ಥ ನೀಡುತ್ತಾರೆ. ಇದನ್ನು ಸಾರರೂಪಲ್ಲಿ ಹೇಳುವ ರೀತಿಯಲ್ಲಿ ಇದೆ ಅಭಿಯಾನದ ಅಡಿ ಶೀರ್ಷಿಕೆ. ʼಮಿನುಗುವ ಎಲ್ಲವೂ ನಮ್ಮದುʼ (all that glimmers, is us) ಎಂಬುದು ಶಕ್ತಿ, ವೈಯಕ್ತಿಕತೆ, ಬದುಕಿನ ಪ್ರತಿ ಆಯಾಮಗಳಲ್ಲಿಯೂ ಮಹಿಳೆಯರಲ್ಲಿ ಕಾಣುವ ಅಗಾಧ ಸಾಮರ್ಥ್ಯವನ್ನು ಇದು ಪ್ರತಿನಿಧಿಸುತ್ತದೆ.

Bomb Threat: ಹೈಕೋರ್ಟ್‌ಗೂ ಬಾಂಬ್‌ ಬೆದರಿಕೆ, 6 ಜಾಗಗಳಿಗೆ ಸ್ಫೋಟ ಸಂದೇಶ

ಹೈಕೋರ್ಟ್‌ಗೂ ಬಾಂಬ್‌ ಬೆದರಿಕೆ, 6 ಜಾಗಗಳಿಗೆ ಸ್ಫೋಟ ಸಂದೇಶ

Bengaluru: ಸೆ.22ರಂದು ಆರು ಕಡೆಗಳಲ್ಲಿ ಬಾಂಬ್‌ ಸ್ಫೋಟಿಸುವುದಾಗಿ Cho_ramaswami@hotmail ಎಂಬ ಐಡಿಯಿಂದ ಇಮೇಲ್ ಸಂದೇಶ ಬಂದಿತ್ತು. ಕರ್ನಾಟಕ ಹೈಕೋರ್ಟ್‌ ಹಾಗೂ ಇಸ್ರೇಲ್‌ ರಾಯಭಾರ ಕಚೇರಿಗೂ ಬಾಂಬ್ ಇಟ್ಟಿರುವುದಾಗಿ ಬೆದರಿಸಲಾಗಿತ್ತು. ಇಮೇಲ್​ ಮಾಡಿದ 'ರಾಮಸ್ವಾಮಿ'ಯನ್ನು ಹುಡುಕಲು ಪೊಲೀಸರು ಮುಂದಾಗಿದ್ದಾರೆ.

Loading...