ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಜಿ.ಪ್ರಭು ಸೂಚನೆ

ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲಾಧಿಕಾರಿ ಜಿ.ಪ್ರಭು ಸೂಚನೆ

ಬಸವ ಜಯಂತಿ, ಭಗೀರಥ ಜಯಂತಿಗಳ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಶಿಷ್ಟಾಚಾರದ ರೀತ್ಯ ಅರ್ಥಪೂರ್ಣವಾಗಿ ಆಚರಿಸುವಂತೆ ಜಿಲ್ಲಾಧಿಕಾರಿ ಜಿ.ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಸವ ಜಯಂತಿ, ಭಗೀರಥ ಜಯಂತಿಗಳ ಅಂಗವಾಗಿ ಬುಧವಾರ ನಡೆದ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಸಮುದಾಯದ ಮುಖಂಡರಿಂದ ಸಲಹೆಗಳನ್ನು ಸ್ವೀಕರಿಸಿದ ನಂತರ ಮಾತನಾಡಿದರು.

ದಟ್ಟ ಮತ್ತು ಕೆಟ್ಟ ಹೊಗೆಯಿಂದ ಪರದಾಡಿದ ಸಾರ್ವಜನಿಕರಿಂದ ಹಿಡಿಶಾಪ

ಪರಿಸರ ಕಾಳಜಿ ಮರೆತು :  ಕಸಕ್ಕೆ ಬೆಂಕಿ ಹಾಕಿದ ನಗರಸಭೆ ಸಿಬ್ಬಂದಿ

ನಗರದಲ್ಲಿ ನಿತ್ಯವೂ ಸಂಗ್ರಹವಾಗುವ ಹಸಿ ಕಸ ಮತ್ತು ಒಣ ಕಸವನ್ನು ಕಸ ಸಂಗ್ರಹ ವಾಹನಗಳಲ್ಲಿ ಸಂಗ್ರಹಿಸಿ, ವೈಜ್ಞಾನಿಕ ರೀತಿಯಲ್ಲಿ ವಿಲೆ ಮಾಡಬೇಕಾದ ನಗರಸಭೆ ಸಿಬ್ಬಂದಿ ಪರಿಸರ ಕಾಳಜಿ ಮರೆತು ಕಡಿಮೆ ಮೈಕ್ರಾನ್‌ಯುಕ್ತ ಪ್ಲಾಸ್ಟಿಕ್, ಬಟ್ಟೆ ಇತ್ಯಾದಿ ಅನುಪ ಯುಕ್ತ ವಸ್ತುಗಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರಯುವ ಘಟನೆಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಲಾವಿದರು, ರಾಜಕಾರಣಿಗಳು; ಪರಪ್ಪನ ಅಗ್ರಹಾರ ಜೈಲು ಈ ಸೆಲೆಬ್ರಿಟಿಗಳ ಅಡ್ಡ!

ಪರಪ್ಪನ ಅಗ್ರಹಾರ ಜೈಲು ಈ ಸೆಲೆಬ್ರಿಟಿಗಳ ಅಡ್ಡ!

Parappana Agrahara Central Prison: ಧಾರಾವಾಡದ ಬಿಜೆಪಿ ಮುಖಂಡ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ, ಮಾಜಿ ಸಚಿವ ವಿನಯ್‌ ಕುಲಕರ್ಣಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಈಗಾಗಲೇ ಇಲ್ಲಿ ದರ್ಶನ್‌, ಪವಿತ್ರಾ ಗೌಡ, ಪ್ರಜ್ವಲ್‌ ರೇವಣ್ಣ ಇದ್ದಾರೆ. ಆ ಮೂಲಕ ಜೈಲು ಸೆಲೆಬ್ರಿಟಿಗಳ ಅಡ್ಡ ಎನಿಸಿಕೊಂಡಿದೆ.

ಪರಪ್ಪನ ಅಗ್ರಹಾರ ಜೈಲು ಪಾಲಾದ ವಿನಯ್‌ ಕುಲಕರ್ಣಿ ಶಾಸಕ ಸ್ಥಾನವನ್ನೂ ಕಳೆದುಕೊಳ್ತಾರಾ? ನಾಳೆ ನಿರ್ಧಾರವಾಗಲಿದೆ ಭವಿಷ್ಯ

ವಿನಯ್‌ ಕುಲಕರ್ಣಿ ಶಾಸಕ ಸ್ಥಾನಕ್ಕೂ ಕುತ್ತು? ಮುಂದಿನ ಆಯ್ಕೆಗಳೇನು?

Vinay Kulkarni: 2016ರ ಜೂನ್‌ 15ರಂದು ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಿಜೆಪಿ ನಾಯಕ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಮಹತ್ವತದ ತೀರ್ಪು ಹೊರ ಬಿದ್ದಿದೆ. ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಸೇರಿ 16 ಮಂದಿಯನ್ನು ಅಪರಾಧಿ ಎಂದು ತೀರ್ಮಾನಿಸಿ ಆದೇಶ ಹೊರಡಿಸಿದೆ. ಇದರಿಂದ ಅವರು ಶಾಸಕ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಬೈಲಾದ ಪ್ರಕಾರವೇ ವಚನಾನಂದ ಶ್ರೀ ಉಚ್ಚಾಟನೆ: ಹರಿಹರ ಪಂಚಮಸಾಲಿ ಪೀಠದ ಟ್ರಸ್ಟ್‌ ಸ್ಪಷ್ಟನೆ

ಐಷಾರಾಮಿ ಜೀವನವೇ ವಚನಾನಂದ ಸ್ವಾಮೀಜಿಗೆ ಮುಳುವಾಯ್ತಾ?

Vachanananda Swamiji: ವಚನಾನಂದ ಸ್ವಾಮೀಜಿ ಅವರನ್ನು ಹರಿಹರ ಪಂಚಮಸಾಲಿ ಗುರುಪೀಠದಿಂದ ಉಚ್ಚಾಟನೆ ಮಾಡಿರುವ ಘಟನೆ ಸದ್ಯ ಭಾರಿ ಸಂಚಲನ ಮೂಡಿಸಿದೆ. ಇದೀಗ ಹರಿಹರ ಪಂಚಮಸಾಲಿ ಪೀಠದ ಟ್ರಸ್ಟಿ ಮಹೇಶ ಹಾವೇರಿ ಸ್ಪಷ್ಟನೆ ನೀಡಿ ಬೈಲಾ ಪ್ರಕಾರವೇ ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್‌ಗೆ ತಲೆನೋವಾದ ಪಕ್ಷ ವಿರೋಧಿ ಚಟುವಟಿಕೆ; ಸಚಿವ ಜಮೀರ್ ಆಪ್ತೆಯ ತಲೆದಂಡ

ಸಚಿವ ಜಮೀರ್ ಆಪ್ತೆ ಅಫ್ರಿನ್ ಖಾನ್ ತಲೆದಂಡ

Afreen Khan: ಕಾಂಗ್ರೆಸ್‌ನಲ್ಲಿ ಕೆಲವು ದಿನಗಳಿಂದ ಬಿಡುವಿಲ್ಲದ ಚಟುವಟಿಕೆ ನಡೆಯುತ್ತಿದ್ದು, ಇದೀಗ ಮತ್ತೊಂದು ವಿಕೆಟ್‌ ಪತನವಾಗಿದೆ. ಶಿಸ್ತು ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್ ಬೆಂಗಳೂರು ಉತ್ತರ ಜಿಲ್ಲಾ ಉಪಾಧ್ಯಕ್ಷೆಯಾಗಿದ್ದ, ಸಚಿವ ಸಚಿವ ಜಮೀರ್ ಅಹಮದ್ ಖಾನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಅಫ್ರಿನ್ ಖಾನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ದಿನನಿತ್ಯದ ಪ್ರಯಾಣ ಸಂದರ್ಭದಲ್ಲಿ ಸೂಪರ್‌ ಕಾಯಿನ್ಸ್ ನೀಡಲು ಉಬರ್ ಜೊತೆ ಒಪ್ಪಂದ ಮಾಡಿಕೊಂಡ ಫ್ಲಿಪ್‌ ಕಾರ್ಟ್

ಸೂಪರ್‌ ಕಾಯಿನ್ಸ್ ನೀಡಲು ಉಬರ್ ಜೊತೆ ಒಪ್ಪಂದ ಮಾಡಿಕೊಂಡ ಫ್ಲಿಪ್‌ ಕಾರ್ಟ್

ಬಳಕೆದಾರರು ತಮ್ಮ ದೈನಂದಿನ ಪ್ರಯಾಣದಲ್ಲಿ ಉತ್ತಮ ಪ್ರತಿಫಲ ಅಥವಾ ರಿವಾರ್ಡ್ಸ್ ಗಳಿಸಲು ಅನುವು ಮಾಡಿಕೊಡುತ್ತದೆ. ಈ ಸಹಯೋಗವು ಭಾರತದ ಲಾಯಲ್ಟಿ ವಿಭಾಗವನ್ನು ಬಲಪಡಿ ಸುವ ಫ್ಲಿಪ್‌ ಕಾರ್ಟ್‌ ನ ಉದ್ದೇಶದ ಭಾಗವಾಗಿ ಮೂಡಿಬಂದಿದ್ದು, ಉಬರ್‌ ಗೆ ತನ್ನ ದೈನಂದಿನ ಸಾರಿಗೆ ಸೇವೆಯಲ್ಲಿ ಹೆಚ್ಚಿನ ಮೌಲ್ಯವನ್ನು ಒದಗಿಸಲು ಸಹಕಾರಿಯಾಗಿದೆ.

ಯೋಗೇಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್‌ ಕುಲಕರ್ಣಿ ದೋಷಿ; ನಾಳೆ ಶಿಕ್ಷೆ ಪ್ರಮಾಣ ಪ್ರಕಟ

ಯೋಗೇಶ್‌ ಗೌಡ ಹತ್ಯೆ ಪ್ರಕರಣದಲ್ಲಿ ಶಾಸಕ ವಿನಯ್‌ ಕುಲಕರ್ಣಿ ದೋಷಿ

Yogesh Gowda Murder Case: ಧಾರವಾಡ ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಗುರುವಾರ (ಏಪ್ರಿಲ್‌ 16) ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಇನ್ನು ಪ್ರಕರಣದ A 20 ವಾಸುದೇವ ನಿಲೇಕಣಿ, A21 ಸೋಮಶೇಖರ ಅವರನ್ನು ಬಿಡುಗಡೆ ಮಾಡಲು ಕೋರ್ಟ್ ಆದೇಶಿಸಿದೆ.

ಯುವಕರಲ್ಲಿ ಮಾನವೀಯತೆ ಹೆಚ್ಚಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಂವಿಧಾನ ಜಾರಿಯಾದ ನಂತರ ಸಮಾಜ ಸುಧಾರಣೆ: ಸಿದ್ದರಾಮಯ್ಯ

CM Siddaramaiah: ಕನ್ನಡ ಸಾಮರಸ್ಯ ನೆಲೆ ಯೋಜನೆಯಡಿ ನೂರು ಪುಸ್ತಕಗಳನ್ನು ಹೊರತರಲು ಉದ್ದೇಶಿಸಲಾಗಿದೆ. ಉಳಿದ 59 ಪುಸ್ತಕಗಳು ಸಹ ಶೀಘ್ರ ಬಿಡುಗಡೆಯಾಗಲಿದೆ. ಇಂದು ಬಿಡುಗಡೆಯಾಗಿರುವ ಎಲ್ಲವೂ ಯೋಗ್ಯ ಪುಸ್ತಕಗಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯನ್ನು ಭಾರತದ ಶ್ರೇಷ್ಠ ಪುತ್ರ ಎಂದ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ

ಮೋದಿ ನಾಯಕತ್ವ ಭಾರತೀಯರಿಗೆ ಮಾದರಿ ಎಂದ ಎಚ್‌.ಡಿ. ಕುಮಾರಸ್ವಾಮಿ

H.D. Kumaraswamy: ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿಯಲ್ಲಿ ನಿರ್ಮಾಣವಾಗಿರುವ ಭೈರಮೈಕ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಧನ್ಯವಾದ ಅರ್ಪಿಸಿದರು. ಮೋದಿ ಅವರ ನಾಯಕತ್ವದ ಮೇಲೆ ದೇಸ ನಂಬಿಕೆ ಇಟ್ಟಿದೆ ಎಂದು ಬಣ್ಣಿಸಿದರು.

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಸಿದ್ದರಾಮಯ್ಯ ಸಲ್ಲಿಸಿದ 18 ಬೇಡಿಕೆಗಳ ಮನವಿ ಪತ್ರದಲ್ಲಿ ಏನೇನಿದೆ? ಇಲ್ಲಿದೆ ವಿವರ

ಮೋದಿಗೆ ಸಿದ್ದರಾಮಯ್ಯ ಸಲ್ಲಿಸಿದ 18 ಬೇಡಿಕೆಗಳ ಮನವಿ ಪತ್ರದಲ್ಲಿ ಏನೇನಿದೆ?

PM Modi Karnataka Visit: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠದಲ್ಲಿ ನಿರ್ಮಾಣವಾಗಿರುವ ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲು ಕರ್ನಾಟಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 18 ಬೇಡಿಕೆಗಳನ್ನು ಹೊಂದಿರುವ ಮನವಿ ಪತ್ರವನ್ನು ಪ್ರಧಾನಿಗೆ ನೀಡಿದರು. ಈ ಮನವಿ ಪತ್ರದಲ್ಲಿ ಏನಿದೆ ಎನ್ನುವ ವಿವರ ಇಲ್ಲಿದೆ.

ಹ್ಯಾಪಿಯೆಸ್ಟ್ ಪರ್ಲ್ಸ್‌ನ ಡೆಂಟಲ್ ಕ್ಲಿನಿಕ್ ಉದ್ಘಾಟನೆ: ಹ್ಯಾಪಿಯೆಸ್ಟ್ ಹೆಲ್ತ್‌ನಿಂದ ದಂತ ಚಿಕಿತ್ಸಾ ವಿಭಾಗ ವಿಸ್ತರಣೆ‍

ಹ್ಯಾಪಿಯೆಸ್ಟ್ ಹೆಲ್ತ್‌ನಿಂದ ದಂತ ಚಿಕಿತ್ಸಾ ವಿಭಾಗ ವಿಸ್ತರಣೆ‍

ಸುಮಾರು 4,500 ಚದರ ಅಡಿ ವಿಸ್ತೀರ್ಣದಲ್ಲಿ ವಿನ್ಯಾಸಗೊಳಿಸಲಾದ ಈ ಕ್ಲಿನಿಕ್, ಸುಧಾರಿತ ದಂತ ತಂತ್ರಜ್ಞಾನ, ಅನುಭವಿ ವೈದ್ಯರು ಮತ್ತು 'ಅತಿಥಿಗಳಿಗೆ ಆದ್ಯತೆ' ಎನ್ನುವ ತತ್ವದೊಂದಿಗೆ ಸಮಗ್ರ ಮತ್ತು ಉತ್ತಮ ಗುಣಮಟ್ಟದ ಮೌಖಿಕ ಆರೋಗ್ಯ ರಕ್ಷಣೆ ನೀಡಲಿದ್ದು, ಡಾ.ವಿಕ್ರಮ್ ಶೆಟ್ಟಿ ಅವರ ನೇತೃತ್ವ ಹಾಗೂ ಹಿರಿಯ ತಜ್ಞರಾದ ಹ್ಯಾಪಿಯೆಸ್ಟ್ ಪರ್ಲ್ಸ್ ನಿರ್ದೇಶಕ ಡಾ.ಅಚ್ಯುತ್ ಎಂ.ಬಾಳಿಗಾ ಮತ್ತು ಉಪ ನಿರ್ದೇಶಕರಾದ ಡಾ.ಸ್ಯಾಮ್ಯುಯೆಲ್ ಶಡ್ರಕ್ ಸುರೇಂದರ್ ಅವರ ಮಾರ್ಗ ದರ್ಶನದಲ್ಲಿ ಈ ಕ್ಲಿನಿಕ್ ಕಾರ್ಯನಿರ್ವಹಿಸಲಿದೆ

ಕಡಿಮೆ ಬೆಲೆಗೆ ಚಿನ್ನ, ಉಚಿತ ಬೆಳ್ಳಿ ನಾಣ್ಯ: ಅಕ್ಷಯ ತೃತೀಯಕ್ಕೆ ಇನ್‌ಸ್ಟಾಮಾರ್ಟ್‌ - ಕಲ್ಯಾಣ್ ಜ್ಯೂವೆಲರ್ಸ್ ಹೊಸ ಆಫರ್

ಕಡಿಮೆ ಬೆಲೆಗೆ ಚಿನ್ನ, ಉಚಿತ ಬೆಳ್ಳಿ ನಾಣ್ಯ:

ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದರಿಂದ ಮುಂದೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಈ ಬೇಡಿಕೆಯ ಸಮಯದಲ್ಲಿ ಚಿನ್ನದ ಬೆಲೆಯಲ್ಲಿ ವಿಪರೀತ ಏರಿಳಿತಗಳಾಗು ವುದು ಸಹಜ. ಈ ಆತಂಕವನ್ನು ನಿವಾರಿಸಲು, ಇನ್‌ಸ್ಟಾಮಾರ್ಟ್ ಮೂಲಕ ಕಲ್ಯಾಣ್ ಜ್ಯೂವೆಲರ್ಸ್‌ನ ಬಿಐಎಸ್‌ ಹಾಲ್‌ಮಾರ್ಕ್ ಉಳ್ಳ ಚಿನ್ನದ ನಾಣ್ಯಗಳನ್ನು ಮುಂಗಡವಾಗಿ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.

PM Modi in Adichunchanagiri: ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಯಲ್ಲಿ ಪಿಸುಗುಟ್ಟಿದ ಪ್ರಧಾನಿ ನರೇಂದ್ರ ಮೋದಿ; ಫೋಟೊ ವೈರಲ್‌

ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಯಲ್ಲಿ ಮೋದಿ ಹೇಳಿದ್ದೇನು?

PM Modi Karnataka Visit: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿಯಲ್ಲಿ ನಿರ್ಮಾಣವಾಗಿರುವ ಭೈರವೈಕ್ಯ ಮಂದಿರವನ್ನು ಬುಧವಾರ (ಏಪ್ರಿಲ್‌ 15) ಉದ್ಘಾಟಿಸಿದರು. ಕಾರ್ಯಕ್ರಮದ ನಿಮಿತ್ತ ಬೆಂಗಳೂರಿಗೆ ಬಂದಿಳಿದ ನರೇಂದ್ರ ಅವರನ್ನು ಮುಖ್ಯಮಂತ್ರಿ ಆತ್ಮೀಯವಾಗಿ ಸ್ವಾಗತಿಸಿದರು. ರಾಜಕೀಯ ಮರೆತು ಇಬ್ಬರು ನಾಯಕರು ಆತ್ಮೀಯವಾಗಿ ನಗುತ್ತ ಮಾತನಾಡಿದ್ದು ಗಮನ ಸೆಳೆಯಿತು.

ಬೆಂಗಳೂರಿಗೆ ಪೌಲಮಿ ಎಸ್ಟೇಟ್ಸ್ ಪಾದಾರ್ಪಣೆ: ಶೀಘ್ರದಲ್ಲೇ ಪೌಲಮಿ ಫ್ಲೋರಿಕ್ ಯೋಜನೆಗೆ ಚಾಲನೆ

ಶೀಘ್ರದಲ್ಲೇ ಪೌಲಮಿ ಫ್ಲೋರಿಕ್ ಯೋಜನೆಗೆ ಚಾಲನೆ

ಬೆಂಗಳೂರು ದೇಶದಲ್ಲಿಯೇ ತ್ವರಿತವಾಗಿ ಬದಲಾಗುತ್ತಿರುವ ವಸತಿ ರಿಯಲ್ ಎಸ್ಟೇಟ್ ಮಾರುಕಟ್ಟೆ ಹೊಂದಿದ್ದು, ಕಂಪೆನಿಯು ವಿವೇಚನೆಯ ಯೋಜನೆ, ಗುಣಮಟ್ಟ ಮತ್ತು ಗ್ರಾಹಕ ಕೇಂದ್ರ ಅಭಿವೃದ್ಧಿ ಸೂತ್ರಗಳ ಸಿದ್ಧಾಂತದೊಂದಿಗೆ ಬೆಂಗಳೂರಿಗೆ ಕಾಲಿಡುತ್ತಿದೆ. ಸದೃಢ ಮೂಲಸೌಕರ್ಯ, ಉದ್ಯೋಗಾವ ಕಾಶಗಳಿಂದಾಗಿ ಬೆಂಗಳೂರು ಅಭಿವೃದ್ಧಿಗೆ ಹೆಚ್ಚು ಸಾಧ್ಯತೆಗಳಿರುವ ಮಾರುಕಟ್ಟೆಯಾಗಿದ್ದು, ಪೌಲಮಿ ಈಗಾಗಲೇ ಇದನ್ನು ಗುರುತಿಸಿ ಕಾರ್ಯತಂತ್ರ ರೂಪಿಸಿದೆ.

ಮತ್ತೆ ಬಂದಿದೆ ಕಾಗ್ನಿಜೆಂಟ್‌ 'ಟೆಕ್ನೋವರ್ಸ್ ಹ್ಯಾಕಥಾನ್ 2026': 400ಕ್ಕೂ ಹೆಚ್ಚು ಕಾಲೇಜುಗಳ 20,000 ವಿದ್ಯಾರ್ಥಿಗಳು ಭಾಗಿ

ಮತ್ತೆ ಬಂದಿದೆ ಕಾಗ್ನಿಜೆಂಟ್‌ 'ಟೆಕ್ನೋವರ್ಸ್ ಹ್ಯಾಕಥಾನ್ 2026'

ಕಾಗ್ನಿಜೆಂಟ್‌ ಇಂಡಿಯಾದ ಗ್ಲೋಬಲ್ ಆಪರೇಷನ್ಸ್ ಅಧ್ಯಕ್ಷ ಹಾಗೂ ಸಿಎಂಡಿ ರಾಜೇಶ್ ವಾರಿಯರ್ ಈ ಕುರಿತು ಮಾತನಾಡಿ, ಈ ಹ್ಯಾಕಥಾನ್ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಜ್ಞಾನವನ್ನು ನೈಜ ಜಗತ್ತಿನ ಅನ್ವಯಿಕಗಳಿಗೆ ಅಪ್ಲಿಕೇಷನ್‌ಗಳಿಗೆ ಬಳಸುವ ಅಪೂರ್ವ ಅವಕಾಶವನ್ನು ನೀಡುತ್ತದೆ. ಸ್ಪರ್ಧಿಗಳು ಕಾಗ್ನಿಜೆಂಟ್‌‌ನ ತಜ್ಞರೊಂದಿಗೆ ನೇರವಾಗಿ ಸಂವಹನ ನಡೆಸಿ, ಉದ್ಯಮಗಳು ಹೊಸತನ ವನ್ನು ಹೇಗೆ ಅಳವಡಿಸಿಕೊಳ್ಳುತ್ತವೆ ಎಂಬುದನ್ನು ಕಲಿಯಲಿದ್ದಾರೆ.

PM Narendra Modi: ವಿಕಸಿತ ಭಾರತಕ್ಕೆ ಪ್ರಧಾನಿ ಮೋದಿ 9 ಸೂತ್ರ; ರಾಗಿ ಮುದ್ದೆ, ಕಾವೇರಿ ನೀರು ನೆನೆದ ಪಿಎಂ

ವಿಕಸಿತ ಭಾರತಕ್ಕೆ ಪಿಎಂ ಮೋದಿ 9 ಸೂತ್ರ; ರಾಗಿ ಮುದ್ದೆ, ಕಾವೇರಿ ನೆನೆದ ಪಿಎಂ

ಪೂಜ್ಯ ಬಾಲಗಂಗಾಧರನಾಥ ಶ್ರೀಗಳು ಅನ್ನ, ಅಕ್ಷರ, ಆರೋಗ್ಯ, ಅಧ್ಯಾತ್ಮ, ಆಶ್ರಯ, ಅರಣ್ಯ, ಅನುಕಂಪ, ಆಕಳು ಮತ್ತು ಸ್ವಚ್ಛತೆ ಈ ಒಂಬತ್ತು ಉದಾತ್ತ ಆಶಯಗಳೊಂದಿಗೆ ಬದುಕಿದರು. ನಾವೂ ಕೂಡ ಒಂಬತ್ತು ಸಂಕಲ್ಪಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಮೋದಿಯವರು ತಿಳಿಸಿದರು.

ಪ್ರಧಾನಿ ಮೋದಿ ಉದ್ಘಾಟಿಸಿದ ಶ್ರೀ ಭೈರವೈಕ್ಯ ಮಂದಿರ ಹೇಗಿದೆ ಗೊತ್ತಾ? ವಿಡಿಯೋ ನೋಡಿ Video

ಪ್ರಧಾನಿ ಮೋದಿ ಉದ್ಘಾಟಿಸಿದ ಶ್ರೀ ಭೈರವೈಕ್ಯ ಮಂದಿರ ಹೇಗಿದೆ ಗೊತ್ತಾ?

Sri Guru Bhairavaikya Mandir: ಪ್ರಧಾನಿ ನರೇಂದ್ರ ಮೋದಿ ಇಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದು, ಶ್ರೀಗುರು ಭೈರವೈಕ್ಯ ಮಂದಿರದ ಉದ್ಘಾಟನೆಯನ್ನು ನೆರವೇರಿಸಿದ್ದಾರೆ. ಈ ಮಂದಿರ ಪರಮಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಯವರ ಸಮಾಧಿ ಸ್ಥಳವಾಗಿದೆ.

PM Narendra modi: ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರ ಪ್ರಧಾನಿ ಮೋದಿಯವರಿಂದ ಉದ್ಘಾಟನೆ

ಆದಿಚುಂಚನಗಿರಿಯಲ್ಲಿ ಭೈರವೈಕ್ಯ ಮಂದಿರ ಪ್ರಧಾನಿ ಮೋದಿಯವರಿಂದ ಉದ್ಘಾಟನೆ

ಸುಮಾರು 80 ಕೋಟಿ ರೂಪಾಯಿಗಳ ಬೃಹತ್ ವೆಚ್ಚದಲ್ಲಿ ನಿರ್ಮಿಸಲಾದ ಈ ಭೈರವೈಕ್ಯ ಮಂದಿರವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಇದ್ದರು.

PM Modi in  Adichunchanagiri: ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ಮೋದಿ ಭೇಟಿ; ಗುರುಭೈರವೈಕ್ಯ ಮಂದಿರ ಉದ್ಘಾಟನೆ Video

ಆದಿಚುಂಚನಗಿರಿ ಮಠಕ್ಕೆ ಪ್ರಧಾನಿ ಮೋದಿ ಭೇಟಿ

PM Modi Karnataka Visit: ಪ್ರಧಾನಿ ನರೇಂದ್ರ ಮೋದಿ ಅವರು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದಾರೆ. ಮಠದಲ್ಲಿ ದ್ರಾವಿಡ-ಹೊಯ್ಸಳ ಶೈಲಿಯ ಶಿಲ್ಪಕಲೆಯಿಂದ ನಿರ್ಮಿಸಿರುವ ಶ್ರೀಗುರು ಭೈರವೈಕ್ಯ ಮಂದಿರದ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದ್ದಾರೆ

PM Narendra Modi: ಬೆಂಗಳೂರಿಗೆ ಬಂದ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಸ್ವಾಗತ, 18 ಬೇಡಿಕೆಗಳ ಮನವಿ ಪತ್ರ ಸಲ್ಲಿಕೆ

ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಸ್ವಾಗತ, 18 ಬೇಡಿಕೆಗಳ ಮನವಿ ಪತ್ರ ಸಲ್ಲಿಕೆ

ಹೆಚ್‌ಎಎಲ್ ಏರ್‌ಪೋರ್ಟ್‌ನಲ್ಲಿ ಮೋದಿ ಅವರನ್ನು ಸ್ವಾಗತಿಸಲು ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಭೈರೆಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪೊಲೀಸ್ ಮಹಾನಿರ್ದೇಶಕ ಸಲೀಂ, ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಿದ್ದರು.

Honour Killing: ಬೆಳಗಾವಿಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ, ವಿಷ ಕುಡಿಸಿ ಯುವತಿಯ ಕೊಲೆ

ಬೆಳಗಾವಿಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ, ವಿಷ ಕುಡಿಸಿ ಯುವತಿಯ ಕೊಲೆ

ಕೃಷ್ಣ ಪಾಟೀಲ್‌ನನ್ನು ಮರೆತು ಬಿಡುವಂತೆ ಸತ್ಯವ್ವಳಿಗೆ ಕುಟುಂಬದವರು ಒತ್ತಡ ಹೇರಿದ್ದಾರೆ. ಇದಕ್ಕೆ ಆಕೆ ಒಪ್ಪದಿದ್ದಾಗ ಅರಗ ಗ್ರಾಮಕ್ಕೆ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ. ಮಾರ್ಚ್ 21ರಂದು ವಿಷ ಕುಡಿಸಿ ಸತ್ಯವ್ವನ ಕೊಲೆಗೈದು, ದೇಹವನ್ನು ಸುಟ್ಟು ಹಾಕಿದ್ದಾರೆ.

Census: ಇಂದು ಸ್ವಯಂ ಗಣತಿ ಅಂತ್ಯ, ನಾಳೆಯಿಂದ ಮನೆಗಣತಿ ಆರಂಭ, 33 ಪ್ರಶ್ನೆಗಳೇನು?

ಇಂದು ಸ್ವಯಂ ಗಣತಿ ಅಂತ್ಯ, ನಾಳೆಯಿಂದ ಮನೆಗಣತಿ ಆರಂಭ, 33 ಪ್ರಶ್ನೆಗಳೇನು?

ಕರ್ನಾಟಕದಲ್ಲಿ ಏ.16ರಿಂದ ಮೇ 15ರವರೆಗೆ ನಡೆಯುವ ಗಣತಿ ಕಾರ್ಯಕ್ಕೆ ಸುಮಾರು 2 ಲಕ್ಷಕ್ಕೂ ಹೆಚ್ಚು ಗಣತಿದಾರರನ್ನು ನಿಯೋಜಿಸಲಾಗಿದೆ. ಎಲ್ಲಾ 31 ಜಿಲ್ಲೆಗಳಲ್ಲೂ ಆಯಾ ಜಿಲ್ಲಾಡಳಿತಗಳ ಮೂಲಕ ಗಣತಿ ಕಾರ್ಯ ನಡೆಯಲಿದೆ. ಗಣತಿದಾರರು ಈ ಸಮಯದಲ್ಲಿ ಮನೆಗಳ ಸ್ಥಿತಿಗತಿಗಳು, ಆಸ್ತಿಗಳು ಮತ್ತು ಮನೆಗಳ ಸೌಕರ್ಯಗಳಿಗೆ ಸಂಬಂಧಿಸಿದ ವಿವರಗಳನ್ನು ಕಲೆ ಹಾಕಲಿದ್ದಾರೆ.

H D Kumaraswamy: ಸಿಎಂ ಪಟ್ಟದ ಮೇಲೆ ಕಣ್ಣು: 'ರಾಜ್ಯ'ಕೀಯಕ್ಕೆ ಎಚ್‌ʼಡಿಕೆ ?

ಸಿಎಂ ಪಟ್ಟದ ಮೇಲೆ ಕಣ್ಣು: 'ರಾಜ್ಯ'ಕೀಯಕ್ಕೆ ಎಚ್‌ʼಡಿಕೆ ?

ಕುಮಾರಸ್ವಾಮಿ ಹೇಳಿಕೆಯಿಂದ ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಹಲವರಿಗೆ ಅಪಾಯದ ವಾಸನೆ ಬಡಿದಿದೆ. ಇದು ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್'ನೊಳಕ್ಕೆ ಆಂತರಿಕ ಸಂಘರ್ಷಕ್ಕೆ ಕಾರಣವಾಗಲೂಬಹುದು. ಒಂದು ವೇಳೆ ಬಿಜೆಪಿ-ಜೆಡಿಎಸ್ ಅಧಿಕಾರಕ್ಕೆ ಬಂದು ಕುಮಾರ ಸ್ವಾಮಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕರೆ, ಬಿಜೆಪಿಯ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು ರೊಚ್ಚಿಗೇಳ ಬಹುದು. ಅವರನ್ನೆಲ್ಲ ಹೇಗೆ ಸಂಬಾಳಿಸಲಾಗುತ್ತದೆ ಎಂಬ ಕುತೂಹಲವುಂಟಾಗಿದೆ.

Loading...