ಕುವೆಂಪು ವಿಶ್ವಮಾನವ ಸಂದೇಶ ಇಂದಿಗೂ ಜೀವಂತ
ಯುವಜನತೆಗೆ ಕುವೆಂಪು ನೀಡಿದ ಅತ್ಯಂತ ಪ್ರಬಲ ಕರೆ ಎಂದರೆ ‘ನಿರಂಕುಶಮತಿಗಳಾಗಿ‘. ಪರಂಪರೆಯ ಹೆಸರಿನಲ್ಲಿ ಬರುವ ಮೌಢ್ಯಗಳನ್ನು ಪ್ರಶ್ನಿಸದೆ ಒಪ್ಪಿಕೊಳ್ಳಬೇಡಿ ಎಂಬುದು ಅವರ ಆಶಯವಾಗಿತ್ತು. ‘ವಿಚಾರ ಕ್ರಾಂತಿಗೆ ಆಹ್ವಾನ‘ ನೀಡಿದ ಅವರು, ಮನುಷ್ಯ ತನ್ನ ಬುದ್ಧಿಶಕ್ತಿಯನ್ನು ಗುಲಾಮಗಿರಿಗೆ ಒಪ್ಪಿಸ ಬಾರದೆಂದು ಪ್ರತಿಪಾದಿಸಿದರು. ಅವರ ದೃಷ್ಟಿಯಲ್ಲಿ ಭಕ್ತಿ ಎನ್ನುವುದು ಮೂಢನಂಬಿಕೆಯಲ್ಲ, ಅದು ವಿಶ್ವಚೇತನದೊಂದಿಗಿನ ಅನು ಸಂಧಾನ.