ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Crime News: ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆಗಿಳಿಸಿದ ಪಾಪಿ ತಂದೆ, ಅಜ್ಜಿ ಸೇರಿ 12 ಮಂದಿ ಬಂಧನ

ಮಗಳನ್ನೇ ವೇಶ್ಯಾವಾಟಿಕೆಗಿಳಿಸಿದ ಪಾಪಿ ತಂದೆ, ಅಜ್ಜಿ ಸೇರಿ 12 ಮಂದಿ ಬಂಧನ

ದಿನಕ್ಕೆ 5 ಸಾವಿರ ರೂಪಾಯಿ ಸಿಗುತ್ತದೆಯೆಂಬ ದುರಾಸೆಯಿಂದ ಈ ತಂದೆ ಹೆತ್ತ ಮಗಳನ್ನೇ ದಂಧೆಗೆ ಒಪ್ಪಿಸಿದ್ದಾನೆ. ಆಕೆಯ ಅಜ್ಜಿ ಕೂಡ ಈ ಕೃತ್ಯಕ್ಕೆ ಸಹಕರಿಸಿದ್ದಾಳೆ. ಇವರಿಬ್ಬರೂ ಹಾಗೂ ಇವರಿಂದ ಬಾಲಕಿಯನ್ನು ಪಡೆದುಕೊಂಡ ಮಾಂಸ ದಂಧೆ ಕಿಂಗ್‌ಪಿನ್‌ ಸೇರಿದಂತೆ 12 ಮಂದಿಯನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ. ಈ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಬೀರೂರಿನಲ್ಲಿ ನಡೆದಿದೆ.

Car Fire Accident: ಗುರುತು ಸಿಗದಂತೆ ಸುಟ್ಟು ಕರಕಲಾದ ಕಾರು, ಇಬ್ಬರ ಶವ ಪತ್ತೆ

ಗುರುತು ಸಿಗದಂತೆ ಸುಟ್ಟು ಕರಕಲಾದ ಕಾರು, ಇಬ್ಬರ ಶವ ಪತ್ತೆ

ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾರು ಮರಕ್ಕೆ ಡಿಕ್ಕಿ ಹೊಡೆದು ಪಕ್ಕದ ಕಂದಕಕ್ಕೆ ಬಿದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಡಿಕ್ಕಿಯ ಬಳಿಕ ಕಾರಿಗೆ ಬೆಂಕಿ ಹೊತ್ತಿಕೊಂಡಿರಬಹುದೆಂದು ಪೊಲೀಸರು ಅಂದಾಜಿಸಿದ್ದಾರೆ. ಬೆಂಕಿಯ ತೀವ್ರತೆಗೆ ಕಾರಿನ ನಂಬರ್ ಪ್ಲೇಟ್ ಕೂಡ ಸಂಪೂರ್ಣವಾಗಿ ಸುಟ್ಟು ಕಾಣೆಯಾಗಿದ್ದು, ವಾಹನದ ನೋಂದಣಿ ವಿವರ ಪತ್ತೆ ಕಷ್ಟವಾಗಿದೆ.

ಭಾರತದ ಜೆನ್-ಜೀ ಪೀಳಿಗೆಯ ಪ್ರವಾಸ ಸಂಸ್ಕೃತಿಯನ್ನು ಸಂಗೀತೋತ್ಸವಗಳು ಹೇಗೆ ಬದಲಿಸುತ್ತಿವೆ ಎಂದು ಬಹಿರಂಗಗೊಳಿಸಿದ ಏರ್‌ಬಿಎನ್‌ಬಿ ವರದಿ

'ಅನುಭವ ಕೇಂದ್ರಿತ ಪ್ರವಾಸೋದ್ಯಮ ಒಳನೋಟಗಳು' ಎಂಬ ವರದಿ ಬಿಡುಗಡೆ

ಪ್ರತಿಷ್ಠಿತ ಏರ್‌ಬಿಎನ್‌ಬಿ ಸಂಸ್ಥೆಯು ತನ್ನ ಹೊಸ 'ಅನುಭವ ಕೇಂದ್ರಿತ ಪ್ರವಾಸೋದ್ಯಮ ಒಳನೋಟಗಳು' ಎಂಬ ವರದಿಯನ್ನು ಬಿಡುಗಡೆ ಮಾಡಿದ್ದು, ಈ ವರದಿಯು ಜೆನ್-ಜೀ ಪೀಳಿಗೆಯು ಲೈವ್ ಕಾನ್ಸರ್ಟ್‌ಗಳು ಮತ್ತು ಮ್ಯೂಸಿಕ್ ಫೆಸ್ಟಿವಲ್ ಗಳನ್ನು ಗಮನದಲ್ಲಿಟ್ಟು ಕೊಂಡು ತಮ್ಮ ಪ್ರವಾಸಗಳನ್ನು ಹೇಗೆ ಯೋಜಿಸುತ್ತಿದ್ದಾರೆ ಎಂದು ತಿಳಿಸಿದೆ.

ಅದೃಶ್ಯ ಅಪಾಯಗಳ ಹೆಚ್ಚಳ ಮತ್ತು ಆಧುನಿಕ ನೀರು ಶುದ್ದೀಕರಣ ಉಪಕರಣಗಳ ರಕ್ಷಣಾ ವ್ಯವಸ್ಥೆ

ಆಧುನಿಕ ನೀರು ಶುದ್ದೀಕರಣ ಉಪಕರಣಗಳ ರಕ್ಷಣಾ ವ್ಯವಸ್ಥೆ

ನೀರಿನ ಮಟ್ಟಗಳು ಕ್ಷೀಣಿಸುತ್ತಿದ್ದಂತೆ, ಜಲಚರಗಳು ಪೂರೈಕೆಗೆ ಆಳವಾದ ಭೂಜನಕ ಅಂಶ ಗಳನ್ನು ಬಿಡುಗಡೆ ಮಾಡಲು ಪ್ರಾರಂಭಿಸುತ್ತವೆ. ಈ ಮಾಲಿನ್ಯಕಾರಕಗಳು ನೀರಿನ ನೋಟವನ್ನು ಬದಲಾಯಿಸುವುದಿಲ್ಲ, ಅದಕ್ಕಾಗಿಯೇ ಮನೆಯ ಮಟ್ಟದಲ್ಲಿ ಅವುಗಳ ಅಪಾಯಗಳನ್ನು ಕಡಿಮೆ ಅಂದಾಜು ಮಾಡಲಾಗುತ್ತದೆ.

ಶೈಕ್ಷಣಿಕ ಕ್ರಾಂತಿಗೆ ಸಜ್ಜಾದ ಕಲ್ಯಾಣ ಕರ್ನಾಟಕ

ಶೈಕ್ಷಣಿಕ ಕ್ರಾಂತಿಗೆ ಸಜ್ಜಾದ ಕಲ್ಯಾಣ ಕರ್ನಾಟಕ

ಮೆಟ್ರೊ ನಗರಗಳಿಗೆ ಕೋಚಿಂಗ್ ಪಡೆಯಲು ಹೋಗುತ್ತಿರುವ ಸ್ಪರ್ಧಾರ್ಥಿಗಳು ದುಬಾರಿ ಜೀವನ ಶೈಲಿ, ಅಪರಿಚಿತ ಪರಿಸರ ಮತ್ತು ವಸತಿ ಸಮಸ್ಯೆಗಳು ಅನೇಕ ಪ್ರತಿಭಾವಂತರನ್ನು ಸ್ಪರ್ಧೆ ಯಿಂದ ಹಿಂದೆ ಸರಿಯುವಂತೆ ಮಾಡುತ್ತಿದ್ದವು. ಆದರೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ದೂರದೃಷ್ಟಿಯಿಂದಾಗಿ, ದೇಶದ ಖ್ಯಾತ ವಿಷಯ ತಜ್ಞರೇ ಕಲಬುರಗಿಗೆ ಬಂದು ಸ್ಥಳೀಯ ವಿದ್ಯಾರ್ಥಿಗಳಿಗೆ ಪಾಠ ಮಾಡಲಿದ್ದಾರೆ

Question Paper Leak: ದ್ವಿತೀಯ ಪಿಯು ಪ್ರಿಪರೇಟರಿ ಪರೀಕ್ಷೆ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ, ಆದರೂ ಪರೀಕ್ಷೆ ನಡೆಸಿದ ಇಲಾಖೆ

ದ್ವಿತೀಯ ಪಿಯು ಪ್ರಿಪರೇಟರಿ ಪರೀಕ್ಷೆ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ

ಮಂಗಳವಾರದ ಗಣಿತ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋಮವಾರ ವಾಟ್ಸ್ಯಾಪ್​ ಮೂಲಕ ವಿದ್ಯಾರ್ಥಿಗಳಿಗೆ ತಲುಪಿದೆ. 80 ಅಂಕಗಳಿಗೆ ಸಿದ್ಧಪಡಿಸಿದ್ದ ಗಣಿತ ಪ್ರಶ್ನೆ ಪತ್ರಿಕೆಯ 47 ಪ್ರಶ್ನೆಗಳು ಹೊಂದಿಕೆಯಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದರೂ ಅದೇ ಪ್ರಶ್ನೆ ಪತ್ರಿಕೆಗೆ ಮಂಗಳವಾರ PU ಪರೀಕ್ಷಾ ಮಂಡಳಿ ಪರೀಕ್ಷೆ ನಡೆಸಿದೆ. ಪರೀಕ್ಷಾ ಮಂಡಳಿಯ ಈ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ.

Self Hraming: ಮದುವೆಯಾಗಲು ಒಪ್ಪದ ಯುವತಿ, ಪುರೋಹಿತ ಆತ್ಮಹತ್ಯೆ

ಮದುವೆಯಾಗಲು ಒಪ್ಪದ ಯುವತಿ, ಪುರೋಹಿತ ಆತ್ಮಹತ್ಯೆ

ಪವನ್ ಭಟ್ ವೃತ್ತಿಯಿಂದ ಪೌರೋಹಿತ್ಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇದೇ ಊರಿನ ಯುವತಿಯೊಂದಿಗೆ ಪ್ರೀತಿ ಹೊಂದಿದ್ದ ಎನ್ನಲಾಗಿದೆ. ಈ ಸಂಬಂಧವನ್ನು ವಿವಾಹವಾಗಿ ಮುಂದುವರಿಸಲು ಯುವಕ ಆಕೆಯ ಮೇಲೆ ಒತ್ತಾಯ ಹಾಕಿದ್ದಾನೆ. ಆದರೆ ಯುವತಿ ವಿವಾಹಕ್ಕೆ ನಿರಾಕರಿಸಿದ್ದಾಳೆ ಎಂದು ತಿಳಿದುಬಂದಿದೆ.

Karnataka Weather: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಇಂದು- ನಾಳೆ ಮಳೆ, ಬೆಂಗಳೂರು- ಒಳನಾಡು ಗಡಗಡ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ, ಇಂದು- ನಾಳೆ ಮಳೆ, ಒಳನಾಡು ಗಡಗಡ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಪ್ರಭಾವದಿಂದಾಗಿ ನಾಳೆಯಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗದಲ್ಲಿ ಮಳೆ ಇರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಇನ್ನು ಮುಂದಿನ 5 ದಿನಗಳಲ್ಲಿ ಉತ್ತರ ಕರ್ನಾಟಕದ ವಿವಿಧ ಭಾಗದಲ್ಲಿ ಕನಿಷ್ಠ ತಾಪಮಾನವು 2ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಕ್ರಮೇಣ ಇಳಿಕೆ ಆಗಲಿದೆ.

Self Harming: ನೀರಿನ ಸಂಪ್​ಗೆ ಬಿದ್ದು ಇಬ್ಬರು ಮಕ್ಕಳ ಜತೆ ತಾಯಿ ಆತ್ಮಹತ್ಯೆ, ಕಾರಣವೇನು?

ನೀರಿನ ಸಂಪ್​ಗೆ ಬಿದ್ದು ಇಬ್ಬರು ಮಕ್ಕಳ ಜತೆ ತಾಯಿ ಆತ್ಮಹತ್ಯೆ, ಕಾರಣವೇನು?

ಸಿಂಗೋನಹಳ್ಳಿ ಗ್ರಾಮದಲ್ಲಿ ಮೃತ ವಿಜಯಲಕ್ಷ್ಮಿ ಕುಟುಂಬ ನೆಲಸಿತ್ತು. ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು ಒಟ್ಟಿಗೆ ಜೀವನ ಮಾಡುತ್ತಿದ್ದರು. ಆದರೆ ಕೌಟುಂಬಿಕ ಕಲಹ ಹಿನ್ನೆಲೆ ತಾಯಿ ವಿಜಯಲಕ್ಷ್ಮೀ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರು ಮಕ್ಕಳನ್ನು ನೀರಿನ ಸಂಪ್​ಗೆ ತಳ್ಳಿ ಬಳಿಕ ತಾನೂ ಸಂಪ್​ಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Road Accident: ಮರಕ್ಕೆ ಬೊಲೆರೊ ಡಿಕ್ಕಿಯಾಗಿ ನಾಲ್ವರು ದುರ್ಮರಣ

ಮರಕ್ಕೆ ಬೊಲೆರೊ ಡಿಕ್ಕಿಯಾಗಿ ನಾಲ್ವರು ದುರ್ಮರಣ

ದಾವಣಗೆರೆ ತಾಲೂಕಿನ ಅಣಜಿ ಗ್ರಾಮದಿಂದ ಕಲ್ಲವ್ವ ನಾಗತಿಹಳ್ಳಿಗೆ ಹಿಂದಿರುಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ ಮರಕ್ಕೆ ಡಿಕ್ಕಿಯಾದ ಪರಿಣಾಮ, ಕಲ್ಲವ್ವ ನಾಗತಿಹಳ್ಳಿ ಗ್ರಾಮದ ಗಿರಿರಾಜ್ (46), ಕಿರಣ್ (25) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅರುಣ್ (32) ಹಾಗೂ ಹನುಮಂತ (32) ದಾವಣಗೆರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Shidlaghatta News: ಶಾಲಾ ವಾರ್ಷಿಕೋತ್ಸವ ವಿದ್ಯಾರ್ಥಿಗಳ ಸುಪ್ತಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ: ಶಾಸಕ ಬಿ.ಎನ್.ರವಿಕುಮಾರ್

ಶ್ರೀ ಸರಸ್ವತಿ ವಿದ್ಯಾ ಸಂಸ್ಥೆಯ 49ನೇ ವಾರ್ಷಿಕೋತ್ಸವ ಸಮಾರಂಭ

ಶಾಲಾ ವಾರ್ಷಿಕೊತ್ಸವವು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಸಾಂಸ್ಕೃತಿಕ ಸಂಭ್ರಮಗಳ ಅನಾವರಣಕ್ಕೆ ಸೂಕ್ತ ವೇದಿಕೆಯೆಂದು, ಶ್ರೀ ಸರಸ್ವತಿ ಶಾಲೆಯು ಸುಮಾರು ಸುಮಾರು ವರ್ಷಗಳ ಹಿಂದಿನಿಂದಲೂ ನಗರದಲ್ಲಿ ಒಂದು ಪ್ರತಿಷ್ಟಿತ ಶಾಲೆಯಾಗಿದ್ದು, ಗುಣಮಟ್ಟದ ಶಿಕ್ಷಣ, ಮತ್ತು ಮೌಲ್ಯಯುತ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ

Gauribidanur News: ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ

ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಮಾನದಂಡಗಳನ್ನು ಹಾಗೂ ನಿಯಮಾವಳಿಗಳನ್ನು ಉಲ್ಲಂಘಿಸಿ ಕಟ್ಟಡ ಮಾಲೀಕರ ಆಮಿಷ ಹಾಗೂ ಒತ್ತಡಗಳಿಗೆ ಮಣಿದು ಎಂಬತ್ತು ಅಡಿಗಳ ರಸ್ತೆ ವಿಸ್ತೀರಣಕ್ಕೆ ಮುಂದಾಗಿರುವುದು ನಿಜಕ್ಕೂ ಆಘಾತಕಾರಿ ವಿಚಾರ ಎಂದರು

Bagepally News: ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ರಸ್ತೆ ಸುರಕ್ಷತಾ ಮಾಸದ ಬಗ್ಗೆ ಅರಿವು

ರಸ್ತೆ ಸುರಕ್ಷತಾ ಮಾಸದ ಬಗ್ಗೆ ಅರಿವು

ದಿನೇ ದಿನೇ ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಂದ ಸಾವಿನ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆಯಾಗುತ್ತಿದೆ. ರಸ್ತೆ ಅಪಘಾತಗಳನ್ನು ತಡೆಯಲು ಸಂಚಾರ ನಿಯಮಗಳನ್ನು ಪಾಲಿಸುವ ಜೊತೆಗೆ ಜಾಗರೂಕತೆಯ ವಾಹನ ಚಾಲನೆ ಅತ್ಯಗತ್ಯ. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು

ಯಾದಗಿರಿ ಡಿಸಿ ಕಚೇರಿ ಎದುರು ಪ್ರತಿಭಟನೆ; ಖೇಲೋ ಇಂಡಿಯಾ ಕ್ರೀಡಾಪಟು ಲೋಕೇಶ್ ರಾಠೋಡ ಸೇರಿ ಇಬ್ಬರ ಮೇಲೆ ಬಿತ್ತು ಕೇಸ್

ಖೇಲೋ ಇಂಡಿಯಾ ಕ್ರೀಡಾಪಟು ಲೋಕೇಶ್ ರಾಠೋಡ ಮೇಲೆ ಬಿತ್ತು ಕೇಸ್

Yadgir Protest: ಯಾದಗಿರಿಯಲ್ಲಿ ಶಾಂತವಾಗಿ ಪ್ರತಿಭಟನೆ ನಡೆಸುವಂತೆ ಪೊಲೀಸರು ಸೂಚಿಸಿದರೂ, ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ, ಬಲವಂತವಾಗಿ ಗೇಟ್ ತೆರೆಯಿಸಿ ಕಚೇರಿಯ ಮುಖ್ಯ ದ್ವಾರಕ್ಕೆ ನುಗ್ಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪುನೀತ್ ರಾಜ್ ಕಾಮತಗಿ ಹಾಗೂ ಕ್ರೀಡಾಪಟು ಲೋಕೇಶ್ ರಾಠೋಡ್ ಇನ್ನಿತರರ ವಿರುದ್ಧ ಪ್ರಕರಣ ದಾಖಲಾಗಿದೆ.

Gauribidanur News: ಕೆರೆಗಳ ಪುನಶ್ಚತನದಿಂದ ಅಂತರ್ಜಲ ವೃದ್ಧಿ ವೇಣುಗೋಪಾಲ್

ಕೆರೆಗಳ ಪುನಶ್ಚತನದಿಂದ ಅಂತರ್ಜಲ ವೃದ್ಧಿ ವೇಣುಗೋಪಾಲ್

ಕಳೆದ ಆರು ವರ್ಷಗಳಿಂದ ಇದುವರೆಗೂ ತಾಲೂಕಿನಲ್ಲಿ ಸುಮಾರು ಹನ್ನೆರಡು ಕೆರೆಗಳನ್ನು ಪುನಶ್ವೇತನಗೊಳಿಸುವ ಕಾರ್ಯವನ್ಮು ಯಶಸ್ವಿಯಾಗಿ ಮಾಡಿದ್ದು, ಇದರಿಂದಾಗಿ ಅಂತರ್ಜಲ ಮಟ್ಟ ವೃದ್ಧಿಸುವ ಜೊತೆಗೆ ರೈತರ ಕೃಷಿ ಭೂಮಿಗಳಿಗೆ ಫಲವತ್ತಾದ ಕೆರೆ ಯಿಂದ ಹೂಳೆತ್ತದೆ ಮಣ್ಣನ್ನು ಕಾಪಾಡಬೇಕು

Shidlaghatta News: ಹೆಲ್ಮೆಟ್ ಜೀವ ರಕ್ಷಣೆ ಸಾಧ್ಯವಾಗುತ್ತದೆ

Shidlaghatta News: ಹೆಲ್ಮೆಟ್ ಜೀವ ರಕ್ಷಣೆ ಸಾಧ್ಯವಾಗುತ್ತದೆ

18 ವರ್ಷದೊಳಗಿನ ಮಕ್ಕಳು ವಾಹನ ಚಲಾಯಿಸುವುದು ಹಾಗೂ ವಿಮೆ ಇಲ್ಲದೆ ವಾಹನ ಚಾಲನೆ, ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆ ಮಾಡುವುದರಿಂದ ರಸ್ತೆ ಅಪಘಾತ ಸಂಭವಿಸಿ ಜನರು ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಾರೆ. ಅತಿವೇಗವಾಗಿ ವಾಹನ ಚಲಾಯಿಸುವುದು, ವಾಹನ ಚಾಲನೆಯಲ್ಲಿ ನಿರ್ಲಕ್ಷ್ಯ, ಮದ್ಯಪಾನ ಅಥವಾ ಅಮಲು ಪದಾರ್ಥಗಳನ್ನು ಸೇವಿಸಿ ಚಾಲನೆ ಮಾಡುವುದು ಕೂಡ ಅಪಘಾತಗಳು ಸಂಭವಿಸಲು ಪ್ರಮುಖ ಕಾರಣಗಳಾಗಿವೆ.

“ಟುಗೆದರ್ ಪ್ಯೂರೆವರ್” -ಪರಂಪರೆ, ಒಗ್ಗಟ್ಟು ಮತ್ತು ಜೀವನ ವೃತ್ತ ಗೌರವಿಸುವ, 100 ವರ್ಷಗಳನ್ನು ಪೂರೈಸಿದ ಗೋಲ್ಡ್

100 ವರ್ಷಗಳ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದ ಭೀಮಾ ಗೋಲ್ಡ್

ಚಿತ್ರದ ಹೃದಯಭಾಗದಲ್ಲಿ ಶಕ್ತಿ, ಸೃಷ್ಟಿ, ಕರುಣೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಸಾಕಾರ ಗೊಳಿ ಸುವ ದೈವಿಕ ಸ್ತ್ರೀತ್ವಕ್ಕೆ ಸಾಂಕೇತಿಕ ಗೌರವವಿದೆ. ಅವರ ಪ್ರಯಾಣವು ತಲೆಮಾರು ಗಳಾದ್ಯಂತ ಮಹಿಳೆಯರ ವಿಕಸನಗೊಳ್ಳುತ್ತಿರುವ ಪಾತ್ರಗಳನ್ನು ಪ್ರತಿಬಿಂಬಿಸುತ್ತದೆ, ಆಭರಣಗಳು ಅಲಂಕಾರಕ್ಕಿಂತ ಹೆಚ್ಚಿನವು ಎಂಬ ಭೀಮನ ನಂಬಿಕೆಯೊಂದಿಗೆ ಆಳವಾಗಿ ಪ್ರತಿಧ್ವನಿಸುತ್ತದೆ.

ಮದುವೆಗೆ ನಿರಾಕರಣೆ; ಬೆಂಗಳೂರಿನಲ್ಲಿ ಪ್ರಿಯಕರನ ಮನೆಯಲ್ಲೇ ಯುವತಿ ಆತ್ಮಹತ್ಯೆ

ಮದುವೆಗೆ ನಿರಾಕರಣೆ; ಬೆಂಗಳೂರಿನಲ್ಲಿ ಪ್ರಿಯಕರನ ಮನೆಯಲ್ಲೇ ಯುವತಿ ಆತ್ಮಹತ್ಯೆ

Nikhitha Suicide Case: ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಹೊಸ ವರ್ಷದ ಆಚರಣೆ ನಿಮಿತ್ತ ಜ.1ರಂದು ಅರಸೀಕೆರೆಯಿಂದ ಬೆಂಗಳೂರಿನ ಪ್ರಿಯಕರಣ ಮನೆಗೆ ಬಂದಿದ್ದ ಯುವತಿ, ನೇಣಿಗೆ ಶರಣಾಗಿದ್ದಾಳೆ.

ಹೈನುಗಾರರ ಧ್ವನಿ ದಿ. ಹಳೆಮನೆ ಶಿವನಂಜಪ್ಪ 'ಶಿವಗಣಾರಾಧನೆ' ನಾಳೆ

ಜ.7ರಂದು ಹೈನುಗಾರರ ಧ್ವನಿ ದಿ. ಹಳೆಮನೆ ಶಿವನಂಜಪ್ಪ 'ಶಿವಗಣಾರಾಧನೆ'

Chikkanayakanahalli News: ತುಮಕೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಮಾಜಿ ಅಧ್ಯಕ್ಷರು ಹಾಗೂ ಸಹಕಾರಿ ರಂಗದ ಅಪ್ರತಿಮ ನಾಯಕ ದಿ. ಹಳೆಮನೆ ಶಿವನಂಜಪ್ಪ ಅವರ 'ಶಿವಗಣಾರಾಧನೆ' ಕಾರ್ಯಕ್ರಮವು ಜನವರಿ 7ರಂದು ಬುಧವಾರ ಚಿಕ್ಕನಾಯಕನಹಳ್ಳಿ ತಾಲೂಕಿನ ಹಾಲುಗೊಣದ ಸ್ವಗೃಹದಲ್ಲಿ ನೆರವೇರಲಿದೆ.

ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರನ್ನು ನಿಯೋಜಿಸಿ: ಆಡಳಿತಾಧಿಕಾರಿಗೆ ಮನವಿ

ಪಾವಗಡ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರನ್ನು ನಿಯೋಜಿಸಿ: ಮನವಿ

ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ವೈದ್ಯರನ್ನು ನಿಯೋಜಿಸುವುದು, ರಕ್ತ ಪರೀಕ್ಷೆ ಕೇಂದ್ರವನ್ನು ಕೆಳ ಮಹಡಿಗೆ ಸ್ಥಳಾಂತರಿಸುವುದು ಹಾಗೂ ತಾಲೂಕಿನಲ್ಲಿ ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ ಕೈಗೊಳ್ಳಲು ಆಸ್ಪತ್ರೆ ಆಡಳಿತ ಅಧಿಕಾರಿಗೆ ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆಯಿಂದ ಮನವಿ ಸಲ್ಲಿಸಲಾಗಿದೆ.

ವಾಲ್ಮೀಕಿ ಬ್ಯಾನರ್ ಕಿತ್ತುಹಾಕಿದ್ದೇ ಬಳ್ಳಾರಿ ದುರ್ಘಟನೆಗೆ ಕಾರಣ: ಕಾಂಗ್ರೆಸ್ ಸತ್ಯಶೋಧನಾ ಸಮಿತಿ ವರದಿ

ವಾಲ್ಮೀಕಿ ಬ್ಯಾನರ್ ಕಿತ್ತುಹಾಕಿದ್ದೇ ಬಳ್ಳಾರಿ ದುರ್ಘಟನೆಗೆ ಕಾರಣ: ಡಿಕೆಶಿ

ಕುಮಾರಸ್ವಾಮಿ, ಜನಾರ್ಧನ ರೆಡ್ಡಿ ಸಂಬಂಧ ಹೇಗಿತ್ತು? ರೆಡ್ಡಿ, ರಾಮುಲು ಸಂಬಂಧ ಏನು ಎಂಬುದು ಗೊತ್ತಿದೆ. ಎರಡು ಬಾರಿ ಶವಪರೀಕ್ಷೆ ಎಂದು ಕುಮಾರಸ್ವಾಮಿಗೆ ಮಾಹಿತಿ ಕೊಟ್ಟವರು ಯಾರು?, ತಪ್ಪು ಯಾರೇ ಮಾಡಿದ್ದರೂ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ದೃಷ್ಟಿಗೊಂಬೆಯಾಗಿ ಬಳಸುತ್ತಿರೋ ದಪ್ಪ ಕಣ್ಣಿನ ಮಹಿಳೆ ಯಾರೆಂದು ಗುರುತಿಸಿದ ನೆಟ್ಟಿಗರು!

ದೃಷ್ಟಿಗೊಂಬೆಯಂತೆ ಬಳಸುತ್ತಿರೋ ದಪ್ಪ ಕಣ್ಣಿನ ಮಹಿಳೆ ಯಾರು ಗೊತ್ತಾ?

ದಪ್ಪ ದಪ್ಪ ಕಣ್ಣುಗಳಿಂದ ಹೆದರಿಸುವಂತೆ ನೋಡುವ ಮಹಿಳೆ ಫೋಟೊವನ್ನು ಬೆಂಗಳೂರು ಸೇರಿ ಸುತ್ತಮುತ್ತಲ ಭಾಗಗಳಲ್ಲಿ ದೃಷ್ಟಿಗೊಂಬೆಯಂತೆ ಬಳಸಲಾಗಿದೆ. ಈ ಮಹಿಳೆ ಯಾರು ಎಂಬ ಕುತೂಹಲ ಜನರಲ್ಲಿ ಮೂಡಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಫೋಟೊದಲ್ಲಿನ ಮಹಿಳೆ ಬಗ್ಗೆ ಇದೀಗ ಮಾಹಿತಿ ಲಭ್ಯವಾಗಿದೆ.

ಉಡುಪಿ ಪರ್ಯಾಯ ಹಿನ್ನೆಲೆ 6 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಿ: ಹೆಬ್ಬಾಳ್ಕರ್ ನಿರ್ದೇಶನ

ಉಡುಪಿಯಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಿ: ಹೆಬ್ಬಾಳ್ಕರ್

Laxmi Hebbalkar: ಉಡುಪಿ ಪರ್ಯಾಯ ಸುಗಮವಾಗಿ ನಡೆಯಲು ರಸ್ತೆ ಅಭಿವೃದ್ಧಿ ಸೇರಿದಂತೆ ನಗರದಲ್ಲಿ ಅಗತ್ಯವಿರುವ ಎಲ್ಲ ವ್ಯವಸ್ಥೆ ಮಾಡಬೇಕು. ಸಮಯಾವಕಾಶ ಕಡಿಮೆ ಇರುವುದರಿಂದ ಸಮರೋಪಾದಿಯಲ್ಲಿ ಹಗಲು- ರಾತ್ರಿ ಕೆಲಸ ಮಾಡಬೇಕು. ಜಿಲ್ಲೆಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಜನಪ್ರಿಯ ಯೂಟ್ಯೂಬರ್, ಪತ್ರಕರ್ತೆ ಕೆ.ಎಲ್‌. ನಂದಿನಿಗೆ ಮೈಸೂರು ವಿವಿಯಿಂದ ಪಿಎಚ್‌ಡಿ ಪ್ರದಾನ

ಪತ್ರಕರ್ತೆ ಕೆ.ಎಲ್‌. ನಂದಿನಿಗೆ ಮೈಸೂರು ವಿವಿಯಿಂದ ಪಿಎಚ್‌ಡಿ ಪ್ರದಾನ

ಜನಪ್ರಿಯ ಯೂಟ್ಯೂಬರ್, ಪತ್ರಕರ್ತೆ ಕೆ.ಎಲ್ ನಂದಿನಿ ಅವರು 'ಸಿನಿಮಾ ಮತ್ತು ರಾಜಕೀಯ ರಂಗಕ್ಕೆ ಖ್ಯಾತ ನಟ ಡಾ. ಅಂಬರೀಶ್ ಅವರ ಕೊಡುಗೆ ಒಂದು ಅಧ್ಯಯನ' ವಿಷಯದಲ್ಲಿ ನಂದಿನಿ ಮಹಾ ಪ್ರಬಂಧ ಮಂಡಿಸಿದ್ದರು. ಮೈಸೂರು ವಿವಿಯ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಎನ್‌.ಮಮತಾ ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಸಲ್ಲಿಸಿದ್ದರು.

Loading...