ಇಂದಿನಿಂದಲೇ ಸಫಾರಿ ಶುರು
ಗುರುವಾರದಿಂದ ಹಂತ-ಹಂತವಾಗಿ ಸಫಾರಿ ಆರಂಭಿಸುವುದಾಗಿ ಘೋಷಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಫಾರಿಯಿಂದ ಸಂದಾಯವಾಗುವ ಆದಾಯದ ಒಂದು ಭಾಗವನ್ನು ಸ್ಥಳೀಯ ಅಭಿ ವೃದ್ಧಿಗೆ ಬಳಸಲಾಗುವುದು ಎಂದು ಹೇಳುವ ಮೂಲಕ ಸ್ಥಳೀಯರನ್ನು ‘ಸಂತೈಸುವ’ ಕಾರ್ಯ ಮಾಡಿದೆ.
ಶಿವಕುಮಾರ್ ಅವರು ತಮ್ಮ ಮನೆಯಲ್ಲಿನ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸಲು ರತನ್ ಎಂಬವರಿಗೆ ಹೇಳಿದ್ದು ಆತ ಟ್ಯಾಂಕ್ ಒಳಗಡೆ ಇಳಿದಿದ್ದರು. ರತನ್ ಒಳಗೆ ಇಳಿದು ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ರತನ್ ಮೇಲೆ ಬರದಿದ್ದಾಗ ಆತನ ರಕ್ಷಣೆಗೆ ತೆರಳಿದ ಮನೆಯ ಮಾಲೀಕ ಶಿವಕುಮಾರ್ ಅವರೂ ಉಸಿರುಗಟ್ಟಿ ಸಾವನ್ನಪ್ಪಿರುವುದು ತಿಳಿದು ಬಂದಿದೆ.
ಮಾಹಿತಿಗಳ ಪ್ರಕಾರ ಮಧ್ಯಾಹ್ನ 4 ಗಂಟೆ ಸರಿಸುಮಾರಿಗೆ ಪೇಟೆ ಬೀದಿಯಿಂದ ಮನೆಗೆ ಬಂದಿದ್ದ ಶೋಭಾರನ್ನು ಆರೋಪಿ ಹಿಂಬಾಲಿಸಿದ್ದಾನೆ. ಇವರ ಮೈಮೇಲಿದ್ದ ಸುಮಾರು 100 ಗ್ರಾಂಗಳಿಗೂ ಹೆಚ್ಚು ತೂಕದ ಒಡವೆ ಆರೋಪಿ ಕಣ್ಣಿಗೆ ಬಿದ್ದಿದೆ. ಹೀಗಾಗಿ ನೀರು ಕೇಳುವ ನೆಪದಲ್ಲಿ ಮನೆಗೆ ಬಂದ ದುಷ್ಕರ್ಮಿ, ತನ್ನ ಬಳಿಯಿದ್ದ ಚಾಕುವಿನಿಂದ ಶೋಭಾರ ಕತ್ತು ಸೀಳಿದ್ದಾನೆ.
ಗುಬ್ಬಿ ತಾಲೂಕಿನ ಅಡಗೂರು, ಧೂಳನಹಳ್ಳಿ ಪಾಳ್ಯ, ಕಕ್ಕೆನಹಳ್ಳಿ, ಕೊಪ್ಪ , ಸುರಿಗೇನಹಳ್ಳಿ, ತೊಂಗನಹಳ್ಳಿ, ಸಿಂಗೊನಳ್ಳಿ ಗ್ರಾಮಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಅವರು, ಒಂದು ವಿಚಾರವಾಗಿ ಸರ್ಕಾರ ಮತ್ತು ನೌಕರರ ನಡುವೆ ಕೆಲವೊಂದು ಗೊಂದಲಗಳಿವೆ. ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಬಗೆಹರಿಸ ಲಿದ್ದಾರೆ
12ನೇ ಶತಮಾನ ಪರಿವರ್ತನೆಯ ಕಾಲ. ಒಂದು ಸಮಾಜ ಪ್ರಗತಿ ಹೊಂದುವುದು ಜ್ಞಾನದ ಮೂಲಕ ಮಾತ್ರ ಎಂದು ಜ್ಞಾನವನ್ನು ಜನರಿಗೆ ಬಿತ್ತರಿಸುವ ಕೆಲಸವನ್ನು ಮಾಚಯ್ಯ ಅವರು ಮಾಡಿದರು. ಅಂದಿನ ವಚನಕಾರರು ಸಾರಿದ ಸಮಾನತೆ, ಸಹೋದರತೆ, ಲಿಂಗ ಸಾಮಾನತೆ, ಜಾತ್ಯತೀತತೆ ಇನ್ನು ಮುಂತಾದ ತತ್ವಗಳನ್ನು ನಮ್ಮ ಇಂದಿನ ಸಂವಿಧಾನದಲ್ಲಿ ಅಳವಡಿಸಿ ಕೊಂಡಿರುವುದನ್ನು ನಾವು ಗಮನಿಸಬಹುದು
ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮೂರು ಜಿಲ್ಲೆಗಳನ್ನು ಒಳಗೊಂಡ ಬೃಹತ್ ಸಾರ್ವಜನಿಕ ಸಭೆಯಾಗಿದೆ.ಮೂರು ಜಿಲ್ಲೆಗಳ ಎಲ್ಲ ತಾಲ್ಲೂಕುಗಳಿಂದ ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸುತ್ತಾರೆ. ಕೇಂದ್ರ ಸರ್ಕಾರವು ಇಡೀ ದೇಶದಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಿ ಹೊಸದಾಗಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸು ತ್ತಿದೆ.
ಸಾರಿಗೆ ನೌಕರರ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಿದೆ. ಅಲ್ಲದೇ 26 ತಿಂಗಳ ಹಿಂಬಾಕಿ ಬಿಡುಗಡೆಗೆ ಒಪ್ಪಿಗೆ ಸೂಚಿಸಿದೆ. ಆದರೆ, 38 ತಿಂಗಳ ಹಿಂಬಾಕಿ ಬಿಡುಗಡೆ ಮಾಡಲೇಬೇಕು ಎಂದು ಸಾರಿಗೆ ನೌಕರರು ಪಟ್ಟು ಹಿಡಿದ್ದಿದ್ದು, ಗುರುವಾರ ಸಾರಿಗೆ ಮುಷ್ಕರ ಮಾಡಿಯೇ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಭಾರತದಿಂದ ಪ್ರೇರಿತ, ಭಾರತದಲ್ಲೇ ನಿರ್ಮಿತ ಮತ್ತು ಭಾರತೀಯರಿಗಾಗಿ ಸಿದ್ಧಪಡಿಸಿದ" ಈ ಗ್ರಾವೈಟ್ ಎಂಪಿವಿ, ನಿಸ್ಸಾನ್ ಮೋಟಾರ್ ಇಂಡಿಯಾದ ವಿನೂತನ ಉತ್ಪನ್ನ ಸರಣಿಯ ಮೊದಲ ಉತ್ಪನ್ನವಾಗಿದ್ದು, ಇದು ಭಾರತೀಯ ಮಾರುಕಟ್ಟೆಯ ಬಗ್ಗೆ ಕಂಪನಿಗಿರುವ ಬದ್ಧತೆಯನ್ನು ಸಾರುತ್ತದೆ ಮತ್ತು ಸಂಸ್ಥೆಯು ದೇಶದಲ್ಲಿ ಹೊಂದಿರುವ ಬಲವಾದ ಅಸ್ತಿತ್ವ ವನ್ನು ತೋರಿಸುತ್ತದೆ
ತಾಲ್ಲೂಕಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಅಂಬೇಡ್ಕರ್ ಪುತ್ತಳಿ ನಿರ್ಮಿಸಬೇಕೆಂದು ದಲಿತ ಸಂಘಟನೆಗಳಿಂದ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ, ಬರುವ ಏಪ್ರಿಲ್ 14 ರೊಳಗೆ ಪುತ್ತಳಿ ನಿರ್ಮಿಸದೆ ಹೋದರೆ, ಅಂದು ಕಪ್ಪುಪಟ್ಟಿ ಪ್ರದರ್ಶಿಸಲಾಗುವುದು ಹಾಗೂ ಕಾನೂನು ಚೌಕಟ್ಟಿನಲ್ಲಿ ನಾವೇ ಪುತ್ತಳಿ ನಿರ್ಮಿಸಿ, ಅನಾವರಣ ಗೊಳಿಸುತ್ತೇವೆ ಎಂದು ವಕೀಲ ಬಿ.ಕೆ.ನರಸಿಂಹ ಮೂರ್ತಿ ಎಚ್ಚರಿಕೆ ನೀಡಿದರು.
Karnataka Transport workers strike: ಸಾರಿಗೆ ನೌಕರರ ಸಂಘಟನೆಗಳೊಂದಿಗೆ ಚರ್ಚಿಸಿರುವ ರಾಜ್ಯ ಸರ್ಕಾರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ. 2025ರ ಏಪ್ರಿಲ್ನಿಂದ ವೇತನ ಪರಿಷ್ಕರಣೆ ಮಾಡಲು ಹಾಗೂ 38 ತಿಂಗಳ ಪೈಕಿ 26 ತಿಂಗಳ ಹಿಂಬಾಕಿ 1239.47 ಕೋಟಿ ರೂ. ಬಿಡುಗಡೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ‘ಸಂಚಾರಿ ಸ್ಟುಡಿಯೋ’ ಯೂಟ್ಯೂಬರ್ ಸಂತೋಷ್ ಕಡಬ ಅವರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅವಹೇಳನಕಾರಿ ವಿಡಿಯೊಗಳನ್ನು ಪ್ರಸಾರ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರಿಗೆ 30 ದಿನಗಳ ಜೈಲು ಶಿಕ್ಷೆ ವಿಧಿಸಿದೆ. ಫೆಬ್ರವರಿ 18ರಂದು ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಜೈಲಿಗೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ.
ಅಸ್ಸಾಂನಲ್ಲಿ ನಡೆದ ‘ಶೂಟಿಂಗ್’ ವಿಡಿಯೊ ಸಂಬಂಧ ವಿವಾದ ಉಂಟಾಗಿದ್ದು, ಅದನ್ನು ಶೇರ್ ಮಾಡಿ ದ್ವೇಷ ಪ್ರಚೋದನೆಗೆ ಕಾರಣವಾದ ಆರೋಪದಡಿ ಕರ್ನಾಟಕದಲ್ಲಿ ಇಬ್ಬರ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ. ಫೆಬ್ರವರಿ 12ರಂದು ಉದ್ಯಮಿ ರಂಜಿತ್ ಕುಮಾರ್ ಆರ್. ನೀಡಿದ ದೂರಿನ ಮೇರೆಗೆ ಬೆಂಗಳೂರಿನಲ್ಲಿ ಈ ಪ್ರಕರಣ ದಾಖಲಾಗಿದೆ.
ಬಿಎಸ್ಎಫ್, ಸಿಐಎಸ್ಎಫ್ ಸೇರಿ ವಿವಿಧ ಭದ್ರತಾ ಪಡೆಗಳಲ್ಲಿ ಒಟ್ಟು 25,487 ಕಾನ್ಸ್ಟೆಬಲ್ಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಇದರಲ್ಲಿ 23,467 ಹುದ್ದೆಗಳು ಪುರುಷರಿಗೆ ಹಾಗೂ ಮಹಿಳೆಯರಿಗೆ 2020 ಹುದ್ದೆ ಮೀಸಲಿವೆ. ಪರೀಕ್ಷೆಯ ಹೊಸ ದಿನಾಂಕವನ್ನು ಶೀಘ್ರದಲ್ಲೇ ಎಸ್ಎಸ್ಸಿ ಪ್ರಕಟಿಸಲಿದೆ.
Job Guide: ಕಾಮನ್ ಸರ್ವಿಸ್ ಸೆಂಟರ್ ದೇಶಾದ್ಯಂತ ಖಾಲಿ ಇರುವ 253 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಆಧಾರ್ ಸೂಪರ್ವೈಸರ್/ಆಪರೇಟರ್ ಹುದ್ದೆ ಇದಾಗಿದ್ದು, ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿದ್ದರೆ ಅಪ್ಲೈ ಮಾಡಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮಾರ್ಚ್ 10.