ಗುಡಿಬಂಡೆಯಲ್ಲಿ ಅರ್ಥಪೂರ್ಣವಾಗಿ ಅಂಬೇಡ್ಕರ್ ಜಯಂತಿ ಆಚರಣೆ
ಶಿಕ್ಷಣದಿಂದ ಮಾತ್ರ ಸಮಾಜದಲ್ಲಿನ ಬದಲಾವಣೆ ಸಾಧ್ಯ ಎಂಬುದು ಅಂಬೇಡ್ಕರ್ʼರವರ ನಿಲುವಾಗಿತ್ತು. ಅವರು ಅನೇಕ ಆಶಯ ಗಳೊಂದಿಗೆ ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದ್ದರು. ಅವರು ಅನುಭವಿಸಿದಂತಹ ನೋವು, ಅವಮಾನಗಳು ಬೇರೆ ಯಾರೂ ಸಹ ಅನುಭವಿಸಬಾರದೆಂಬ ದೃಷ್ಟಿ ಯಿಂದ ನಮಗೆ ಸಂವಿಧಾನವನ್ನು ರಚಿಸಿಕೊಟ್ಟರು. ಸಂವಿಧಾನದ ಮೂಲಕ ಅಮೂಲಾಗ್ರ ಬದಲಾವಣೆ ತಂದಿದ್ದಾರೆ.