ಗುಡಿಬಂಡೆಯಲ್ಲಿ ಕ.ಸಾಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ
ಕನ್ನಡಿಗರ ವಿಶಾಲ ಮನೋಭಾವದ ನಡುವೆಯೂ ನಮ್ಮ ಭಾಷೆಯ ಅಸ್ಮಿತೆಯನ್ನು ಮರೆಯಬಾರದು. ಇಂದಿನ ದಿನಗಳಲ್ಲಿ ಪರಭಾಷೆಗಳನ್ನು ಕಲಿಯುವುದು ಅನಿವಾರ್ಯವಿರಬಹುದು, ಆದರೆ ಮಾತೃಭಾಷೆ ಯನ್ನು ಮರೆಯುವುದು ಸರಿಯಲ್ಲ. ಕನ್ನಡದಲ್ಲಿರುವ ಆಪ್ತತೆ ಬೇರೆಲ್ಲೂ ಸಿಗದು. 'ಮಮ್ಮಿ-ಡ್ಯಾಡಿ' ಸಂಸ್ಕೃತಿಯ ವ್ಯಾಮೋಹ ಬಿಟ್ಟು ಅಪ್ಪ-ಅಮ್ಮ ಎಂದು ಕರೆಯುವ ಮೂಲಕ ಸಂಸ್ಕೃತಿಯನ್ನು ಉಳಿಸಬೇಕು