ಆ.27ರಿಂದ ಸುಪ್ರಸಿದ್ಧ ಬೈಪಾಸ್ ಗಣೇಶೋತ್ಸವ ಪ್ರಾರಂಭ
ಗಣಪತಿ ಮೂರ್ತಿ ನಿರ್ಮಿಸಲು ಪವಿತ್ರ ಗಂಗಾನದಿಯ ಮಣ್ಣನ್ನು ಮಾತ್ರ ಬಳಸಲಾಗುತ್ತಿದ್ದು, ಯಾವುದೇ ರೀತಿಯ ರಸಾಯನಿಕ ವಸ್ತುಗಳನ್ನು ಬಳಸದೆ,ಪರಿಸರ ಸ್ನೇಹಿ ಗಣಪತಿಯನ್ನು ಪ್ರತಿಷ್ಟಾಪನೆ ಮಾಡಲಾಗುತ್ತಿದೆ. ಪ್ರತಿದಿನವೂ ಸಾವಿರಾರು ಮಂದಿ ಭಕ್ತಾಧಿಗಳು ಗಣಪನ ದರ್ಶನಕ್ಕಾಗಿ ಆಗಮಿಸು ತ್ತಾರೆ. ಅವರುಗಳ ಸುರಕ್ಷಾ ದೃಷ್ಟಿಯಿಂದ ಗಣಪತಿ ಪೆಂಡಾಲಿನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸ ಲಾಗುತ್ತಿದೆ ಮತ್ತು ಅಗ್ನಿ ನಿರೋಧಕ ವ್ಯವಸ್ಥೆ ಮಾಡಲಾಗುತ್ತದೆ ಮತ್ತು ಸರ್ಕಾರದ ನಿಯಮಾವಳಿ ಗಳನ್ನು ಪಾಲಿಸಲಾಗುತ್ತಿದೆ ಎಂದರು.